Tag: ಗೌರಿ ಶಂಕರ್

  • ಕೆರೆಬೇಟೆಯ ಕೋ ಡೈರೆಕ್ಟರ್ ಶೇಖರ್ ರೇಷನ್ ಅಂಗ್ಡಿ ಓನರ್!

    ಕೆರೆಬೇಟೆಯ ಕೋ ಡೈರೆಕ್ಟರ್ ಶೇಖರ್ ರೇಷನ್ ಅಂಗ್ಡಿ ಓನರ್!

    ‘ಗೌರಿಶಂಕರ್’ (Gowri Shankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete Film) ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೇ ಹೈಪುಗಳಿಲ್ಲದೆ, ಸಾಂಗು, ಟೀಸರ್‌ಗಳ ಮೂಲಕವೇ ‘ಕೆರೆಬೇಟೆ’ ಹುಟ್ಟು ಹಾಕಿರುವ ನಿರೀಕ್ಷೆ ಸಕಾರಾತ್ಮಕ ಬೆಳವಣಿಗೆಯಂತೆಯೇ ಭಾಸವಾಗುತ್ತದೆ. ಅಪ್ಪಟ ಮಲೆನಾಡಿನ ಕಥೆ, ಅಲ್ಲಿಯದ್ದೇ ಭಾಷಾ ಸೊಗಡಿನೊಂದಿಗೆ, ರಗಡ್ ಶೈಲಿಯಲ್ಲಿ ಮೂಡಿ ಬಂದಿರೋ ಈ ಸಿನಿಮಾ, ಪ್ರತಿಭಾನ್ವಿತ ತಾಂತ್ರಿಕ ವರ್ಗ, ಆಯಾ ಪಾತ್ರಗಳಿಗೆ ಒಪ್ಪುವಂಥಾ ಕಲಾವಿದರ ಬಳಗದೊಂದಿಗೆ ಕಳೆಗಟ್ಟಿಕೊಂಡಿದೆ. ಬೇರೆಲ್ಲ ಅಂಶಗಳದ್ದು ಒಂದು ತೂಕವಾದರೆ, ಇಲ್ಲಿನ ಪಾತ್ರಗಳಿಗೆ ಕಲಾವಿದರ ತಲಾಶು ನಡೆಸಿದ್ದು ಮತ್ತೊಂದು ತೆರನಾದ ಸಾಹಸವಾಗಿ ದಾಖಲಾಗುತ್ತೆ.

    ನಿರ್ದೇಶಕ ರಾಜಗುರು ಮತ್ತು ನಾಯಕ ನಟ ಗೌರಿಶಂಕರ್ (Gowri Shankar) ಇಲ್ಲಿನ ಪ್ರತೀ ಪಾತ್ರಗಳಿಗೂ ಅಳೇದೂ ತೂಗಿ, ಆ ಪಾತ್ರವೇ ಆಗಿಬಿಡುವಂಥಾ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರಿಗೆಲ್ಲ ತರಬೇತಿಯನ್ನೂ ಕೊಡಿಸಿ ಸಜ್ಜುಗೊಳಿಸಿದ್ದಾರೆ. ಮಾಲೆನಾಡಿನ ಭಾಷೆಯ ಸೊಗಡು ಗೊತ್ತಿರುವ ಸ್ಥಳೀಯರೇ ಒಂದಷ್ಟು ಮಂದಿಗೂ ಅವಕಾಶ ಮಾಡಿ ಕೊಡಲಾಗಿದೆ. ಇದರ ಭಾಗವಾಗಿಯೇ ಕೆರೆಬೇಟೆಯ ನಿರ್ದೇಶನ ವಿಭಾಗದಲ್ಲಿ ಮನಕಾರ್ಯನಿರ್ವಹಿಸಿದ್ದ ಶೇಖರ್ ಕರಡಿಮನೆ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಶೇಖರ್ ಕರಡಿಮನೆ (Shekar Karadimane) ತೀರ್ಥಹಳ್ಳಿ ಮೂಲದವರು. ಎರಡು ದಶಕಗಳಷ್ಟು ಕಾಲ ಸಿನಿಮಾ ರಂಗದ ನಿರ್ದೇಶನ ವಿಭಾಗದಲ್ಲಿ ಸಕ್ರಿಯರಾಗಿರುವ ಶೇಖರ್, ಈಗಾಗಲೇ ಹಲವಾರು ಸಿನಿಮಾಗಳ ಭಾಗವಾಗಿದ್ದಾರೆ. ಅದೇ ಅನುಭವದ ಆಧಾರದಲ್ಲಿ ಅವರು ಕೆರೆಬೇಟೆ ಚಿತ್ರದ ಕೋ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ನಡುವೆ ನಾಯಕಿಯ ಮಾವನ ಪಾತ್ರವನ್ನು ಯಾವ ಕಲಾವಿದರು ಮಾಡಬೇಕೆಂಬ ಚರ್ಚೆ ಶುರುವಾದಾಗ, ಆ ಅವಕಾಶ ಶೇಖರ್ ಪಾಲಾಗಿದೆ. ಹಳ್ಳಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರೋ ದಯಾನಂದನ ಪಾತ್ರಕ್ಕೆ ಶೇಖರ್ ಜೀವ ತುಂಬಿದ್ದಾರೆ. ಈಗಾಗಲೇ ಮಹೇಶ್ ಬಾಬುರಂಥಾ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸಿರುವ, ಹಲವಾರು ಹಿಟ್ ಸಿನಿಮಾಗಳ ಭಾಗವಾಗಿರುವ ಶೇಖರ್, ಈ ಮೂಲಕ ನಟನೆಗಿಳಿದಿದ್ದಾರೆ. ಆ ಪಾತ್ರವೂ ಕೂಡಾ ಕೆರೆಬೇಟೆಯ ಒಟ್ಟಾರೆ ಆಕರ್ಷಣೆಗಳಲ್ಲೊಂದು.

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

    ಯಾವ ಪಾತ್ರವೇ ಸಿಕ್ಕರೂ ಅದರ ಆಳಕ್ಕಿಳಿದು, ಪಾತ್ರವೇ ತಾನಾಗಿ ಬಿಡುವ ತನ್ಮಯತೆ ಹೊಂದಿರೋ ಅಪರೂಪದ ನಟನರ ಸಾಲಿನಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ವಿಶೇಷ ಸ್ಥಾನವಿದೆ. ಸದಾ ಹೊಸತನದ ಪಾತ್ರಗಳಿಗಾಗಿ ಹಂಬಲಿಸುವ ಅವರನ್ನು ಅಪರೂಪದ ಪಾತ್ರಗಳೇ ಅರಸಿ ಬರುತ್ತಿವೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ‘ಕೆರೆಬೇಟೆ’ (Kerebete) ಚಿತ್ರದಲ್ಲಿಯೂ ಗೋಪಾಲ ದೇಶಪಾಂಡೆಗೆ (Gopal Deshpande) ಒಂದೊಳ್ಳೆ ಪಾತ್ರವೇ ಸಿಕ್ಕಿದೆ. ಮಲೆನಾಡು ವಾತಾವರಣವನ್ನು ಅತೀವವಾಗಿ ಇಷ್ಟಪಡುವ, ಆ ವಾತಾವರಣದ ಬಗೆಗೊಂದು ಮೋಹ ಬೆಳೆಸಿಕೊಂಡಿರುವ ಅವರಿಗೆ ಆ ಭಾಗದ ಕಥೆಯಲ್ಲಿ ಪಾತ್ರವಾಗುವ ಅವಕಾಶ ಸಿಕ್ಕಿರೋದರಿಂದ ಥ್ರಿಲ್ ಆಗಿದ್ದಾರೆ.

    ಗೋಪಾಲ್ ದೇಶಪಾಂಡೆ ಮಲೆನಾಡು ಸೀಮೆಯ ಕಥೆ ಹೊಂದಿರೋ ಸಿನಿಮಾದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರಂತೆ. ಹಲವಾರು ವರ್ಷಗಳ ನಂತರ ಇದೀಗ ‘ಕೆರೆಬೇಟೆ’ಯ ಮೂಲಕ ಅದು ಕೈಗೂಡಿದೆ. ಆರಂಭದಲ್ಲಿ ನಿರ್ದೇಶಕರು ಈ ಕಥೆ ಹೇಳಿದಾಗಲೇ ಗೋಪಾಲ್ ಖುಷಿಗೊಂಡಿದ್ದರಂತೆ. ಸಾಮಾನ್ಯವಾಗಿ ಇಂಥಾ ಗ್ರಾಮ್ಯ ಸೊಗಡಿನ ಕಥೆಗಳು ದೃಷ್ಯರೂಪ ಧರಿಸುವ ಪ್ರಕ್ರಿಯೆ ಮಜವಾಗಿರುತ್ತದೆ. ಅದರ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಗೋಪಾಲ ದೇಶಪಾಂಡೆ, ಒಂದು ಪಾತ್ರವಾಗಿ ಮಾತ್ರವಲ್ಲದೇ, ಸಾಮಾನ್ಯ ಪ್ರೇಕ್ಷಕನಾಗಿಯೂ ಅದನ್ನು ಸಂಭ್ರಮಿಸಿದ್ದಾರಂತೆ.

    ಒಟ್ಟಾರೆ ಕಥೆ, ಸಿನಿಮಾ ಮೂಡಿ ಬಂದಿರುವ ರೀತಿ, ನಿರ್ದೇಶನದ ಚಾಕಚಕ್ಯತೆ, ನಾಯಕನಾಗಿ ‘ಗೌರಿಶಂಕರ್’ (Gowri Shankar) ನಟಿಸಿರುವ ಪರಿಯೆಲ್ಲವೂ ಗೋಪಾಲರನ್ನು ಖುಷಿಗೊಳಿಸಿದೆ. ಅಂದಹಾಗೆ, ಅವರಿಲ್ಲಿ ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ, ಪ್ರತೀ ತಂದೆಯೂ ತನ್ನ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾನೆ, ಕೂದಲು ಕೊಂಕದಂತೆ ನೋಡಿಕೊಳ್ಳುತ್ತಾನೆ. ಅಂಥಾ ಮಮತೆ ಹೊಂದಿರುವ ಆ ಪಾತ್ರವಾಗಿ, ಇಡೀ ಕಥೆಯ ಕೇಂದ್ರಬಿಂದುವಾಗಿ ಒಂದೊಳ್ಳು ಅನುಭವವನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಮಲೆನಾಡು ಮೋಹಿಯಾದ ಗೋಪಾಲ ದೇಶಪಾಂಡೆ ಮಲೆನಾಡ ಮಡಿಲಲ್ಲಿಯೇ ನಡೆದ ಚಿತ್ರೀಕರಣದ ಪ್ರತೀ ಕ್ಷಣವನ್ನೂ ಆನಂದಿಸಿದ್ದಾರೆ.

    ಇದೆಲ್ಲದರೊಂದಿಗೆ ‘ಕೆರೆಬೇಟೆ’ ಎಲ್ಲರಿಗೂ ಹಿಡಿಸುತ್ತೆ, ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸುತ್ತದೆ ಎಂಬ ಗಾಢ ನಂಬಿಕೆಯೂ ಅವರಲ್ಲಿದೆ. ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ‘ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ‘ಕೆರೆಬೇಟೆ’ಯ ಅಖಾಡದಲ್ಲೊಬ್ಬ ಗಟ್ಟಿಗಿತ್ತಿ ಗೌರಮ್ಮ

    ‘ಕೆರೆಬೇಟೆ’ಯ ಅಖಾಡದಲ್ಲೊಬ್ಬ ಗಟ್ಟಿಗಿತ್ತಿ ಗೌರಮ್ಮ

    ಗೌರಿಶಂಕರ್ (GowriShankar) ನಾಯಕನಾಗಿ ನಟಿಸಿಒರುವ ಕೆರೆಬೇಟೆ (Kerebete) ಚಿತ್ರ ಇದೇ ಮಾರ್ಚ್ 15ರಂದು ತೆರೆಗಾಣಲಿದೆ. ಮಲೆನಾಡು ಭಾಗದಲ್ಲಿ ಘಟಿಸುವ ಗಟ್ಟಿ ಕಥೆಯನ್ನೊಳಗೊಂಡಿರುವ ಸುಳಿವಂತೂ ಈಗಾಗಲೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ರಾಜ್ ಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಪ್ರತಿಭಾನ್ವಿತ ಕಲಾವಿದರದ್ದೊಂದು ದಂಡೇ ಇದೆ. ಒಟ್ಟಾರೆ ಕಥೆ, ತಾಂತ್ರಿಕತೆ ಮುಂತಾದವುಗಳದ್ದೇ ಒಂದು ತೂಕವಾದರೆ, ಆಯಾ ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರು ಕೆರೆಬೇಟೆಯ ನಿಜವಾದ ಶಕ್ತಿ. ಈಗಾಗಲೇ ಕಿರುತೆರೆ, ಹಿರಿತೆರೆ ಪ್ರೇಕ್ಷಕರಿಗೆಲ್ಲ ಚಿರಪರಿಚಿತರಾಗಿರುವ ಹರಿಣಿ ಶ್ರೀಕಾಂತ್ ಕೆರೆಬೇಟೆಯ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹರಿಣಿ (Harini) ತೊಂಭತ್ತರ ದಶಕದಿಂದೀಚೆಗೆ ನಿರಂತರವಾಗಿ ನಟಿಯಾಗಿ ಚಾಲ್ತಿಯಲ್ಲಿದ್ದುಕೊಂಡು, ಥರ ಥರದ ಪಾತ್ರಗಳ ಮೂಲಕ ಮನಗೆದ್ದವರು. ಹಲವಾರು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಸದಾ ನೆನಪಿನಲ್ಲುಳಿಯುವಂಥಾ ಪಾತ್ರಗಳಿಗೆ ಹರಿಣಿ ಜೀವ ತಗುಂಬಿದ್ದಾರೆ. ಅದರಲ್ಲಿಯೂ ಧಾರಾವಾಹಿಯಿದ್ದರೂ, ಸಿನಿಮಾವಾಗಿದ್ದರೂ ಅಮ್ಮನ ಪಾತ್ರಗಳೇ ಹರಿಣಿಯವರನ್ನು ಅರಸಿ ಬರುತ್ತವೆ. ಅದೇ ರೀತಿ ಕೆರೆಬೇಟೆ ಚಿತ್ರದಲ್ಲಿಯೂ ಅವರು ಅಮ್ಮನ ಪಾತ್ರವನ್ನೇ ನಿರ್ವಹಿಸಿದ್ದಾರೆ.

    ಹರಿಣಿ ಪಾಲಿಗೆ ಅಮ್ಮನ ಪಾತ್ರಗಳು ಮಾಮೂಲು. ಆದರೆ ಕೆರೆಬೇಟೆಯ ನಾಯಕನ ಅಮ್ಮನ ಪಾತ್ರವನ್ನು ಆವಾಹಿಸಿಕೊಂಡಿದ್ದು ಮಾತ್ರ ಅವರ ಪಾಲಿಗೆ ವಿಶಿಷ್ಟ ಅನುಭೂತಿ. ಯಾಕೆಂದರೆ, ಅದು ಮಲೆನಾಡಿನ ಗುಣಲಕ್ಷಣಗಳನ್ನು ಹೊಂದಿರುವ ಗಟ್ಟಿಗಿತ್ತಿ ಹೆಣ್ಣುಮಗಳ ಪಾತ್ರ. ನಾಯಕನ ತಾಯಿ ಗೌರಮ್ಮನ ಪಾತ್ರವನ್ನವರು ತೀವ್ರವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರಂತೆ. ಹಾಗಂತ ಅದು ಸಲೀಸಿನ ಸಂಗತಿ ಆಗಿರಲಿಲ್ಲ. ಮಲೆನಾಡು ಸೀಮೆಯ ಒಂದಷ್ಟು ಹಿರಿಯ ಮಹಿಳೆಯರ ಹಾವಭಾವಗಳನ್ನು ಕಂಡು, ಅಭ್ಯಸಿಸಿದ ನಂತರವೇ ಹರಿಣಿ ಈ ಪಾತ್ರವಾಗಿದ್ದಾರೆ. ಇನ್ನುಳಿದಂತೆ, ಆ ಭಾಗದ ಟಿಪಿಕಲ್ ಶೈಲಿಯ ಮಲೆನಾಡು ಭಾಷೆಯನ್ನೂ ಕೂಡಾ ಹರಿಣಿ ಇಷ್ಟಪಟ್ಟು ಕಲಿತುಕೊಂಡಿದ್ದಾರಂತೆ. ಈ ಎಲ್ಲದರಿಂದಾಗಿ ಆ ಪಾತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ಹರಿಣಿ ಅವರ ಅಭಿಪ್ರಾಯ.

    ಹರಿಣಿ ಪಾಲಿಗೆ ಕೆರೆಬೇಟೆ ಚಿತ್ರವಾಗಿಯಷ್ಟೇ ಅಲ್ಲದೇ, ಭಾವನಾತ್ಮಕವಾಗಿಯೂ ವಿಶೇಷ ಸಿನಿಮಾ. ಅವರು ಮೂಲತಃ ಚಿಕ್ಕಮಗಳೂರಿನವರು. ಮಲೆನಾಡಿನಲ್ಲಿಯೇ ಅವರ ಮೂಲ ಬೇರುಗಳು ಹಬ್ಬಿಕೊಂಡಿವೆ. ಹಾಗಿದ್ದರೂ ಕೂಡಾ ಹರಿಣಿ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ತಾನು ಮಲೆನಾಡು ಮೂಲದವರೆಂಬ ಹೆಮ್ಮೆಯನ್ನು ಸದಾ ಕಾಯ್ದುಕೊಂಡು ಬಂದಿದ್ದ ಹರಿಣಿ ಪಾಲಿಗೆ ಕೆರೆಬೇಟೆಯ ಮೂಲಕ ಮಲೆನಾಡಿನ ಗರ್ಭದಲ್ಲಿಯೇ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ಇದುವರೆಗೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿದ್ದರೂ, ಕೆರೆಬೇಟೆಯ ನಾಯಕನ ಅಮ್ಮನ ಪಾತ್ರ ಹರಿಣಿ ಪಾಲಿಗೆ ವಿಶೇಷವಾಗಿ ಒಳಗಿಳಿದಿದೆ. ಇಂಥಾದ್ದೊಂದು ಅಪರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿರುವ ತುಂಬಿ ಸಂಭ್ರಮ ಅವರಲ್ಲಿದೆ.

     

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ

  • ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

    ಕೆರೆಬೇಟೆಯ ಹಾಡು ಬಿಡುಗಡೆಗೊಳಿಸಿದರು ಅಶ್ವಿನಿ ಪುನೀತ್ ರಾಜ್‌ಕುಮಾರ್!

    ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete) ಚಿತ್ರ ಬಿಡುಗಡೆಗೊಳ್ಳಲು ದಿನಗಣನೆ ಶುರುವಾಗಿದೆ. ಮಲೆನಾಡು ಸೀಮೆಯ ಭಾಷಾ ಸೊಗಡು, ಅಲ್ಲಿನದ್ದೇ ವಿಶಿಷ್ಟ ಕಥೆಯನ್ನೊಳಗೊಂಡಿರುವ ‘ಕೆರೆಬೇಟೆ’ ಈ ವಾರದ ಬಹುನಿರೀಕ್ಷಿತ ಚಿತ್ರವಾಗಿ ಈಗಾಗಲೇ ದಾಖಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಅಂಥಾದ್ದೊಂದು ಭರವಸೆಯನ್ನು ಪಸರಿಸುವಲ್ಲಿ ಗೆಲುವು ಕಂಡಿದೆ. ರಾಜಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡೊಂದು ಇದೀಗ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಒಂದು ಅಚ್ಚುಕಟ್ಟಾದ ಇವೆಂಟ್ ಮೂಲಕ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಈ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಚಿತ್ರತಂಡವೆಲ್ಲ ಭಾಗಿಯಾಗಿದ್ದ ಈ ಇವೆಂಟ್‌ಗೆ ಪ್ರೀತಿಯಿಂದ ಆಗಮಿಸಿದ ಅಶ್ವಿನಿ ಅವರು ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಹಾಡನ್ನು ಲೋಕಾರ್ಪಣೆಗೊಳಿಸಿದ್ದಾರೆ. ನಂತರ ಚಿತ್ರತಂಡದೊಂದಿಗೆ ಕಲೆತು ಸಂಭ್ರಮಿಸಿದ್ದಾರೆ. ಅಶ್ವಿನಿ ಬೆಂಬಲದಿಂದಾಗಿ ಬಿಡುಗಡೆಯ ಅಂಚಿನಲ್ಲಿ ‘ಕೆರೆಬೇಟೆ’ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಹಾಡುಗಳ ಮೂಲಕವೂ ಕೆರೆಬೇಟೆ ಕುತೂಹಲ ಮೂಡಿಸಿತ್ತು. ಈಗ ಲಾಂಚ್ ಆಗಹಿರುವ ಈ ಹಾಡಂತೂ ವಿರಹದ ಉರಿಯನ್ನು ಎದೆತುಂಬಾ ಹರವಿ ಕೂತಿರುವ ಯುವ ಮನಸುಗಳನ್ನು ಒಂದೇ ಸಲಕ್ಕೆ ಸೆಳೆಯುವಂತಿದೆ.

    ಇತ್ತೀಚಿನ ದಿನಗಳಲ್ಲಿ ‘ಕಾಂತಾರ’ (Kantara) ಖ್ಯಾತಿಯ ಪ್ರಮೋದ್ ಮರವಂತೆ (Pramod Maravante) ಚಿತ್ರ ಸಾಹಿತಿಯಾಗಿ ಮಿಂಚುತ್ತಿದ್ದಾರೆ. ಈ ಹಾಡಿಗೂ ಅವರೇ ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಹಾಡುಗಳ ಸಾಲಿನಲ್ಲಿ ಈ ಗೀತೆ ಬೇರೆಯದ್ದೇ ಸ್ಥಾನ ಗಿಟ್ಟಿಸಿಕೊಳ್ಳುವಷ್ಟು ಶಕ್ತವಾಗಿ ಮೂಡಿ ಬಂದಿದೆ. ಮತ್ತೆ ಮತ್ತೆ ಗುನುಗಿಸಿಕೊಳ್ಳುವ ಛಾತಿ ಇರುವ ಈ ಹಾಡಿನ ಬಗ್ಗೆ ಮೆಚ್ಚುಗೆಯೂ ಮೂಡಿಕೊಳ್ಳಲಾರಂಭಿಸಿದೆ. ಒಟ್ಟಾರೆಯಾಗಿ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವ ಈ ಹೊತ್ತಿನಲ್ಲಿ, ಈ ಹಾಡಿನೊಂದಿಗೆ ಕೆರೆಬೇಟೆಯೆಡೆಗಿನ ಕೌತುಕ ಮತ್ತಷ್ಟು ತೀವ್ರಗೊಂಡಿದೆ.

    ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, `ಕೆರೆಬೇಟೆ’ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ವಿಶಿಷ್ಟ ರೀತಿಯಲ್ಲಿ `ಕೆರೆಬೇಟೆ’ ಟ್ರೈಲರ್ ಲಾಂಚ್: ಬೆಂಗಳೂರಿನಲ್ಲಿ ಮಲೆನಾಡ ಸಂಪ್ರದಾಯ

    ವಿಶಿಷ್ಟ ರೀತಿಯಲ್ಲಿ `ಕೆರೆಬೇಟೆ’ ಟ್ರೈಲರ್ ಲಾಂಚ್: ಬೆಂಗಳೂರಿನಲ್ಲಿ ಮಲೆನಾಡ ಸಂಪ್ರದಾಯ

    ಕೇವಲ ಸಿನಿಮಾ ರೂಪಿಸುವ ವಿಚಾರದಲ್ಲಿ ಮಾತ್ರವಲ್ಲ; ಆ ಸಿನಿಮಾವನ್ನು ಪ್ರೇಕ್ಷಕರನ್ನು ತಲುಪಿಸುವಲ್ಲಿಯೂ ಹೊಸತನದ ಹಾದಿ ಹಿಡಿಯೋ ನಡೆಯೊಂದು ಇತ್ತೀಚೆಗೆ ಶುರುವಾಗಿದೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕೆರೆಬೇಟೆ (Kerebete) ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಅತ್ಯಂತ ವಿಶೇಷವಾಗಿ ನೆರವೇರಿಸಿದೆ. ಈ ಈವೆಂಟಿನ ರೂಪುರೇಷೆ, ಅದು ನಡೆದ ರೀತಿಗಳೆಲ್ಲವೂ ಭಿನ್ನವಾಗಿವೆ. ಈ ಮೂಲಕ ಹಲವು ಸಂಸ್ಕೃತಿಗಳ ಸಂಗಮದಂಥಾ ಬೆಂಗಳೂರಿನ ಒಡಲಲ್ಲಿ ಅಪ್ಪಟ ಮಲೆನಾಡಿನ ಸಂಸ್ಕೃತಿಯೊಂದು ಮಿಂಚಿದೆ.

    ಆರಂಭದಲ್ಲಿ ಕಿಚ್ಚ ಸುದೀಪ್ ಅವರ ಕಡೆಯಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿಕ್ಕಿಯಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಂತ ಕೆರೆಬೇಟೆಗೆ ಕಿಚ್ಚನ ಸಾಥ್ ಇದ್ದೇ ಇದೆ. ಬಿಡುಗಡೆಗೂ ಮುನ್ನವೇ ಸುದೀಪ್ ಸಮ್ಮುಖದಲ್ಲಿ ಅರ್ಥಪೂರ್ಣವಾದೊಂದು ಈವೆಂಟು ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇದೇ ಹೊತ್ತಿನಲ್ಲಿ ಟ್ರೈಲರ್ ಲಾಂಚ್ ಗೆ ಭಿನ್ನ ಹಾದಿಯಲ್ಲಿ ಹೆಜ್ಜೆಯೂರಿರುವ ಚಿತ್ರತಂಡ, ಒಟ್ಟಾರೆ ಸಿನಿಮಾದ ಆಂತರ್ಯಕ್ಕನುಗುಣವಾಗಿ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳಿ, ಎಣ್ಣೆ ಎರೆಸಿಕೊಂಡು ಆಶೀರ್ವಾದ ಪಡೆದು ನಂತರ ಪುಟ್ಟ ಮಗುವಿನ ಕೈಯಲ್ಲಿ ಟ್ರೈಲರ್ ಬಿಡುಗಡೆ ಮಾಡಿಸಲಾಗಿದೆ.

    ಅಂದಹಾಗೆ, ಈ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳೋ ಕ್ರಮಕ್ಕೆ ಮಲೆನಾಡು ಭಾಗದಲ್ಲಿ ಅಂಟಿಗೆಪಿಂಟಿಗೆ ಅನ್ನೋ ಹೆಸರಿದೆ. ಅದು ದೀಪಾವಳಿಯ ಸಂದರ್ಭದಲ್ಲಿ ಕಳೆಗಟ್ಟಿಕೊಳ್ಳುವ ಜನಪದೀಯ ಆಚರಣೆ. ಅದಕ್ಕೆ ಹೊಸೆದುಕೊಂಡಂಥಾ ಜನಪದ ಶೈಲಿಯ ಚೆಂದದ ಹಾಡುಗಳಿವೆ. ಮಲೆನಾಡಲ್ಲಿಯೇ ಮರೆಗೆ ಸರಿಯುತ್ತಿರುವ ಈ ಸಂಪ್ರದಾಯವನ್ನು ಬೆಂಗಳೂರಿಗೆ ಪರಿಚಯಿಸಿದ ಖುಷಿ ಚಿತ್ರತಂಡಕ್ಕಿದೆ. ಇಂಥಾ ಆಚರಣೆಯ ತರುವಾಯ, ನಾಯಕ ನಟ ಗೌರಿಶಂಕರ್ ಅವರ ಪುಟ್ಟ ಮಗಳು ಈಶ್ವರಿ ತನು ಮೂಲಕ ಕೆರೆಬೇಟೆ ಟ್ರೈಲರ್ ಅನಾವರಣಗೊಂಡಿದೆ.

    ಕೆರೆಬೇಟೆ ಎಂಬುದು ಮಲೆನಾಡು ಭಾಗದ ಒಂದು ಸಂಪ್ರದಾಯ. ಅದರ ಸುತ್ತ ಚಲಿಸುತ್ತಲೇ ಮಲೆನಾಡಿನ ಕಟ್ಟುಪಾಡುಗಳು, ಆಚರಣೆ, ರೀತಿ ರಿವಾಜುಗಳ ಸುತ್ತ ಪಕ್ಕಾ ರಗಡ್ ಶೈಲಿಯ ಕಥಾನಕವನ್ನೊಳಗೊಂಡಿರುವ ಚಿತ್ರ ಕೆರೆಬೇಟೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಜೀಕಾಲಿ ಮತ್ತು ರಾಜಹಂಸ ಚಿತ್ರದಲ್ಲಿಯೂ ಇವರು ನಾಯಕನಾಗಿ ನಟಿಸಿದ್ದರು. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

     

    ಈಗಾಗಲೇ ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿದ್ದ ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆ ಗೊಳ್ಳಲಿದೆ.

  • ಕಲಾಲೋಕಕ್ಕೆ ‘ಕೆರೆಬೇಟೆ’ ಪರಿಚಯ: ಕಿಚ್ಚನ ಕೈಲಿ ಟ್ರೈಲರ್ ಅನಾವರಣ

    ಕಲಾಲೋಕಕ್ಕೆ ‘ಕೆರೆಬೇಟೆ’ ಪರಿಚಯ: ಕಿಚ್ಚನ ಕೈಲಿ ಟ್ರೈಲರ್ ಅನಾವರಣ

    ಕೆರೆಬೇಟೆ (Kerebete) ಶೀರ್ಷಿಕೆಯಿಂದಲೇ ಕಲಾಭಿಮಾನಿಗಳ ಗಮನ ಸೆಳೆದಿರುವ ಸಿನಿಮಾ. ಚಿತ್ರದ ಟೀಸರ್‌ ಮತ್ತು ಹಾಡುಗಳನ್ನ ನೋಡಿದವರು ಕೆರೆಬೇಟೆ ನೋಡಲಿಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಈ ಚಿತ್ರಕ್ಕೆ ಕೋಟಿಗೊಬ್ಬ ಕಿಚ್ಚನ (Sudeep) ಸಪೋರ್ಟ್‌ ಸಿಗ್ತಿದೆ. ಹೌದು, ಅಭಿನಯ ಚಕ್ರವರ್ತಿ ಬಾದ್‌ ಷಾ ಕಿಚ್ಚ ಸುದೀಪ್‌ ಕೆರೆಬೇಟೆ ಟ್ರೈಲರ್‌ (Trailer) ರಿಲೀಸ್‌ ಮಾಡೋದಕ್ಕೆ ಒಪ್ಕೊಂಡಿದ್ದಾರೆ. ಇದೇ ಫೆಬ್ರವರಿ 20ರಂದು ರಾತ್ರಿ 7 ಗಂಟೆಗೆ ಕೆರೆಬೇಟೆ ಟ್ರೈಲರ್‌ ಅನಾವರಣಗೊಳ್ತಿದೆ.

    ‘ಕೆರೆಬೇಟೆ’ ನಿರ್ದೇಶಕ ರಾಜ್ ಗುರು ಕೈಚಳದಲ್ಲಿ ತಯಾರಾಗಿರುವ ಚಿತ್ರ. ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ನಾಯಕನಟನಾಗಿ ಮಿಂಚಿದ್ದ ಗೌರಿಶಂಕರ್‌ (Gauri Shankar) ಈಗ ʻಕೆರೆಬೇಟೆʼ ಮೂಲಕ ನಾಯಕನಾಗಿ ಮತ್ತೊಮ್ಮೆ ಅದೃಷ್ಟ ಪರೀಕ್ಷಗಿಳಿದಿದ್ದಾರೆ. ಬಿಂದು ಶಿವರಾಮ್‌ ನಾಯಕಿಯಾಗಿ ಚಂದನವನಕ್ಕೆ ಪರಿಚಯಗೊಳ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಮಲೆನಾಡ ಗೊಂಬೆ ಹಾಡಲ್ಲಿ ಬಿಂದು-ಗೌರಿಶಂಕರ್‌ ಕೆಮಿಸ್ಟ್ರಿ ವರ್ಕೌಟ್‌ ಆಗಿದ್ದು, ರಿಯಲ್‌ ಸ್ಟಾರ್‌ ಉಪೇಂದ್ರ ಸಾಂಗ್‌ ರಿಲೀಸ್‌ ಮಾಡ್ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಪತ್‌, ಗೋಪಾಲ ದೇಶ್‌ಪಾಂಡೆ, ನಟಿ ಹರಿಣಿ ಸೇರಿದಂತೆ ಇನ್ನಿತರರಿಂದ ಕೂಡಿರುವ ಕೆರೆಬೇಟೆ ಯಶಸ್ವಿಯಾಗಲೆಂದು ಹಾರೈಸಿದ್ದರು.

    ವಿಶೇಷ ಅಂದರೆ ಕೆರೆಬೇಟೆ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರ ಸಾಥ್‌ ಸಿಕ್ಕಿದೆ. ಈ ಹಿಂದೆ ಡಾಲಿ ಧನಂಜಯ್‌, ದಿನಕರ್‌ ತೂಗುದೀಪ್‌ ಸೇರಿದಂತೆ ಹಲವರು ಟೀಸರ್‌ ಲಾಂಚ್‌ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದ್ದರು. ನೆಲದ ಕಥೆಗಳನ್ನ ನಮ್ಮ ನಾಡಿನ ಜನರು ಯಾವತ್ತೂ ಕೈ ಬಿಟ್ಟಿಲ್ಲ ಸೋ ಮಲೆನಾಡ ಮಣ್ಣಿನ ಸೊಗಡಿರುವ ಈ ಚಿತ್ರವನ್ನು ಕೈ ಬಿಡಲ್ಲವೆಂದು ಹಾರೈಸಿದ್ದರು. ಅವರೆಲ್ಲರ ಹಾರೈಕೆಯ ಜತೆಗೆ ಅದ್ದೂರಿಯಾಗಿಯೇ ತಯಾರಾಗಿರುವ ಕೆರೆಬೇಟೆ ಚಿತ್ರ ಬಿಡುಗಡೆಗೆ ಅಣಿಯಾಗಿದೆ.

     

    ಇದೇ ಮಾರ್ಚ್‌ 15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡ್ತಿದೆ. ಗಗನ್‌ ಬಡೇರಿಯಾ ಸಂಗೀತ, ಕೀರ್ತನ್‌ ಪೂಜಾರಿ ಛಾಯಾಗ್ರಹಣ ಸಿನಿಮಾಗಿದೆ. ಜೈ ಶಂಕರ್‌ ಪಟೇಲ್‌ಮತ್ತು ಗೌರಿಶಂಕರ್‌ ಜಂಟಿಯಾಗಿ ಜನಮನ ಸಿನಿಮಾಸ್‌ ಬ್ಯಾನರ್‌ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ. ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  • ಗೌರಿ ಶಂಕರ್ ಅನರ್ಹತೆ ಪ್ರಕರಣ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ ಇಬ್ರಾಹಿಂ

    ಗೌರಿ ಶಂಕರ್ ಅನರ್ಹತೆ ಪ್ರಕರಣ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಸಿಎಂ ಇಬ್ರಾಹಿಂ

    ಬೆಂಗಳೂರು: ತುಮಕೂರು ಗ್ರಾಮಾಂತರ (Tumkauru Rural) ಶಾಸಕ ಗೌರಿ ಶಂಕರ್ (Gourishankar) ಅನರ್ಹತೆ ವಿರುದ್ದ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ತಿಳಿಸಿದ್ದಾರೆ.

    ಕಲಬುರಗಿ ಹೈಕೋರ್ಟ್‌ನ (Kalaburagi Highcourt) ಏಕ ಸದಸ್ಯ ಪೀಠದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಏಕ ಸದಸ್ಯ ಪೀಠದ ಆದೇಶ. ಈ ಆದೇಶವನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿ ಈ ಕೇಸ್‌ ನಿಲ್ಲುವುದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದರು ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಸರ್ಕಸ್


    5 ವರ್ಷದ ಹಳೆ ಕೇಸ್ ಇದು.‌ ಈಗ ಬಹಿರಂಗವಾಗಿ ಹಣ ಹಂಚಿದರೂ ಏನು ಮಾಡುತ್ತಿಲ್ಲ. ನಮಗೆ ಈ ಬಗ್ಗೆ ಆತಂಕ ಇಲ್ಲ.ಗೌರಿ ಶಂಕರ್ ಗೆಲ್ಲುತ್ತಾರೆ. ಅದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ. ರೋಡ್ ‌ನಲ್ಲಿ ಹೋಗೋವಾಗ ರಸ್ತೆ ಉಬ್ಬು ಇರುತ್ತದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಆ ಸೀಟು ಚೆನ್ನಿಗಪ್ಪನ ಮನೆ ಸೀಟು, ಅವರು ಗೆಲ್ಲುತ್ತಾರೆ. ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.

    ಗೌರಿ ಶಂಕರ್ ಶಾಸಕರಾಗಿ ಒಳ್ಳೆ ಸೇವೆ ಮಾಡಿದ್ದಾರೆ. ಮೊನ್ನೆ 50 ಸಾವಿರ ಜನ ಸೇರಿ ಸಭೆ ಮಾಡಿದ್ದೇವೆ. ಅ ಸೀಟು ಜೆಡಿಎಸ್ ಸೀಟು ಅಲ್ಲಿ ಜೆಡಿಎಸ್ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಗೌರಿ ಶಂಕರ್ ಅನರ್ಹವಾದರೆ ಅವರ ಪತ್ನಿಗೆ ಸೀಟು ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‌ ಅದನ್ನ ಗೌರಿ ಶಂಕರ್ ತೀರ್ಮಾನ ಮಾಡ್ತಾರೆ. ಗೌರಿ ಶಂಕರ್ ಪತ್ನಿ ನಿಂತರೇ ಇನ್ನು ಹೆಚ್ಚು ಮತ ಬರುತ್ತೆ ಎಂದರು.

  • ದೇವರ ಹಣದಲ್ಲೂ ಕಮಿಷನ್ ಪಡೀತಿದ್ದಾರೆ: ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಆರೋಪ

    ದೇವರ ಹಣದಲ್ಲೂ ಕಮಿಷನ್ ಪಡೀತಿದ್ದಾರೆ: ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಆರೋಪ

    ತುಮಕೂರು: ಇಲ್ಲಿನ ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್‌ (JDS MLA Gauri Shankar) ದೇವಸ್ಥಾನಗಳ ಹಣವನ್ನೂ ಬಿಡದೇ ಕಮಿಷನ್ ಪಡೆಯುತಿದ್ದಾರೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕಮಿಷನ್ ದಂಧೆ ನಡೆಸುತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda)ಗಂಭೀರ ಆರೋಪ ಮಾಡಿದ್ದಾರೆ.

    ಊರ್ಡಿಗೆರೆಯಲ್ಲಿ ನಡೆದ ಬಿಜೆಪಿ (BJP) ಸಮಾವೇಶದಲ್ಲಿ ಅವರು ಮಾತನಾಡಿದರು. ಊರ್ಡಿಗೆರೆ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಕಾಮಗಾರಿಗೆ ಕಮಿಷನ್ ಕೊಟ್ಟಿಲ್ಲ ಎಂದು ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ ಎಂದು ಆಪಾದಿಸಿದ್ದಾರೆ. ಬಯಲು ಆಂಜನೇಯ ಸ್ವಾಮಿ ದೇವರಿಗೆ ನನ್ನ ಕಾಲದಲ್ಲಿ 50 ಲಕ್ಷ ಬಿಡುಗಡೆ ಮಾಡಿದ್ದೆ. ಸೋತ ನಂತರವೂ 25ಲಕ್ಷ ಹಣ ಕೊಡಸಿದ್ದೆ. ಆದರೆ ಶಾಸಕರು 5 ಪೈಸೆ ಖರ್ಚು ಮಾಡಿಲ್ಲ ಕಮಿಷನ್ ಕೊಟ್ಟಿಲ್ಲ ಎಂದು ಮೂರು ವರ್ಷದಿಂದ ಆ ಹಣವನ್ನು ಹಾಗೆ ಇಟ್ಟುಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

    ಗೆಲುವಿಗಾಗಿ ಆಂಜನೇಯನಿಗೆ ಆಫರ್: ಇದೇ ವೇಳೆ ತೀರಾ ಭಾವುಕತೆಗೆ ಒಳಗಾದ ಸುರೇಶ್ ಗೌಡ, ತನ್ನ ಗೆಲುವಿಗಾಗಿ ಬಯಲು ಆಂಜನೇಯನ ಸ್ವಾಮಿ ದೇವರಿಗೆ ಆಫರ್ ಕೊಟ್ಟಿದ್ದಾರೆ. ದೇವರೇ ನಿನ್ನಲ್ಲಿ ಶಕ್ತಿ ಇದ್ದರೆ, ಭಕ್ತಿ ಇದ್ದರೆ, ಪ್ರಮಾಣಿಕತೆ ಇದ್ದರೆ ನನ್ನನ್ನು 50 ಸಾವಿರ ಮತಗಳಿಂದ ಗೆಲ್ಲಿಸು ಎಂದು ವೇದಿಕೆ ಮೇಲೆ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಮಿಥುನ್ ರೈರನ್ನು ತರಾಟೆಗೆ ತೆಗೆದುಕೊಂಡ ನಟ ರಕ್ಷಿತ್ ಶೆಟ್ಟಿ

    ಬಯಲು ಆಂಜನೇಯ ಸ್ವಾಮಿಯೇ ನಿನ್ನ ಕಾಮಗಾರಿಯಲ್ಲಿ ಕಮಿಷನ್ ತಿನ್ನುವ ಶಾಸಕ ಗೌರಿಶಂಕರ್ ನ ಸೋಲಿಸು, ಆಗ ನಾನು ಕೇವಲ 6 ತಿಂಗಳಲ್ಲಿ ನಿನ್ನ ಗೋಪುರ ಕಟ್ಟಿಸುತ್ತೇನೆ, ನಿನ್ನನ್ನ ಜಗತ್ ಪ್ರಸಿದ್ಧಿ ಮಾಡಿಸುತ್ತೇನೆ ಎಂದು ದೇವರಿಗೂ ಆಮಿಷ ಒಡ್ಡಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

  • ಚಿತ್ರೀಕರಣಕ್ಕೆ ಬಂದ ನಾಯಿಯನ್ನು ಕಾಡುಪ್ರಾಣಿ ಎಂದು ತಪಾಸಣೆ ಮಾಡಿದ ಅರಣ್ಯ ಸಿಬ್ಬಂದಿ

    ಚಿತ್ರೀಕರಣಕ್ಕೆ ಬಂದ ನಾಯಿಯನ್ನು ಕಾಡುಪ್ರಾಣಿ ಎಂದು ತಪಾಸಣೆ ಮಾಡಿದ ಅರಣ್ಯ ಸಿಬ್ಬಂದಿ

    ತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ 20 ಕೋಟಿ ಬೆಲೆಬಾಳುವ ಕಕೇಶಿಯ್ ಶೆಫರ್ಡ್ (, Caucasian Shepherd) ಶ್ವಾನವನ್ನು ಖ್ಯಾತ ನಟ ರವಿಚಂದ್ರನ್ (Ravichandran) ನಾಯಕ ನಟನಾಗಿ ನಟಿಸುತ್ತಿರುವ ‘ಗೌರಿಶಂಕರ’ (Gauri Shankar) ಸಿನಿಮಾ ಚಿತ್ರೀಕರಣಕ್ಕೆ ತರಲಾಗಿದ್ದು ಈ ವೇಳೆ ದಾಂಡೇಲಿಯಲ್ಲಿ  ಶ್ವಾನವನ್ನು ನೋಡಿದ ಅರಣ್ಯ ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಲ್ಲದೇ ಇದೊಂದು ಕಾಡುಪ್ರಾಣಿ ಎಂದು ತಿಳಿದು ವಶಕ್ಕೆ ಪಡೆಯಲು ಮುಂದಾಗಿದ್ದರು. ಕೊನೆಗೆ ನಾಯಿ ಮಾಲೀಕ ಸತೀಶ್ ಕ್ಯಾಡಬಮ್ಸ್ ಇದು ಶ್ವಾನ, ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿಯಲ್ಲಾ ಎಂದು ಅರಣ್ಯ ಸಿಬ್ಬಂದಿಗಳಿಗೆ ಫೋಟೋವನ್ನು ತೋರಿಸುವ ಮೂಲಕ ಅರಣ್ಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು.

    ಇದೇ ಮೊದಲಬಾರಿಗೆ ಸತೀಶ್ ರವರು ಸಾಕಿರುವ 20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನವನ್ನು ಕನ್ನಡದ ಸಿನಿಮಾದಲ್ಲಿ ಬಳಸಲಾಗುತ್ತಿದ್ದು ದಾಂಡೇಲಿ, ಜೋಯಿಡಾ ,ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು ಶ್ವಾನಕ್ಕೆ ತಂಗಲು ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದ್ದು 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಈ ಸಿನಿಮಾದ ಶೂಟಿಂಗ್ ಗಾಗಿಯೇ ನಾಯಿಗೆ ಸಂಭಾವನೆಯನ್ನು ಕೂಡ ನೀಡಲಾಗುತ್ತಿದ್ದು, ಹತ್ತು ಲಕ್ಷ ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಈ ಪ್ರಮಾಣದ ಹಣವನ್ನು ಸಂಭಾವನೆಯಾಗಿ ಪಡೆದ ಮೊದಲ ಪ್ರಾಣಿ ಇದಾಗಿದೆ. ಈಗಾಗಲೇ ಮೂರು ದಿನಗಳ ಕಾಲ ಚಿತ್ರೀಕರಣದಲ್ಲೂ ಅದು ಭಾಗಿಯಾಗಿದೆ. ಕೇವಲ ಮೂರೇ ಮೂರು ಪಾತ್ರಗಳು ಸಿನಿಮಾದಲ್ಲಿದ್ದು, ನಾಯಿ ಮತ್ತು ಹುಲಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ 10 ಕೋಟಿ ಬಾಳುವ ಶ್ವಾನ

    ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ 10 ಕೋಟಿ ಬಾಳುವ ಶ್ವಾನ

    ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಸದ್ಯ ‘ಗೌರಿ ಶಂಕರ’ (Gauri Shankar) ಸಿನಿಮಾದ ಶೂಟಿಂಗ್  ನಲ್ಲಿ ಬ್ಯುಸಿಯಾಗಿದ್ದಾರೆ. ದಾಂಡೇಲಿಯ ಅರಣ್ಯದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಬರೋಬ್ಬರಿ ಹತ್ತು ಕೋಟಿ ಬೆಲೆಬಾಳುವ ಕಾಕೇಸಿಯನ್ ಶೆಫರ್ಡ್ (Caucasian Shepherd) ತಳಿಯ ಶ್ವಾನವು ಈ ಸಿನಿಮಾದಲ್ಲಿ ನಟಿಸುತ್ತಿದೆ. ಕೇವಲ ಶ್ವಾನ ಮಾತ್ರವಲ್ಲ ಹುಲಿ ಕೂಡ ಸಿನಿಮಾದ ಒಂದು ಭಾಗವಾಗಿದೆ ಎನ್ನುತ್ತಾರೆ ನಿರ್ದೇಶಕರು.

    ಈ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ವಿಶೇಷ ಗೆಟಪ್ ಕೂಡ ಹಾಕಲಾಗಿದ್ದು, ಅದು ಯಾವ ರೀತಿಯ ಪಾತ್ರ ಎನ್ನುವುದು ಬಹಿರಂಗವಾಗಿಲ್ಲ. ಆದರೆ, ಅವರ ಕಾಸ್ಟ್ಯೂಮ್ ಮತ್ತು ತಲೆಗೆ ಹಾಕಿರುವ ಕಿರೀಟ ಮಾತ್ರ ವಿಶೇಷವಾಗಿದೆ. ಹಾಗಾಗಿ ಈ ಸಿನಿಮಾದಲ್ಲಿಯ ಅವರ ಪಾತ್ರದ ಕುತೂಹಲ ಮೂಡಿದೆ. ಅದೇ ಗೆಟಪ್ ನಲ್ಲೇ ಅವರು ದಾಂಡೇಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಮತ್ತು ಆ ಕಾಸ್ಟ್ಯೂಮ್ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್

    ರವಿಚಂದ್ರನ್ ಜೊತೆ ಈ ಸಿನಿಮಾದಲ್ಲಿ ಅಪೂರ್ವ (Apoorva) ನಾಯಕಿಯಾಗಿ ನಟಿಸುತ್ತಿದ್ದು, ಕ್ರೇಜಿಸ್ಟಾರ್ ಜೊತೆ ಅಪೂರ್ವ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಮೂರೇ ಮೂರು ಪಾತ್ರಗಳಿದ್ದು, ಈ ಜೋಡಿಯ ಜೊತೆ ಪುಟ್ಟ ಮಗುವೊಂದು ನಟಿಸುತ್ತಿದೆ. ಅಲ್ಲದೇ, ಶ್ವಾನ ಮತ್ತು ಹುಲಿ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಸಿನಿಮಾಗಳ ವಿಶೇಷಗಳಲ್ಲಿ ಒಂದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k