Tag: ಗೌರಿ- ಗಣೇಶ ಹಬ್ಬ

  • ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ – ಬೆಂಗ್ಳೂರಲ್ಲಿ ರಾತ್ರಿಯೆಲ್ಲಾ ಟ್ರಾಫಿಕ್

    ರಾಜ್ಯಾದ್ಯಂತ ಗಣೇಶ ಹಬ್ಬದ ಸಂಭ್ರಮ – ಬೆಂಗ್ಳೂರಲ್ಲಿ ರಾತ್ರಿಯೆಲ್ಲಾ ಟ್ರಾಫಿಕ್

    ಬೆಂಗಳೂರು: ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೇ ಸಡಗರ ಮನೆ ಮಾಡಿದೆ.

    ಕೆ.ಆರ್. ಮಾರ್ಕೆಟ್, ಯಶವಂತಪುರ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾಕಡೆ ಗಣೇಶ್ ಮೂರ್ತಿಗಳು ಹಾಗೂ ಹೂ ಹಣ್ಣಿನ ಖರೀದಿಯ ಭರಾಟೆ ತಡರಾತ್ರಿವರೆಗೂ ನಡೀತು. ಹೈದರಾಬಾದ್, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿಗಳಲ್ಲಿ ಬೃಹದಾಕಾರದ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗ್ತಿದೆ. ಕೆಲವರಂತು ಹಣ್ಣುಗಳು, ಕಬ್ಬಿನ ಜಲ್ಲೆ ಸೇರಿದಂತೆ ಪರಿಸರ ಸ್ನೇಹಿಗಣಪನನ್ನೂ ಆರಾಧಿಸ್ತಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

    ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಬ್ಬದ ಪ್ರಯುಕ್ತ ಜನ ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ರು. ವಾಹನ ದಟ್ಟಣೆಯಿಂದಾಗಿ ಮೆಜೆಸ್ಟಿಕ್, ಕೆಆರ್ ಪುರಂ, ಜಾಲಹಳ್ಳಿ ಕ್ರಾಸ್ ಸೇರಿದಂತೆ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಕಿರಿಕಿರಿಯಿಂದ ಜನ ಹರಸಾಹಸ ಪಡಬೇಕಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್

    ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಲು ಪ್ಲಾನ್ ಮಾಡುವವರಿಗೆ ಇದೊಂದು ಶಾಕಿಂಗ್ ಸುದ್ದಿಯಾಗಿದೆ. ಹೌದು. ಹಬ್ಬದ ನೆಪದಲ್ಲಿ ಖಾಸಗಿ ಬಸ್‍ಗಳ ಮಾಲೀಕರಿಂದ ಹಗಲು ದರೋಡೆ ನಡೆಯುತ್ತಿದೆ.

    ಎಂದಿಗಿಂತ ಎರಡ್ಮೂರು ಪಟ್ಟು ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರಿಂದ ಸುಲಿಗೆ ಮಾಡಲು ಮಾಲೀಕರ ತಯಾರಾಗಿದ್ದು, ಗಣೇಶ ಚತುರ್ಥಿ ಮುನ್ನಾ ಎರಡು ದಿನದ ರೇಟ್ ಕೇಳಿದ್ರೆ ಆಗ್ತಿರಾ ಶಾಕ್ ಆಗ್ತೀರಿ. ಇಂದು 500 ರೂ. ಟಿಕೆಟ್ ದರ ಇದ್ರೆ 11, 12ರಂದು 1500 ರೂ. ಆಗಿರುತ್ತದೆ. ಈ ಬಗ್ಗೆ ಪ್ರಶ್ನಿಸಿದ್ರೆ ಬೇಕಾದ್ರೆ ಬುಕ್ ಮಾಡಿ ಇಲ್ಲಾ ಅಂದ್ರೆ ಹೋಗಿ ಅಂತ ಬುಕ್ಕಿಂಗ್ ಏಜೆಂಟ್ಸ್ ಹೇಳುತ್ತಾರೆ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೇಕ್‍ನಲ್ಲಿ ಬಯಲಾಗಿದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಟಿಕೆಟ್ ದರ ಏರಿಸಲ್ಲ: ಸಾರಿಗೆ ಸಚಿವ ಡಿಸಿ ತಮ್ಮಣ್ಣ

    ಬೆಂಗಳೂರಿನಿಂದ ಬೇರೆ ಬೇರೆ ಪ್ರಮುಖ ಊರುಗಳಿಗೆ ಇವತ್ತಿನ ಪ್ರಯಾಣ ದರ ಎಷ್ಟಿದೆ. 11, 12 ನೇ ತಾರೀಕು ಇದೇ ಪ್ರಮುಖ ಊರುಗಳಿಗೆ ಟಿಕೆಟ್ ದರ ಈ ಕೆಳಗಿನಂತಿದೆ. ಇದನ್ನೂ ಓದಿ: ಮತ್ತೊಂದು ಶಾಕ್, ಇನ್ನು ಮುಂದೆ ಪ್ರತಿ ತಿಂಗಳು ಬಸ್ ಟಿಕೆಟ್ ಪರಿಷ್ಕರಣೆ!

    ಎಲ್ಲಿಂದ ಎಲ್ಲಿಗೆ [ನಾನ್ ಎಸಿ ಸ್ಲೀಪರ್]  – ಇಂದಿನ ದರ-  11, 12ರ ದರ
    ಬೆಂಗಳೂರು TO ಬೆಳಗಾವಿ –  950 ರೂ. –  1750 ರೂ.
    ಬೆಂಗಳೂರು TO ಮಂಗಳೂರು  – 850- ರೂ.- 1600 ರೂ .
    ಬೆಂಗಳೂರು TO ಉಡುಪಿ –  850 ರೂ. – 1500 ರೂ .
    ಬೆಂಗಳೂರು TO ಶಿವಮೊಗ್ಗ  – 560 ರೂ. – 1600 ರೂ.
    ಬೆಂಗಳೂರು TO ಹುಬ್ಬಳ್ಳಿ –   600 ರೂ. – 1700 ರೂ.
    ಬೆಂಗಳೂರು TO ಬೀದರ್ –  1100 ರೂ. – 1700 ರೂ.
    ಬೆಂಗಳೂರು TO ಬಳ್ಳಾರಿ –  560 ರೂ. – 1300 ರೂ.
    ಬೆಂಗಳೂರು TO ರಾಯಚೂರು –  660 ರೂ. – 1700 ರೂ.
    ಬೆಂಗಳೂರು TO ಮೈಸೂರು –  500 ರೂ. – 850 ರೂ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರು

    ಮಹಾಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರು

    ಬೆಂಗಳೂರು: ಗೌರಿ ಗಣೇಶ ಹಬ್ಬದ ಹೊತ್ತಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಮತ್ತೆ ವರುಣ ಆರ್ಭಟಿಸಿದ್ದಾನೆ.

    ರಾತ್ರಿಯಿಡಿ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದೆ. ಕೆ.ಆರ್.ಪುರಂ, ಮಾರತ್ ಹಳ್ಳಿ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಚಂದ್ರಾಲೇಔಟ್, ಶಾಂತಿ ನಗರ, ಯಶವಂತಪುರ, ಜಾಲಹಳ್ಳಿ, ವಿಜಯನಗರ, ಕಾರ್ಪೊರೇಷನ್, ಯಲಹಂಕ, ಹೆಬ್ಬಾಳ ಸೇರಿದಂತೆ ನಗರದ ಬಹುತೇಕ ಕಡೆ ಜೋರು ಮಳೆಯಾಗಿದೆ.

    ಬುಧವಾರ ರಾತ್ರಿ ಒಟ್ಟು 82 ಮಿ.ಮೀ ನಷ್ಟು ಮಳೆ ನಗರದಲ್ಲಿ ದಾಖಲಾಗಿದೆ. ಇದ್ರಿಂದಾಗಿ ನಗರದ ಬಹುತೇಕ ಕಡೆ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಿತ್ತು. ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿ ಸ್ಥಳೀಯರು ನಾನಾ ಅವಸ್ಥೆ ಪಡಬೇಕಾಯ್ತು. ಚಂದ್ರಲೇಔಟ್ ರಾಜಾಕಾಲುವೆ ಪಕ್ಕದ ಹತ್ತಾರು ಮನೆಗಳಿಗೆ ಮಳೆ ನೀರು ನಿಗ್ಗಿದ್ರಿಂದ ಜನ ನೀರನ್ನ ಹೊರಗೆ ಹಾಕೋದ್ರಲ್ಲೇ ರಾತ್ರಿ ಕಳೆದ್ರು.

    ಎಚ್‍ಎಸ್‍ಆರ್ ಲೇಔಟ್ ಹಾಗೂ ಶಾಂತಿ ನಗರದಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿತ್ತು. ಮಾರತ್ ಹಳ್ಳಿ ಸುತ್ತಮುತ್ತ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೆ ಫಜೀತಿ, ಯಾವ ಜನಪ್ರತಿನಿಧಿಯಾಗ್ಲೀ, ಅಧಿಕಾರಿಗಳಾಗಲೀ ನಮ್ಮ ಕಷ್ಟ ಕೇಳೋಕೆ ಬರಲ್ಲ. ಮಕ್ಕಳ ಜೊತೆ ಈ ಕೊಳಚೆ ನೀರಿನಲ್ಲೇ ಬದುಕುವಂತಾಗಿದೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡ್ರು.

    ಇನ್ನೊಂದೆಡೆ ಕೆಆರ್ ಮಾರ್ಕೆಟ್‍ ನಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ. ಬೆಳ್ಳಂಬೆಳಗ್ಗೆ ಹೂವು ಹಣ್ಣು ಖರೀದಿಸಲು ಸಾವಿರು ಜನ ಕೆಆರ್ ಮಾರ್ಕೆಟ್‍ಗೆ ಲಗ್ಗೆ ಇಟ್ಟಿದ್ದಾರೆ. ಕೆಸರಿನಲ್ಲೇ ವ್ಯಾಪಾರ ನಡೀತಿದೆ. ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಆದ್ರೆ ಮಳೆ ಕಾರಣ ವ್ಯಾಪಾರ ಡಲ್ ಅಂತಿದ್ದಾರೆ ವ್ಯಾಪಾರಿಗಳು.

    https://twitter.com/krpuramtraffic1/status/900434970421862400