Tag: ಗೌತಮ್ ಕುಮಾರ್

  • ಬೆಂಗ್ಳೂರಲ್ಲಿ 14 ದಿನ ಲಾಕ್‍ಡೌನ್ ಅಗತ್ಯ: ಬಿಬಿಎಂಪಿ ಮೇಯರ್

    ಬೆಂಗ್ಳೂರಲ್ಲಿ 14 ದಿನ ಲಾಕ್‍ಡೌನ್ ಅಗತ್ಯ: ಬಿಬಿಎಂಪಿ ಮೇಯರ್

    ಬೆಂಗಳೂರು: ಕೊರೊನಾ ಚೈನ್ ಲಿಂಕ್ ಕಟ್ ಆಗಬೇಕಾದರೆ ಲಾಕ್‍ಡೌನ್ ಆಗಬೇಕಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಯರ್ ಗೌತಮ್, ಈಗಾಗಲೇ ಕೊರೊನಾ ಚೈನ್ ಲಿಂಕ್ ಕಟ್ ಆಗುವ ಪ್ರಕ್ರಿಯೆ ಶುರುವಾಗಿದೆ. ಸಾಮಾನ್ಯವಾಗಿ ಕ್ವಾರಂಟೈನ್ ಅಂದರೆ 14 ದಿನ. ಆದರೆ ಇತ್ತೀಚೆಗೆ ಏಳು ದಿನಗಳಾಗಿದೆ. ಹೀಗಾಗಿ ಯಾರು ಎಷ್ಟು ದಿನ ಕ್ವಾರಂಟೈನ್ ಆಗಿ ಹೊರಗೆ ಬಂದು ಓಡಾಡುತ್ತಿದ್ದಾರೆ ಎಂದು ನಮಗೆ ಗೊತ್ತಿಲ್ಲ ಎಂದರು.

    ಸಂಪೂರ್ಣವಾಗಿ 14 ದಿನ ಎಲ್ಲರೂ ಮನೆಯಲ್ಲಿದ್ದರೆ ಒಂದು ಕಡೆ ಈ ಚೈನ್ ಲಿಂಕ್ ಕಟ್ ಆಗಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಹೀಗಾಗಿ ಕೊರೊನಾ ಚೈನ್ ಲಿಂಕ್ ಕಟ್ ಆಗಬೇಕಾದರೆ ಲಾಕ್‍ಡೌನ್ ಅಗತ್ಯವಾಗಿದೆ. ಆದರೆ ಸರ್ಕಾರ ಇದರ ಬಗ್ಗೆ ಇನ್ನೂ ಒಳ್ಳೆಯ ಚಿಂತನೆ ಮಾಡಬಹುದು ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.

    ನನ್ನ ಪಿಎಗೆ ಕೊರೊನಾ ಪಾಸಿಟಿವ್ ಆಗಿತ್ತು. ಹೀಗಾಗಿ ನಾನು ಕ್ವಾರಂಟೈನ್ ಆಗಿ ಮನೆಯಿಂದ ಹೊರಗೆ ಬಂದಿದ್ದೇನೆ. 14 ದಿನ ಕಟ್ಟು-ನಿಟ್ಟಾಗಿ ಲಾಕ್‍ಡೌನ್ ಮಾಡಿ. ಆಗ ಕೊರೊನಾ ಚೈನ್ ಲಿಕ್ ಕಟ್ ಆಗುತ್ತದೆ ಎಂದು ಜನರು ಕೂಡ ಹೇಳುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಮುಂದುವರಿಸುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ ಎಂದರು.

    ಸದ್ಯ ನಗರದಲ್ಲಿ ಸಾಕಷ್ಟು ಜನ ಓಡಾಡುತ್ತಿದ್ದಾರೆ. ಇದು ಕಡಿಮೆ ಆಗಬೇಕು ಅಂದರೆ ಲಾಕ್‍ಡೌನ್ ಮುಂದುವರಿಸಬೇಕು. ಆದರೆ ಪೂರ್ಣ ಬಂದ್ ಆಗಿ ಬಿಟ್ಟರೆ ಜನರು ಕೂಡ ಭಯ ಪಡುತ್ತಾರೆ. ಲಾಕ್‍ಡೌನ್ ಮಾಡಬೇಕಾದದರೆ ಏನೇನು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಚಿಂತನೆ ಮಾಡಬೇಕಿದೆ ಎಂದು ಗೌತಮ್ ಕುಮಾರ್ ತಿಳಿಸಿದರು.

  • ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಭಯ

    ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಭಯ

    ಬೆಂಗಳೂರು: ಕೊರೊನೊ ವೈರಸ್, ಕಾಲರಾ ಭಯ ಹರಡುವ ಭೀತಿ ಈಗ ಬಿಬಿಎಂಪಿಯ ಸಿಬ್ಬಂದಿ, ಪೌರಕಾರ್ಮಿಕರಿಗೂ ಕಾಡುತ್ತಿದೆ. ಕಾರಣ ಪಾಲಿಕೆಯಲ್ಲಿ ಹಾಜರಾತಿಗಾಗಿ ಈಗಲೂ ಬಯೋಮೆಟ್ರಿಕ್ ಮುಂದುವರಿಕೆ ಮಾಡಲಾಗಿದೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ, ಬ್ಯಾಟರಾಯನಪುರ, ತ್ಯಾಗರಾಜ್‍ನಗರ ಎಲ್ಲ ಕಡೆ ಬಯೋಮೆಟ್ರಿಕ್ ಮೂಲಕ ಹಾಜರಾತಿ ಪಡೆಯಲಾಗುತ್ತಿದೆ. ಇದು ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಇಡೀ ನಗರಕ್ಕೆ ಮುನ್ನಚ್ಚರಿಕೆ ಬಗ್ಗೆ ಅರಿವು ಹೇಳುವ ಬಿಬಿಎಂಪಿ ಮಾತ್ರ ಬಯೋಮೆಟ್ರಿಕ್ ಮುಂದುವರಿಸಿದೆ.

    ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಈ ವಿಚಾರ ನನ್ನ ಗಮನಕ್ಕೆ ಬೆಳಿಗ್ಗೆಯೇ ಬಂದಿದೆ. ಆಯುಕ್ತರು, ಆಡಳಿತ ವಿಭಾಗದ ವಿಶೇಷ ಆಯುಕ್ತರು, ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಬಯೋಮೆಟ್ರಿಕ್ ವ್ಯವಸ್ಥೆ ತೆಗೆದರೆ ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಬಯೋಮೆಟ್ರಿಕ್ ಸಂಸ್ಥೆ ದೃಷ್ಟಿಯಿಂದ ತೀರ್ಮಾನ ಮಾಡಲಾಗುತ್ತದೆ ಎಂದರು.

  • ನಂಗೆ ಕೆಲ್ಸ ಮಾಡೋದು ಗೊತ್ತು, ಮಾತಾಡೋದಾದ್ರೆ ನೀವೇ ಮಾಡ್ಕೊಳ್ಳಿ: ಮೇಯರ್

    ನಂಗೆ ಕೆಲ್ಸ ಮಾಡೋದು ಗೊತ್ತು, ಮಾತಾಡೋದಾದ್ರೆ ನೀವೇ ಮಾಡ್ಕೊಳ್ಳಿ: ಮೇಯರ್

    ಬೆಂಗಳೂರು: ಬೆಳ್ಳಂಬೆಳ್ಳಗ್ಗೆ ಚಿಕ್ಕಪೇಟೆ ಮತ್ತು ಗಾಂಧಿನಗರ ವಾರ್ಡ್ ನಲ್ಲಿ ಮೇಯರ್ ಗೌತಮ್ ಕುಮಾರ್ ಮತ್ತು ಕಮಿಷನರ್ ಅನಿಲ್ ಕುಮಾರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಮಸ್ಯೆ ಹೇಳಲು ಬಂದ ಸಾರ್ವಜನಿಕರ ವಿರುದ್ಧ ಮೇಯರ್ ಗರಂ ಆದ ಘಟನೆ ನಡೆದಿದೆ.

    ಸಾರ್ವಜನಿಕರು ಮ್ಯಾನ್ ಹೋಲ್ ವಿಚಾರಕ್ಕೆ ಗಾಂಧಿನಗರ ವಾರ್ಡ್ ದೂರು ನೀಡಿದರು. ದೂರಿನಲ್ಲಿ, ಮ್ಯಾನ್ ಹೋಲ್ ಸರಿಯಿಲ್ಲ. ಹಾಗೇ ಹೀಗೆ ಎಂದು ಸಾರ್ವಜನಿಕರು ಕೂಗಾಡಿದರು. ಸಾರ್ವಜನಿಕರ ಏರುಧ್ವನಿಯಲ್ಲಿ ಸಮಸ್ಯೆ ಪ್ರಶ್ನಿಸಿದ್ದಕ್ಕೆ, ನಮಗೆ ಕೆಲಸ ಮಾಡೋದು ಗೊತ್ತಿದೆ. ಜಾಸ್ತಿ ಎಕ್ಸಪ್ಲೈನ್ ಮಾಡಬೇಡಿ. ನಾವು ಕೆಲಸ ಮಾಡೋಕೆ ಬಂದಿರೋದು. ಹೀಗೆ ಮಾತಾಡ್ತಾ ಇದ್ರೆ ನೀವೇ ಮಾಡ್ಕೋಳಿ ನಾವು ಹೋಗ್ತೀವಿ ಎಂದು ಮೇಯರ್ ಕಿಡಿಕಾರಿದರು. ಮೇಯರ್ ಮಾತಿಗೆ ಸಾರ್ವಜನಿಕರು ಸುಮ್ಮನಾದರು.

    ತಪಾಸಣೆ ವೇಳೆ ಮೇಯರ್ ಗೆ ಸಮಸ್ಯೆಗಳ ಸುರಿಮಳೆಗಳೇ ಬಂದಿವೆ. ಸಾರ್ವಜನಿಕರ ಸಮಸ್ಯೆಗಳ ದೂರಿನ ಹಿನ್ನೆಲೆ ಜಲಮಂಡಳಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಬರೀ ನೀರಿನ ಸಮಸ್ಯೆನೇ ಮನೆಗೆ ನೀರು ನುಗ್ಗುತ್ತೆ. ರೋಡಲ್ಲಿ ನೀರು ನಿಲ್ಲುತ್ತೆ ಅಂತ. ನಿಮ್ಮಿಂದ ನಾವು ಬೈಯಿಸಿಕೊಳ್ಳುವಂತಾಯ್ತು. ಕೆಲಸ ಮಾಡೋಕೆ ಏನ್ರಿ ಅಂತ ಮೇಯರ್ ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೆ ಜಲಮಂಡಳಿಯಿಂದ ಸರಿಯಾಗಿ ಕೆಲಸ ಮಾಡಿ ಅಂತ ಅಧಿಕಾರಿಗೆ ಸೂಚನೆ ನೀಡಿದರು.

    ಸುಭಾಷಿತ ಬರೆದು ಮೇಯರ್‍ಗೆ ಟಾಂಗ್:
    ಮೇಯರ್ ಆಗಮನಕ್ಕೆ ಸುಭಾಷಿತ ಬರೆದು ಬಿವಿಕೆ ಅಯ್ಯಂಗಾರ್ ರಸ್ತೆಯ ಸಾರ್ವಜನಿಕರು ಬೋರ್ಡ್ ನೇತು ಹಾಕಿದರು. ಈ ಮೂಲಕ ಮೇಯರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮೇಯರ್ ಬಂದರೆ ಬೀದಿಗಳು ಸ್ವಚ್ಛವಾಗುತ್ತೆ, ಮಳೆ ಬಂದರೆ ಊರು ಸ್ವಚ್ಛವಾಗುತ್ತೆ ಎಂದು ಸುಭಾಷಿತ ಬರೆಯುವ ಮೂಲಕ ಮೇಯರ್ ತಪಾಸಣೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ತಪಾಸಣೆಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬಂದಿದೆ. ಇಲ್ಲೇ ಹುಟ್ಟಿ ಬೆಳೆದಿರುವ ಸಂಸದ ಮೋಹನ್ ಅವರ ಸಲಹೆ ಪಡೆದಿದ್ದೇವೆ. ಯಾವ ರೀತಿ ಕಾಮಗಾರಿ ನಡೆಸಬೇಕು. ಕಸ ವಿಲೇವಾರಿ ಸೇರಿದಂತೆ ಹಲವು ಕೆಲಸಗಳ ಬಗ್ಗೆ ಸಲಹೆ ನೀಡಿದ್ದಾರೆ. 10 ರಿಂದ 15 ದಿನಗಳಲ್ಲಿ ಮೀಟಿಂಗ್ ಮಾಡಿ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

    ಇದೇ ವೇಳೆ ಮೇಯರ್ ಬಂದ್ರೆ ರಸ್ತೆ ಸ್ವಚ್ಛ ಆಗುತ್ತೆ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಜನ ಎಷ್ಟು ಬೈತರೊ ಅಷ್ಟು ನಾವು ಕಲೀತಿವಿ. ಜನ ಹೇಳಿರೋದನ್ನು ಮನಸಲ್ಲಿ ಇಟ್ಟಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.

  • ಮೂರೂ ಪಾಳಿಯಲ್ಲಿ ಮನೆಗಳಿಂದ ಕಸ ಸಂಗ್ರಹ

    ಮೂರೂ ಪಾಳಿಯಲ್ಲಿ ಮನೆಗಳಿಂದ ಕಸ ಸಂಗ್ರಹ

    ಬೆಂಗಳೂರು: ನಗರದ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಇಂದೋರ್ ಮಾದರಿಯ ಕಸ ನಿರ್ವಹಣೆಯನ್ನು ಜಾರಿಗೆ ತರಲಾಗಿದೆ.

    ರಾತ್ರಿ ವೇಳೆಯಲ್ಲಿ ವಾಣಿಜ್ಯ ಕಟ್ಟಡಗಳಿಂದ ಕಸ ಸಂಗ್ರಹ ಮಾಡುವುದರಿಂದ ಬ್ಲಾಕ್ ಸ್ಪಾಟ್‍ಗಳು ಕಡಿಮೆ ಸೃಷ್ಟಿಯಾಗಲಿವೆ. ಅಲ್ಲದೆ ಇದೇ ರೀತಿಯಲ್ಲಿ ಪ್ರತಿ ಮನೆ ಬಾಗಿಲಿನಿಂದ ರಾತ್ರಿ ಹೊತ್ತು ಹಾಗೂ ಅಗತ್ಯ ಬಿದ್ದೆಡೆ ಮೂರೂ ಪಾಳಿಯಲ್ಲಿ ಕಸ ಸಂಗ್ರಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.


    ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ನೂರು ದಿನದಲ್ಲಿ ಪ್ರಾಯೋಗಿಕ ಯೋಜನೆಯ ಸಂಕ್ಷಿಪ್ತ ಚಿತ್ರಣ ಸಿಗಲಿದೆ. ಬ್ಲಾಕ್ ಸ್ಪಾಟ್‍ಗಳು ಯಾಕೆ ಸೃಷ್ಟಿಯಾಗುತ್ತಿದೆ ಎಂದು ಕಾರಣ ಹುಡುಕಲಾಗುತ್ತಿದೆ. ಮುಂದೆ ಬರುವ ದಿನಗಳಲ್ಲಿ ಅಧ್ಯಯನ ಮಾಡಿ, ಈ ಯೋಜನೆಯ ಲೋಪದೋಷ ಸರಿಪಡಿಸಿ ಎಲ್ಲಾ ವಾರ್ಡ್‌ಗಳಲ್ಲೂ ಯೋಜನೆ ಜಾರಿಗೆ ತರಲಾಗುವುದು ಎಂದರು.

    ಅಲ್ಲದೆ ಕೆಲವೊಂದು ಕಡೆ ಡೇ ಶಿಫ್ಟ್, ನೈಟ್ ಶಿಫ್ಟ್, ಮಧ್ಯಾಹ್ನದ ಶಿಫ್ಟ್ ನಲ್ಲಿ ಕಸ ತೆಗೆದು, ಜನರಿಗೆ ಕಸ ಹೊರಗೆ ಎಸೆಯದಂತೆ ಮಾಡಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಬರುವವರಿಗೆ ಬೆಳಗ್ಗೆ ಬೇಗ ಕಸ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವ ಯಾವ ಪ್ರದೇಶದಲ್ಲಿ ಕಸ ಹೇಗೆ ಸಂಗ್ರಹಿಸಬೇಕು ಎಂಬುದು ಗೊತ್ತಾಗಲಿದೆ ಎಂದು ಗೌತಮ್ ಕುಮಾರ್ ತಿಳಿಸಿದರು.

  • ನಿಗದಿ ಪಡಿಸಿದ ಬಾಡಿಗೆಯನ್ನು ಸರಿಯಾಗಿ ಪಾವತಿಸಿ- ಮೇಯರ್ ಸೂಚನೆ

    ನಿಗದಿ ಪಡಿಸಿದ ಬಾಡಿಗೆಯನ್ನು ಸರಿಯಾಗಿ ಪಾವತಿಸಿ- ಮೇಯರ್ ಸೂಚನೆ

    – ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಮೇಯರ್ ಸಭೆ

    ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗಳ ಸಮಸ್ಯೆಯನ್ನು ಪಾಲಿಕೆ ಇತ್ಯರ್ಥ ಮಾಡಲಿದೆ. ಕೆ.ಆರ್ ಮಾರ್ಕೆಟ್ ನಲ್ಲಿರುವ 24 ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದ್ದು, ಅದಕ್ಕೆ ಯಾರು ಕೂಡ ಅಡ್ಡಿಪಡಿಸದೆ ಸಹಕಾರ ನೀಡುವಂತೆ ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದರು.

    ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಇಂದು ಸಂಜೆ ನಡೆದ ಸಭೆಯಲ್ಲಿ ಮೇಯರ್ ಈ ಸೂಚನೆಯನ್ನು ಕೊಟ್ಟಿದ್ದು, ಉದ್ದಿಮೆ ಪರವಾನಗಿ ಇಲ್ಲದ ಮಳಿಗೆಗಳಿಗೆ ಕೂಡಲೇ ಪರವಾನಗಿ ಮಾಡಿಸಿಕೊಳ್ಳಬೇಕು. ಪಾಲಿಕೆ ನಿಗದಿಪಡಿಸಿರುವ ಬಾಡಿಗೆಯನ್ನು ಸರಿಯಾಗಿ ಪಾವತಿಸಬೇಕು ಅಂತ ಸೂಚಿಸಿದರು.

    ಮಾರುಕಟ್ಟೆಗಳ ವಿಚಾರವಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಮಾಡುವ ಬಗ್ಗೆ ಪಾಲಿಕೆ, ಕಾನೂನು ಕೋಶ ವಿಭಾಗದವರ ಜೊತೆ ಚರ್ಚಿಸಲಾಗುವುದು. ಜೊತೆಗೆ 5 ವರ್ಷಗಳ ಕಾಲ ಮಾತ್ರ ವ್ಯಾಪಾರ ಮಾಡಲು ಅನುಮತಿ ನೀಡುವ ನಿಯಮವನ್ನು ತಿದ್ದುಪಡಿ ಮಾಡುವ ಬಗ್ಗೆ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಅಂತ ತಿಳಿಸಿದರು.

    ಈ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಸಂಸದ ಪಿ.ಸಿ.ಮೋಹನ್ ಭಾಗಿಯಾಗಿದ್ದರಿ. ಸ್ಥಳದಲ್ಲಿಯೇ ಸಂಸದ ಪಿ.ಸಿ.ಮೋಹನ್, ಕೆ.ಆರ್.ಮಾರ್ಕೆಟ್, ರಸೆಲ್ ಮಾರ್ಕೆಟ್ ಸೇರಿದಂತೆ ಇನ್ನೂ ಕೆಲವು ಮಾರುಕಟ್ಟೆಗಳಲ್ಲಿ 5 ವರ್ಷಗಳ ಕಾಲ ಮಾತ್ರ ವ್ಯಾಪಾರ ಮಾಡಲು ಅನುಮತಿ ನೀಡುವ ನಿಯಮವನ್ನು ತಿದ್ದುಪಡಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

  • ‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

    ‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

    ಬೆಂಗಳೂರು: ವರ್ಷವಿಡೀ ವ್ಯಾಪಾರವಿಲ್ಲದೆ ಹಬ್ಬದ ಸಮಯದಲ್ಲಿಯಾದ್ರು ಸ್ವಲ್ಪ ವ್ಯಾಪಾರ ಮಾಡೋಣ ಎಂದು ಚಿಂತಿಸುವ ಕೆ.ಆರ್.ಮಾರ್ಕೆಟ್ ವ್ಯಾಪಾರಗಳಿಗೆ ಸಮಸ್ಯೆಯಾಗಿದ್ದ ಅಧಿಕಾರಿಗಳು, ಪುಡಿ ರೌಡಿಗಳ ಕಾಟದ ಸಮಸ್ಯೆಯನ್ನು ಪಬ್ಲಿಕ್ ಟಿವಿ ‘ಆಯುಧಪೂಜೆ ನರಕಾಸುರರು’ ಶೀರ್ಷಿಕೆಯಡಿ ಮೂಲಕ ವರದಿ ಬಿತ್ತರ ಮಾಡಿತ್ತು. ಸದ್ಯ ಈ ವರದಿಯನ್ನು ಗಮನಿಸಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿ ವರದಿಯನ್ನು ವೀಕ್ಷಿಸಿದ ಬಳಿಕ ಮೇಯರ್ ಅವರು, ಬಿಬಿಎಂಪಿ ಆಯುಕ್ತರಿಗೆ ನೇರ ಕರೆ ಮಾಡಿ ಇಂತಹ ಅಧಿಕಾರಿಗಳು ಹಾಗೂ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದರು. ಅಲ್ಲದೇ ಈ ಸಂಬಂಧ ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ವರದಿ ಮಾಡಿದ ಹಿನ್ನೆಲೆಯಲ್ಲಿ ನೇರ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ಹೇಳಿದ ಅವರು, ನಾನು ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಬಿಬಿಎಂಪಿ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಹಾಗೂ ಬಾಲಕನೊಂದಿಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ. ಮುಂದಿನ 2 ದಿನಗಳಲ್ಲಿ ಸ್ಥಳಕ್ಕೆ ತೆರಳಿ ವ್ಯಾಪಾರಿಗಳ ಬಳಿ ಸಮಸ್ಯೆಗಳನ್ನು ಅಲಿಸುತ್ತೇನೆ. ಅಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳುತ್ತೇನೆ ಎಂದರು.

    ಸದ್ಯ ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಾಗೂ ಕೂಡಲೇ ಆತನನ್ನು ಬಂಧನ ಕೂಡ ಮಾಡಲು ತಿಳಿಸಿದ್ದೇನೆ. ನಮ್ಮದೇ ಅಧಿಕಾರಿ ಪುಟ್ಟ ಬಾಲಕನ ಕೆಟ್ಟದಾಗಿ ಮಾತನಾಡಿದ್ದು, ಸಂಸ್ಥೆಯ ಗುರುತಿನ ಚೀಟಿ ಹಾಗೂ ವಾಕಿಟಾಕಿ ಕೂಡ ಆತನ ಕೈಯಲ್ಲಿದೆ. ಇವತ್ತಿನ ಘಟನೆಯಿಂದ ನನಗೆ ಮುಜುಕರವಾಗುತ್ತಿದೆ ಎಂದರು.

    https://www.youtube.com/watch?v=NhjMSwy23vg

  • ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

    ಬೈಕ್ ಏರಿದ ಬೆಂಗ್ಳೂರು ಮೇಯರ್​ಗೆ ಗುಂಡಿಗಳ ದರ್ಶನ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸುತ್ತಲು ಇಂದು ಮೇಯರ್ ಗೌತಮ್ ಕುಮಾರ್ ಬೈಕ್ ನಲ್ಲಿ ಹೊರಟ್ಟಿದ್ದರು. ಬೈಕ್ ನಲ್ಲಿ ರೌಂಡ್ಸ್ ಹೊರಟ ಮೇಯರ್ ಅವರಿಗೆ ಸಾಲು ಸಾಲು ಗುಂಡಿಗಳ ದರ್ಶನವಾಗಿದೆ.

    ಅಧಿಕಾರಿಗಳ ಜೊತೆ ಜನರ ಸಮಸ್ಯೆ ಆಲಿಸಲು ಮೇಯರ್ ಮಲ್ಲೇಶ್ವರಂ ಮುಖ್ಯರಸ್ತೆಗಳಲ್ಲಿ ಇಂದು ಬೈಕ್ ರೈಡ್ ಹೊರಟಿದ್ದರು. ಮೇಯರ್ ಹೊರಟ 100 ಮೀ. ಅಂತರದಲ್ಲಿ ರಸ್ತೆಯೇ ಗುಂಡಿಯಾಗಿರೊ ಸತ್ಯ ಬಯಲಾಯಿತು. ಗುಂಡಿ ಕಂಡು ಮೇಯರ್ ಒಂದು ಕ್ಷಣ ಶಾಕ್ ಆದರು. ಕೂಡಲೇ ತಮ್ಮ ಜೊತೆಯಲ್ಲಿದ್ದ ಜಂಟಿ ಆಯುಕ್ತ ಚಿದಾನಂದ್ ಅವರಿಗೆ ಅಕ್ಟೋಬರ್ 13ರೊಳಗೆ ಗುಂಡಿಗಳನ್ನು ಮುಚ್ಚುವಂತೆ ಖಡಕ್ ಆದೇಶ ನೀಡಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, ರಸ್ತೆ ಗುಂಡಿಗಳ ಬಗ್ಗೆ ಹಲವು ದೂರುಗಳ ಬಂದಿವೆ. ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಿದ್ದೇನೆ. ದೂರುಗಳನ್ನಾಧರಿಸಿ ಇಂದು ರಸ್ತೆ ಗುಂಡಿ ಪರಿಶೀಲನೆಗೆ ಮುಂದಾದೆ. ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಕಾರಿನಲ್ಲಿ ಸಂಚರಿಸುವದರಿಂದ ರಸ್ತೆಗುಂಡಿಗಳ ಬಗ್ಗೆ ಗೊತ್ತಾಗಲ್ಲ. ದ್ವಿಚಕ್ರ ವಾಹನ ಸವಾರರು ರಸ್ತೆಗುಂಡಿಗಳಿಂದ ತೊಂದರೆ ಅನುಭವಿಸುತ್ತಾರೆ. ಹಾಗಾಗಿ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಬೈಕ್ ರೌಂಡ್ಸ್ ಗೆ ಬರಲಾಗಿತ್ತು. ಇಂದು ಜನರ ನೋವು ಏನು ಎಂಬುವುದು ಅರ್ಥವಾಗಿದೆ. ಆದಷ್ಟು ಬೇಗ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಭರವಸೆ ನೀಡಿದರು.

    ಆದಷ್ಟು ಬೇಗ ಇಲ್ಲಿಯ ರಸ್ತೆ ರಿಪೇರಿ, ಟ್ರಾಫಿಕ್ ನಿಯಂತ್ರಿಸಿ ಎಂದು ಸಾರ್ವಜನಿರಕು ಮೇಯರ್ ಬಳಿ ಮನವಿ ಮಾಡಿಕೊಂಡರು. ಇನ್ನುಂದೆ ವಲಯವಾರು ಗುಂಡಿ ಚೆಕ್ ಮಾಡುತ್ತೇನೆ ಎಂದು ಮೇಯರ್ ಹೇಳಿದ್ದಾರೆ.