Tag: ಗೋಹತ್ಯೆ ನಿಷೇಧ ಕಾಯ್ದೆ

  • ಗೋಹತ್ಯೆ ನಿಷೇಧ ಕಾಯ್ದೆ – ಪರಿಷತ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಜಟಾಪಟಿ

    ಗೋಹತ್ಯೆ ನಿಷೇಧ ಕಾಯ್ದೆ – ಪರಿಷತ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಜಟಾಪಟಿ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ (Cow Slaughter Bill) ವಿಚಾರವಾಗಿ ಆಡಳಿತ ಪಕ್ಷ (Congress) ಹಾಗೂ ವಿಪಕ್ಷ ಬಿಜೆಪಿ (BJP) ನಡುವಿನ ಗದ್ದಲ ತಾರಕಕ್ಕೇರಿದೆ. ಇದೇ ವಿಚಾರವಾಗಿ ಬುಧವಾರ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವ ಪ್ರಸ್ತಾಪ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅಂತಹ ಪ್ರಸ್ತಾಪ ಈಗ ಸರ್ಕಾರದ ಮುಂದಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ರವಿಕುಮಾರ್, ಸಚಿವರು ಈಗ ಈ ಉತ್ತರ ನೀಡಿದ್ದಾರೆ. ಆದರೆ ಜೂನ್ 3 ರಂದು ಮೈಸೂರಿನಲ್ಲಿ ಎಮ್ಮೆ ಕೋಣ ಕಡಿಯುವುದಾದರೆ ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಅವರೇ ಹೇಳಿಕೆ ಕೊಟ್ಟಿದ್ದಾರೆ. ಈಗ ಪ್ರಸ್ತಾಪ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ ನಮಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಸೇರಿ ಎಲ್ಲದರ ತನಿಖೆಯಾಗ್ಲಿ- ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್

    ಅಲ್ಲದೇ ಈಗ ಇಲ್ಲ ಎನ್ನುತ್ತಿದ್ದೀರಿ, ಹಾಗಾದರೆ ಮುಂದೆ ಇದೆಯೇ? ಲಕ್ಷಾಂತರ ಜನ ಹಸು ಸಾಕುವವರಿದ್ದಾರೆ. ವಯಸ್ಸಾದ ಹಸುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಿರಿ. ಸಮಾಜ ಈಗಾಗಲೇ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರ ತನ್ನ ಸ್ಪಷ್ಟ ನಿರ್ಧಾರ ತಿಳಿಸಿಬೇಕು. ಇತ್ತೀಚಿನ ಹಬ್ಬದಲ್ಲಿ ಗೋಹತ್ಯೆಯಾಯಿತು ಯಾಕೆ ಕ್ರಮ ವಹಿಸಲಿಲ್ಲ. ಕಾಯ್ದೆ ಇದ್ದರೂ ಗೋವುಗಳ ರಕ್ಷಣೆ ಯಾಕಿಲ್ಲ? ಎಂದು ಅವರು ಕಿಡಿಕಾರಿದರು.

    ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರದ ಸ್ಪಷ್ಟನೆಗೆ ಆಗ್ರಹಿಸಿ ದನಿಗೂಡಿಸಲು ಮುಂದಾದರು. ಇದಕ್ಕೆ ಗರಂ ಆದ ಸಭಾಪತಿ ಬಸವರಾಜ ಹೊರಟ್ಟಿ, ಪೂಜಾರಿ ನೀವೀಗ ಪ್ರತಿಪಕ್ಷದ ನಾಯಕರಲ್ಲ. ಆಗಾಗ ಎದ್ದು ನಿಲ್ಲಬೇಡಿ ಎಂದು ತಾಕೀತು ಮಾಡಿದರು. ನಂತರ ಗೋಹತ್ಯೆಗೆ ಕ್ರಮ ವಹಿಸುವ ವಿಚಾರದ ಕುರಿತು ಸ್ಪಷ್ಟ ಉತ್ತರಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿದರು.

    ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಗೋಮಾಂಸ ರಫ್ತಿನದಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಮೊದಲು ಉತ್ತರ ಕೊಡಬೇಕು. ಇದಕ್ಕೆ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್ ಸಾಥ್ ನೀಡಿ, ಬೇರೆ ರಾಜ್ಯದಲ್ಲಿ ಏನಿದೆ ಅದರ ಬಗ್ಗೆ ಮಾತನಾಡಿ, ಅಂಕಿ ಅಂಶ ತೆಗೆದುನೋಡಿ ಎಂದಿದ್ದಾರೆ.

    ನಂತರ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಬಿಜೆಪಿ ಸದಸ್ಯರು ಸದನದ ಸಮಯ ಹಾಳು ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಸದನದ ಸಮಯ ಹಾಳು ಮಾಡುತ್ತಿದ್ದಾರೆ. ಇದು ರಾಜಕೀಯ, ಮತಗಳ ಬೇಟೆಗೆ ಸದನದ ಸಮಯ ಬಲಿ ಕೊಡುತ್ತಿದ್ದಾರೆ. ನಮ್ಮ ನಿಲುವು ಹೇಳಲಾಗಿದೆ. ರಾಜಕೀಯವನ್ನು ಹೊರಗೆ ಹೋಗಿ ಮಾಡಿ. ನಿಮಗೆ ಸದನ ನಡೆಯುವುದು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.

    ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಚಿವರು ಸೂಕ್ತ ಉತ್ತರ ಕೊಟ್ಟ ನಂತರ ಇದೇ ರೀತಿ ಉತ್ತರ ಕೊಡಬೇಕು ಎನ್ನುವ ಮೊಂಡುತನ ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗೋಹತ್ಯೆ ನಿಷೇಧ ಬಿಲ್ ವಾಪಸ್ ಪಡೆಯಲ್ಲ ಎನ್ನುವ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವ ವೆಂಕಟೇಶ್ ಇತ್ತೀಚೆಗೆ ಗೋಹತ್ಯೆ ನಡೆದಿದ್ದು ಕಂಡುಬಂದಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಆದರೂ ಸರ್ಕಾರದ ಉತ್ತರವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದರು. ಸಭಾಪತಿ ಮನವಿಗೂ ಸ್ಪಂದಿಸದೆ ಘೋಷಣೆ ಕೂಗಿದರು. ಸಭಾಪತಿಗಳು ಮುಂದಿನ ಕಲಾಪ ಕೈಗೆತ್ತಿಕೊಂಡರೂ ಬಿಜೆಪಿ ಸದಸ್ಯರು ಘೋಷಣೆ ಕೂಗಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ ಉಂಟಾದ ಕಾರಣ ಕಲಾಪವನ್ನ ಮುಂದೂಡಲಾಯಿತು. ಇದನ್ನೂ ಓದಿ: ನನ್ನ ಬಳಿ ದಾಖಲೆ ಇದೆ- ಹೆಚ್‍ಡಿಕೆ ಪೆನ್‍ಡ್ರೈವ್ ಬಾಂಬ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋವಿನ ಮೇಲಿನ ನಂಬಿಕೆಗೂ ಸಂವಿಧಾನಕ್ಕೂ ವ್ಯತ್ಯಾಸ ಇದೆ: ಜಿ ಪರಮೇಶ್ವರ್

    ಗೋವಿನ ಮೇಲಿನ ನಂಬಿಕೆಗೂ ಸಂವಿಧಾನಕ್ಕೂ ವ್ಯತ್ಯಾಸ ಇದೆ: ಜಿ ಪರಮೇಶ್ವರ್

    ತುಮಕೂರು: ಜನೋಪಕಾರಿ ಅಲ್ಲದ ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾಯಿದೆಯನ್ನು ವಾಪಸ್ ಪಡೆಯುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಪುನರುಚ್ಚರಿಸಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಿನ ಮೇಲೆ ಇರುವ ನಂಬಿಕೆ, ಪ್ರೀತಿಗೂ, ಸಂವಿಧಾನಕ್ಕೂ ವ್ಯತ್ಯಾಸ ಇದೆ. ಆರ್ಥಿಕತೆಯೇ ಬೇರೆ, ನಂಬಿಕೆಯೇ ಬೇರೆ. ಹೀಗಾಗಿ ಈ ಎರಡೂ ಕಾನೂನನ್ನು ರದ್ದುಗೊಳಿಸುತ್ತೇವೆ ಎಂದಿದ್ದಾರೆ.

    ಅನ್ನ ಭಾಗ್ಯ ಯೋಜನೆ ಕುರಿತಂತೆ ಮಾತನಾಡಿದ ಪರಮೇಶ್ವರ್, ಈಗಾಗಲೇ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಏನು ಮಾತುಕತೆಯಾಗಿದೆ ಎಂಬುದು ಗೊತ್ತಿಲ್ಲ. ಯಾವುದೋ ಮುಲಾಜಿಗೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ. ಪ್ರತಿ ರಾಜ್ಯಕ್ಕೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡುತ್ತಿದೆ. ಕೇಂದ್ರ ಕೊಟ್ಟ 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಣ್ಣ, ನಮಗೆಲ್ಲಾ ವಿಷದ ಬಾಟ್ಲಿ ಭಾಗ್ಯನೂ ಕೊಟ್ಬಿಡಿ: ಅಳಲು ತೋಡಿಕೊಂಡ ಆಟೋ ಚಾಲಕ

    ಈ ನಡುವೆ ಬಿಜೆಪಿ ಸಾಧನಾ ಸಮಾವೇಶ ಕುರಿತಂತೆ ಮಾತನಾಡಿದ ಅವರು, ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? 40% ಕಮಿಷನ್ ಪಡೆದಿದ್ದು, 15 ಲಕ್ಷ ರೂ. ಖಾತೆಗೆ ಹಾಕ್ತಿನಿ ಅಂದಿದ್ದು ಸಾಧನೆನಾ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರಲ್ಲ, ರೇಟ್ ಕೇಳಿದ್ರೇನೆ ಕಿಕ್ ಹೊಡೆಯುತ್ತೆ – ಅಶೋಕ್ ಲೇವಡಿ

  • ತಾಯಿಗೆ ವಯಸ್ಸಾಗಿದೆ ಎಂದು ಬಿಡಲು ಒಪ್ಪುತ್ತೀರಾ- ವಿರೋಧ ಪಕ್ಷದವರಿಗೆ ಈಶ್ವರಪ್ಪ ಪ್ರಶ್ನೆ

    ತಾಯಿಗೆ ವಯಸ್ಸಾಗಿದೆ ಎಂದು ಬಿಡಲು ಒಪ್ಪುತ್ತೀರಾ- ವಿರೋಧ ಪಕ್ಷದವರಿಗೆ ಈಶ್ವರಪ್ಪ ಪ್ರಶ್ನೆ

    ಚಿತ್ರದುರ್ಗ: ತಾಯಿಗೆ ವಯಸ್ಸಾಗಿದೆ ಎಂದು ಬಿಡಲು ಒಪ್ಪುತ್ತೀರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಗೋಹತ್ಯೆಗೆ ಅವಕಾಶ ಕೊಡುತ್ತೇವೆ ಎಂದರೆ ಡಿಕೆಶಿ, ಸಿದ್ಧರಾಮಯ್ಯ ಮನೆಯಲ್ಲಿ ಹೆಣ್ಣುಮಕ್ಕಳು ಊಟ ಹಾಕಲ್ಲ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯಾಕೆ ಬೇಡ ಎಂಬುದರ ಕುರಿತು ಚರ್ಚೆ ನಡೆಸಬೇಕಿತ್ತು. ಆದರೆ ಸದನದಲ್ಲಿ ಚರ್ಚೆ ಬಾಯ್ಕಾಟ್ ಮಾಡಿದ್ದಾರೆ. ಅವರೇ ಸಂವಿಧಾನ ವಿರೋಧಿಗಳು. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದು ತಿರುಕನ ಕನಸು, ಹಗಲು ಕನಸು. ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಲ್ಲಿ ಉಳಿತಾರೋ ಇಲ್ವೋ ಗೊತ್ತಿಲ್ಲ. ಜನರ ಅಪೇಕ್ಷೆಯಂತೆ ಸರ್ಕಾರ ನಡೆದಿದೆ. ರಾಜ್ಯದಲ್ಲಿ ವಿಪಕ್ಷವೇ ಇಲ್ಲ. ಮುಸ್ಲಿಂ ಮತಬ್ಯಾಂಕಿಗಾಗಿ ಗೋಹತ್ಯೆ ನಿಷೇಧ ಕಾಯ್ದೆಗೆ ಕೈ ನಾಯಕರು ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

    ಇಂದು ಗೋವಿನ ಮೂಲಕ ಥಾಯಿಯ ರಕ್ಷಣೆ ಮಾಡಿದ್ದೇವೆ. ಮುಂದೆ ಲವ್ ಜಿಹಾದ್ ಕಾನೂನು ಮೂಲಕ ಹೆಣ್ಣಿನ ರಕ್ಷಣೆ ಮಾಡುತ್ತೇವೆ, ನಾವು ಬಿಡುವುದಿಲ್ಲ. ಹೆಣ್ಣು ಮಕ್ಕಳ ಜೊತೆ ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದಾರೆ. ಬೇರೆ ರಾಜ್ಯಗಳಿಗೆ, ದೇಶಗಳಿಗೆ ಕರೆದೊಯ್ದು ಮಾರಾಟ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಕೈ ಮುಖಂಡರು ಯಾವ ಪಕ್ಷಕ್ಕೆ ಬೇಕಾದರು ಹೋಗುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷಾಂತರದ ನಾಯಕ. ಕ್ರಾಸ್ ಬೀಡ್ ಅನ್ನುವಂಥದ್ದು ನಾಯಿಗೆ ಬಳಸುವ ಪದ. ಇಂದಿರಾ ಗಾಂಧಿ, ಫೀರೋಜ್ ಖಾನ್, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಬರ್ಟ್ ವಾದ್ರಾ ಇವರನ್ನು ನೋಡಿ ಕ್ರಾಸ್ ಬೀಡ್ ನಲ್ಲೇ ಅಸಂಸ್ಕೃತಿ ಬಂದಿದೆ. ಈಗ ಈಶ್ವರಪ್ಪ ಕುರುಬರಾದರಾ ಎಂದು ಕೇಳುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.