Tag: ಗೋವಿಂದ್

  • ನಾನು ಮತಾಂತರಗೊಂಡಿದ್ದೇನೆ ಎನ್ನುವುದು ಸುಳ್ಳು : ನಟಿ ರಾಗಿಣಿ

    ನಾನು ಮತಾಂತರಗೊಂಡಿದ್ದೇನೆ ಎನ್ನುವುದು ಸುಳ್ಳು : ನಟಿ ರಾಗಿಣಿ

    ಬಾಲಿವುಡ್ ನ ಜನಪ್ರಿಯ ನಟಿ, ಹೆಸರಾಂತ ನಟ ಗೋವಿಂದ್ ಅವರ ಅಕ್ಕನ ಮಗಳು ರಾಗಿಣಿ ಖನ್ನಾ (Ragini Khanna) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದಾರೆ ಎಂದು ವರದಿಯಾಗಿತ್ತು. ಮತಾಂತರ ಗೊಂಡ ಒಂದೇ ದಿನಕ್ಕೆ ಅವರು ವಾಪಸ್ಸು ಹಿಂದೂ ಧರ್ಮಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಅವರು ಮೌನ ಮುರಿದಿದ್ದಾರೆ.

    ಅಭಿಮಾನಿಯೊಬ್ಬ ಒಂದು ಪೋಸ್ಟ್ ಮಾಡಿದ್ದ, ಅದನ್ನು ನಾನು ರೀಪೋಸ್ಟ್ ಮಾಡಿ ಸಂಕಟಕ್ಕೆ ಸಿಲುಕಿಕೊಂಡೆ. ನಾನು ಯಾವುದೇ ಕಾರಣಕ್ಕೂ ಮತಾಂತರಗೊಂಡಿಲ್ಲ. ಅದೆಲ್ಲವೂ ಸುಳ್ಳು. ಅಭಿಮಾನಿಯ ಎಡವಟ್ಟಿನಿಂದಾಗಿ ನಾನು ನೋವು ಅನುಭವಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

    ರಾಗಿಣಿ ಒಂದು ದಿನದ ಹಿಂದೆಯಷ್ಟೇ ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರ (convert) ಆಗಿ, ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದು ವರದಿಯಾಗಿತ್ತು. ತಾನು ಮತಾಂತರವಾಗಿ ತಪ್ಪು ಮಾಡಿದೆ, ನನ್ನ ತಪ್ಪಿನ ಅರಿವಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದೇನೆ ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿತ್ತು.

    ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ಸನಾತನ ಧರ್ಮವೇ ಶ್ರೇಷ್ಠವೆಂದು ಅವರು ಹೇಳಿಕೊಂಡಿದ್ದಾರೆ. ಬೇರೆ ಧರ್ಮಕ್ಕೆ ಮತಾಂತರವಾದ ನಂತರ, ಇಂದಿನಿಂದ ಈ ಧರ್ಮವನ್ನು ಪಾಲಿಸುತ್ತೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿದ್ದವು.

     

    ಮತಾಂತರಗೊಳ್ಳುವ ಕುರಿತಂತೆ ಹಾಕಿದ್ದ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದು, ಹಿಂದೂ (Hindu) ಧರ್ಮದ ಬಗ್ಗೆ ಮಾಡಲಾದ ಭಾಷಣವನ್ನು ಅವರು ಪೋಸ್ಟ್ ಮಾಡಿ, ಅದಕ್ಕೆ ತಮ್ಮ ತಮ್ಮ ಫೋಟೋ ಅಂಟಿಸಿದ್ದರು. ಈಗ ಎಲ್ಲ ಗೊಂದಲಕ್ಕೂ ಅವರು ತೆರೆ ಎಳೆದಿದ್ದಾರೆ.

  • ಶಿಂಧೆ ಬಣದ ಶಿವಸೇನೆ ಸೇರಿದ ನಟ ಗೋವಿಂದ್

    ಶಿಂಧೆ ಬಣದ ಶಿವಸೇನೆ ಸೇರಿದ ನಟ ಗೋವಿಂದ್

    ಲೋಕಸಭೆ ಚುನಾವಣೆ (Lok Sabha Elections) ಸಿನಿಮಾ ನಟರಿಂದಾಗಿ ರಂಗೇರುತ್ತಿದೆ. ಈಗಾಗಲೇ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕೆಲ ವರ್ಷಗಳಿಂದ ದೂರವಿದ್ದ ಬಾಲಿವುಡ್ ನಟ ಗೋವಿಂದ್ (Govind), ಮತ್ತೆ ರಾಜಕಾರಣಕ್ಕೆ ವಾಪಸ್ಸಾಗಿದ್ದಾರೆ. ಲೋಕಸಮರಕ್ಕೆ ಇಳಿಯುವುದಕ್ಕಾಗಿಯೇ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರ ಶಿವಸೇನೆ (Shiv Sena)ಯನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

    ಕೆಲವು ದಿನಗಳ ಹಿಂದೆಯೇ ಇವರು ಶಿವಸೇನೆ ಸೇರಲಿದ್ದಾರೆ ಎನ್ನುವ ಗುಲ್ಲಿತ್ತು. ಏಕನಾಥ ಶಿಂಧೆ ಅವರನ್ನೂ ಗೋವಿಂದ್ ಅವರ ಭೇಟಿ ಮಾಡಿದ್ದರು. ವಾಯವ್ಯ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಇಳಿಯುವ ಕುರಿತು ಚರ್ಚೆ ಮಾಡಿದ್ದರು. ಆದರೆ, ಆಗ ಅದು ಅಧಿಕೃತವಾಗಿರಲಿಲ್ಲ. ಈಗ ಶಿವಸೇನೆ ಸೇರ್ಪಡೆಗೊಂಡನಂತರ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

    ನಟನಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗೋವಿಂದ್, 2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಂಡು, ಬಿಜೆಪಿಯ ಅಭ್ಯರ್ಥಿ ರಾಮ್ ನಾಯ್ಕ್ ಅವರನ್ನು ಸಾಕಷ್ಟು ಅಂತರದಿಂದ ಸೋಲಿಸಿದ್ದರು. ಗೋವಿಂದ್ ಅವರ ಜನಪ್ರಿಯತೆ ಅದಕ್ಕೆ ಸಾಥ್ ಕೂಡ ನೀಡಿತ್ತು.

     

    ಈಗಾಗಲೇ  ವಾಯುವ್ಯ ಮುಂಬೈ ಕ್ಷೇತ್ರದಿಂದ ಉದ್ಭವ್ ಠಾಕ್ರೆ ಬಣದಿಂದ ಅಮೋಲ್ ಕೀರ್ತಿಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಇಪ್ಪತ್ತು ವರ್ಷಗಳ ನಂತರ ಮತ್ತೆ ಗೋವಿಂದ್ ರಾಜಕೀಯ ಪ್ರವೇಶ ಮಾಡಿದ್ದರಿಂದ, ಯಾವ ರೀತಿಯಲ್ಲಿ ಪ್ರತಿಸ್ಪರ್ಧೆಗೆ ಠಕ್ಕರ್ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಗೋವಿಂದ್ ಶಿವಸೇನೆ ಸೇರ್ಪಡೆಯಾಗಿದ್ದಾರೆ. ಆದರೆ, ಟಿಕೆಟ್ ಅವರಿಗೆ ಸಿಗತ್ತಾ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

  • ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ –  ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

    ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

    ಬೆಂಗಳೂರು: ಪುನೀತ್‍ಗೆ ಶೂಟಿಂಗ್, ತಿಂಡಿ ಬಿಟ್ಟು ಪ್ರಪಂಚನೇ ಗೊತ್ತಿರಲಿಲ್ಲ ಅಂತ ತಮ್ಮನನ್ನು ನೆನೆದು ಸಹೋದರಿ ಲಕ್ಷ್ಮೀ ಸಹೋದರಿ ಕಣ್ಣೀರಿಟ್ಟಿದ್ದಾರೆ.

    ಪವರ್ ಸ್ಟಾರ್ ನಟ ಪುನೀತ್ ರಾಜ್‍ಕುಮಾರ್ ಸ್ಮರಣೆ ಕಾರ್ಯಕ್ರಮ ಹಿನ್ನೆಲೆ ಅನ್ನದಾನವನ್ನು ಕಾಕ್ಸ್ ಟೌನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಂಗಮ್ಮ ದೇವಸ್ಥಾನ ದೊಡ್ಡಕುಂಟೆ ದೇಗುಲದ ಮುಂದೆ ನಡೆದ ಈ ಕಾರ್ಯಕ್ರದಲ್ಲಿ ಅಪ್ಪು ಅವರ ಹಿರಿಯ ಅಕ್ಕ ಲಕ್ಷ್ಮೀ ಅವರು ಪಾಲ್ಗೊಂಡಿದ್ದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷಣ ಕ್ಷಣಕ್ಕೂ ಕಣ್ಣೀರು ಬಿಟ್ಟು ಬೇರೆನು ತೋಚುತ್ತಿಲ್ಲ. ನಾನು ಬೆಳೆಸಿದ ಕೂಸಿಗೆ ಯಾಕೆ ಹೀಗೆ ಆಯ್ತು ಅನಿಸುತ್ತದೆ. ನನಗೂ ಪುನೀತ್‍ಗೂ 12 ವರ್ಷ ವ್ಯತ್ಯಾಸವಿದೆ. ಶೂಟಿಂಗ್, ತಿಂಡಿ ಬಿಟ್ಟು ನನ್ನ ಅಪ್ಪುಗೆ ಪ್ರಪಂಚವೇ ಗೊತ್ತಿರಲಿಲ್ಲ. ಚಿಕ್ಕವನಿದ್ದಾಗ ನನ್ನ ಮದುವೆಯ ಫಂಕ್ಷನ್ ಅಂತ ಸಂಭ್ರಮದಿಂದ ಕುಣಿದಾಡಿದ್ದ. ಅಪ್ಪು ಸಾಮಾಜಿಕ ಕೆಲಸ ಮಾಡಿರುವುದು ಗೊತ್ತೆ ಇಲ್ಲ. ನಮ್ಮ ಅಪ್ಪಾಜಿ ಬಿಟ್ಟರೆ ನಮ್ಮ ಅಮ್ಮನನ್ನು ನೆನಪಿಸಿದ ಸಹೋದರ ನನ್ನ ಅಪ್ಪು ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

    ಅಪ್ಪು ಬಗ್ಗೆ ಟಿವಿಲಿ ಬರುತ್ತಿದೆ ನೋಡಿ ಅಂತ ತ್ಯಾಗಣ್ಣ ಕರೆ ಮಾಡಿದ್ದರು. ಆಗ ಅಶ್ವಿನಿ ಅವರಿಗೆ ಕರೆ ಮಾಡಿದೇ ಅವರು ಫೋನ್ ತೆಗೆದಿಲ್ಲ. ಆಗ ಮಂಗಳಕ್ಕಾಗೆ ಫೋನ್ ಮಾಡಿದೆ. ಅವರು ಅಪ್ಪು ಬಿಟ್ ಹೋದ ಅಂದ್ರು. ಏನ್ ಹೇಳ್ತಾ ಇದ್ದಿಯಾ ನೀನು ಅಂದೇ ಅಷ್ಟೇ ಅವತ್ತು ಏನ್ ಆಯ್ತು ಅಂತ ಆಮೇಲೆ ನನಗೆ ಗೊತ್ತೇ ಆಗಲಿಲ್ಲ ಎಂದು ಬೇಸರ ತೋಡಿಕೊಂಡರು.

    ಇದೇ ವೇಳೆ ಲಕ್ಷ್ಮೀ ಅವರ ಪತಿ ನಿರ್ಮಾಪಕ ಗೋವಿಂದ್ ಅವರು ಮಾತನಾಡಿ, ಗೋವಿಂದ್ ಮಾಮ.. ಗೋವಿಂದ್ ಮಾಮ.. ಎಂದು ಮುದ್ದು, ಮುದ್ದಾಗಿ ಮಾತನಾಡುತ್ತಿದ್ದ ನಮ್ಮ ಅಪ್ಪುಗೆ ಹೀಗೆ ಆಯ್ತಾಲ್ಲ ಅಂತ ನಂಬುಲು ಆಗುತ್ತಿಲ್ಲ. ಅಪ್ಪು ಫ್ಯಾಮಿಲಿ ಜೊತೆ ನಾವು ಸದಾ ಇರುತ್ತೇವೆ. ಇನ್ನು ಮುಂದೆ ಅವರ ಮನೆಗೆ ಹೆಚ್ಚಾಗಿ ಹೋಗಿ ಬರುತ್ತಿರುತ್ತೇವೆ. ಅವರ ಪತ್ನಿ ಹಾಗೂ ಮಕ್ಕಳಲ್ಲಿ ಅಪ್ಪುವನ್ನು ಕಾಣುತ್ತೇವೆ ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

    ಲಾಸ್ಟ್ ಟೈಮ್ ಅಪ್ಪು ನೋಡಿದಾಗ ಅಪ್ಪಾಜಿ ನೋಡಿದಂತೆ ಆಯ್ತು. ಮದುವೆ ಸಮಾರಂಭವೊಂದಕ್ಕೆ ಹೋಗಿದ್ವಿ ಅಲ್ಲಿಗೆ ಬಂದ ಅಪ್ಪು ವೈಟ್ ಪಂಚೆ, ವೈಟ್ ಶರ್ಟ್ ಹಾಕಿದ್ದ. ಆಗ ಏನ್ ಅಪ್ಪು ಅಪ್ಪಾಜಿ ತರ ಕಾಣ್ತಾ ಇದ್ದಿಯಾ ಮನೆಗೆ ಹೋಗಿ ದೃಷ್ಟಿ ತೆಗೆಸಿಕೊ ಅಂದೆ. ಮಾಮ ಇದು ಜಾಹೀರಾತು ಮಾಡಿದ್ದೆ. ಆಗ ತೆಗೆದುಕೊಂಡಿದ್ದು ಅಂತ ಅಪ್ಪು ಹೇಳಿದ್ದ. ಆ ಮಾತು ಈಗಲೂ ಕಿವಿಲಿ ಕೇಳುತ್ತಿದೆ. ಅಪ್ಪು ಸಮಾಜಕ್ಕೆ ಇಷ್ಟೆಲ್ಲಾ ಮಾಡಿದ ಅಂತ ಗೊತ್ತಿರಲಿಲ್ಲ. ಯಾರಿಗೂ ಹೇಳಿಬೇಡಿ ಅಂತ ಹೇಳಿ ಅಪ್ಪು ಸಹಾಯ ಮಾಡುತ್ತಿದ್ದ ಎಂದು ಹೇಳಿದರು.

  • ಕನ್ನಡ ಹಾಡನ್ನು ಹಾಡಿ ಮಿಂಚಿದ ಬಾಲಿವುಡ್ ನಟ

    ಕನ್ನಡ ಹಾಡನ್ನು ಹಾಡಿ ಮಿಂಚಿದ ಬಾಲಿವುಡ್ ನಟ

    ಬೆಂಗಳೂರು: ಬಾಲಿವುಡ್ ನಟ ಗೋವಿಂದ್ ಅವರು ಕನ್ನಡ ಹಾಡೊಂದನ್ನು ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ಪೂಣಚ್ಚ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಡಾ.ರಾಜ್‍ಕುಮಾರ್ ಅಭಿನಯದ ಎರಡು ಕನಸು ಸಿನಿಮಾದ ‘ಎಂದೆಂದೂ ನಿನ್ನನೂ ಮರೆತೂ ನಾನಿರಲಾರೇ..’ ಎಂದು ಕನ್ನಡ ಸಾಂಗ್‍ನ ಎರಡು ಲೈನ್ ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ನನ್ನ ಜೀವನದ ಅತ್ಯುತ್ತಮ ದಿನ ಇಂದಾಗಿದೆ. ಎವರ್‍ಗ್ರೀನ್ ಸೂಪರ್‍ಸ್ಟಾರ್ ಗೋವಿಂದ ಸರ್ ಅವರನ್ನು ಭೇಟಿ ಮಾಡಿದೆ. ಅವರು ನನ್ನೊಂದಿಗೆ ಒಂದು ಕನ್ನಡ ಹಾಡನ್ನು ಹಾಡಿದ್ದಾರೆ. ಅವರು ಡಾ.ರಾಜ್‍ಕುಮಾರ್ ಸರ್ ಮತ್ತು ಅವರ ಹಾಡುಗಳನ್ನು ಪ್ರೀತಿಸುತ್ತಾರೆ ಎಂದು ಬರೆದುಕೊಂಡು ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

    ಬಾಲಿವುಡ್ ನಟನ ಕನ್ನಡ ಪ್ರೀತಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕದಲ್ಲೇ ಕನ್ನಡ ಹಾಡನ್ನು ಕಡೆಗಣಿಸಲಾಗುತ್ತದೆ ಎಂಬ ಬೇಸರ ಆಗಾಗ ಕೇಳಿ ಬರುತ್ತದೆ. ಆದರೆ ಪರಭಾಷೆಯವರು ನಮ್ಮ ಕನ್ನಡ ಸಿನಿಮಾ ಗೀತೆಯನ್ನು ಹಾಡುವುದಕ್ಕೆ ನೆಟ್ಟೆಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಗೋವಿಂದ್ ಅವರಿಗೆ ಹರ್ಷಿಕಾ ಪೂಣಚ್ಚ ಕನ್ನಡ ಹಾಡನ್ನು ಹಾಡುವಂತೆ ಹೇಳ್ತಿದ್ದಂತೆಯೇ ನಟ ಎಷ್ಟೊಂದು ಪ್ರೀತಿಯಿಂದ ಹಾಡಿದ್ದಾರೆ ಎಂಬುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

  • ಸೋಶಿಯಲ್ ಮೀಡಿಯಾದ ಡ್ಯಾನ್ಸ್ ಅಂಕಲ್ ಜೊತೆ ಗೋವಿಂದ ಸ್ಟೆಪ್!

    ಸೋಶಿಯಲ್ ಮೀಡಿಯಾದ ಡ್ಯಾನ್ಸ್ ಅಂಕಲ್ ಜೊತೆ ಗೋವಿಂದ ಸ್ಟೆಪ್!

    ನವದೆಹಲಿ: ತಮ್ಮ ವಿಶಿಷ್ಟ ನೃತ್ಯದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು `ಡ್ಯಾನ್ಸ್ ಅಂಕಲ್’ ಎಂದೇ ಹೆಸರುಗಳಿಸಿದ್ದ ಭೋಪಾಲ್‍ನ ಪ್ರಾಧ್ಯಾಪಕರಾದ ಸಂಜೀವ್ ಶ್ರೀವತ್ಸರವರು ಮುಂಬೈನಲ್ಲಿ ಡ್ಯಾನ್ಸ್ ದೀವಾನ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ನಟ ಗೋವಿಂದ ಅವರನ್ನು ಭೇಟಿ ಮಾಡಿದ್ದಾರೆ.

    ಇದೇ ವೇಳೆ ಬಾಲಿವುಡ್‍ನ ಖ್ಯಾತ ನಟ ಗೋವಿಂದ ಅವರೊಂದಿಗೆ ವೇದಿಕೆ ಹಂಚಿಕೊಂಡು ಎಲ್ಲರೂ ನಾಚುವಂತೆ ಇಬ್ಬರೂ ಹೆಜ್ಜೆ ಹಾಕಿದ್ದರು. ಇವರ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.

    ಡ್ಯಾನ್ಸ್ ದೀವಾನ ನೃತ್ಯ ಸಂಚಿಕೆಯಲ್ಲಿ ಡ್ಯಾನ್ಸ್ ಅಂಕಲ್ ಹಾಗೂ ಅವರ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದರು. ಈ ಸಂಚಿಕೆಯಲ್ಲಿ ಬಾಲಿವುಡ್‍ನ ಖ್ಯಾತ ನಟಿ ಮಾಧುರಿ ದಿಕ್ಷಿತ್ ಹಾಗೂ ಖ್ಯಾತ ಕೊರಿಯೋಗ್ರಾಫರ್ ತುಶಾನ್ ಖಾಲಿಯ ಮತ್ತು ಚಿತ್ರ ನಿರ್ದೇಶಕ ಶಂಶಾಂಕ್ ಖೈತಾನ್ ಜಡ್ಜ್‍ಗಳಾಗಿದ್ದಾರೆ.

    ಎಲೆಕ್ಟ್ರಾನಿಕ್ ವಿಭಾಗದ ಪ್ರಾಧ್ಯಾಪಕರಾದ ಇವರು 1987ರಲ್ಲಿ ತೆರೆಕಂಡ ಖುದ್ಗರ್ಜ್ ಚಿತ್ರದ `ಆಪ್ ಕೆ ಆ ಜಾನೆ ಸೆ’ ಹಾಡಿಗೆ ಹೆಜ್ಜೆಹಾಕಿದ್ದರು. ಈ ಚಿತ್ರದಲ್ಲಿ ಗೋವಿಂದ ಹಾಗೂ ನಿಲಮ್ ಕೋಠಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭಾರೀ ಜನಪ್ರಿಯಗೊಂಡಿತ್ತು.

    ಮದುವೆ ಸಮಾರಂಭದಲ್ಲಿ ಸಂಜೀವ್ ಶ್ರೀವತ್ಸ್ ಅವರು ಹೆಜ್ಜೆ ಹಾಕಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ ಬಾಲಿವುಡ್‍ನ ದಿಗ್ಗಜರು ಅಂಕಲ್‍ಗೆ ಅಭಿನಂದನೆ ಸಲ್ಲಿಸಿದ್ದರು. ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ದಸ್ ಕಾ ಧಮ್ ಕಾರ್ಯಕ್ರಮದಲ್ಲಿಯೂ ಈ ಮೊದಲು ಕಾಣಿಸಿಕೊಂಡಿದ್ದರು.ಇದನ್ನೂ ಓದಿ: ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್