Tag: ಗೋಲ್ಡ್ ಮ್ಯಾನ್

  • ಬರೋಬ್ಬರಿ 10 ಕೆ.ಜಿ ಚಿನ್ನ ಧರಿಸ್ತಿದ್ದ ಗೋಲ್ಡ್ ಮ್ಯಾನ್ ಸಾವು

    ಬರೋಬ್ಬರಿ 10 ಕೆ.ಜಿ ಚಿನ್ನ ಧರಿಸ್ತಿದ್ದ ಗೋಲ್ಡ್ ಮ್ಯಾನ್ ಸಾವು

    ಮುಂಬೈ: 10 ಕೆ.ಜಿ ಚಿನ್ನ ಧರಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಗೋಲ್ಡ್ ಮ್ಯಾನ್ 39 ವರ್ಷದ ಸಾಮ್ರಾಟ್ ಮೊಜ್ ಹೃದಯಾಘಾತದಿಂದ ಇತ್ತೀಚೆಗಷ್ಟೆ ನಿಧನರಾಗಿದ್ದಾರೆ.

    ಸಾಮ್ರಾಟ್‍ಗೆ ಹೃದಯಾಘಾತವಾಗಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊರೊನಾನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಶನಿವಾರ ಸಾಮ್ರಾಟ್ ಅಂತಿಮ ವಿಧಿ-ವಿಧಿಗಳನ್ನು ಪುಣೆಯ ಯರವಾಡದಲ್ಲಿ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಕೆಲವೇ ಜನರು ಹಾಜರಿದ್ದರು.

    ಮೃತ ಸಾಮ್ರಾಟ್ ನಗರದ ಪ್ರಸಿದ್ಧ ಉದ್ಯಮಿಯಾಗಿದ್ದು, ಸುಮಾರು 8 ರಿಂದ 10 ಕೆ.ಜಿ ಚಿನ್ನವನ್ನು ಧರಿಸುತ್ತಿದ್ದರು. ಕುತ್ತಿಗೆಯಲ್ಲಿ ದಪ್ಪ ದಪ್ಪ ಸರಗಳು, ಕೈಯಲ್ಲಿ ದಪ್ಪದ ಬ್ರಾಸ್‍ಲೈಟ್ ಮತ್ತು ವಿವಿಧ ರೀತಿ ಉಂಗುರಗಳನ್ನು ಧರಿಸಿಕೊಂಡು ತಿರುಗಾಡುತ್ತಿದ್ದರು. ಹೀಗಾಗಿ ಜನರು ‘ಗೋಲ್ಡ್ ಮ್ಯಾನ್’ ಎಂಬ ಕರೆಯುತ್ತಿದ್ದರು.

    ಇತ್ತೀಚೆಗಷ್ಟೆ ಸಾಮ್ರಾಟ್ ತಮ್ಮ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯ ತೆರೆಯಲಾಗಿದೆ ಎಂದು ಪುಣೆ ಪೊಲೀಸರಿಗೆ ದೂರು ನೀಡಿದ್ದರು. ಸಾಮ್ರಾಟ್ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಅಗಲಿದ್ದಾರೆ. ಸಾಮ್ರಾಟ್‍ರಂತೆ 9-10 ಕೆ.ಜಿ ಚಿನ್ನವನ್ನು ಧರಿಸುತ್ತಿದ್ದ ಉದ್ಯಮಿಗಳಿದ್ದಾರೆ.

    ಎಂಎನ್‍ಎಸ್ ಶಾಸಕ ರಮೇಶ್ ಎಂಬವರು ಕೂಡ ಇದೇ ರೀತಿ ಚಿನ್ನ ಧರಿಸುತ್ತಿದ್ದರು. 2011ರಲ್ಲಿ ರಮೇಶ್ ಹೃದಯಾಘಾದಿಂದ ಮೃತಪಟ್ಟಿದ್ದಾರೆ. ಇನ್ನೂ ದತ್ತಾತ್ರೇಯ ಪುಂಗೆ ಎಂಬವರು ‘ಚಿನ್ನದ ಅಂಗಿಯನ್ನು’ ಧರಿಸುವ ಮೂಲಕ ಹೆಸರುವಾಸಿಯಾಗಿದ್ದರು. ಇವರು ಧರಿಸುತ್ತಿದ್ದ ಅಂಗಿ ಸುಮಾರು 3.5 ಕಿ.ಗ್ರಾಂ ತೂಕವಿತ್ತು. 1.29 ಕೋಟಿ ಮೌಲ್ಯದ ಅಂಗಿಯನ್ನು ಇವರು 2012ರಲ್ಲಿ ಖರೀದಿಸಿದ್ದರು. ದುರದೃಷ್ಟವಶಾತ್ ಜುಲೈ 2016ರಲ್ಲಿ ದುರ್ಷ್ಕಮಿಗಳು ಕೊಲೆ ಮಾಡಿದ್ದಾರೆ.

  • ಬಾಗಲಕೋಟೆಯಲ್ಲಿ ಗೋಲ್ಡ್ ಮ್ಯಾನ್- ಸೆಲ್ಫಿಗೆ ಮುಗಿಬಿದ್ದ ಜನ

    ಬಾಗಲಕೋಟೆಯಲ್ಲಿ ಗೋಲ್ಡ್ ಮ್ಯಾನ್- ಸೆಲ್ಫಿಗೆ ಮುಗಿಬಿದ್ದ ಜನ

    ಬಾಗಲಕೋಟೆ: ಮಹಾರಾಷ್ಟ್ರ ರಾಜ್ಯದ ಸೋಲಾಪುರ ಮೂಲದ ಗೋಲ್ಡ್ ಮ್ಯಾನ್ ಖ್ಯಾತಿಯ ವ್ಯಕ್ತಿ ಬುಧವಾರ ಬಾಗಲಕೋಟೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆಯೂ ಬಾಗಲಕೋಟೆ ನಗರದ ಹಳೇ ಬಸ್ ನಿಲ್ದಾಣ ಬಳಿಯಿರುವ ಚೌಧರಿ ಫೋಟೋ ಸ್ಟುಡಿಯೋಗೆ ಹಿಂದೆ ಎರಡು ಬಾರಿ ಭೇಟಿ ನೀಡಿದ್ದರು.

    ಗೋಲ್ಡ್ ಮ್ಯಾನ್ ಬಾಗಲಕೋಟೆ ಸಮೀಪದ ತಾಂಡವೊಂದರಲ್ಲಿ ಮದುವೆಗೆ ಬಂದಿದ್ದರು. ಬಳಿಕ ಮಧ್ಯಾಹ್ನ ಬಾಗಲಕೋಟೆ ನಗರದ ಚೌಧರಿ ಫೋಟೋ ಸ್ಟುಡಿಯೋಗೆ ಮೂರನೇ ಬಾರಿ ಭೇಟಿ ನೀಡಿದ್ದರು. ಸ್ಟುಡಿಯೋ ಒಳಗೆ ಗೋಲ್ಡ್ ಮ್ಯಾನ್ ಮೈಯೆಲ್ಲಾ ಬಂಗಾರ ಹಾಕಿರೋದನ್ನು ಕಂಡ ಜನ ನೋಡೋಕೆ ಮುಗಿಬಿದ್ದಿದ್ದಾರೆ. ಸ್ಟುಡಿಯೋ ಹೊರಗಡೆ 15 ಜನ ಅಂಗರಕ್ಷಕರು ರಕ್ಷಣೆಗಾಗಿ ನಿಂತಿದ್ದರು.

    ಮಹಾರಾಷ್ಟ್ರ ನೋಂದಣಿಯ ಇರುವ ಮೂರು ಕಾರುಗಳು ಚೌಧರಿ ಸ್ಟುಡಿಯೋ ಬಳಿ ನಿಂತಿದ್ದವು. ಇನ್ನು ಚೌಧರಿ ಸ್ಟುಡಿಯೋಗೆ ಗೋಲ್ಡ್ ಮ್ಯಾನ್ ಫೋಟೋ ತೆಗೆಸಿಕೊಳ್ಳಲು ಹೋಗಿದ್ದರು. ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ಹೊರಗಡೆ ಬಂದ ಗೋಲ್ಡ್ ಮ್ಯಾನ್ ನೋಡಲು, ಜನ ಮುಗಿಬಿದ್ದು, ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದರು. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡಾ ಆಗಿತ್ತು. ಬಳಿಕ ಬಾಗಲಕೋಟೆಯಿಂದ ಗೋಲ್ಡ್ ಮ್ಯಾನ್ ತರಾತುರಿಯಲ್ಲಿ ನಿರ್ಗಮಿಸಿದರು. ಕೊರಳಲ್ಲಿ ದಪ್ಪವಾದ ಸರ, ಕೈಗೆ ದಪ್ಪನೆಯ ತೋಡುಬಳೆ, ಉಂಗುರ, ಕೂಲಿಂಗ್ ಗ್ಲಾಸ್ ಜನರ ಗಮನ ಸೆಳೆಯಿತು. ಆದ್ರೆ ಈ ಗೋಲ್ಡ್ ಮ್ಯಾನ್ ಹೆಸರು ತಿಳಿದು ಬಂದಿಲ್ಲ.