Tag: ಗೊಮ್ಮಟೇಶ್ವರ

  • ಹುಣಸೂರಿನ ಬಾಹುಬಲಿಗೆ ವೈಭವದ ಮಜ್ಜನ

    ಹುಣಸೂರಿನ ಬಾಹುಬಲಿಗೆ ವೈಭವದ ಮಜ್ಜನ

    ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿರುವ ಬಾಹುಬಲಿಗೆ 69ನೇ ಮಸ್ತಕಾಭಿಷೇಕ ಭಾನುವಾರ ವಿಜೃಂಭಣೆಯಿಂದ ನಡೆಯಿತು.

    ಮಸ್ತಕಾಭಿಷೇಕಕ್ಕೆ ದೇವೇಂದ್ರ ಭಟ್ಟಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದು, ವೈರಾಗ್ಯ ಮೂರ್ತಿ ಮಹಾ ಮಜ್ಜನದಲ್ಲಿ ಮಿಂದೆದ್ದಿದೆ. ನೀರು, ಶ್ರೀಗಂಧ, ಅರಿಶಿಣ, ಕ್ಷೀರ, ಕಬ್ಬಿನ ಹಾಲು, ಕೇಸರಿ, ಅಷ್ಠಗಂಧ, ಚಂದನ, ಕುಂಕುಮ ಸೇರಿದಂತೆ ವಿವಿಧ ದ್ರವ್ಯಗಳಿಂದ ಬಾಹುಬಲಿ ಪ್ರತಿಮೆಗೆ ಅಭಿಷೇಕ ಮಾಡಲಾಯಿತು.

    1949ರಲ್ಲಿ ಮೊದಲ ಮಸ್ತಕಾಭಿಷೇಕ ನಡೆದಿತ್ತು. ಮೊದಲ ಮಸ್ತಕಾಭಿಷೇಕಕ್ಕೆ ಜಯಚಾಮರಾಜ ಒಡೆಯರ್ ಸಾಕ್ಷಿಯಾಗಿದ್ದರು. ಬಾಹುಬಲಿ ಸ್ಥಳದಲ್ಲಿ 80 ಮೆಟ್ಟಿಲನ್ನು ಒಡೆಯರ್ ನಿರ್ಮಿಸಿದ್ದರು. ಭಾನುವಾರ ನಡೆದ ಮಸ್ತಕಾಭಿಷೇಕ ಕಾರ್ಯಕ್ಕೆ ಎಲ್ಲಾ ಜನಪ್ರತಿನಿಧಿಗಳು ಗೈರಾಗಿದ್ದರು.

    ಬಾಹುಬಲಿ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡುವಾಗ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಅಭಿಷೇಕವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು, 20 ವರ್ಷ ಗುಪ್ತಾಂಗ ಮುಚ್ಚಲಾಗಿತ್ತು- ತಲಕಾಡು ಚಿಕ್ಕರಂಗೇಗೌಡ ಹೇಳಿಕೆ

    ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು, 20 ವರ್ಷ ಗುಪ್ತಾಂಗ ಮುಚ್ಚಲಾಗಿತ್ತು- ತಲಕಾಡು ಚಿಕ್ಕರಂಗೇಗೌಡ ಹೇಳಿಕೆ

    ಬೆಂಗಳೂರು: ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು. 19ನೇ ಶತಮಾನದಲ್ಲಿ 1800 ರಿಂದ 1820 ರವರೆಗೆ ಸುಮಾರು ಇಪತ್ತು ವರ್ಷಗಳ ಕಾಲ ಬಾಹುಬಲಿಯ ಗುಪ್ತಾಂಗವನ್ನು ಮುಚ್ಚಲಾಗಿತ್ತು ಎಂದು ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

    ಸುಮಾರು ಆರು ಅಡಿ ತಗಡಿನ ವಸ್ತುವಿನಿಂದ ಬಾಹುಬಲಿ ಗುಪ್ತಾಂಗವನ್ನು ಮುಚ್ಚಲಾಗಿತ್ತು. ನಾಲ್ಕನೇ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷ್ ಸೇನಾನಿ ಸರ್ ಅರ್ಥರ್ ವೆಲ್ಲೆಸ್ಲೀ ಬಾಹುಬಲಿಗೆ ಚಡ್ಡಿ ತೊಡಿಸಿದ್ರು. ಈ ಬಗ್ಗೆ ಡಾ. ಫ್ರಾನ್‍ಸಿಸ್ ಬುಕಾನನ್ ಅವರು ಬರೆದಿರೋ ಪುಸ್ತಕದಲ್ಲಿ ಫೋಟೋ ಸಮೇತವಾಗಿ ಮಾಹಿತಿ ನೀಡಲಾಗಿದೆ ಅನ್ನೋದನ್ನ ತಲಕಾಡು ಚಿಕ್ಕ ರಂಗೇಗೌಡ್ರು ಸ್ಪಷ್ಟಪಡಿಸಿದ್ದಾರೆ.

    ಬ್ರಿಟಿಷ್ ಮಹಿಳೆಯರು ಬಾಹುಬಲಿಯನ್ನ ನೋಡೋಕೆ ಮುಜುಗರ ಪಟ್ಟುಕೊಳ್ಳುತ್ತಿದ್ರು ಅನ್ನೋ ಬಗ್ಗೆ ಸಹ ಪುಸ್ತಕದಲ್ಲಿ ಉಲ್ಲೇಖವಿದೆ ಎಂದು ಹೇಳಿದ್ದಾರೆ.

  • ಭೂಮಿ ಅಗೆಯುವಾಗ ಪತ್ತೆಯಾಯ್ತು ಗೊಮ್ಮಟೇಶ್ವರ ವಿಗ್ರಹ!

    ಭೂಮಿ ಅಗೆಯುವಾಗ ಪತ್ತೆಯಾಯ್ತು ಗೊಮ್ಮಟೇಶ್ವರ ವಿಗ್ರಹ!

    ಮಂಡ್ಯ: ಭೂಮಿ ಅಗೆಯುವ ವೇಳೆ ಐದು ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಸ್ತಿ ಹೊಸಕೋಟೆ ಗ್ರಾಮದ ಗುಡ್ಡದ ಮೇಲೆ 18 ಅಡಿ ಎತ್ತರದ ಗೊಮ್ಮಟೇಶ್ವರ ವಿಗ್ರಹವಿದೆ. ಹೀಗಾಗಿ ಗುಡ್ಡದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಗುಂಡಿ ತೋಡುತ್ತಿದ್ದಾಗ 5 ಅಡಿ ಎತ್ತರದ ಗೊಮ್ಮಟನ ಶಿಲಾ ವಿಗ್ರಹ ಪತ್ತೆಯಾಗಿದೆ.

    ವಿಗ್ರಹ ನೋಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜೈನ ಕ್ಷೇತ್ರವಾದ ಬಸ್ತಿ ಹೊಸಕೋಟೆ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಹಾಳು ಹಂಪೆಯಂತಿರುವ ಗೊಮ್ಮಟ ಕ್ಷೇತ್ರವನ್ನು ಉತ್ಖನನ ಮಾಡಿ ಭೂಮಿಯೊಳಗಿನ ಆಳದಲ್ಲಿ ಹುದುಗಿರುವ ನಿಗೂಢ ವಸ್ತುಗಳು ಮತ್ತು ಇತಿಹಾಸವನ್ನು ಪತ್ತೆ ಮಾಡಬೇಕು ಎಂದು ಬಸ್ತಿ ಹೊಸಕೋಟೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.