Tag: ಗೂಗಲ್

  • ಸುಂದರ್ ಪಿಚೈಗೆ 1,704 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ- ಜನವರಿಯಿಂದ ಹೆಚ್ಚಾಗಲಿದೆ ಸಂಬಳ

    ಸುಂದರ್ ಪಿಚೈಗೆ 1,704 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ- ಜನವರಿಯಿಂದ ಹೆಚ್ಚಾಗಲಿದೆ ಸಂಬಳ

    – ಹಾಗಾದರೆ ಸುಂದರ್ ಪಿಚೈ ಸಂಬಳ ಎಷ್ಟು?

    ನವದೆಹಲಿ: ಇತ್ತೀಚೆಗಷ್ಟೇ ಗೂಗಲ್ ಮಾತೃ ಸಂಸ್ಥೆಗೆ ಸಿಇಒ ಆಗಿ ಆಯ್ಕೆಯಾಗಿರುವ ಗೂಗಲ್ ಸಿಇಒ ಸಹ ಆಗಿರುವ ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಹೆಚ್ಚಳವಾಗಿದ್ದು, ಕಂಪನಿ ವಿಶೇಷ ಪ್ಯಾಕೇಜ್ ಘೋಷಿಸಿದೆ.

    ಈ ವಿಶೇಷ ವೇತನ ಪ್ಯಾಕೇಜ್ 2020ರಿಂದ ಅನ್ವಯವಾಗಲಿದ್ದು, ಪ್ರಸ್ತುತ ಸುಂದರ್ ಪಿಚೈ ಅವರಿಗಿರುವ ವಾರ್ಷಿಕ 14.22 ಕೋಟಿ ರೂ.(2 ಮಿಲಿಯನ್ ಡಾಲರ್) ಸಂಬಳವಲ್ಲದೆ, ಹೆಚ್ಚುವರಿಯಾಗಿ (ಸ್ಟಾಕ್ ಅವಾರ್ಡ್) 1,704 ಕೋಟಿ ರೂ.(240 ಮಿಲಿಯನ್ ಡಾಲರ್)ಗಳ ಪ್ಯಾಕೇಜ್‍ನ್ನು ಕಂಪನಿ ಘೋಷಿಸಿದೆ. ಇದರಲ್ಲಿ 640 ಕೋಟಿ ರೂ.(90 ಮಿಲಿಯನ್ ಡಾಲರ್)ಗಳು ಅಲ್ಫಾಬೆಟ್ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದ್ದಾಗಿದೆ.

    ಜನವರಿ 1ರಿಂದ ಸುಂದರ್ ಪಿಚೈ ಅವರ ಸಂಬಳ ಗಣನೀಯವಾಗಿ ಹೆಚ್ಚಳವಾಗಲಿದ್ದು, 24 ಕೋಟಿ ಡಾಲರ್ ನಲ್ಲಿ 12 ಕೋಟಿ ಡಾಲರ್ ಸ್ಟಾಕ್ ಅವಾರ್ಡ್ ತ್ರೈಮಾಸಿಕ ಕಂತಿಗಳಲ್ಲಿ ಸಿಗಲಿದೆ. ಉಳಿದಿದ್ದು ಪಿಚೈ ತಮಗೆ ನೀಡಿರುವ ಟಾರ್ಗೆಟ್ ಪೂರ್ಣಗೊಳಿಸಿದಾಗ ಸಿಗಲಿದೆ. ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಹಾಗೂ ಗೂಗಲ್ ಸಂಸ್ಥೆಯ ಸಿಇಒ ಆಗಿದ್ದರಿಂದ ಸಂಬಳ ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    2018ರಲ್ಲಿ ಸುಂದರ್ ಪಿಚೈ ಒಟ್ಟು 19 ಲಕ್ಷ ಡಾಲರ್ (135 ಕೋಟಿ ರೂ.) ಭತ್ಯೆ ಒಳಗೊಂಡಂತೆ ಸಂಬಳವನ್ನು ಪಡೆದುಕೊಂಡಿದ್ದರು. ಇದರಲ್ಲಿ 6.5 ಲಕ್ಷ ಡಾಲರ್ (4.6 ಕೋಟಿ ರೂ.) ಬೇಸಿಕ್ ಸ್ಯಾಲರಿ ಇತ್ತು. 2018ರಲ್ಲಿ ಸ್ಟಾಕ್ ಅವಾರ್ಡ್ ತೆಗೆದುಕೊಂಡಿರಲಿಲ್ಲ. ಸದ್ಯ ಸಿಗುತ್ತಿರುವ ಸಂಬಳವೇ ಹೆಚ್ಚಿದೆ, ಅದನ್ನು ತೆಗೆದುಕೊಂಡು ಏನು ಮಾಡಲಿ ಎಂದಿದ್ದರು. 1704 ಕೋಟಿ ರೂ. ಮೌಲ್ಯದ ಸ್ಟಾಕ್ ಅವಾರ್ಡ್ ಇದುವರೆಗಿನ ಹೆಚ್ಚಿನ ಮೊತ್ತದಾಗಿದೆ.

    ಇತ್ತೀಚೆಗಷ್ಟೇ ಭಾರತ ಮೂಲದ ಸುಂದರ್ ಪಿಚೈ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು, ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.

    ಕಂಪನಿಯ ಮುಖ್ಯಸ್ಥರನ್ನಾಗಿ ಸುಂದರ್ ಪಿಚೈ ಅವರನ್ನು ನೇಮಕ ಮಾಡುವುದಕ್ಕೂ ಮುನ್ನ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಈ ಕುರಿತು ಪತ್ರ ಬರೆದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದರು.

    ಯಾರು ಸುಂದರ್ ಪಿಚೈ?
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004ರ ಏಪ್ರಿಲ್ 1ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.

  • ಗೂಗಲ್ ಮಾತೃ ಸಂಸ್ಥೆಯ ಮುಖ್ಯಸ್ಥರಾಗಿ ಸುಂದರ್ ಪಿಚೈ ನೇಮಕ

    ಗೂಗಲ್ ಮಾತೃ ಸಂಸ್ಥೆಯ ಮುಖ್ಯಸ್ಥರಾಗಿ ಸುಂದರ್ ಪಿಚೈ ನೇಮಕ

    ಸ್ಯಾನ್‍ಫ್ರಾನ್ಸಿಸ್ಕೋ: ಭಾರತ ಮೂಲದ ಸುಂದರ್ ಪಿಚೈ ಈಗ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

    ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.

    ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಪತ್ರ ಬರೆದಿದ್ದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದಾರೆ.

     

    ಸುಂದರ್ ಪಿಚೈ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗುತ್ತಿದ್ದಂತೆ ಭಾರತೀಯ ಕಂಪನಿಗಳ ಮುಖ್ಯಸ್ಥರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸುತ್ತಿದ್ದಾರೆ.

    ಯಾರು ಸುಂದರ್ ಪಿಚೈ?
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004 ರ ಏಪ್ರಿಲ್ 1 ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.

  • ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ಭಾರತ ವಿರೋಧಿ, ಪ್ರತ್ಯೇಕತಾವಾದದ ಆ್ಯಪ್ ತೆಗೆದು ಹಾಕಿದ ಗೂಗಲ್

    ನವದೆಹಲಿ: ಭಾರತ ವಿರೋಧಿ ಹಾಗೂ ಪ್ರತ್ಯೇಕತಾವಾದದ ಕುರಿತ ‘2020 ಸಿಖ್ ರೆಫೆರೆಂಡಮ್’ ಎಂಬ ಆ್ಯಪ್‍ನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ದೇಶ ವಿರೋಧಿ ಹಾಗೂ ಪ್ರತ್ಯೇಕತಾ ವಾದದ ಕುರಿತ ಆ್ಯಪ್‍ನ್ನು ತೆಗೆದು ಹಾಕುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದರು. ಸಿಎಂ ಮನವಿಯನ್ನು ಪರಿಗಣಿಸಿದ ಗೂಗಲ್ ತನ್ನ ಪ್ಲೇ ಸ್ಟೋರಿನಿಂದ 2020 ಸಿಖ್ ರೆಫೆರೆಂಡಮ್(2020 ಸಿಖ್ ಜನಾಭಿಪ್ರಾಯ ಸಂಗ್ರಹ) ಆ್ಯಪ್‍ನ್ನು ತೆಗೆದು ಹಾಕಿದೆ. ಈ ಕುರಿತು ಪಂಜಾಬ್‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಭಾರತದ ಮೊಬೈಲ್ ಬಳಕೆದಾರರಿಗೆ ಈ ಆ್ಯಪ್ ಇನ್ನು ಮುಂದೆ ಲಭ್ಯವಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

    ಈ ಕುರಿತು ಗೂಗಲ್ ಗೆ ಮನವರಿಕೆ ಮಾಡುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ICETEC ರಚಿಸಿರುವ ಈ ಆ್ಯಪ್ ಬಿಡುಗಡೆಯಿಂದ ಉಂಟಾಗಿರುವ ಬೆದರಿಕೆಯನ್ನು ನಿಭಾಯಿಸಲು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಮರಿಂದರ್ ಸಿಂಗ್ ಆದೇಶಿಸಿದ್ದರು.

    ಈ ಆ್ಯಪ್ ಮೂಲಕ ಪಂಜಾಬ್ ಜನಾಭಿಪ್ರಾಯ 2020 ಖಲಿಸ್ತಾನ್ ಎಂಬ ಹೆಸರಲ್ಲಿ ಮತ ಸಂಗ್ರಹಿಸಲಾಗುತ್ತಿತ್ತು. ನೋಂದಾಯಿಸಿಕೊಳ್ಳುವಂತೆ ಆ್ಯಪ್ ಸಾರ್ವಜನಿಕರಿಗೆ ಸೂಚಿಸಿತ್ತು. ಅಲ್ಲದೆ ಎಸ್2ಖಲಿಸ್ತಾನ್ ಎಂಬ ವೆಬ್‍ಸೈಟನ್ನು ಸಹ ಇದೇ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿತ್ತು.

    ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದುಹಾಕಲು ಹಾಗೂ ಭಾರತದಲ್ಲಿ ವೆಬ್‍ಸೈಟ್ ಬಳಕೆಯನ್ನು ನಿರ್ಬಂಧಿಸಲು ಪಂಜಾಬ್‍ನ ತನಿಖಾ ದಳ ಹಾಗೂ ಸೈಬರ್ ಅಪರಾಧ ವಿಭಾಗವು ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)ಬಿ ಅಡಿಯಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದು ಹಾಕುವಂತೆ ನ.8ರಂದು ಗೂಗಲ್‍ಗೆ ಸೂಚಿಸಲಾಗಿತ್ತು ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.

  • ಮನೆಯನ್ನು ಸ್ಮಾರ್ಟ್ ಹೋಮ್ ಮಾಡಬಲ್ಲ ನೆಸ್ಟ್ ಹಬ್ ಭಾರತದಲ್ಲಿ ಬಿಡುಗಡೆ – ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

    ಮನೆಯನ್ನು ಸ್ಮಾರ್ಟ್ ಹೋಮ್ ಮಾಡಬಲ್ಲ ನೆಸ್ಟ್ ಹಬ್ ಭಾರತದಲ್ಲಿ ಬಿಡುಗಡೆ – ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

    ನವದೆಹಲಿ: ಮನೆಯನ್ನು ಸ್ಮಾರ್ಟ್ ಹೋಮ್ ಮಾಡಬಲ್ಲ ಗೂಗಲ್ ಕಂಪನಿ ಅಭಿವೃದ್ಧಿ ಪಡಿಸಿರುವ ‘ನೆಸ್ಟ್ ಹಬ್’ ಸಾಧನ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

    3500 ಕಂಪನಿಗಳ ಒಟ್ಟು 2 ಕೋಟಿ ಉತ್ಪನ್ನಗಳನ್ನು ನಿಯಂತ್ರಿಸುವ ಗೂಗಲ್ ನೆಸ್ಟ್ ಹಬ್ 9,999 ರೂ. ದರ ನಿಗದಿಯಾಗಿದೆ. ಫ್ಲಿಪ್ ಕಾರ್ಟ್, ಟಾಟಾ ಕ್ಲಿಕ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮೂಲಕ ಈ ಸಾಧನವನ್ನು ಖರೀದಿ ಮಾಡಬಹುದಾಗಿದೆ.

    ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಈ ನೆಸ್ಟ್ ಹಬ್ ಬಿಡುಗಡೆಯಾಗಿತ್ತು. ಅಮೆರಿಕದಲ್ಲಿ 99 ಡಾಲರ್(ಅಂದಾಜು 7,100 ರೂ.) ಬೆಲೆಯಲ್ಲಿ ಈ ಸಾಧನ ಈಗ ಮಾರಾಟವಾಗುತ್ತಿದೆ.

    ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಅಮೆಜಾನ್ ಇಕೋ ಶೋಗೆ ಪ್ರತಿಯಾಗಿ ಗೂಗಲ್ ಈಗ ನೆಸ್ಟ್ ಹಬ್ ಬಿಡುಗಡೆ ಮಾಡಿದೆ. ಅಮೆಜಾನ್ ಇಕೋ ಶೋಗೆ 8,999 ರೂ. ದರವಿದೆ. ಗೂಗಲ್ ಅಸಿಸ್ಟೆಂಟ್, ಕ್ರೋಮೋಕ್ಯಾಸ್ಟ್ ಬಿಲ್ಟ್ ಇನ್ ಫೀಚರ್ ಹೊಂದಿದೆ. ಆಂಡ್ರಾಯ್ಡ್, ಐಓಎಸ್, ಮ್ಯಾಕ್, ವಿಂಡೋಸ್ ಮತ್ತು ಕ್ರೋಮ್ ಬುಕ್ ಮೂಲಕ ಕೆಲಸ ಮಾಡಬಹುದು.

    ಗುಣ ವೈಶಿಷ್ಟ್ಯ ಏನು?
    ನಿಮ್ಮ ಧ್ವನಿಯ ಮೂಲಕವೇ ಸಂಪೂರ್ಣ ಮನೆಯನ್ನು ನಿಯಂತ್ರಿಸಬಹುದು. ಗೂಗಲ್ ಸರ್ಚ್, ಗೂಗಲ್ ನ್ಯೂಸ್, ಯೂ ಟ್ಯೂಬ್, ಗೂಗಲ್ ಫೋಟೋ ಸೇರಿದಂತೆ ಗೂಗಲ್ ನಹಲವು ಸೇವೆಗಳು ಇದರಲ್ಲಿ ಲಭ್ಯವಿದೆ. ನಿಮ್ಮ ಮನೆಯಲ್ಲಿ ಸ್ಮಾರ್ಟ್ ಸಾಧನಗಳಾದ ಕ್ಯಾಮೆರಾ, ಲಾಕ್, ಲೈಟ್ ವ್ಯವಸ್ಥೆ ಸೇರಿದಂತೆ ಹಲವು ವ್ಯವಸ್ಥೆಯನ್ನು ನೀವು ನೆಸ್ಟ್ ಹಬ್ ಮೂಲಕವೇ ನಿಯಂತ್ರಿಸಬಹುದು.

    67.3 ಸೆಂ.ಮೀ ಉದ್ದ, 17.58 ಸೆ.ಮೀ ಅಗಲ, 11.8 ಸೆ. ಎತ್ತರ, 1.5 ಮೀ ಪವರ್ ಕೇಬಲ್, 7 ಇಂಚಿನ ಎಲ್‍ಸಿಡಿ ಟಚ್ ಸ್ಕ್ರೀನ್, ಫುಲ್ ರೇಂಜ್ ಸ್ಪೀಕರ್, ಬ್ಲೂ ಟೂತ್ 5.0 ಸಪೋರ್ಟ್ ಮಾಡುತ್ತದೆ. ಈ ನೆಸ್ಟ್ ಹಬ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿಸಲು ಇಲ್ಲಿ ವಿಡಿಯೋ ನೀಡಲಾಗಿದೆ.

  • ಬಿಕಾರಿ ಎಂದು ಹುಡುಕಿದ್ರೆ ಬರುತ್ತೆ ಇಮ್ರಾನ್ ಖಾನ್ ಫೋಟೋ – ಸುಂದರ್ ಪಿಚೈಗೆ ಪಾಕ್ ಸಮನ್ಸ್

    ಬಿಕಾರಿ ಎಂದು ಹುಡುಕಿದ್ರೆ ಬರುತ್ತೆ ಇಮ್ರಾನ್ ಖಾನ್ ಫೋಟೋ – ಸುಂದರ್ ಪಿಚೈಗೆ ಪಾಕ್ ಸಮನ್ಸ್

    ನವದೆಹಲಿ: ಗೂಗಲ್ ಇಮೇಜಸ್‍ನಲ್ಲಿ ಕಳ್ಳ, ಕ್ರಿಮಿನಲ್ ಎಂದು ಸರ್ಜ್ ಮಾಡಿದರೆ ಕುಖ್ಯಾತರ ಫೋಟೋಗಳು ಕಾಣಿಸುತ್ತವೆ. ಆದರೆ ಬಿಕಾರಿ (Bhikhari) ಅಂತ ಉರ್ದು ಭಾಷೆಯಲ್ಲಿ ಹುಡುಕಿದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೋ ಬರುತ್ತಿವೆ.

    ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ವಿಧಾನಸಭೆ ಸಮನ್ಸ್ ಜಾರಿ ಮಾಡಿದೆ.

    ಗೂಗಲ್ ಸರ್ಚ್ ನಲ್ಲಿ ಈ ಹಿಂದೆ ಈಡಿಯಟ್ ಎಂದು ಹುಡುಕಿದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರವರ ಫೋಟೋ ಕಾಣಸಿಗುತ್ತಿತ್ತು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ಸಂಬಂಧ ಉತ್ತರವನ್ನು ಅಮೆರಿಕದ ಸೆನೆಟ್ ನಲ್ಲಿ ನೀಡಿದ್ದರು.

    2018ರ ಡಿಸೆಂಬರ್ ನಲ್ಲಿ ಗೂಗಲ್ ಡೇಟಾ ಸಂಗ್ರಹದ ಪಾರದರ್ಶಕತೆ, ಉತ್ತಾರದಾಯಿತ್ವ ವಿಚಾರದ ಬಗ್ಗೆ ಎದಿದ್ದ ಸಂದೇಹಗಳಿಗೆ ಉತ್ತರ ನೀಡಲು ಸುಂದರ್ ಪಿಚೈ ಆಗಮಿಸಿದ್ದರು. ಸುಮಾರು ಮೂರುವರೆ ಗಂಟೆಗಳ ಕಾಲ ಪ್ರಶ್ನೋತ್ತರ ವಿಚಾರಣೆ ನಡೆಯಿತು.

    ಈ ಸಮಯದಲ್ಲಿ ಸೆನೆಟರ್ ಜೂಹಿ ಲೊಫ್ಗ್ರೆನ್ ಅವರು, ಗೂಗಲ್‍ನಲ್ಲಿ ಈಡಿಯೆಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಹಾಗೂ ಅವರಿಗೆ ಸಂಬಂಧಿಸಿದ ಸುದ್ದಿಗಳು ಬರುತ್ತವೆ. ಈ ಪದವನ್ನು ಟೈಪ್ ಮಾಡಿದ ಕೂಡಲೇ ಟ್ರಂಪ್ ಫೋಟೋ ಬರಲು ಹೇಗೆ ಸಾಧ್ಯ? ಇದರಲ್ಲಿ ವ್ಯಕ್ತಿಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಪಿಚೈ, ಈ ರೀತಿಯ ಫಲಿತಾಂಶ ಬರಲು ಯಾವುದೇ ವ್ಯಕ್ತಿಗಳ ಕೈವಾಡವಿಲ್ಲ. ಗೂಗಲ್ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‍ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ. ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದ್ದರು.

    ಗೂಗಲ್‍ನಲ್ಲಿ ಈ ರೀತಿಯ ಫಲಿತಾಂಶ ಬರುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಫೇಕ್ ಎನ್ನುವ ಪದವನ್ನು ಗೂಗಲ್ ನಲ್ಲಿ ಟೈಪ್ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೋರಿಸುತ್ತಿತ್ತು. ಅಲ್ಲದೇ ಪಪ್ಪು ಎಂದು ಟೈಪ್ ಮಾಡಿದಾಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಫೋಟೋ ಕೂಡ ಬಂದಿತ್ತು.

  • ಮಾಹಿತಿ ಸೋರಿಕೆ- ಪ್ಲೇ ಸ್ಟೋರ್‌ನಿಂದ 7 ಆಪ್‍ಗಳನ್ನು ತೆಗೆದು ಹಾಕಿದ ಗೂಗಲ್

    ಮಾಹಿತಿ ಸೋರಿಕೆ- ಪ್ಲೇ ಸ್ಟೋರ್‌ನಿಂದ 7 ಆಪ್‍ಗಳನ್ನು ತೆಗೆದು ಹಾಕಿದ ಗೂಗಲ್

    ನವದೆಹಲಿ: ಆಪ್ ಮೂಲಕ ಬಳಕೆದಾರರನ್ನು ಟ್ರಾಕ್ ಹಾಗೂ ಅವರ ಮಾಹಿತಿ ಸೋರಿಕೆ ಮಾಡುತ್ತಿದ್ದ 7 ಆಪ್‍ಗಳನ್ನು ಗೋಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.

    ಈ ಆಪ್ ಗಳನ್ನು ಆಂಟಿ ವೈರಸ್ ಕಂಪನಿ ಅವಸ್ತ್ ವರದಿ ಮಾಡಿದ್ದು, ಈ ಸ್ಟಾಕರ್ ವೇರ್ ಆಪ್ ಗಳಿಂದ ಬಳಕೆದಾರರನ್ನು ಟ್ರ್ಯಾಕ್ ಮಾಡಲಾಗುತ್ತಿತ್ತು ಎಂದು ಕಂಪನಿ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ. ಈ ಅಪ್ಲಿಕೇಶನ್‍ಗಳ ಮೂಲಕ ಟ್ರ್ಯಾಕ್ ಮಾಡುವುದು ಮಾತ್ರವಲ್ಲದೆ, ಲೊಕೇಶನ್ ಡಾಟಾ, ಕಾಂಟ್ಯಾಕ್ಟ್ಸ್, ಕಾಲ್ ಲಾಗ್ಸ್ ಹಾಗೂ ಎಸ್‍ಎಂಎಸ್ ಮಾಹಿತಿಗಳನ್ನು ಕದಿಯುತ್ತಿದ್ದವು. ಇವು ರಷ್ಯನ್ ಅಭಿವೃದ್ಧಿಪಡಿಸಿರುವ ಆಪ್‍ಗಳಾಗಿವೆ ಎಂದು ಅವಸ್ತ್ ತಿಳಿಸಿದೆ.

    ಈ ಎಲ್ಲ ಆಪ್‍ಗಳನ್ನು ಗೂಗಲ್ ತೆಗೆದು ಹಾಕಿದ್ದು ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿದೆಯೇ ಪರಿಶೀಲಿಸಿಕೊಳ್ಳಿ. ಇದ್ದಲ್ಲಿ ಕೂಡಲೇ ತೆಗೆದುಹಾಕಿ ಎಂದು ಗೂಗ್ಲ್ ಸೂಚಿಸಿದೆ. ಈ ಆಪ್‍ಗಳನ್ನು 1.30 ಲಕ್ಷ ಬಾರಿ ಇನ್‍ಸ್ಟಾಲ್ ಮಾಡಲಾಗಿದ್ದು, ಇದೀಗ ಸ್ನೂಪ್‍ಗಳ ಮೂಲಕ ಆ ಆಪ್‍ಗಳನ್ನು ಡೌನ್‍ಲೋಡ್ ಮಾಡಬಹುದಾಗಿದ್ದು, ಕೇವಲ ಉದ್ದೇಶಿತ ಮೊಬೈಲ್‍ಗಳಲ್ಲಿ ಮಾತ್ರ ಬಳಸಬಹುದಾಗಿದೆ.

    ಹೇಗೆ ಮಾಹಿತಿ ಕದಿಯುತ್ತಾರೆ
    ಆಪ್ ಇನ್‍ಸ್ಟಾಲ್ ಮಾಡಿಕೊಂಡ ತಕ್ಷಣ ಇ-ಮೇಲ್ ಅಡ್ರೆಸ್ ಹಾಗೂ ಪಾಸ್‍ವರ್ಡ್‍ಗಳನ್ನು ಕೇಳುತ್ತದೆ. ನೀವು ಲಾಗಿನ್ ಆಗುತ್ತಿದ್ದಂತೆ ನಿಮ್ಮ ಮೊಬೈಲ್‍ಗೆ ಬೇಹುಕಾರಿಕೆ ಅಪ್ಲಿಕೇಶನ್‍ನ್ನು ಕಳುಹಿಸಲಾಗುತ್ತದೆ. ಆದರೆ, ಈ ಅಪ್ಲಿಕೇಷನ್ ಐಕಾನ್ ಇಲ್ಲದಿರುವುದರಿಂದ ನಮಗೆ ಅಪ್ಲಿಕೇಷನ್ ಇನ್ಸ್‍ಟಾಲ್ ಆಗಿರುವ ಕುರಿತು ತಿಳಿಯುವುದಿಲ್ಲ. ಅಂದರೆ, ಇನ್ಸ್‍ಟಾಲ್ ಮಾಡಿದ ನಂತರ ಆ ಸಾಫ್ಟ್‍ವೇರ್ ನಿಮ್ಮ ಮೊಬೈಲ್‍ನಲ್ಲಿ ಇರುವ ಕುರಿತು ತಿಳಿಯುವುದಿಲ್ಲ. ಅದು ನಿಮ್ಮ ಮೊಬೈಲ್ ಹೊಕ್ಕ ನಂತರ ನಿಮ್ಮ ಎಲ್ಲ ಮಾಹಿತಿಯನ್ನು ಬೇರೆಲ್ಲೋ ಕೂತು ಕದಿಯುತ್ತಾರೆ.

    ಹೀಗೆ ಪತ್ತೆ ಹಚ್ಚಿ, ಅನ್‍ಇನ್ಸ್ಟಾಲ್ ಮಾಡಿ
    ನಿಮ್ಮ ಮೊಬೈಲ್‍ನಲ್ಲಿ ಸೆಟಿಂಗ್‍ನಲ್ಲಿರುವ ಆಪ್ ಸೆಟಿಂಗ್‍ನ್ನು ಕ್ಲಿಕ್ ಮಾಡಿ, ನಂತರ ಆಪ್ಸ್ ಆಂಡ್ ನೋಟಿಫಿಕೇಶನ್ ಕ್ಲಿಕ್ ಮಾಡಿ. ಈ ಸೆಕ್ಷನ್‍ಗೆ ವಿವಿಧ ಮೊಬೈಲ್‍ಗಳಲ್ಲಿ ಬೇರೆ ರೀತಿಯ ಹೆಸರುಗಳಿರುತ್ತವೆ. ಆದರೆ, ಸೆಟಿಂಗ್‍ನಲ್ಲಿ ನಿಮಗೆ ಎಲ್ಲಿ ನೋಟಿಫಿಕೇಷನ್ ಬರುತ್ತವೆಯೋ ಅದನ್ನು ನೀವು ಸಹಜವಾಗಿ ನಿಮ್ಮ ಮೊಬೈಲ್‍ನಲ್ಲಿ ಪತ್ತೆ ಹಚ್ಚಬಹುದು. ನಂತರ ಆ ಆಪ್‍ನ್ನು ನೀವು ಅನ್‍ಇನ್ಸ್ಟಾಲ್ ಮಾಡಬಹುದಾಗಿದೆ.

  • ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪನ್ನು ರಿವೀಲ್ ಮಾಡಿದ್ರು ಗೇಟ್ಸ್

    ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪನ್ನು ರಿವೀಲ್ ಮಾಡಿದ್ರು ಗೇಟ್ಸ್

    ವಾಷಿಂಗ್ಟನ್: ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಗ್ಗೆ ನಾವು ಗಮನ ನೀಡದ್ದು ಮೈಕ್ರೋಸಾಫ್ಟ್ ಕಂಪನಿಯ ಅತಿ ದೊಡ್ಡ ತಪ್ಪು ಎಂದು ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.

    ವಾಷಿಂಗ್ಟನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೊಬೈಲ್ ಆಪರೇಟಿಂಗ್ ಸಿಸ್ಟಂ ಯುದ್ಧದಲ್ಲಿ ಮೈಕ್ರೋಸಾಫ್ಟ್ ಹಿಡಿತ ಹೊಂದಿದ್ದರೆ ಮತ್ತಷ್ಟು ಮೌಲ್ಯಯುತ ಕಂಪನಿಯಾಗುತಿತ್ತು ಎಂದು ತಿಳಿಸಿದರು.

    ಪರ್ಸನಲ್ ಕಂಪ್ಯೂಟರ್ ಗಳಿಗೆ ಅಪರೇಟಿಂಗ್ ಸಿಸ್ಟಂ ನೀಡುವ ಕ್ಷೇತ್ರದಲ್ಲಿ ನಾವಿದ್ದೇವೆ. ಆದರೆ ಮೊಬೈಲ್ ಓಎಸ್ ಕ್ಷೇತ್ರದಲ್ಲಿ ಕಡಿಮೆ ಮೊತ್ತದಲ್ಲಿ ನಾವು ಅವಕಾಶವನ್ನು ಕಳೆದುಕೊಂಡಿದ್ದೇವೆ. ಉತ್ತಮ ಜನರನ್ನು ನಿಯೋಜಿಸದ ಕಾರಣ ಈ ಕ್ಷೇತ್ರದಲ್ಲಿ ನಾವು ಅಭಿವೃದ್ಧಿಯಾಗಲಿಲ್ಲ ಎಂದು ಹೇಳಿದರು.

    ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾಡುವ ವಿಚಾರದಲ್ಲಿ ನಮ್ಮಲ್ಲಿ ಕೌಶಲ್ಯವಿತ್ತು. ಎಲ್ಲ ಸಂಪನ್ಮೂಲಗಳಿದ್ದರೂ ನಾವು ಈ ಕ್ಷೇತ್ರದಲ್ಲಿ ಸಾಧನೆ ಮಾಡದೇ ಇರುವುದು ಮೈಕ್ರೋಸಾಫ್ಟ್ ಅತಿ ದೊಡ್ಡ ತಪ್ಪು ಎಂದು ಎಂದರು.

    ಆಂಡ್ರಾಯ್ಡ್ ಗೂಗಲ್‍ನ ಅತಿ ದೊಡ್ಡ ಸಂಪತ್ತು ಎಂದ ಗೇಟ್ಸ್ ಹಾಲಿ ಸಿಇಒ ಸತ್ಯ ನಾದೆಲ್ಲಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

    2015ರಲ್ಲಿ ಗೂಗಲ್ ಕಂಪನಿ 50 ದಶಲಕ್ಷ ಡಾಲರ್(ಅಂದಾಜು 347 ಕೋಟಿ ರೂ.) ನೀಡಿ ಆಂಡ್ರಾಯ್ಡ್ ಖರೀದಿಸಿತ್ತು. ಆರಂಭದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಂ ರೀತಿ ಆಂಡ್ರಾಯ್ಡ್ ಬೆಳೆಸಬೇಕೆಂಬ ಯಾವುದೇ ಪ್ರಸ್ತಾಪ ಇರಲಿಲ್ಲ. ಆದರೆ ಆಂಡ್ರಾಯ್ಡ್ ಸಹ ಸಂಸ್ಥಾಪಕ ಆಂಡಿ ರುಬಿನ್ ನೇತೃತ್ವದ ತಂಡದ ಕೆಲಸದಿಂದಾಗಿ ವಿಶ್ವದ ನಂಬರ್ ಒನ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಆಗಿ ಹೊರ ಹೊಮ್ಮಿದೆ.

    ಗೂಗಲ್ ಆಂಡ್ರಾಯ್ಡ್ ಓಎಸ್ ಅಭಿವೃದ್ಧಿ ಪಡಿಸುತ್ತಿದ್ದರೆ 2010ರ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಓಎಸ್ ಅಭಿವೃದ್ಧಿ ಪಡಿಸುತಿತ್ತು. ಮೈಕ್ರೋಸಾಫ್ಟ್ ಮಾಜಿ ಸಿಇಒ ಸ್ವೀವ್ ಬಲ್ಮರ್ ಆಂಡ್ರಾಯ್ಡ್ ಸ್ಪರ್ಧೆ ನೀಡಲೆಂದೇ ವಿಂಡೋಸ್ ಫೋನ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಆದರೆ ಆಂಡ್ರಾಯ್ಡ್ ಮುಂದೆ ಮಾರುಕಟ್ಟೆಯಲ್ಲಿ ಸೋಲನ್ನು ಅನುಭವಿಸಿತ್ತು. 2017ರಲ್ಲಿ ಮೈಕ್ರೋಸಾಫ್ಟ್ ಅಧಿಕೃತವಾಗಿ ವಿಂಡೋಸ್ ಫೋನ್ ಓಎಸ್‍ಗೆ ಸಪೋರ್ಟ್ ನೀಡುವುದಿಲ್ಲ ಎಂದು ತಿಳಿಸಿತ್ತು.

  • ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

    ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ

    ನವದೆಹಲಿ: ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿ ಎಂದು ಗೂಗಲ್ ಮತ್ತು ಆಪಲ್ ಕಂಪನಿಗಳಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ.

    ಮದ್ರಾಸ್ ಹೈ ಕೋರ್ಟ್ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಸೂಚನೆ ನೀಡಿದೆ.

    ಈ ಅಪ್ಲಿಕೇಶನ್ ನಲ್ಲಿ ಜನ ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹೀಗಾಗಿ ಈ ಆ್ಯಪನ್ನು ನಿಷೇಧಿಸಬೇಕೆಂದು ಅರ್ಜಿದಾರರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಮದ್ರಾಸ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆ್ಯಪ್ ನಿಷೇಧಿಸುವಂತೆ ಏ.3 ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

    ಟಿಕ್ ಟಾಕ್ ಆ್ಯಪನ್ನು ಅಭಿವೃದ್ಧಿಪಡಿಸಿದ ಬೈಟ್‍ಡಾನ್ಸ್ ಟೆಕ್ನಾಲಜಿ ಈ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ರಂಜನ್ ಗೊಗೋಯ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶಕ್ಕೆ ತಡೆ ನೀಡುವುದಿಲ್ಲ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.

    ಸುಪ್ರೀಂ ಕೋರ್ಟ್ ಮದ್ರಾಸ್ ಹೈ ಕೋರ್ಟ್ ಆದೇಶಕ್ಕೆ ತಡೆ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆ್ಯಪನ್ನು ಕಿತ್ತು ಹಾಕುವಂತೆ ಆಪಲ್ ಮತ್ತು ಗೂಗಲ್ ಕಂಪನಿಗಳಿಗೆ ಸೂಚಿಸಿದೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಆಪಲ್ ಕಂಪನಿ ಆ್ಯಪ್ ಸ್ಟೋರ್ ನಿಂದ ಟಿಕ್ ಟಾಕ್ ಕಿತ್ತು ಹಾಕಿದೆ.

    ಕಂಪನಿ ಸ್ಪಷ್ಟನೆ:
    ವಿವಾದ ಸಂಬಂಧ ಸ್ಪಷ್ಟನೆ ನೀಡಿರುವ ಬೈಟ್‍ಡಾನ್ಸ್ ಟೆಕ್ನಾಲಜಿ, ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗುತ್ತಿರುವ ಜನರ ವಿಡಿಯೋಗಳಿಗೆ ಕಂಪನಿಯನ್ನು ಜವಾಬ್ದಾರಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಭಾರತದ ಕಾನೂನಿನ ಮೇಲೆ ನಂಬಿಕೆ ಗೌರವವಿದ್ದು ಇಲ್ಲಿಯವರೆಗೆ ಸುಮಾರು 60 ಲಕ್ಷ ಆಕ್ಷೇಪಾರ್ಹ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೇವೆ. ಈ ಸಂಬಂಧ ವಿಡಿಯೋಗಳ ಮೇಲೆ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದು ತಿಳಿಸಿದೆ.

    ಆ್ಯಪ್ ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್ ಪ್ರಕಾರ ಭಾರತದಲ್ಲಿ 24 ಕೋಟಿಗೂ ಹೆಚ್ಚು ಟಿಕ್ ಟಾಕ್ ಅಪ್ಲಿಕೇಶನ್ ಡೌನ್‍ಲೋಡ್ ಆಗಿದೆ. 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಿಕ್ ಟಾಕ್ ಬಿಡುಗಡೆಯಾಗಿತ್ತು.

    ಟಿಕ್ ಟಾಕ್‍ನಂತಹ ಆ್ಯಪ್ ಯುವಜನತೆಯ ಭವಿಷ್ಯ ಹಾಗೂ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಈ ಕುರಿತು ಮದ್ರಾಸ್ ಹೈ ಕೋರ್ಟ್ ನ  ನ್ಯಾ. ಎನ್ ಕಿರುಬಕರನ್ ಹಾಗೂ ನ್ಯಾ. ಎಸ್ ಸುಂದರ್ ಅವರಿದ್ದ ದ್ವಿಸದಸ್ಯ ಪೀಠ ಟಿಕ್ ಟಾಕ್ ವಿಡಿಯೋಗಳನ್ನು ಪ್ರಸಾರ ಮಾಡುವ ಮಾಧ್ಯಮಗಳನ್ನು ನಿಷೇಧಿಸುವಂತೆ ಆದೇಶಿಸಿದ್ದರು. ಮಕ್ಕಳು ಸೈಬರ್ ಸಂತ್ರಸ್ತ್ರರಾಗುವುದನ್ನು ತಪ್ಪಿಸಲು ಅಮೆರಿಕ ಸರ್ಕಾರ ಮಕ್ಕಳ ಆನ್‍ಲೈನ್ ಗೌಪ್ಯತೆ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿತ್ತು.

    ಫೆಬ್ರವರಿಯಲ್ಲಿ ತಮಿಳುನಾಡು ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದ್ದರು.

  • ತಮ್ಮ ವಾಯು ಸೇನೆಗಿಂತಲೂ ಐಎಎಫ್ ಬಗ್ಗೆ ಜಾಸ್ತಿ ಸರ್ಚ್ ಮಾಡಿದ್ರು ಪಾಕ್ ನೆಟ್ಟಿಗರು

    ತಮ್ಮ ವಾಯು ಸೇನೆಗಿಂತಲೂ ಐಎಎಫ್ ಬಗ್ಗೆ ಜಾಸ್ತಿ ಸರ್ಚ್ ಮಾಡಿದ್ರು ಪಾಕ್ ನೆಟ್ಟಿಗರು

    ನವದೆಹಲಿ: ಪುಲ್ವಾಮಾ ದಾಳಿಯ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ (ಐಎಎಫ್) ಮಂಗಳವಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ಟ್ವಿಟ್ಟರ್ ನಲ್ಲಿ ವಿಶ್ವದ ನಂಬರ್ ಒನ್ ಟ್ರೆಂಡಿಂಗ್‍ನಲ್ಲಿತ್ತು. ಗೂಗಲ್ ಟ್ರೆಂಡ್ ನಲ್ಲೂ ಪಾಕಿಸ್ತಾನ ವಾಯು ಪಡೆ (ಪಿಎಎಫ್)ಗಿಂತಲೂ ಐಎಎಫ್ ನಂಬರ್ ಒನ್ ಸ್ಥಾನ ಪಡೆದಿದೆ.

    ಪಾಕಿಸ್ತಾನದ ಹೆಚ್ಚಿನ ಜನರು ಗೂಗಲ್‍ನಲ್ಲಿ ಪಿಎಎಫ್, ಐಎಎಫ್, ಬಾಲಕೋಟ್, ಸರ್ಜಿಕಲ್ ಸ್ಟ್ರೈಕ್ ಹಾಗೂ ಎಲ್‍ಓಸಿ ಕುರಿತಾಗಿ ಸರ್ಚ್ ಮಾಡಿದ್ದಾರೆ. ತಮ್ಮ ದೇಶದ ವಾಯು ಪಡೆಗಿಂತ ಹೆಚ್ಚಾಗಿ ಐಎಎಫ್ ಬಗ್ಗೆ ಹೆಚ್ಚಿನ ಜನರು ಸರ್ಚ್ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿಯೂ ಐಎಎಫ್ ಟ್ರೆಂಡಿಂಗ್‍ನಲ್ಲಿತ್ತು.

    ಫೆಬ್ರವರಿ 25ರಂದು ಸಂಜೆ 5.30ರಿಂದ ಫೆ.26ರ ಸಂಜೆ 5.30 ರವರೆಗೂ ಗೂಗಲ್‍ನಲ್ಲಿ ಪಾಕಿಸ್ತಾನದ ಜನರು ಹೆಚ್ಚಾಗಿ ಬಾಲಕೋಟ್ ದಾಳಿಯ ಬಗ್ಗೆ ಸರ್ಚ್ ಮಾಡಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಎಲ್‍ಓಸಿ, ಐಎಎಫ್ ಟ್ರೆಂಡಿಂಗ್‍ನಲ್ಲಿತ್ತು

    ಭಾರತೀಯರು ಸರ್ಜಿಕಲ್ ಸ್ಟ್ರೈಕ್ ಕುರಿತು ಹೆಚ್ಚಾಗಿ ಹುಡುಕಾಡಿದ್ದಾರೆ. ಅದರ ನಂತರ ಟ್ರೆಂಡಿಂಗ್‍ನಲ್ಲಿರುವುದು, ಐಎಎಫ್ ಹಾಗೂ ಬಾಲಕೋಟ್. ಭಾರತೀಯರು ಪಾಕಿಸ್ತಾನದ ವಾಯು ಪಡೆಯನ್ನು ಕಡೆಗಣಿಸಿದ್ದಾರೆ. ಏಕೆಂದರೆ ಅದು ಎಲ್‍ಓಸಿಗಿಂತ ಕಡಿಮೆ ಪ್ರಮಾಣದಲ್ಲಿ ಸರ್ಚ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ದಾಳಿ ಬಳಿಕ ಗೂಗಲ್‍ನಲ್ಲಿ ಸರ್ಚ್ ಆಯ್ತು MFN ಅಕ್ಷರಗಳು

    ಪುಲ್ವಾಮಾ ದಾಳಿ ಬಳಿಕ ಗೂಗಲ್‍ನಲ್ಲಿ ಸರ್ಚ್ ಆಯ್ತು MFN ಅಕ್ಷರಗಳು

    ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ ಅಂದ್ರೆ ಫೆಬ್ರವರಿ 14ರಿಂದ 16ರವರೆಗೆ ಎಂಎಫ್‍ಎನ್ ಪದ ಮತ್ತು ಪ್ರಧಾನಿ ಮೋದಿ ಭಾಷಣ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿದೆ. ಈ ವಾರದ ಗೂಗಲ್ ಟ್ರೆಂಡ್‍ನಲ್ಲಿ ದಾಳಿಯ ಬಗ್ಗೆ ಪ್ರಧಾನಿ ಮೋದಿ ನೀಡಿರುವ ಉತ್ತರವನ್ನು ಜನ ಅತಿ ಹೆಚ್ಚು ಹುಡುಕಿದ್ದಾರೆ. ಅದರಂತೆಯೇ ಎಂಎಫ್‍ಎನ್ (Most favoured nation) ಎಂದರೇನು ಎಂಬುದನ್ನು ಸರ್ಚ್ ಮಾಡಿದ್ದಾರೆ.

    ಫೆ.11ರಿಂದ 16ರ ನಡುವೆ ಪ್ರತಿಬಾರಿಯಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಮೋದಿ ಅತಿ ಹೆಚ್ಚು ಬಾರಿ ಸರ್ಚ್ ಗೆ ಒಳಪಟ್ಟಿದ್ದಾರೆ. ಅದರಲ್ಲಿಯೂ ಪುಲ್ವಾಮಾ ದಾಳಿ ಬಳಿಕ ಪ್ರಧಾನಿಗಳು ನೀಡಿದ ಉತ್ತರವೇನು ಎಂಬುದನ್ನು ನೆಟ್ಟಿಗರು ಸರ್ಚ್ ಮಾಡಿದ್ದಾರೆ. ದಾಳಿಯ ಬಳಿಕ, ಪಾಕ್ ಉಗ್ರರು ಮತ್ತು ಅವರ ವಕ್ತಾರರು ದೊಡ್ಡ ತಪ್ಪು ಮಾಡಿದ್ದಾರೆ. ಶೀಘ್ರದಲ್ಲಿ ಅವರ ತಪ್ಪಿಗೆ ದೊಡ್ಡ ಬೆಲೆಯನ್ನು ತೆರೆಬೇಕಾಗುತ್ತದೆ. ಘಟನೆ ಹಿಂದಿರುವ ಯಾವುದೇ ಶಕ್ತಿ ಅಥವಾ ವ್ಯಕ್ತಿ ಇದ್ರೂ, ಅವರಿಗೆ ತಕ್ಕ ಶಿಕ್ಷೆ ನೀಡುವಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ದೇಶದ ಜನರಿಗೆ ಮಾತು ಕೊಡುತ್ತಿದ್ದೇನೆ ಎಂದು ಹೇಳಿದ್ದರು. ಗುರುವಾರ ರಾತ್ರಿ 8.30ರ ಬಳಿಕ ಈ ಸಂಭಾಷಣೆಯನ್ನು ನೆಟ್ಟಿಗರು ಹುಡುಕಾಡಲು ಆರಂಭಿಸಿದ್ದಾರೆ.

    ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಕೂಡ ನೀಡಿರುವ ಹೇಳಿಕೆಯನ್ನು ನೆಟ್ಟಿಗರು ಹುಡುಕಿದ್ದಾರೆ. ಇದು ಕೇವಲ ಸೈನಿಕರ ಮೇಲಿನ ದಾಳಿಯಲ್ಲ. ಭಾರತೀಯರ ಆತ್ಮದ ಮೇಲೆ ನಡೆದ ದಾಳಿಯಾಗಿದೆ. ಭಯೋತ್ಪಾದನೆಯಿಂದ ದೇಶವನ್ನು ವಿಭಜಿಸಿ, ಹಂಚುವ ಕುತಂತ್ರ ನಡೆದಿದೆ. ಯಾವುದೇ ಶಕ್ತಿ ನಮ್ಮ ದೇಶವನ್ನು ವಿಭಜಿಸಲು ಸಾಧ್ಯವಿಲ್ಲ. ಭಾರತದ ಸುರಕ್ಷತೆಗಾಗಿ ಸರ್ಕಾರ ಕೈಗೊಳ್ಳುವ ಪ್ರತಿ ನಿರ್ಧಾರಗಳಿಗೆ ವಿಪಕ್ಷವಾದ ನಾವು ಜೊತೆಯಲ್ಲಿರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

    ರಾಹುಲ್ ಗಾಂಧಿ ಅವರ ಈ ಹೇಳಿಕೆ ಜೊತೆಗೆ ವಯಸ್ಸು ಮತ್ತು ಬಯೋಡೇಟಾ ಸಹ ಹೆಚ್ಚು ಬಾರಿ ಸರ್ಚ್ ಅಗಿದೆ. ಇವೆಲ್ಲದರ ಜೊತೆಗೆ ಎಂಎಫ್‍ಎನ್ ಎಂದರೇನು ಎಂಬುವುದು ಅತಿ ಹೆಚ್ಚು ಬಾರಿ ಸರ್ಚ್ ಆಗಿದೆ

    ಅತ್ಯಾಪ್ತ ರಾಷ್ಟ್ರ (ಎಂಎಫ್‍ಎನ್):
    ಗುರುವಾರ ದಾಳಿ ನಡೆದಿದ್ದು 40 ಮಂದಿ ಸೈನಿಕರು ಹುತಾತ್ಮರಾಗಿದ್ದರು ಇದರ ಮರುದಿನವೇ ಅಂದರೆ ಶುಕ್ರವಾರ ಭಾರತ ಸರ್ಕಾರ ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರದ ಪಟ್ಟಿಯಿಂದ ಕೈ ಬಿಟ್ಟಿತು. 1996ರಿಂದಲೂ ಪಾಕಿಸ್ತಾನಕ್ಕೆ ಅತ್ಯಾಪ್ತ ರಾಷ್ಟ್ರದ ಸ್ಥಾನವನ್ನು ಭಾರತ ನೀಡಿದೆ. ಅತ್ಯಾಪ್ತ ಎಂದು ಘೋಷಿಸಿಕೊಂಡ ದೇಶಕ್ಕೆ ವ್ಯಾಪಾರ ವಹಿವಾಟುಗಳಲ್ಲಿ ಮೊದಲ ಆದ್ಯತೆ ನೀಡುವುದು. ಅಂತರಾಷ್ಟ್ರೀಯ ಮಾರುಕಟ್ಟೆ ನಿಯಮದನ್ವಯ ಅತ್ಯಾಪ್ತ ರಾಷ್ಟ್ರಗಳಿಗೆ ಹೆಚ್ಚಿನ ರಿಯಾಯ್ತಿ ಸಿಗುತ್ತಿದೆ. ಅತ್ಯಾಪ್ತ ಅಂತ ಘೋಷಿಸಿಕೊಂಡ ರಾಷ್ಟ್ರಗಳಿಗೆ ವ್ಯಾಪಾರದಲ್ಲಿ ನಷ್ಟ ಸಂಭವಿಸದಂತೆ ಕೆಲವೊಮ್ಮೆ ಎಚ್ಚರಿಕೆ ವಹಿಸಲಾಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv