Tag: ಗುರು ಗ್ರಹ

  • ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಬೆಂಗಳೂರು: ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ಹಲವು ಪ್ರಗತಿಪರರು ಆಹಾರ ಸೇವನೆ ಮಾಡುತ್ತಾ ಚಂದ್ರಗ್ರಹಣ ವೀಕ್ಷಣೆ ಮಾಡಿದ್ದಾರೆ. ʻಖಗೋಳ ವಿಸ್ಮಯ ಚಂದ್ರಗ್ರಹಣ ಸಂಭ್ರಮಿಸೋಣ, ಮೂಡನಂಭಿಕೆ ಅಳಿಸೋಣ, ಮಾನವೀಯತೆ ಉಳಿಸೋಣ, ವಿಜ್ಞಾನದೆಡೆಗೆ ನಮ್ಮ ನಡಿಗೆʼ ಎಂಬ ಘೋಷವಾಕ್ಯದೊಂದಿಗೆ ಸಮೋಸ (Samosa), ಬಾಳೆಹಣ್ಣು ತಿನ್ನುತ್ತಾ 2023ರ ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು.

    ಇಲ್ಲಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣ ಪ್ರತಿಮೆ (Basavanna Statue) ಮುಂದೆ ಜಮಾಯಿಸಿದ್ದ ಹಲವು ಪ್ರಗತಿಪರರು ʻಗ್ರಹಣದ ಸಮಯದಲ್ಲಿ ಊಟ ಮಾಡಬಾರದುʼ ಅನ್ನೋ ಜೋತಿಷಿಗಳ ನಂಬಿಕೆಗೆ ಸೆಡ್ಡು ಹೊಡೆದು ಆಹಾರ ಸೇವನೆ ಮಾಡಿದರು. ಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಮೌಢ್ಯ, ಅದನ್ನ ವಿರೋಧಿಸಿ ಚಂದ್ರಗ್ರಹಣ ಸಂಭ್ರಮಿಸೋಣ ಎಂದು ಪ್ರಗತಿಪರರು ಕರೆ ನೀಡಿದ್ದಾರೆ. ನಟ ಚೇತನ್‌ ದಂಪತಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ವಿಜ್ಞಾನದೆಡಗೆ ನಮ್ಮ ನಡಿಗೆ ಘೋಷವಾಕ್ಯದೊಂದಿಗೆ ಗ್ರಹಣದ ಬಗ್ಗೆ ಮೌಢ್ಯ ಬೇಡವೆಂದು ನೆಹರೂ ತಾರಾಲಯದಲ್ಲಿ (Nehru Planetarium) ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿತು. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಗ್ರಹಣ ವೀಕ್ಷಣೆಗೆ ಅಡ್ಡಿಯಾದ‌ ಮೋಡ: ಇನ್ನೂ ಚಂದ್ರಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯುಂಟು ಮಾಡಿದೆ. ನಸುಕಿನ 1:04 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಿತ್ತು. 1 ಗಂಟೆ 30 ನಿಮಿಷಗಳ ವರೆಗೂ ಗ್ರಹಣ ಗೋಚರವಾಗುತ್ತಿತ್ತು. ಆ ನಂತರ ಸ್ಬಲ್ಪ ಸಮಯ ಮೋಡ ಅಡ್ಡಿಯಾಗಿದ್ದರಿಂದ ಗ್ರಹಣ ವೀಕ್ಷಣೆಗೂ ಅಡಚಣೆಯುಂಟಾಗಿತ್ತು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಬೆಂಗಳೂರು: ಇಂದು (ಭಾನುವಾರ) ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ನೆಹರೂ ತಾರಾಲಯದಲ್ಲಿ (Nehru Planetarium) ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಸ್ರೋ (ISRO) ಸಿಬ್ಬಂದಿ ಸೇರಿದಂತೆ ಅನೇಕರು ಕಣ್ತುಂಬಿಕೊಂಡರು.

    ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಣೆ ಮಾಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಹೊರತಾಗಿಯೂ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಚಂದ್ರನ ಕೌತುಕ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಲೂ (Students) ನೆಹರೂ ತಾರಾಲಯಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಈ ಸಂತದವನ್ನು `ಪಬ್ಲಿಕ್ ಟಿವಿ’  (Public TV) ಜೊತೆಗೆ ಹಂಚಿಕೊಂಡರು. ಚಂದ್ರಗ್ರಹಣ ವೀಕ್ಷಣೆಯಿಂದ ಸಾಕಷ್ಟು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡೆವು. ಶಾಲೆಗಳಲ್ಲಿ ಈ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ನೀಡಬಹುದು. ಇಷ್ಟು ಹತ್ತಿರದಿಂದ ಚಂದ್ರನನ್ನು ನೋಡುತ್ತಿದ್ದೇವೆ. ಜೊತೆಗೆ ಗುರುಗ್ರಹವನ್ನೂ (Jupiter) ನೋಡುತ್ತಿರುವುದು ಖುಷಿ ಸಿಕ್ಕಿದೆ ಎಂದು ಹಾವೇರಿಯಿಂದ ಬಂದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಇನ್ನೂ ಕೆಲ ಮಕ್ಕಳು, ನಾವು ಪುಸ್ತಕಗಳಲ್ಲಿ ಮಾತ್ರವೇ ಗ್ರಹಣದ ಬಗ್ಗೆ ಓದಿದ್ದೆವು, ಕೇಳಿದ್ದೆವು. ಆದ್ರೆ ಈಗ ಕಣ್ಣಾರೆ ವೀಕ್ಷಿಸುತ್ತಿರುವುದು ವಿಸ್ಮಯವೇ ಅನ್ನಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಚಂದ್ರಗ್ರಹಣ ಕುರಿತು ಮಾಹಿತಿ ನೀಡಿದ್ದ ನೆಹರೂ ತಾರಾಲಯದ ವಿಜ್ಞಾನಿ ಆನಂದ್, ಮಧ್ಯರಾತ್ರಿ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ. 1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ವಿವರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

    PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

    – ಭೂಮಿಗಿಂತ 143 ಪಟ್ಟು ದೊಡ್ಡದು ಈ ಏಲಿಯನ್‌ ಪ್ಲಾನೆಟ್‌!

    ಭಾರತೀಯ ವಿಜ್ಞಾನಿಗಳು (Indian Scientists) ಸೌರಮಂಡಲದಾಚೆ ಇರುವ ಏಲಿಯನ್‌ ಗ್ರಹವೊಂದನ್ನ (Alien Planet) ಪತ್ತೆಹಚ್ಚಿದ್ದಾರೆ. ಇದನ್ನ ಎಕ್ಸೋಪ್ಲಾನೆಟ್‌ (Exoplanet) ಅಂತಲೂ ಕರೆಯುತ್ತಾರೆ. ಏಲಿಯನ್‌ (Alien) ಎಂದಾಕ್ಷಣ ಎಲ್ಲರಿಗೂ ಥಟ್ಟನೆ ನೆನಪಾಗೋದು ಅನ್ಯಗ್ರಹ ಜೀವಿ. ನೋಡೋಕೆ ವಿಚಿತ್ರವಾಗಿದೆ, ಮನುಷ್ಯರಿಗಿಂತ ಬುದ್ಧಿಶಾಲಿ, ಹಾಗಂತೆ.. ಹೀಗಂತೆ.. ಏನೇನೋ ಕಲ್ಪನೆ ಮಾಡಿಕೊಳ್ಳೋದು ಸಹಜ. ಈ ಏಲಿಯನ್‌ ಪ್ಲಾನೆಟ್‌ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಹಾಗಾದರೆ, ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿದ ಈ ಗ್ರಹದಲ್ಲಿ ಏಲಿಯನ್‌ಗಳು ಇವೆಯೇ? ಯಾವ ಅರ್ಥದಲ್ಲಿ ವಿಜ್ಞಾನಿಗಳು ಏಲಿಯನ್‌ ಪ್ಲಾನೆಟ್‌ ಎಂದು ಹೆಸರಿಟ್ಟಿದ್ದಾರೆ?

    ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಗುರುಗ್ರಹದಂತೆಯೇ ಇರುವ ಮತ್ತು ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಎಕ್ಸೋಪ್ಲಾನೆಟ್ ಅನ್ನು ಕಂಡುಹಿಡಿದಿದೆ. ಈ ತಂಡದ ನೇತೃತ್ವವನ್ನು ಭಾರತದ ವಿಜ್ಞಾನಿಗಳೇ ವಹಿಸಿದ್ದರೆಂಬುದು ವಿಶೇಷ. ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್‌ಎಲ್)ಯ ಎಕ್ಸೋಪ್ಲಾನೆಟ್ ರಿಸರ್ಚ್ ಗ್ರೂಪ್‌ನಲ್ಲಿ ಪ್ರೊಫೆಸರ್ ಅಭಿಜಿತ್ ಚಕ್ರವರ್ತಿ ನೇತೃತ್ವದ ತಂಡದಲ್ಲಿ ಭಾರತ, ಯುನೈಟೆಡ್ ಸ್ಟೇಟ್ಸ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌ನ ವಿಜ್ಞಾನಿಗಳು ಇದ್ದರು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಿಳಿಸಿದೆ. ಅಷ್ಟೇ ಅಲ್ಲ, ಈ ಬ್ರಹ್ಮಾಂಡದಲ್ಲಿ ಇಂತಹ ಸಾವಿರಾರು ಎಕ್ಸೋಪ್ಲಾನೆಟ್‌ಗಳಿವೆ. 1990 ರ ದಶಕದಲ್ಲಿ ಮೊದಲ ಬಾರಿಗೆ ಎಕ್ಸೋಪ್ಲಾನೆಟ್ ಪತ್ತೆಹಚ್ಚಲಾಯಿತು ಎನ್ನುತ್ತೆ ಯುಎಸ್ NASA. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?

    ನಮ್ಮ ಗುರು ಗ್ರಹದ ವಿಶೇಷತೆ ಏನು?
    ಎಕ್ಸೋಪ್ಲಾನೆಟ್‌ಗಿಂತ ಮೊದಲು ನಮ್ಮ ಸೌರಮಂಡಲದ ಗುರು ಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಭೂಮಿಯಿಂದ 890 ದಶಲಕ್ಷ ಕಿಮೀ ದೂರದಲ್ಲಿರುವ ಗುರು ಗ್ರಹವು ಸೌರಮಂಡಲದ ಅತಿ ದೊಡ್ಡ ಗ್ರಹವಾಗಿದೆ. ಗಾತ್ರದಲ್ಲಿ ಭೂಮಿಗಿಂತ 11 ಪಟ್ಟು ದೊಡ್ಡದಾಗಿದೆ. ಇಂಥ ಗುರು ಗ್ರಹಕ್ಕೆ ಮೂರು ಉಪಗ್ರಹಗಳಿವೆ. ಅವುಗಳೆಂದರೆ ಗ್ಯಾನಿಮೇಡಾ, ಯೂರೋಪ, ಕ್ಯಾಲಿಸ್ಟೊ. ಈ ಉಪಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಬಗ್ಗೆ ಪ್ರಬಲ ಶಂಕೆ ಇದೆ.

    ಏನಿದು ಎಕ್ಸೋಪ್ಲಾನೆಟ್?
    ಸೌರವ್ಯೂಹದ ಆಚೆ ನಕ್ಷತ್ರವನ್ನು ಸುತ್ತುವ ಗ್ರಹ ಎಕ್ಸೋಪ್ಲಾನೆಟ್. ನಾಸಾದ ಪ್ರಕಾರ, ರಾಕ್ಷಸ ಗ್ರಹಗಳು ಎಂದು ಕರೆಯಲ್ಪಡುವ ಬಾಹ್ಯ ಗ್ರಹಗಳು ಸಹ ಇವೆ. ಅವು ಯಾವುದೇ ನಕ್ಷತ್ರದ ಹಿಡಿತಕ್ಕೆ ಒಳಪಡುವುದಿಲ್ಲ. ಆದರೆ ಗ್ಯಾಲಕ್ಸಿಯ ಕೇಂದ್ರವನ್ನು ಸುತ್ತುತ್ತವೆ. ಇದನ್ನೂ ಓದಿ: PublicTV Explainer: ಮತ ಪ್ರಮಾಣ ಹೆಚ್ಚಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಏರಿಲ್ಲ ಯಾಕೆ?

    ಎಕ್ಸೋಪ್ಲಾನೆಟ್‌ಗಳು ನಮ್ಮ ಸೌರವ್ಯೂಹದಲ್ಲಿನ ಗ್ರಹಗಳಂತೆಯೇ ಅನೇಕ ಅಂಶಗಳಿಂದ ರೂಪುಗೊಂಡಿದೆ. ಆದರೆ ಆ ಅಂಶಗಳ ಮಿಶ್ರಣಗಳು ಭಿನ್ನವಾಗಿರಬಹುದು. ಕೆಲವು ಗ್ರಹಗಳು ನೀರು ಅಥವಾ ಮಂಜುಗಡ್ಡೆಯಿಂದ ಆವೃತವಾಗಿರುತ್ತವೆ. ಇನ್ನೂ ಕೆಲವು ಕಬ್ಬಿಣ ಅಥವಾ ಇಂಗಾಲದಿಂದ ಆವೃತವಾಗಿರುತ್ತವೆ ಎಂದು ಎನ್‌ಎಎಸ್‌ಎ ಎಕ್ಸ್ಪ್ಲಾನೆಟ್ ಎಕ್ಸ್ಪ್ಲೋರೇಶನ್ ವೆಬ್‌ಸೈಟ್ ವಿಶ್ಲೇಷಿಸಿದೆ. ನಕ್ಷತ್ರಗಳ ಪ್ರಜ್ವಲಿಸುವಿಕೆಯಿಂದ ಈ ಗ್ರಹಗಳು ಮರೆಮಾಚಿಕೊಳ್ಳುತ್ತವೆ. ಹೀಗಾಗಿ ದೂರದರ್ಶಕಗಳ ಮೂಲಕ ಎಕ್ಸೋಪ್ಲಾನೆಟ್‌ಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ.

    ಹೊಸ ಎಕ್ಸೋಪ್ಲಾನೆಟ್ ಹೇಗೆ ಪತ್ತೆಯಾಯಿತು?
    ಪಿಆರ್‌ಎಲ್ ಸುಧಾರಿತ ರೇಡಿಯಲ್-ವೇಗ ಅಬು-ಸ್ಕೈ ಸರ್ಚ್ (ಪಿಎಆರ್‌ಎಎಸ್) ಸ್ಪೆಕ್ಟ್ರೋಗ್ರಾಫ್ ಬಳಸಿಕೊಂಡು ಈ ಎಕ್ಸೋಪ್ಲಾನೆಟ್‌ ಪತ್ತೆಹಚ್ಚಲಾಗಿದೆ. ಟಿಒಐ4603 ಅಥವಾ ಹೆಚ್‌ಡಿ 245134 ಎಂದು ಕರೆಯಲ್ಪಡುವ ನಕ್ಷತ್ರದ ಸುತ್ತಲೂ ಈ ಗ್ರಹ ಸುತ್ತುತ್ತದೆ. ಇದನ್ನೂ ಓದಿ: Public TV Explainer – ಮೋದಿಯನ್ನು ಫಾಲೋ ಮಾಡಿದ ಮಸ್ಕ್‌: ಟೆಸ್ಲಾ ಕಾರು ಇನ್ನೂ ಭಾರತಕ್ಕೆ ಬಂದಿಲ್ಲ ಯಾಕೆ?

    ಸ್ಪೆಕ್ಟ್ರೋಗ್ರಾಫ್ ಬಳಸಿ ಮೌಂಟ್ ಅಬುದಲ್ಲಿನ ಗುರುಶಿಖರ ವೀಕ್ಷಣಾಲಯದಲ್ಲಿ ಈ ಗ್ರಹವನ್ನು ಆವಿಷ್ಕರಿಸಲಾಯಿತು ಇಸ್ರೋ ತಿಳಿಸಿದೆ. ಈ ಎಕ್ಸೋಪ್ಲಾನೆಟ್ ಅನ್ನು ವಿಜ್ಞಾನಿಗಳು ಟಿಒಐ 4603ಬಿ ಅಥವಾ ಹೆಚ್‌ಡಿ 245134ಬಿ ಎಂದು ಹೆಸರಿಸಿದ್ದಾರೆ.

    ಗುರು ಗ್ರಹಕ್ಕಿಂತ 13 ಪಟ್ಟು ದೊಡ್ಡದು!
    ಹೊಸದಾಗಿ ಪತ್ತೆಯಾದ ಎಕ್ಸೋಪ್ಲಾನೆಟ್‌ನ ದ್ರವ್ಯತ್ವ (ತೂಕವು) ಗುರುಗ್ರಹಕ್ಕಿಂತ 13 ಪಟ್ಟು ಹೆಚ್ಚು. ಇದರ ಸಾಂದ್ರತೆಯು ಇಲ್ಲಿಯವರೆಗೂ ನಾವು ಗಮನಿಸಿರುವುದಕ್ಕಿಂತ ಅತ್ಯಧಿಕ ಅಂತ ಇಸ್ರೋ ಹೇಳುತ್ತೆ. 731 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ಎಕ್ಸೋಪ್ಲಾನೆಟ್ ಪ್ರತಿ 7.24 ದಿನಗಳಿಗೊಮ್ಮೆ ಉಪ-ದೈತ್ಯ ಎಫ್- ಮಾದರಿಯ ನಕ್ಷತ್ರ ಟಿಒಐ4603 ಅನ್ನು ಸುತ್ತುತ್ತದೆ.

    ಈ ಆವಿಷ್ಕಾರ ಏಕೆ ಮುಖ್ಯ?
    1670 ಕೆ ನ ಮೇಲ್ಮೈ ತಾಪಮಾನ ಹೊಂದಿರುವ ಎಕ್ಸೋಪ್ಲಾನೆಟ್ ಬೃಹತ್ ಗ್ರಹಗಳ ರಚನೆ ಮತ್ತು ವಿಕಾಸದ ಕಾರ್ಯವಿಧಾನಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!

    ಪಿಎಆರ್‌ಎಎಸ್ ಸ್ಪೆಕ್ಟ್ರೋಗ್ರಾಫ್ ಮತ್ತು ಪಿಆರ್‌ಎಲ್ 1.2ಬಿ ದೂರದರ್ಶಕದೊಂದಿಗೆ ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿದ 3ನೇ ಎಕ್ಸೋಪ್ಲಾನೆಟ್ ಗ್ರಹವಾಗಿದೆ. ಉಳಿದೆರಡು ಎಕ್ಸೋಪ್ಲಾನೆಟ್‌ಗಳನ್ನು 2018 (ಕೆ2-236ಬಿ) ಮತ್ತು 2021 (ಟಿಒಐ-1789ಬಿ) ರಲ್ಲಿ ಆವಿಷ್ಕರಿಸಲಾಗಿದೆ.

    ಎಕ್ಸೋಪ್ಲಾನೆಟ್‌ ಬಗ್ಗೆ ವಿಜ್ಞಾನಿಗಳು ವಿವರ ನೀಡಿದ್ದಾರೆ. ಆದರೆ ಇದಕ್ಕೆ ಏಲಿಯನ್‌ ಪ್ಲಾನೆಟ್‌ ಅಂತ ಯಾಕೆ ಹೆಸರಿಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ಈ ಗ್ರಹದಲ್ಲಿ ಏಲಿಯನ್‌ಗಳು ಇವೆಯಾ? ಅಥವಾ ಸೌರಮಂಡಲದಾಚೆ ಇರುವ ಅನ್ಯಗ್ರಹ ಎಂಬ ಕಾರಣಕ್ಕೆ ಈ ಹೆಸರನ್ನಿಟ್ಟಿದ್ದಾರಾ ಎಂಬುದು ಪ್ರಶ್ನೆಯಾಗಿದೆ.

  • ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

    ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

    – ಗುರು ಜೊತೆ ಶನಿ ಬರೋದರಿಂದ ಏನಾಗುತ್ತೆ?

    ಬೆಂಗಳೂರು: ಇಂದು ನಡೆಯುವ ಗುರು-ಶನಿ ಸಮ್ಮಿಲದ ಖಗೋಳ ತಜ್ಞರಿಗೆ ನಭೋಮಂಡಲದ ಕೌತಕದ ವಿದ್ಯಮಾನ ಅಷ್ಟೆ. ಆದ್ರೆ ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಸಿಗುತ್ತವೆ. ಈ ಮಹಾಸಂಯೋಗದ ಬಗ್ಗೆ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

    ಗುರು,ಶನಿ ಸಂಯೋಗ ಹೇಗೆ?: 60 ಸಂವತ್ಸರದಲ್ಲಿ ಶಾರ್ವರಿ ನಾಮ ಸಂವತ್ಸರವೂ ಒಂದಾಗಿದೆ. ಈ ಸಂಯೋಗ ಇದು ಯುಗ ಯುಗಗಳಲ್ಲಿ ನಡೆಯುವ ವೈಶಿಷ್ಯ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರಕ್ರಿಯೆ. 9 ಗ್ರಹಗಳು 12 ಮನೆಗಳಲ್ಲಿ ಸಂಚಾರ ಇರುತ್ತೆ. 9 ಗ್ರಹಗಳು 12 ಮನೆಗಳಲ್ಲಿ ಇಂತಿಷ್ಟು ವರ್ಷವೆಂದು ಸಂಚಾರ ಮಾಡುತ್ತವದೆ. ಮಕರ ರಾಶಿಗೆ ಶನಿ ಮತ್ತು ಗುರು ಗ್ರಹ ಪ್ರವೇಶವಾಗುತ್ತೆ. ಇಂದು ಸಂಧ್ಯಾಕಾಲ ಎರಡು ಗ್ರಹಗಳ ಪ್ರವೇಶ ಆಗಲಿದೆ.

    ಒಂದು ಸಂವತ್ಸರದಲ್ಲಿ ನಾಲ್ಕು ಕಾಲಗಳು ಬರುತ್ತೆ. ಪೂರ್ವ ಜನ್ಮದ ಕರ್ಮಗಳಿಗೆ ಅನುಸಾರವಾಗಿ ಫಲ ಲಭಿಸುತ್ತೆ. ಗ್ರಹಗಳು ರಾಶಿಗಳ ಮನೆಗೆ ಬಂದಾಗ ಹಿಂದಿನ ಸಂಸ್ಕಾರಗಳೇ ಫಲವಾಗಿ ಲಭಿಸುತ್ತೆ. ಗ್ರಹ ಪ್ರವೇಶ ಆದಾಗ ಒಳ್ಳೆಯದು ಆಗುತ್ತೆ.. ಕೆಟ್ಟದ್ದು ಆಗುವ ಸಾಧ್ಯತೆಗಳಿರುತ್ತವೆ. ಗುರು ಗ್ರಹ ಪ್ರವೇಶ ಆದಾಗ ಶುಭವೇ ಹೆಚ್ಚಾಗುತ್ತದೆ. ಒಳ್ಳೆಯದು ಮಾಡುವ ಗುರು ಜೊತೆ ಶನಿ ಬಂದಾಗ ಆತಂಕ ಜಾಸ್ತಿ. ಒಳ್ಳೆಯ ಗುರು ಜೊತೆ ಶನಿ ಬಂದಾಗ ಸ್ವಲ್ಪ ಕೆಡುಕಾಗಬಹುದು. ಮಕರ ರಾಶಿಯಲ್ಲಿ ಎರಡು ಗ್ರಹಗಳ ಸಮ್ಮಿಲನ ಒಂದು ವರ್ಷ ಇರುತ್ತೆ. ಗುರು ಗ್ರಹ 2 ತಿಂಗಳು ಬಿಟ್ಟು ವಾಪಾಸ್ ಹೋಗ್ತಾನೆ. 2 ತಿಂಗಳು ಬಿಟ್ಟು ಮತ್ತೆ ವಾಪಸ್ ಹೋಗುವಾಗ ಫಲ ಲಭಿಸಲಿದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳುತ್ತಾರೆ.

    ರಾಶಿಗಳ ಮೇಲೆ ಬೀಳುವ ಪರಿಣಾಮ ಏನು?: ಗುರು-ಶನಿ ಸಂಯೋಗ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಇದ್ದೇ ಇರುತ್ತದೆ. ಪಂಚಮ ಶನಿ ಅಂದರೆ 5ನೇ ಮನೆಯಲ್ಲಿ ಶನಿ ಇದ್ದಾಗ ತೊಂದರೆ. ಮಕರ ರಾಶಿಯವರಿಗೆ ಏಳೂವರೆ ವರ್ಷದ ಶನಿ ಕಾಟದಿಂದ ಮುಕ್ತವಾಗಲಿದೆ. ಶನಿಕಾಟ ವಿಮೋಚನೆದಿಂದ ಗುರು-ಶನಿಯಿಂದ ಅನುಕೂಲ. ಗುರು ಜೊತೆ ಶನಿ ಬರುತ್ತಿರುವುದರಿಂದ ಒಳ್ಳೆಯದು ಆಗಲಿದೆ. ಮಕರ ರಾಶಿಯವರ ಸಮೀಪ ಇರುವ ರಾಶಿಗಳಿಗೆ ಆತಂಕ. ಆತಂಕ ದೂರ ಮಾಡಿಕೊಳ್ಳಲು ಶನಿ ದೇವರನ್ನು ಪ್ರಾರ್ಥಿಸಬೇಕು ಎಂದು ಸೂಚಿಸಿದ್ದಾರೆ.

    ರಾಶಿಗಳಿಗೆ ಪರಿಹಾರ ಏನು?: ಗುರು ಅಂದರೆ ದಕ್ಷಿಣಾಮೂರ್ತಿ, ಶನಿ ಅಂದರೆ ಈಶ್ವರ. ಹಾಗಾಗಿ ಈಶ್ವರನ ಆರಾಧನೆ ಮತ್ತು ಪೂಜೆ ಮಾಡಬೇಕು ಮತ್ತು ನವಗ್ರಹ ಪ್ರದಕ್ಷಿಣೆ ಮಾಡಬೇಕು. ತಮ್ಮ ಅನುಕೂಲಕ್ಕೆ ತಕ್ಕಂತೆ ಎಳ್ಳು, ಎಳ್ಳೆಣ್ಣೆ, ಕಡ್ಲೆಕಾಳು ದಾನ ಮಾಡಬೇಕು. ಗುರು, ಶನಿ ಇಬ್ಬರೂ ಇರುವುದರಿಂದ ಈ ವೇಳೆ ಪ್ರಾರ್ಥನೆ ಮುಖ್ಯವಾಗುತ್ತದೆ. ಈ ಸಮಯದಲ್ಲಿ ಏನಾದ್ರು ದೋಷಗಳಿದ್ರೂ ಪರಿಹಾರ ಆಗುತ್ತೆ.

    ಪರಿಸರದ ಮೇಲೆ ಏನು ಪರಿಣಾಮ?: ಶನಿ ಅಂದರೆ ಯುದ್ಧ ಭೀತಿ ಎಂದರ್ಥ. ಗುರು ಅಂದರೆ ಸೌಮ್ಯ ಅಂತರ್ಥ. ಎಲ್ಲಾ ದೇಶದವರಿಗೂ ಪ್ರಾಕೃತಿಕ ಸಂಯಮ ಇದೆ. ಒಂದೇ ಮನೆಯಲ್ಲಿ 2 ಗ್ರಹಗಳ ಬರುತ್ತಿರೋದರಿಂದ ಒಳ್ಳೆಯದು ಆಗುತ್ತೆ ಕೆಟ್ಟದ್ದು ಆಗುತ್ತೆ. ಇಂಥದ್ದೇ ಆಗುತ್ತೆಂದು ಹೇಳಲಾಗಲ್ಲ. ಜಲಪ್ರವಾಹ, ಅಗ್ನ ಅವಘಡ, ಭೂಕಂಪ ಸಂಭವಿಸಬಹುದು ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ: ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

    ರಾಜಕೀಯದ ಮೇಲೆ ಪರಿಣಾಮ ಏನು?: ಗ್ರಹಣಗಳ ಕಾಲದಲ್ಲಿ ರಾಜಕೀಯದ ವಿಶ್ಲೇಷಣೆ ಮಾಡಬಹುದು, ಗ್ರಹಗಳ ನಡುವೆ ನಡೆಯುವ ಸಮ್ಮಿಲನದಿಂದ ಹೇಳಲು ಆಗಲ್ಲ. ಯುಗಾದಿ ನಂತರ ಕುಜ ರಾಜನಾಗಿ ಬರ್ತಾನೆ. ಅನುಕೂಲ, ಅನಾನುಕೂಲ ಎರಡೂ ಆಗಬಹುದು.

  • ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ

    ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ

    – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

    ಬೆಂಗಳೂರು: ಇಂದು ಸಂಜೆ ನಭೋಮಂಡಲ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ. ಈ ಮಹಾಸಂಗಮದಿಂದ ಯಾವ ರಾಶಿಗಳಿಗೆ ಕಂಟಕ ಆಗಬಹುದು? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

    ಮೇಷ: ಹಣಕಾಸಿನ ತೊಂದರೆ ಹೆಚ್ಚಾಗಬಹುದು, ನಿಮ್ಮ ಪ್ರಯಾಣದಲ್ಲಿ ಸಂಕಷ್ಟ ಎದುರಾಗಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಅನಾರೋಗ್ಯ ಸಮಸ್ಯೆ ಕಾಡಲಿದೆ.

    ವೃಷಭ: ಉದ್ಯೋಗದ ಸ್ಥಳದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ ಸಾಧ್ಯತೆ, ಉದ್ಯೋಗ ಕಳೆದುಕೊಳ್ಳುವ ಸಂಭವ.

    ಮಿಥುನ: ಜೀವನದಲ್ಲಿ ಏರುಪೇರು ಸಾಧ್ಯತೆ, ಆಕಸ್ಮಿಕ ದುರಂತ ಸಂಭವ, ರಾಜಕೀಯ ವ್ಯಕ್ತಿಗಳಿಗೆ ಸಮಸ್ಯೆ,ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಆರ್ಥಿಕ ಪರಿಸ್ಥಿತಿ ಉಲ್ಬಣ.

    ಕಟಕ: ದಾಂಪತ್ಯದಲ್ಲಿ ಜಗಳ, ಮುನಿಸು, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ರೋಗಬಾಧೆ ಉಲ್ಪಣ ಸಂಭವ, ಆನಾರೋಗ್ಯ ಸಮಸ್ಯೆ ಹೆಚ್ಚಾಗಬಹುದು.

    ಸಿಂಹ: ಶತ್ರುಗಳ ಕಾಟ ಹೆಚ್ಚಾಗಬಹುದು, ಆರ್ಥಿಕ ಸಮಸ್ಯೆ ಹೆಚ್ಚಿನ ಸಾಲ, ಮನಸ್ಸಿನ ಭಾವನಾತ್ಮಕ ವಿಚಾರದಲ್ಲಿ ಹಿನ್ನಡೆ, ಮಕ್ಕಳಿಂದ ಕಿರಿಕಿರಿ ಅಥವಾ ನಷ್ಟ, ಕೆಲಸಗಾರರಿಂದ ಸಮಸ್ಯೆ.

    ಕನ್ಯಾ: ಪ್ರೀತಿ-ಪ್ರೇಮ ವಿಚಾರದಲ್ಲಿ ತೊಂದರೆ, ದಾಂಪತ್ಯದಲ್ಲಿ ಜಗಳ, ವಿರಸ, ಸಂಗಾತಿಗೆ ಆರೋಗ್ಯ ಕೈ ಕೊಡಬಹುದು, ಉದ್ಯೋಗದಲ್ಲಿ ಒತ್ತಡ, ಕಿರುಕುಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ತುಲಾ: ಮಾನಸಿಕ ಆಘಾತ, ನೆಮ್ಮದಿ ಘಾಸಿ, ದೈವವನ್ನ ದಿಕ್ಕರಿಸೋ ಸಾಹಸ, ಕುಟುಂಬ ಕಲಹ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಪ್ರಯಾಣ, ಶತ್ರು ಕಾಟ

    ವೃಶ್ಚಿಕ: ಬಂಧು-ಬಾಂಧವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರದಲ್ಲಿ ಎಚ್ಚರ ಇರಲಿ, ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ, ಪ್ರೀತಿ ಪ್ರೇಮ ವಿಚಾರದಲ್ಲಿ ಎಚ್ಚರ, ಆದಷ್ಟು ಎಚ್ಚರದಿಂದ ಇದ್ದರೆ ಒಳಿತು.

    ಧನಸ್ಸು: ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆ, ಸ್ವಂತ ವ್ಯವಹಾರ ಬೇಡ, ಶುಭಕಾರ್ಯದಲ್ಲಿ ಸಮಸ್ಯೆ, ಅಂದುಕೊಂಡ ಕೆಲಸಗಳು ವಿಳಂಬ

    ಮಕರ: ಆರೋಗ್ಯದಲ್ಲಿ ಮುಂಜಾಗ್ರತೆ ಇರಲಿ, ಸ್ವಂತ ಉದ್ಯಮದ ಬಗ್ಗೆ ಜಾಗ್ರತೆ, ಕೋರ್ಟ್ ವ್ಯಾಜ್ಯ ಸಂಭವ, ಜೈಲುವಾಸ ಸಾಧ್ಯತೆ

    ಕುಂಭ: ಲಾಭದ ಪ್ರಮಾಣದಲ್ಲಿ ಕುಂಠಿತ, ಖರ್ಚು ಹೆಚ್ಚಳ, ಕುಟುಂಬದಲ್ಲಿ ವಿರೋಧ, ಮಾತಿನಿಂದ ಸಮಸ್ಯೆ, ದಾಯಾದಿ ಕಲಹ, ಹೆಸರಿಗೆ ಅಪಖ್ಯಾತಿ, ಅಪವಾದ

    ಮೀನ: ಮುಂಬರುವ 15 ದಿನಗಳ ಕಾಲ ಜಾಗ್ರತೆ, ಧನ ಲಾಭ ನಿರೀಕ್ಷೆ, ಸೇವಾ ವೃತ್ತಿದಾರರು ಎಚ್ಚರ, ಆರೋಗ್ಯ ವಿಚಾರದಲ್ಲಿ ಜಾಗ್ರತೆ

  • ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

    ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

    – ಮಹಾ ಸಂಗಮ ನೋಡೋಕೆ ಆಗಸದತ್ತ ಜನರ ನೋಟ

    ಬೆಂಗಳೂರು: ಇಂದು ಸಂಜೆ ಬಾನಂಗಳದಲ್ಲಿ 800 ವರ್ಷಗಳ ಬಳಿಕ ಅಪರೂಪದ ವಿದ್ಯಮಾನ ಜರುಗಲಿದೆ. ಸೂರ್ಯಾಸ್ತದ ಬಳಿಕ ಗುರು, ಶನಿ ಗ್ರಹಗಳ ಸಂಗಮ ದೃಶ್ಯ ಬರಿಗಣ್ಣಿಗೆ ಗೋಚರಿಸಲಿದೆ. ಈ ಎರಡು ಗ್ರಹಗಳು ಕ್ರಿಸ್‍ಮಸ್ ಸ್ಟಾರ್ ರೀತಿಯಲ್ಲಿ ಕಾಣಲಿವೆ. ಈ ವಿಶೇಷಕ್ಕಾಗಿ ಮತ್ತೆ 60 ವರ್ಷಗಳ ಬಳಿಕ ಕಾಯಬೇಕು.

    ಗುರು-ಶನಿ ಸಂಯೋಗ: ಈ ಎರಡು ಗ್ರಹಗಳು ಭೂಮಿಗೆ ನೇರವಾಗಿ ಒಂದೇ ರೇಖೆಯಲ್ಲಿ ಬರುವುದರಿಂದ ಒಂದೇ ಗ್ರಹದಂತೆ ಗೋಚರವಾಗುತ್ತವೆ. ಆದರೆ, ಗ್ರಹಗಳು ಒಂದರ ಹಿಂದೆ ಒಂದು ಇರಲಿದೆ. ಹಾಗಾಗಿ ಇದನ್ನು ಬಾಹ್ಯಾಕಾಶ ವಿಜ್ಞಾನಿಗಳು ಮಹಾ ಸಂಗಮ ಎಂದು ಕರೆಯುತ್ತಾರೆ. ಒಂದೇ ರೇಖೆಯಲ್ಲಿ ಗುರು, ಶನಿ, ಚಂದ್ರ ಬರೋದರಿಂದ ಆಗಸದಲ್ಲಿ ತ್ರಿಕೋನಾಕೃತಿಯಲ್ಲಿ ಸಂಯೋಗ ಗೋಚರವಾಗುತ್ತದೆ. ಮುಂದೆ 2080ರಲ್ಲಿ ಈ ವಿದ್ಯಮಾನ ಘಟಿಸಲಿದೆ.

    ಸಮಯ: ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ.

    ಗುರು,ಶನಿ ಸಮಾಗಮ ಎಂದರೇನು?: ಆಕಾಶಕಾಯಗಳ ಸಾಮೀಪ್ಯದ ವಿಶೇಷವೇ ಖಗೋಳ ವಿದ್ಯಮಾನ. 20 ವರ್ಷಗಳಿಗೊಮ್ಮೆ ಕಾಣುವ ವಿದ್ಯಮಾನವನ್ನ ಗ್ರೇಟ್ ಕಂಜಂಕ್ಷನ್ ಅಂತ ಕರೆಯುತ್ತಾರೆ. ಈ ಎರಡು ಗ್ರಹಗಳ ಅಂತರ 6.1 ಅರ್ಕ್ ಮಿನಿಟ್, ಅಂದ್ರೆ 0.1 ಡಿಗ್ರಿ ಇರುತ್ತೆ. ಹಿಂದೆ 1623ರಲ್ಲಿ ಈ ವಿದ್ಯಮಾನ ನಡೆದಿತ್ತು ಆದರೆ ಅದು ಗೋಚರಿಸಿರಲಿಲ್ಲ. ಅದಕ್ಕೂ ಹಿಂದೆ 1226 ರಲ್ಲಿ ಅದ್ರೆ 794 ವರ್ಷದ ಹಿಂದೆ ಗೋಚರಿಸಿತ್ತು. ಮತ್ತೊಮ್ಮೆ, 0.1 ಡಿಗ್ರಿ ಅಂತರದ ಸಮಾಗಮ ವೀಕ್ಷಿಸಲು 2080ರವರೆಗೆ ಕಾಯಬೇಕು. ಈ ವೈಶಿಷ್ಯವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಸಮಾಗಮ 1 ಗಂಟೆ 45 ನಿಮಿಷ ಮಾತ್ರ ಕಾಣಸಿಗುತ್ತದೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರದ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

    ಸೌರ ಮಂಡಲದ ಎಲ್ಲ ಗ್ರಹಗಳು ಸೂರ್ಯನ ಸುತ್ತ ತಿರುಗುತ್ತಿರುತ್ತದೆ. ಭೂಮಿಯಿಂದ ನೋಡಿದಾಗ ಈ ಗ್ರಹಗಳೂ ಗೋಚರವಾಗುತ್ತವೆ. ಇಂತಹ ಸಂದರ್ಭದಲ್ಲಿ ಗುರು, ಶನಿ ಗ್ರಹಗಳು ಸಮೀಪ ಬಂದಂತೆ ಭಾಸವಾಗುತ್ತೆ. ಈ ವಿದ್ಯಮಾನವೇ ಯುತಿ ಅಥವಾ ಸಮಾಗಮ ಅಂತಾರೆ. ಎಲ್ಲ ಗ್ರಹಗಳು ಸಮಾಗಮ ಹೊಂದುತ್ತವೆ. ಇಂದು ಗುರು-ಶನಿ ಗ್ರಹಗಳು ಭೂಮಿ ಸಮೀಪ ಬಂದತೆ ಭಾಸವಾಗುತ್ತೆ. 800 ವರ್ಷಗಳ ಬಳಿಕ ನಡೆಯುತ್ತಿದೆ. 800 ವರ್ಷಗಳ ಬಳಿಕ ಇಷ್ಟು ಹತ್ತಿರ ಬಂದಿರುವುದು ಇದೇ ಮೊದಲು ಎಂದು ಖಗೋಳಶಾಸ್ತ್ರಜ್ಞ ಸುಂದರ್ ಮಾಹಿತಿ ನೀಡಿದ್ದಾರೆ.