Tag: ಗುಜರಾತ್ ಪೊಲೀಸರು

  • ಗೆಳೆಯರನ್ನ ಸೆಕ್ಸ್‌ಗಾಗಿ ಪೀಡಿಸುತ್ತಿದ್ದ ಮೂರು ಮಕ್ಕಳ ತಾಯಿ- ಕೊಲೆಗೆ ಸ್ಕೆಚ್ ಹಾಕಿದ್ದೇ ರೋಚಕ?

    ಗೆಳೆಯರನ್ನ ಸೆಕ್ಸ್‌ಗಾಗಿ ಪೀಡಿಸುತ್ತಿದ್ದ ಮೂರು ಮಕ್ಕಳ ತಾಯಿ- ಕೊಲೆಗೆ ಸ್ಕೆಚ್ ಹಾಕಿದ್ದೇ ರೋಚಕ?

    ಗಾಂಧಿನಗರ: ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬಳು (Women) ಗಂಡನಿಂದ ಬೇರಾಗಿ ಮತ್ತೊಬ್ಬ ಯುವಕನೊಂದಿಗೆ ಲಿವ್ ಇನ್ ರಿಲೇಷನ್‌ನಲ್ಲಿ (Live In Relationship) ಇದ್ದಳು. ಈ ವೇಳೆ ಗೆಳೆಯನ ಸ್ನೇಹಿತನೊಂದಿಗೂ ದೈಹಿಕ ಸಂಪರ್ಕ ಬೆಳೆಸಿದ್ದ ಮಹಿಳೆಯನ್ನ ಸ್ಕೆಚ್ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

    ಗುಜರಾತಿನ (Gujarat) ವಡೋದರಾದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರೇಮಿಗಳ ದಿನದಂದೇ ಇಬ್ಬರು ಯುವಕರು ಮಹಿಳೆಯನ್ನ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ನದಿಗೆ ಎಸೆದಿದ್ದಾರೆ. ಇದನ್ನೂ ಓದಿ: 1,000 ರೂ.ಗಾಗಿ ವೃದ್ಧನ ಕರುಳು ಹೊರಗೆ ಬರುವಂತೆ ಚಾಕುವಿನಿಂದ ಇರಿದ್ರು!

    ಮಾಹಿತಿ ಪ್ರಕಾರ, ಚಮೇಲಿ ಎಂದು ಗುರುತಿಸಲಾದ ಮಹಿಳೆ ಮೂರು ಮಕ್ಕಳ ತಾಯಿ. ಕೆಲ ತಿಂಗಳ ಹಿಂದೆ ಪತಿಯಿಂದ ದೂರಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ. ಘಟನೆ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬಸ್‌ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ ಮಾಡಿದ ಭೂಪ

    ಏನಿದು ಘಟನೆ?: ಮಹಿಳೆ ಚಮೇಲಿ ಗಂಡನಿಂದ ಪ್ರತ್ಯೇಕವಾಗಿ ರನೌಲಿ ಬಸ್ ನಿಲ್ದಾಣದ ಬಳಿ ವಾಸಿಸುತ್ತಿದ್ದಳು. ಗಂಡನಿಂದ ದೂರಾಗಿದ್ದರೂ ಮತ್ತೊಬ್ಬ ಯುವಕ ಅಜಯ್ ಯಾದವ್‌ನೊಂದಿಗೆ ಲಿವ್ ಇನ್ ರಿಲೇಷನ್‌ನಲ್ಲಿ ವಾಸಿಸುತ್ತಿದ್ದಳು. ಇಬ್ಬರ ನಡುವೆ ದೈಹಿಕ ಸಂಪರ್ಕ ಅಗಿತ್ತು. ಈ ನಡುವೆ ಅಜಯ್ ಸ್ನೇಹಿತ ಉದಯ್ ಶುಕ್ಲಾ ಎಂಬ ಮತ್ತೊಬ್ಬ ಯುವಕನ ಜೊತೆಗೂ ಚಮೇಲಿ ಸಂಪರ್ಕ ಹೊಂದಿದ್ದಳು. ಅವನನ್ನು ಸೆಕ್ಸ್‌ಗಾಗಿ ಪೀಡಿಸುತ್ತಿದ್ದಳು, ಉದಯ್ ಬೇರೆ ಮದುವೆಯಾಗಿದ್ದರೂ ತನ್ನನ್ನು ಮದುವೆಯಾಗುವಂತೆ ಆಕೆ ಒತ್ತಾಯಿಸುತ್ತಿದ್ದಳು. ಈ ವಿಚಾರಕ್ಕೆ ಉದಯ್-ಚಮೇಲಿ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು.

    ಕೊನೆಗೆ ಉದಯ್ ಶುಕ್ಲಾ ತನ್ನ ಸ್ನೇಹಿತ ಅಜಯ್‌ಗೆ ಈ ವಿಷಯ ತಿಳಿಸಿದಾಗ ಇಬ್ಬರೂ ಸೇರಿ ಆಕೆಯನ್ನ ಮುಗಿಸೋಕೆ ಪ್ಲಾನ್ ಮಾಡಿದರು. ಅದಕ್ಕಾಗಿ ಪ್ರೇಮಿಗಳ ದಿನವನ್ನೇ ಆಯ್ಕೆ ಮಾಡಿಕೊಂಡರು. ನಂತರ ಉದಯ್ ಶುಕ್ಲಾ ನೆಪಮಾಡಿಕೊಂಡು ಪದ್ಮಲಾ ಗ್ರಾಮದ ನದಿಯ ಬಳಿಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ಆ ವೇಳೆಗಾಗಲೇ ಅಜಯ್ ಅಲ್ಲಿ ಕಾಯುತ್ತಾ ಕುಳಿತಿದ್ದ. ಇಬ್ಬರೂ ಸೇರಿ ಬಣ್ಣ-ಬಣ್ಣದ ಮಾತುಗಳನ್ನಾಡಿ ನದಿಯ ಸೇತುವೆಯ ಮೇಲೆ ಕರೆತಂದರು. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಸೇತುವೆ ಕೆಳಗೆ ಎಸೆದಿದ್ದಾರೆ.

    ಇದೀಗ ಪ್ರಕರಣ ಬಯಲಾಗಿದೆ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗುಜರಾತ್ ಪೊಲೀಸರಿಂದ ಜಿಗ್ನೇಶ್ ಮೇವಾನಿ ಎನ್‍ಕೌಂಟರ್ ಸಂಚು? ವಿಡಿಯೋ ವೈರಲ್

    ಗುಜರಾತ್ ಪೊಲೀಸರಿಂದ ಜಿಗ್ನೇಶ್ ಮೇವಾನಿ ಎನ್‍ಕೌಂಟರ್ ಸಂಚು? ವಿಡಿಯೋ ವೈರಲ್

    ಅಹಮದಾಬಾದ್: ಗುಜರಾತ್ ಪೊಲೀಸರು ದಲಿತ ನಾಯಕ, ವಾಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‍ಕೌಂಟರ್ ಮಾಡಲು ಸಂಚು ರೂಪಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಹಿರಿಯ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆ ವಿಡಿಯೋಗಳಲ್ಲಿ ರಾಜಕಾರಣಿಯಂತೆ ಕಾಣಿಸುವ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊಡೆಯುತ್ತಿರುವ ದೃಶ್ಯ ಮೊದಲ ವಿಡಿಯೋದಲ್ಲಿದೆ. ಮತ್ತೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಷಯಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯವಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗುಜರಾತ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

    ವಿಡಿಯೋದಲ್ಲಿ ಏನಿದೆ?: ಪೊಲೀಸರು ತಂದೆಯಾಗಲು ಬಯಸುವರು, ಪೊಲೀಸರು ‘ಲಖೋಟ’ ಎಂದು ಕರೆಯುವರನ್ನು ಮತ್ತು ಪೊಲೀಸರ ವಿಡಿಯೋ ಮಾಡುವರ ಜೊತೆ ಪೊಲೀಸರು ಹೀಗೆ ವರ್ತಿಸಲಿದ್ದಾರೆ. ಲೆಕ್ಕ ಚುಕ್ತಾ ಮಾಡಲಾಗುವುದು ಎಂದು ಗುಜರಾತ್ ಪೊಲೀಸರು ಹೇಳಿರುವ ವಿಡಿಯೋವನ್ನು ವಾಟ್ಸ್‍ಆಪ್ ಗ್ರೂಪ್ ನಲ್ಲಿ ಅಹಮದಾಬಾದ್ ಗ್ರಾಮೀಣ ಡಿವೈಎಸ್‍ಪಿ ಆರ್.ಬಿ. ದೇವ್ ಧಾ ಹಂಚಿಕೊಂಡಿದ್ದ ವಿಡಿಯೋಗಳು ಶುಕ್ರವಾರ ವೈರಲ್ ಆಗಿದೆ.

    ಬೇರೆ ಗ್ರೂಪ್ ನಲ್ಲಿ ಬಂದ ಆ ವಿಡಿಯೋಗಳನ್ನು ಕಾಪಿ ಪೇಸ್ಟ್ ಮಾಡಿದ್ದೆನಷ್ಟೆ. ಅದು ನಾನೇ ಸ್ವತಃ ಕಳುಹಿಸಿದ ವಿಡಿಯೋಗಳಲ್ಲ. ಈಗ ಅದೇ ವಿಡಿಯೋಗಳು ಇತರೇ ಗ್ರೂಪ್ ನಲ್ಲಿ ಹರಿದಾಡುತ್ತಿದೆ.” ಎಂದು ಡಿವೈಎಸ್ ಪಿ ಆರ್.ಬಿ.ದೇವದ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಜಿಗ್ನೇಶ್‍ರವರು ಖಾಸಗಿ ವಾಹಿನಿಯೊಂದಕ್ಕೆ “ಇದು ಗಂಭೀರ ವಿಷಯವಾಗಿದೆ. ಎನ್‍ಕೌಂಟರ್‍ನಲ್ಲಿ ನನನ್ನು ಕೊಲ್ಲಬಹುದೆಂದು ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುವುದರ ಬಗ್ಗೆ ನಾನು ಡಿಜಿಪಿ, ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

    ಫೆಬ್ರವರಿ 18 ರಂದು ಈ ವಿಡಿಯೋ ವೈರಲ್ ಆಗಿತ್ತು. ಜಿಗ್ನೇಶ್‍ರವರು ಅಹ್ಮದಾಬಾದ್ ಬಾಂಧವನ್ನು ಪ್ರಾರಂಭಿಸುವ ಮೊದಲು ಇವರು ಬಂಧನಕ್ಕೊಳಗಾದ ಕಾರಣ ಮೇವಾನಿ ಪೊಲೀಸರು ಇಗೇ ಮಾತನಾಡಿದ್ದಾರೆಂದು ಶಂಕಿಸಲಾಗಿದೆ.