Tag: ಗಿಫ್ಟ್

  • ಚಳಿಗಾಲದಲ್ಲಿ ನಟಿ ಹರಿಪ್ರಿಯಾಗೆ ಅಮ್ಮನಿಂದ ಸ್ಪೆಷಲ್ ಗಿಫ್ಟ್

    ಚಳಿಗಾಲದಲ್ಲಿ ನಟಿ ಹರಿಪ್ರಿಯಾಗೆ ಅಮ್ಮನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಚಳಿಗಾಲದಲ್ಲಿ ನಟಿ ಹರಿಪ್ರಿಯಾಗೆ ಅವರ ಅಮ್ಮ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡಿದ್ದಾರೆ.

    ಬೆಳಗ್ಗೆ ಎದ್ದ ತಕ್ಷಣ ಮೈ ಜುಮ್ಮೆನಿಸುವ ಚಳಿ. ಹೊರಗಡೆ ಕಾಲು ಹೆಜ್ಜೆ ಇಡಲು ಸಹ ಆಗಲ್ಲ. ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡುವುದೇ ದೊಡ್ಡ ಸವಾಲು. ಅದರಲ್ಲೂ ಹೀರೋ, ಹಿರೋಯಿನ್‍ಗಳಿಂಗತೂ ತ್ವಚೆಯ ಆರೋಗ್ಯ ಕಾಪಾಡಿಕೊಂಡು ಸುಂದರವಾಗಿ ಕಾಣುವಂಥ ಡ್ರೆಸ್ ಹುಡುಕುವುದೇ ದೊಡ್ಡ ಸರ್ಕಸ್.

    ಈ ನಿಟ್ಟಿನಲ್ಲಿ ಕನ್ನಡದ ನಟಿ ಹರಿಪ್ರಿಯಾ ತಾಯಿ, ತಮ್ಮ ಮಗಳಾದ ಹರಿಪ್ರಿಯಾಗಾಗಿ ವಿಶೇಷವಾದ ಕಂಬಳಿಯೊಂದನ್ನು ತಯಾರಿಸಿದ್ದಾರೆ. ಮತ್ಸ್ಯಕನ್ಯೆ ರೀತಿ ಕಲರ್ ಫುಲ್ ಆಗಿರುವ ಹೊದಿಕೆಯನ್ನು ಕೈಯಾರೆ ಸಿದ್ಧ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಹರಿಪ್ರಿಯಾ ಅವರೇ ಟ್ವೀಟ್ ಮಾಆಡುವ ಮೂಲಕ ರೀವಿಲ್ ಮಾಡಿದ್ದಾರೆ.

    ಇದನ್ನು ಹೊದ್ದಿರುವ ಫೋಟೋವನ್ನು ಟ್ವೀಟ್ ಮಾಡಿರುವ ಹರಿಪ್ರಿಯಾ, ಈ ಚಳಿಗಾಲದಲ್ಲಿ ನಾನು ಈ ಮತ್ಸ್ಯಕನ್ಯೆ ಕಂಬಳಿಯಿಂದ ಮಾತ್ರ ಚಳಿಯನ್ನು ತಡೆಯಬಲ್ಲೆ. ಇದನ್ನು ತಯಾರಿಸಲು ತುಂಬ ಶ್ರಮ ಮತ್ತು ಸಮಯವನ್ನು ತೆಗದುಕೊಂಡಿದೆ. ಈ ಸೂಪರ್ ಕೂಲ್ ಮತ್ತು ವರ್ಣರಂಜಿತ ಕಂಬಳಿಯನ್ನು ನನಗಾಗಿ ಹೆಣೆದಿದ್ದಕ್ಕಾಗಿ ಅಮ್ಮನಿಗೆ ಧನ್ಯವಾದಗಳು. ಮಮ್ಮಿ ಈಸ್ ದ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ.

  • ವಾಸುಕಿಗೆ ಕೊನೆಯ ಚಪ್ಪಾಳೆ ಜೊತೆಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ವಾಸುಕಿಗೆ ಕೊನೆಯ ಚಪ್ಪಾಳೆ ಜೊತೆಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಕೊನೆಯ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ವಾಸುಕಿ ವೈಭವ್‍ಗೆ ಸಿಕ್ಕಿದೆ. ಕಿಚ್ಚನ ಚಪ್ಪಾಳೆ ಜೊತೆಗೆ ವಾಸುಕಿಗೆ ಸುದೀಪ್ ಅವರು ಉಡುಗೊರೆಯನ್ನು ನೀಡಿದ್ದಾರೆ.

    ‘ಬಿಗ್‍ಬಾಸ್ ಸೀಸನ್ 7’ ಶುರುವಾದಗಿನಿಂದ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ವಾರ ಪೂರ್ತಿ ಉತ್ತಮವಾಗಿ ಆಟವಾಡಿದ್ದ ಒಬ್ಬ ಸ್ಪರ್ಧಿಗೆ ಕಿಚ್ಚ ತಮ್ಮ ಚಪ್ಪಾಳೆಯನ್ನು ಕೊಡುತ್ತಾರೆ. ಅದೇ ರೀತಿ ಈ ವಾರ ಕೊನೆಯ ಕಿಚ್ಚನ ಚಪ್ಪಾಳೆ ವಾಸುಕಿ ವೈಭವ್‍ಗೆ ಸಿಕ್ಕಿದೆ.

    ಈ ವಾರ ಬಿಗ್‍ಬಾಸ್ ಟಾಸ್ಕ್ ಗಳು ತುಂಬಾ ಕಷ್ಟವಾಗಿತ್ತು. ಆದರೆ ನೀವು ತುಂಬಾ ಚೆನ್ನಾಗಿ ಆಟವಾಡಿದ್ದೀರಿ. ಅಲ್ಲದೇ ನಾಲ್ಕು ಪದಕಗಳನ್ನು ಗೆದ್ದು ಫಿನಾಲೆ ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಇದು ಈ ಸೀಸನ್‍ನ ಕೊನೆಯ ಚಪ್ಪಾಳೆ ಎಂದು ವಾಸುಕಿಗೆ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.

    ಕಳೆದ ಬಾರಿ ಚಪ್ಪಾಳೆ ಜೊತೆಗೆ ಸುದೀಪ್ ತಮ್ಮ ಜಾಕೆಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅಂದೇ ಮುಂದಿನ ವಾರ ಇನ್ನೊಂದು ಉಡುಗೊರೆ ಇರುತ್ತದೆ ಎಂದು ಮನೆ ಮಂದಿಗೆ ಹೇಳಿದ್ದರು. ಅದರಂತೆ ವಾಸುಕಿ ವೈಭವ್‍ಗೆ ಸುದೀಪ್ ಆಕರ್ಷಕವಾದ ಬೆಲ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇದಕ್ಕೂ ಮುನ್ನ ಮನೆಯ ಸದಸ್ಯರು ಕಿಚ್ಚನ ಚಪ್ಪಾಳೆ ಬಗ್ಗೆ ಮಾತನಾಡಿದರು. ಕಿಚ್ಚನ ಚಪ್ಪಾಳೆ ಸಿಕ್ಕಿದರೆ ಸಾಕು ನಾವು ಬಿಗ್‍ಬಾಸ್ ಗೆದ್ದಂತೆ. ಕಿಚ್ಚನ ಚಪ್ಪಾಳೆ ಸಿಕ್ಕ ಮರುದಿನವೇ ನಾವು ಮನೆಯಿಂದ ಹೊರಹೋದರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕುರಿ ಪ್ರತಾಪ್ ಹೇಳಿದರು. ಅದೇ ರೀತಿ ಮನೆಯ ಇತರ ಸದಸ್ಯರು ಕೂಡ, ನಿಮ್ಮ ಚಪ್ಪಾಳೆ ನಮ್ಮ ಪಾಲಿಗೆ ಅತ್ಯಮೂಲ್ಯ ಎಂದು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡರು. ಇದಕ್ಕೆ ಸುದೀಪ್ ಸಹ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

  • ಶೈನ್ ಮೇಲೆ ಮುನಿಸಿಕೊಂಡ ದೀಪಿಕಾ

    ಶೈನ್ ಮೇಲೆ ಮುನಿಸಿಕೊಂಡ ದೀಪಿಕಾ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ದೀಪಿಕಾ ದಾಸ್ ಅವರು ಶೈನ್ ಶೆಟ್ಟಿ ಮೇಲೆ ಮುನಿಸಿಕೊಂಡಿದ್ದಾರೆ.

    ತಾವು ಕೊಟ್ಟಿದ್ದ ಉಡುಗೊರೆಯನ್ನು ಶೈನ್ ಜೋಪಾನವಾಗಿ ನೋಡಿಕೊಂಡಿಲ್ಲ ಎಂದು ದೀಪಿಕಾ ಬೇಸರ ಮಾಡಿಕೊಂಡಿದ್ದಾರೆ. ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ಕಿಶನ್ ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಬಟ್ಟೆ ಸರಿಯಾಗಿ ಜೋಡಿಸಿಲ್ಲ ಎಂದು ಪ್ರಿಯಾಂಕಾರನ್ನು ಬೈಯುತ್ತಿದ್ದರು. ಆಗ ದೀಪಿಕಾಗೆ ತಾವು ಶೈನ್‍ಗೆ ಕೊಟ್ಟಿದ್ದ ಕಡಗ ಸಿಕ್ಕಿದೆ. ಅದನ್ನು ನೋಡಿದ ತಕ್ಷಣ ದೀಪಿಕಾ, ಇದನ್ನು ನಾನು ನಿಮಗೆ ಕೊಟ್ಟರೆ ಇಲ್ಲಿ ತಂದು ಬಿಸಾಡಿದ್ದೀರಾ ಎಂದು ಹೇಳಿ ಮುನಿಸಿಕೊಂಡಿದ್ದಾರೆ.

    ಆಗ ಶೈನ್, ಅದು ನನ್ನ ಫೇವರೆಟ್ ನಾನು ಬಿಸಾಡಿಲ್ಲ. ನನ್ನ ಪಕ್ಕದಲ್ಲಿಯೇ ಇಟ್ಟುಕೊಂಡಿದ್ದೆ. ಆದರೆ ಅದು ಹೇಗೆ ಇಲ್ಲಿಗೆ ಬಂದು ಗೊತ್ತಿಲ್ಲ ಎಂದು ದೀಪಿಕಾರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ದೀಪಿಕಾ ಅಡುಗೆ ಮನೆಗೆ ಹೋಗಿ ನೀರು ಕುಡಿಯುತ್ತಿದ್ದರು. ಆಗ ದೀಪಿಕಾರನ್ನು ಶೈನ್ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ.

    ದೀಪಿಕಾ ಕ್ಯಾಪ್ಟನ್ ರೂಮಿಗೆ ಹೋಗಬಹುದೆ ಎಂದು ಶೈನ್ ಬಳಿ ಅನುಮತಿ ಕೇಳಿದ್ದಾರೆ. ಆಗ ಶೈನ್ ಕ್ಯಾಪ್ಟನ್ ರೂಮಿಗೆ ಹೋಗಲು ಅನುಮತಿ ಕೇಳಬಾರದು. ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದ್ದಾರೆ. ಅದಕ್ಕೆ ದೀಪಿಕಾ, ಬೇರೆ ಅವರ ರೂಮ್ ಎಂದರೆ ನಾವು ಅನುಮತಿ ಕೇಳುತ್ತೇವೆ. ಅದನ್ನು ನಿರ್ಲಕ್ಷ್ಯ ಮಾಡಲ್ಲ, ಉಡಾಫೆ ತೋರಲ್ಲ, ಜೊತೆಗೆ ಅದಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ ಎಂದು ಪರೋಕ್ಷವಾಗಿ ತಾವು ನೀಡಿದ್ದ ಉಡುಗೊರೆಯನ್ನು ಬೇಜವಾಬ್ದಾರಿಯಿಂದ ಬಿಸಾಡಿದ್ದಕ್ಕೆ ಶೈನ್ ಮೇಲೆ ಬೇಸರ ಮಾಡಿಕೊಂಡು ಮಾತನಾಡಿದ್ದಾರೆ.

  • ಪ್ರಧಾನಿ ಮೋದಿಗೆ 21 ಪಾಠಗಳ ಪುಸ್ತಕ ಗಿಫ್ಟ್

    ಪ್ರಧಾನಿ ಮೋದಿಗೆ 21 ಪಾಠಗಳ ಪುಸ್ತಕ ಗಿಫ್ಟ್

    – ಸಚಿವ ಸುರೇಶ್ ಕುಮಾರ್ ಉಡುಗೊರೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಪ್ರವಾಸಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ತುಮಕೂರಿನಲ್ಲಿ ಸಿದ್ದಗಂಗಾ ಮಠ ಭೇಟಿ ನೀಡಿ ಕೃಷಿ ಸಮಾವೇಶದಲ್ಲಿ ಭಾಗವಹಿಸಿದರು. ಮೋದಿ ಅವರಿಗೆ ಕಾರ್ಯಕ್ರಮಗಳಲ್ಲಿ ವಿವಿಧ ಬಗೆಯ ಗಿಫ್ಟ್ ಗಳನ್ನು ನೀಡಲಾಗಿತ್ತು. ಸಿದ್ದಗಂಗಾ ಮಠದಲ್ಲಿ ಶ್ರೀಗಳ ಬೆಳ್ಳಿ ವಿಗ್ರಹ, ರುದ್ರಾಕ್ಷಿ ಮಾಲೆ ಗಿಫ್ಟ್ ಕೊಟ್ಟರೆ ಕೃಷಿ ಸಮಾವೇಶದಲ್ಲಿ ಹಸಿರು ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರವಿಸಿದರು. ಆದರೆ ನಿನ್ನೆ ಪ್ರಧಾನಿ ಮೋದಿಗೆ ಅವ್ರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.

    ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಚಿವರಾದ ಮೇಲೆ ವಿಶಿಷ್ಟ ಕೆಲಸಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಅವರನ್ನ ಸ್ವಾಗತ ಮಾಡಲು ಎಚ್‍ಎಎಲ್ ಏರ್ ಪೋರ್ಟಿಗೆ ತೆರಳಿದರು. ಈ ವೇಳೆ ಪ್ರಧಾನಿಗಳಿಗೆ ಇಸ್ರೇಲ್ ಲೇಖಕ ಯುವಲ್ ನೋವಾ ಹರಾರಿ ಬರೆದಿರುವ 21 ನೇ ಶತಮಾನದ 21 ಪಾಠಗಳು(21 Lessons for the 21st Century) ಅನ್ನುವ ಪುಸ್ತಕ ನೀಡಿ ಗೌರವಿಸಿದ್ದಾರೆ.

    ಪುಸ್ತಕ ಪಡೆದ ಪ್ರಧಾನಿಗಳು ಪುಸ್ತಕದ ಶೀರ್ಷಿಕೆಯನ್ನ ಕೆಲ ಕ್ಷಣ ನೋಡಿ ಸಂತೋಷ ಪಟ್ಟಿದ್ದಾರೆ. ನರೇಂದ್ರ ಮೋದಿ ಅವರು ಹಾರ-ತೂರಾಯಿ ಸಂಸ್ಕೃತಿಗೆ ವಿರೋಧಿಯಾಗಿದ್ದಾರೆ. ಎಲ್ಲೇ ಪ್ರವಾಸ ಮಾಡಿದರೂ ಇಂತಹ ಆಡಂಬರದ ಸ್ವಾಗತಕ್ಕೆ ವಿರೋಧ ಮಾಡುತ್ತಾರೆ. ಇದರ ಸೂಕ್ಷ್ಮತೆ ಅರಿತಿರುವ ಸಚಿವರು ಹೊಸ ವರ್ಷದ ಕೊಡುಗೆಯಾಗಿ ಪ್ರಧಾನಿಗಳಿಗೆ ಪುಸ್ತಕ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

  • ಸಾಕಿದ ಶ್ವಾನಕ್ಕೆ ಭರ್ಜರಿ ಹುಟ್ಟುಹಬ್ಬ – 500 ಮಂದಿಗೆ ಭೋಜನ

    ಸಾಕಿದ ಶ್ವಾನಕ್ಕೆ ಭರ್ಜರಿ ಹುಟ್ಟುಹಬ್ಬ – 500 ಮಂದಿಗೆ ಭೋಜನ

    -ಐದು ತೊಲದ ಚಿನ್ನದ ಸರ ಗಿಫ್ಟ್

    ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಸಾಕಿದ ಶ್ವಾನಕ್ಕೆ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ.

    ಶರಣು ಪತ್ರಿ ಎಂಬಾತ ತಮ್ಮ ಸಾಕು ಶ್ವಾನ ಟೈಗರಿನ 2ನೇ ವರ್ಷದ ಹುಟ್ಟುಹಬ್ಬವನ್ನು ಇದೇ ತಿಂಗಳ 28 ರಂದು ಭರ್ಜರಿಯಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬದ ನಿಮಿತ್ತ 500 ಜನರಿಗೆ ಭಾರೀ ಭೋಜನವನ್ನು ಕೂಡ ಹಾಕಿಸಿದ್ದಾರೆ.

    ಅಷ್ಟೇ ಅಲ್ಲದೇ ಹುಟ್ಟುಹಬ್ಬದ ಅಂಗವಾಗಿ ಟೈಗರ್ ಗೆ ಐದು ತೊಲದ ಚಿನ್ನದ ಸರವನ್ನ ಶರಣು ಹಾಕಿದ್ದಾರೆ. ಟೈಗರ್ ಶ್ವಾನಕ್ಕೆ ಆರತಿ ಬೆಳಗಿ, ಐದು ಕೇಜಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಟೈಗರ್ ಹುಟ್ಟುಹಬ್ಬಕ್ಕೆ ಬಂದ ಜನರಿಗೆ ಊಟಕ್ಕಾಗಿ ಪಾಯಸ(ಸಿಹಿತಿಂಡಿ), ಪೂರಿ, ಭಾಜಿ, ರೈಸ್, ಪಾಪಡ್ ಸೇರಿದಂತೆ ವಿವಿಧ ರೀತಿಯ ಅಡುಗೆ ಮಾಡಿಸಲಾಗಿತ್ತು. ಹುಟ್ಟುಹಬ್ಬಕ್ಕೆ ಬಂದ ಜನರು ಶ್ವಾನಕ್ಕೆ ಹಾರೈಸಿ ಭೋಜನ ಸವಿದರು. ಶರಣು ವೃತ್ತಿಯಲ್ಲಿ ಬಿಎಂಟಿಸಿ ನೌಕರರಾಗಿದ್ದಾರೆ.

  • ಡಾಲಿ ಧನಂಜಯ್‍ಗೆ 10 ರೂಪಾಯಿ ಕೊಟ್ಟ ಪುಟ್ಟ ಪೋರ

    ಡಾಲಿ ಧನಂಜಯ್‍ಗೆ 10 ರೂಪಾಯಿ ಕೊಟ್ಟ ಪುಟ್ಟ ಪೋರ

    ಬೆಂಗಳೂರು: ನಟ ಡಾಲಿ ಧನಂಜಯ್ ಅವರಿಗೆ ಪುಟ್ಟ ಬಾಲಕನೋರ್ವ 10 ರೂಪಾಯಿ ಗಿಫ್ಟ್ ಕೊಟ್ಟಿದ್ದು, ಇದನ್ನು ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಹೌದು ನಟ ಡಾಲಿ ಧನಂಜಯ್ ಅವರು ಇತ್ತೀಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕನೋರ್ವ ಧನಂಜಯ್ ಅವರ ಬಳಿ ಡೈಲಾಗ್ ಹೇಳಿಸಿ ನಂತರ ಅವರಿಗೆ ಹತ್ತು ರೂಪಾಯಿಯನ್ನು ಗಿಫ್ಟ್ ಆಗಿ ನೀಡಿದ್ದಾನೆ.

    https://www.instagram.com/p/B6pulycFDTx/

    ಈ ವಿಚಾರವಾಗಿ ಹುಡುಗನ ಫೋಟೋ ಮತ್ತು ಆ ಹತ್ತು ರೂಪಾಯಿ ನೋಟನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಧನಂಜಯ್ ಅವರು, ತಾನು ಡೈಲಾಗ್ ಹೇಳಿ ನನ್ನ ಬಳಿಯೂ ಡೈಲಾಗ್ ಹೇಳಿಸಿ ಗಿಫ್ಟ್ ಕೊಟ್ಟ ಹುಬ್ಬಳ್ಳಿ ಹುಡುಗ. ನಿನ್ನ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದಗಳು. ಒಂದು ರೂಪಾಯಿ ಕೊಡದೇ ವರ್ಷಾನುಗಟ್ಟಲೇ ಕಲಾವಿದರನ್ನು ದುಡಿಸಿಕೊಳ್ಳುವರ ಮಧ್ಯೆ ನಿಂದು ದೊಡ್ಡ ಮನಸ್ಸು ಕಣ್ಲ ಎಂದು ಬರೆದುಕೊಂಡಿದ್ದಾರೆ.

    ಈಗ ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇನ್ನೂ ಕೆಲವರು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದು, ಒಬ್ಬ ನಿಜವಾದ ಕಲಾವಿದನಿಗೆ ಇದಕ್ಕಿಂತ ದೊಡ್ಡ ಬಹುಮಾನ ಬೇರೆ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಕಲಿಯುಗದಲ್ಲಿ ನಿಷ್ಕಲ್ಮಶ ಹೃದಯ, ಮನಸ್ಸು ಮಕ್ಕಳಲ್ಲಿ ಮಾತ್ರ ಇರುತ್ತದೆ. ಆ ಮಕ್ಕಳಲ್ಲಿ ದೇವರು ಇರುತ್ತಾರೆ. ಅಲ್ಲಿಗೆ ನಿಮಗೆ ದೇವರು ಕೊಟ್ಟ ಉಡುಗೊರೆ. ನಿಮ್ಮ ಮನಸ್ಸು ಕೂಡ ಮಗುವಿನ ಮನಸ್ಸು ಹೃದಯ ಶ್ರೀಮಂತಿಕೆ ಜಾಸ್ತಿ ಇದೆ ಎಂದು ಕಮೆಂಟ್ ಮಾಡಿದ್ದಾರೆ.

  • ಸೋನಿಯಾ ಹುಟ್ಟುಹಬ್ಬಕ್ಕೆ ಸೋಲಿನ ಗಿಫ್ಟ್ ಕೊಟ್ಟ ಕೆಪಿಸಿಸಿ

    ಸೋನಿಯಾ ಹುಟ್ಟುಹಬ್ಬಕ್ಕೆ ಸೋಲಿನ ಗಿಫ್ಟ್ ಕೊಟ್ಟ ಕೆಪಿಸಿಸಿ

    ನವದೆಹಲಿ: ಹುಟ್ಟುಹಬ್ಬದ ಖುಷಿಯಲ್ಲಿದ್ದ ಎಐಸಿಸಿ ಅಧಿನಾಯಕಿ ಸೋನಿಯಗಾಂಧಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸೋಲಿನ ಗಿಫ್ಟ್ ನೀಡಿದ್ದಾರೆ.

    ಉಪ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ ಕೇವಲ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಲ್ಪ ತೃಪ್ತಿ ಪಟ್ಟುಕೊಂಡಿದೆ. ಬಿಜೆಪಿಗೂ ಮುನ್ನ ಉಪಚುನಾವಣೆಗೆ ಸಿದ್ಧವಾಗಿದ್ದ ಕಾಂಗ್ರೆಸ್ ಸಾಕಷ್ಟು ತಂತ್ರಗಳನ್ನು ಮಾಡಿತ್ತು. ಅಲ್ಲದೇ ಹೋದ ಕಡೆಯಲ್ಲ ಅನರ್ಹ ಶಾಸಕರಿಗೆ ಪಾಠ ಕಲಿಸಬೇಕು ಅವರನ್ನು ಸೋಲಿಸುವುದು ನಮ್ಮ ಆದ್ಯತೆ ಎನ್ನುವಂತೆ ಸಿದ್ದರಾಮಯ್ಯ ಭಾಷಣ ಮಾಡಿದ್ದರು.

    ಚುನಾವಣಾ ನೇತೃತ್ವದ ಹೊತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದ್ದರು. ತಮ್ಮ ಬೆಂಬಲಿಗರು ಕಟ್ಟಾ ಶಿಷ್ಯರಿಗೆ ಟಿಕೆಟ್ ಕೊಡಿಸುವ ಮೂಲಕ ಕನಿಷ್ಠ 5-6 ಸೀಟುಗಳನ್ನು ಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಸಿದ್ದರಾಮಯ್ಯ ತಂತ್ರಗಾರಿಕೆ ಸಂಪೂರ್ಣ ಉಲ್ಟಾ ಆಗಿದ್ದು ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸೋನಿಯಗಾಂಧಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ನಾಯಕರು ಸೋಲಿನ ಗಿಫ್ಟ್ ಕೊಟ್ಟಂತಾಗಿದೆ.

    ದೇಶದಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ಸರಣಿ ದೌರ್ಜನ್ಯಗಳ ಹಿನ್ನೆಲೆ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸೋನಿಯಗಾಂಧಿ ನಿರಾಕರಿಸಿದ್ದಾರೆ.

  • ಡಿಕೆಶಿ ಸ್ಟೈಲ್‍ಗೆ ಮಹಿಳಾ ಅಭಿಮಾನಿ ಫಿದಾ-ಫೋಟೋ ಫ್ರೇಮ್ ಗಿಫ್ಟ್

    ಡಿಕೆಶಿ ಸ್ಟೈಲ್‍ಗೆ ಮಹಿಳಾ ಅಭಿಮಾನಿ ಫಿದಾ-ಫೋಟೋ ಫ್ರೇಮ್ ಗಿಫ್ಟ್

    ಬೆಂಗಳೂರು: ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಸಿಲುಕಿ ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗಡ್ಡದ ಸ್ಟೈಲ್‍ಗೆ ಸಿಕ್ಕಾಪಟ್ಟೆ ಜನ ಫ್ಯಾನ್ ಆಗಿಬಿಟ್ಟಿದ್ದಾರೆ. ಈಗ ಅವರ ಹೊಸ ಸ್ಟೈಲ್‍ಗೆ ಮಹಿಳಾ ಅಭಿಮಾನಿಯೊಬ್ಬರು ಫೋಟೋ ಫ್ರೇಮ್ ಉಡುಗೊರೆಯಾಗಿ ನೀಡಿದ್ದಾರೆ.

    ಡಿಕೆಶಿ ಅವರ ಗಡ್ಡದ ಸ್ಟೈಲ್‍ಗೆ ಖುದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೆಚ್ಚುಗೆಯ ನೋಟ ಬೀರಿದ್ದರು. ಇದೀಗ ಡಿಕೆಶಿ ಮನೆಗೆ, ಗಡ್ಡ ಹಾಗೂ ಸ್ಟೈಲ್ ಆಗಿ ಕನ್ನಡಕ ಹಾಕಿರುವ ಫೋಟೋ ಪ್ರೇಮ್ ಎಂಟ್ರಿಯಾಗಿದೆ. ವಿಶೇಷ ಅಂದರೆ ಡಿಕೆಶಿ ಅವರಿಗೆ ಈ ಫೋಟೋ ಪ್ರೇಮ್‍ನ್ನು ಗಿಫ್ಟ್ ಮಾಡಿದ್ದು ಮಹಿಳಾ ಅಭಿಯಾನಿ. ಇವರು ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು, ಡಿಕೆಶಿ ಸ್ಟೈಲ್‍ಗೆ ಫಿದಾ ಆಗಿ ಈ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಡಿಕೆಶಿ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಫಿದಾ

    ಈ ಫೋಟೋ ನೋಡಿ ಖುಷಿಯಾದ ಡಿಕೆಶಿ ಅವರು, ಈಗ ಇದನ್ನು ಕಚೇರಿಯ ಮುಂಭಾಗದಲ್ಲಿ ಹಾಕುವಂತೆ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ. ಸದ್ಯ ಡಿಕೆಶಿ ಅವರ ಗಡ್ಡದ ಸ್ಟೈಲ್ ಫೋಟೋ ಕಚೇರಿಯಲ್ಲಿ ಫುಲ್ ಹವಾ ಎಬ್ಬಿಸಿದೆ.

  • ಪ್ರಿಯತಮೆಯರಿಗೆ ದೀಪಾವಳಿ ಗಿಫ್ಟ್ ಕೊಡಿಸಲು ಕಳ್ಳತನ ಮಾಡಿದ ಯುವಕರು

    ಪ್ರಿಯತಮೆಯರಿಗೆ ದೀಪಾವಳಿ ಗಿಫ್ಟ್ ಕೊಡಿಸಲು ಕಳ್ಳತನ ಮಾಡಿದ ಯುವಕರು

    ನವದೆಹಲಿ: ತಮ್ಮ ಗೆಳತಿಯರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಲು ಯುವಕರಿಬ್ಬರು ಕಳ್ಳತನಕ್ಕೆ ಕೈಹಾಕಿ ಪೊಲೀಸರ ಅತಿಥಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಂಧಿತರನ್ನು ಶಾಸ್ತ್ರಿ ನಗರ ದೆಹಲಿ ನಿವಾಸಿ ಶಶಾಂಕ್ ಅಗರ್ವಾಲ್ (32) ಮತ್ತು ಶಕುರ್ಬಸ್ತಿ ನಿವಾಸಿ ಅಮರ್ ಸಿಂಗ್ (29) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಗೆಳತಿಯರಿಗೆ ದುಬಾರಿ ಉಡುಗೊರೆ ಕೊಡಿಸಲು ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬಳಿಯಿಂದ ದರೋಡೆ ಮಾಡಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಗುರುವಾರ ಡೆಲಿವರಿ ಹುಡುಗನೊಬ್ಬ ಪಂಜಾಬಿ ಬಾಗ್ ಪ್ರದೇಶಕ್ಕೆ ಪಾರ್ಸೆಲ್ ತಲುಪಿಸಲು ಬಂದಿದ್ದಾಗ ಈ ಇಬ್ಬರು ಅವನಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಪಾರ್ಸೆಲ್ ಬ್ಯಾಗ್‍ನಲ್ಲಿ ದುಬಾರಿ ಮೊಬೈಲ್ ಫೋನ್‍ಗಳು ಸೇರಿದಂತೆ ಹಲವಾರು ಉಡುಗೊರೆ ವಸ್ತುಗಳು ಇದ್ದವು ಎಂದು ಹೇಳಿದ್ದಾರೆ.

    ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಮೊದಲು ಯುವಕರು ಆನ್‍ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದು, ಇಬ್ಬರಿಗೂ ದೀಪಾವಳಿ ಸಮಯದಲ್ಲಿ ಜನ ಜಾಸ್ತಿ ಆನ್‍ಲೈನ್ ಅಲ್ಲಿ ಶಾಪಿಂಗ್ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಜನರು ಆಫರ್ ಇರುವ ಕಾರಣ ದುಬಾರಿ ಮೊಬೈಲ್ ಖರೀದಿಸುತ್ತಾರೆ ಎಂದು ತಿಳಿದಿತ್ತು. ಆದ್ದರಿಂದ ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬ್ಯಾಗ್ ಕಳವು ಮಾಡಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಈಗ ಕಳವು ಮಾಡಿದ ಬ್ಯಾಗನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಗೆಳತಿಯರಿದ್ದು ಅವರು ದೀಪಾವಳಿ ಹಬ್ಬಕ್ಕೆ ಐಫೋನ್-11 ಗಿಫ್ಟ್ ಕೇಳಿದ್ದಾರೆ. ಅವರಿಗೆ ಉಡುಗೊರೆ ನೀಡಲು ಈ ರೀತಿ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಕಲಿಯುಗದ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಪುತ್ರನಿಗೆ ಆನಂದ್ ಮಹೀಂದ್ರಾರಿಂದ ಭರ್ಜರಿ ಗಿಫ್ಟ್

    ಕಲಿಯುಗದ ಶ್ರವಣಕುಮಾರ ಖ್ಯಾತಿಯ ಮೈಸೂರಿನ ಪುತ್ರನಿಗೆ ಆನಂದ್ ಮಹೀಂದ್ರಾರಿಂದ ಭರ್ಜರಿ ಗಿಫ್ಟ್

    ಬೆಂಗಳೂರು: ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡುತ್ತಿರುವ ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ಹಾಗೂ ತಾಯಿ ರತ್ನಮ್ಮ ಅವರ ಜರ್ನಿಯ ಕಥೆ ಮಹೀಂದ್ರ ಸಂಸ್ಥೆಯ ಆನಂದ್ ಮಹೀಂದ್ರಾ ವರೆಗೂ ತಲುಪಿದ್ದು, ಅಮ್ಮ-ಮಗನ ಈ ವರದಿಯನ್ನು ಕೇಳಿದ ಆನಂದ್ ಮಹೀಂದ್ರಾ ಅವರು ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದಾರೆ.

    ವೃದ್ಧ ತಂದೆ, ತಾಯಿಯನ್ನು ಭಾರವೆಂದು ವೃದ್ಧಾಶ್ರಮಗಳಿಗೆ ದಾಖಲು ಮಾಡುತ್ತಿರುವ ಮಕ್ಕಳ ನಡುವೆ ಕೃಷ್ಣ ಕುಮಾರ್ ಅವರ ಈ ಕಾರ್ಯ ಹಲವರ ಮೆಚ್ಚುಗೆಗೆ ಕಾರಣವಾಗಿತ್ತು. ಸದ್ಯ ಆನಂದ್ ಮಹೀಂದ್ರಾ ಅವರು ಕೂಡ ಕೃಷ್ಣ ಕುಮಾರ್ ಅವರ ಕಾರ್ಯಕ್ಕೆ ಫಿದಾ ಆಗಿದ್ದು, ತಾಯಿ ಹಾಗೂ ದೇಶದ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ಅವರಿಗೆ ಮಹೀಂದ್ರ ಕೆಯುವಿ 100 ಎನ್‍ಎಕ್ಸ್‍ಟಿ ಕಾರನ್ನು ಗಿಫ್ಟ್ ನೀಡುವುದಾಗಿ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.

    ಕೃಷ್ಣ ಕುಮಾರ್ ಅವರು ಮಾಧ್ಯಮವೊಂದಕ್ಕೆ ತಮ್ಮ ಕಾರ್ಯದ ಕುರಿತು ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಟ್ವಿಟ್ಟಗರೊಬ್ಬರು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವಿಟ್ಟನ್ನು ರಿಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ನನ್ನನ್ನು ಸಂಪರ್ಕ ಮಾಡಿದರೆ ಕಾರನ್ನು ಗಿಫ್ಟ್ ನೀಡುವುದಾಗಿ ತಿಳಿಸಿದ್ದು, ಮುಂದಿನ ತಮ್ಮ ಪ್ರಯಾಣವನ್ನು ಕಾರಿನಲ್ಲಿ ನಡೆಸಬಹುದು ಎಂದು ಹೇಳಿದ್ದಾರೆ.

    ಯಾರು ಕೃಷ್ಣ ಕುಮಾರ್: ಮೂಲತಃ ಮೈಸೂರಿನವರಾಗಿದ್ದು, ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ತೀರ್ಥಯಾತ್ರೆ ಆರಂಭಿಸಿದ್ದಾರೆ.

    ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಪುದುಚೇರಿ, ಸೇರಿದಂತೆ ನೇಪಾಳ, ಮ್ಯಾನ್ಮಾರ್ ಸೇರಿದಂತೆ ಹಲವು ಸ್ಥಳಗಳಿಗೆ ಸ್ಕೂಟರ್ ಮೇಲೆಯೇ ಭೇಟಿ ನೀಡಿದ್ದಾರೆ.

    ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಅವರಿಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದಿದ್ದಾರೆ.

    ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ಈ ಹಿಂದೆ ತಿಳಿಸಿದ್ದರು.

    ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.