Tag: ಗಿಡ

  • ಹುಟ್ಟುಹಬ್ಬದಂದು ಧನ್ವಂತರಿ ಹೋಮ – ಬಂಡಿ ಮಹಾಕಾಳಿ ದೇವಸ್ಥಾನಕ್ಕೆ ಸೃಜನ್ ರಿಂದ ವಿಶೇಷ ಉಡುಗೊರೆ

    ಹುಟ್ಟುಹಬ್ಬದಂದು ಧನ್ವಂತರಿ ಹೋಮ – ಬಂಡಿ ಮಹಾಕಾಳಿ ದೇವಸ್ಥಾನಕ್ಕೆ ಸೃಜನ್ ರಿಂದ ವಿಶೇಷ ಉಡುಗೊರೆ

    ಬೆಂಗಳೂರು: ಇಂದು ನಟ ಸೃಜನ್ ಲೋಕೇಶ್ 38ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

    ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸೃಜನ್ ಮತ್ತು ಪತ್ನಿ ಗ್ರೀಷ್ಮಾ ಧನ್ವಂತರಿ ಹೋಮವನ್ನು ಮಾಡಿದ್ದಾರೆ. ಈ ಹೋಮದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.

    ಈ ಹಿಂದೆ ಈ ದೇವಸ್ಥಾನಕ್ಕೆ ಸೃಜನ್ ಬಂದಿದ್ದರು. ಆಗ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆಗ ಸೃಜನ್ ಬಂಡಿ ಮಹಾಕಾಳಿ ದೇವಸ್ಥಾನದ ಪೂರ್ವ ದಿಕ್ಕಿನ ಮಹಾದ್ವಾರವನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಅದರಂತೆಯೇ ಇಂದು ಸೃಜನ್ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯದ ದ್ವಾರದ ಉದ್ಘಾಟನೆಯನ್ನು ಮಾಡಿದ್ದಾರೆ. ವಿಶೇಷ ಎಂದರೆ ಈ ದ್ವಾರಕ್ಕೆ ನಟ ದರ್ಶನ್ ಪೇಂಟಿಂಗ್ ಮಾಡಿಸುವುದಾಗಿ ಒಪ್ಪಿಕೊಂಡಿದ್ದರು. ಅವರು ಕೂಡ ಸೃಜನ್ ಬರ್ತ್ ಡೇ ದಿನದೊಳಗೆ ದ್ವಾರದ ಉದ್ಘಾಟನೆ ಮಾಡಬೇಕು ಅಷ್ಟರಲ್ಲಿ ಬೇಗ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದರು.

    ಹೋಮ ಮಾಡಿ, ದೇವಾಲಯದ ದ್ವಾರವನ್ನು ಉದ್ಘಾಟನೆ ಮಾಡಿ ಬಳಿಕ ಸೃಜ ಮತ್ತು ಗಜ ಎಂಬ ಹೆಸರಲ್ಲಿ ಸಾಂಕೇತಿಕವಾಗಿ ದೇವಸ್ಥಾನದ ಹಿಂಬದಿಯಲ್ಲಿ ಶ್ರೀ ಗಂಧದ ಎರಡು ಗಿಡವನ್ನು ನೆಟ್ಟಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸೃಜನ್, ನನಗೆ ಬಂಡಿ ಮಹಾಕಾಳಿ ದೇವಸ್ಥಾನದ ಮೇಲೆ ತುಂಬಾ ನಂಬಿಕೆ ಇದೆ. ಬಂಡಿ ಮಹಾಕಾಳಿ ದೇವಿಯನ್ನು ನಾನು ನಂಬಿದ್ದೇನೆ. ನಾನು ಅಂದುಕೊಂಡಿದ್ದೆಲ್ಲ ಇಲ್ಲಿ ಬಂದು ಹೋದ ಮೇಲೆ ಸಲೀಸಾಗಿ ಆಗಿದೆ. ಕೆಲ ದಿನದ ಹಿಂದೆ ಬಂದಾಗ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತಿತ್ತು. ಅವಾಗ ನಾನು ಪೂರ್ವ ದ್ವಾರ ಮಾಡಿಕೊಡುವುದಾಗಿ ಹೇಳಿದ್ದೆ. ಹೀಗಾಗಿ ಈ ಮಹಾತ್ಕಾರ್ಯ ನಡೆದಿದೆ ಎಂದು ಹೇಳಿದ್ದಾರೆ.

    ದರ್ಶನ್ ಕೂಡ ಇದಕ್ಕೆ ಕೈ ಜೋಡಿಸಿದ್ದು ಬಹಳ ಖುಷಿ ಇದೆ. ದರ್ಶನ್ ಕೂಡ ಈ ದೇವಸ್ಥಾನಕ್ಕೆ ಬಂದರೆ ರಿಫ್ರೆಶ್ ಆಗುತ್ತಾರೆ. ಬರ್ತ್ ಡೇ ಹಿನ್ನೆಲೆಯಲ್ಲಿ ಸುಮಾರು 500 ಗಿಡಗಳನ್ನ ಉಚಿತವಾಗಿ ನೀಡುತ್ತಿದ್ದೇವೆ. ದರ್ಶನ್ ಕೂಡ ಗಿಡಗಳನ್ನು ನೀಡಿದ್ದಾರೆ. ನಗರದಲ್ಲಿ ಮರಗಳು ಕಮ್ಮಿ ಆಗಿದೆ. ಇದರಿಂದ ತುಂಬಾ ಬೇಸರ ಮೂಡಿಸಿದೆ. ಮನೆಗೆ ಹೋದ ಮೇಲೆಯೂ ಅಕ್ಕ ಪಕ್ಕದ ಮನೆಯವರಿಗೆಲ್ಲ ಸ್ವತಃ ನಾವೇ ಹೋಗಿ ಗಿಡಗಳನ್ನ ಹಂಚಲಿದ್ದೇವೆ ಎಂದು ತಿಳಿಸಿದರು.

    ಲೋಕೇಶ್ ಪ್ರೊಡಕ್ಷನ್ ನಿಂದ ಈ ವರ್ಷದಿಂದ ಸಾಕಷ್ಟು ಕೆಲಸಗಳು ನಡೆಯಲಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ಇದೆ. ಹಾಗೆ ಸ್ಟಾರ್ ನಟರ ಸಿನಿಮಾಗಳು ಕೂಡ ಈ ಪ್ರೊಡಕ್ಷನ್ ಹೌಸ್ ನಿಂದ ನಡೆಯಲಿದೆ. ಸದ್ಯದಲ್ಲಿಯೇ ಖಾಸಗಿ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ನಡೆಯಲಿದೆ. ಅದರಿಂದ ಸಾಕಷ್ಟು ಜನರಿಗೆ ಸಹಾಯ ಆಗಲಿದೆ. ದರ್ಶನ್ ಜೊತೆ ಸಿನಿಮಾ ಆದಷ್ಟು ಬೇಗ ಮಾಡುತ್ತೇನೆ. ದರ್ಶನ್ ನನ್ನ ಜೋತೆಯಲ್ಲಿ ಇರುವುದೆ ನನ್ನ ಉಡುಗೊರೆ ಎಂದು ಸಂತಸದಿಂದ ಹೇಳಿದರು.

  • ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮಂಗಳೂರು: ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಎಂಬವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ ಅನೇಕ ಮರದ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ದೃಷ್ಠಿಯಿಂದ ದಂಪತಿಯು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಈ ವೇಳೆ ಅತಿಥಿಗಳಿಗೆ ಗಿಡಗಳನ್ನು ಕೊಟ್ಟು ಪೋಷಿಸಲು ಪ್ರೇರೆಪಿಸಿದ್ದಾರೆ. ಇವರ ಈ ಕಾರ್ಯವು ಪರಿಸರ ರಕ್ಷಣೆಗೆ ಮಾದರಿಯಾಗಿದೆ. ಮದುವೆಗೆ ಬಂದ ಸಾವಿರಾರು ಅತಿಥಿಗಳು ಗಿಡಗಳನ್ನು ಹೊತ್ತೊಯ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ