Tag: ಗಾನವಿ ಲಕ್ಷ್ಮಣ್

  • ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾ ಫೆ.10ಕ್ಕೆ ಒಟಿಟಿಗೆ

    ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾ ಫೆ.10ಕ್ಕೆ ಒಟಿಟಿಗೆ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ. ಶಿವಣ್ಣ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾಗಿದೆ ಈ ಚಿತ್ರ. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ 125ನೇ ಸಿನಿಮಾ ಒಂದು ಕಡೆಯಾದ್ರೆ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಯೊಂದಿಗೆ ತೆರೆಕಂಡ ಈ ಚಿತ್ರ ದೊಡ್ಮನೆ ಅಭಿಮಾನಿಗಳ ಮನಗೆದ್ದಿತ್ತು.

    ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ವೇದ’ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ಎ. ಹರ್ಷ ಹಾಗೂ ಶಿವಣ್ಣ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದು ಹಿಟ್ ಲಿಸ್ಟ್ ಸೇರಿದೆ. ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲು ‘ವೇದ’ ಚಿತ್ರ ರೆಡಿಯಾಗಿದ್ದು ಫೆಬ್ರವರಿ 10ಕ್ಕೆ ಜೀ5ನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

    ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ‌ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಚಂದನವನ ವಿಮರ್ಶಕರ ಪ್ರಶಸ್ತಿ: ರಾಜ್ ಬಿ ಶೆಟ್ಟಿ ಅತ್ಯುತ್ತಮ ನಟ, ಗಾನವಿ ಲಕ್ಷ್ಮಣ್ ನಟಿ, ಉಳಿದ ಪ್ರಶಸ್ತಿ ವಿವರ

    ಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು 3ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022 ರಲ್ಲಿ ತಮ್ಮ ಗರುಡ ಗಮನ ವೃಷಬ ವಾಹನ ಚಿತ್ರಕ್ಕಾಗಿ ಪ್ರಶಸ್ತಿಗಳ ಬೇಟೆಯಾಡಿದ್ದಾರೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಮೂರು ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ.

    ಹೀರೋ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿಸಿದ ಮೊದಲ ಚಿತ್ರಕ್ಕೆ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವುದರ ಮೂಲಕ ಸಂಭ್ರಮಿಸಿದ್ದಾರೆ. ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದ ಪುಗ್ಸಟ್ಟೆ ಲೈಫ್ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದ್ದು, ಮೊದಲ ಸಿನಿಮಾದ ನಿರ್ದೇಶನಕಕ್ಕಾಗಿ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರು ಪುಕ್ಸಟ್ಟೆ ಲೈಫು ಚಿತ್ರಕ್ಕಾಗಿ ಪ್ರಶಸ್ತಿ ಪಡೆದದ್ದು ವಿಶೇಷ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಪ್ರವೀಣ್ ಶ್ರೀಯಾನ್ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಗೆಲ್ಲುವ ಮೂಲಕ GGVV ಗಾಗಿ ನಾಲ್ಕನೇ ಪ್ರಶಸ್ತಿ ಗಳಿಸಿದರು. ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. (ಅತ್ಯುತ್ತಮ ಸಂಗೀತ ಸಂಯೋಜಕ – ಅರ್ಜುನ್ ಜನ್ಯ, ಅತ್ಯುತ್ತಮ ಗೀತರಚನೆಕಾರ – ಕಣ್ಣು ಹೊಡೆಯಾಕೆ ಹಾಡಿಗೆ ಯೋಗರಾಜ್ ಭಟ್, ಸುಧಾಕರ್ ಎಸ್ ರಾಜ್ ಅತ್ಯುತ್ತಮ ಛಾಯಾಗ್ರಹಣ ಮತ್ತು ಭೂಷಣ್ ಅತ್ಯುತ್ತಮ ನೃತ್ಯ ಸಂಯೋಜನೆ)ಈ ನಾಲ್ಕು ಪ್ರಶಸ್ತಿಗಳು ರಾಬರ್ಟ್ ಚಿತ್ರಕ್ಕಾಗಿ ಬಂದಿದ್ದು ಮತ್ತೊಂದು ವಿಶೇಷ.

    ಎ.ಹರ್ಷ ನಿರ್ದೇಶನದ ಭಜರಂಗಿ 2 ಮತ್ತು ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲು ಸಿನಿಮಾ ಸಲಗ ಮತ್ತು ಧನಂಜಯ್ ನಟನೆಯ ಬಡವ ರಾಸ್ಕಲ್ ತಲಾ ಮೂರು ಪ್ರಶಸ್ತಿ ಗಳಿಸಿವೆ. ಭಜರಂಗಿ 2 ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮ VFX (ಶಿಬೀಶ್ ಮತ್ತು ಇಳಂಗೋವ್), ಅತ್ಯುತ್ತಮ ಸಾಹಸ ನಿರ್ದೇಶಕ (ರವಿ ವರ್ಮ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ರವಿ ಸಂತೆಹೈಕ್ಲು) ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಬಡವ ರಾಸ್ಕಲ್ ಚಿತ್ರವು ಅತ್ಯುತ್ತಮ ಪೋಷಕ ನಟಿ ಸ್ಪರ್ಶ ರೇಖಾ  ಮತ್ತು ಅತ್ಯತ್ತಮ ಪೋಷಕ ನಟ ರಂಗಾಯಣ ರಘು ಹಾಗೂ ಇದೇ ಚಿತ್ರಕ್ಕಾಗಿ ವಾಸುಕಿ ವೈಭವ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು. ನಟ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ (ಮಾಸ್ತಿ), ಅತ್ಯುತ್ತಮ ಬಿಜಿಎಂ (ಚರಣ್ ರಾಜ್) ಮತ್ತು ಅತ್ಯುತ್ತಮ ಗಾಯಕಿಯಾಗಿ ಗಿರಿಜಾ ಅವರಿಗೆ ಪ್ರಶಸ್ತಿ ಬಂದಿವೆ.

    ಡಾ.ರಾಘವೇಂದ್ರ ಬಿಎಸ್ ಅವರು ಪ್ರೇಮಂ ಪೂಜ್ಯಂ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರೆ, ಅರ್ಜುನ್ ಗೌಡ ಚಿತ್ರದ ಹಾಡಿಗೆ ರಾಘವೇಂದ್ರ ಕಾಮತ್ ಅವರು ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಯೋಗರಾಜ್ ಭಟ್ ಜತೆ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಅಕ್ಷಿ ಸಿನಿಮಾ ನಟನೆಗಾಗಿ ಮಾಸ್ಟರ್ ಮಿಥುನ್ ಪಡೆದುಕೊಂಡಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಒಟ್ಟು 23 ಸಿನಿಮಾ ತಾರೆಯರು 21 ವಿಭಾಗಗಳಲ್ಲಿದ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಚಲನಚಿತ್ರ ವಿಮರ್ಶಕರು ಮತ್ತು ಪತ್ರಕರ್ತರು ನಾಮನಿರ್ದೇಶನ ಮೂಲಕ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದರೆ, ಬಿಬಿಎಂಪಿಯ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಪ್ರಶಸ್ತಿ ಸಮಾರಂಭದ ವಿಷಯವಾಗಿ ಅಳವಡಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾ ರಂಗದ ಸಾಕಷ್ಟು ತಾರೆಯರು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    3ನೇ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ವಿಜೇತರು ಪಟ್ಟಿ – 2022

    1. ಅತ್ಯುತ್ತಮ ಚಿತ್ರ

    ಪುಗ್ಸಟ್ಟೆ ಲೈಫ್

    1. ಅತ್ಯುತ್ತಮ ನಿರ್ದೇಶಕ

    ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟ

    ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ನಟಿ

    ಗಾನವಿ ಲಕ್ಷ್ಮಣ್ (ಹೀರೋ)

    1. ಅತ್ಯುತ್ತಮ ಚಿತ್ರಕಥೆ

    ಗರುಡ ಗಮನ ವೃಷಭ ವಾಹನ

    1. ಅತ್ಯುತ್ತಮ ಪೋಷಕ ನಟ

    ರಂಗಾಯಣ ರಘು (ಬಡವ ರಾಸ್ಕಲ್)

    1. ಅತ್ಯುತ್ತಮ ಪೋಷಕ ನಟಿ

    ಸ್ಪರ್ಷ ರೇಖಾ (ಬಡವ ರಾಸ್ಕಲ್)

    1. ಅತ್ಯುತ್ತಮ ಬಾಲ ಕಲಾವಿದ

    ಮಾಸ್ಟರ್ ಮಿಥುನ್ (ಅಕ್ಷಿ)

    1. ಅತ್ಯುತ್ತಮ ಸಂಗೀತ ನಿರ್ದೇಶಕ

    ಅರ್ಜುನ್ ಜನ್ಯ (ರಾಬರ್ಟ್)

    1. ಅತ್ಯುತ್ತಮ ಹಿನ್ನೆಲೆ ಸಂಗೀತ

    ಚರಣ್ ರಾಜ್ (ಸಲಗ)

    1. ಅತ್ಯುತ್ತಮ ಗೀತ ಸಾಹಿತ್ಯ

    ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್) and ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)

    1. ಅತ್ಯುತ್ತಮ ಗಾಯಕ

    ವಾಸುಕಿ ವೈಭವ್ (ಆಗಾಗ ನೆನಪಾಗುತ್ತಿದೆ, ಬಡವ ರಾಸ್ಕಲ್)

    1. ಅತ್ಯುತ್ತಮ ಗಾಯಕಿ

    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)

    1. ಅತ್ಯುತ್ತಮ ಛಾಯಾಗ್ರಹಣ

    ಸುಧಾಕರ್ ರಾಜ್ (ರಾಬರ್ಟ್)

    1. ಅತ್ಯುತ್ತಮ ಸಂಭಾಷಣೆ

    ಮಾಸ್ತಿ (ಸಲಗ)

    1. ಅತ್ಯುತ್ತಮ ಸಂಕಲನ

    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)

    1. ಅತ್ಯುತ್ತಮ ಕಲಾ ನಿರ್ದೇಶನ

    ರವಿ ಸಂತೆಹೈಕ್ಳು (ಭಜರಂಗಿ 2)

    1. ಅತ್ಯುತ್ತಮ ನೃತ್ಯ ನಿರ್ದೇಶಕ

    ಭೂಷಣ್ (ರಾಬರ್ಟ್)

    1. ಅತ್ಯುತ್ತಮ ಸಾಹಸ ನಿರ್ದೇಶಕ

    ರವಿ ವರ್ಮಾ (ಭಜರಂಗಿ 2)

    1. ಅತ್ಯುತ್ತಮ ವಿಎಫ್ಎಕ್ಸ್

    ಶಿಬೀಶ್ and ಏಲಂಗೋ

    ಭಜರಂಗಿ 2

    1. ಅತ್ಯುತ್ತಮ ಚೊಚ್ಚಲ ಚಿತ್ರ

    ಪ್ರೇಮಮ್ ಪೂಜ್ಯಮ್

  • ಪೈರಸಿ ಸುಳಿಯಲ್ಲಿ ‘ಹೀರೋ’ ಸಿನಿಮಾ: ರಿಷಬ್ ಶೆಟ್ಟಿ ಬೇಸರ – ಆಕ್ರೋಶ

    ಪೈರಸಿ ಸುಳಿಯಲ್ಲಿ ‘ಹೀರೋ’ ಸಿನಿಮಾ: ರಿಷಬ್ ಶೆಟ್ಟಿ ಬೇಸರ – ಆಕ್ರೋಶ

    ರಿಷಭ್ ಶೆಟ್ಟಿ ನಿರ್ಮಿಸಿ ನಟಿಸಿರುವ ‘ಹೀರೋ’ ಸಿನಿಮಾ ಕಳೆದ ಸಿನಿ ಶುಕ್ರವಾರ ಬಿಡುಗಡೆಯಾಗಿತ್ತು. ಇಂಟರ್ ಸ್ಟಿಂಗ್ ಕಥಾಹಂದರ, ಚಿತ್ರಕಥೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಪ್ರೇಕ್ಷಕರ ಮನಗೆದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು ಹೀರೋ ಸಿನಿಮಾ. ಇದೀಗ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಪೈರಸಿ ಹಾವಳಿಗೆ ಸಿಲುಕಿದ್ದು ಚಿತ್ರತಂಡದ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

    ಹೌದು, ಕೋವಿಡ್-19ರಿಂದ ಈಗ ಚಿತ್ರರಂಗ ಸುಧಾರಿಸಿಕೊಂಡು ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು ವರ್ಷದ ನಂತರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿರಬೇಕಾದ್ರೆ ಪೈರಸಿ ಹಾವಳಿ ಮತ್ತೆ ಚಿತ್ರರಂಗಕ್ಕೆ ಮುಳುವಾಗಿದೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಹೀರೋ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಪೈರಸಿ ಬಲೆಗೆ ಸಿಲುಕಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಚಿತ್ರತಂಡ ದೂರನ್ನು ದಾಖಲಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

    `ಹೀರೋ’ ಸಿನಿಮಾ ಪೈರಸಿ ಬಗ್ಗೆ ಚಿತ್ರದ ನಾಯಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೋವನ್ನು ಹೊರಹಾಕಿದ್ದಾರೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲೂ ಕೂಡ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಸಿನಿಮಾ ಮಾಡಿದ್ವಿ, ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಪೈರಸಿ ಎದುರಾಗಿದೆ. ಆ್ಯಂಟಿ ಪೈರಸಿ ತಂಡದ ಜೊತೆ ಕುಳಿತು ವೆಬ್‍ಸೈಟ್ ಗಳಿಂದ ಎಷ್ಟೇ ಪೈರಸಿ ಲಿಂಕ್ ಡಿಲೀಟ್ ಮಾಡಿಸುತ್ತಿದ್ರೂ ಕೂಡ ಪೂರ್ತಿಯಾಗಿ ಲಿಂಕ್ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಪೈರಸಿ ವಿಚಾರದಲ್ಲಿ ಚಿತ್ರಮಂದಿರಗಳ ಮಾಲೀಕರ ಬಗ್ಗೆಯೂ ರಿಷಬ್ ಶೆಟ್ಟಿ ಅಸಮಾಧಾನ ಹೊರಹಾಕಿದ್ದು, ಚಿತ್ರಮಂದಿರಗಳಲ್ಲಿ ಕ್ಯಾಮೆರಾ, ಮೊಬೈಲ್ ತೆಗೆದುಕೊಂಡು ರೆಕಾರ್ಡ್ ಮಾಡೋದಕ್ಕೆ ಹೇಗೆ ಅನುವು ಮಾಡಿಕೊಡುತ್ತಾರೆ ಎಂದಿದ್ದಾರೆ. ಇದೇ ವೇಳೆ ಪೈರಸಿ ವೆಬ್ಸೈಟ್ಗಳ ನಿಷೇಧ ಯಾಕೆ ಆಗ್ತಿಲ್ಲ ಎಂಬುದರ ಬಗ್ಗೆಯೂ ಪ್ರಶ್ನಿಸಿದ್ದಾರೆ ರಿಷಬ್.

    ಒಟ್ನಲ್ಲಿ ಕೋವಿಡ್ 19ರಿಂದ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಪೈರಸಿ ಹಾವಳಿ ಶುರುವಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕದೆ ಚಿತ್ರರಂಗಕ್ಕೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ಚಿತ್ರರಂಗ ಹಾಗೂ ಚಿತ್ರತಂಡ ಯಾವ ರೀತಿ ಹೆಜ್ಜೆ ಇಡುತ್ತದೆ ಎನ್ನೋದನ್ನ ಕಾದು ನೋಡಬೇಕು.

  • ಹೀರೋ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಮಹಾಪ್ರಭುಗಳು

    ಹೀರೋ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಮಹಾಪ್ರಭುಗಳು

    ಚಿತ್ರ: ಹೀರೋ
    ನಿರ್ದೇಶನ: ಎಂ. ಭರತ್ ರಾಜ್
    ನಿರ್ಮಾಣ: ರಿಷಭ್ ಶೆಟ್ಟಿ ಫಿಲಂಸ್
    ಸಂಗೀತ ನಿರ್ದೇಶನ: ಅಜನೀಶ್ ಲೋಕನಾಥ್
    ಛಾಯಾಗ್ರಹಣ: ಅರವಿಂದ್ ಎಸ್ ಕಶ್ಯಪ್
    ತಾರಾಬಳಗ: ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಇತರರು

    ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಹೀರೋ ಸಿನಿಮಾ ಇಂದು ಬಿಡುಗಡೆಯಾಗಿದೆ. ಕುತೂಹಲಕಾರಿ ಟ್ರೇಲರ್ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿರಸಿಕರ ಮನಗೆದ್ದಿದೆ.

    ಅಶೋಕವನ ಎಸ್ಟೇಟ್ ಇಡೀ ಸಿನಿಮಾದ ಕೇಂದ್ರ. ಹೀರೋ ಸಿನಿಮಾ ಒಂದು ದಿನ ಶುರುವಾಗಿ ಒಂದೇ ದಿನದಲ್ಲಿ ಮುಗಿಯುವ ಕಥಾಹಂದರ ಒಳಗೊಂಡಿದೆ. ಈ ಒಂದು ದಿನದಲ್ಲಿ ಏನೆಲ್ಲ ಆಗುತ್ತೆ ಅನ್ನೋದನ್ನ ನಿರ್ದೇಶಕ ಭರತ್ ರಾಜ್ ಕಟ್ಟಿಕೊಟ್ಟ ಪರಿ ಪ್ರೇಕ್ಷಕರನ್ನು ಸೆಳೆಯದೇ ಇರದು. ಚಿತ್ರದಲ್ಲಿ ನಾಯಕ ನಟನದ್ದು ಬಾರ್ಬರ್ ಪಾತ್ರ. ಪ್ರೀತಿಯಲ್ಲಿ ಸೋತು ಸುಣ್ಣವಾಗಿರೋ ಈತನಿಗೆ ಒಮ್ಮೆ ತನ್ನ ಹಳೆಯ ಪ್ರೇಯಸಿಯ ಗಂಡನಿಗೆ ಕಟಿಂಗ್ ಮಾಡುವ ಸನ್ನಿವೇಶ ಒದಗಿಬರುತ್ತೆ. ಅವರಿರುವ ಅಶೋಕವನ ಎಸ್ಟೇಟ್ ಗೆ ಹೊರಡುತ್ತಾನೆ. ಪ್ರೇಯಸಿಯಿಂದ ಮೋಸ ಆಗಿದೆ ಆಕೆಯನ್ನು ಸಾಯಿಸಬೇಕು ಎಂದು ಕಥಾನಾಯಕ ನಿರ್ಧರಿಸಿರುತ್ತಾನೆ. ಆದ್ರೆ ಅಲ್ಲಿ ಹೋದಾಗ ಬೇರೆಯದ್ದೇ ಕಥೆ ಇರುತ್ತೆ. ಮುಂದೇನಾಗುತ್ತೆ ಅನ್ನೋದೆ ಇಂಟ್ರಸ್ಟಿಂಗ್ ಕಹಾನಿ.

    ಉಳಿದಂತೆ ಆಕ್ಷನ್, ಕಾಮಿಡಿ, ಲವ್, ಸೆಂಟಿಮೆಂಟ್ ಎಳೆ ಜೊತೆ ರಕ್ತಸಿಕ್ತ ಸನ್ನಿವೇಶಗಳೂ ಸಿನಿಮಾದಲ್ಲಿದೆ. ಪ್ರೇಯಸಿ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ನಟಿಸಿದ್ರೆ, ಪ್ರೇಯಸಿಯ ಗಂಡನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿಯವರದ್ದು ಇಲ್ಲಿ ಖಳನಟನ ಪಾತ್ರ.

    ಚಿತ್ರಕಥೆ ಚಿತ್ರದ ಮೈನ್ ಹೈಲೈಟ್ ಆಗಿದ್ದು, ಮೇಕಿಂಗ್ ಮತ್ತೊಂದು ಆಕರ್ಷಣೆ. ಕಚಗುಳಿ ಇಡುವ ಡೈಲಾಗ್‍ಗಳು ಮಜಾ ನೀಡುತ್ತವೆ. ರೆಗ್ಯೂಲರ್ ಸಿನಿಮಾಗಳಂತೆ ಇಲ್ಲಿ ನಾಯಕ, ನಾಯಕಿ, ಉಳಿದ ಪಾತ್ರಗಳಿಗೆ ಹೆಸರಿಲ್ಲ. ನಿರ್ದೇಶಕ ಭರತ್ ರಾಜ್ ಮೊದಲ ಪ್ರಯತ್ನದಲ್ಲೇ ತಮ್ಮ ನಿರ್ದೇಶನದ ಕಲೆಯನ್ನು ಸಾಬೀತು ಪಡಿಸಿದ್ದಾರೆ. ಕೆಲವೊಂದು ಸೀನ್‍ಗಳು ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿಯಂತಿದೆ. ಒಟ್ಟಿನಲ್ಲಿ ಒಂದು ಹೊಸ ರೀತಿಯ ಪ್ರಯತ್ನವಿರುವ ಸಿನಿಮಾ ಹೀರೋ.

    ಹೀರೋ ಸಿನಿಮಾ ಮೂಲಕ ಮತ್ತೊಮ್ಮೆ ತಾವೊಬ್ಬ ಪ್ರಾಮಿಸಿಂಗ್ ನಟ ಅನ್ನೋದನ್ನ ಪ್ರೂವ್ ಮಾಡಿದ್ದಾರೆ ರಿಷಭ್ ಶೆಟ್ಟಿ. ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿ ಖಳನಟನ ಪಾತ್ರದಲ್ಲಿ ಮಿಂಚಿರೋ ಪ್ರಮೋದ್ ಶೆಟ್ಟಿ ಅಭಿನಯ ಕೂಡ ಮೆಚ್ಚುವಂತದ್ದು ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಹಾವ-ಭಾವದಲ್ಲಿಯೇ ಅವರ ನಟನೆ ಇಲ್ಲಿ ಗಮನ ಸೆಳೆಯುತ್ತದೆ. ಉಳಿದಂತೆ ತಾಂತ್ರಿಕ ವರ್ಗವೇ ಕಲಾವಿದರಾಗಿ ನಟಿಸಿದ್ದು ಚಿತ್ರದ ಮತ್ತೊಂದು ವಿಶೇಷ. ಗಾನವಿ ಲಕ್ಷ್ಮಣ್ ನಟನೆ ಎಲ್ಲರ ಗಮನ ಸೆಳೆಯುತ್ತದೆ.

    ಒಂದು ಕಡೆ ಕಲಾವಿದರು ಗಮನ ಸೆಳೆದರೆ ಇನ್ನೊಂದು ಕಡೆ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಸಿನಿಮಾ ಆವರಿಸಿಕೊಂಡು ಕಿಕ್ ಕೊಡುತ್ತದೆ. ಛಾಯಾಗ್ರಹಣ ಕೂಡ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಹೊಸ ಪ್ರಯತ್ನವಿರುವ, ಹೊಸತನ ಇರುವ ಹೀರೋ ಸಿನಿಮಾ ಪ್ರೇಕ್ಷಕರನ್ನು ಸೆಳೆಯದೇ ಇರಲಾರದು.

  • ಮಾರ್ಚ್ 5ಕ್ಕೆ ರಿಷಬ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ- ನಟಿ ಗಾನವಿ ಲಕ್ಷಣ್‍ಗೆ ಮೊದಲ ಅದೃಷ್ಟ ಪರೀಕ್ಷೆ

    ಮಾರ್ಚ್ 5ಕ್ಕೆ ರಿಷಬ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ- ನಟಿ ಗಾನವಿ ಲಕ್ಷಣ್‍ಗೆ ಮೊದಲ ಅದೃಷ್ಟ ಪರೀಕ್ಷೆ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹೀರೋ’. ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷಣ್ ನಾಯಕ ನಟಿ. ಟಿ.ಎನ್. ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಚಿಕ್ಕಮಗಳೂರು ಬೆಡಗಿ ಗಾನವಿ ಲಕ್ಷಣ್.

    ಮೊದಲ ಧಾರಾವಾಹಿ ಮೂಲಕವೇ ಕನ್ನಡಿಗರ ಮನದಲ್ಲಿ ಬಹುಬೇಗ ಜಾಗ ಪಡೆದು ಖ್ಯಾತಿ ಗಳಿಸಿದ್ರು. ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಹುದೊಡ್ಡ ಕನಸಿಟ್ಟುಕೊಂಡಿದ್ದ ಇವರಿಗೆ ‘ಹೀರೋ’ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಒದಗಿಬಂತು. ‘ಹೀರೋ’ ಮೂಲಕ ಬೆಳ್ಳಿತೆರೆ ಮೇಲೆ ಅದೃಷ್ಟ ಪರೀಕ್ಷೆಗಿಳಿದಿರುವ ಗಾನವಿ ಲಕ್ಷಣ್ ತಮ್ಮ ಮೊದಲ ಸಿನಿಮಾ ಮೇಲೆ ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದ್ದಾರೆ. ಮಾರ್ಚ್ 5ರ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿರುವ ನಟಿ ಗಾನವಿ ಲಕ್ಷಣ್ ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

    ಚೊಚ್ಚಲ ಸಿನಿಮಾದಲ್ಲೇ ಪರ್ಫಾಮೆನ್ಸ್ ಗೆ ಹೆಚ್ಚು ಅವಕಾಶ ಸಿಕ್ಕಿರೋದು ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ ಗಾನವಿ ಲಕ್ಷಣ್. ತಮ್ಮ ಪಾತ್ರ ನ್ಯಾಚುರಲ್ ಆಗಿ ಮೂಡಿ ಬಂದಿದ್ದು, ಹಲವು ಶೇಡ್ ನಲ್ಲಿ ಕಾಣಸಿಗಲಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕ ಭರತ್ ರಾಜ್ ಹಾಗೂ ರಿಷಬ್ ಶೆಟ್ಟಿ ತಂಡದ ಜೊತೆ ಕೆಲಸ ಮಾಡಿದ ಅನುಭವ ಖುಷಿ ಕೊಟ್ಟಿದ್ದು ಜನರು ಕೂಡ ಸಿನಿಮಾ ಮೇಲೆ ಪ್ರೀತಿ ತೋರಿಸುತ್ತಾರೆ ಎಂಬ ಭರವಸೆಯಲ್ಲಿದ್ದೇನೆ ಎಂದಿದ್ದಾರೆ.

    ರಿಷಭ್ ಶೆಟ್ಟಿ ನಟಿಸಿ ನಿರ್ಮಾಣ ಮಾಡುತ್ತಿರುವ ‘ಹೀರೋ’ ಚಿತ್ರಕ್ಕೆ ಭರತ್ ರಾಜ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್, ಲವ್, ಸೆಂಟಿಮೆಂಟ್, ಕಾಮಿಡಿ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಸಿನಿಮಾ ನೋಡುಗರಿಗೆ ಹೊಸ ಫೀಲ್ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಈಗಾಗಲೇ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿದ್ದು ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ ಸಿನಿರಸಿಕರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ .ಎಸ್. ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ತಾರಾಗಣದಲ್ಲಿ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  • ‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

    ‘ಹೀರೋ’ ಎಂಟ್ರಿಗೆ ದಿನಾಂಕ ಫಿಕ್ಸ್- ಮಾರ್ಚ್ 5ಕ್ಕೆ ರಿಷಭ್ ಶೆಟ್ಟಿ ‘ಹೀರೋ’ ಚಿತ್ರಮಂದಿರಕ್ಕೆ

    ರಿಷಭ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 5ಕ್ಕೆ ‘ಹೀರೋ’ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡಲಿರುವ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. ಚಿತ್ರದ ಕುತೂಹಲ ಭರಿತ ಟ್ರೇಲರ್ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಚಿತ್ರತಂಡದ ಮುಂದಿಟ್ಟಿದ್ರು. ಇದೀಗ ಪ್ರೇಕ್ಷಕ ಮಹಾಪ್ರಭುಗಳ ಕಾಯುವಿಕೆಗೆ ಉತ್ತರ ಸಿಕ್ಕಿದ್ದು, ಮಾರ್ಚ್ 5ರಂದು ‘ಹೀರೋ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಹೀರೋ’. ಬೆಲ್ ಬಾಟಂ ಸಿನಿಮಾ ನಂತರ ರಿಷಭ್ ನಾಯಕ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಭರತ್ ರಾಜ್ ‘ಹೀರೋ’ ನಿರ್ದೇಶಕ. ನಿರ್ದೇಶಕನಾಗಿ ಇದು ಇವರ ಮೊದಲ ಪ್ರಯತ್ನ ಕೂಡ ಹೌದು. ಲಾಕ್‍ಡೌನ್ ಅವಧಿಯಲ್ಲೇ ಇಡೀ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಸೈ ಎನಿಸಿಕೊಂಡಿತ್ತು ಚಿತ್ರತಂಡ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಒಂದೊಂದೇ ಅಪ್ಡೇಟ್ಸ್ ನೀಡುತ್ತ ಸಿನಿಮಾ ಬಗ್ಗೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಚಿತ್ರದ ಟ್ರೇಲರ್ ಎಲ್ಲರ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವುದರ ಜೊತೆಗೆ ಸಿನಿಮಾ ಮೇಲಿನ ಒಲವನ್ನು ಇನ್ನಷ್ಟು ಹೆಚ್ಚು ಮಾಡಿದೆ.

    ಸಸ್ಪೆನ್ಸ್, ಆಕ್ಷನ್, ಕಾಮಿಡಿ, ಥ್ರಿಲ್ಲರ್, ಲವ್ ಎಲ್ಲಾ ಎಲಿಮೆಂಟ್ ಗಳನ್ನು ಒಳಗೊಂಡಿರುವ ‘ಹೀರೋ’ ಚಿತ್ರದಲ್ಲಿ ರಿಷಭ್ ಶೆಟ್ಟಿ, ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಕ್ಷೌರಿಕನ ಪಾತ್ರದಲ್ಲಿ ರಿಷಭ್ ಶೆಟ್ಟಿ ಬಣ್ಣಹಚ್ಚಿದ್ದಾರೆ. ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ವಿಕ್ರಂ ಮೋರ್ ಸಾಹಸ ನಿರ್ದೇಶನದಲ್ಲಿ ‘ಹೀರೋ’ ಸಿನಿಮಾ ಸಾಹಸ ದೃಶ್ಯಗಳು ಮೂಡಿ ಬಂದಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಒಳಗೊಂಡಂತೆ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

  • ಅವಕಾಶಕ್ಕಾಗಿ ಚಪ್ಪಲಿ ಹರಿದು ಹೋಗುವವರೆಗೂ ಅಲೆದಿದ್ದೇನೆ: ನಟಿ ಗಾನವಿ ಲಕ್ಷ್ಮಣ್

    ಅವಕಾಶಕ್ಕಾಗಿ ಚಪ್ಪಲಿ ಹರಿದು ಹೋಗುವವರೆಗೂ ಅಲೆದಿದ್ದೇನೆ: ನಟಿ ಗಾನವಿ ಲಕ್ಷ್ಮಣ್

    ಗಳು ಜಾನಕಿ ಸೀರಿಯಲ್ ಖ್ಯಾತಿಯ ಗಾನವಿ ಲಕ್ಷ್ಮಣ್ ಹೀರೋ ಸಿನಿಮಾ ಬಗ್ಗೆ ಹಾಗೂ ತಮ್ಮ ಕನಸುಗಳ ಬಗ್ಗೆ ಆರಂಭದ ದಿನಗಳ ಹೋರಾಟದ ಬಗ್ಗೆ ತಮ್ಮ ಅನಿಸಿಕೆಯನ್ನು ಪಬ್ಲಿಕ್‌ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಹೀರೋ ಸಿನಿಮಾ ಅನುಭವ ಹೇಗಿತ್ತು, ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?
    ಒಬ್ಬ ಕಲಾವಿದೆಗೆ ಏನು ಬೇಕೋ ಅದು ಈ ಟೀಮ್​ನಲ್ಲಿ ಇತ್ತು. ಹೀರೋ ಸಿನಿಮಾ ಕಥೆಯೇ ತುಂಬಾ ಇಂಟ್ರಸ್ಟಿಂಗ್ ಆಗಿದೆ. ತುಂಬಾ ಹಾರ್ಡ್ ವರ್ಕ್ ಮಾಡಿ ಎಲ್ಲರೂ ಕೆಲಸ ಮಾಡಿದ್ದೀವಿ. ನನ್ನ ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ಒಂದೊಳ್ಳೆ ಅನುಭವ ಈ ಚಿತ್ರ ನೀಡಿದೆ. ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ನಾತೂರಾಮ್ ಸಿನಿಮಾಲ್ಲಿ ರಿಷಭ್ ಜೋಡಿಯಾಗಿ ನಾನು ಆಯ್ಕೆಯಾಗಿದ್ದೆ. ಆಗ ರಿಷಭ್ ಪರಿಚಯವಾಗಿತ್ತು. ಆ ಸಿನಿಮಾ ಸದ್ಯಕ್ಕೆ ಪೋಸ್ಟ್ ಪೋನ್ ಆಗಿದೆ. ಅದೇ ಪರಿಚಯದ ಮೇಲೆ ರಿಷಭ್ ಹೀರೋ ಸಿನಿಮಾಗಾಗಿ ನನ್ನನ್ನು ಸಂಪರ್ಕಿಸಿದ್ರು. ಸಬ್ಜೆಕ್ಟ್ ತುಂಬಾ ಚೆನ್ನಾಗಿತ್ತು ನಟಿಸಲು ಒಪ್ಪಿಕೊಂಡೆ. ಅದಾದ ಮೇಲೆ ಪವಾಡದಂತೆ ಇಡೀ ಸಿನಿಮಾ ನಡೆದು ಹೋಯ್ತು.

    ರಿಷಭ್ ಶೆಟ್ಟಿಯವರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು ?
    ಅವರೊಬ್ಬ ಸೂಪರ್ ಹೀರೋ. ತುಂಬಾ ಕಷ್ಟ ಪಟ್ಟು ಇಲ್ಲಿವರೆಗೆ ಬಂದಿದ್ದಾರೆ. ಅವರ ಜೊತೆ ಕೆಲಸ ಮಾಡೋದು ತುಂಬಾ ಹೆಮ್ಮೆಯ ವಿಚಾರ. ತಾವು ಬೆಳೆಯೋದರ ಜೊತೆ ತಮ್ಮ ತಂಡವನ್ನು ಬೆಳೆಸುತ್ತಾರೆ. ಹಲವಾರು ಪ್ರತಿಭಾವಂತರಿಗೆ ಸಿನಿಮಾ ಬರಹಗಾರರಿಗೆ ಅವಕಾಶ ನೀಡಿದ್ದಾರೆ. ಎಲ್ಲರನ್ನು ಅವರು ಮೋಟಿವೇಟ್ ಮಾಡುತ್ತಾರೆ. ಅವರಿಗೆ ಯಾವಾಗಲೂ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ.

    ಮಗಳು ಜಾನಕಿ ನಿಮ್ಮ ಕನಸಿಗೆ ನೀರೆರಿದು ಪೋಷಿಸಿತು?
    ಗಾನವಿ ಲಕ್ಷ್ಮಣ್ ಎಂಬ ಕಲಾವಿದೆಯೊಬ್ಬಳು ಇದ್ದಾಳೆ ಅನ್ನೋದನ್ನ ಕರ್ನಾಟಕಕ್ಕೆ ಪರಿಚಯಿಸಿದ್ದೇ ಮಗಳು ಜಾನಕಿ ಧಾರಾವಾಹಿ. ಈ ವಿಚಾರದಲ್ಲಿ ನಾನು ಕಲರ್ಸ್​ ಕನ್ನಡಕ್ಕೆ ಧನ್ಯವಾದ ಹೇಳುತ್ತೇನೆ. ಇವತ್ತು ಸಿನಿಮಾಗಳಲ್ಲಿ ಅವಕಾಶ ಸಿಕ್ತಿದೆ ಅಂದ್ರೆ ಅದಕ್ಕೆ ಕಾರಣ ಮಗಳು ಜಾನಕಿ. ಇಲ್ಲಿ ನಾನು ಸೀತಾರಾಮ್​ ಸರ್ ಬಳಿ ಹಲವು ವಿಚಾರಗಳನ್ನು ಕಲಿತುಕೊಂಡೆ. ಇವತ್ತು ನಾನಿಲ್ಲಿ ಬಂದು ನಿಂತಿದ್ದೀನಿ ಅಂದ್ರೆ ಅದು ಮಗಳು ಜಾನಕಿ ಧಾರಾವಾಹಿ ಕೊಟ್ಟ ಜನಪ್ರಿಯತೆಯಿಂದ.

    ಮೊದಲ ಬಾರಿಯೇ ಟಿ.ಎನ್​ ಸೀತಾರಾಮ್​ ಸರ್​ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಎಷ್ಟು ಖುಷಿ ಇದೆ?
    ಹೌದು..ನಾನು ಆಡಿಷನ್​ನಲ್ಲಿ ಸೆಲೆಕ್ಟ್ ಆದಾಗ ಇಷ್ಟು ವರ್ಷ ಬೆಂಗಳೂರಿನಲ್ಲಿ ಅಲೆದದ್ದಕ್ಕೂ ಸಾರ್ಥಕವಾಯಿತು ಅನ್ನಿಸಿತು. ನಿಜಕ್ಕೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಹೆಮ್ಮೆಯ ವಿಷಯ. ಪ್ರತಿಯೊಬ್ಬ ಕಲಾವಿದರಿಗೂ ಆರಂಭದಲ್ಲೇ ಅವರಂತ ಗುರುಗಳು ಸಿಕ್ಕರೆ ಬೇರೆಯದ್ದೇ ಲೆವೆಲ್​​ನಲ್ಲಿ ಬೆಳೆಯೋದು ಗ್ಯಾರೆಂಟಿ.

    ಬೆಂಗಳೂರಿಗೆ ಬಂದ ಆರಂಭದ ದಿನಗಳು ಹೇಗಿತ್ತು?
    ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡು, ಮನೆಯಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದ ಮೇಲೆ ನನಗೆ ನಿಜವಾದ ಜೀವನ ಏನು ಅನ್ನೋದು ಗೊತ್ತಾಯಿತು. ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್​ನಿಂದ ಚಪ್ಪಲಿ ಸವೆಯೋವರೆಗೂ ಅಲೆದಿದ್ದೇನೆ. ಅವಕಾಶಕ್ಕಾಗಿ ನಡೆಸಿದ ಹುಡುಕಾಟ ಅಷ್ಟಿಷ್ಟಲ್ಲ. ಮೆಜಿಸ್ಟಿಕ್​ನಿಂದ ಬ್ಯಾಗ್ ಹಿಡಿದ ಚಪ್ಪಲಿ ಹರಿದು ಹೋಗುವಷ್ಟು ಅಲೆದಿದ್ದೇನೆ. ಮಗಳು ಜಾನಕಿಗೆ ಅವಕಾಶ ಸಿಗುವುದಕ್ಕೂ ಮುನ್ನ ನಾನು ಪಟ್ಟ ಕಷ್ಟಗಳನ್ನು ಹೇಳಿಕೊಂಡರೆ ಯಾರೂ ನಂಬೋದಿಲ್ಲ.

    ಲಾಕ್​ಡೌನ್​ ಲೈಫ್ ಹೇಗಿತ್ತು?
    ಲಾಕ್​ ಡೌನ್​ ಆರಂಭದ ಎರಡು ತಿಂಗಳು ಊರಿನಲ್ಲಿ ಕಳೆದೆ. ಆದ್ರೆ ಕಲಾವಿದರಿಗೆ ಕೆಲಸವಿಲ್ಲದೆ ತುಂಬಾ ದಿನ ಕೂರೋಕೆ ಆಗಲ್ಲ. ಅವಕಾಶ ಸಿಕ್ಕಿದ್ರೆ ಸಾಕು ಎಂದು ಕಾಯುತ್ತಿದ್ದೆ ಆ ಟೈಂನಲ್ಲಿ ರಿಷಭ್ ಸರ್ ಹೀರೋ ಪ್ರಾಜೆಕ್ಟ್ ಬಗ್ಗೆ ಹೇಳಿದ್ರು. ಅನ್​ಲಾಕ್​​ ಸಮಯದಲ್ಲಿ ಇಡೀ ಶೂಟಿಂಗ್ ಕಂಪ್ಲೀಟ್ ಮಾಡಿದ್ವಿ. ಪೂರ್ತಿ ಚಿತ್ರೀಕರಣ ನನ್ನೂರಾದ ಚಿಕ್ಕಮಗಳೂರಲ್ಲೇ ನಡೆದಿದ್ದರಿಂದ ಹೆಚ್ಚಿನ ಸಮಯ ಕುಟುಂಬದ ಜೊತೆ ಊರಲ್ಲೇ ಕಳೆದೆ.

    ನಟನೆ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
    ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮವೆಂದರೆ ತುಂಬಾ ಪ್ರೀತಿ. ಡಿಗ್ರಿ ಮುಗಿಸಿದ ನಂತರ ಕಾಫಿ ಡೇ ಸಿದ್ದಾರ್ಥ್​ ಅವರ ಇಂಟರ್​​ ನ್ಯಾಶನಲ್​ ಸ್ಕೂಲ್​ನಲ್ಲಿ ಡಾನ್ಸ್​ ಟೀಚರ್ ಆಗಿ ಸೇರಿಕೊಂಡೆ. ಅಲ್ಲಿ ಮಕ್ಕಳಿಗೆ ಡಾನ್ಸ್ ಕಲಿಸುತ್ತಾ ನನಗೆ ಗೊತ್ತಿಲ್ಲದೆ ನನ್ನೊಳಗೊಬ್ಬಳು ಕಲಾವಿದೆಯನ್ನು ನಾನು ಕಂಡೆ. ನನ್ನ ಮನಸ್ಸೆಲ್ಲ ಕಲೆಯ ಕಡೆಯೇ ಹೊರಳುತ್ತಿತ್ತು. ಹಾಸ್ಟೆಲ್​ ವಿದ್ಯಾಭ್ಯಾಸ ಮಾಡಿದ್ದರಿಂದ ಸಿನಿಮಾ ನೋಡಿದ್ದೇ ಹೆಚ್ಚು. ಇದೆಲ್ಲವೂ ನನ್ನನ್ನೂ ನೀನು ನಟಿಯಾಗಲೇ ಬೇಕು ಎಂದು ಪುಶ್ ಮಾಡುತ್ತಿತ್ತು.

    ನಿಮ್ಮ ಸ್ಪೂರ್ತಿ ಯಾರು?
    ನನಗೆ ಕಲೆಯೇ ಒಂದು ಸ್ಪೂರ್ತಿ. ಆ ಪದದಲ್ಲೇ ಒಂದು ಶಕ್ತಿ ಇದೆ, ಅದನ್ನು ಕೇಳಿದಾಗ ನನಗೆ ರೋಮಾಂಚನವಾಗುತ್ತೆ. ಕಲೆಗೆ ಕಲಾವಿದರಿಗೆ ಯಾವತ್ತೂ ಸಾವಿಲ್ಲ ಕಲೆಯೇ ನನ್ನ ಜೀವನಕ್ಕೆ ಸ್ಪೂರ್ತಿ.

    ಪ್ರತಿಯೊಬ್ಬ ಕಲಾವಿದರಿಗೂ ಒಂದು ಕನಸಿರುತ್ತೆ ನಿಮ್ಮ ಕನಸಿನ ಬಗ್ಗೆ ಹೇಳಿ?
    ಕಲಾವಿದೆಯಾಗಿ ಕರ್ನಾಟಕವನ್ನು ಪ್ರಪಂಚದಾದ್ಯಂತ ಪ್ರತಿನಿಧಿಸಬೇಕು ಅನ್ನೋದು ನನ್ನ ದೊಡ್ಡ ಕನಸು. ಅದು ಈಡೇರುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಕೊನೆಯವರೆಗೂ ಪ್ರಯತ್ನ ಪಡುತ್ತೇನೆ. ಕೊನೆವರೆಗೂ ಕಲಾವಿದೆಯಾಗಿಯೇ ಉಳಿಯಬೇಕು. ಎಲ್ಲೆ ಹೋದರೂ ಕೊನೆವರೆಗೂ ಕಲಾವಿದೆ ಎಂದೇ ಗುರುತಿಸಿಕೊಳ್ಳಬೇಕು ಅನ್ನೋದು ನನ್ನ ಮಹದಾಸೆ.

    ಆರಂಭದಲ್ಲಿ ಮನೆಯಲ್ಲಿದ್ದ ವಿರೋಧ, ಈಗ ನಿಮ್ಮ ಬೆಳವಣಿಗೆ ನೋಡಿದ ನಂತರದ ಪ್ರತಿಕ್ರಿಯೆ ಹೇಗಿದೆ. ?
    ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಹೋಗ್ತೀವಿ ಅಂದಾಗ ಆತಂಕ ಇದ್ದೆ ಇರುತ್ತೆ ಅದೇ ರೀತಿ ನನ್ನ ಮನೆಯಲ್ಲೂ ಆಯ್ತು. ಆದ್ರೆ ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮನೆಯವರ ವಿರೋಧದ ನಡುವೆಯೂ ಬೆಂಗಳೂರಿಗೆ ಬಂದು ನಟನೆಯಲ್ಲಿ ತೊಡಗಿದೆ. ಈಗ ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ, ಖುಷಿ ಇದೆ. ನನ್ನ ಮಗಳು ಅಂದುಕೊಂಡಿದ್ದನ್ನು ಸಾಧಿಸಿದಳು ಎಂಬ ಹೆಮ್ಮೆ ಇದೆ.

    ಗಾನವಿ ಲಕ್ಷ್ಮಣ್​ ಅವರು ಯಾವ ರೀತಿಯ ಹುಡುಗಿ?
    ನಾನು ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ತುಂಬಾ ರೆಸ್ಪಾನ್ಸಿಬಲ್ ಹೆಣ್ಣು ಮಗಳು. ರೂಲ್ಸ್ ಬ್ರೇಕ್​ ಮಾಡೋದು ಅಂದ್ರೆ ನಂಗೆ ತುಂಬಾ ಇಷ್ಟ. ಅಷ್ಟೇ ಬೋಲ್ಡ್ ಕೂಡ ಹೌದು. ತುಂಬಾ ಸ್ವಾಭಿಮಾನಿ ನನ್ನ ಸ್ವಾಭಿಮಾನಕ್ಕೆ ಸ್ವಲ್ಪ ಧಕ್ಕೆಯಾದ್ರೂ  ನಾನು ಆ ಸ್ಥಳದಲ್ಲಿ ಇರೋದಿಲ್ಲ.

    ನಿಮ್ಮ ಹಾಗೆ ಸಿನಿಮಾ ಪ್ರೀತಿ ಇಟ್ಟುಕೊಂಡು ಚಿತ್ರರಂಗಕ್ಕೆ ಬರುವವರಿಗೆ ಏನು ಹೇಳೋಕೆ ಇಷ್ಟಪಡ್ತೀರಾ.?
    ನಾನು ಎಲ್ಲರಿಗೂ ಹೇಳೊದಿಷ್ಟೆ ಯಾವುದೂ ಸುಲಭವಾಗಿ ಸಿಗೋದಿಲ್ಲ. ಕಲೆಯನ್ನು ತುಂಬಾ ಭಕ್ತಿ ಹಾಗೂ ಶ್ರದ್ದೆಯಿಂದ ಒಲಿಸಿಕೊಳ್ಳಬೇಕು. ನಾವು ಕಲೆಗೆ ಎಷ್ಟು ಗೌರವ ತೋರಿಸುತ್ತೇವೋ ಅಷ್ಟೇ ಒಳ್ಳೆಯ ಸ್ಥಾನಕ್ಕೆ ಅದು ನಮ್ಮನ್ನು ಕರೆದುಕೊಂಡು ಹೋಗುತ್ತೆ. ಇದಕ್ಕೆಲ್ಲ ದೃಢ ನಿರ್ಧಾರ, ಧೃಡ ಸಂಕಲ್ಪ ಬೇಕು ಸುಮ್ಮನೆ ಶೋಕಿಗಾಗಿ ಬರಬಾರದು ಅನ್ನೋದು ನನ್ನ ಅಭಿಪ್ರಾಯ.

    ನಿಮ್ಮ ಫಿಟ್​​ನೆಸ್​​ ಮಂತ್ರದ ಬಗ್ಗೆ ಹೇಳಿ.
    ಲಾಕ್​ಡೌನ್ ಸಮಯದಲ್ಲಿ ಫಿಟ್​ನೆಸ್​ ಕಡೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ಪ್ರತಿಯೊಬ್ಬರಿಗೂ ಫಿಟ್​ನೆಸ್ ತುಂಬಾ ಮುಖ್ಯ ಅದರಲ್ಲೂ ಕಲಾವಿದರೆಗೆ ಫಿಟ್​​ನೆಸ್​ ಇಲ್ಲ ಅಂದ್ರೆ ಆಗೋದೇ ಇಲ್ಲ. ನಾನು ಆ ಬಗ್ಗೆ ತುಂಬಾ ಗಮನ ಹರಿಸುತ್ತೇನೆ. ಯೋಗ ಇನ್ಸ್​ಸ್ಟ್ರಕ್ಟರ್​ ಆಗಿಯೂ ಕೆಲಸ ಮಾಡಿರೋದ್ರಿಂದ ದೇಹವನ್ನು ಹೇಗೆ ಆರೋಗ್ಯವಾಗಿ ಇಡಬೇಕು ಅನ್ನೋದು ಗೊತ್ತಿದೆ.

    ಧಾರಾವಾಹಿಯಲ್ಲಿ ಮತ್ತೆ ಅವಕಾಶ ಸಿಕ್ಕರೆ ಮಾಡುತ್ತೀರಾ?
    ಖಂಡಿತಾ ಇಲ್ಲ. ನಾನು ಆಕ್ಟಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆ ತುಂಬಾ ಲೇಟ್ ಆಗಿ. ನನಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲೇ ನಟಿಸಬೇಕು ಅನ್ನೋದೇ ಮಹದಾಸೆ. ಆರಂಭದಲ್ಲಿ ಸಿನಿಮಾದಲ್ಲೇ ಪಾದಾರ್ಪಣೆ ಮಾಡಬೇಕು ಎಂದು ತುಂಬಾ ಕನಸಿತ್ತು. ಧಾರಾವಾಹಿ ಮುಖಾಂತರವೇ ನನ್ನ ಕೆರಿಯರ್ ಶುರುವಾಗಬೇಕೆಂದು ಆ ದೇವರು ಬರೆದಿದ್ದ ಅನ್ನಿಸುತ್ತೆ ಅದರಂತೆ ಆಯಿತು. ಇನ್ನೇನಿದ್ರು ನನ್ನ ಜರ್ನಿ ಸಿನಿಮಾದಲ್ಲೇ ಇರುತ್ತೆ.