Tag: ಗವಿಗಂಗಾಧರೇಶ್ವರ

  • ಗಂಗೆಯ ದರ್ಶನ ಮಾಡದೇ ಸೂರ್ಯ ಮರೆಯಾಗಿದ್ದು, ಜಲಕಂಟಕ ಸಂಭವವಿದೆ: ಸೋಮಸುಂದರ್ ದೀಕ್ಷಿತ್

    ಗಂಗೆಯ ದರ್ಶನ ಮಾಡದೇ ಸೂರ್ಯ ಮರೆಯಾಗಿದ್ದು, ಜಲಕಂಟಕ ಸಂಭವವಿದೆ: ಸೋಮಸುಂದರ್ ದೀಕ್ಷಿತ್

    ಬೆಂಗಳೂರು: ಮಕರ ಸಂಕ್ರಾಂತಿಯ ಈ ದಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಮುತ್ತಿಕ್ಕಿದೆ. ಈ ಬೆನ್ನಲ್ಲೇ ಇದೀಗ ಸ್ವಲ್ಪ ಜಲಕಂಟಕ ಎದುರಾಗುವ ಸಂಭವವಿದೆ ಎಂಬುದಾಗಿ ಗವಿಗಂಗಾಧರ ದೇವಾಲಯದ (Gavigangadhareshwara Temple) ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ (Somasundar Deekshit) ಹೇಳಿದ್ದಾರೆ.

    ಸೂರ್ಯ ರಶ್ಮಿಯು ಶಿವಲಿಂಗಕ್ಕೆ (Shivalinga) ಸ್ಪರ್ಶ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಧಾನ ಅರ್ಚಕರು, ಗವಿಗಂಗಾಧರ ದೇವಾಲಯ ಸ್ವಾಮಿ ದಕ್ಷಿಣಾಭಿಮುಖವಾಗಿ ಇದೆ. ವಿಶೇಷವಾಗಿ ಈ ದೇವಸ್ಥಾನದಲ್ಲಿ ಇಂದು ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಮೂಲಕ ಇವತ್ತು ವಿಶೇಷವಾದ ಅನುಗ್ರಹವೊಂದನ್ನು ನೀಡಿದೆ ಎಂದರು. ಇದನ್ನೂ ಓದಿ: ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದ ಸನ್ನಿಧಾನ- ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ʼಭಾಸ್ಕರʼ

    ಈ ವರ್ಷ ಸೂರ್ಯ 46 ಸೆಕೆಂಡ್ ಗಳ ಕಾಲ ಲಿಂಗದ ಮೇಲಿದ್ದು ಪೂಜಿಸಿದ್ದಾನೆ. ಸ್ವಲ್ಪ ಜಲಕಂಟಕ ಸಂಭವಿಸಬಹುದು. ಯಾಕೆಂದರೆ ಗಂಗೆಯ ದರ್ಶನವನ್ನು ಮಾಡದೇ ಸೂರ್ಯ ಮರೆಯಾಗಿದ್ದಾನೆ. ಹೀಗಾಗಿ ಸಣ್ಣ ಜಲಾವೃತ್ತಿಯಾದ ಅನಾಹುತಗಳು ನಡೆಯುತ್ತವೆ. ಕೋಪಗೊಂಡ ಗಂಗೆಯಿಂದ ನದಿಯ ಪ್ರವಾಹದಂತಹ ಅನಾಹುತಗಳು ಸಂಭವಿಸಬಹುದು. ರುದ್ರಾಭಿಷೇಕ, ಗಂಗಾ ಜಪ ಮಾಡಬೇಕು ಎಂದು ಅವರು ಹೇಳಿದರು.

    ಸ್ವಾಮಿಯ ಲಿಂಗದ ಮೇಲೆ 46 ಸೆಕೆಂಡ್ ಪೂಜೆ ಇತ್ತು. ಪಾದದಿಂದ ಪೀಠದವರೆಗೆ 50 ಸೆಕೆಂಡ್ ಸೂರ್ಯರಶ್ಮಿ ಇತ್ತು. 5.38 ರಿಂದ 5.45ರವರೆಗೆ ಪೂಜೆ ಇತ್ತು ಎಂದು ಸೋಮಸುಂದರ್‌ ದೀಕ್ಷಿತ್‌ ವಿವರಿಸಿದರು.

  • ಈ ಬಾರಿ ಗವಿಗಂಗಾಧರನಿಗಿಲ್ಲ ಸೂರ್ಯ ರಶ್ಮಿಯ ಅಭಿಷೇಕ

    ಈ ಬಾರಿ ಗವಿಗಂಗಾಧರನಿಗಿಲ್ಲ ಸೂರ್ಯ ರಶ್ಮಿಯ ಅಭಿಷೇಕ

    ಬೆಂಗಳೂರು: ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾದ ಪರಿಣಾಮ ಈ ಬಾರಿ ಗವಿಗಂಗಾಧರನಿಗೆ ಸೂರ್ಯ ರಶ್ಮಿಯ ಅಭಿಷೇಕ ಇಲ್ಲ.

    ಸಂಕ್ರಾಂತಿ ಸಡಗರದ ನಡುವೆ ಸೂರ್ಯ ತನ್ನ ಪಥ ಬದಲಾವಣೆಗಾಗಿ ಪ್ರತಿ ವರ್ಷ ಭಾಸ್ಕರನ ಅನುಮತಿಯನ್ನ ಇಂದು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ನಗರದ ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರನ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಮೋಡ ಅಡ್ಡವಾದ ಪರಿಣಾಮ ಸೂರ್ಯ ತನ್ನ ಪಥ ಬದಲಿಸಿದ್ದಾನೆ.

    ಇಂದು 5.25 ರಿಂದ 5.27 ಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗಬೇಕಿತ್ತು. ಗವಿಗಂಗಾಧರನನ್ನು ಸ್ಪರ್ಶಿಸದೆ ಭಾಸ್ಕರ ತನ್ನ ಪಥ ಬದಲಿಸಿದ್ದಾನೆ. ಮೋಡ ಅಡ್ಡ ಬಂದ ಪರಿಣಾಮ ಸೂರ್ಯ ರಶ್ಮಿಯ ಸ್ಪರ್ಶ ಅಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಅಗೋಚರವಾಗಿಯೇ ಗವಿ ಗಂಗಾಧರನನ್ನು ಸ್ಪರ್ಶಿಸಿ ಸೂರ್ಯ ಮುಂದೆ ಹೋಗಿದ್ದಾನೆ.

    ಗವಿಗಂಗಾಧರ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯ ಜರುಗಿತ್ತು. ಸಂಜೆಯ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಪೆಂಡಲ್ ಹಾಕಿ ಎಲ್‍ಇಡಿ ಟಿವಿ ಅಳವಡಿಸಲಾಗಿತ್ತು.

    ಒಂದು ವೇಳೆ ಭಕ್ತಾದಿಗಳು ಸಹಕರಿಸದಿದ್ದರೆ ದೇವಸ್ಥಾನ ಕ್ಲೋಸ್ ಮಾಡ್ತೇವೆ. ಭಕ್ತಾದಿಗಳಿಗೆ ಒಳಗಡೆ ಬಿಡಬೇಡಿ ಅಂತ ಸರ್ಕಾರ ಈಗಾಗಲೇ ಹೇಳಿದೆ. ನೂಕು ನುಗ್ಗಲು ಆಗುತ್ತೆ. ಕೊರೊನಾ ಪರಿಸ್ಥಿತಿಗೆ ಅನುಗುಣವಾಗಿ ಈ ಆದೇಶ ಕೊಟ್ಟಿದ್ದಾರೆ. ಆದ್ದರಿಂದ ಭಕ್ತಾದಿಗಳು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಂದರೆ ಮೂಲಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡ್ತೇವೆ ಅಂತ ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ್ ಹೇಳಿದ್ದರು.