Tag: ಗರುಡ

  • ಪಾದರಾಯನಪುರಕ್ಕೆ ಗರುಡ ಟೀಂ ಎಂಟ್ರಿ

    ಪಾದರಾಯನಪುರಕ್ಕೆ ಗರುಡ ಟೀಂ ಎಂಟ್ರಿ

    ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಕೆಲ ಪುಂಡರು ಗಲಭೆ ನಡೆಸಿದ ಸಂಬಂಧ ಇದೀಗ ಏರಿಯಾಗೆ ಗರುಡ ಟೀಂ ಎಂಟ್ರಿ ಕೊಟ್ಟಿದೆ. ಈ ಮೂಲಕ ಇನ್ಮುಂದೆ ಪಾದರಾಯನಪುರದಲ್ಲಿ ಯಾರೂ ಮಿಸುಕಾಡುವಂಗಿಲ್ಲ.

    ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತುಕೊಳ್ಳುತ್ತಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಟ್ಟಿದ್ದಾರೆ.

    ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್‍ಗಳಲ್ಲಿ, ಜೀಪ್‍ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ಒಟ್ಟಿನಲ್ಲಿ ಸದ್ಯ ಪಾದರಾಯನಪುರ ಸಂಪೂರ್ಣ ಖಾಕಿ ಮಯವಾಗಿದೆ.

    ಕ್ವಾರಂಟೈನ್ ಮಾಡಬೇಕಾಗಿದ್ದರೂ ನಾಪತ್ತೆಯಾಗಿದ್ದಾರೆ. 58 ಜನರ ಪೈಕಿ 33 ಜನರ ಕ್ವಾರಂಟೈನ್ ಮಾಡಬೇಕಿತ್ತು. 33 ಜನರಲ್ಲಿ ಸಾಕಷ್ಟು ಜನ ನಾಪತ್ತೆಯಾಗಿದ್ದಾರೆ. ಪೊಲೀಸರು ಹುಡುಕುವಂತಿಲ್ಲ. ಆರೋಗ್ಯ ಅಧಿಕಾರಿಗಳು ಬರುತ್ತಿಲ್ಲ. ಈಗ ಇಡೀ ಏರಿಯಾಕ್ಕೆ ಏರಿಯಾವೇ ಭಯದ ವಾತಾವರಣ ನಿರ್ಮಾಣವಾಗಿದೆ. ಮೃತ ಮಹಿಳೆಯ ಜನ ಸೆಕೆಂಡರಿ ಕಾಂಟ್ಯಾಕ್ಟ್ ಅಲ್ಲಿ ಇದ್ದ ಜನ ನಾಪತ್ತೆಯಾಗಿ ಕೊರೊನಾ ಹಬ್ಬುವ ಭೀತಿ ಹೆಚ್ಚಾಗಿದೆ.

    ಸದ್ಯ ಭಾನುವಾರ ರಾತ್ರಿ ಗಲಭೆ ನಡೆಸಿದ ಪುಂಡರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಭಯೋತ್ಪಾದನ ದಾಳಿ ನಿಗ್ರಹಕ್ಕೆ ರಾಜ್ಯದಲ್ಲಿ ಸಿದ್ಧವಾಗಿದೆ ‘ಗರುಡ’ ಪಡೆ

    ಭಯೋತ್ಪಾದನ ದಾಳಿ ನಿಗ್ರಹಕ್ಕೆ ರಾಜ್ಯದಲ್ಲಿ ಸಿದ್ಧವಾಗಿದೆ ‘ಗರುಡ’ ಪಡೆ

    ಬೆಂಗಳೂರು : ಇತ್ತೀಚೆಗೆ ಭಯೋತ್ಪಾದನ ದಾಳಿಗಳು ಜಾಸ್ತಿ ಆಗ್ತಾನೆ ಇವೆ. ಈ ಭಯೋತ್ಪಾದನ ದಾಳಿ ನಿಗ್ರಹಕ್ಕಾಗಿ ಕರ್ನಾಟಕದಲ್ಲಿ ವಿಶೇಷ ತಂಡ ರಚನೆಯಾಗಿದೆ. ಭಯೋತ್ಪಾದನೆ ದಾಳಿ ನಿಗ್ರಹಕ್ಕಾಗಿ ವಿಶೇಷವಾಗಿ ತರಬೇತಿ ಪಡೆದು ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಬೇಟೆ ಆಡುತ್ತೆ ಈ ಸಾಹಿಸಿಗಳ ತಂಡ. ಈ ವಿಶೇಷ ತಂಡದ ಹೆಸರೇ ಗರುಡ.

    ಕರ್ನಾಟಕ ಪೊಲೀಸ್ ನ ಹೆಮ್ಮೆಯ ತಂಡ ಗರುಡ. ಭಯೋತ್ಪಾದನ ದಾಳಿಯ ನಿಗ್ರಹದ ಕಾರ್ಯಾಚರಣೆಗಾಗಿ ಪೊಲೀಸ್ ಆಂತರಿಕ ವಿಭಾಗದಲ್ಲಿ ವಿಶೇಷ ಶಸ್ತ್ರಸಜ್ಜಿತ ತರಬೇತಿ ಹೊಂದಿದೆ ಈ ಗರುಡ ಪಡೆ. 2010ರಲ್ಲಿ ಈ ಗರುಡ ಪಡೆ ಸ್ಥಾಪನೆ ಮಾಡಲಾಯ್ತು. ಬೆಂಗಳೂರು ಕೂಡ್ಲುವಿನಲ್ಲಿ ಕೇಂದ್ರ ಸ್ಥಾನ ಇದೆ. ದಿನದ 24 ಗಂಟೆಯು ತುರ್ತು ಕಾರ್ಯಾಚರಣೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸದಾ ಸನ್ನದ್ಧವಾಗಿರುತ್ತೆ ಈ ಗರುಡ ಪಡೆ.

    ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಗರುಡ ಪಡೆ ಮೊದಲ ಬಾರಿಗೆ ಅಣಕು ಪ್ರದರ್ಶನ ನಡೆಸಿತು. ಬಸ್ ಮೇಲೆ ಉಗ್ರರು ದಾಳಿ ಮಾಡಿದಾಗ ಉಗ್ರರನ್ನ ಸದೆಬಡಿದು ಪ್ರಯಾಣಿಕರ ರಕ್ಷಣೆ ಹೇಗೆ ಮಾಡುತ್ತೆ ಎಂಬುದರ ಬಗ್ಗೆ ಅಣಕು ಪ್ರದರ್ಶನ ಮಾಡಿ, ತನ್ನ ತಾಕತ್ ಪ್ರದರ್ಶನ ಮಾಡಿತು.

    ಈ ಗರುಡ ಪಡೆಯ ಇನ್ನೊಂದು ವಿಶೇಷ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ತಳಿಯ ಶ್ವಾನ. ಭಯೋತ್ಪಾದನಾ ನಿಗ್ರಹ, ನಕ್ಸಲ್ ನಿಗ್ರಹ ಪಡೆಯಲ್ಲಿ ಈ ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ಶ್ವಾನ ಪ್ರಮುಖ ಪಾತ್ರವಹಿಸುತ್ತೆ. ಮೂಲತಃ ಬೆಲ್ಜಿಯಂ ತಳಿಯ ಶ್ವಾನ ಇದು. ಸ್ವಾಭಾವಿಕವಾಗಿ ಅತೀ ಚುರುಕುತನ, ಅತೀ ಗ್ರಹಣ ಶಕ್ತಿ, ತೀಕ್ಷ್ಣ ಬುದ್ದಿವಂತಿಕೆ, 20-30 ಕಿಲೋಮೀಟರ್ ನಡೆಯುವ ಮತ್ತು ಓಡುವ ಸಾಮಥ್ರ್ಯ ಈ ಶ್ವಾನಕ್ಕೆ ಇದೆ. ಯಾವುದೇ ಆಹಾರ ಪದ್ದತಿ, ಯಾವುದೇ ವಾತಾವರಣಕ್ಕೆ ಈ ಶ್ವಾನ ಹೊಂದಿಕೊಳ್ಳುತ್ತೆ.

    ಸದ್ಯ ಬೆಂಗಳೂರಿನಲ್ಲಿ 4 ಬೆಲ್ಜಿಯನ್ ಮಾಲಿನೋಯಿಸ್ ಶಫರ್ಡ್ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಬೆಂಗಳೂರಿನ ತರಳು ಗ್ರಾಮದಲ್ಲಿರುವ ಸಿ.ಆರ್.ಪಿ.ಎಫ್ ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. 10 ತಿಂಗಳು ಕಾಲ ಶಿಸ್ತು ಕಲಿಸುವಿಕೆ, ಟ್ರಾಕಿಂಗ್, ಗುರುತು ಪತ್ತೆ, ಆಕ್ರಮಣದ ತರಬೇತಿ ಐಇಡಿ ಪತ್ತೆ ಹಚ್ಚುವ ತರಬೇತಿ ನೀಡಲಾಗುತ್ತದೆ. ತರಬೇತಿ ನೀಡದ ಬಳಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಈ ಶ್ವಾನಗಳನ್ನ ಬಳಸಿಕೊಳ್ಳಲಾಗುತ್ತದೆ.

  • ಟ್ರೇಲರ್ ಮೂಲಕ ಗರಿಗೆದರಿದ ಗರುಡ : ಶಿವಣ್ಣ ಮೆಚ್ಚುಗೆ!

    ಟ್ರೇಲರ್ ಮೂಲಕ ಗರಿಗೆದರಿದ ಗರುಡ : ಶಿವಣ್ಣ ಮೆಚ್ಚುಗೆ!

    ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಸತತವಾಗಿ ಸಿದ್ಧಗೊಳ್ಳುತ್ತಿದ್ದ, ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಗರುಡ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಯಾಕೆ ಮೂರು ವರ್ಷ ಕಾಲಾವಧಿಯನ್ನು ಈ ಸಿನಿಮಾ ಪಡೆದುಕೊಂಡಿತು ಅನ್ನೋದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಗರುಡ ಚಿತ್ರದ ಟ್ರೇಲರ್ ನೋಡಿದವರಿಗೆ ‘ಇದೇನಿದು ಹಾಲಿವುಡ್ ರೇಂಜಿಗೆ ರೂಪಿಸಿದ್ದಾರಲ್ಲಾ?’ ಎನ್ನುವ ಭಾವನೆ ಮೂಡುತ್ತದೆ. ಅಷ್ಟೊಂದು ದೃಶ್ಯ ಶ್ರೀಮಂತಿಕೆ ಹೊಂದಿರುವ ಈ ಚಿತ್ರ ದೊಡ್ಡ ಬಜೆಟ್ಟು, ಹಿರಿದಾದ ಕಲಾವಿದ, ತಂತ್ರಜ್ಞರನ್ನು ಒಳಗೊಂಡು ತಯಾರಾಗಿದೆ. ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ, ಕಿಶೋರ್ ಎ ಅರ್ಪಿಸಿ, ಬಿ.ಕೆ. ರಾಜಾರೆಡ್ಡಿ ಮತ್ತು ಪ್ರಸಾದ್ ರೆಡ್ಡಿ ಎಸ್ ಅವರು ನಿರ್ಮಿಸುತ್ತಿರುವ ಚಿತ್ರ ‘ಗರುಡ’. ಈ ಹಿಂದೆ ‘ಸಿಪಾಯಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿದ್ಧಾರ್ಥ್ ಮಹೇಶ್ ಅವರ ಎರಡನೇ ಚಿತ್ರ ಇದಾಗಿದೆ.

    ಈ ಚಿತ್ರದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಈ ಚಿತ್ರತಂಡ ಶ್ರಮವನ್ನು ಕಂಡು ಬೆರಗಾಗಿದ್ದಾರೆ. ಟ್ರೇಲರನ್ನು ಅಪಾರವಾಗಿ ಮೆಚ್ಚಿರುವ ಶಿವಣ್ಣ ಸಿದ್ಧಾರ್ಥ್ ಮಹೇಶ್ ಸೇರಿದಂತೆ ಗರುಡ ಚಿತ್ರಕ್ಕೆ ಶುಭಾಶಯ ತಿಳಿಸಿದ್ದಾರೆ.

    ಕುಟುಂಬದಲ್ಲಿ ಒಂದು ಘಟನೆ ನಡೆಯುತ್ತದೆ. ಅದು ನಾಯಕನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಕೌಟುಂಬಿಕವಾಗಿ ಶುರುವಾಗುವ ಚಿತ್ರ ಎಲ್ಲೆಲ್ಲಿ ಸಾಗುತ್ತದೆ ಅನ್ನೋದು ಗರುಡ ಚಿತ್ರದ ಪ್ರಧಾನ ಅಂಶ. ಸಿದ್ಧಾಥ್ ಮಹೇಶ್ ಈ ಚಿತ್ರದಲ್ಲಿ ಆ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ನಟ ಶ್ರೀನಗರ ಕಿಟ್ಟಿ ಈ ವರೆಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಗರುಡ ಅವರ ವೃತ್ತಿ ಬದುಕಿಗೆ ಕಮರ್ಷಿಯಲ್ ಕಲರ್ ನೀಡಿ ನನ್ನ ಕೆರಿಯರ್‍ಗೆ ಬೇರೆ ದಾರಿ ನೀಡುತ್ತದೆ ಎನ್ನುವ ನಂಬಿಕೆ ಸ್ವತಃ ಕಿಟ್ಟಿ ಅವರದ್ದು. ಕಿಟ್ಟಿ ಮತ್ತು ರಂಗಾಯಣ ರಘು ಕಾಂಬಿನೇಷನ್ ಸಾಕಷ್ಟು ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ಈ ಚಿತ್ರದಲ್ಲೂ ಅದು ಮುಂದುವರೆಯಲಿದೆ. ಈ ಚಿತ್ರದಲ್ಲಿ ಕಿಟ್ಟಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ನಾಯಕನಟಿ ಆಶಿಕಾ ರಂಗನಾಥ್ ಅವರದ್ದು ಈ ಸಿನಿಮಾದಲ್ಲಿ ನನ್ನದು ಕಾಲೇಜ್ ಹುಡುಗಿ ಪಾತ್ರ. ಮನಸಲ್ಲಿ ಉಳಿಯೋ ಕ್ಯಾರೆಕ್ಟರ್ ಅಂತೆ. ಐಂದ್ರಿತಾ ರೇ ದೊಡ್ಡ ಗ್ಯಾಪ್ ನಂತ ನಬಟಿಸಿದ ಸಿನಿಮಾ ಗರುಡ. ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದಾಗ ಐಂದ್ರಿತಾ ತಮ್ಮ ಮದುವೆಯ ವಿಚಾರವನ್ನು ಅನೌನ್ಸ್ ಮಾಡಿದ್ದರು. ಗರುಡ ಚಿತ್ರದಿಂದ ಐಂದ್ರಿತಾ-ದಿಗಂತ್ ಮದುವೆ ಓಡಾಟಗಳಿಗೆ ಸ್ವಲ್ಪ ಅಡೆತಡೆಯಾಗಿತ್ತಂತೆ ಆದರೆ ಗರುಡ ಸಿನಿಮಾಗೆ ಮೊದಲ ಆದ್ಯತೆ ನೀಡಿದ್ದರಂತೆ!

    ನಟ ಆದಿ ಲೋಕೇಶ್ ಅವರಿಗಿದು ಪರ್ಸನಲ್ಲಾಗಿ, ಮನಸ್ಸಿಗೆ ತುಂಬಾ ಹತ್ರಿತವಾದ ಸಿನಿಮಾವಂತೆ. “ರಿಲೀಸ್ ಆದ ಮೇಲೆ ಹೆಣ್ಮಕ್ಕಳು ನನ್ನನ್ನು ನೋಡಿದರೆ ಚಪ್ಪಲಿ ತಗೊಂಡು ಹೊಡೀತಾರೆ” ಎಂದು ಸ್ವತಃ ಅವರೇ ಹೇಳಿಕೊಳ್ಳುವ ಮಟ್ಟಿಗೆ ಈ ಚಿತ್ರದ ಕಾಳಿಂಗನ ಪಾತ್ರ ಕ್ರೂರವಾಗಿದೆಯಂತೆ. ಗಾಯಕ ರಘು ದೀಕ್ಷಿತ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರೋದು ವಿಶೇಷ.

    ಕಳೆದ ಹನ್ನೆರಡು ವರ್ಷಗಳಿಂದ ಸ್ವತಂತ್ರ ನೃತ್ಯನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಧನಕುಮಾರ್ ‘ಗರುಡ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಗರುಡ ಚಿತ್ರದ ಟ್ರೇಲರ್ ಅನ್ನು ರಘು ದೀಕ್ಷಿತ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಗರುಡ ತೆರೆಗೆ ಬರುವ ಎಲ್ಲ ಯೋಜನೆ ರೂಪಿಸಿಕೊಂಡಿದೆ. ಧನಕುಮಾರ್ ನಿರ್ದೇಶನದ ಗರುಡ ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ದೀಪು ಎಸ್‍ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನದ ಈ ಚಿತ್ರದಲ್ಲಿಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಟ್ಮಲಾನಿ, ರಂಗಾಯಣ ರಘು, ಆದಿಲೋಕೇಶ್, ರಾಜೇಶ್‍ನಟರಂಗ, ರವಿಶಂಕರ್ ಗೌಡ, ರಘುದೀಕ್ಷಿತ್ ಮುಂತಾದವರ ತಾರಾಬಳಗವಿದೆ.

    https://www.youtube.com/watch?v=zbS1-dxwKe0

  • ಷಷ್ಠಿ ವೇಳೆ ಕೆಳಗೆ ಬಿತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರುಡ, ಕಿರುಘಂಟೆ!

    ಷಷ್ಠಿ ವೇಳೆ ಕೆಳಗೆ ಬಿತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಗರುಡ, ಕಿರುಘಂಟೆ!

    – ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅವಘಡ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯಲ್ಲಿ ಇತಿಹಾಸ ಪ್ರಸಿದ್ಧ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಉತ್ಸವದಲ್ಲಿ ಹಾರಿಸಿದ್ದ ಧ್ವಜವನ್ನು ಇಳಿಸುವ ವೇಳೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದೆ.

    ದೇವಾಲಯದಲ್ಲಿ ಷಷ್ಠಿ ಉತ್ಸವ ನಡೆದು ಧೂಮಾವತಿ ದೈವದ ನೇಮ ಜರಗಿತ್ತು. ನೇಮದ ಸಂದರ್ಭದಲ್ಲಿ ಧೂಮಾವತಿ ದೈವದ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ನುಡಿ ಹೇಳಿತ್ತು. ಆದರೆ ಗ್ರಾಮಸ್ಥರು ಬ್ರಹ್ಮಕಲಶ ಮಾಡಲು ನಿರಾಕರಿಸಿದ್ದರು.

    ಉತ್ಸವದ ಮರುದಿನ ಕಾಕತಾಳೀಯ ಎಂಬಂತೆ ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರುಘಂಟೆಯನ್ನು ಇಳಿಸುವಾಗ ಹಗ್ಗ ತುಂಡಾಗಿ ಗರುಡ ಕೆಳಕ್ಕೆ ಬಿದ್ದಿದೆ. ಉತ್ಸವ ಸಂದರ್ಭದಲ್ಲಿ ಏರಿಸಲ್ಪಟ್ಟ ಗರುಡ ಕೆಳಕ್ಕೆ ಬಿದ್ದರೆ ಅನಾಹುತ ಸಂಭವಿಸುತ್ತದೆ ಎನ್ನುವ ನಂಬಿಕೆ ಕರಾವಳಿ ಭಾಗದಲ್ಲಿದೆ.

    ಧೂಮಾವತಿ ದೈವ ದೇವಸ್ಥಾನಕ್ಕೆ ಬ್ರಹ್ಮಕಲಶ ಆಗಬೇಕೆಂದು ದೈವ ಹೇಳಿದ್ದ ಮರುದಿನವೇ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದನ್ನು ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

    19 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಬ್ರಹ್ಮಕಲಶ ನಡೆದಿದ್ದರೂ, ಈಗ ಶಿಥಿಲಾವಸ್ಥೆಗೆ ಬಂದಿತ್ತು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ದೈವದ ನುಡಿಯನ್ನು ಉಲ್ಲಂಘಿಸಿದ್ದೇ ಅನಾಹುತಕ್ಕೆ ಕಾರಣ. ಇದರಿಂದ ಮುಂದೆ ಅನಾಹುತ ಕಾದಿದೆ ಅನ್ನುವ ಮಾತು ಈಗ ಗ್ರಾಮಸ್ಥರ ಬಾಯಲ್ಲಿ ಹರಿದಾಡುತ್ತಿದೆ.

    ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸಂತೋಷ್ ಶೆಟ್ಟಿ, 13ರಂದು ಷಷ್ಠಿ ದಿವಸವಾಗಿತ್ತು. ಅಂದು ಧ್ವಜರೋಹಣ ಆಗಿದೆ. ಆಗ ಗರುಡ ಸಮೇತ ಧ್ವಜಸ್ತಂಭಕ್ಕೆ ಏರಿಸುವಾಗ ಹಗ್ಗದ ಗಂಟು ರಾಟೆಗೆ ಸಿಲುಕಿಕೊಂಡಿದೆ. ಆದರೆ ಅಂದಿನ ದಿನ ಯಾರು ಇದನ್ನು ಗಮನಿಸಿರಲಿಲ್ಲ. ನಾಲ್ಕು ದಿನಗಳ ಬಳಿಕ ಪೂಜೆ ಸಲ್ಲಿಸಿ ಗರುಡನನ್ನು ಕೆಳಗೆ ಇಳಿಸಬೇಕಿತ್ತು. ನಾವು ಗರುಡವನ್ನು ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದೆವು. ಆಗ ಅಕಸ್ಮಾತಾಗಿ ಕೆಳಗೆ ಬಿದ್ದಿದೆ ಎಂದು ಹೇಳಿದ್ದಾರೆ.

    ಧ್ವಜಸ್ತಂಭದಲ್ಲಿದ್ದ ಗರುಡ ಮತ್ತು ಕಿರು ಘಂಟೆ ಕೆಳಗೆ ಬಿದ್ದಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಆದರೂ ಯಾರಿಗೂ ತೊಂದರೆಯಾಗಬಾದರದು ಎಂದು ಕೆಳಗೆ ಬಿದ್ದ ತಕ್ಷಣ 48 ಕಳಸವಿಟ್ಟು ಪೂಜೆ ಸಲ್ಲಿಸಿದ್ದೇವೆ ಎಂದು ಸಂತೋಷ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯ ರಕ್ಷಣೆ

    ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯ ರಕ್ಷಣೆ

    ಮಂಡ್ಯ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗರುಡ ಪಕ್ಷಿಯನ್ನು ಮಂಡ್ಯದ ಉರಗ ಪ್ರೇಮಿ ನಾರಾಯಣ್ ರಕ್ಷಣೆ ಮಾಡಿ ಚಿಕಿತ್ಸೆ ನೀಡೋ ಮೂಲಕ ಮಾನವೀಯತೆ ತೋರಿದ್ದಾರೆ.

    ಬೆಂಗಳೂರು-ಮೈಸೂರು ಹೆದ್ದಾರಿಯ ನಗುವಿನಹಳ್ಳಿ ಬಳಿ ಗರುಡ ಪಕ್ಷಿಗೆ ಬಸ್ಸೊಂದು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಗರುಡ ಪಕ್ಷಿಯ ಎಡಭಾಗದ ರೆಕ್ಕೆಗೆ ಗಂಭೀರ ಗಾಯವಾಗಿತ್ತು.

    ಈ ವೇಳೆ ಅದೇ ಮಾರ್ಗದಲ್ಲಿ ಆಟೋದಲ್ಲಿ ಹೋಗುತ್ತಿದ್ದ ನಾರಾಯಣ್, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರುಡ ಪಕ್ಷಿಯನ್ನ ಗಮನಿಸಿದ್ದಾರೆ. ಕೂಡಲೇ ಮನೆಗೆ ವಾಪಾಸ್ ಬಂದು ಗರುಡಕ್ಕೆ ನಾಟಿ ಔಷಧಿಯ ಚಿಕಿತ್ಸೆ ಕೊಟ್ಟಿದ್ದಾರೆ. ಇದೀಗ ಗರುಡ ಪಕ್ಷಿ ಚೇತರಿಸಿಕೊಳ್ಳುತ್ತಿದೆ.