Tag: ಗಣಿ

  • ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಶುರುವಾಗಿದೆ. ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿ ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಎರಡು ಮಹತ್ವದ ಪ್ರಕರಣಗಳನ್ನು ಸಿಬಿಐ ಕೈಬಿಟ್ಟಿತ್ತು. ಕಾರವಾರ, ಮಂಗಳೂರು ಬಂದರಿನಲ್ಲಿ ಅಕ್ರಮ ರಫ್ತು ಪ್ರಕರಣವನ್ನು ಸಿಬಿಐ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೈಬಿಟ್ಟಿತ್ತು. ಈ ಸಹಸ್ರಾರು ಕೋಟಿ ಪ್ರಕರಣದ ಹಿಂದೆ ಕಳ್ಳ ಕುಳಗಳೇ ಇದ್ದು, ನರೇಂದ್ರ ಮೋದಿ, ಅಮಿತ್ ಶಾ ಜೊತೆ ಇರುವ ಉದ್ಯಮಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ.

    ಉದ್ಯಮಿಗಳ ಮೇಲೆ ಎಸ್‍ಐಟಿ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಿಜೆಪಿಯ ಹಣಬಲಕ್ಕೆ ಬ್ರೇಕ್ ಹಾಕಲು ಈ ಪ್ಲ್ಯಾನ್ ಮಾಡಿದೆ. ಬಿಜೆಪಿಯ ಐಟಿ ಶಸ್ತ್ರಕ್ಕೆ ಪ್ರತಿಯಾಗಿ ಎಸ್‍ಐಟಿ ಶಸ್ತ್ರ ಬಳಸಲು ಮುಂದಾಗಿದೆ. ನವೆಂಬರ್ 8ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.

  • ಅದಿರು ಹಗರಣ ಸಾಬೀತಿಗೆ ಸಾಕ್ಷ್ಯವೇ ಇಲ್ಲ – ಬಳ್ಳಾರಿ ಗಣಿ ಹಗರಣ ಕೇಸ್ ಕ್ಲೋಸ್..?

    ಅದಿರು ಹಗರಣ ಸಾಬೀತಿಗೆ ಸಾಕ್ಷ್ಯವೇ ಇಲ್ಲ – ಬಳ್ಳಾರಿ ಗಣಿ ಹಗರಣ ಕೇಸ್ ಕ್ಲೋಸ್..?

    -ಎಲೆಕ್ಷನ್ ಹೊತ್ತಲ್ಲಿ ರೆಡ್ಡಿ ಬ್ರದರ್ಸ್ ಬಚಾವ್..?

    ಬೆಂಗಳೂರು: ಕರ್ನಾಟಕದ ರಾಜಕಾರಣವನ್ನೇ ತಲ್ಲಣಿಸಿದ್ದ ಬಹುಕೋಟಿ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ಸದ್ದಿಲ್ಲದೆ ಕೊನೆಮಾಡುತ್ತಿದೆ.

    ಮೊದಲ ಬಾರಿಗೆ ಅಧಿಕಾರದಲ್ಲಿದ್ದ ಬಿಜೆಪಿಗೆ ಕಂಟಕವಾಗಿದ್ದ ಈ ಹಗರಣವನ್ನು ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಲಾಗಿತ್ತು. ಆಂಧ್ರ ಪ್ರದೇಶ, ಮಂಗಳೂರು, ಗೋವಾ, ಮತ್ತು ಕೃಷ್ಣಪಟ್ಟಣ ಬಂದರುಗಳಿಂದ ಅಕ್ರಮ ಅದಿರಿನ ರಫ್ತು ನಡೆಯುತ್ತಿದ್ದು, ಅಲ್ಲಿಂದನೇ ಪ್ರಾಥಮಿಕ ಶೋಧ ಕಾರ್ಯಚರಣೆ ಆರಂಭವಾಗಿದೆ. ಆದರೆ ಮೊದಲ ಹಂತದಲ್ಲಿಯೇ ಸಿಬಿಐಗೆ ಪ್ರಕರಣಗಳಿಗೆ ಸಂಬಂಧಿಸಿಂತೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಕೈ ಚೆಲ್ಲಿ ಕುಳಿತಿದೆ.

    ಸುಪ್ರೀಂ ಕೋರ್ಟ್ ಈ ಹಗರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ನೀಡಿದಾಗ ಸಿಬಿಐ, ಜನಾರ್ದನ ರೆಡ್ಡಿ ಮತ್ತು ಅಕ್ರಮ ಗಣಿಗಾರಿಕೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾದ ಕಂಪನಿಗಳ ವಿರುದ್ಧ ಚಾರ್ಜ್ ಸೀಟ್‍ಗಳನ್ನು ಹಾಕಲಾಗಿತ್ತು.

    ಅಕ್ರಮ ಗಣಿಗಾರಿಕೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, 2012 ರಲ್ಲಿ ಸಚಿವಾಲಯ ಸುಮಾರು 25 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಂದಾಜಿಸಿ ಸಿಬಿಐ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.

    ಸಿಬಿಐ ಸಲ್ಲಿದ ವದರಿಯ ಪ್ರಕಾರ, ಆಂಧ್ರ ಪ್ರದೇಶ, ಗೋವಾ ಮತ್ತು ಕರ್ನಾಟಕ ಸಿಬಿಐನ ಅಧಿಕಾರಿಗಳು ಪ್ರಕರಣವನ್ನು ಮುಚ್ಚುವಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಅಕ್ರಮ ಗಣಿಗಾರಿಕೆ ಸಾಬೀತಿಗೆ ಸಾಕ್ಷ್ಯಗಳೇ ಇಲ್ಲವೆಂದು ಸಿಬಿಐ ತನಿಖಾಧಿಕಾರಿಗಳಿಂದ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಾಯುಕ್ತ ವರದಿಯಲ್ಲಿ ಏನಿತ್ತು?

    * 2006 ರಿಂದ 2010ರವರೆಗೆ 12.57 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಾಟ
    * ಇದರಲ್ಲಿ 2.98 ಕೋಟಿ ಮೆಟ್ರಿಕ್ ಟನ್‍ನಷ್ಟು ಪ್ರಮಾಣದ ಕಬ್ಬಿಣದ ಅದಿರು ಅಕ್ರಮ ಸಾಗಾಟ
    * ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐನಿಂದ ತನಿಖೆ, ಆರೋಪಪಟ್ಟಿ ಸಲ್ಲಿಕೆ
    * ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಪ್ರಮುಖರ ವಿರುದ್ಧ ಎಫ್‍ಐಆರ್, ಬಂಧನ
    * ಬೇಲೆಕೇರಿ, ನವ ಮಂಗಳೂರು ಬಂದರಿಂದ 50 ಸಾವಿರ ಮೆಟ್ರಿಕ್ ಟನ್‍ನ್ನಷ್ಟು ಅಕ್ರಮವಾಗಿ ಅದಿರು ಸಾಗಾಟ
    * ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರದಿಂದ ಎಸ್‍ಐಟಿ ಸ್ಥಾಪನೆ


  • ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಕಂಟಕ

    ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಕಂಟಕ

    ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಚುನಾವಣೆಗೆ ನಿಲ್ಲುವ ಮೊದಲೇ ಕಂಟಕ ಎದುರಾಗಿದೆ.

    ಈ ಬಾರಿ ಚುನಾವಣೆಗೆ ನಿಲ್ಲಲ್ಲು ಯೋಜನೆ ರೂಪಿಸಿದ್ದ ಜನಾರ್ದನ ರೆಡ್ಡಿ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮೈನಿಂಗ್ ಕೇಸ್‍ನಲ್ಲಿ ಸುಪ್ರೀಂಕೋರ್ಟ್‍ಗೆ ತೆರಳಿ ಇಬ್ಬರು ಮಾಜಿ ಸಿಎಂಗಳ ವಿರುದ್ಧ ಕೇಸ್ ಗೆದ್ದಿರೋ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಂ ಅದೇ ಮಾದರಿಯಲ್ಲಿ ರೆಡ್ಡಿಯ ಅಕ್ರಮ ಮೈನಿಂಗ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲು ತೀರ್ಮಾನ ಮಾಡಿದ್ದಾರೆ.

    ರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ಹಾಕಿದ್ದ ಕೇಸನ್ನು ಹೈಕೋರ್ಟ್ ಮಾರ್ಚ್ 13ರಂದು ವಜಾ ಮಾಡಿತ್ತು. ಆದರೆ, ಇಡಿ ಮೇಲ್ಮನವಿ ಸಲ್ಲಿಸಿಲ್ಲ. ಇದೀಗ ಇದೇ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನೆ ಮಾಡಲು ಅಬ್ರಹಂ ತೀರ್ಮಾನಿಸಿದ್ದಾರೆ.

    ಕೇಸ್‍ಗೆ ಮರುಜೀವ: ಹೈಕೋರ್ಟ್ ಮಾರ್ಚ್ 13ರಂದು ಇಡಿ ದಾಖಲಿಸಿದ್ದ ಕೇಸ್ ವಜಾ ಮಾಡಿತ್ತು. ಸರ್ಕಾರಕ್ಕೆ 884 ಕೋಟಿ ರೂ. ವಾಪಸ್ ನೀಡಲು ಕೋರ್ಟ್ ಹೇಳಿತ್ತು. ಹಳೆಯ ಕೇಸ್‍ಗೆ ಹೊಸ ಕಾನೂನು ಅನ್ವಯ ಆಗೋದಿಲ್ಲ ಎಂದು ಹೈಕೋರ್ಟ್ ಈ ಕೇಸನ್ನು ವಜಾ ಮಾಡಿತ್ತು. ಇದೇ ಪ್ರಕರಣವನ್ನ ಕೈಗೆತ್ತಿಕೊಂಡು ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ಟಿ.ಜೆ.ಅಬ್ರಾಹಂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

    ಇದನ್ನೂ ಓದಿ: ಗಣಿನಾಡಿಗೆ ಜನಾರ್ದನ ರೆಡ್ಡಿ ಗುಡ್‍ಬೈ?