Tag: ಗಡ್ಡೆ

  • ಮಹಿಳೆ ಹೊಟ್ಟೆಯಲ್ಲಿ 16 ಕೆಜಿ ಗಡ್ಡೆ- ಸತತ 6 ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಮಹಿಳೆ ಹೊಟ್ಟೆಯಲ್ಲಿ 16 ಕೆಜಿ ಗಡ್ಡೆ- ಸತತ 6 ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಭೋಪಾಲ್: ಇಪ್ಪತ್ತು ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಲ್ಲಿದ್ದ 16 ಕೆ.ಜಿ ಗಡ್ಡೆಯನ್ನು ಭಾನುವಾರ ಭೋಪಾಲ್‍ನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದಾರೆ.

    ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ದೇವೆಂದ್ರ ಚಂದೋಲಿಯಾ, ಇದೊಂದು ಅಂಡಾಶಯದ ಗಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದೀಗ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಎರಡು ದಿನಗಳ ಹಿಂದೆ ಮಹಿಳೆ ರಾಜ್‍ಗಢದಿಂದ ಬಂದಿದ್ದು, ಅವರ ಹೊಟ್ಟೆಯಲ್ಲಿದ್ದ ಗಡ್ಡೆ ಬಹಳ ದೊಡ್ಡದಾಗಿತ್ತು. ಅಲ್ಲದೆ ಇದರಿಂದ ಮಹಿಳೆಗೆ ಊಟ ಮಾಡಲು ಹಾಗೂ ಓಡಾಡಲು ಸಮಸ್ಯೆಯಾಗುತ್ತಿತ್ತು. ಈ ಗಡ್ಡೆಯನ್ನು ಅಂಡಾಶಯದ ಗಡ್ಡೆ ಎಂದು ಕರೆಯಲಾಗಿದ್ದು, ಮಹಿಳೆಯ 48 ಕೆ.ಜಿ ತೂಕವಿದ್ದರೆ, ಗಡ್ಡೆ 16 ಕೆ.ಜಿ ತೂಕವಿತ್ತು. ಅಲ್ಲದೆ ಇಂದೊಂದು ದೊಡ್ಡ ಶಸ್ತ್ರ ಚಿಕಿತ್ಸೆಯಾಗಿದೆ ಎಂದರು.

    ಸರಿಯಾದ ಸಮಯಕ್ಕೆ ಗಡ್ಡೆಯನ್ನು ದೇಹದಿಂದ ತೆಗೆದು ಹಾಕದಿದ್ದಲ್ಲಿ ಮಹಿಳೆ ಬದುಕುಳಿಯುವ ಸಾಧ್ಯತೆ ಕಡಿಮೆಯಿತ್ತು. ಆದರೆ ಸುಮಾರು 6 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದೀಗ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದರು.

  • ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

    ಲಕ್ನೋ: ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಬರೋಬ್ಬರಿ 24 ಕೆ.ಜಿ ಗಡ್ಡೆ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಉತ್ತರಪ್ರದೇಶದ ಆಲಿಘರ್ ನಲ್ಲಿ ನಡೆದಿದೆ.

    ಆಲಿಘರ್ ಜಿಲ್ಲೆಯ ಚಾರ್ರಾ ನಿವಾಸಿ ಸೀತಾರಾಮ್(45) ಸುಮಾರು ಒಂದೂವರೆ ವರ್ಷಗಳಿಂದ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ಆಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ(ಎಎಂಯು), ಜವಾಹರ್‍ಲಾಲ್ ನೆಹರು ವೈದ್ಯಕೀಯ ಕಾಲೇಜಿನ (ಜೆಎನ್‍ಎಂಸಿ) ವೈದ್ಯರು ರೋಗಿಯ ಹೊಟ್ಟೆಯಿಂದ ಗಡ್ಡೆ ಹೊರತೆಗೆದಿದ್ದಾರೆ.

    ಪ್ರೊ. ಸೈಯದ್ ಹಸನ್ ಹ್ಯಾರಿಸ್ (ಶಸ್ತ್ರ ಚಿಕಿತ್ಸಾ ವಿಭಾಗ) ಅವರ ಮೇಲ್ವಿಚಾರಣೆಯಲ್ಲಿ ಡಾ. ಶಹಬಾಜ್ ಹಬೀಬ್ ಫರಿಡಿ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಈ ಗಡ್ಡೆಯನ್ನು ಹೊಟ್ಟೆಯಿಂದ ತೆಗೆಯುವಲ್ಲಿ ಸೈ ಎನಿಸಿಕೊಂಡಿದೆ.

    ಈ ಸಂಬಂಧ ಪ್ರೊ. ಹಸನ್ ಹ್ಯಾರಿಸ್ ಮಾತನಾಡಿ, ಸಿತಾರಾಮ್ ಅವರು 2018ರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಯಾಕೆ ಈ ರೀತಿ ಆಗುತ್ತಿದೆ ಎಂದು ತಿಳಿದರಿರಲಿಲ್ಲ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಗ್ಗೆ ಹೇಳಿದರು. ಅಲ್ಲದೆ ಹೊಟ್ಟೆ ನೋವಿಗೆಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು, ಆಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋವು ಹೋಗುತ್ತಿತ್ತು ಎಂದು ತಿಳಿಸಿರುವುದಾಗಿ ಹೇಳಿದರು.

    ಸೀತಾರಾಮ್ ಅವರು ಉತ್ತರಪ್ರದೇಶ ಮತ್ತು ದೆಹಲಿಯ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇನ್ನು ಖಾಸಗಿ ಆಸ್ಪತ್ರೆಗೆ ತೆರಳಿದರೆ ಅಲ್ಲಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದರು ಎಂದು ವೈದ್ಯರು ತಿಳಿಸಿದರು. ಕೊನೆಗೆ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಸದ್ಯ ಸೀತಾರಾಮ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.