Tag: ಗಗನ್ ಕಡೂರು

  • ಗಗನ್ ಕಡೂರು ಕರೆತಂದು ಸ್ಥಳ ಮಹಜರ್ ನಡೆಸಿದ ಸಿಸಿಬಿ

    ಗಗನ್ ಕಡೂರು ಕರೆತಂದು ಸ್ಥಳ ಮಹಜರ್ ನಡೆಸಿದ ಸಿಸಿಬಿ

    ಶಿವಮೊಗ್ಗ: ಚೈತ್ರಾ ಕುಂದಾಪುರ (Chaithra Kundapura) ಟಿಕೆಟ್ ಡೀಲ್ ಪ್ರಕರಣ ಸಂಬಂಧ ಸಿಸಿಬಿ (CCB) ಪೊಲೀಸರು ಆರೋಪಿ ಗಗನ್ ಕಡೂರುನನ್ನು (Gagan Kadur) ಶಿವಮೊಗ್ಗದ (Shivamogga) ಪ್ರಮುಖ ಸ್ಥಳಗಳಿಗೆ ಕರೆತಂದು ಸ್ಥಳ ಮಹಜರ್ ನಡೆಸಿದರು.

    ಸಿಸಿಬಿ ಪೊಲೀಸರು ಶಿವಮೊಗ್ಗದ ಗೌಡ ಸಾರಸ್ವತ ಕಲ್ಯಾಣ ಮಂದಿರ ಹಾಗೂ ಮಥುರಾ ಸೆಂಟ್ರಲ್ ಹೋಟೆಲ್ ಬಳಿ ಹಾಗೂ ಕೆಲವು ಆಯ್ದ ಸ್ಥಳದಲ್ಲಿ ಮಹಜರ್ ನಡೆಸಿದ್ದಾರೆ. ಇದನ್ನೂ ಓದಿ: ಬರ್ಮುಡಾ, ಟೀ ಶರ್ಟ್‍ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ!

    ಪ್ರಕರಣದ ಆರೋಪಿ ಗಗನ್ ಕಡೂರು, ಶಿವಮೊಗ್ಗದಲ್ಲಿ ಉದ್ಯಮಿಯಿಂದ 50 ಲಕ್ಷ ರೂ.ಗಳನ್ನು ಪಡೆದು ಚೈತ್ರಾಳಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಹೊರಬಿದ್ದಿತ್ತು. ಅಲ್ಲದೇ ಎಫ್‌ಐಆರ್‌ನಲ್ಲಿಯೂ (FIR) ದಾಖಲಾಗಿತ್ತು. ಇದನ್ನೂ ಓದಿ: ವೇಷ ಬದಲಿಸಿ ರೈಲಿನಲ್ಲಿ ಪ್ರಯಾಣ- ಹಾಲಶ್ರೀ ಸಿಕ್ಕಿಬಿದ್ದಿದ್ದು ಹೇಗೆ?

    ಈ ಹಿನ್ನೆಲೆ ಸ್ಥಳ ಮಹಜರ್‌ಗಾಗಿ ಸಿಸಿಬಿ ಇನ್ಸ್ಪೆಕ್ಟರ್ ಭರತ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ತಂಡ ಶಿವಮೊಗ್ಗ ನಗರಕ್ಕೆ ಆರೋಪಿಯನ್ನು ಕರೆತಂದು ಸ್ಥಳ ಮಹಜರ್ ನಡೆಸಿದೆ. ಸ್ಥಳದಲ್ಲಿ ಆರೋಪಿ ಗಗನ್ ಕಡೂರ್‌ನನ್ನು ನಿಲ್ಲಿಸಿ ಪೋಟೋ ತೆಗೆದುಕೊಂಡು ಪೊಲೀಸರು ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ ಡೀಲ್ ಕೇಸ್- ಗೋವಿಂದ ಪೂಜಾರಿ ವಿರುದ್ಧ ಗಗನ್ ದೂರು

    ಚೈತ್ರಾ ಕುಂದಾಪುರ ಡೀಲ್ ಕೇಸ್- ಗೋವಿಂದ ಪೂಜಾರಿ ವಿರುದ್ಧ ಗಗನ್ ದೂರು

    ಉಡುಪಿ: ಚೈತ್ರಾ ಕುಂದಾಪುರ (Chaitra Kundapura) 5 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಉದ್ಯಮಿ ಗೋವಿಂದ ಪೂಜಾರಿ ವಿರುದ್ಧ ಗಗನ್ (Gagan Kadoor) ಪೊಲೀಸ್ ಠಾಣೆ ಮಟ್ಟಿಲೇರಿದ್ದಾನೆ.

    ದೂರಿನ ಪತ್ರ ಬರೆದು ಗಗನ್, ಚಿಕ್ಕಮಗಳೂರು ಜಿಲ್ಲೆ ಕಡೂರು ಠಾಣೆಗೆ ರವಾನಿಸಿದ್ದಾನೆ. ನನಗೂ ಪತ್ನಿಗೂ ಗೋವಿಂದ ಬಾಬು ಪೂಜಾರಿಯಿಂದ ಜೀವಬೆದರಿಕೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

    ಪತ್ರದಲ್ಲೇನಿದೆ..?: ಕಡೂರು ನಿವಾಸಿಯಾಗಿರುವ ನಾನು ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದು ರಾಜಕೀಯವಾಗಿ ಹಾಗೂ ಸಾಮಾಜಿಕ ತೊಡಗಿಸಿಕೊಂಡಿದ್ದೇನೆ. ನನಗೆ ಕಳೆದ ಕೆಲವು ವರ್ಷಗಳಿಂದ ಗೋವಿಂದ ಬಾಬು ಪೂಜಾರಿ ಎನ್ನುವ ಬೈಂದೂರು ಮೂಲದ ಉದ್ಯಮಿ ಪರಿಚಯವಿದ್ದ ನನ್ನನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಕಳೆದ 4-5 ತಿಂಗಳ ಹಿಂದೆ ನನ್ನ ಮದುವೆಯ ಸಂದರ್ಭದಲ್ಲಿ ನಾನು ಮದುವೆ ಆಮಂತ್ರಣ ನಿಡಲು ಬೆಂಗಳೂರಿನಲ್ಲಿರುವ ಅವರ ಕಚೇರಿಗೆ ತೆರಳಿದ್ದಾಗ ಅವರು ಮದುವೆಯ ಖರ್ಚಿಗೆಂದು 50 ಸಾವಿರ ರೂ. ನೀಡಿದ್ದರು. ಇದನ್ನೂ ಓದಿ: ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ಆ ಹಣವನ್ನು ಸಕಾಲದಲ್ಲಿ ನನಗೆ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಅವರ ಬಳಿ ಸಮಯವಕಾಶ ಕೇಳುತ್ತಿದ್ದೆ. ಆದರೆ ಅವರು ನನ್ನ ಗೆಳತಿಗೆ ಕರೆ ಮಾಡಿ ನನ್ನ ಹಾಗೂ ನನ್ನ ಹೆಂಡತಿಯನ್ನು ಎತ್ತಾಕ್ಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನನ್ನ ಗೆಳತಿಯೊಂದಿಗೆ ಮಾತನಾಡಿರುವ ಕಾಲ್ ರೆಕಾರ್ಡ್ ಸಾಕ್ಷಿಯಾಗಿ ಒದಗಿಸಿರುತ್ತೇನೆ. ಹೀಗಾಗಿ ನನಗೂ ನನ್ನ ಹೆಂಡ್ತಿಗೂ ಸೂಕ್ತ ರಕ್ಷಣೆ ಹಾಗೂ ಗೋವಿಂದ ಬಾಬು ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಗನ್ ವಿನಂತಿಸಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]