Tag: ಗಗನ್

  • EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಉದ್ಯಮಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೇ ಅಚ್ಚರಿಯ ವಿಚಾರಗಳು ಬಯಲಾಗುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಹಾಗೂ ಗ್ಯಾಂಗ್ ನಾಟಕದ ವೀಡಿಯೋವೊಂದು ಎಕ್ಸ್ ಕ್ಲೂಸೀವ್ ಆಗಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚೈತ್ರಾ ಗ್ಯಾಂಗ್ ಮಾಡ್ತಿರುವ ಮೋಸ ಗೊತ್ತಾಗಿ ಗೋವಿಂದ ಬಾಬು ಕೊಟ್ಟ ಹಣವನ್ನು ವಾಪಸ್ ಮಾಡುವಂತೆ ಡಿಮ್ಯಾಂಡ್ ಮಾಡಿದ್ರು. ಹೀಗಾಗಿ ಏಪ್ರಿಲ್ 24ರಂದು ಗೋವಿಂದಬಾಬು ಕಚೇರಿಗೆ ಬಂದ ಚೈತ್ರಾ, ಗಗನ್ ಕಡೂರು ಮತ್ತು ಇತರರು ಮುಂಚಿತವಾಗಿಯೇ ಮಾಡಿದ ಪ್ಲಾನ್ ರೀತಿ ದೊಡ್ಡ ಹೈಡ್ರಾಮಾವನ್ನೇ ಮಾಡಿದ್ರು.

    ಗೋವಿಂದ ಬಾಬು ಕಚೇರಿಗೆ ಪ್ರಮುಖ ಆರೋಪಿ ಚೈತ್ರಾ, 2ನೇ ಆರೋಪಿ ಗಗನ್ ಕಡೂರು, 7ನೇ ಆರೋಪಿ ಕಿಶೋರ್, 8ನೇ ಆರೋಪಿ ಪ್ರಶಾಂತ್ ಬೈಂದೂರು ಆಗಮಿಸಿ ಸಂಧಾನಕ್ಕೆ ಯತ್ನಿಸಿದ್ರು. ಆದ್ರೆ, ಇದಕ್ಕೆ ಒಪ್ಪದೇ 5 ಕೋಟಿ ಹಣಕ್ಕೆ ಗೋವಿಂದ ಬಾಬು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಖಾಲಿ ವಿಷದ ಬಾಟಲಿಯಲ್ಲಿ ನೀರು ತುಂಬಿಕೊಂಡು, ಅದನ್ನೇ ಕುಡಿದು ಆತ್ಮಹತ್ಯೆಗೆ ಯತ್ನಿಸುವ ರೀತಿ ಗಗನ್ ಕಡೂರು ಡ್ರಾಮಾ ಮಾಡಿದ್ರು.

    ಈ ವೇಳೆ ಎ1 ಆರೋಪಿ ಚೈತ್ರಾ, ಗಗನ್ ಜೀವ ರಕ್ಷಣೆ ಮಾಡೋ ರೀತಿ ನಾಟಕ ಮಾಡಿದ್ರು. ಇದೀಗ ಈ ವಿಡಿಯೋ ಸಿಸಿಬಿಗೆ ಪ್ರಬಲ ಸಾಕ್ಷ್ಯವಾಗಲಿದೆ. ಅಂದ ಹಾಗೇ, ಪಬ್ಲಿಕ್ ಟಿವಿ ಜೊತೆ ನಿನ್ನೆ ಮಾತಾಡಿದ್ದ ಗೋವಿಂದ ಬಾಬು ಸಿಬ್ಬಂದಿ ಆರ್ಯ ಎನ್ನುವವರು, ಚೈತ್ರಾ ಗ್ಯಾಂಗ್ ಆತ್ಮಹತ್ಯೆ ಡ್ರಾಮಾ ಮಾಡಿತ್ತು. ಇದಕ್ಕೆ ನಾನೆ ಸಾಕ್ಷಿ ಅಂದಿದ್ರು. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?

    ಇಂದು ಬೆಳಗ್ಗೆಯಷ್ಟೇ ಸಿಸಿಬಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದರು. ಕೂಡಲೇ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಚ್ಚರಿ ಅಂದ್ರೆ ಚೈತ್ರಾ ಕುಸಿದು ಬಿದ್ದಾಗ ಆಕೆಯ ಬಾಯಲ್ಲಿ ನೊರೆ ಬಂದಿತ್ತು. ಹೀಗಾಗಿ ಆಕೆಗೆ ಪಿಡ್ಸ್ ಬಂದಿರಬಹುದು ಎಂದು ಊಹಿಸಲಾಗಿತ್ತು. ಆದರೆ ಮೂರ್ಛೆ ರೋಗ ಅಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ  ಪ್ರಾಂಶುಪಾಲೆ ಆಸೀಮಾ ಬಾನು ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಗನ್, ಧನಂಜಯ್, ಚೈತ್ರಾ ಕುಂದಾಪುರ ಪರಿಚಯವಾಗಿದ್ದು ಹೇಗೆ?: ಡೀಲ್ ಕೇಸ್‍ನ ಸಂಪೂರ್ಣ ಕಥೆ ಬಿಚ್ಚಿಟ್ಟ ಚನ್ನನಾಯ್ಕ್

    ಗಗನ್, ಧನಂಜಯ್, ಚೈತ್ರಾ ಕುಂದಾಪುರ ಪರಿಚಯವಾಗಿದ್ದು ಹೇಗೆ?: ಡೀಲ್ ಕೇಸ್‍ನ ಸಂಪೂರ್ಣ ಕಥೆ ಬಿಚ್ಚಿಟ್ಟ ಚನ್ನನಾಯ್ಕ್

    – ನನಗೆ ಮೇಕಪ್ ಮಾಡಲು 3 ದಿನ ತಗೊಂಡ್ರು

    ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣದ 5ನೇ ಆರೋಪಿಯಾಗಿರುವ ಹಾಗೂ ಡೀಲ್‍ನಲ್ಲಿ ‘ವಿಶ್ವನಾಥ್ ಜೀ’ ಪಾತ್ರಧಾರಿಯಾಗಿದ್ದ ಚನ್ನನಾಯ್ಕ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ನನಗೆ ಗಗನ್ ಮತ್ತು ಧನಂಜಯ್ ಅವರು ಚೈತ್ರಾ ಅವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಆಗ ನಾನು ಅವರ ಮೂಲಕ ಒತ್ತಡ ಹೇರುತ್ತೇನೆ. ಟಿಕೆಟ್ ಕೊಡಿಸುವಂತಹ ವ್ಯಕ್ತಿ ನನ್ನ ಮುಂದೆ ಬಂದು ಕುಳಿತುಕೊಂಡು ವಿಚಾರವನ್ನು ಹೇಳಲಿ. ಆಗ ನನಗೆ ಅದು ಹೌದು ಅನಿಸಿದ್ರೆ ನಾನು ಮುಂದೆ ಬರಲು ಇಚ್ಛೆ ಪಡುತ್ತೇನೆಯೋ ಇಲ್ಲವೋ ಎಂಬುದನ್ನು ಆ ಬಳಿಕ ಹೇಳುತ್ತೇನೆ. ನಂತರ ಬರಲೇ ಬೇಕು ಎಂದು ಅವರು ಒತ್ತಾಯದ ಮೇಲೆ ಕರಿದಿದ್ದಕ್ಕೆ ಚೈತ್ರಾ ಅವರನ್ನು ಕಡೂರಿಗೆ ಕರೆಸಿ ಗಗನ್ ಅವರ ಮನೆಯಲ್ಲಿಯೇ ಸತತ ಮೂರು ಗಂಟೆ ಮೀಟಿಂಗ್ ಮಾಡಿದ್ದೇವೆ ಎಂದು ಹೇಳಿದರು.

    ಅವರು ನನ್ನನ್ನು ‘ವಿಶ್ವನಾಥ್ ಜೀ’ ಯಂತೆ ಪ್ರಿಪೇರ್ ಮಾಡೋಕೆ ಮೂರು ದಿನ ತೆಗೆದುಕೊಂಡಿದ್ದಾರೆ. ಯಾಕಂದರೆ ಮೇಕಪ್ ಮಾಡಬೇಕು, ಮೀಸೆ ತೆಗೀಬೇಕು ಅನ್ನೋದನ್ನು ನನ್ನ ಜೊತೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನೀವು ಹೋಗಿ ಇಷ್ಟು ಮಾತಾಡಬೇಕು ಎಂದು ಹೇಳಿದ್ರು ಅಷ್ಟೇ. ಅದಕ್ಕೆ ನಾನು ಒಪ್ಪಿಕೊಂಡೆ. ಹೀಗೆ ಒಪ್ಪಿಕೊಂಡು ಹೊರಟಿರುವ ಸಮಯದಲ್ಲಿ ಚೈತ್ರಾ ಅವರು ನಿಮಗೆ ನೋಡೋಕೆ ಒಂದು ಫೋಟೋ ಕಳುಹಿಸಿದ್ದಾರೆ. ಈ ಫೋಟೋದಂತೆ ನೀವು ರೆಡಿ ಆಗಬೇಕು ಎಂದು ಹೇಳಿ ಫೋಟೋ ತೋರಿಸುತ್ತಾರೆ. ಬಳಿಕ ಅವರ ಫ್ರೆಂಡ್ ಕಟ್ಟಿಂಗ್ ಶಾಪ್‍ಗೆ ಕರೆದುಕೊಂಡು ಹೋಗಿ ನನ್ನನ್ನು ರೆಡಿ ಮಾಡಿ ನಂತರ ಬೆಂಗಳೂರಿನ ಕುಮಾರಕೃಪಾಗೆ ಕರೆದುಕೊಂಡು ಬರುತ್ತಾರೆ ಎಂದು ಹೇಳಿದರು.

    ಮುಂದಿನ ಬಾರಿ ಶೋಭಾ ಕರಂದ್ಲಾಜೆಯವರಿಗೆ ಎಂಪಿ ಟಿಕೆಟ್ ಕೊಡಲ್ಲ. ನನಗೆ (ಚೈತ್ರಾ) ಟಿಕೆಟ್ ಕೊಡುತ್ತಾರೆ. ಆಗ ಇವರನ್ನು ನಾನು ಶಾಸಕರನಾಗಿ ಗೆಲ್ಲಿಸಿಕೊಂಡರೆ ಎಂಪಿಯಾಗಿ ನಾನು ಗೆಲ್ಲೋಕೆ ಸುಲಭವಾಗುತ್ತದೆ ಎಂದು ಹೇಳಿದರು. ಆಗ ನಾನು ಆರ್ಥಿಕವಾಗಿ ಚೆನ್ನಾಗಿರುವಂತಹ ವ್ಯಕ್ತಿ ಅಲ್ಲ. ಹೀಗಾಗಿ ನಿಮ್ಮ ಜೊತೆ ಸಮಯ ಕಳೆಯಲು ನನ್ನಿಂದ ಸಾಧ್ಯವಿಲ್ಲ. ನನಗೆ ತುಂಬಾ ಕಮಿಟ್ಮೆಂಟ್ ಇದೆ, ಒಂದು ಲಕ್ಷ ರೂ.ಗೆ ನಾನು ಬಡ್ಡಿ ಕಟ್ಟುತ್ತಿದ್ದೇನೆ ಅಂದೆ. ಆಗ ಅವರು ನಾವು ನಿಮಗೆ ನಮ್ಮ ಕೈಯಿಂದ 1 ಲಕ್ಷ ರೂ. ಕೊಡುತ್ತೇವೆ. ಯಾಕೆಂದರೆ ಮುಂದೆ ನಾನು ಎಂಪಿ ಆಗಬೇಕು, ನಿಮ್ಮಂತವರು ನಮಗೆ ಬೇಕು. ಕಳೆದ ಬಾರಿ ಎಂಎಲ್‍ಎ ಎಲೆಕ್ಷನ್ ನಿಂತುಕೊಂಡು ಕೈಯಲ್ಲಿರುವ ಹಣವನ್ನೆಲ್ಲಾ ಹಾಳು ಮಾಡಿಕೊಂಡಿದ್ದೀರಾ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ನಿಮ್ಮನ್ನು ಬೆಳೆಸುವ ಜವಾಬ್ದಾರಿ ನಂದು. ನಾನು ಹೇಳಿದರೆ ದೊಡ್ಡ ದೊಡ್ಡವರೇ ನನ್ನ ಮಾತು ಕೇಳುತ್ತಾರೆ ಅಂತ ಹೇಳಿ ನಮಗೂ ಆಮೀಷ ಒಡ್ಡಿದ್ದಾರೆ ಎಂದು ಚೈತ್ರಾ ಕುಂದಾಪುರ ವಿರುದ್ಧ ಚನ್ನನಾಯ್ಕ್ ಆರೋಪಿಸಿದರು. ಇದನ್ನೂ ಓದಿ: MLA ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಪ್ರಕರಣದ 5ನೇ ಆರೋಪಿ ಅರೆಸ್ಟ್‌

    ಇತ್ತ ಗಗನ್ ಅವರು 1 ಲಕ್ಷ ಕೋಡ್ತೀನಿ ಅಂತಾ ಒಪ್ಪಿಕೊಂಡು, ಒಂದು ಲಕ್ಷ ಹಾಕಿದ್ದೀನಿ ಅಂತಾನೂ ಹೇಳಿ ಕಡೂರಿನಿಂದ ಕುಮಾರಕೃಪಾಗೆ ಬಾಡಿಗೆ ಬಾಡಿಗೆ ಮಾಡಿಕೊಂಡು ಬಂದೆವು. ಆ ಬಾಡಿಗೆ ಹಣ 7 ಸಾವಿರವನ್ನು ಮುರಿದುಕೊಂಡು ನನ್ನ ಅಕೌಂಟಿಗೆ 93 ಸಾವಿರವನ್ನು ಟ್ರಾನ್ಸ್‍ಫರ್ ಮಾಡಿದ್ದಾರೆ. ಗಗನ್, ಚೈತ್ರಾ ಕುಂದಾಪುರ, ಧನಂಜಯ್ ಹಾಗೂ ದೂರು ನೀಡಿರುವ ಗೋವಿಂದ ಪೂಜಾರಿ ಅವರ ಜೊತೆನೂ ನನ್ನ ನಂಬರ್ ಇದೆ. ಆದರೆ ಇವರು ಯಾರು ಕೂಡ ನನ್ನ ನಂಬರ್ ಅನ್ನು ಸಿಸಿಬಿ ಪೊಲೀಸರಿಗೆ ನೀಡಿಲ್ಲ ಅನ್ನೋದೇ ಕುತೂಹಲ ಎಂದರು.

    ಸ್ವಾಮೀಜಿ, ಚೈತ್ರಾ ಹಾಗೂ ಗಗನ್ ಇವರಿಗೆ ಮೂವರಿಗೆ ಬಿಟ್ಟರೆ ಬೇರೆ ಯಾರಿಗೂ ದೊಡ್ಡ ಮಟ್ಟಿನ ಹಣಕಾಸು ವ್ಯವಹಾರ ಗೊತ್ತಿಲ್ಲ ಅನಿಸುತ್ತೆ. ನಮಗೆ ಯಾವಾಗ ಅನುಮಾನ ಬಂದು ಇವರನ್ನು ಕೇಳುವುದಕ್ಕೆ ಶುರು ಮಾಡ್ತೀವೋ ಆಗ ಇದ್ದಕ್ಕಿದ್ದ ಹಾಗೆಯೇ ಗಗನ್ ಅವರು ಕಾರು ತೆಗೆದುಕೊಂಡು ಬರುತ್ತಾರೆ, ಅದ್ಧೂರಿಯಾಗಿ ಮದುವೆ ಆಗ್ತಾರೆ. ಇವರೆಲ್ಲಾ ಆರ್ಥಿಕವಾಗಿ ಹೇಗಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇದನ್ನು ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಧಮ್ಕಿ ಹಾಕುತ್ತಾರೆ. ಇಷ್ಟೆಲ್ಲಾ ಆದ ಬಳಿಕ ನನಗೆ ಅನುಮಾನ ಇನ್ನಷ್ಟು ಹೆಚ್ಚಾಯಿತು. ಆಗ ನಾನು ಗೋವಿಂದ ಪೂಜಾರಿಗೆ ಫೋನ್ ಮಾಡಿದೆ. ಆದರೆ ಅವರು ಪೋನ್ ರಿಸೀವ್ ಮಾಡಿಲ್ಲ. ಮಾಡಿದರೂ ನನ್ನ ಮಾತು ಕೇಳಲು ರೆಡಿ ಇರಲಿಲ್ಲ ಎಂದರು.

    ಗೋವಿಂದ ಪೂಜಾರಿ ಪರಿಚಯ ಹೇಗೆ?: ನಾನು ಕುಮಾರಕೃಪಾಗೆ ಹೋದಾಗ. ಅಲ್ಲಿ ಒಂದು ರೂಮಿನಲ್ಲಿ ಗೋವಿಂದ ಪೂಜಾರಿ ನನ್ನನ್ನು ಭೇಟಿಯಾಗುತ್ತಾರೆ. ಈ ವೇಳೆ ಅವರು ನನಗೆ ಬೊಕ್ಕೆ ಹಾಗೂ ಡ್ರೈಫೂಟ್ಸ್, ಸ್ವೀಟ್ ಬಾಕ್ಸ್ ಕೊಡುತ್ತಾgಕ್ಸೀ ಸ್ವೀಟ್ ಬಾಕ್ಸ್‍ನಲ್ಲಿ ಅವರ ವಿಸಿಟಿಂಗ್ ಕಾರ್ಡ್ ಇಟ್ಟಿರುತ್ತಾರೆ. ಆ ವಿಸಿಟಿಂಗ್ ಕಾರ್ಡ್ ಅನ್ನು ಧನಂಜಯ್ ಹಾಗೂ ಗಗನ್‍ಗೆ ಗೊತ್ತಾಗಂದತೆ ಎತ್ತಿಟ್ಟುಕೊಂಡಿದ್ದೆ. ಆ ನಂಬಿರ್‍ನಿಂದ ಪೂಜಾರಿಗೆ ಕರೆ ಮಾಡಿದೆ. ಆದ್ರೆ ಅವರು ಕಾಲ್ ಎತ್ತಿಲ್ಲ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ

    ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ

    `ಅಗ್ನಿಸಾಕ್ಷಿ’ (Agnisakshi) ಮತ್ತು `ಬಿಗ್ ಬಾಸ್’ (Bigg Boss) ಬೆಡಗಿ ವೈಷ್ಣವಿ ಗೌಡ (Vaishnavi Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಪಾತ್ರದ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    ಕಿರುತೆರೆಯ ಟಾಪ್ ಒನ್ ಸೀರಿಯಲ್ ಅಗ್ನಿಸಾಕ್ಷಿ ನಾಯಕಿಯಾಗಿ ಮೋಡಿ ಮಾಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಲಗ್ಗೆ ಕನ್ನಡಿಗರ ಮನ ಗೆದ್ದಿದ್ದರು. ನಟಿಯ ಅದ್ಭುತ ವ್ಯಕ್ತಿತ್ವವನ್ನ ಕರ್ನಾಟಕದ ಜನತೆ ಮೆಚ್ಚಿಕೊಂಡಿತ್ತು. ಇದೀಗ ಲಾಂಗ್ ಗ್ಯಾಪ್ ನಂತರ `ಸೀತಾರಾಮ’ (Seetharam) ಧಾರಾವಾಹಿ ಮೂಲಕ ನಟಿ ಕಂಬ್ಯಾಕ್ ಮಾಡ್ತಿದ್ದಾರೆ.

    ಸ್ವಪ್ನ ಕೃಷ್ಣ ನಿರ್ದೇಶನದ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯಾಗಿ ವೈಷ್ಣವಿ ಎಂಟ್ರಿ ಕೊಡ್ತಿದ್ದಾರೆ. ʻಮಂಗಳಗೌರಿ ಮದುವೆʼ(Mangala Gowri Maduve) ಖ್ಯಾತಿಯ ಗಗನ್‌ಗೆ ಜೋಡಿಯಾಗಿ ನಟಿ ಬರುತ್ತಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದು ನಿಜಕ್ಕೂ ವೈಷ್ಣವಿ ಫ್ಯಾನ್ಸ್‌ಗೆ ಡಬಲ್ ನ್ಯೂಸ್ ಎಂದೇ ಹೇಳಬಹುದು. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಸದ್ಯದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, `ಅಗ್ನಿಸಾಕ್ಷಿ’ ನೋಡಿ ಮೆಚ್ಚಿಕೊಂಡಿದ್ದ ಫ್ಯಾನ್ಸ್‌ಗೆ ಸೀತಾರಾಮ ಸೀರಿಯಲ್ ಮೂಲಕ ಕೂಡ ನಟಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

    ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

    ನವದೆಹಲಿ: ಏಷ್ಯಾ ಪೆಸಿಫಿಕ್ ವಲಯದಲ್ಲಿ ಮೊದಲ ಬಾರಿಗೆ ಇಂಡಿಗೋ ಸ್ವದೇಶಿ ನ್ಯಾವಿಗೇಷನ್ ಸಿಸ್ಟಮ್ ‘ಗಗನ್’ ಅನ್ನು ಬಳಸಿಕೊಂಡು ವಿಮಾನವನ್ನು ಲ್ಯಾಂಡ್ ಮಾಡಿದೆ.

    ಎಟಿಆರ್-72 ವಿಮಾನ ಜಿಯೋ ಆಗ್ಮೆಂಟೆಡ್ ನ್ಯಾವಿಗೇಷನ್(ಗಗನ್) ಜಿಪಿಎಸ್ ಬಳಸಿಕೊಂಡು ಬುಧವಾರ ರಾಜಸ್ಥಾನದ ಕಿಶನ್‌ಗಢ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು.

    ಗಗನ್ ಅನ್ನು ಸೆಂಟರ್-ರನ್ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ವಿಮಾನ ಲ್ಯಾಂಡಿಂಗ್ ಮಾಡಲು ರನ್‌ವೇ ಸಮೀಪಿಸುವ ಸಂದರ್ಭದಲ್ಲಿ ಪಾರ್ಶ್ವ ಹಾಗೂ ಲಂಬ ಮಾರ್ಗದರ್ಶನವನ್ನು ಇದು ನೀಡುತ್ತದೆ. ಕೆಲವು ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್(ಐಎಲ್‌ಎಸ್) ಇಲ್ಲದೇ ಇರುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ.

    ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಗಗನ್ ವಾಯುಪ್ರದೇಶವನ್ನು ಆಧುನೀಕರಿಸುತ್ತದೆ. ವಿಮಾನ ಸಂಚಾರದಲ್ಲಿ ವಿಳಂಬವಾಗುವುದನ್ನು ಕಡಿಮೆ ಮಾಡುತ್ತದೆ ಹಾಗೂ ಇಂಧನ ಉಳಿತಾಯ, ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಭಿನ್ನ ಹೇಗೆ?
    ಗಗನ್ ಸ್ಯಾಟಲೈಟ್ ಬೇಸ್ಡ್ ಲ್ಯಾಂಡಿಂಗ್ ಸಿಸ್ಟಮ್‌ನಂತೆಯೇ ಪೈಲಟ್‌ಗಳಿಗೆ ಲ್ಯಾಂಡಿಂಗ್ ವೇಳೆ ಸಹಾಯ ಮಾಡುತ್ತದೆ. ಭೂಮಿಯಿಂದ 550 ಮೀ. ಗಿಂತಲೂ ಹೆಚ್ಚಿನ ದೂರದಲ್ಲಿಯೂ ಇದು ಪೈಲಟ್‌ಗಳಿಗೆ ರನ್‌ವೇ ಗೋಚರಿಸುವಂತೆ ಮಾಡಿ, ವಿಮಾನವನ್ನು ಲ್ಯಾಂಡ್ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಒಂದು ವ್ಯತ್ಯಾಸವೆಂದರೆ ಸೈಡ್ ಗ್ರೌಂಡ್ ಬೇಸ್ಡ್ ಸಿಸ್ಟಮ್‌ನಲ್ಲಿ ಕೇವಲ 200 ಅಡಿ ಎತ್ತರದಿಂದ ಪೈಲೆಟ್ ಲ್ಯಾಂಡಿಂಗ್ ನಿರ್ಧಾರವನ್ನು ತೆಗೆದುಕೊಳ್ಳಬಹುದು.

    ಇಂದು ಪ್ರಯೋಗಿಕವಾಗಿ ಬಳಕೆಯಾದ ವಿಮಾನದಲ್ಲಿ 250 ಅಡಿ ಎತ್ತರದಿಂದಲೇ ಪೈಲಟ್ ನಿರ್ಧಾರವನ್ನು ತೆಗೆದುಕೊಂಡು ಲ್ಯಾಂಡ್ ಮಾಡಿದ್ದಾರೆ. ಇಂಡಿಗೋ ಪೈಲಟ್ ಗಗನ್ ಸ್ಯಾಟಲೈಟ್ ಮೂಲಕ ಲಂಬ ಮತ್ತು ಪಾರ್ಶ್ವದ ನ್ಯಾವಿಗೇಶನ್ ನೋಡಿಕೊಂಡು ಲ್ಯಾಂಡಿಂಗ್ ಮಾಡಿದ್ದಾರೆ.

    ಭಾರತದ ಗಗನ್ ಹೊರತುಪಡಿಸಿ ವಿಶ್ವದಲ್ಲಿ ಕೇವಲ 3 ಕಡೆಗಳಲ್ಲಿ ಇಂತಹ ವ್ಯವಸ್ಥೆಗಳಿವೆ. ಅವುಗಳೆಂದರೆ ಅಮೆರಿಕ(ಡಬ್ಲ್ಯುಎಎಸ್), ಯುರೋಪ್(ಇಜಿಎನ್‌ಒಎಸ್) ಹಾಗೂ ಜಪಾನ್‌ನ (ಎಮ್‌ಎಸ್‌ಎಎಸ್).

    ಜುಲೈ ತಿಂಗಳಿನಲ್ಲಿ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೂ ಗಗನ್ ಉಪಕರಣವನ್ನು ಅಳವಡಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿದೆ.