Tag: ಗಂಭೀರ ಗಾಯ

  • ಕೊಡಗಿನಲ್ಲಿ ಕಾರ್ಮಿಕ ಮಹಿಳೆ ಮೇಲೆ ಒಂಟಿ ಸಲಗ ದಾಳಿ

    ಕೊಡಗಿನಲ್ಲಿ ಕಾರ್ಮಿಕ ಮಹಿಳೆ ಮೇಲೆ ಒಂಟಿ ಸಲಗ ದಾಳಿ

    ಕೊಡಗು: ಜಿಲ್ಲೆಯಲ್ಲಿ ಪುಂಡಾನೆ ಉಪಟಳ ಮುಂದುವರಿದಿದ್ದು, ಒಂಟಿ ಸಲಗ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ವಾಲ್ನೂರಿನಲ್ಲಿ ನಡೆದಿದೆ.

    ಕಲಾವತಿ (55) ಕಾಡಾನೆ ದಾಳಿಗೊಳಗಾದ ಕೂಲಿ ಕಾರ್ಮಿಕ ಮಹಿಳೆ. ಕೂಲಿ ಕೆಲಸಕ್ಕೆ ತೆರಳುವಾಗ ಬೆಳಗ್ಗೆ 7:30ರ ಸುಮಾರಿಗೆ ವಾಲ್ನೂರು ಬಸವೇಶ್ವರ ದೇವಾಲಯ ಬಳಿ ಒಂಟಿ ಸಲಗ ಮಹಿಳೆಯ ಮೇಲೆ ದಾಳಿ ನಡೆಸಿದೆ.

    ಕಾಡಾನೆ ದಾಳಿಯಿಂದ ಮಹಿಳೆಯ ತಲೆ, ಕೈ ಕಾಲಿಗೆ ಗಂಭೀರ ಗಾಯವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ಕಾರ್ಮಿಕ ಮಹಿಳೆಯನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಥವಾ ಮಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕಾಡಾನೆ ಉಪಟಳ ತಡೆಗೆ ಗ್ರಾಮಸ್ಥರ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

    ಕಾರು ಪಲ್ಟಿ- SSLC ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಸಾವು!

    ಕಾರವಾರ: ಅತಿವೇಗದ ಚಾಲನೆಯಿಂದ ಕಾರು ಪಲ್ಟಿಯಾಗಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟು, ಮೂರು ವಿದ್ಯಾರ್ಥಿಗಳಿಗೆ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಶಮ್ಮಾಸ್(19) ಅಪಘಾತದಲ್ಲಿ ಮೃತ ವಿದ್ಯಾರ್ಥಿ. ಶಮ್ಮಾಸ್ ಭಟ್ಕಳ ಪಟ್ಟಣದ ಜಾಮೀಯಾ ಸ್ಟ್ರೀಟ್ ನಿವಾಸಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅಪಘಾತದ ನಂತರ ಪರೀಕ್ಷೆಯನ್ನು ಬರೆಯಲು ತೆರಳಿದ್ದಾರೆ.

    ಮದರಸಾದಲ್ಲಿ ಓದುತಿದ್ದ ವಿದ್ಯಾರ್ಥಿಗಳು ಭಟ್ಕಳದಿಂದ ಕಾರವಾರದ ಕಡೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯಲು ತೆರಳುತ್ತಿದ್ದರು. ಈ ವೇಳೆ ಅತೀ ವೇಗದಲ್ಲಿ ಕಾರು ಚಲಾಯಿಸಿ ನಿಯಂತ್ರಿಸಲಾಗದೇ ಪಲ್ಟಿ ಹೊಡೆದಿದೆ. ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಾವಣಗೆರೆಯಲ್ಲಿ ಮತ್ತೆ ಗ್ಯಾಂಗ್‍ವಾರ್- ರೌಡಿ ಬುಳ್ಳನಾಗನ ಮೇಲೆ ಸುಪಾರಿ ಅಟ್ಯಾಕ್

    ದಾವಣಗೆರೆಯಲ್ಲಿ ಮತ್ತೆ ಗ್ಯಾಂಗ್‍ವಾರ್- ರೌಡಿ ಬುಳ್ಳನಾಗನ ಮೇಲೆ ಸುಪಾರಿ ಅಟ್ಯಾಕ್

    ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ನಾಗರಾಜ್ ಅಲಿಯಾಸ್ ಬುಳ್ಳನಾಗ ಮತ್ತು ಸಹಚರರ ಮೇಲೆ ರಾತ್ರೋರಾತ್ರಿ ದಾಳಿ ನಡೆದಿದ್ದು, ಮತ್ತೊಮ್ಮೆ ಬೆಣ್ಣೆನಗರಿ ಜನ ಬೆಚ್ಚಿ ಬೀಳುವಂತಾಗಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಮಾರಪಟ್ಟಣಂ ಸಮೀಪದ ಸೇತುವೆ ಬಳಿ 15ಕ್ಕೂ ಹೆಚ್ಚು ಸುಪಾರಿ ಕಿಲ್ಲರ್ಸ್ ರೌಡಿ ಶೀಟರ್ ಬುಳ್ಳನಾಗನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬುಳ್ಳನಾಗ ಮತ್ತು ಸಹಚರರು ಕುಮಾರಪಟ್ಟಣಂ ಮಾರ್ಗವಾಗಿ ದಾವಣಗೆರೆಗೆ ಬರುವಾಗ ಇನ್ನೋವಾ ಕಾರು ಅಡ್ಡಗಟ್ಟಿ ಒಮ್ಮೆಲೆ ಅಟ್ಯಾಕ್ ಮಾಡಿದ್ದಾರೆ.

    ಈ ವೇಳೆ ಬುಳ್ಳನಾಗ ಮತ್ತು ಇಬ್ಬರು ಸಹಚರರಿಗೆ ಗಂಭೀರ ಗಾಯಗಳಾಗಿವೆ. ಇನ್ನೋವಾ ಕಾರಿನ ಗಾಜುಗಳು ಜಖಂ ಆಗಿವೆ. ಅಟ್ಯಾಕ್ ಆಗುತ್ತಿದ್ದಂತೆ ಬುಳ್ಳನಾಗನ ಕಾರು ಚಾಲಕ ಕಾರು ಜೋರಾಗಿ ಚಲಾಯಿಸಿಕೊಂಡು ಬಂದು ಪರಾರಿಯಾಗಿದ್ದಾರೆ. ಈ ಹಿಂದೆ ಬುಳ್ಳನಾಗನನ್ನ ಕೊಲೆ ಮಾಡೋದಕ್ಕೆ ಸಂತೋಷ್ ಅಲಿಯಾಸ್ ಕಣುಮ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ರೌಡಿಗಳಿಗೆ ಸುಪಾರಿ ಕೊಟ್ಟಿದ್ದ.

    ಎರಡು ತಿಂಗಳ ಹಿಂದೆ ದಾವಣಗೆರೆ ಪೊಲೀಸರು 7 ಮಂದಿ ಸುಪಾರಿ ಕಿಲ್ಲರ್ಸ್ ಗಳನ್ನ ಬಂಧಿಸಿದ್ದರು. ಈಗಲೂ ಕೂಡ ಸಂತೋಷ್ ಅಲಿಯಾಸ್ ಕಣುಮ, ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ ಸೀನ, ಗೋವಿಂದ ಎಂಬವರು ಅಟ್ಯಾಕ್ ಮಾಡಿಸಿದ್ದಾರೆ ಎಂದು ಹಲ್ಲೆಗೆ ಒಳಗಾದ ಬುಳ್ಳನಾಗ ಆರೋಪಿಸಿದ್ದಾನೆ.

  • ಪೋಷಕರೇ ನಿಮ್ಮ ಮಕ್ಕಳಿಗೆ ಪಟಾಕಿ ಕೊಡೋ ಮುನ್ನ ಈ ಸ್ಟೋರಿ ಓದಿ

    ಪೋಷಕರೇ ನಿಮ್ಮ ಮಕ್ಕಳಿಗೆ ಪಟಾಕಿ ಕೊಡೋ ಮುನ್ನ ಈ ಸ್ಟೋರಿ ಓದಿ

    ಬಳ್ಳಾರಿ: ಪೋಷಕರೇ ಈ ದೃಶ್ಯ ನೋಡಿದ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. ನಿಮ್ಮ ಮಕ್ಕಳ ಕೈಗೆ ಪಟಾಕಿ ಕೊಟ್ಟರೆ ಎನಾಗುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಬಾಲಕನೊಬ್ಬ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಇಂದು ಮಂಜಾನೆ ಬಳ್ಳಾರಿಯ ಬೆಂಗಳೂರು ರಸ್ತೆಯ ನಾಲ್ ಕಮಾನ್ ಬಳಿ 11 ವರ್ಷದ ಬಾಲಕ ನರಸಿಂಹ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಎಕಕಾಲಕ್ಕೆ ಸಾಕಷ್ಟು ಪಟಾಕಿಗಳನ್ನು ಒಟ್ಟಾಗಿ ಸೇರಿಸಿ ಸಿಡಿಸುವ ವೇಳೆ ಬಾಲಕ ಗಾಯಗೊಂಡಿದ್ದಾನೆ.

    ಬಾಲಕ ನರಸಿಂಹನ 2 ಕಣ್ಣು ಮತ್ತು ಕೈ ಕಾಲುಗಳು ಸುಟ್ಟಿದೆ. ಗಾಯಾಳು ಬಾಲಕನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷಣಾರ್ಧದಲ್ಲೇ ಘಟನೆ ನಡೆದ ಪರಿಣಾಮ ಬಾಲಕನನ್ನು ರಕ್ಷಣೆ ಮಾಡಲು ವಿಫಲವಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ.

  • ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರಿಗೆ ಗಂಭೀರ ಗಾಯ

    ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರಿಗೆ ಗಂಭೀರ ಗಾಯ

    ಕಲಬುರಗಿ: ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಹೋದರರಿಬ್ಬರು ಗಂಭೀರವಾಗಿ ಗಾಯಗೊಂಡಿರವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊನಗುಂಟ ಗ್ರಾಮದಲ್ಲಿ ನಡೆದಿದೆ.

    12 ವರ್ಷದ ನಾಗರಾಜ್ ಮತ್ತು 15 ವರ್ಷದ ಮಲ್ಲು ಗಾಯಗೊಂಡ ಸಹೋದರರು. ಘಟನೆಯಲ್ಲಿ ಮಲ್ಲುವಿನ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಅವನ ತಮ್ಮ ನಾಗರಾಜ್‍ಗೆ ಎದೆಯಲ್ಲಿ ಗಂಭೀರ ಗಾಯವಾಗಿದೆ. ಸದ್ಯಕ್ಕೆ ಇಬ್ಬರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಆಗಿದ್ದೇನು?
    ಶನಿವಾರ ಬೆಳಗ್ಗೆ ಇಬ್ಬರು ಸೇರಿಕೊಂಡು ಮನೆಯಲ್ಲಿನ ಕಾರ್ಬನ್ ಕೆ6 ಮೊಬೈಲ್ ಬ್ಯಾಟರಿಯನ್ನು ತೆಗೆದುಕೊಂಡು ಅದಕ್ಕೆ ಸಣ್ಣದಾದ ವಯರ್‍ನಿಂದ ಎಲ್‍ಇಡಿ ಬಲ್ಬ್‍ಗೆ ಕನೆಕ್ಷನ್ ಕೊಡಲು ಹೋಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಬ್ಯಾಟರಿಯಲ್ಲಿ ಸ್ಪಾರ್ಕ್ ಆಗಿ ಸ್ಫೋಟಗೊಂಡಿದೆ. ಇದರಿಂದ ಮಲ್ಲುವಿನ ಎದೆ ಮತ್ತು ಮುಖದ ಭಾಗದ ಮೇಲೆ ಕಿಡಿಗಳು ಬಿದ್ದಿವೆ. ಹೀಗಾಗಿ ಮಲ್ಲುವಿನ ದೇಹ ಮತ್ತು ಮುಖದ ಭಾಗ ಸುಟ್ಟ ಗಾಯಗಾಳಾಗಿವೆ. ಅಲ್ಲದೇ ನಾಗರಾಜ್ ಕಣ್ಣಿಗೆ ಬ್ಯಾಟರಿಯ ಬೆಂಕಿಯ ಕಿಡಿಗಳು ತಗುಲಿ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಮಕ್ಕಳ ತಂದೆ ಈಶಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

    ವೈದ್ಯ ಡಾ. ಶರಣಬಸಪ್ಪ ಹರವಾಳ ಪ್ರತಿಕ್ರಿಯಿಸಿ, ಇಬ್ಬರು ಹುಡುಗಾಟದಿಂದ ಗಾಯಗೊಂಡಿದ್ದಾರೆ. ಗಾಯಾಳು ನಾಗರಾಜ್ ನನ್ನ ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಮಲ್ಲುನಿಗೆ ಎದೆ ಮತ್ತು ಕೈಗೆ ಗಾಯವಾಗಿದ್ದು, ಅವನನ್ನು ಶಹಾಬಾದ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ನಾಗರಾಜ್‍ನ ಕಣ್ಣಿಗೆ ಗಾಯವಾಗಿದ್ದರಿಂದ ದೃಷ್ಟಿ ಮತ್ತೆ ಬರೋದು ಅನುಮಾನ ಅಂತ ಹೇಳಿದ್ದಾರೆ.

    ನಾವು ಈಗ ಪ್ರಥಮ ಚಿಕಿತ್ಸೆ ನೀಡಿದ್ದೇವೆ. ಆದರೆ ಕಣ್ಣಿಗೆ ಎಷ್ಟರ ಮಟ್ಟಿಗೆ ಡ್ಯಾಮೇಜ್ ಆಗಿದೆ ಅನ್ನೋದರ ಬಗ್ಗೆ ತಪಾಸಣೆ ಮಾಡಿ ನಂತರ ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಆದರು ಕಣ್ಣಿನ ದೃಷ್ಟಿ ಬರೋದು ಕಷ್ಟ ಎಂದು ವೈದ್ಯರು ವಿವರಿಸಿದರು.

  • ವಿಡಿಯೋ: ಕಾರ್‍ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಮೂವರು ಮಹಿಳೆಯರು!

    ವಿಡಿಯೋ: ಕಾರ್‍ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಮೂವರು ಮಹಿಳೆಯರು!

    ಭೋಪಾಲ್: ದ್ವಿ ಚಕ್ರವಾಹನ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿ ಚಕ್ರವಾಹನದಲ್ಲಿದ್ದ ಮೂವರು ಮಹಿಳೆಯರು ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಟಿಕಾಮ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದ್ವಿ ಚಕ್ರವಾಹನ ಚಲಾಯಿಸುತ್ತಿದ್ದ ಮಹಿಳೆ ಎಸ್‍ಯುವಿ ಕಾರ್‍ವೊಂದನ್ನ ಓವರ್‍ಟೇಕ್ ಮಾಡುವ ವೇಳೆ ಅವಘಡ ಸಂಭವಿಸಿದೆ.

    ಎಸ್‍ಯುವಿ ಕಾರಿನ ಹಿಂದೆ ಬರುತ್ತಿದ್ದ ಮಹಿಳೆ ಕಾರನ್ನು ಹಿಂದಿಕ್ಕಲು ಮುಂದಾಗಿದ್ದಾಳೆ. ರಸ್ತೆ ಚಿಕ್ಕದಾದ ಕಾರಣ ಎದುರು ಬರುವ ಗಾಡಿಗಳು ಕಾಣಿಸಿರಲಿಲ್ಲ. ಓವರ್‍ಟೇಕ್ ಮಾಡುವ ವೇಳೆ ಮುಂದುಗಡೆ ಬರುತ್ತಿದ್ದ ಮಾರುತಿ ಎರ್ಟಿಗಾ ಕಾರಿಗೆ ಮಹಿಳೆಯ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕಿ ಸೇರಿದಂತೆ ಮೂವರು ಮಹಿಳೆಯರೂ ಕೂಡ ಮೇಲೆ ಹಾರಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ದ್ವಿ ಚಕ್ರವಾಹನದಲ್ಲಿದ್ದ ಮೂವರು ಮಹಿಳೆಯರು ಹೆಲ್ಮೆಟ್ ಧರಿಸಿರಲಿಲ್ಲ. ಇಬ್ಬರು ಬಿದ್ದ ತಕ್ಷಣ ಮೇಲೆದ್ದಿದ್ದಾರೆ. ನಂತರ ಮೂರನೇ ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯರು ಕೂಡ ಮಹಿಳೆಯರ ರಕ್ಷಣೆಗೆ ಮುಂದಾಗಿದ್ದಾರೆ.

    ಸುದ್ದಿ ಸಂಸ್ಥೆ ಈ ಅಪಘಾತದ ವಿಡಿಯೋ ಬಿಡುಗಡೆ ಮಾಡಿದ್ದು, ಎಲ್ಲಾ ಮೂವರು ಮಹಿಳೆಯರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.