Tag: ಗಂಡು ಮಕ್ಕಳು

  • ಜನರ ಮುಂದೆಯೇ ತಂದೆಯನ್ನು ನಡುರಸ್ತೆಯಲ್ಲೇ ಧರ-ಧರನೇ ಎಳೆದೊಯ್ದ ಮಕ್ಕಳು!

    ಜನರ ಮುಂದೆಯೇ ತಂದೆಯನ್ನು ನಡುರಸ್ತೆಯಲ್ಲೇ ಧರ-ಧರನೇ ಎಳೆದೊಯ್ದ ಮಕ್ಕಳು!

    – ಮಕ್ಕಳ ಕ್ರೂರ ವರ್ತನೆಯ ವಿಡಿಯೋ ವೈರಲ್

    ಲಕ್ನೋ: ಜನರ ಮುಂದೆಯೇ ಅಣ್ಣ- ತಮ್ಮಂದಿರಿಬ್ಬರು ತಮ್ಮ ತಂದೆಗೆ ಥಳಿಸಿದ್ದಲ್ಲದೇ ರಸ್ತೆ ಮಧ್ಯೆಯೇ ಧರಧರನೇ ಎಳೆದೊಯ್ದ ವಿಲಕ್ಷಣ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಮಕ್ಕಳು ತಮ್ಮ ತಂದೆಯನ್ನು ದಂಕೌರ್ ಪ್ರದೇಶದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದರು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಕ್ಕಳ ಕೃತ್ಯವನ್ನು ಜಾಲತಾಣಿಗರು ಖಂಡಿಸಿದ್ದಾರೆ.

    ತಂದೆ ಮೇಲೆ ರೌದ್ರನರ್ತನ ತೋರಿದ ಮಕ್ಕಳಿಬ್ಬರನ್ನು ಬಂಧಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ಬಗ್ಗೆ ತಿಳಿದುಕೊಂಡ ಬಳಿಕ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಿಡಿಯೋದಲ್ಲಿ ಆರೋಪಿಗಳಿಬ್ಬರು ತಮ್ಮ ತಂದೆಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಮಹಿಳೆಯೊಬ್ಬರು ಆರೋಪಿಗಳ ಜೊತೆ ಇದ್ದು, ಕಿರುಚುತ್ತಿರುವುದನ್ನು ಕೂಡ ಕೇಳಬಹುದಾಗಿದೆ. ಆದರೆ ಮಕ್ಕಳು ಯಾಕೆ ತಮ್ಮ ತಂದೆಯ ಮೇಲೆ ಕ್ರೂರತನ ಮೆರೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.

    ಗೌತಮ್ ಬುದ್ಧ ನಗರದ ಸಂಕೌರ್ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಂಡಿದ್ದೇವೆ. ಘಟನೆ ಸಂಬಂಧ ಇಬ್ಬರು ಮಕ್ಕಳನ್ನು ಬಂಧಿಸಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ನೊಯ್ಡಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    -ಕಡು ಬಡತನದ ಕುಟುಂಬಕ್ಕೀಗ ಬೇಕಿದೆ ಸಹಾಯ

    ಯಾದಗಿರಿ: ಎಷ್ಟೋ ಜನ ಒಂದು ಮಗು ಆಗಲಿ ಅಂತ ಹತ್ತಾರು ದೇವರಿಗೆ ವರ ಬೇಡಿಕೊಳ್ಳತಾರೆ. ಇದರಲ್ಲಿ ಕೆಲವರಿಗೆ ದೇವರು ವರ ಕೊಟ್ಟ್ರೆ, ಇನ್ನೂ ಕೆಲವರಿಗೆ ಕೊನೆಯವರೆಗೂ ಮಕ್ಕಳ ಭಾಗ್ಯ ಕರುಣಿಸುವುದಿಲ್ಲ. ಆದರೆ ಇಲ್ಲೊಬ್ಬಳು ಮಹಾ ತಾಯಿ ಏಕಕಾಲದಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾಳೆ.

    ಅದು ಮೊದಲನೆಯ ಹೆರಿಗೆಯಾಗಿ ಬರೊಬ್ಬರಿ 8 ವರ್ಷದ ಬಳಿಕ ಮೂರು ಗಂಡು ಮಕ್ಕಳಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಜಿಲ್ಲೆಯ ರಾಮಸಮುದ್ರದ ನಿವಾಸಿಯಾಗಿರುವ ಪದ್ಮಾ, ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ಮಕ್ಕಳು ಮತ್ತು ತಾಯಿ ನಾಲ್ವರು ಸುರಕ್ಷಿತವಾಗಿದ್ದಾರೆ. ಸರಿಯಾದ ಸಮಯಕ್ಕೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ರಾಮಸಮುದ್ರ ಆಶಾ ಕಾರ್ಯಕರ್ತೆಯರಾದ ಮುತ್ತಮ್ಮ, ಮಂಗಳಮ್ಮ, ಗೌರಮ್ಮ ಪದ್ಮಾಳನ್ನು, ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಪದ್ಮಾ ಇಂದು ಮಧ್ಯಾಹ್ನ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಸಹಾಯಕ್ಕಾಗಿ ಕೈ ಚಾಚಿದ ಪದ್ಮಾ ಕುಟುಂಬ:
    ಪದ್ಮಾ ಕುಟುಂಬಕ್ಕೆ ಒಂದು ಕಡೆ ಸಂತೋಷ ಮತ್ತೊಂದೆಡೆ ಆತಂಕ ಶುರುವಾಗಿದೆ. ಕಡು ಬಡತನದಲ್ಲಿರುವ ಪದ್ಮಾ ಕುಟುಂಬ, ಸದ್ಯ ಹೆರಿಗೆಯ ಖರ್ಚು ವೆಚ್ಚ ಭರಿಸಲು ಒದ್ದಾಡುತ್ತಿದೆ. ಇನ್ನೂ ಮೂರು ಮಕ್ಕಳ ಮುಂದಿನ ಲಾಲನೆ, ಪಾಲನೆ ನೆನಪಿಸಿಕೊಂಡು ಪೆಚಾಡುತ್ತಿದೆ. ಪದ್ಮಾ ಮತ್ತು ನಾಗರಾಜ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಕೊರೊನಾ ಭಯದಿಂದ ಸ್ವಂತ ಗ್ರಾಮ ರಾಮಸಮುದ್ರಕ್ಕೆ ವಾಪಸು ಆಗಿದ್ದಾರೆ. ಸದ್ಯ ಪದ್ಮಾ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸಹಾಯ ಹಸ್ತಚಾಚಿದೆ.

  • 3 ಗಂಡು 1 ಹೆಣ್ಣು ಸೇರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    3 ಗಂಡು 1 ಹೆಣ್ಣು ಸೇರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಹುಬ್ಬಳ್ಳಿ: ತಾಯಿಯೊಬ್ಬಳು ನಾಲ್ಕು ಮಕ್ಕಳಿಗೆ ಏಕಕಾಲಕ್ಕೆ ಜನ್ಮ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಮಹಾಬುಬಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆರಿಗೆಗೆ ಆಗಮಿಸಿದ ಮಹಾಬುಬಿಗೆ ಇಂದು ಬೆಳಗ್ಗೆ 11 ಗಂಟೆಗೆ 4 ಮಕ್ಕಳನ್ನು ಹೆತ್ತಿದ್ದಾರೆ.

    ಮಹಾಬುಬಿ ತಮ್ಮ ಎರಡನೇ ಹೆರಿಗೆಯಲ್ಲಿ 3 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ನಾಲ್ಕು ಮಕ್ಕಳು ಆರೋಗ್ಯವಾಗಿದ್ದು ಮೂರು ಮಗುಗಳ ತೂಕ ಸರಿಸುಮಾರು 2 ಕೆಜಿಯಿದೆ. ಒಂದು ಮಗುವಿನ ತೂಕ ಸ್ವಲ್ಪ ಕಡಿಮೆ ಇರೋದ್ರಿಂದ ನಾಲ್ಕು ಮಕ್ಕಳನ್ನು ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸವಣೂರ ಪಟ್ಟಣದಲ್ಲಿ ಪ್ಲಂಬರ್ ಕೆಲಸ ಮಾಡೋ ನಿಸಾರ ಅಕ್ಕಿ ಹಾಗೂ ಮಹಾಬುಬಿ ದಂಪತಿಗಳಿಗೆ ಈಗಾಗಲೇ ಒಂದು ಗಂಡು ಮಗುವಿದೆ. ಮಹಾಬುಬಿ ಕಳೆದ 5 ವರ್ಷಗಳ ಹಿಂದೆ ಮೊದಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಎರಡನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು ಕುಟುಂಬದಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಿದೆ.

  • ಹೆಣ್ಣು ವೇಷವೆಂದ್ರೆ ಸ್ವಾಮೀಜಿಗೆ ಸಿಕ್ಕಾಪಟ್ಟೆ ಇಷ್ಟ- ತುಂಡು ಬಟ್ಟೆಯಲ್ಲಿ ಮಾಡ್ತಾನೆ ನಂಗಾನಾಚ್

    ಹೆಣ್ಣು ವೇಷವೆಂದ್ರೆ ಸ್ವಾಮೀಜಿಗೆ ಸಿಕ್ಕಾಪಟ್ಟೆ ಇಷ್ಟ- ತುಂಡು ಬಟ್ಟೆಯಲ್ಲಿ ಮಾಡ್ತಾನೆ ನಂಗಾನಾಚ್

    – ಮಠದಲ್ಲಿ ಸೇವೆ ಮಾಡುವ ಗಂಡು ಮಕ್ಕಳ ಮೇಲೆ ಲೈಂಗಿಕ ಕಿರುಕುಳ

    ಮೈಸೂರು: ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠದ ಈ ಸ್ವಾಮಿಜಿಗೆ ಹೆಣ್ಣು ವೇಷವೇ ಅತಿ ಇಷ್ಟವಾಗಿದ್ದು, ತುಂಡು ಬಟ್ಟೆಯಲ್ಲಿ ನಂಗಾನಾಚ್ ಮಾಡಿ ಸಿಕ್ಕಪಟ್ಟೆ ಫೇಮಸ್ ಆಗಿಬಿಟ್ಟಿದ್ದಾನೆ. ಜೊತೆಗೆ ಮಠದಲ್ಲಿ ಸೇವೆಗೆಂದು ಗಂಡು ಮಕ್ಕಳನ್ನು ಇರಿಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾನೆ ಎಂಬ ಆರೋಪ ಸ್ವಾಮಿ ಮೇಲೆ ಕೇಳಿಬರುತ್ತಿದೆ.

    ಅಷ್ಟಕ್ಕೂ ಈ ಸ್ವಾಮೀಜಿ ಬೇರೆ ಯಾರೂ ಅಲ್ಲ. ಈ ಹಿಂದೆ ಬಾಗಲಕೋಟೆಯಿಂದ ಜನರು ಓಡಿಸಿದ್ದ ವಿದ್ಯಾಹಂಸ ಭಾರತಿ ಸ್ವಾಮೀಜಿ. ಹೌದು, ಮೈಸೂರಿನ ಚಂದ್ರ ಗ್ರಾಮದ ಬಳಿಯ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠವಿದೆ. ಈ ಮಠದ ಪೀಠಾಧ್ಯಕ್ಷನಾಗಿರುವ ವಿದ್ಯಾಹಂಸ ಭಾರತಿ ಸ್ವಾಮೀಜಿ ಎಲ್ಲಿ ಹೋದರು ಅಲ್ಲಿ ಇರಲು ಜನರು ಬಿಡುವುದಿಲ್ಲ. ಯಾಕೆಂದರೆ ಆತ ತೊಡುವ ವೇಷಭೂಷಣ, ವರ್ತಿಸುವ ರೀತಿ ವಿಚಿತ್ರವಾಗಿದೆ. ಆತನ ವರ್ತನೆಯನ್ನು ನೋಡಿ ಸ್ವಾಮೀಜಿಯನ್ನು ಜನ ತಮ್ಮ ಊರಿನಿಂದ ಓಡಿಸುತ್ತಾರೆ. ಈ ಬಾರಿ ನಂಗಾನಾಜ್ ಮಾಡಿ ಸ್ವಾಮೀಜಿ ಸಖತ್ ಫೇಮಸ್ ಆಗಿದ್ದಾನೆ. ಮೈ ಮೇಲೆ ಒಂದು ತುಂಡು ಬಟ್ಟೆ ಸುತ್ಕೊಂಡು ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:ವಿಚಿತ್ರ ಸ್ವಾಮೀಜಿಯನ್ನು ಗ್ರಾಮದಿಂದ ಹೊರಹಾಕಿದ ಸ್ಥಳೀಯರು

    ಮೈಸೂರಿನಲ್ಲೂ ಡ್ಯಾನ್ಸ್ ಮಾಡಿ ಪೇರಿ ಕಿತ್ತಿದ್ದ ಈತ, ಬಾಗಲಕೋಟೆಯಲ್ಲೂ ಪೂಜೆ ಮಾಡೋದಕ್ಕೆ ಹೋಗಿ ಅಲ್ಲಿನ ಜನರ ಓಡಿಸಿದ್ದರು. ಚಿಕ್ಕಸಂಗಮದಲ್ಲಿ ಪ್ರತ್ಯಂಗಿರಾ ಹೋಮ, ಹವನ ಹೆಸರಿನಲ್ಲಿ ಗ್ರಾಮಸ್ಥರಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದ, ಹಾಗೆಯೇ ದೊಡ್ಡ ದೊಡ್ಡ ಸ್ವಾಮೀಜಿಗಳು, ಗಣ್ಯವ್ಯಕ್ತಿಗಳ ಜೊತೆಗಿನ ಭಾವಚಿತ್ರ ತೋರಿಸಿ ನಂಬುವಂತೆ ಗ್ರಾಮಸ್ಥರ ತಲೆ ಕೆಡಿಸಿದ್ದ. ಆದರೆ ಆತನ ವಿಚಿತ್ರ ವರ್ತನೆ ನೋಡಿ ಅಲ್ಲಿಂದ ಜನ ಓಡಿಸಿದ್ದರು. ಆದರೆ ಈಗ ಈ ಸ್ವಾಮೀಜಿ ನಂಗಾನಾಚ್ ನಿಂದ ಫೇಮಸ್ ಆಗಿದ್ದಾನೆ.

    ತುಂಡು ಬಟ್ಟೆಯಲ್ಲಿ ಹಿಂದಿ ಹಾಡು, ಮದ್ಯ ಕುಡಿಯುತ್ತ ನಂಗಾನಾಚ್ ಮಾಡುತ್ತಾನೆ. ಮದ್ಯ ಇಟ್ಕೊಂಡು ಕುಣಿದು ಕುಪ್ಪಳಿಸೋ ಸ್ವಾಮಿಜಿಯ ಮೇಲೆ ಮತ್ತೊಂದು ಆರೋಪವೂ ಇದೆ. ಗಂಡು ಮಕ್ಕಳನ್ನು ಸೇವೆಗೆ ಇಟ್ಟುಕೊಳ್ಳುವ ಈತ ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಇಟ್ಟುಕೊಂಡಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಮನೆ ಮಠ ಬಿಟ್ಟು ಬರುವ ಗಂಡು ಮಕ್ಕಳು ಅವನ ಜೊತೆಯಲ್ಲಿಯೇ ಇರಬೇಕು. ಮನೆಗೆ ವಾಪಸ್ಸು ಹೋಗುವ ಹಾಗೇ ಇಲ್ಲ. ಇದೇ ರೀತಿ ಅದೇಷ್ಟೋ ಕುಟುಂಬಗಳು ಮಕ್ಕಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಾ ಇದ್ದಾರೆ.

    ಸೇವೆಯ ನೆಪದಲ್ಲಿ ಆತ ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸುತ್ತಾನೆ ಎನ್ನಲಾಗಿದೆ. ಭಕ್ತರೊಬ್ಬರ ಪತ್ನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೂಡ ಇತನ ಮೇಲಿದೆ. ಈ ಬಗ್ಗೆ ಭಕ್ತನ ಪತ್ನಿಯೇ ದೂರು ನೀಡಿ ಬಂಧನವಾಗುವಂತೆ ಮಾಡಿದ್ದರು. ಆದರೆ ಜಾಮೀನಿನ ಮೇಲೆ ಈ ಸ್ವಾಮೀಜಿ ಹೊರಗೆ ಬಂದಿದ್ದಾನೆ.

  • ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

    ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

    ಕೋಲ್ಕತ್ತಾ: ಸಾಮಾಜಿಕ ಜಾಲತಾಣ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಪರಿಣಾಮ ಮಹಿಳೆಯೊಬ್ಬರು ಮಧ್ಯಾಹ್ನ ಅಡುಗೆ ಮಾಡಲು ಮರೆತಿದ್ದರಿಂದ ಸಿಟ್ಟುಗೊಂಡ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಗುರುವಾರ ಕೋಲ್ಕತ್ತಾದ ಚೆಟ್ಲಾ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಪತಿ ಸುರಜಿತ್ ಪಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತಿ ಆತನ 36 ವರ್ಷದ ಪತ್ನಿಗೆ ಅಕ್ರಮ ಸಂಬಂಧವಿದೆ. ಹೀಗಾಗಿ ಪತ್ನಿ ಟುಂಪಾ ತನ್ನ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲೇ ಕಳೆಯತ್ತಾಳೆ ಅಂತ ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏನಿದು ಘಟನೆ?:
    ಜನವರಿ 24ರಂದು ಸುರಜಿತ್ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ತನ್ನ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದಳು. ಹೀಗಾಗಿ ಅಡುಗೆ ಮಾಡುವುದನ್ನು ಮರೆತಿದ್ದಳು. ಪರಿಣಾಮ ಸಿಟ್ಟುಗೊಂಡ ಪತಿರಾಯ ಚಾಕು ತೋರಿಸಿ ಬೆದರಿಸಿದ್ದಾನೆ. ಆದ್ರೂ ಆಕೆ ಮೊಬೈಲ್ ನಲ್ಲೇ ಬ್ಯುಸಿಯಾಗಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಪತಿ ಸುರಜಿತ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಆಕೆಯ ತಲೆಗೆ ಹಲವು ಬಾರಿ ಇರಿದ್ದಾನೆ. ಅಲ್ಲದೇ ಟವೆಲ್ ನಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆಗೈದಿದ್ದಾನೆ.

    ಹೀಗೆ ಮಾಡಿದ ಬಳಿಕ ತಾನೇನು ಮಾಡುತ್ತಿದ್ದೇನೆಂದು ತಿಳಿದ ಸುರಜಿತ್, ತನ್ನ ಕೈಯ ಮಣಿಕಟ್ಟನ್ನು ಕುಯ್ದುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಾಗ ನಂತರ ಗಾಯಗಳಾದ ಕಡೆ ಬ್ಯಾಂಡೇಜ್ ಸುತ್ತಿದ್ದಾನೆ. ಅಲ್ಲದೇ ನಗರದ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಈತನ ಮೇಲೆ ಅನುಮಾನಗೊಂಡ ಪೊಲೀಸರು ಬಂಧಿಸಿದ್ದಾರೆ.

     

    ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದರಲ್ಲಿ ಓರ್ವ ಮದುವೆಗೆಂದು ನಗರದ ಕಡೆ ತೆರಳಿದ್ದನು. ಇನ್ನೋರ್ವ ಕಾಲೇಜು ಓದುತ್ತಿದ್ದು, ಕಾಲೇಜಿನಿಂದ ಬಂದ ಬಳಿಕ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ತನ್ನ ತಾಯಿಯ ದೇಹವನ್ನು ನೋಡಿ ದಂಗಾಗಿದ್ದಾನೆ.

    ಪತ್ನಿ ಟುಂಪಾ ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದುದರಿಂದ ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿದೆಯೆಂದು ಶಂಕಿಸಿ ಪತಿ ಸರ್ಜಿತ್ ಕೃತ್ಯ ಎಸಗಿರಬಹುದು ಅಂತ ಸ್ಥಳಿಯ ನಿವಾಸಿಗಳು ತಿಳಿಸಿದ್ದಾರೆ. ಕೆಲ ದಿನಗಳ ನಾದಿನಿ ಜೊತೆ ಗಂಡನಿಗೆ ಅಕ್ರಮ ಸಂಬಂಧ ಇರುವ ವಿಚಾರ ಟುಂಪಾಗೆ ಗೊತ್ತಾಗಿದೆ ಎನ್ನಲಾಗಿದೆ.