Tag: ಗಂಗಾವತಿ

  • ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

    ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

    – ಈ ಸ್ವಾಮೀಜಿಗೆ ಅಮ್ಮ-ಮಗಳು ಇಬ್ಬರೂ ಬೇಕಂತೆ
    – ತನ್ನೊಂದಿಗೆ ಮಂಚಕ್ಕೇರಿದ ಮಹಿಳೆಗೆ 35 ಲಕ್ಷ ರೂಪಾಯಿ ಭವ್ಯ ಬಂಗಲೆ
    – ಫಾರಿನ್ ಭಕ್ತರ ಜೊತೆಯೂ ಕಾಮಿ ಸ್ವಾಮಿಯ ಚಕ್ಕಂದ
    – ತನ್ನಿಂದ ಹುಟ್ಟಿದ ಗಂಡು ಮಗುವಿಗೆ ಕೊಡಿಸ್ತಾನೆ ಫ್ರೀ ಎಜುಕೇಷನ್

    ಕೊಪ್ಪಳ: ಜಿಲ್ಲೆಯ ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮಿ ಕಾಮಪುರಾಣ ಬಯಲಾಗಿದೆ. ಈ ಮಠದ ಹೆಸರಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ನಡೀತಿವೆ. ಸಂಸ್ಥೆಯಲ್ಲಿ ಕೆಲಸ ಮಾಡೋ ಮಹಿಳೆಯರು ಈ ಸ್ವಾಮಿ ಜೊತೆ ಮಂಚವೇರಬೇಕಂತೆ. ಈತನ ಜೊತೆಗೆ ಮಂಚಕ್ಕೇರಿರೋರು ಒಂದಲ್ಲ, ಎರಡಲ್ಲ ಅನೇಕ ಮಹಿಳೆಯರು. ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಹೀಗೆ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

    ಹೌದು. ವೀರಶೈವ ಸಂಪ್ರದಾಯ ಈ ಸ್ವಾಮಿಗೆ ಯಾವುದು ಅನ್ವಯ ಆಗೋದಿಲ್ವಂತೆ. ಈ ಸ್ವಾಮೀಜಿಗೆ ಹೆಂಗಸರು ಮಾಡಿರೋ ಅಡುಗೆ, ಹೈಫೈ ಡ್ರಿಂಕ್ಸ್, ನಾನ್ ವೆಜ್ ಆಹಾರ ಪ್ರಿಯವಾಗಿದೆ. ಇನ್ನು ಈ ಸ್ವಾಮಿ ಬ್ಯಾಂಕಾಕ್, ಥೈವಾನ್‍ ನಿಂದ ಬಂದ ಮಹಿಳಾ ಭಕ್ತರ ಜೊತೆಯೂ ಚಕ್ಕಂದವಾಡಿದ್ದಾನೆ. ಇನ್ನು ಮಠದ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡೋ ಚೆಲುವೆಯರು ಈ ಸ್ವಾಮೀಜಿ ಕಣ್ಣಿಗೆ ಬಿದ್ರೆ ರಾತ್ರಿ ಮಂಚಕ್ಕೆ ಬರಲೇಬೇಕು.

     

    ಶಿಕ್ಷಕಿ ಜೊತೆ ಸೆಕ್ಸ್: ಮೊದಲು ಕಲ್ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಗೆ ಕಲ್ಮಠದಲ್ಲಿ ವಾಸ ಮಾಡಲು ಸ್ವಾಮೀಜಿ ಹೇಳಿದ್ದ. ಹೀಗಾಗಿ ಮಠದಲ್ಲಿ ಈ ಶಿಕ್ಷಕಿ ಇದ್ದಳು. ಮಠದಲ್ಲಿರುವ ಎರಡು ಕೊಠಡಿಯ ಒಳಗೆ ಬಾಗಿಲು ಇದೆ. ಈ ಶಿಕ್ಷಕಿಯ ಜೊತೆಯೂ ಕೂಡ ಸ್ವಾಮೀಜಿ ದೈಹಿಕ ಸಂಪರ್ಕ ಮಾಡಿದ್ದಾನೆ. ಈಗ ಶಿಕ್ಷಕಿ ನಿವೃತ್ತಿಯಾಗಿದ್ದಾಳೆ. ಶಿಕ್ಷಕಿ ಮದುವೆಯಾಗದಂತೆ ನೋಡಿಕೊಂಡಿದ್ದಾನೆ. ಈಗ ಆಕೆಗೆ ವಯಸ್ಸಾಗುತ್ತಿದ್ದಂತೆ ಸ್ವಾಮೀಜಿ ಕೈ ಕೊಟ್ಟಿದ್ದು, ಗಂಗಾವತಿಯಲ್ಲಿ ಒಬ್ಬಳೇ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾಳೆ.

     

    ಮಂಚಕ್ಕೇರಿದ ಮಹಿಳೆಗೆ 35 ಲಕ್ಷದ ಮನೆ: ಹುಲಿಹೈದರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯನ್ನ ತನ್ನ ಮಠದಲ್ಲಿ ತಂದಿಟ್ಟುಕೊಂಡು ರತಿಕ್ರೀಡೆ ಆಡ್ತಿದ್ದಾನೆ. ಈಗ ಆ ಮಹಿಳೆಯನ್ನ ಹುಲಿಹೈದರ್ ಗ್ರಾಮಪಂಚಾಯತ್ ಸದಸ್ಯೆಯನ್ನಾಗಿ ಮಾಡಿದ್ದಲ್ಲದೆ ಗಂಗಾವತಿಯಲ್ಲಿ 35 ಲಕ್ಷದ ಮನೆ ಕಟ್ಟಿಸಿಕೊಟ್ಟಿದ್ದಾನೆ. ಮನೆಯಲ್ಲಿ ಸಿಸಿ ಕ್ಯಾಮೆರಾ ಮತ್ತು ಎಸಿ ಹಾಕಿಸಿದ್ದಾನೆ. ಮಹಿಳೆಯ ಪತಿಗೆ ತಮ್ಮ ಕಾಲೇಜಿನಲ್ಲಿ ಸಿಪಾಯಿ ಕೆಲಸ ನೀಡಿದ್ದಾನೆ.

    ಅಮ್ಮ ಮಗಳು ಇಬ್ಬರೂ ಬೇಕಂತೆ: ಅಷ್ಟೆ ಅಲ್ಲ ಗ್ರಾ.ಪಂ ಸದಸ್ಯೆಯನ್ನಾಗಿ ಮಾಡಿದ ಮಹಿಳೆಯ ಮಗಳು 12ನೇ ಕ್ಲಾಸ್ ಓದುತ್ತಿದ್ದಾಳೆ. ಈ ಮಗಳ ಜೊತೆ ಕೂಡ ಸ್ವಾಮೀಜಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮಗಳು ಗರ್ಭವತಿಯಾದಾಗ ಗದಗನಲ್ಲಿ ಅಬಾರ್ಷನ್ ಮಾಡಿಸಿದ್ದಾನೆ. ಈಗಲೂ ಸ್ವಾಮೀಜಿಯ ಮಠದಲ್ಲಿ ಈಕೆ ಇದ್ದಾಳೆ.

    ಲೈಬ್ರೇರಿಯನ್ ಜೊತೆಯೂ ಕಾಮದಾಟ: ಈ ಕಾಮಿಸ್ವಾಮಿ ಕಾಮಪುರಾಣ ಇಷ್ಟಕ್ಕೆ ನಿಲ್ಲೋದಿಲ್ಲ. ಯಾಕಂದ್ರೆ ಈ ಸ್ವಾಮಿ ಕಾಮತೃಷೆಗೆ ಬಲಿಯಾದವರ ಲಿಸ್ಟ್ ಅಷ್ಟೊಂದಿದೆ. ಮಠದ ಸಂಸ್ಥೆಯಲ್ಲಿ ಲೈಬ್ರೇರಿಯನ್ ಆಗಿದ್ದ ಮಹಿಳೆಯನ್ನ ಮಂಚಕ್ಕೆ ಕರೆದು ಕಾಮದಾಟ ಆಡಿದ್ದಾನೆ. ಕಲ್ಮಠ ಶಿಕ್ಷಣ ಸಂಸ್ಥೆಯಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಎರಡು ಗಂಡು ಮಕ್ಕಳು ಕರುಣಿಸಿದ್ದಾನೆ ಈ ಕಾಮಿ ಸ್ವಾಮಿ. ಆಕೆಯ ಪತಿಗೆ ಮಾಹಿತಿ ತಿಳಿದು ಗಲಾಟೆಯಾಗಿದೆ. ನಂತರ ಸ್ವಾಮೀಜಿ 15 ಲಕ್ಷ ರೂಪಾಯಿ ಕೊಟ್ಟು ತಣ್ಣಗೆ ಮಾಡಿದ್ದಾನೆ. ಅಷ್ಟೇ ಅಲ್ಲ ಪ್ರತಿ ತಿಂಗಳು ಮಕ್ಕಳಿಗೆ ಹಣನೂ ಕೊಡುತ್ತಿದ್ದಾನೆ. ಸದ್ಯ ಈ ಮಹಿಳೆ ಗದಗ ಜಿಲ್ಲೆಯಲ್ಲಿ ವಾಸವಾಗಿದ್ದಾರೆ. ಆವಾಗಿನಿಂದ ಈ ಸ್ವಾಮಿ ಕಾಮದ ವರಸೆ ಚೇಂಜ್ ಆಗಿದೆ. ನಂತರ ಸಂತಾನಹರಣ ಮಾಡಿಸಿಕೊಂಡ ಮಹಿಳೆಯರ ಮೇಲೆ ಕಣ್ಣು ಹಾಕಿದ್ದಾನೆ ಈ ಕಾಮಿಸ್ವಾಮಿ.

    ಕೇಂದ್ರ ಮಠದಲ್ಲೊಬ್ಬಳು, ಶಾಖಾ ಮಠದಲ್ಲೊಬ್ಬಳು ಬೇಕಂತೆ: ಕೇಂದ್ರ ಮಠದೊಳಗೆ ಒಬ್ಬ ಮಹಿಳೆ ಇದ್ದು, ಬಾಗಲಕೋಟೆ ಜಿಲ್ಲೆಯ ಶಾಖಾಮಠದಲ್ಲಿ ಅಡುಗೆ ಮಹಿಳೆಯೊಂದಿಗೆ ಒತ್ತಾಯದ ಸೆಕ್ಸ್ ಮಾಡ್ತಾನಂತೆ ಈ ಸ್ವಾಮಿ. ಶಾಖಮಠದಲ್ಲಿಯೇ ಈ ಸ್ವಾಮೀಜಿಗೆ ಮೈತೊಳೆದು ಅವನಿಗೆ ಬಟ್ಟೆ ಹಾಕಿಸುವ ಕೆಲಸ ಈ ಮಹಿಳೆಯ ಮಾಡುತ್ತಿದ್ದಾಳೆ. ಹಲವಾರು ವರ್ಷಗಳಿಂದ ಮಠದಲ್ಲಿ ಈ ಮಹಿಳೆಯ ಜೊತೆ ದೈಹಿಕ ಸಂಪರ್ಕ ಮಾಡುತ್ತಿದ್ದಾನೆ.

    ಡ್ರೈವರ್ ಗೆ ಕೊಲೆ ಬೆದರಿಕೆ: ಗನ್ ಲೈಸೆನ್ಸ್ ಹೊಂದಿರೋ ಈ ಸ್ವಾಮಿ ತನಗೆ ಸಹಕರಿಸದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕ್ತಾನೆ ಎನ್ನಲಾಗಿದೆ. 20 ವರ್ಷಗಳಿಂದ ಕಾಮಿಸ್ವಾಮಿ ಕಾಮದಾಟಕ್ಕೆ ಪರೋಕ್ಷವಾಗಿ ಸಹಕರಿಸ್ತಿದ್ದ ಡ್ರೈವರ್ ಈಗ ಸಹಕರಿಸದ್ದಕ್ಕೆ ಸಂಬಳ ಕೊಡದೆ ಕೆಲಸದಿಂದ ತಗೆದುಹಾಕಿದ್ದಾನೆ. ಒಂದು ವೇಳೆ ತನ್ನೆಲ್ಲ ಕಾಮಪುರಾಣ ಬಯಲು ಮಾಡಿದ್ರೆ ಕೊಲೆ ಮಾಡ್ತೀನಿ ಅಂತ ಹೆದರಿಸಿ ಗುಂಡಾಗಳಿಂದ ಡ್ರೈವರ್ ಮೇಲೆ ಹಲ್ಲೆ ಮಾಡಿಸಿದ್ದಾನೆ. ಈಗ ಡ್ರೈವರ್ ಮಲ್ಲಯ್ಯಸ್ವಾಮಿ ಅಂಗಡಿ ಕುಟುಂಬ ಜೀವಭಯದಲ್ಲಿ ಊರು ಬಿಡುವ ಸ್ಥಿತಿಯಲ್ಲಿದ್ದಾರೆ.

    ಸ್ವಾಮೀಜಿಯಿಂದ ಇಷ್ಟೆಲ್ಲಾ ಅನಾಚಾರ ನಡೀತಿದ್ರು ಟ್ರಸ್ಟ್ ನವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಸ್ವಾಮಿ ಮತ್ತೊಂದು ಟ್ರಸ್ಟ್ ಮಾಡಿಕೊಂಡು ಐಟಿಐ, ಡಿಇಡಿ, ಕಾಲೇಜು ನಡೆಸ್ತಿದ್ದಾನೆ. ಮಠದ ಆಸ್ತಿಯನ್ನ ತನ್ನ ಆಸ್ತಿ ಮಾಡಿಕೊಂಡು ಹೆಂಗಸರಿಗೆ ಮೋಸ ಮಾಡಿ ಅವರಿಗೆ ಪರಭಾರೆ ಮಾಡ್ತಿದ್ದಾನೆ.

    9 ನೇ ಪೀಠಾಧಿಪತಿಯಾಗಿರೋ ಕೊಟ್ಟೂರು ಸ್ವಾಮಿ ಕಾಮದಾಟಕ್ಕೆ ಬಲಿಯಾಗಿರೋ ಮಹಿಳೆಯರು ಅನಾಮಧೇಯ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. ಪೊಲೀಸರು ಇಂಥ ಕಾಮಿಸ್ವಾಮಿ ಮೇಲೆ ಕ್ರಮಕೈಗೊಂಡು ಮಠದ ಪಾವಿತ್ರ್ಯತೆ ಕಾಪಾಡಬೇಕಿದೆ.

     

  • ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಕ್ರೂಸರ್ ಪಲ್ಟಿ- 10 ಮಂದಿಗೆ ಗಾಯ

    ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಕ್ರೂಸರ್ ಪಲ್ಟಿ- 10 ಮಂದಿಗೆ ಗಾಯ

    ಕೊಪ್ಪಳ: ಕ್ರೂಸರ್ ಪಲ್ಟಿ ಹೊಡೆದ ಪರಿಣಾಮ ಹತ್ತು ಪ್ರಯಾಣಿಕರಿಗೆ ಗಾಯವಾಗಿ ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ದದೇಗಲ್ ಬಳಿ ಕ್ರೂಸರ್ ಪಲ್ಟಿ ಹೊಡೆದಿದೆ. ಎದುರಿಗೆ ವಾಹನವೊಂದು ಬರುತ್ತಿದ್ದಂತೆ ಅದನ್ನ ತಪ್ಪಿಸಲು ಹೋಗಿ ಕ್ರೂಸರ್ ಚಾಲಕ ಬ್ರೇಕ್ ಹಾಕಿದಾಗ ರಸ್ತೆಬದಿ ಪಲ್ಟಿ ಹೊಡೆದು ಬಿದ್ದಿದೆ.

    ಪರಿಣಾಮ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ನಿಂಗಪ್ಪ, ಹನಮಂತ, ಶಿವಾನಂದ, ರೇಣವ್ವ ಮುಂತಾದವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಗಾಯಾಳುಗಳು ಸವದತ್ತಿ ತಾಲೂಕಿನ ಚುಳಕಿ ಗ್ರಾಮದಿಂದ ಗಂಗಾವತಿಗೆ ಮದುವೆಗೆಂದು ಹೊರಟಿದ್ದರು ಎಂದು ತಿಳಿದುಬಂದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

     

  • ಕಾಲೇಜಿನ ಅವ್ಯವಸ್ಥೆ ಪ್ರಶ್ನಿಸಿದ್ದೇ ತಪ್ಪಾಯ್ತು- ಹಲ್ಲೆ ಮಾಡಿದ ಪ್ರಿನ್ಸಿಪಾಲ್ ವಿರುದ್ಧ ಗಂಗಾವತಿಯಲ್ಲಿ ಪ್ರತಿಭಟನೆ

    ಕಾಲೇಜಿನ ಅವ್ಯವಸ್ಥೆ ಪ್ರಶ್ನಿಸಿದ್ದೇ ತಪ್ಪಾಯ್ತು- ಹಲ್ಲೆ ಮಾಡಿದ ಪ್ರಿನ್ಸಿಪಾಲ್ ವಿರುದ್ಧ ಗಂಗಾವತಿಯಲ್ಲಿ ಪ್ರತಿಭಟನೆ

    ಕೊಪ್ಪಳ: ಕಾಲೇಜಿನಲ್ಲಿ ಆಗ್ತಿರೋ ತಪ್ಪುಗಳ ಬಗ್ಗೆ ಧ್ವನಿಯೆತ್ತಿದ ಕಾರಣಕ್ಕೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಚಾರ್ಯರೊಬ್ಬರು ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆ ಗಂಗಾವತಿ ಕಾಲೇಜಿನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

    ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ರೋ ಎಸ್‍ಕೆಎನ್ ಜಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಾಚಾರ್ಯ ಪ್ರೊ, ಹಸನ್ಮಿಯ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸ್ತಿದ್ದಾರೆ.

    ಇಂದು ಪದವಿ ಪರೀಕ್ಷೆ ನಡೆಯೋ ವೇಳೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳು ರಮೇಶ್ ಹಾಗೂ ಆನಂದ ಮೇಲ್ಭಾಗದ ಕೊಠಡಿ ಹತ್ತಿರ ಹೋಗಿದ್ದಾರೆ ಇದನ್ನೇ ನೆಪವಾಗಿಟ್ಟುಕೊಂಡು ಪ್ರಾಚಾರ್ಯ ಹಲ್ಲೆ ಮಾಡಿ ನಿಂದಿಸಿದ್ದಾರೆ. ಅಲ್ಲದೇ ಈ ಕಾಲೇಜಿನ ಲ್ಲಿ ಪ್ರಾಚಾರ್ಯರು ಪದೇ ಪದೇ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

  • 5 ರೂ.ಗೆ 2 ಮಸಾಲೆದೋಸೆ- ಇದು ಇಂದಿರಾ ಕ್ಯಾಂಟೀನ್ ಅಲ್ಲ, ಕೊಪ್ಪಳ ಮಹಿಳೆಯರ ಓಪನ್ ದೋಸಾ ಕ್ಯಾಂಟೀನ್

    5 ರೂ.ಗೆ 2 ಮಸಾಲೆದೋಸೆ- ಇದು ಇಂದಿರಾ ಕ್ಯಾಂಟೀನ್ ಅಲ್ಲ, ಕೊಪ್ಪಳ ಮಹಿಳೆಯರ ಓಪನ್ ದೋಸಾ ಕ್ಯಾಂಟೀನ್

    ಕೊಪ್ಪಳ: 3 ರೂಪಾಯಿಗೆ ಮಸಾಲೆ ದೋಸೆ, 5 ರೂಪಾಯಿಗೆ 2 ಮಸಾಲೆ ದೋಸೆ. ಇಂದಿರಾ ಕ್ಯಾಂಟೀನ್‍ನಲ್ಲಿ ಅನ್ಕೋತಿದ್ದೀರಾ. ಖಂಡಿತಾ ಅಲ್ಲ, ಇದು ಕೊಪ್ಪಳದಲ್ಲಿ ಸಮಾಜ ಸೇವೆ ಉದ್ದೇಶದಿಂದ ಮಹಿಳೆಯರು ನಡೆಸುತ್ತಿರುವ ಓಪನ್ ದೋಸಾ ಕ್ಯಾಂಟೀನ್.

    ಮೆಹಬೂಬಿ ಮತ್ತು ಮರ್ತೂಜಾ ಎಂಬವರು ಕಳೆದ 10 ವರ್ಷಗಳಿಂದ ಕೊಪ್ಪಳದ ಗಂಗಾವತಿಯ ಪಾಂಡುರಂಗ ದೇಗುಲದ ಬಳಿ ತೆರೆದ ಹೋಟೆಲ್ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ನಲ್ಲಿ 5 ರೂಪಾಯಿಗೆ ತಿಂಡಿ ಕೊಡುತ್ತಿದ್ದರೆ, ಇವರು ಕೇವಲ 3 ರೂಪಾಯಿಗೆ ಒಂದು ದೋಸೆ ನೀಡ್ತಾರೆ. 5 ರೂಪಾಯಿ ಕೊಟ್ರೆ 2 ಮಸಾಲೆ ದೋಸೆ ನೀಡ್ತಾರೆ. ಇದರ ಜೊತೆಗೆ ರುಚಿರುಚಿಯಾದ ಕೊಬ್ಬರಿ ಚಟ್ನಿ ಕೂಡ ಇರುತ್ತದೆ. ಹಾಗಂತ ಇವರು ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಸಮಾಜಸೇವೆ ಉದ್ದೇಶದಿಂದ ಅಗ್ಗದ ದರದಲ್ಲಿ ದೋಸೆ ನೀಡುತ್ತಿದ್ದು, ಅದಕ್ಕೆ ತಗುಲುವ ಖರ್ಚು ಬಂದ್ರೆ ಸಾಕು ಅಂತ ಮೆಹಬೂಬಿ ಹೇಳಿದ್ದಾರೆ.

    ಬೆಳಗ್ಗೆ 5.30ಕ್ಕೆ ಅಂಗಡಿ ತೆರೆಯುವ ಇವರು 10 ಗಂಟೆವರೆಗೆ ಈ ಸೇವೆ ಮಾಡ್ತಾರೆ. ಬೆಳಗ್ಗೆಯಿಂದಲೇ ಮಕ್ಕಳು, ಕೂಲಿ ಕಾರ್ಮಿಕರು ದೋಸೆ ಸವಿಯಲು ಇವರ ಅಂಗಡಿಗೆ ಮುಗಿಬೀಳ್ತಾರೆ.

  • ಹೆದ್ದಾರಿಯಲ್ಲಿದ್ದ ಬಾರ್ ಗ್ರಾಮಕ್ಕೆ ಬಂದಿದಕ್ಕೆ ಮಹಿಳೆಯರಿಂದ ಪ್ರತಿಭಟನೆ

    ಹೆದ್ದಾರಿಯಲ್ಲಿದ್ದ ಬಾರ್ ಗ್ರಾಮಕ್ಕೆ ಬಂದಿದಕ್ಕೆ ಮಹಿಳೆಯರಿಂದ ಪ್ರತಿಭಟನೆ

    ಕೊಪ್ಪಳ: ರಾಜ್ಯ ಹೆದ್ದಾರಿಯಲ್ಲಿದ್ದ ಬಾರ್‍ನ್ನು ಗ್ರಾಮದಲ್ಲಿ ಸ್ಥಳಾಂತರ ಮಾಡಿದಕ್ಕೆ ವಿರೋಧಿಸಿ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಳಿಯ ಹೆದ್ದಾರಿಯಲ್ಲಿದ್ದ ಬಾರ್‍ನ್ನು ಮಾಲೀಕ ಅಕ್ತರ್ ಅನ್ಸಾರಿ ಬಸಾಪಟ್ಟಣ ಪಟ್ಟಣದ 5ನೇ ವಾರ್ಡ್‍ಗೆ ಸ್ಥಳಾಂತರ ಮಾಡಿದ್ದಾರೆ. ಬಾರ್ ಗ್ರಾಮಕ್ಕೆ ಬಂದಿದಕ್ಕೆ ವಾರ್ಡ್‍ನ ಮಹಿಳೆಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಜನನಿಬಿಡ ಪ್ರದೇಶವಾದ ಇಲ್ಲಿ ಕೂಲಿ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ದೂರದ ಊರುಗಳಿಂದ ಬಂದು ನೆಲೆಸಿರುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬಾರ್ ತೆರಯುವದರಿಂದ ಮನೆಯ ಪುರುಷರು ಹಾಳಾಗ್ತಾರೆ ಎಂದು ಮಹಿಳೆಯರು ಆರೋಪಿಸಿ ಪ್ರತಿಭಟನೆ ನಡೆಸಿದರು.

    ಬಾರ್ ಮಾಲೀಕರಾಗಿರುವ ಅಖ್ತರ್ ಅನ್ಸಾರಿ, ಶಾಸಕ ಇಕ್ಬಾಲ್ ಅನ್ಸಾರಿ ಅವರ ಸಹೋದರರಾಗಿದ್ದು ಅಣ್ಣನ ಅಧಿಕಾರ ಬಲದಿಂದ ನಮ್ಮನ್ನು ಬೆದರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬಳಿಯ ಬಾರ್‍ಗಳು ಬಂದ್ ಆಗಿ ಬೇರೆ ಪ್ರದೇಶಗಳಿಗೆ ಶಿಫ್ಟ್ ಆಗುತ್ತಿದೆ.

     

     

    ಸುಪ್ರೀಂ ಹೇಳಿದ್ದು ಏನು?
    ಮದ್ಯಪಾನದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 20 ಸಾವಿರ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ 200 ಮೀಟರ್ ಹಾಗೂ 20 ಸಾವಿರ ಮೇಲ್ಪಟ್ಟು ಜನಸಂಖ್ಯೆ ಇರುವ ನಗರಗಳಲ್ಲಿ 500 ಮೀಟರ್ ವರೆಗಿರುವ ಮದ್ಯ ದಂಗಡಿಗಳನ್ನು ಸ್ಥಳಾಂತರಿಸಬೇಕು. ಇಲ್ಲವೇ ಬಂದ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಷ್ಟೇ ಅಲ್ಲದೇ ಈ ಮದ್ಯದ ಅಂಗಡಿಗಳ ಪರಾವನಗಿಗಳನ್ನು ಮಾರ್ಚ್ 31ರ ಬಳಿಕ ನವೀಕರಿಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ಪೀಠ ಹೇಳಿತ್ತು. ಈ ಆದೇಶದ ಬಳಿಕ ರಾಜ್ಯ ಸರ್ಕಾರಗಳು ನಗರ ಒಳಗಡೆ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿತ್ತು.

     

  • ಮಾಸಾಶನ, ಉಳಿತಾಯ ಖಾತೆಯ 40 ಲಕ್ಷ ರೂ. ಹಣದೊಂದಿಗೆ ಪೋಸ್ಟ್ ಮ್ಯಾನ್ ಎಸ್ಕೇಪ್!

    ಮಾಸಾಶನ, ಉಳಿತಾಯ ಖಾತೆಯ 40 ಲಕ್ಷ ರೂ. ಹಣದೊಂದಿಗೆ ಪೋಸ್ಟ್ ಮ್ಯಾನ್ ಎಸ್ಕೇಪ್!

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯ ಗ್ರಾಮದ ಪೋಸ್ಟ್ ಮ್ಯಾನ್ ಓರ್ವ ವಿವಿಧ ಮಾಸಾಶನ ಮತ್ತು ಉಳಿತಾಯ ಖಾತೆಯ ಲಕ್ಷಾಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ.

    ರಮೇಶ್ ಎಂಬಾತನೇ ಹಣದೊಂದಿಗೆ ಪರಾರಿಯಾದ ಪೋಸ್ಟ್ ಮ್ಯಾನ್. ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಉಪ್ಪಳ ಗ್ರಾಮದ ರಮೇಶ ಕಳೆದ 12 ವರ್ಷದಿಂದ ಗಂಗಾವತಿ ತಾಲೂಕಿನಲ್ಲಿ ಗುತ್ತಿಗೆ ಆಧಾರದ ಮೇಲೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದನು.

    ಏನಿದು ಪ್ರಕರಣ?: ಸುಮಾರು 30 ರಿಂದ 40 ಲಕ್ಷ ರೂ. ಹಣದೊಂದಿಗೆ ರಮೇಶ್ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ರಮೇಶ್ ಹೊಸ ಅಯೋಧ್ಯ, ಹಳೇ ಅಯೋಧ್ಯ ಮತ್ತು ಶ್ರೀಕೃಷ್ಣ ದೇವರಾಯ ನಗರ ಎಂಬ ಮೂರು ಗ್ರಾಮದ ನೂರಾರು ಮಾಸಾಶನ ಫಲಾನುಭವಿಗಳಿಗೆ ಸರ್ಕಾರ ನೀಡಿರುವ ಹಣ ಮತ್ತು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯ ಹಣವನ್ನು ಗ್ರಾಮಸ್ಥರಿಗೆ ವಿತರಿಸುತ್ತಿದ್ದನು. ಆದ್ರೆ ಇದೀಗ ಜೂನ್ 20ರಿಂದ ರಮೇಶ್ ನಾಪತ್ತೆಯಾಗಿದ್ದು, ಇದರಿಂದ ಮಾಸಾಶನ ಪಡೆಯುವ ಫಲಾನುಭವಿಗಳು ಮತ್ತು ಉಳಿತಾಯ ಖಾತೆಯ ಗ್ರಾಹಕರು ಪರದಾಡುವಂತಾಗಿದೆ.

    ಆದರೆ ಇದೂವರೆಗೂ ಅಂಚೆ ಇಲಾಖೆ ಅಧಿಕಾರಿಗಳು ಮಾತ್ರ ಪೊಲೀಸರಿಗೆ ದೂರು ನೀಡಲು ಮುಂದಾಗ್ತಿಲ್ಲ. ಗ್ರಾಮಸ್ಥರು ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪ ವ್ಯಕ್ತವಾಗುತ್ತಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಿಡಿಯೋ: ಪಿಎಸ್‍ಐ ಗೆ ಸಾರ್ವಜನಿಕವಾಗಿ ಅವಾಜ್ ಹಾಕಿದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ

    ವಿಡಿಯೋ: ಪಿಎಸ್‍ಐ ಗೆ ಸಾರ್ವಜನಿಕವಾಗಿ ಅವಾಜ್ ಹಾಕಿದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ

    ಕೊಪ್ಪಳ: ಗಂಗಾವತಿ ಶಾಸಕರಾದ ಇಕ್ಬಾಲ್ ಅನ್ಸಾರಿ ಪಿಎಸ್‍ಐ ರಾಮಣ್ಣ ಎಂಬವರಿಗೆ ಸಾರ್ವಜನಿಕವಾಗಿ ಅವಾಜ್ ಹಾಕಿದ್ದಾರೆ.

    ಗಂಗಾವತಿ ಠಾಣೆಯ ಪಿಎಸ್‍ಐ ರಾಮಣ್ಣ ಅವರಿಗೆ ಶಾಸಕರು ಫೋನ್‍ನಲ್ಲಿ ಸಾರ್ವಜನಿಕವಾಗಿ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ರಾಮಣ್ಣ ಬಳ್ಳಾರಿ ಜಲ್ಲೆಯ ಕಂಪ್ಲಿ ಪಟ್ಟಣಕ್ಕೆ ವರ್ಗವಾದ ಬೆನ್ನಲ್ಲೇ ವಿಡಿಯೋ ವೈರಲ್ ಆಗಿದೆ.

    ಏನಿದು ಘಟನೆ?: ಕೆಲವು ದಿನಗಳ ಹಿಂದೆ ಕುರಿಗಳ ಕಳ್ಳತನ ಪ್ರಕರಣದಲ್ಲಿ ಕೆಲವು ಮಾಂಸದಂಗಡಿಯ ಮಾಲೀಕರನ್ನು ಕರೆತಂದು ವಿಚಾರಣೆ ನಡೆಸಿದ್ದರು. ಮಾಂಸದ ಅಂಗಡಿಯ ವ್ಯಾಪಾರಿಗಳು ಶಾಸಕರ ಮುಂದೆ ಬಂದು ನಮ್ಮನ್ನ ವಿನಾಕಾರಣ ವಿಚಾರಣೆ ನಡೆಸುತ್ತಿದ್ದಾರೆ ಎಂದು ದೂರಿದ್ದರು. ವ್ಯಾಪಾರಿಗಳ ಮಾತು ಕೇಳುತ್ತಿದ್ದಂತೆ ಯೋಚನೆ ಮಾಡದೇ ಪಿಎಸ್‍ಐಗೆ ಕರೆ ಮಾಡಿ, ನಿಮಗೆ ಗಂಗಾವತಿ ಬೇಸರ ಆಗಿದ್ರೆ ಹೇಳಿ ವರ್ಗಾವಣೆ ಮಾಡಿಸ್ತೀನಿ. ನೀನು ಒಳ್ಳೆಯವನು ಅಂತಾ ಇಟ್ಟುಕೊಂಡಿದ್ದೇನೆ. ವಿನಾಕಾರಣ ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ರೆ ಪೊಲೀಸ್ ಸ್ಟೇಷನ್‍ಗೆ ಮುತ್ತಿಗೆ ಹಾಕಿಸ್ತೀನಿ ಎಂದು ಅವಾಜ್ ಹಾಕುವ ಮೂಲಕ ಅಧಿಕಾರ ದರ್ಪ ಮೆರೆದಿದ್ದಾರೆ.

    ಇದು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದು ಹೇಳಿರೋ ಸಾರ್ವಜನಿಕರು, ಪೊಲೀಸ್ ಇಲಾಖೆಯ ಕೆಲಸದಲ್ಲಿ ಮಧ್ಯಪ್ರವೇಶಿಸಿರುವ ಅನ್ಸಾರಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=TDzYcfEYSCA

  • ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ- ಗಂಗಾವತಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ

    ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ- ಗಂಗಾವತಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ

    ಕೊಪ್ಪಳ: ಪಬ್ಲಿಕ್ ಟಿವಿ ವರದಿಯ ಬಳಿಕ ಗಂಗಾವತಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

    ಗಂಗಾವತಿ ನಗರಕ್ಕೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ಇಂದು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ವರದಿಗೆ ಸ್ಪಂದಿಸಿರೋ ನಗರಸಭೆ ಹಂಗಾಮಿ ಅಧ್ಯಕ್ಷ ಹಾಗೂ ಅಧಿಕಾರಿಗಳು ಜಾಕ್ ವೆಲ್ ಗೆ ಭೇಟಿ ನೀಡಿ ಡ್ಯಾಂ ನಿಂದ ನೀರು ಹರಿಸಿ ಗಂಗಾವತಿ ನಗರಕ್ಕೆ ಬುಧವಾರದಿಂದ ಯಥಾ ಸ್ಥಿತಿಯಲ್ಲಿ ಕುಡಿಯೋ ನೀರು ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ.

    ಹೊಸಪೇಟೆ ತಾಲೂಕಿನ ವೆಂಕಟಾಪುರದಲ್ಲಿರೋ ಜಾಕ್ ವೆಲ್‍ಗೆ ಡ್ಯಾಮ್ ನಿಂದ ನೀರು ಬಿಡುಗಡೆ ಮಾಡಿದ್ದು, ಆನೆಗುಂದಿ ನೂತನ ಸೇತುವೆ ಮಾರ್ಗವಾಗಿ ದೇವಘಾಟ್ ಬಳಿ ನೀರು ಶೇಖರಣೆ ಆಗುವಂತೆ ವ್ಯವಸ್ಥೆ ಮಾಡಿದ್ದಾರೆ.

  • ಕುಡಿಯೋಕೆ ನೀರಿಲ್ಲ, ಎಣ್ಣೆನೇ ಎಲ್ಲಾ- ಶಾಸಕರ ಬರ್ತ್ ಡೇ ನೆಪದಲ್ಲಿ ನಗರಸಭೆ ಸದಸ್ಯರ ಮೋಜು ಮಸ್ತಿ

    ಕುಡಿಯೋಕೆ ನೀರಿಲ್ಲ, ಎಣ್ಣೆನೇ ಎಲ್ಲಾ- ಶಾಸಕರ ಬರ್ತ್ ಡೇ ನೆಪದಲ್ಲಿ ನಗರಸಭೆ ಸದಸ್ಯರ ಮೋಜು ಮಸ್ತಿ

    ಕೊಪ್ಪಳ: ನಗರದಲ್ಲಿ ಕಳೆದ ಹತ್ತು ದಿನಗಳಿಂದ್ಲೂ ಹನಿ ನೀರಿಗೂ ಜನರು ಪರದಾಡ್ತಿದ್ದಾರೆ. ಗಂಗಾವತಿ ನಗರದಲ್ಲಿ ಮದ್ಯ ಮಾತ್ರ ಸಲೀಸಾಗಿ ಸಿಗುತ್ತೆ. ಆದ್ರೆ ಕುಡಿಯೋಕೆ ನೀರು ಮಾತ್ರ ಸಿಗ್ತಿಲ್ಲ. ಇಲ್ಲಿನ ನಗರಸಭೆ ಸದಸ್ಯರು ಶಾಸಕ ಇಕ್ಬಾಲ್ ಅನ್ಸಾರಿ ಜನ್ಮದಿನದಂದು ಕುಣಿದು ಕುಪ್ಪಳಿಸಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಗಂಗಾವತಿ ತಾಲೂಕಿನ ಶಾಸಕರಾದ ಇಕ್ಬಾಲ್ ಅನ್ಸಾರಿಯವರ ಹುಟ್ಟು ಹಬ್ಬದಂದು ನಗರಸಭೆ ಸದಸ್ಯರು ಸೇರಿದಂತೆ ಬೆಂಬಲಿಗರು ಕುಡಿದು ಕುಪ್ಪಳಿಸಿದ್ದಾರೆ. ಟಿಬಿ ಡ್ಯಾಂ ಡೆಡ್ ಸ್ಟೋರೇಜ್ ತಲುಪಿದೆ. ಗಂಗಾವತಿ ಜನರು ಹನಿ ನೀರಿಗಾಗಿ ಪರದಾಡ್ತಿದ್ದಾರೆ. ಖಾಲಿ ಕೊಡ ಹಿಡಿದು ಪ್ರತಿಭಟನೆಗೆ ಇಳಿದಿದ್ದು, ನಮಗೆ ಎಣ್ಣೆ ಬೇಡ ಸ್ವಾಮಿ ನೀರು ಕೊಡಿ ಅಂತಿದ್ದಾರೆ.

    ಜನರು ನೀರಿಗಾಗಿ ಮೈಲುಗಟ್ಟಲೇ ಅಲೆದಾಡ್ತಾಯಿದ್ದಾರೆ. ಆದ್ರೆ ಇದ್ಯಾವುದರ ಚಿಂತೆಯಿಲ್ಲದ ಜನಪ್ರತಿನಿಧಿಗಳು ಮಾತ್ರ ಸಾರ್ವಜನಿಕವಾಗಿ ಮೋಜು ಮಸ್ತಿಯಲ್ಲಿ ತೊಡಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    https://youtu.be/0ZDbLT7p3OM

  • ಕನ್ನಡದ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ಸಂಬಂಧ ಬಯಲು

    ಕನ್ನಡದ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ಸಂಬಂಧ ಬಯಲು

    ಕೊಪ್ಪಳ: ರಾಜ್ಯದ ಪ್ರಭಾವಿ ಶಾಸಕರೊಬ್ಬರ 2ನೇ ಸಂಬಂಧ ಬಯಲಾಗಿದೆ. ಸ್ಯಾಂಡಲ್‍ವುಡ್ ನಟಿ ಜೊತೆಗೆ ಸಂಬಂಧ ಬೆಳೆಸಿದ ಶಾಸಕ ಆ ನಟಿಮಣಿಗೆ ಎರಡು ಮಕ್ಕಳನ್ನೂ ಕರುಣಿಸಿದ್ದಾರೆ.

    ಹೌದು. ಕೊಪ್ಪಳದ ಗಂಗಾವತಿ ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ನಟಿ ಜೊತೆ ಸಂಸಾರ ನಡೆಸಿದ್ದು, ಅಣ್ಣ-ತಮ್ಮಂದಿರ ಆಸ್ತಿ ಜಗಳದಲ್ಲಿ ಶಾಸಕರ ರಾಸಲೀಲೆ ಬಯಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿ ಶಾಸಕರ ಜೊತೆ ಸಂಬಂಧ ಹೊಂದಿದ್ದು, ಆಸ್ತಿಯನ್ನು ಆಕೆಗೆ ಕೊಟ್ಟಾಗ ಈ ಸಂಗತಿ ಬಯಲಾಗಿದೆ.

    ಶಾಸಕ ಇಕ್ಬಾಲ್ ಅನ್ಸಾರಿಗೆ ಇಡೀ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಬಾರ್‍ಗಳು ಹಾಗೂ ವೈನ್ ಶಾಪ್‍ಗಳಿವೆ. ಅಪ್ಪ ಮಾಡಿದ್ದ ಆಸ್ತಿಯನ್ನ ಸಹೋದರರಿಗೆ ಹಂಚದೆ ಇಬ್ಬರು ಹೆಂಡತಿಯ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿದಾಗ 2ನೇ ಸಂಬಂಧ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಇಬ್ಬರು ಸಹೋದರರು ಸಿಟ್ಟಿಗೆದ್ದಿದ್ದಾರೆ.

    ಯಾರು ಆ ನಟಿ?: ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಪ್ರೀತಿಗೆ ಪಾತ್ರರಾಗಿದ್ದು ಗುಬ್ಬಿ ವೀರಣ್ಣ ಕುಟುಂಬದ ಹೆಣ್ಣು. ಆ ನಟಿ ಬೇರೆ ಯಾರು ಅಲ್ಲ. ಒಂದು ಕಾಲದ ಬ್ಯೂಟಿಕ್ವೀನ್, ಚೆಂದದ ನಟಿ ಪಂಚಮಿ. ಸಿನಿಮಾ, ಧಾರವಾಹಿಗಳಲ್ಲಿ ಮನೆಮಾತಾಗಿದ್ದ ನಟಿ ಪಂಚಮಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ ಎರಡನೇ ಸಂಬಂಧ ಹೊಂದಿದ್ದಾರೆ. ನಾಟಕ ಆಡಲು ಬಂದುವರು ಕಷ್ಟ ಅಂದಾಗ ನಟಿ ಪಂಚಮಿಯನ್ನ ಮದುವೆಯಾಗಿ ಸದ್ದಿಲ್ಲದೇ ಸಂಸಾರ ಮಾಡ್ತಿದ್ದು, ಬಳ್ಳಾರಿಯ ಹೊಸಪೇಟೆಯಲ್ಲಿ ನಟಿ ಪಂಚಮಿಗೆ ಇಕ್ಬಾಲ್ ಅನ್ಸಾರಿ ಮನೆ ಮಾಡಿಕೊಟ್ಟಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ಇಕ್ಬಾಲ್ ಅನ್ಸಾರಿಯವರ ಬಾರ್‍ಗಳಲ್ಲಿ ಡಬಲ್ ರೇಟ್ ತೆಗೆದುಕೊಳ್ತಾರೆ. ಎಂಆರ್‍ಪಿಗಿಂತ ಡಬಲ್ ವಸೂಲಿ ಮಾಡ್ತಾರೆ ಅಂತ ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಆ ಸಮಯದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ಪತ್ನಿ ತಬಸುಮಾ ಅವರ ಒಡೆತನದ ಬಾರ್‍ಗಳ ಪಟ್ಟಿ ಮಾಡ್ತಿದ್ದಾಗಲೇ ಪಂಚಮಿಗೂ ಬಾರ್ ಲೈಸೆನ್ಸ್ ವರ್ಗಾಯಿಸಿರೋದು ಬೆಳಕಿಗೆ ಬಂತು. ಇದರ ಜಾಡು ಹಿಡಿದಾಗ ಶಾಸಕ ಇಕ್ಬಾಲ್ ಅನ್ಸಾರಿ ಅವರ ಅಸಲಿ ಬಣ್ಣ ಬಯಲಾಗಿದೆ. 2016 ಅಂದ್ರೆ ಕಳೆದ ವರ್ಷ ಜೂನ್ 27ರಂದು ಶ್ರೀಮತಿ ಪಂಚಮಿ, ದಿವಂಗತ ತಂದೆ ಗುರುಸ್ವಾಮಿ ಅನ್ನೋರಿಗೆ ಬಾರ್ ಮಾಲಿಕತ್ವವನ್ನ ಕೊಟ್ಟಿರೋ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    2013ರ ಚುನಾವಣಾ ಪ್ರಚಾರದಲ್ಲೇ ಅನ್ಸಾರಿ ಬಣ್ಣ ಬಯಲಾಗಿ ಈಗ ಮೊದಲ ಪತ್ನಿ ಸಿಟ್ಟಿಗೆದ್ದಿದ್ದಾರೆ. ನಟಿ ಪಂಚಮಿ ಶಾಸಕ ಇಕ್ಬಾಲ್ ಅನ್ಸಾರಿ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ರು. ಗಂಡನ ಎರಡನೇ ಸಂಬಂಧದ ಬಗ್ಗೆ ಗೊತ್ತಾಗಿ ನಟಿಗೆ ಅನ್ಸಾರಿ ಪತ್ನಿ ತಬಸುಮಾ ಮನೆಯಲ್ಲೇ ಥಳಿಸಿದ್ರು ಎನ್ನಲಾಗಿದೆ. ಮೊದಲ ಹೆಂಡತಿ ಹಲ್ಲೆ ಬಳಿಕ 2ನೇ ಹೆಂಡತಿ ಪಂಚಮಿಗೆ ಇಕ್ಬಾಲ್ ಅನ್ಸಾರಿ ಬಾರ್ ಬರೆದುಕೊಟ್ಟಿದ್ದಾರೆ.

    https://www.youtube.com/watch?v=GVuQKk9L0VA&feature=youtu.be