Tag: ಖಮರುಲ್ ಇಸ್ಲಾಂ

  • ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಕಲಬುರಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಸಾವಿಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಗಂಭೀರವಾಗಿ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಖಮರುಲ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಹಾಗೂ ಖಮರುಲ್ ಇಸ್ಲಾಂ ಅವರನ್ನು ಕೈಬಿಡುವಂತೆ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಮೂಲಕ ಒತ್ತಡ ಹೇರಿದ್ದರು. ಈ ಮೂಲಕ ನಮ್ಮನ್ನು ಸಚಿವಸ್ಥಾನದಿಂದ ಕೆಳಗೆ ಇಳಿಸಿ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು ಎಂದು ದೂರಿದರು.

    ಸಚಿವ ಸ್ಥಾನ ಕೈತಪ್ಪಿದ್ದರಿಂದ ಖಮರುಲ್ ಅವರು ಮಾನಸಿಕವಾಗಿ ನೊಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಒಂದು ವೇಳೆ ಸಚಿವ ಸ್ಥಾನದಲ್ಲಿ ಖಮರುಲ್ ಅವರು ಇದ್ದಿದ್ದರೆ ಹೆಚ್ಚುಕಾಲ ಬಾಳುತ್ತಿದ್ದರು. ಹೀಗಾಗಿ ಖಮರುಲ್ ಅವರ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಕಿಡಿಕಾರಿದರು.

    ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಅಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಸತ್ಯ ಎಂದು ಚಿಂಚನಸೂರ್ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಂದು ಮಾಜಿ ಸಚಿವ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ: ಹೆಲಿಕಾಪ್ಟರ್ ವ್ಯವಸ್ಥೆ ಮಾಡದ ಸಿಎಂ

    ಇಂದು ಮಾಜಿ ಸಚಿವ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ: ಹೆಲಿಕಾಪ್ಟರ್ ವ್ಯವಸ್ಥೆ ಮಾಡದ ಸಿಎಂ

    ಬೆಂಗಳೂರು: ಸೋಮವಾರ ನಿಧನರಾದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ ಇವತ್ತು ನಡೆಯಲಿದೆ. ರಾತ್ರಿ 10 ಗಂಟೆಗೆ ಕಲ್ಬುರ್ಗಿಯ ಆನಂದ ನಗರದಲ್ಲಿರುವ ಖಲಂದರ್ ಖಾನ್ ಕಬರಸ್ಥಾನದಲ್ಲಿ ಮುಸ್ಲಿಂ ವಿಧಿವಿಧಾನದಂತೆ ದಫನ ಮಾಡಲಾಗುತ್ತದೆ. ಇವತ್ತು ಬೆಳಗ್ಗೆ 7 ರಿಂದ 9 ಗಂಟೆವರೆಗೆ ಖಮರುಲ್ ಇಸ್ಲಾಂರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಇಡಲಾಗುತ್ತದೆ. ನಂತರ ತೆರದ ವಾಹನದಲ್ಲಿ ಕೆಸಿಟಿ ಮೈದಾನದವರೆಗೆ ಮೆರವಣಿಗೆಯಲ್ಲಿ ತರಲಾಗುತ್ತದೆ.

    ಮಧ್ಯಾಹ್ನ 1 ಗಂಟೆಯಿಂದ 5 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದಾದ ಬಳಿಕ ಕೆಸಿಟಿ ಮೈದಾನದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಖಲಂದರ್ ಖಾನ್ ಕಬರಸ್ಥಾನಕ್ಕೆ ತರಲಾಗುತ್ತದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಇನ್ನು ಖಮರುಲ್ ಇಸ್ಲಾಂ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಕಲಬುರಗಿಗೆ ಸಾಗಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಕುಟುಂಬದವರು ಸಿಎಂ ಬಳಿ ಅಂಗಾಲಾಚಿದ್ದರು. ಆದರೆ ವಿಶೇಷ ಫ್ಲೈಟ್ ಇಲ್ಲ ಅಂತ ಸರ್ಕಾರ ರಸ್ತೆ ಮಾರ್ಗವಾಗಿಯೇ ಪಾರ್ಥಿವ ಶರೀರವನ್ನು ಕಲಬುರಗಿಗೆ ಸಾಗಿಸಿದೆ. ಖಮರುಲ್ ಪತ್ನಿ ಕೂಡ ಅಂಬುಲೆನ್ಸ್ ನಲ್ಲಿ 700 ಕಿ.ಮೀಟರ್ ಪ್ರಯಾಣ ಮಾಡಿದ್ದಾರೆ. ಹೀಗಾಗಿ ಪ್ರಭಾವಿ ಮುಸ್ಲಿಂ ನಾಯಕರಾಗಿದ್ದ ಖಮರುಲ್ ಇಸ್ಲಾಂರಿಗೆ ಸಿಎಂ ಅಗೌರವ ತೋರಿಸಿದ್ದಾರೆ ಅಂತ ಬೆಂಬಲಿಗರು ಹಾಗೂ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=FZhrzJnGyic

    https://www.youtube.com/watch?v=RTg2swEv94U

  • ಮಾಜಿ ಸಚಿವ ಖಮರುಲ್ ಇಸ್ಲಾಂ ಇನ್ನಿಲ್ಲ

    ಮಾಜಿ ಸಚಿವ ಖಮರುಲ್ ಇಸ್ಲಾಂ ಇನ್ನಿಲ್ಲ

    ಬೆಂಗಳೂರು: ಮಾಜಿ ಸಚಿವ ಖಮರುಲ್ ಇಸ್ಲಾಂ(69) ಹೃದಯಘಾತದಿಂದ ನಿಧನರಾಗಿದ್ದಾರೆ.

    ಅನಾರೋಗ್ಯದಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಮರುಲ್ ಇಸ್ಲಾಂ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಕಲಬುರಗಿ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಸಿದ್ದರಾಮಯ್ಯ ಸಂಪುಟದಲ್ಲಿ ಈ ಹಿಂದೆ ವಕ್ಫ್ ಖಾತೆಯ ಸಚಿವರಾಗಿದ್ದರು. ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಇವರು 1974ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಮುಸ್ಲಿಮ್ ಲೀಗ್ ಮತ್ತು ಮೂರು ಬಾರಿ ಕಾಂಗ್ರೆಸ್‍ನಿಂದ ಜಯಗಳಿಸಿದ್ದರು.

  • ಹೈಕಮಾಂಡ್ ಓಲೈಕೆಗೆ ಹೈ.ಕ. ಅಭಿವೃದ್ಧಿ ಹಣ – ಖಮರುಲ್ ಇಸ್ಲಾಂರಿಂದಲೂ ಲೂಟಿ

    ಹೈಕಮಾಂಡ್ ಓಲೈಕೆಗೆ ಹೈ.ಕ. ಅಭಿವೃದ್ಧಿ ಹಣ – ಖಮರುಲ್ ಇಸ್ಲಾಂರಿಂದಲೂ ಲೂಟಿ

    ಕಲಬುರಗಿ: ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೊಂದೇ ಕಳಂಕ ಸೇರಿಕೊಳ್ತಿದೆ. ಆಹಾರ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಇದೀಗ ಹೈ.ಕ. ಅಭಿವೃದ್ಧಿ ಹೆಸರಲ್ಲಿ ಹೈಕಮಾಂಡ್ ಓಲೈಕೆಗೆ ಹಣ ಪೋಲು ಮಾಡಿರುವ ಬಗ್ಗೆ ಗೊತ್ತಾಗಿದೆ.

    ಹೈದರಾಬಾದ್ ಕರ್ನಾಟಕ ರೀಜನಲ್ ಡೆವಲಪ್‍ಮೆಂಟ್ ಬೋರ್ಡ್ ಇರೋದು ಹೈ-ಕ ಪ್ರದೇಶದ ಅಭಿವೃದ್ಧಿಗಾಗಿಯೇ ಅಂತಾ ಜನರು ನಂಬಿದ್ರು. ಆದ್ರೆ ಮಂಡಳಿಗೆ ಬರುವ ಹಣ ರಾಜಕೀಯ ಪ್ರಚಾರಕ್ಕೆ ಪೋಲಾಗ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

    2014-15ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಲಬುರಗಿಗೆ ಆಗಮಿಸಿದ್ರು. ಈ ವೇಳೆ ಬೃಹತ್ ಸಮಾವೇಶ ನಡೆಸಲಾಯ್ತು. ಈ ಸಮಾವೇಶಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣದಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದ್ದು, ಬರೋಬ್ಬರಿ 23 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

    ಅಲ್ಲದೆ ಮಂಡಳಿ ಅಧ್ಯಕ್ಷರ ಕಾರು ಅಪಘಾತವಾದ್ರೆ ಎಫ್‍ಐಆರ್ ಮಾಡಿಸಿ, ವಿಮಾ ಕಂಪನಿಯಿಂದ ಹಣವನ್ನು ಪಡೀಬೇಕು. ಆದ್ರೆ ಹಿಂದಿನ ಅಧ್ಯಕ್ಷ ಖಮರುಲ್ ಇಸ್ಲಾಂ ಅವರು ನಿಯಮವನ್ನು ಗಾಳಿಗೆ ತೂರಿ ಮಂಡಳಿಯಿಂದ 2 ಲಕ್ಷದ 26 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಅನ್ನೋದು 2014-15ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿದೆ.