Tag: ಕ್ಲಬ್

  • ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    ಮದ್ಯಪ್ರಿಯರಿಗೆ ಮತ್ತೊಂದು ಗುಡ್‍ನ್ಯೂಸ್- ನಾಳೆಯಿಂದ ಬಾರ್, ಕ್ಲಬ್‍ಗಳಲ್ಲೂ ಸಿಗುತ್ತೆ ಎಣ್ಣೆ

    – ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಖರೀದಿಗೆ ಅವಕಾಶ
    – ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ ಲೈಸನ್ಸ್ ರದ್ದು

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸುಮಾರು ಒಂದೂವರೆ ತಿಂಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಸರ್ಕಾರ ಮದ್ಯಪ್ರಿಯರಿಗೆ ಸಿಹಿ ಸುದ್ದಿ ನೀಡಿತ್ತು. ಇದೀಗ ಬಾರ್, ಕ್ಲಬ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಮತ್ತೆ ಎಣ್ಣೆಪ್ರಿಯರಿಗೆ ಸರ್ಕಾರ ಗುಡ್‍ನ್ಯೂಸ್ ನೀಡಿದೆ.

    ಈ ಕುರಿತು ಅಬಕಾರಿ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಿದ್ದು, ಐದನೇ ದಿನಕ್ಕೆ 122.16 ಕೋಟಿ ತೆರಿಗೆ ಸಂಗ್ರಹ ಆಗಿದೆ. ಯಾಕೆಂದರೆ ಇಂದಿನಿಂದ ತೆರಿಗೆ ಅಧಿಕವಾಗಿದ್ದರಿಂದ ಆದಾಯವೂ ಹೆಚ್ಚಾಗಿದೆ. ಈ ಮೂಲಕ ಸರ್ಕಾರಕ್ಕೆ ಒಟ್ಟು 767 ಕೋಟಿ ಆದಾಯ ಬಂದಿದೆ. ಗಡಿಭಾಗದಲ್ಲಿ ಆಧಾರ್ ಪರೀಕ್ಷಿಸಿ ಮದ್ಯ ನೀಡಲು ಸೂಚನೆ ನೀಡಿದ್ದೆ. ಲಾಕ್‍ಡೌನ್ ಬಳಿಕ ಮದ್ಯದ ಅಂಗಡಿ ಓಪನ್ ಆದ ಬಳಿಕ ಮೊದಲು ನೂಕುನುಗ್ಗಲು ಉಂಟಾಗಿತ್ತು ಎಂದರು.

    ನಾಳೆಯಿಂದ ಲಾಡ್ಜ್, ಬಾರ್, ಕ್ಲಬ್‍ಗಳಲ್ಲಿ ಮದ್ಯ ಮಾರಾಟ ಮಾಡಬಹುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಮಾಲೀಕರು ನಮ್ಮಲ್ಲಿರುವ ಸ್ಟಾಕನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೆ. ಹೀಗಾಗಿ ಇಂದು ಸಂಜೆಯಿಂದ ಅಥವಾ ನಾಳೆಯಿಂದ ಅವುಗಳು ಓಪನ್ ಆಗುತ್ತವೆ. ಬಾರ್, ಕ್ಲಬ್ ಮತ್ತು ಲಾಡ್ಜ್ ಗಳಲ್ಲೂ ಪಾರ್ಸಲ್‍ಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

    ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್, ಸಿಎಲ್7, ಸಿಎಲ್4, ಸಿಎಲ್‍ವೈನ್ ಈ ಲೈಸನ್ಸ್ ಇರುವವರು ಓಪನ್ ಮಾಡಬಹುದು. ಎಂಆರ್‌ಪಿ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಎಂಆರ್‌ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲಾಗುತ್ತಿದೆ. ಇದರ ಜವಾಬ್ದಾರಿ ಮಾಲೀಕರ ಮೇಲಿರುತ್ತದೆ. ಖರೀದಿ ಸಮಯ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಇರುತ್ತದೆ.

    ಸುಪ್ರೀಂಕೋರ್ಟ್ ನೀಡಿದ ಆದೇಶ ನೋಡಿಲ್ಲ. ಆನ್‍ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು. ಪ್ರತಿವರ್ಷ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2,500 ಕೋಟಿ ಹೆಚ್ಚಾಗಲಿದೆ ಎಂದರು.

  • ಕ್ಲಬ್‍ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ

    ಕ್ಲಬ್‍ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ

    ಬೆಂಗಳೂರು: ಬೌರಿಂಗ್ ಕ್ಲಬ್, ಟರ್ಫ್ ಕ್ಲಬ್, ಗಾಲ್ಫ್ ಕ್ಲಬ್ ಸೇರಿದಂತೆ ಬೆಂಗಳೂರಿನ ಕ್ಲಬ್ ಗಳ ಕುರಿತು ಇವತ್ತು ವಿಧಾನ ಪರಿಷತ್ ಕಲಾಪದಲ್ಲಿ ಪಕ್ಷಾತೀತವಾಗಿ ಚರ್ಚೆ ನಡೆಯಿತು. ಕ್ಲಬ್ ಗಳ ವರ್ತನೆಗೆ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ ಸದಸ್ಯರು ಕ್ಲಬ್ ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆಗೆ ಒತ್ತಾಯ ಮಾಡಿದರು. ಸದಸ್ಯರ ಮನವಿಗೆ ಸ್ಪಂದನೆ ನೀಡಿದ ಸಹಕಾರ ಸಚಿವ ಸೋಮಶೇಖರ್ ಸದನ ಸಮಿತಿ ರಚನೆಯ ಘೋಷಣೆ ಮಾಡಿದರು.

    ಕಾಂಗ್ರೆಸ್ ಸದಸ್ಯ ಎಚ್.ಎಂ ರೇವಣ್ಣ ಬೆಂಗಳೂರಿನ ಕ್ಲಬ್‍ಗಳ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಬೆಂಗಳೂರಿನ ಕ್ಲಬ್‍ಗಳ ಬಗ್ಗೆ ಸದನದ ರೇವಣ್ಣ ಅವರು ಮಾಹಿತಿ ಬಿಚ್ಚಿಟ್ಟರು. ಬೌರಿಂಗ್ ಕ್ಲಬ್ ಸೇರಿದಂತೆ ಇನ್ನಿತರ ಕ್ಲಬ್‍ನಲ್ಲಿ ಡ್ರೆಸ್ ಕೋಡ್ ಇದೆ. ಸೂಟ್ ಹಾಕಿಕೊಂಡು ಹೋಗಬೇಕಂತೆ. ಬಿಳಿ ಬಟ್ಟೆ ಹಾಕಿಕೊಂಡು ಹೋಗುವ ಆಗಿಲ್ಲ. ಖಾದಿ ಬಟ್ಟೆ ಹಾಕಿಕೊಂಡರೆ ಕ್ಲಬ್ ಎಂಟ್ರಿ ಇಲ್ಲವಂತೆ ಅಂತ ಕ್ಲಬ್ ಗಳ ವರ್ತನೆ ವಿರುದ್ದ ಅಸಮಾಧಾನ ಹೊರ ಹಾಕಿದರು.

    ರೇವಣ್ಣ ಮಾತಿಗೆ ಮತ್ತೊಬ್ಬ ಸದಸ್ಯ ಪ್ರಕಾಶ್ ರಾಥೋಡ್ ಧ್ವನಿಗೂಡಿಸಿದರು. ಐಎಎಸ್ ಅಧಿಕಾರಿಗಳಿಗೆ ಕ್ಲಬ್ ಇದೆ. ಮಹಿಳೆಯರು ಕ್ಲಬ್ ಮಾಡಿಕೊಂಡಿದ್ದಾರೆ. ಶಾಸಕರಿಗೂ ಒಂದು ಕ್ಲಬ್ ಬೇಕು. ನಾವು ವ್ಯಾಯಾಮ ಮಾಡೋದು ಬೇಡವಾ? ನಾವು ರೆಸ್ಟ್ ಮಾಡೋದು ಬೇಡವಾ ಶಾಸಕರಿಗೂ ಕ್ಲಬ್ ಮಾಡಿಕೊಡಿ ಎಂದು ಸಚಿವ ಸೋಮಶೇಖರ್ ಗೆ ಪ್ರಕಾಶ್ ರಾಥೋಡ್ ಒತ್ತಾಯ ಮಾಡಿದರು.

    ಜೆಡಿಎಸ್ ಶ್ರೀಕಂಠೇಗೌಡ ಮಾತನಾಡಿ ಗಾಲ್ಫ್ ಕ್ಲಬ್ ಜಾಗದಲ್ಲಿ ಶಾಸಕರಿಗೆ ಕ್ಲಬ್ ಪ್ರಾರಂಭ ಮಾಡಿ. ನಾವು ವಾಕಿಂಗ್ ಮಾಡಬೇಕು, ಆಟ ಆಡಬೇಕು, ಊಟ ಮಾಡಬೇಕು.ನಮಗೂ ರಿಲ್ಯಾಕ್ಸ್ ಬೇಕು ಅಲ್ಲವಾ. ಹಿಂದೆ ಗಣೇಶ್ ಕಾರ್ಣಿಕ್ ಕ್ಲಬ್ ಗಾಗಿ ಹಣ ಸಂಗ್ರಹ ಮಾಡಿದರು. ಆದರೆ ಈವರೆಗೂ ಕ್ಲಬ್ ಆಗಿಲ್ಲ. ಶಾಸಕರ ಭವನಕ್ಕೂ ಹತ್ತಿರ ಇದೆ. ಗಾಲ್ಫ್ ಕ್ಲಬ್ ಜಾಗದಲ್ಲಿ ಶಾಸಕರಿಗೆ ಕ್ಲಬ್ ಮಾಡಿಕೊಡಿ ಎಂದು ಮನವಿ ಮಾಡಿದರು.

    ಇದೇ ವೇಳೆ ಜೆಡಿಎಸ್‍ನ ತಿಪ್ಪೇಸ್ವಾಮಿ ಗಾಲ್ಫ್ ಕ್ಲಬ್ ಬಗ್ಗೆ ಪ್ರಸ್ತಾಪ ಮಾಡಿದರು. ಅಧಿಕಾರಿಗಳೇ ಇವುಗಳ ನಿರ್ವಹಣೆ ಮಾಡುತ್ತಿದ್ದಾರೆ. ಬಾಡಿಗೆ ಸರಿಯಾಗಿ ಕೊಡ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದರು. ತಿಪ್ಪೇಸ್ವಾಮಿ ಮಾತಿಗೆ ಅಪ್ಪಾಜಿಗೌಡ, ನಾರಾಯಣಸ್ವಾಮಿ ಸೇರಿ ಹಲವರು ಧ್ವನಿಗೂಡಿಸಿದರು.ಇನ್ನು ಕಾಂಗ್ರೆಸ್ ನ ಸದಸ್ಯ ಇಟಗಿ ರೇಸ್ ಕೋರ್ಸ್ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು.

    ಟರ್ಫ್ ಕ್ಲಬ್ ಲೀಸ್ ಅವಧಿ ಮುಗಿದಿದೆ. ಅದನ್ನು ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೆ ಅವರು ಹೈಕೋರ್ಟ್‍ಗೆ ಹೋಗಿದರು. ಹೈಕೋರ್ಟ್ ರಾಜ್ಯದ ಪರ ತೀರ್ಪು ಕೊಟ್ಟಿದೆ. ಅವರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ನಮ್ಮ ಸರ್ಕಾರದ ವಕೀಲರೇ ಕೇಸ್ ಮುಗಿಯೋವರೆಗೂ ರೇಸ್ ಕೋರ್ಸ್ ಮುಂದುವರಿಸಬಹುದು ಎಂದು ಅಫಿಡವಿಟ್ ಕೊಟ್ಟಿದ್ದಾರೆ ಇದು ನಾಚಿಕೆ ಸಂಗತಿ ಅಂತ ವಿರೋಧ ವ್ಯಕ್ತಪಡಿಸಿದರು.

    ಬೆಂಗಳೂರಿನ ಬಹುತೇಕ ಕ್ಲಬ್ ಗಳು ನಮ್ಮ ಜಾಗ, ನಮ್ಮ ನೀರು, ನಮ್ಮ ವಿದ್ಯುತ್ ತೆಗೆದುಕೊಂಡಿವೆ. ಆದ್ರು ಧಿಮಾಕು ಪ್ರದರ್ಶನ ಮಾಡ್ತೀವಿ ಅಂತ ಸದಸ್ಯರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಸದಸ್ಯರ ಮನವಿ ಸ್ವೀಕಾರ ಮಾಡಿದ ಸಚಿವ ಸೋಮಶೇಖರ್, ನಾನು ಸಚಿವನಾದ ಮೇಲೆ ಕ್ಲಬ್ ನವರೇ ನಮ್ಮ ಬಳಿ ಬಂದು ದೂರು ಕೊಡೋಕೆ ಬರುತ್ತಾರೆ ನೀವು ಸ್ವಲ್ಪ ನೋಡಬೇಕು ಎಂದು ಹೇಳಲು ಬಂದಿದ್ದರು. ಯಾರೇ ನಿಯಮ ಮೀರಿದರೂ ಕ್ರಮ ತಗೆದುಕೊಳ್ಳುತ್ತೇನೆ. ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಕ್ಲಬ್‍ಗಳ ಮೇಲೆ ಕ್ರಮಕ್ಕಾಗಿ ಸದನ ಸಮಿತಿಗೆ ಸರ್ಕಾರ ಸಿದ್ದ ಎಂದು ಸದನ ಸಮಿತಿ ರಚನೆ ಮಾಡೋದಾಗಿ ಸದನದಲ್ಲಿ ಘೋಷಣೆ ಮಾಡಿದರು.

  • ನಿಧನದ ಹಿಂದಿನ ದಿನ ತಾನು ಪ್ರೀತಿಸ್ತಿದ್ದ ಸ್ಥಳಕ್ಕೋಗಿ ಬಹಳ ಸಮಯ ಕಳೆದಿದ್ರು ಅಂಬಿ!

    ನಿಧನದ ಹಿಂದಿನ ದಿನ ತಾನು ಪ್ರೀತಿಸ್ತಿದ್ದ ಸ್ಥಳಕ್ಕೋಗಿ ಬಹಳ ಸಮಯ ಕಳೆದಿದ್ರು ಅಂಬಿ!

    ಬೆಂಗಳೂರು: ಬದುಕಿನ ಕೊನೆಯ ಕ್ಷಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾನು ಪ್ರೀತಿಸುತ್ತಿದ್ದ ಸ್ಥಳಕ್ಕೆ ಹೋಗಿ ಬಹಳ ಹೊತ್ತು ಕಳೆದಿದ್ದರು. ಅಲ್ಲಿ ಅವರು ಪ್ರೀತಿಸುತ್ತಿದ್ದ ಜೀವವನ್ನು ಮುದ್ದಿಸಿ ತಮ್ಮ ಕೊನೆಯ ಕ್ಷಣಗಳನ್ನು ಕಳೆದರು.

    ಏನ್ಲಾ ಬಡ್ಡೇತದೆ, ಹೆಂಗಿದ್ದೀಯಾ? ನೀನೆ ರೇಸ್ ನಲ್ಲಿ ಫಸ್ಟ್ ಬರಬೇಕು. ಹೀಗಂತ ಅಂಬಿ ಮುದ್ದು ಕುದುರೆಯನ್ನು ಮೈದಡವಿ ನೇವರಿಸಿಬಿಟ್ಟರು ಅಂದ್ರೆ ಮುಗೀತು. ಅಂಬಿಯ ಪ್ರೀತಿಯ “ಸ್ಪೀಡ್ ಹಾಕ್” ಕೆನತ ಶುರು. ಅಂಬಿಯ ಸೂಟು-ಬೂಟು ಶಿಳ್ಳೆಯ ಸದ್ದಿನೊಂದಿಗೆ ಬೆಂಗಳೂರಿನ ಟರ್ಪ್ ಕ್ಲಬ್ ನಲ್ಲಿರುವ ಅಂಬಿ ಮಾಲೀಕತ್ವದ ಈ ಕುದುರೆ ಅದೆಷ್ಟೋ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದೆ.

    ಸಾವಿನ ಹಿಂದಿನ ಶುಕ್ರವಾರ ಇಳಿ ಸಂಜೆ ವೇಳೆ ನೇರವಾಗಿ ಅಂಬಿ ಟರ್ಪ್‍ಕ್ಲಬ್‍ಗೆ ಬಂದಿದ್ದರು. ಸ್ಪೀಡ್ ಹಾಕ್‍ನ್ನು ಮನಸಾರೆ ಮುದ್ದಿಸಿದ್ದರು. ಕುದುರೆ ರೇಸ್‍ನ ಹುಚ್ಚನ್ನು ಹತ್ತಿಸಿಕೊಂಡಿದ್ದ ಅಂಬಿ ಸಾವಿನ ಮುನ್ನ ದಿನವೂ ರೇಸ್‍ನ ಜಾಗದಲ್ಲೆಲ್ಲ ಸುಮ್ಮನೆ ಕೂತು ನಂತರ ಅಲ್ಲಿಂದ ಎದ್ದು ಬಂದಿದ್ದಾರೆ.

    ಡರ್ಬಿ ರೇಸ್ ಆದಾಗೆಲ್ಲ ಸೂಟು-ಬೂಟು ಧರಿಸಿ ಸ್ಟೈಲಾಗಿ ಸಿಗರೇಟು ಸೇದುತ್ತಾ ಶಿಳ್ಳೆ ಹೊಡೆಯುವ ಅಂಬಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಟರ್ಫ್ ಕ್ಲಬ್‍ನ್ನು ಬಹುವಾಗಿ ಪ್ರೀತಿಸಿದ್ದ ಅಂಬಿ ಇಲ್ಲದೇ ಈಗ ಅಂಬಿ ಅಶ್ವ ಮೌನವಾಗಿದೆ. ಟರ್ಪ್ ಕ್ಲಬ್‍ನಲ್ಲಿ ಅಂಬಿಯ ಆಳೆತ್ತರದ ಭಾವಚಿತ್ರ ಅಲ್ಲಿನ ಸಿಬ್ಬಂದಿಯ ಪ್ರೀತಿಯನ್ನು ತೋರುತ್ತಿದೆ.

    ಶೂಟಿಂಗ್, ಮೀಟಿಂಗ್, ಸದನ ಸಭೆಗಳ ನಡುವೆಯೂ ಅಂಬಿ ರೇಸ್‍ಗಳನ್ನು ವೀಕ್ಷಿಸಲು ಬರುತ್ತಿದ್ದರು. ಸಾವಿಗೂ ಮುನ್ನಾ ದಿನ ಬಂದ ಅಂಬಿ ಈಗಿಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳೋಕೆ ಇಲ್ಲಿನ ಸಿಬ್ಬಂದಿಗೂ ಆಗುತ್ತಿಲ್ಲ. ಸ್ಪೀಡ್ ಹಾಕ್‍ನ ಕೆನತದ ಓಟಕ್ಕೆ ಮಗುವಾಗುತ್ತಿದ್ದ ಅಂಬಿಯನ್ನು ಕಳೆದುಕೊಂಡು ಅಂಬಿ ಕುದುರೆ ಅನಾಥವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ- ದೀಪ್‍ವೀರ್ ಗೆ ಅನುಷ್ಕಾ ಸ್ವಾಗತ

    ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ- ದೀಪ್‍ವೀರ್ ಗೆ ಅನುಷ್ಕಾ ಸ್ವಾಗತ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಗೆಳೆಯ ರಣ್‍ವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೀಪಿಕಾ ಮದುವೆಯಾದ ಬಳಿಕ ನಟಿ ಅನುಷ್ಕಾ ಶರ್ಮಾ ತಮ್ಮ ಕ್ಲಬ್‍ಗೆ ಸ್ವಾಗತ ಕೋರಿದ್ದಾರೆ.

    ದೀಪ್‍ವೀರ್ ಬುಧವಾರ ಕೊಂಕಣಿ ಸಂಪ್ರದಾಯದಂತೆ ಗುರುವಾರ ಸಿಂಧ್ ಸಂಪ್ರದಾಯದಂತೆ ಮದುವೆಯಾದರು. ಮದುವೆಯಾದ ನಂತರ ಬಾಲಿವುಡ್ ತಾರೆಯರು ಹಾಗೂ ಗಣ್ಯರು ಈ ಜೋಡಿಗೆ ಶುಭಾಶಯ ತಿಳಿಸಿದರು. ಹಾಗೆಯೇ ಅನುಷ್ಕಾ ಕೂಡ ದೀಪಿಕಾ ಅವರಿಗೆ ಶುಭಾಶಯ ತಿಳಿಸಿ ತಮ್ಮ ಕ್ಲಬ್‍ಗೆ ಸ್ವಾಗತಿಸಿದ್ದಾರೆ.

    ಅನುಷ್ಕಾ ಶರ್ಮಾ ತಮ್ಮ ಟ್ವಿಟ್ಟರಿನಲ್ಲಿ, “ನಿಮ್ಮಿಬ್ಬರಿಗೂ ಪ್ರಪಂಚದ ಎಲ್ಲ ಖುಷಿ ಸಿಗಲಿ. ನೀವಿಬ್ಬರು ಯಾವಾಗಲೂ ಜೊತೆಯಾಗಿರಿ. ನೀವಿಬ್ಬರು ಈಗಿರುವ ಹಾಗೇ ಮುಂದೆ ಜೀವನದಲ್ಲೂ ಒಬ್ಬರನೊಬ್ಬರು ಪ್ರೀತಿಸುತ್ತೀರಿ. ನಿಮ್ಮಿಬ್ಬರಿಗೂ ನಮ್ಮ ಕ್ಲಬ್‍ಗೆ ಸ್ವಾಗತ” ಎಂದು ಟ್ವೀಟ್ ಮಾಡಿದ್ದಾರೆ.

    ಇಟಲಿಯಿಂದ ನ.18ಕ್ಕೆ ಭಾರತಕ್ಕೆ ವಾಪಸ್ಸಾಗಲಿರುವ ಬಾಜಿರಾವ್ ಮಸ್ತಾನಿ ದಂಪತಿ ನ.21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಯವರ ಬಂಧುಗಳು ಮತ್ತು ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ನ.21ರಂದು ಮುಂಬೈಯಲ್ಲಿ ಇನ್ನೊಂದು ರಿಸೆಪ್ಷನ್ ಪಾರ್ಟಿ ನಡೆಯಲಿದ್ದು, ಅದರಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

  • ಅಧಿವೇಶನದಲ್ಲಿಂದು ಬರದ ಚರ್ಚೆ- ಸರ್ಕಾರದ ತರಾಟೆಗೆ ವಿಪಕ್ಷಗಳು ಸಜ್ಜು

    – ಕ್ಲಬ್ ಡ್ರೆಸ್‍ಕೋಡ್ ಬಗ್ಗೆ ವರದಿ ಮಂಡನೆ

    ಬೆಂಗಳೂರು: ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇವತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ಪ್ರತಿಪಕ್ಷ ಬಿಜೆಪಿ ವಂದನಾರ್ಪಣೆ ನಿರ್ಣಯದ ಚರ್ಚೆ ವೇಳೆ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ.

    ಬರ ಪರಿಹಾರ ಅಸಮರ್ಪಕ ನಿರ್ವಹಣೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಹಾಗೂ ಐಟಿ ದಾಳಿ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಸವಾರಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.

    ಈ ನಡುವೆ ಕಲಾಪದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಕ್ಲಬ್‍ಗಳ ಕಾರ್ಯಚಟುವಟಿಕೆಗಳು ಮತ್ತು ನಿಯಂತ್ರಣದ ಅಧ್ಯಯನದ ಸಮಿತಿ ವರದಿಯನ್ನ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಂಡಿಸಲಿದ್ದಾರೆ. ಕ್ಲಬ್‍ಗಳ ಡ್ರೆಸ್‍ಕೋಡ್‍ಗೆ ಕಡಿವಾಣ, ಅನಧಿಕೃತ ಬಾರ್ ಕೌಂಟರ್‍ಗಳ ಮೇಲೆ ಕಡಿವಾಣ ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಮಾಡುವ ಸಾಧ್ಯತೆ ಇದೆ.