Tag: ಕ್ರೈಸ್ತ ಧರ್ಮ ಗುರು

  • ಕ್ರೈಸ್ತ ಧರ್ಮ ಗುರುವಿಗೆ ಅವಮಾನ ಮಾಡಿದ್ರಾ ಸಿಎಂ ಬಿಎಸ್‍ವೈ?

    ಕ್ರೈಸ್ತ ಧರ್ಮ ಗುರುವಿಗೆ ಅವಮಾನ ಮಾಡಿದ್ರಾ ಸಿಎಂ ಬಿಎಸ್‍ವೈ?

    ಬೆಂಗಳೂರು: ಈ ಹಿಂದೆ ಬಾಲಕನೊಬ್ಬನಿಗೆ ಚಾಕುವಿನಿಂದಲೇ ಕೇಕ್ ತಿನ್ನಿಸಿ ಟೀಕೆಗೆ ಗುರಿಯಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಅದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ.

    ಕ್ರೈಸ್ತ ಧರ್ಮಾಧಿಕಾರಿಗಳಿಗೆ ಚಾಕುವಿನಿಂದ ಕೇಕ್ ತಿನ್ನಿಸುವ ಮೂಲಕ, ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಗುರುವಾರ ಮಿಲ್ಲರ್ಸ್ ರಸ್ತೆಯ ಕ್ರೈಸ್ತ ಧರ್ಮಾಧಿಕಾರಿಗಳ ನಿಲಯದಲ್ಲಿ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರಿಸ್ಮಸ್ ಹಬ್ಬ ಆಚರಣೆ ಮತ್ತು ಹೊಸ ವರ್ಷದ ಆಚರಣೆಗಾಗಿ ಕೇಕ್ ಕಟ್ ಮಾಡಲಾಯಿತು.

    ಕೇಕ್ ಕಟ್ ಮಾಡಿದ ಸಿಎಂ ಯಡಿಯೂರಪ್ಪ ಕ್ರೈಸ್ತ ಧರ್ಮ ಗುರು ಆರ್ಚ್ ಬಿಷಪ್ ಪೀಟರ್ ಮಚಾಡೊಗೆ ಚಾಕುವಿನಿಂದಲೇ ಕೇಕ್ ತಿನ್ನಿಸಿದರು. ಮತ್ತೊಬ್ಬರು ಧರ್ಮ ಗುರು ಬರ್ನಾಡ್ ಮೊರೆಸೊ ಅವರಿಗೂ ಚಾಕುವಿನಿಂದಲೇ ಕೇಕ್ ತಿನ್ನಿಸಿದ್ದರು. ಇದೀಗ ಸಿಎಂ ಅವರ ಈ ನಡೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ.

    ಕೈಯಿಂದ ಕೇಕ್ ತಿನ್ನಿಸದೇ ಚಾಕುವಿನಿಂದ ಕೇಕ್ ತಿನ್ನಿಸಿ, ಕ್ರೈಸ್ತ ಧರ್ಮ ಗುರುಗಳಿಗೆ ಅವಮಾನ ಮಾಡಲಾಗಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ.

  • ಶಾಲಾ ಕ್ಯಾಬಿನ್‍ನಲ್ಲೇ ನೇಣಿಗೆ ಶರಣಾದ ಕ್ರೈಸ್ತ ಧರ್ಮಗುರು

    ಶಾಲಾ ಕ್ಯಾಬಿನ್‍ನಲ್ಲೇ ನೇಣಿಗೆ ಶರಣಾದ ಕ್ರೈಸ್ತ ಧರ್ಮಗುರು

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ಧರ್ಮಗುರು, ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲೆಯ ಕ್ಯಾಬಿನ್ ಒಳಗೆ ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಉಡುಪಿ ಧರ್ಮಪ್ರಾಂತ್ಯ ಘೋಷಣೆಯಾದ ಬಳಿಕ ಮೊದಲ ಧರ್ಮಗುರು ಎಂಬ ಹೆಗ್ಗಳಿಕೆ ಮಹೇಶ್ ಮೇಲಿತ್ತು. ಮೂಲತಃ ಶಿರ್ವ ಸಮೀಪದ ಮೂಡಬೆಳ್ಳೆಯವರಾಗಿದ್ದ ಮಹೇಶ್, 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು. ಚರ್ಚ್ ಗೆ ಒಳಪಟ್ಟ ಡಾನ್ ಬಾಸ್ಕೊ ಶಾಲೆಯನ್ನು ಸಿಬಿಎಸ್ ಸಿ ಪಠ್ಯಕ್ರಮಕ್ಕೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಶಿಸ್ತಿಗೆ ಹೆಸರುವಾಸಿಯಾಗಿದ್ದ ಅವರು, ಭಾರೀ ಜನಮನ್ನಣೆ ಕೂಡ ಪಡೆದಿದ್ದರು.

    ಮಹೇಶ್ ಕಳೆದ ಕೆಲದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಒಳಗಾಗಿದ್ದರು ಎಂಬ ಬಗ್ಗೆ ಸಹವರ್ತಿಗಳ ಬಳಿಯೂ ಹೇಳಿಕೊಂಡಿರಲಿಲ್ಲ. ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟಿದ್ದು, ಮಹೇಶ್ ಡಿಸೊಜಾ ಪ್ರಾಂಶುಪಾಲರಾದ ಮೇಲೆ ಸಂಸ್ಥೆಗೆ ಅಡ್ಮೀಶನ್ ಜಾಸ್ತಿಯಾಗಿತ್ತು. ಪ್ರಾಂಶುಪಾಲರ ಈ ನಿರ್ಧಾರ ಊರಿನ ಜನರಲ್ಲಿ, ಶಾಲಾ ವಿದ್ಯಾರ್ಥಿಗಳು, ಪೋಷಕರ ತೀವ್ರ ನೋವಿಗೆ ಕಾರಣವಾಗಿದೆ.

    ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.