Tag: ಕ್ರೈಸ್ತರು

  • ಮಂಗಳೂರು, ಬೆಂಗಳೂರಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ – ಮಂಜೂಷ ಪೆಟ್ಟಿಗೆ ಸ್ಥಾಪನೆ

    ಮಂಗಳೂರು, ಬೆಂಗಳೂರಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ – ಮಂಜೂಷ ಪೆಟ್ಟಿಗೆ ಸ್ಥಾಪನೆ

    ಮಂಗಳೂರು: ಗ್ರೇಸ್ ಮಿನಿಸ್ಟ್ರಿ ಸಂಸ್ಥೆ ವತಿಯಿಂದ ಏ.12, 13 ರಂದು ಮಂಗಳೂರಿನ (Mangaluru) ವಳಚ್ಚಿಲ್ ಮತ್ತು ಬೆಂಗಳೂರಿನ (Bengaluru) ಬೂದಿಗೆರೆಯಲ್ಲಿ ಅದ್ದೂರಿಯಾಗಿ ಪಸ್ಕ ಹಬ್ಬ (Paska Festival) ಆಚರಿಸಲಾಯಿತು. ಒಡಂಬಡಿಕೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಆಚರಣೆ ಮಾಡಲಾಯಿತು.

    ಪಸ್ಕ ಹಬ್ಬ ಸಂದರ್ಭದಲ್ಲಿ ಗುಡ್ ಫ್ರೈಡೇ ಸಡಗರದ ಜೊತೆಗೆ ಇದೇ ಮೊದಲ ಬಾರಿಗೆ ಚರ್ಚ್ ಆವರಣದಲ್ಲಿ ಬೈಬಲ್ ಪ್ರೇರಿತ ಒಡಂಬಡಿಕೆ ಮಂಜೂಷ ಪೆಟ್ಟಿಗೆಯನ್ನ ಅದ್ದೂರಿಯಾಗಿ ಬರಮಾಡಿಕೊಂಡು ಏಳು ಸುತ್ತುಗಳ ಮೆರವಣಿಗೆಯ ನಂತರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಯಿತು. ಇದನ್ನೂ ಓದಿ: ಬೆಂಗಳೂರು | ಡಿಸಿಎಂ ಡಿಕೆಶಿ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಅನಿಲ್ ಕುಂಬ್ಳೆ

    ದೇಶ-ವಿದೇಶಗಳಿಂದ ಹಾಗೂ ರಾಜ್ಯದ ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಸ್ಕ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಬಿಷಪ್ ಡಾ. ಆಂಡ್ರೋ ರಿಚರ್ಡ್ ಅವರು ಪಸ್ಕ ಹಾಗೂ ಮಂಜೂಷ ಪೆಟ್ಟಿಗೆಯ ಮಹತ್ವವನ್ನ ಭಕ್ತರಿಗೆ ಸಾರಿದರು.

    ಇದೇ ವೇಳೆ, ಗ್ರೇಸ್ ಮಿನಿಸ್ಟ್ರಿ ನಿರ್ದೇಶಕ ಹಾಗೂ ಸಂಸ್ಥಾಪಕ ಡಾ.ಆಂಡ್ರ್ಯೂ ರಿಚರ್ಡ್ ಮಾತನಾಡಿ, ಈ ವರ್ಷ ಪಸ್ಕ ಹಬ್ಬದ ಜೊತೆಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಮಾಡಿರುವ ಸಂಸ್ಥೆ ಎಂದು ಹೇಳುವುದಕ್ಕೆ ಸಂತೋಷ ಪಡುತ್ತೇನೆ ಎಂದರು. ಹಬ್ಬದ ಪ್ರಯುಕ್ತ ಬಡಮಕ್ಕಳ ಉಚಿತ ಶಿಕ್ಷಣಕ್ಕಾಗಿ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮುದಾಯದ ಮಕ್ಕಳನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು 2024ರ ಪಸ್ಕ ಹಬ್ಬ ಆಚರಿಸಿದ ಸಂದರ್ಭ ಬಡ ಚರ್ಚ್ ಒಂದು ಹಣಕಾಸಿನ ತೊಂದರೆಯಿಂದಾಗಿ ಅರ್ಧದಲ್ಲಿ ನಿಂತು ಹೋಗಿತ್ತು. ಗ್ರೇಸ್ ಮಿನಿಸ್ಟ್ರಿ ಸಂಸ್ಥೆಯಿಂದ 8 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಆ ಚರ್ಚಿನ ಸಂಪೂರ್ಣ ನಿರ್ಮಾಣಕ್ಕೆ ಸಂಸ್ಥೆ ದಾರಿ ಮಾಡಿಕೊಟ್ಟಿದೆ ಎಂದರು. ಇದನ್ನೂ ಓದಿ: ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಎಕ್ಸಾಂ ಬರೆಯೋಕೆ ಆಗುತ್ತಾ? – ಚಕ್ರವರ್ತಿ ಸೂಲಿಬೆಲೆ

    ಪ್ರತಿ ವರ್ಷ ಪಸ್ಕ ಹಬ್ಬ ಆಯೋಜಿಸಲಾಗುತ್ತಿದ್ದು, ಆ ಮೂಲಕ ಬಡವರು, ಅನಾಥರು, ಬಡ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು. ಒಡಂಬಡಿಕೆ ಮಂಜೂಷ ಪೆಟ್ಟಿಗೆ ಸ್ಥಾಪನೆಯ ನಂತರ ಸಾವಿರಾರು ಭಕ್ತಾದಿಗಳು ಸಾಲು ಸಾಲಿನಲ್ಲಿ ನಿಂತು ತಮ್ಮ ಪ್ರಾರ್ಥನಾ ಮನವಿಗಳನ್ನು ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.

  • ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    ಹುಬ್ಬಳ್ಳಿ: ಈದ್ಗಾ ಮೈದಾನ ಗಣೇಶ ಚತುರ್ಥಿಗೆ ಮಾತ್ರ ನೀಡಿದರೆ ಸಾಕಾಗುವುದಿಲ್ಲ ನಮಗೂ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ ಎಂದು ಕ್ರೈಸ್ತರು ಪಾಲಿಕೆಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟಲ ನೇತೃತ್ವದಲ್ಲಿ ಕಮಿಷನರ್ ಗೋಪಾಲ್ ಕೃಷ್ಣ ಅವರಿಗೆ ಮನವಿ ಸಲ್ಲಿಸಿರುವ ಕ್ರೈಸ್ತ ಧರ್ಮದ ಮುಖಂಡರು, ನಮಗೂ ಸಹ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮತ್ತು ಯೇಸು ಬಗೆಗಿನ ಕಾರ್ಯಕ್ರಮಗಳನ್ನು ಮಾಡುವ ಆಸೆಯಿದೆ. ಹೀಗಾಗಿ ನಮ್ಮ ಧರ್ಮಕ್ಕೂ‌ ಸಹ ಅನುಮತಿ ನೀಡಬೇಕೆಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಮಠ-ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ: ಪ್ರಮೋದ್ ಮುತಾಲಿಕ್

    ಈ ವೇಳೆ ಫಾದರ್ ಸಲ್ಮಾನ್ ಬಿಜ್ಜ, ಓಬಲ್ ರಾವ್ ಸೇರಿದಂತೆ ಕ್ರೈಸ್ತ ಸಮಾಜದ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹಿಂದೂ, ಕ್ರೈಸ್ತರು ಜೊತೆಗೂಡಿ ಸಂಕ್ರಾಂತಿ ಆಚರಣೆ – ಪೊಂಗಲ್ ತಯಾರಿಸಿ ವಿಶೇಷ ಪೂಜೆ

    ಹಿಂದೂ, ಕ್ರೈಸ್ತರು ಜೊತೆಗೂಡಿ ಸಂಕ್ರಾಂತಿ ಆಚರಣೆ – ಪೊಂಗಲ್ ತಯಾರಿಸಿ ವಿಶೇಷ ಪೂಜೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಿಂದೂ, ಕ್ರೈಸ್ತರು ಒಟ್ಟಿಗೆ ಸೇರಿ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ.

    ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ ನಡೆಯಿತು. ವಿಶೇಷವಾಗಿ ಕ್ರೈಸ್ತ ಪಾದ್ರಿ ಸಗಯ್ ರಾಜುರವರಿಂದ ಸಂಕ್ರಾಂತಿ ಹಿನ್ನೆಲೆ ಪೂಜೆ, ಪ್ರಾರ್ಥನೆ ನಡೆಯಿತು.

    ಯಾವುದೇ ಬೇಧವಿಲ್ಲದೆ ಹಿಂದೂ, ಕ್ರೈಸ್ತ ಭಾಂದವರು ಜೊತೆಯಾಗಿ ಪೊಂಗಲ್ ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮ ಸಡಗರದಿಂದ ಜೊತೆಗೂಡಿ ಸಂಕ್ರಾಂತಿ ಹಬ್ಬ ಆಚರಿಸಿದ್ದು ಬಹಳ ವಿಶೇಷವಾಗಿತ್ತು.

    ಇತ್ತ ಮೈಸೂರಿನಲ್ಲಿ ವಿದೇಶಿಗರು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಎಲ್ಲರ ಮನಗೆದ್ದಿದ್ದಾರೆ. ಭಾರತೀಯ ಸಂಪ್ರದಾಯದಂತೆ ಗೋಪೂಜೆ ಮಾಡಿ ಗೋಮಾತೆಗೆ ನಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಗೋವುಗಳಿಗೆ ಪೂಜೆ ಮಾಡಿ ಫಲತಾಂಬುಲ ಕೂಡ ನೀಡಿದರು. ಜೊತೆಗೆ ಭತ್ತದ ರಾಶಿ, ನೇಗಿಲು, ಎತ್ತಿನ ಗಾಡಿ ಪರಿಕರಗಳಿಗೂ ಪೂಜೆ ಸಲ್ಲಿಸಿದರು.

  • ಹಜ್ ಸಬ್ಸಿಡಿ ರದ್ದುಗೊಳಿಸಿದ ಬೆನ್ನಲ್ಲೇ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂ ಗೆ ಕಳಿಸಲು ಮುಂದಾದ ಬಿಜೆಪಿ

    ಹಜ್ ಸಬ್ಸಿಡಿ ರದ್ದುಗೊಳಿಸಿದ ಬೆನ್ನಲ್ಲೇ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂ ಗೆ ಕಳಿಸಲು ಮುಂದಾದ ಬಿಜೆಪಿ

    ನವದೆಹಲಿ: ಸುಮಾರು ಒಂದು ತಿಂಗಳ ಹಿಂದಷ್ಟೇ ಹಜ್ ಯಾತ್ರಿಗಳಿಗೆ ಸರ್ಕಾರದ ಸಬ್ಸಿಡಿಯನ್ನ ರದ್ದು ಮಾಡಿದ ಬಿಜೆಪಿ ಇದೀಗ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂಗೆ ಕಳಿಸೋದಾಗಿ ಹೇಳಿದೆ.

    ನಾಗಾಲ್ಯಾಂಡ್‍ನಲ್ಲಿ ಅಧಿಕಾರಕ್ಕೆ ಬಂದರೆ ಕ್ರೈಸ್ತರನ್ನ ಉಚಿತವಾಗಿ ಜೆರುಸಲೇಂಗೆ ಕಳಿಸುವುದಾಗಿ ಬಿಜೆಪಿ ಹೇಳಿದೆ. ಆದ್ರೆ ಎಲ್ಲಾ ಭಾರತೀಯ ಕ್ರೈಸ್ತರಿಗೆ ಈ ಆಫರ್ ನೀಡಿತ್ತಿದೆಯೋ ಅಥವಾ ಇದು ಈಶಾನ್ಯದಲ್ಲಿರುವ ಕ್ರೈಸ್ತರಿಗೋ ಅಥವಾ ನಾಗಾಲ್ಯಾಂಡಿನಲ್ಲಿರುವ ಕ್ರೈಸ್ತರಿಗೆ ಮಾತ್ರವೋ ಎಂಬುದು ಸ್ಪಷ್ಟವಾಗಿಲ್ಲ. ಮೂರು ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಹಾಗೂ ತ್ರಿಪುರಾದಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಬಿಜೆಪಿ ಈ ಆಫರ್ ನೀಡಿದೆ. ಮೇಘಾಲಯದಲ್ಲಿ 75% ಜನಸಂಖ್ಯೆ ಕ್ರೈಸ್ತರಾಗಿದ್ದಾರೆ. ಹಾಗೇ ನಾಗಾಲ್ಯಾಂಡ್‍ನಲ್ಲಿ 88% ಜನಸಂಖ್ಯೆ ಕ್ರೈಸ್ತರಾಗಿದ್ದಾರೆ.

    ವೀ ದಿ ನಾಗಾಸ್ ಎಂಬ ಸುದ್ದಿ ಮಾಧ್ಯಮವೊಂದು ಬಿಜೆಪಿಯ ಈ ಆಫರ್ ಬಗ್ಗೆ ಟ್ವಿಟ್ಟರ್‍ನಲ್ಲಿ ತಿಳಿಸಿದೆ. ಯುಎನ್‍ಐ ಸುದ್ದಿ ಸಂಸ್ಥೆಯ ವರದಿಯಲ್ಲಿ, ಉಚಿತ ಜೆಲುಸಲೇಂ ಪ್ರವಾಸ ನಾಗಾಲ್ಯಾಂಡಿನ ಕ್ರೈಸ್ತರಿಗೆ ಮಾತ್ರ ಎಂದು ಹೇಳಿದೆ.

    ಬಿಜೆಪಿಯ ಈ ಆಫರ್‍ಗೆ ಇದೀಗ ಟೀಕೆ ವ್ಯಕ್ತವಾಗಿದೆ. ಅದರಲ್ಲೂ ಹಜ್ ಸಬ್ಸಿಡಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಹಲವರು ಇದನ್ನ ಬೂಟಾಟಿಕೆ ಹಾಗೂ ಅವಕಾಶವಾದ ಎಂದು ಖಂಡಿಸಿದ್ದಾರೆ.

    ಬಿಜೆಪಿ ಕ್ರೈಸ್ತರನ್ನ ಉಚಿತ ಪ್ರವಾಸಕ್ಕೆ ಕಳಿಸಲು ಮುಂದಾಗಿದೆ. ನಾನು ಹೇಳಿದ್ದು ನಿಜ. ಚುನಾವಣೆಯ ಅಗತ್ಯಕ್ಕೆ ತಕ್ಕಂತೆ ಬಿಜೆಪಿ ಸಬ್ಸಿಡಿ ನೀಡುವುದು ಮುಂದುವರಿಸಿದೆ. ಇಂಡಿಯಾ ಫಸ್ರ್ಟ್ ಎಂಬ ಬಿಜೆಪಿ ಹೇಳಿಕೆಯ ಅರ್ಥ ಇದೆ ಎಂದು ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.

    ಕಳೆದ ತಿಂಗಳು ಹಜ್ ಸಬ್ಸಿಡಿ ರದ್ದು ಮಾಡಿದ್ದಾಗ ಹೇಳಿಕೆ ನೀಡಿದ್ದ ಕೆಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಘನತೆಯೊಂದಿಗೆ ಅಲ್ಪಸಂಖ್ಯಾತರ ಅಭಿವೃದ್ಧಿಯಾಗಬೇಕೆಂದು ನಂಬಿದೆಯೇ ಹೊರತು ಓಲೈಕೆಯಿಂದಲ್ಲ ಎಂದು ಹೇಳಿದ್ದರು.

    ಓಲೈಕೆಯಿಲ್ಲದ ಅಭಿವೃದ್ಧಿಯಲ್ಲಿ ನಮಗೆ ನಂಬಿಕೆ ಇದೆ. ನಮಗೆ ನಂಬಿಕೆ ಇರುವುದು ಘನತೆಯುಕ್ತ ಅಭಿವೃದ್ಧಿಯಲ್ಲಿ. ಹಜ್ ಸಬ್ಸಿಡಿ ಹಣವನ್ನ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ನಖ್ವಿ ಹೇಳಿದ್ದರು.

    ಕ್ರೈಸ್ತರನ್ನ ಜೆರುಸಲೇಂಗೆ ಕಳಿಸುವ ಬಿಜೆಪಿಯ ಆಫರ್‍ನಿಂದ ಇಸ್ರೇಲಿ ಮಾಧ್ಯಮಗಳು ಅಚ್ಚರಿಗೊಂಡಿದ್ದು, ಬಿಜೆಪಿಯ ಘೋಷಣೆಯನ್ನ ಪ್ರಚಾರದ ಆಶ್ವಾಸನೆಯಷ್ಟೇ ಎಂದು ಕರೆದಿದೆ. ಇದನ್ನೂ ಓದಿ: ಈ ವರ್ಷದಿಂದಲೇ ಮುಸ್ಲಿಮರಿಗೆ ನೀಡಲಾಗ್ತಿದ್ದ ಹಜ್ ಸಬ್ಸಿಡಿ ರದ್ದು: ಅಬ್ಬಾಸ್ ನಖ್ವಿ