Tag: ಕ್ರೀಡೆ

  • ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಜಕಾರ್ತ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಹಿಮಾ ದಾಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 14 ವರ್ಷಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆಮಾಡಿದ್ದಾರೆ. ಈ ಮೂಲಕ ಭಾರತದ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ಈ ಮೊದಲು 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಕೌರ್ ಈ ದಾಖಲೆಯನ್ನು ಮಾಡಿದ್ದರು. ಅರ್ಹತಾ ಸುತ್ತಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ರವರು ಅಂತಿಮ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜೊತೆ ಹಿಮಾ ದಾಸ್ ಓಡಿದ್ದು, ಸಲ್ವಾ ನಸರ್ ಸಹ ಸ್ಪರ್ಧೆ ಗೆಲ್ಲುವ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇದನ್ನೂ ಓದಿ: ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟ ಗ್ರಾಮೀಣ ಪ್ರತಿಭೆಗೆ ಬೇಕಿದೆ ಸಹಾಯ

    ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟ ಗ್ರಾಮೀಣ ಪ್ರತಿಭೆಗೆ ಬೇಕಿದೆ ಸಹಾಯ

    ಹುಬ್ಬಳ್ಳಿ: ಗ್ರಾಮದಲ್ಲಿ ಹಸುಗಳನ್ನು ಮೇಯಿಸಿ ಅದರಿಂದ ಬಂದಂತಹ ಹಣದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಯೊಬ್ಬನಿಗೆ ಮಲೇಷಿಯಾಕ್ಕೆ ತೆರಳಲು ಆರ್ಥಿಕ ನರೆವು ಬೇಡುತ್ತಿದ್ದಾನೆ.

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮದ ನಿವಾಸಿ 18 ವರ್ಷದ ಪುಂಡಲೀಕ್ ಗಾಯಕವಾಡ್ ಆರ್ಥಿಕ ನೆರವು ಬೇಡುತ್ತಿರುವ ವಿದ್ಯಾರ್ಥಿ. ಈತ ಗ್ರಾಮದಲ್ಲಿ ಹಸುಗಳನ್ನು ಮೇಯಿಸಿ ಅದರಿಂದ ಬಂದ ಹಣದಿಂದಲೇ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸದ್ಯ ಪ್ರಥಮ ವರ್ಷದ ಬಿಎ ಪತ್ರಿಕೋದ್ಯಮ ಓದುತ್ತಿದ್ದಾನೆ.

    ಉತ್ತಮವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ಪುಂಡಲಿಕ್ ಗಾಯಕ್‍ವಾಡ್‍ಗೆ ಕ್ರೀಡೆಯಲ್ಲಿ ಭಾರಿ ಆಸಕ್ತಿ. ಯಾವುದೇ ತರಬೇತಿ ಪಡೆಯದೇ ತನ್ನಷ್ಟಕ್ಕೆ ದೊಣ್ಣೆ ವರಸೆ(ಸಿಲಂಬ್)ನಲ್ಲಿ ಪರಿಣಿತನಾಗಿದ್ದಾನೆ. ಅಷ್ಟೇ ಅಲ್ಲ ಸೌಥ್ ಏಷಿಯನ್ ಸಿಲಂಬ್‍ಂ ಚಾಂಪಿಯನ್‍ಶಿಪ್‍ನಲ್ಲಿ ಎರಡನೇ ಸ್ಥಾನ ಪಡೆದು ಸಾಧನೆಗೈದಿದ್ದಾನೆ. ಸ್ವಂತ ಪರಿಶ್ರಮ, ಪ್ರತಿಭೆಯಿಂದ ಏಷಿಯನ್ ಚಾಂಪಿಯನ್ ಶಿಪ್‍ನಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾನೆ ಆದರೆ ಮಲೇಷಿಯಾಕ್ಕೆ ಹೋಗಿ ಸ್ಪರ್ಧೆ ಮಾಡಲು ಹಣವಿಲ್ಲದೆ ಅಸಾಧ್ಯವಾಗಿದ್ದು, ದಿಕ್ಕುಕಾಣದೆ ಪರಿತಪಿಸುತ್ತಿದ್ದಾನೆ.

    ಕಿತ್ತು ತಿನ್ನುವ ಬಡತನದ ನಡುವೆ ತಂದೆ ಕೂಲಿ ಕೆಲಸ ಮಾಡಿ ಹೆಂಡ್ತಿ ಮಕ್ಕಳನ್ನು ಸಾಕುತ್ತಿದ್ದು, ಮಗ ಸ್ವತಃ ದನ ಕಾಯುತ್ತ ಬಂದ ಹಣದಿಂದ ಓದುತ್ತಿದ್ದಾನೆ. ಈ ಮಧ್ಯೆ ಮಲೇಷಿಯಾಕ್ಕೆ ಹೋಗಿ ಸ್ಪರ್ಧಿಸಲು ಕಷ್ಟ ಪಡುತ್ತಿದ್ದಾನೆ. ಹೀಗಾಗಿ ದೇಶವನ್ನು ಪ್ರತಿನಿಧಿಸುವತ್ತ ಆಯ್ಕೆಯಾಗಿರುವ ಹುಬ್ಬಳ್ಳಿಯ ಗ್ರಾಮೀಣ ಪ್ರತಿಭೆಗೆ ನೆರವು ಅವಶ್ಯಕವಾಗಿದೆ.

    ಯಾರಾದ್ರೂ ದಾನಿಗಳು ಬಡ ಪ್ರತಿಭಾವಂತ ಕ್ರೀಡಾಪಟುವಿಗೆ ಸಹಾಯ ಮಾಡಿದ್ರೆ ಗ್ರಾಮೀಣ ಕ್ರೀಡೆ ಮತ್ತು ಗ್ರಾಮೀಣ ಪ್ರತಿಭೆಗೆ ಸಹಾಯ ಮಾಡಿದಂತಾಗುತ್ತದೆ. ಇವನ ಸಾಧನೆಗೆ ಸಹಕಾರ ಕಲ್ಪಿಸುವ ಪ್ರಯತ್ನ ನಮ್ಮದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CjuiupnpLqY

  • ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

    ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಮಹಿಳೆಯರ ಕುಸ್ತಿ ವಿಭಾಗದಲ್ಲಿ ವಿನಿಶ್ ಪೋಗಟ್‍ರವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

    ಏಷ್ಯನ್ ಗೇಮ್ಸ್ 2018ರ ಎರಡನೇ ದಿನವಾದ ಇಂದು ಸಹ ಭಾರತೀಯ ಸ್ಪರ್ಧಿಗಳು ಚಿನ್ನದ ಬೇಟೆ ಮುಂದುವರಿಸಿದ್ದು, 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ವಿನೀಶ್ ಪೋಗಟ್‍ರವರು ಚಿನ್ನ ಗೆದ್ದಿದ್ದಾರೆ.

    ಮಂಗಳವಾರ ನಡೆದ 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ ಅಂತಿಮ ಪಂದ್ಯದಲ್ಲಿ ವಿನೀಶ್ ಪೋಗಟ್‍ರವರು ಜಪಾನಿನ ಯೂಕಿ ಇರ್ಕಿ ಅವರನ್ನು 6-2 ಅಂತರಗಳಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ದೇಶಕ್ಕೆ ಎರಡನೇ ಚಿನ್ನ ತಂದು ಕೊಟ್ಟ ಹಾಗೂ ಏಷ್ಯನ್ ಗೇಮ್ಸ್ ನ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಪಾತ್ರಕ್ಕೆ ವಿನೀಶ್ ಪೋಗಟ್ ಪಾತ್ರರಾಗಿದ್ದಾರೆ. ಇದರೊಂದಿಗೆ ಭಾರತ ಕುಸ್ತಿ ವಿಭಾಗದಿಂದ 2 ಚಿನ್ನ, ಶೂಟಿಂಗ್ ವಿಭಾಗದಿಂದ 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಒಟ್ಟು 5 ಪದಕಗಳನ್ನು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

    ಏಷ್ಯನ್ ಗೇಮ್ಸ್ 2018: ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಪ್ರಥಮ ಬೆಳ್ಳಿ ಪದಕ ಲಭಿಸಿದ್ದು, 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸಾಧನೆ ಮಾಡುವ ಮೂಲಕ ದೀಪಕ್ ಕುಮಾರ್ ಬೆಳ್ಳಿಯ ಪದಕಕ್ಕೆ ಕೊರಳ್ಳೊಡಿದ್ದಾರೆ.

    ಇಂದು ನಡೆದ ಪುರುಷರ 10 ಮೀ ಏರ್ ರೈಫಲ್ ವಿಭಾಗದ ಅಂತಿಮ ಹಂತದ ಪಂದ್ಯಾವಳಿಯಲ್ಲಿ ಭಾರತದ ದೀಪಕ್ ಕುಮಾರ್ ರವರು 247.7 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆಯುವಲ್ಲಿ ಸಫಲರಾದರು.

    ಚೀನಾದ ಯಾಂಗ್ ಹಾರಾನ್ 249.1 ಅಂಕಗಳಿಸಿ ಚಿನ್ನದ ಪದಕಗಳಿಸಿದರೆ, ಚೀನಾ ತೈಪಿಯ ಶಾವೊಕುವಾನ್ 226.8 ಅಂಕಗಳಿಸಿ ಕಂಚಿನ ಪದಕಕ್ಕೆ ಭಾಜನರಾದರು. ಅಲ್ಲದೇ ಭಾರತದ ಮತ್ತೊಬ್ಬ ಆಟಗಾರರಾದ ರವಿಕುಮಾರ್ ರವರು 205.2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

    ಭಾನುವಾರ ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ ಪೂನಿಯಾ ಸ್ವರ್ಣದ ಪದಕಕ್ಕೆ ಮುತ್ತಿಟ್ಟಿದ್ದರು. ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

    ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಮರಣದ ಬಳಿಕ ಕ್ರೀಡಾ ಲೋಕದಲ್ಲಿ ದುಃಖದ ಅಲೆ ಕಂಡು ಬಂದಿದ್ದು, ಹಲವು ಸ್ಟಾರ್ ಕ್ರೀಡಾ ಪಡುಗಳು ಅಟಲ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ದೇಶದಕ್ಕೆ ತುಂಬಲಾರದ ನಷ್ಟವಾಗಿದ್ದು, ಇಡೀ ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಪ್ರೀತಿ ಪಾತ್ರರಿಗೆ ನನ್ನ ಸಂತ್ವಾನ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

    ಘನತೆ ಹಾಗೂ ಗಾಂಭೀರ್ಯದ ವ್ಯಕ್ತಿಯಾದ ಅಟಲ್ ಬಿಹಾರಿ ವಾಜಪೇಯಿಗೆ ಎಲ್ಲಕ್ಕಿಂತ ಭಾರತವೇ ಮೊದಲಾಗಿತ್ತು ಎಂದು ಕ್ರಿಕೆಟ್ ವಿಕ್ಷಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

    ಭಾರತದಲ್ಲಿ ಹೆಚ್ಚು ಜನ ಪ್ರೀತಿಸಲ್ಪಟ್ಟ ಪ್ರಧಾನಿ, ಕವಿಯನ್ನು ಕಳೆದುಕೊಂಡಿದ್ದೇವೆ. ಅವರ ಪ್ರೀತಿ ಪಾತ್ರರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತ್ವಾನ ಎಂದು ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಪೋಖ್ರಾನ್ ಸಂಭಾವ್ಯ ನಾಯಕರಾಗಿದ್ದ ಧೈರ್ಯಶಾಲಿ ಅಟಲ್‍ಜೀ, ಸಿದ್ಧಾಂತದ ರಾಜಕಾರಣಿ, ಸ್ಫೂರ್ತಿದಾಯಕ ಕವಿ, ಪಕ್ಷದ ಉದ್ದಕ್ಕೂ ಮೆಚ್ಚುಗೆ ಪಡೆದ ನಾಯಕರ ಮರಣ ಸರಿಪಡಿಸಲಾಗಷ್ಟು ನಷ್ಟ ತಂದಿದ್ದು, ಒಂದು ಯುಗಾಂತ್ಯವನ್ನು ಗುರುತಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

    ದೇಶದ ಕಂಡ ಅತ್ಯುತ್ತಮ ಪ್ರಧಾನಿ, ದಾರ್ಶನಿಕ, ಕವಿ, ರಾಜಕಾರಣಿ, ಕೋಟ್ಯಾಂತರ ವ್ಯಕ್ತಿಗಳ ಮನಗೆದ್ದ ವ್ಯಕ್ತಿ. ಗೌರವವನ್ನು ಬಿಟ್ಟು ಏನು ಸಂಪಾದಿಸದ ನಾಯಕರು ಅಟಲ್ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಬರೆದುಕೊಂಡಿದ್ದಾರೆ.

    ಇಂದು ಅಟಲ್ ಜೀ ಅವರ ಅಂತಯ ಸಂಸ್ಕಾರ ನಡೆಯಲಿದ್ದು, ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯುತ್ತಿದೆ. ಅಂತಿಮ ಯಾತ್ರೆ ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಾತಂತ್ರ್ಯ ದಿನದ ಶುಭಾಶಯ ಕೋರಿ ಟ್ರೋಲ್ ಮಾಡಿದವನಿಗೆ ಸಾನಿಯಾ ಖಡಕ್ ಉತ್ತರ!

    ಸ್ವಾತಂತ್ರ್ಯ ದಿನದ ಶುಭಾಶಯ ಕೋರಿ ಟ್ರೋಲ್ ಮಾಡಿದವನಿಗೆ ಸಾನಿಯಾ ಖಡಕ್ ಉತ್ತರ!

    ನವದೆಹಲಿ: ಮಂಗಳವಾರ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಟ್ವಿಟ್ಟರಿನಲ್ಲಿ ಟ್ರೋಲ್ ಮಾಡಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಆತನಿಗೆ ಖಡಕ್ ಉತ್ತರ ನೀಡಿದ್ದಾರೆ.

    ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸಾನಿಯಾ ಅವರಿಗೆ “ಇಂದು ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಅಲ್ವಾ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಸಾನಿಯಾ ಮಿರ್ಜಾ” ಎಂದು ಟ್ವೀಟ್ ಮಾಡಿದ್ದಾನೆ.

    https://twitter.com/imsamkhiladi/status/1029328951938711552

    ಈ ಟ್ವೀಟ್‍ಗೆ ಸಾನಿಯಾ ಪ್ರತಿಕ್ರಿಯಿಸಿ, “ಇಲ್ಲ. ನನ್ನ ಹಾಗೂ ನನ್ನ ದೇಶಕ್ಕೆ ನಾಳೆ ಸ್ವಾತಂತ್ರ್ಯ ದಿನಾಚರಣೆ ದಿನ. ನನ್ನ ಪತಿ ಹಾಗೂ ಅವರ ದೇಶಕ್ಕೆ ಇಂದು ಸ್ವಾತಂತ್ರ್ಯ ದಿನಾಚರಣೆ ಇರುವುದು. ನಿಮ್ಮ ಕನ್ಫ್ಯೂಶನ್ ಸರಿ ಹೋಗಿದೆ ಎಂದು ನಾನು ಭಾವಿಸುತ್ತೇನೆ. ಹೌದು, ನಿಮಗೆ ಸ್ವಾತಂತ್ರ್ಯ ದಿನ ಯಾವಾಗ ಎಂದು ಮರು ಪ್ರಶ್ನೆ ಮಾಡಿ ಸಾನಿಯಾ ಖಡಕ್ ಉತ್ತರ ನೀಡಿದ್ದಾರೆ.

    ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೊಯೇಬ್ ಮಲ್ಲಿಕ್ ರನ್ನು 2010ರ ಏಪ್ರಿಲ್ 12ರಂದು ಮದುವೆಯಾಗಿದ್ದರು. ಸದ್ಯ ಸಾನಿಯಾ ಹಾಗೂ ಶೊಯೇಬ್ ತಮ್ಮ ಮೊದಲನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರಿಕೆಟ್ ಅಭಿಮಾನಿ ಕರುಣಾನಿಧಿ: ಮೊಮ್ಮಕ್ಕಳ ಜೊತೆ ಆಡುತ್ತಿರುವ ವಿಡಿಯೋ ನೋಡಿ

    ಕ್ರಿಕೆಟ್ ಅಭಿಮಾನಿ ಕರುಣಾನಿಧಿ: ಮೊಮ್ಮಕ್ಕಳ ಜೊತೆ ಆಡುತ್ತಿರುವ ವಿಡಿಯೋ ನೋಡಿ

    ಬೆಂಗಳೂರು: ಚಿತ್ರ ಸಾಹಿತಿ, ಪತ್ರಕರ್ತ, ರಾಜಕಾರಣಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕ್ರಿಕೆಟ್ ಅಭಿಮಾನಿಯಾಗಿದ್ದರು. ಇನ್ನು ವಿಶೇಷ ಏನೆಂದರೆ ಭಾರತ ತಂಡದ ಮಹತ್ವದ ಪಂದ್ಯ ಇದ್ದಾಗ ಸಭೆಗಳನ್ನು ರದ್ದು ಮಾಡಿ ಕ್ರಿಕೆಟ್ ವೀಕ್ಷಿಸುತ್ತಿದ್ದರು.

    2011 ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ಮುಖ್ಯಮಂತ್ರಿಯಾಗಿದ್ದ ಅವರು 3 ಲಕ್ಷ ರೂ. ನಗದು ಬಹುಮಾನವನ್ನು ಪ್ರಕಟಿಸಿದ್ದರು. ಈ ವೇಳೆ ತಂಡದಲ್ಲಿದ್ದ ಏಕೈಕ ತಮಿಳಿಗ ಆರ್ ಅಶ್ವಿನ್ ಅವರಿಗೆ 1 ಕೋಟಿ ರೂ. ಬಹುಮಾನವನ್ನು ನೀಡಿದ್ದರು.

    2013ರಲ್ಲಿ ಕರುಣಾನಿಧಿ ಕಪಿಲ್ ದೇವ್ ಮತ್ತು ಧೋನಿ ನನ್ನ ಫೇವರೇಟ್ ಕ್ರಿಕೆಟ್ ಆಟಗಾರರು ಎಂದು ಟ್ವೀಟ್ ಮಾಡಿದ್ದರು. ಸಚಿನ್ ತೆಂಡೂಲ್ಕರ್ ಅವರ `ಫ್ಲೈಯಿಂಗ್ ಇಟ್ ಮೈ ವೇ’ ಆತ್ಮಚರಿತ್ರೆಯನ್ನು ಕರುಣಾನಿಧಿ ಓದಿದ್ದರು.

    ಕೆಲವು ಸಂದರ್ಭದಲ್ಲಿ ಸ್ಟೇಡಿಯಂ ಹೋಗಿ ಕ್ರಿಕೆಟ್ ವೀಕ್ಷಿಸುತ್ತಿದ್ದ ಕರುಣಾನಿಧಿ ಬಿಡುವಿನ ಸಮಯದಲ್ಲಿ ಮೊಮ್ಮಕ್ಕಳ ಜೊತೆ ಕ್ರಿಕೆಟ್ ಆಡುತ್ತಿದ್ದರು. ಈಗ ಮೊಮ್ಮಕಳ ಜೊತೆ ಕ್ರಿಕೆಟ್ ಆಡುತ್ತಿದ್ದ ವಿಡಿಯೋ ವೈರಲ್ ಆಗಿದೆ.

  • ರಷ್ಯಾದಲ್ಲಿ ಸಕ್ಕರೆ ನಾಡಿನ ಕೀರ್ತಿ ಬೆಳಗಿಸಲು ಸಜ್ಜಾಗಿರುವ ಮಂಡ್ಯದ ಬಾಲೆ

    ರಷ್ಯಾದಲ್ಲಿ ಸಕ್ಕರೆ ನಾಡಿನ ಕೀರ್ತಿ ಬೆಳಗಿಸಲು ಸಜ್ಜಾಗಿರುವ ಮಂಡ್ಯದ ಬಾಲೆ

    ಮಂಡ್ಯ: ಸಾಮಾನ್ಯ ರೈತನ ಮಗಳು ಕ್ರೀಡೆಯಲ್ಲಿ ಏನಾದ್ರು ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದು, ಇಂದು ಸತತ ಅಭ್ಯಾಸದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸಕ್ಕರೆನಾಡಿನ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾಳೆ.

    ಹಂಸವೇಣಿ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರತಿಭಾನ್ವಿತ ಟೆನ್ನಿಕೋಯಿಟ್ ಕ್ರೀಡಾಪಟು. ಗ್ರಾಮೀಣ ಕ್ರೀಡೆ ಎನಿಸಿರುವ ಟೆನ್ನಿಕೋಯಿಟ್ ಸ್ಪರ್ಧೆಯಲ್ಲಿ ಸತತ ಪರಿಶ್ರಮದ ಸಾಧನೆ ಮೂಲಕ ಇದೀಗ ಜು-31 ರಿಂದ ಆಗಸ್ಟ್ -06 ರ ವರೆಗೆ ರಷ್ಯಾದ ಬೆಲಾರಸ್ ನಲ್ಲಿ ನಡೆಯಲಿರುವ 4ನೇ ವಿಶ್ವ ಟೆನ್ನಿಕೋಯಿಟ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾಳೆ.

    ಈಗಾಗಲೇ ಹತ್ತು ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿ ಬಹುಮಾನ ಪಡೆದು ಹೆಸರು ಗಳಿಸಿರುವ ಹಂಸವೇಣಿ ಗ್ರಾಮೀಣ ಪ್ರತಿಭೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಮೂಲಕ ರಾಜ್ಯ ಮತ್ತು ತವರು ಜಿಲ್ಲೆ ಸಕ್ಕರೆ ನಾಡಿನ ಕೀರ್ತಿ ಬೆಳಗಿಸಲು ಸಜ್ಜಾಗಿದ್ದು, ವಿಶ್ವ ಚಾಂಪಿಯನ್ ಶಿಫ್ ನಲ್ಲಿ ಜಯಗಳಿಸುವ ವಿಶ್ವಾಸ ಹೊಂದಿದ್ದಾಳೆ.

    ಟೆನ್ನಿಕೋಯಿಟ್ ಕ್ರೀಡೆ ನಮ್ಮ ಹಳ್ಳಿಗಾಡಿನಲ್ಲಿ ರಿಂಗ್ ಎಸೆಯೋದು ಅಂತಾರೆ, ಈ ಆಟವನ್ನ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಹೆಚ್ಚಾಗಿ ಆಡುತ್ತಾರೆ. ಆದರೆ ಈ ಆಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬಹುದು ಎಂಬುದಕ್ಕೆ ಸಾಮಾನ್ಯ ರೈತ ಕುಟುಂಬದಿಂದ ಬೆಳೆದು ಟೆನ್ನಿಕೋಯಿಟ್ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ಹಂಸವೇಣಿಯೇ ಸಾಕ್ಷಿ. ಪ್ರತಿಭಾನ್ವಿತ ಹಂಸವೇಣಿಗೆ ಹಿಂದೆ ತಂದೆಯ ಪರಿಶ್ರಮವೂ ಇದೇ. ಸ್ವತಃ ಮೈಸೂರು ವಿ.ವಿಯ ಕಬ್ಬಡಿ ಕ್ರೀಡಾಪಟುವಾಗಿದ್ದ ಹಂಸವೇಣಿ ತಂದೆ ಕೂಡ ಮಗಳ ಸಾಧನೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಪೋಷಕರು ಹಾರೈಸಿದ್ದಾರೆ.

    ಈಗಾಗಲೇ ಸತತ ಪರಿಶ್ರಮದ ಮೂಲಕ ಸಾಕಷ್ಟು ಹೆಸರು ಮಾಡಿರುವ ಹಂಸವೇಣಿ, ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಬಳಿಕ ಗ್ರಾಮದಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಜ್ಜಾಗಿರುವ ಹಂಸವೇಣಿ ವಿದೇಶದಲ್ಲಿ ಪ್ರಶಸ್ತಿಗಳಿಸಿ ಭಾರತದ ಕೀರ್ತಿ ಪತಾಕೆ ಹಾರಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

  • ತನ್ನ ಆತ್ಮಚರಿತ್ರೆಯ ಸಿನಿಮಾದಲ್ಲಿ ಮಿ. ಪರ್ಫೆಕ್ಟ್ ನಟಿಸಬೇಕು: ದ್ರಾವಿಡ್

    ತನ್ನ ಆತ್ಮಚರಿತ್ರೆಯ ಸಿನಿಮಾದಲ್ಲಿ ಮಿ. ಪರ್ಫೆಕ್ಟ್ ನಟಿಸಬೇಕು: ದ್ರಾವಿಡ್

    ಮುಂಬೈ: ಮಾಜಿ ಕ್ರಿಕೆಟಿಗ ಆಲ್ ರೌಂಡರ್ ರಾಹುಲ್ ದ್ರಾವಿಡ್ ತಮ್ಮ ಆತ್ಮಚರಿತ್ರೆ ಸಿನಿಮಾದಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದರು.

    ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ರಾಹುಲ್ ಅವರನ್ನು ನಿಮ್ಮ ಆತ್ಮಚರಿತ್ರೆಯಲ್ಲಿ ಯಾವ ನಟ ನಟಿಸಬೇಕೆಂದು ಪ್ರಶ್ನೆಯನ್ನು ಕೇಳಿದ್ದರು. ಆಗ ರಾಹುಲ್ ನಗುತ್ತಾ ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಅವರ ಹೆಸರನ್ನು ಹೇಳಿದ್ದಾರೆ.

    ಇಎಸ್‍ಪಿಎನ್ ಕ್ರಿಕ್ ಇನ್ಫೋದಲ್ಲಿ ರಾಹುಲ್ ಅವರಿಗೆ 25 ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಅವರ ಬಯೋಪಿಕ್ ಚಿತ್ರದ ಬಗ್ಗೆಯೂ ಪ್ರಶ್ನಿಸಲಾಗಿತ್ತು. ಅಲ್ಲದೇ ತಮ್ಮ ಕ್ರಿಕೆಟ್ ಕೆರಿಯರ್ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು.

    ನೀವು ಇಷ್ಟು ವರ್ಷ ಆಡಿದ ಕ್ರಿಕೆಟ್ ಪಂದ್ಯದಲ್ಲಿ ಯಾವ ಬ್ಯಾಟ್ಸ್‍ಮೆನ್ ಜೊತೆ ಆಡಲು ಇಷ್ಟಪಡುತ್ತಿದ್ದೀರಿ ಎಂದು ಕೇಳಿದ್ದರು. ಆಗ ರಾಹುಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರನ್ನು ಹೇಳಿದ್ದರು.

    ಸದ್ಯ ಈಗಾಗಲೇ ಬಾಲಿವುಡ್‍ನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ, ಸಚಿನ್ ತೆಂಡೂಲ್ಕರ್ ಹಾಗೂ ಮೊಹಮದ್ ಅಜರುದ್ದೀನ್ ಅವರ ಆತ್ಮಚರಿತ್ರೆ ಸಿನಿಮಾ ಬಂದಿದೆ.

  • ಕಾಮನ್‍ವೆಲ್ತ್ ಗೇಮ್ಸ್ ಪದಕ ವಿಜೇತೆ ಅಶ್ವಿನಿ ಪೊನ್ನಪ್ಪಗೆ ಡಿಸಿಎಂ ಪರಮೇಶ್ವರ್ ಸನ್ಮಾನ

    ಕಾಮನ್‍ವೆಲ್ತ್ ಗೇಮ್ಸ್ ಪದಕ ವಿಜೇತೆ ಅಶ್ವಿನಿ ಪೊನ್ನಪ್ಪಗೆ ಡಿಸಿಎಂ ಪರಮೇಶ್ವರ್ ಸನ್ಮಾನ

    ಬೆಂಗಳೂರು: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಬ್ಯಾಡ್ಮಿಟನ್ ತಾರೆ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ಡಿಸಿಎಂ ಪರಮೇಶ್ವರ್ ಸನ್ಮಾನ ಮಾಡಿ ಗೌರವಿಸಿದ್ದಾರೆ.

    ವಿಧಾನಸೌಧದ ಕಚೇರಿಯಲ್ಲಿ ಅಶ್ವಿನಿ ಪೊನ್ನಪ್ಪಗೆ ಶಾಲು ಪೇಟ ತೊಡಿಸಿ ಸನ್ಮಾನಿಸಿದ್ದಾರೆ. ಅಶ್ವಿನಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದಕ್ಕೆ ಸರ್ಕಾರ 25 ಲಕ್ಷ ರೂ. ಹಾಗೂ 8 ಲಕ್ಷ ರೂ. ನೀಡಿ ಗೌರವಿಸಿದೆ. ಪರಮೇಶ್ವರ್ ಜೊತೆ ಕರ್ನಾಟಕ ಒಲಿಂಪಿಕ್ ಅಧ್ಯಕ್ಷ ಗೋವಿಂದ್ ರಾಜ್ ಕೂಡ ಭಾಗಿಯಾಗಿದ್ದರು.

    ಅಶ್ವಿನಿ ಪೊನ್ನಪ್ಪ ಕಾಮನ್‍ವೆಲ್ತ್ ಗೇಮ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಸರ್ಕಾರ ಅವರಿಗೆ ಒಟ್ಟು 33 ಲಕ್ಷ ರೂ. ಪುರಸ್ಕಾರ ನೀಡಿದೆ. ಅವರ ಸಾಧನೆ ಇನ್ನಷ್ಟು ಬೆಳೆಯಲಿ. ರಾಜ್ಯಕ್ಕೆ ತಂದಿರುವ ಗೌರವಕ್ಕೆ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಚಿನ್ನದ ಪದಕ ಪಡೆಯಲಿ ಎಂದು ಪರಮೇಶ್ವರ್ ಹೇಳಿದರು.

    ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವರಿಗೆ ಗೆದ್ದವರಿಗೆ 5 ಕೋಟಿ ರೂ. ಪುರಸ್ಕಾರ ಘೋಷಣೆ ಮಾಡಲಾಗಿದೆ. ಬೆಳ್ಳಿಗೆ 3 ಕೋಟಿ ರೂ. ಹಾಗೂ ಕಂಚಿಗೆ 2 ಕೋಟಿ ರೂ. ನೀಡಲು ಸರ್ಕಾರ ನಿರ್ಧಾರ ಮಾಡಲಾಗಿದೆ. ಅಶ್ವಿನಿ ಪೊನ್ನಪ್ಪ ಒಲಂಪಿಕ್ಸ್ ನಲ್ಲಿ ಪದಕ ಪಡೆಯಲಿ ಎಂದು ಡಿಸಿಎಂ ಪರಮೇಶ್ವರ್ ಹಾರೈಸಿದರು.