Tag: ಕ್ಯಾಲಿಫೋರ್ನಿಯಾ

  • ರೋಚಕ ಸ್ಟೋರಿಗಳನ್ನೇ ವರದಿ ಮಾಡ್ತಿದ್ದ ರಿಪೋರ್ಟರ್ ಅಪಘಾತದಲ್ಲಿ ಸಾವು

    ರೋಚಕ ಸ್ಟೋರಿಗಳನ್ನೇ ವರದಿ ಮಾಡ್ತಿದ್ದ ರಿಪೋರ್ಟರ್ ಅಪಘಾತದಲ್ಲಿ ಸಾವು

    – ಭಾರತ ಮೂಲದ ವರದಿಗಾರ್ತಿ

    ಆಲ್ಬನಿ: ಅಮೆರಿಕದ ಪ್ರಖ್ಯಾತ ಟಿವಿಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಯುವತಿ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ.

    ನೀನಾ ಕಪೂರ್ (26) ಮೃತ ವರದಿಗಾರ್ತಿ. ನೀನಾ ಕಪೂರ್ ಅಮೆರಿಕದ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಾಡಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನೀನಾ ಕಪೂರ್ ಶೇರಿಂಗ್ ಆಧಾರದ ಮೇರೆಗೆ ಸ್ಕೂಟರ್ ಅನ್ನು ಬಾಡಿಗೆ ತೆಗೆದುಕೊಂಡಿದ್ದರು. ಬೇರೊಬ್ಬ ವ್ಯಕ್ತಿ ಸ್ಕೂಟರ್ ಓಡಿಸುತ್ತಿದ್ದನು. ಸ್ಕೂಟರ್ ಹಿಂದೆ ನೀನಾ ಕಪೂರ್ ಕುಳಿತಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿದೆ. ತಕ್ಷಣ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಕೂಟರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಪ್ರಾಂತ್ಯದ ಬಳಿ ಅಪಘಾತ ಸಂಭವಿಸಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ತೀವ್ರವಾಗಿ ಪೆಟ್ಟಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

    ಪೆನ್ಸಿಲ್ವೇನಿಯಾದ ನ್ಯೂಟೌನ್ ನಿವಾಸಿಯಾಗಿದ್ದ ನೀನಾ ಕಪೂರ್ ತಾಯಿ ಮೋನಿಕಾ, ತಂದೆ ಅನುಪ್ ಮತ್ತು ಸಹೋದರ ಅಜಯ್ ವಾಸಿಸುತ್ತಿದ್ದರು. ವರದಿಗಾರ್ತಿ ನೀನಾ ಕಪೂರ್ 2019 ಜೂನ್‍ನಲ್ಲಿ ಸಿಬಿಎಸ್ ಚಾನೆಲ್‍ಗೆ ಸೇರಿಕೊಂಡಿದ್ದರು. ಅದಕ್ಕೂ ಮೊದಲು ಚಾನೆಲ್ ನ್ಯೂಸ್ 12ರಲ್ಲಿ ಕೆಲಸ ಮಾಡುತ್ತಿದ್ದರು.

    ನೀನಾ ಕಪೂರ್ ಸದಾ ನಗುತ್ತಲೇ ಸ್ಟೋರಿಗಳನ್ನು ವರದಿ ಮಾಡುತ್ತಿದ್ದಳು. ಎಲ್ಲರೊಟ್ಟಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದಳು. ನೀನಾ ಕಪೂರ್ ಹೆಚ್ಚಾಗಿ ರೋಚಕ ಸ್ಟೋರಿಗಳನ್ನು ಮಾಡುತ್ತಿದ್ದಳು. ಆದರೆ ಅವಳ ಅಗಲಿಕೆಯಿಂದ ನಮಗೆ ತುಂಬಾ ನೋವಾಗಿದೆ ಎಂದು ಸಹೋದ್ಯೋಗಿಗಳು ನೀನಾ ಬಗ್ಗೆ ಹೇಳಿದ್ದಾರೆ.

  • ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನ- ಇದರಲ್ಲಿದೆ 22 ಬಗೆಯ ತರಕಾರಿ ಬೆಳೆ

    ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನ- ಇದರಲ್ಲಿದೆ 22 ಬಗೆಯ ತರಕಾರಿ ಬೆಳೆ

    ಕ್ಯಾಲಿಫೋರ್ನಿಯಾ: ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನವನ್ನು ಪರಿಚಯಿಸಲಾಗಿದ್ದು, ಇದರಲ್ಲಿದೆ 22 ಬಗೆಯ ತರಕಾರಿ ಬೆಳೆಯಲಾಗಿದೆ.

    ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಸಿಯಕ್ ಗೇಬ್ರಿಯಲ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸಿದ್ದು, ಅದನ್ನು ಬಟ್ಟೆಯಂತೆ ಧರಿಸಬಹುದಾಗಿದೆ. ಇದನ್ನು ವಿಶ್ವದ ಮೊದಲ ಬಟ್ಟೆಯಂತೆ ಧರಿಸುವ ಮೊದಲ ಉದ್ಯಾನ ಎಂದು ಕರೆಯಲಾಗುತ್ತಿದೆ.

    ನಿಮ್ಮ ಆಹಾರವನ್ನು ನೀವೇ ಬೆಳೆಸಿಕೊಳ್ಳಿ ಎಂದು ಪ್ರಾಧ್ಯಾಪಕ, ಉದ್ಯಾನದ ವಿನ್ಯಾಸಕಾರ ಗೇಬ್ರಿಯಲ್ ಹೇಳುತ್ತಾರೆ. ಈ ಉದ್ಯಾನದಲ್ಲಿ ಗೇಬ್ರಿಯಲ್ ಅವರು ಎಲೆಕೋಸು, ಕ್ಯಾರೆಟ್, ಸ್ಟ್ರಾಬೆರಿ, ಕಡಲೆಕಾಯಿ ಸೇರಿದಂತೆ 22ಕ್ಕೂ ಹೆಚ್ಚು ಬಗೆಯ ತರಕಾರಿಗಳನ್ನು ಬೆಳೆದಿದ್ದು, ಅದನ್ನು ಬಟ್ಟೆಯಾಗಿ ಧರಿಸುತ್ತಾರೆ. ಈ ಎಲ್ಲ ಸಸಿಗಳು ಒಟ್ಟಿಗೆ ಬೆಳೆದಾಗ, ಅವು ಬಟ್ಟೆಯನ್ನು ವರ್ಣಮಯವಾಗಿಸುತ್ತವೆ. ಮತ್ತೊಂದು ವಿಶೇಷವೆಂದರೆ ಗೇಬ್ರಿಯಲ್ ಅವರು ಈ ಸಸ್ಯಗಳನ್ನು ತಮ್ಮ ಮೂತ್ರದಿಂದ ನೀರಾವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

    ಗೇಬ್ರಿಯಲ್ ಅವರ ಈ ಯೋಜನೆಯು ಫ್ರೆಂಚ್ ಸಸ್ಯವಿಜ್ಞಾನಿ ಪ್ಯಾಟ್ರಿಕ್ ಬ್ಲಾಂಕ್ ಅವರ ಸಸ್ಯೋದ್ಯಾನಗಳಿಂದ ಬಲವಾಗಿ ಪ್ರಭಾವಿತವಾಗಿದೆ ಎಂದು ಹೇಳಲಾಗುತ್ತಿದೆ. ಬ್ಲಾಂಕ್ ಅವರು ಸ್ಥಳಾವಕಾಶದ ಕೊರತೆಯಿಂದ ಲಂಬ ಉದ್ಯಾನವನ್ನು ಬೆಳೆಸಿದ್ದರು.

    ಹೇಗಿದೆ ಉದ್ಯಾನ?:
    ಗೇಬ್ರಿಯಲ್ ಅವರು ಬಟ್ಟೆಯ ಪದರವನ್ನು ತಯಾರಿಸಿ, ಅದರ ಮೇಲೆ ಸಸ್ಯಗಳ ಬೀಜಗಳು ಅಂಟಿಸಿದ್ದಾರೆ. ಒದ್ದೆಯಾದ ಬಟ್ಟೆಯ ಪದರದಲ್ಲಿರುವ ಬೀಜಗಳು ಎರಡು ವಾರಗಳ ಬಳಿಕ ಮೊಳಕೆಯೊಡೆಯುತ್ತವೆ. ನಂತರ ಬೆಳೆಯಲು ಆರಂಭಿಸುತ್ತದೆ. ಜೊತೆಗೆ ಮೂತ್ರದಿಂದ ಉಂಟಾಗುವ ತೇವಾಂಶವು ಸಸ್ಯಗಳ ಬೆಳೆವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಬೆಳೆದು ಒಂದು ಹಂತಕ್ಕೆ ಬಂದ ಸಸ್ಯಗಳು ಹಣ್ಣು, ತರಕಾರಿ ಕೊಡುತ್ತವೆ.

  • ಕಿ.ಮೀಗಟ್ಟಲೇ ರಾಶಿರಾಶಿ ಮೀನುಗಳು – ಸಮುದ್ರದಡಕ್ಕೆ ಅಪ್ಪಳಿಸಿತು ‘ಪೆನ್ನಿಸ್ ಫಿಶ್’

    ಕಿ.ಮೀಗಟ್ಟಲೇ ರಾಶಿರಾಶಿ ಮೀನುಗಳು – ಸಮುದ್ರದಡಕ್ಕೆ ಅಪ್ಪಳಿಸಿತು ‘ಪೆನ್ನಿಸ್ ಫಿಶ್’

    – ನೆಲದಡಿಯಿಂದ ಭೂಮಿಗೆ ಬಂತು ‘ಪೆನ್ನಿಸ್ ಫಿಶ್’
    – ಚಂಡಮಾರುತದ ಪ್ರಭಾವದಿಂದ ಭೂಮಿಯಲ್ಲಿ ಪ್ರತ್ಯಕ್ಷ

    ಕ್ಯಾಲಿಫೋರ್ನಿಯಾ: ನೋಡಲು ವಿಶೇಷವಾಗಿ ಕಾಣುವ ‘ಪೆನ್ನಿಸ್ ಫಿಶ್’ ಅಮೆರಿಕದ ಕ್ಯಾಲಿಫೋರ್ನಿಯಾದ ಡ್ರೇಕ್ಸ್ ಬೀಚ್‍ಗೆ ಸಾವಿರಾರು ಸಂಖ್ಯೆಯಲ್ಲಿ ಅಪ್ಪಳಿಸಿದ್ದು, ಅಲ್ಲಿನ ಜನರನ್ನು ಅಚ್ಚರಿಗೊಳಪಡಿಸಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಇವುಗಳನ್ನು ನೋಡಿದ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಮೀನುಗಳಂತೆ ಕಂಡರೂ ಇವು ಮೀನುಗಳಲ್ಲ. ಕೊಬ್ಬುಗಳನ್ನು ತುಂಬಿದ ದೇಹವನ್ನು ಹೊಂದಿದ ಇವುಗಳನ್ನು ‘ಇನ್‍ಕೀಪರ್’ ಹುಳು ಎಂದು ಕರೆಯಲಾಗುತ್ತದೆ. ಈ ಹುಳು ನೋಡಲು ಪುರುಷನ ಮರ್ಮಾಂಗದ ರೀತಿ ಇರುವುದರಿಂದ ಇವುಗಳಿಗೆ ‘ಪೆನ್ನಿಸ್ ಫಿಶ್’ ಎಂಬ ಹೆಸರು ಬಂದಿದೆ.

    ಈ ಜೀವಿಗಳು ಸಮುದ್ರದ ಆಳದ ಕೆಸರು, ಮರಳಿನಲ್ಲಿ ಜೀವಿಸುತ್ತದೆ. ಆದ್ದರಿಂದ ಮನುಷ್ಯನ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸುಮಾರು 25 ವರ್ಷಗಳ ಕಾಲ ಸಮುದ್ರದ ಅಡಿಯಲ್ಲಿ ಈ ಜೀವಿಗಳು ವಾಸಿಸುತ್ತವೆ. ಇದನ್ನು ಓದಿ: ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು 

    ಡಿ.6 ರಂದು ಕಾಣಿಸಿಕೊಂಡ ಚಂಡಮಾರುತ ಈ ಹುಳಗಳನ್ನು ಸಮುದ್ರದ ಆಳದಿಂದ ದಡಕ್ಕೆ ತಂದು ಎಸೆದಿದೆ. ಮಣ್ಣಿನ ಅಡಿಯ 1 ಇಂಚಿನ ಆಳದಲ್ಲಿ ಇವು ವಾಸಿಸುತ್ತವೆ. ಆ ವೇಳೆ ‘ಯು’ ಅಕ್ಷರದ ರೀತಿಯಲ್ಲಿ ಕಂಡು ಬರುವುದರಿಂದ ವಿಜ್ಞಾನಿಗಳು ಇವುಗಳನ್ನು ‘ಇನ್‍ಕೀಪರ್’ ಎಂದು ಕರೆದಿದ್ದಾರೆ. ಇವುಗಳಿಗೆ ಚಾಕು ಆಕಾರದ ಅಂಗವಿದ್ದು, ನೀರಲ್ಲಿ ಈಜಲು ಹಾಗೂ ಆಹಾರ ಸೇವಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳುತ್ತದೆ.

    ಸುಮಾರು 12 ಇಂಚಿನಷ್ಟು ಉದ್ದ ಬೆಳೆಯುವ ಈ ಹುಳಗಳು ಸಮುದ್ರದ ಆಳದಲ್ಲಿ ದೊರೆಯುವ ಬ್ಯಾಕ್ಟೀರಿಯಾ ಅಥವಾ ಸಣ್ಣ ಸಣ್ಣ ಜೀವಿಗಳನ್ನು ಸೇವಿಸುತ್ತವೆ. ಲೋಳೆಯಂತಹ ಪರದೆಯನ್ನು ಬಳಸಿ ತಮಗೇ ಬೇಕಾದ ಆಹಾರವನ್ನು ಸೆರೆಹಿಡಿಯುತ್ತವೆ. ಈ ಜೀವಿಗಳಿಗೆ 300 ದಶಲಕ್ಷ ವರ್ಷಗಳ ಇತಿಹಾಸವಿದೆ ಎಂದು ವಿಜ್ಞಾನಿಗಳು ಪುರಾವೆಗಳನ್ನು ನೀಡಿದ್ದಾರೆ.

    ಇವುಗಳ ಗಾತ್ರ ಹಾಗೂ ಆಕಾರ, ಮೃದವಾದ ದೇಹದ ಕಾರಣದಿಂದ ಸಾಕಷ್ಟು ತೊಂದರೆಗಳನ್ನು ಹೊಂದಿದ್ದು, ವಿಜ್ಞಾನಿಗಳು ಇವುಗಳನ್ನು ನಿಷ್ಕ್ರಿಯ ಜೀವಿಗಳು ಎಂದು ಕರೆಯುತ್ತಾರೆ. ಅಮೆರಿಕ, ಕೊರಿಯಾ, ಜಪಾನ್, ಚೀನಾದ ಸಮುದ್ರ ಭಾಗಗಳಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಹುಳಗಳನ್ನು ತಿನ್ನಲಾಗುತ್ತದೆ. ಸೇವಿಸಿದವರು ಉಪ್ಪು, ಸಿಹಿ ಎರಡು ರೀತಿಯ ಅನುಭವ ಆಗಿದೆ ಎಂದು ತಿಳಿಸಿದ್ದಾರೆ.

  • 300ಕ್ಕೂ ಹೆಚ್ಚು ಇಲಿಗಳೊಂದಿಗೆ ಮಹಿಳೆ ವ್ಯಾನ್‍ನಲ್ಲೇ ವಾಸ

    300ಕ್ಕೂ ಹೆಚ್ಚು ಇಲಿಗಳೊಂದಿಗೆ ಮಹಿಳೆ ವ್ಯಾನ್‍ನಲ್ಲೇ ವಾಸ

    ವಾಷಿಂಗ್ಟನ್: ಒಂದು ಇಲಿ ಮನೆಯಲ್ಲಿದ್ದರೇನೆ ಪರದಾಡುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ಸುಮಾರು 300ಕ್ಕೂ ಹೆಚ್ಚು ಇಲಿಗಳ ಜೊತೆ ವ್ಯಾನ್‍ನಲ್ಲಿ ವಾಸಿಸುತ್ತಿದ್ದಾರೆ.

    ಈ ಮಹಿಳೆಯ ಹೆಸರು ಕಾರ್ಲಾ ಇವರು 300ಕ್ಕೂ ಹೆಚ್ಚು ಇಲಿಗಳನ್ನು ಸಾಕಿದ್ದಾರೆ. ಮಾತ್ರವಲ್ಲ ಈ ಇಲಿಗಳೊಟ್ಟಿಗೆ ಮಹಿಳೆಯು ಸಹ ವಾಸಿಸುತ್ತಿದ್ದಾಳೆ ಎಂಬುದು ಅಚ್ಚರಿಯ ವಿಷಯವಾಗಿದೆ. ಇಲಿಗಳೊಂದಿಗೆ ವಾಸಿಸುವುದು ಕುಟುಂಬದೊಂದಿಗೆ ವಾಸಿಸುವಷ್ಟೇ ಸಾಮಾನ್ಯ ಎಂದು ಈ ಮಹಿಳೆ ಭಾವಿಸಿದ್ದಾರೆ.

    ಇವರು ಕ್ಯಾಲಿಫೋರ್ನಿಯಾದ ಬೀಚ್ ಬಳಿ ಇರುವ ಸ್ಯಾನ್ ಡಿಯಾಗೋದ ಸಮುದಾಯದಲ್ಲಿ ವಾಸಿಸುತ್ತಿದ್ದು, ಅಂಗಡಿಯ ಪಕ್ಕದಲ್ಲೇ ನಿಲ್ಲಿಸಿರುವ ಮಿನಿ ವ್ಯಾನ್‍ನೊಳಗೆ ಸುಮಾರು 300 ಸಾಕು ಇಲಿಗಳೊಂದಿಗೆ ವಾಸಿಸುತ್ತಿದ್ದಾರೆ. ಇದಕ್ಕೆ ‘ರೊಡೆಂಟ್ ವಿಲ್ಲೆ’ ಎಂದು ಹೆಸರಿಟ್ಟಿದ್ದಾರೆ.

    ವರದಿಗಳ ಪ್ರಕಾರ, ರೊಡೆಂಟ್ ವಿಲ್ಲೆ ಕೇವಲ ಎರಡು ಇಲಿಗಳಿಂದ ಪ್ರಾರಂಭವಾಯಿತು. ಆದರೆ ಸ್ವಲ್ಪ ಸಮಯದಲ್ಲೇ 300ಕ್ಕೂ ಹೆಚ್ಚು ಇಲಿಗಳು ಸೇರಿಕೊಂಡವು. ಈ 300 ಇಲಿಗಳ ಪೈಕಿ 140 ಇಲಿಗಳನ್ನು ಈ ಮಹಿಳೆ ದತ್ತು ಪಡೆಯಲು ಮುಂದಾಗಿದ್ದಾರೆ.

    ಅಕ್ಟೋಬರ್ 8ರಂದು ಸ್ಯಾನ್ ಡಿಯಾಗೋ ಹ್ಯೂಮನ್ ಸೊಸೈಟಿಗೆ ಕರೆ ಮಾಡಿ ಕರ್ಲಾ ಈ ಕುರಿತು ಮಾಹಿತಿ ನೀಡಿದ್ದಾರೆ. ಲೆಕ್ಕವಿಲ್ಲದಷ್ಟು ಇಲಿಗಳು ನನ್ನ ಆರೈಕೆಯಲ್ಲಿವೆ. ಹೀಗಾಗಿ ನಿಮ್ಮ ಸಹಾಯ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

    ಕರೆಯ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವ್ಯಾನ್‍ನಲ್ಲಿರುವ ಇಲಿಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಭಾರೀ ಪ್ರಮಾಣದ ಇಲಿಗಳಿವೆ. ಇವು ಕೇವಲ ವ್ಯಾನ್‍ನಲ್ಲಿ ವಾಸಿಸುತ್ತಿಲ್ಲ, ಹೊರಗಡೆಯೂ ಇವೆ. ಆದರೆ ವ್ಯಾನ್ ಒಳಗೆ ಬರುವುದು, ಹೋಗುವುದನ್ನು ಮಾಡುತ್ತಿವೆ. ಅಷ್ಟು ಪ್ರಮಾಣದ ಇಲಿಗಳನ್ನು ಕಂಡು ನಮಗೆ ಆಶ್ಚರ್ಯವಾಗಿದೆ ಎಂದು ಹ್ಯೂಮನ್ ಸೊಸೈಟಿಯ ಕಾನೂನು ಜಾರಿ ವಿಭಾಗದ ಕ್ಯಾಪ್ಟನ್ ಡೇನಿ ಕುಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅಧಿಕಾರಿಗಳು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ಇಲಿಗಳು ವ್ಯಾನ್ ಸೀಟ್, ಮೇಲ್ಭಾಗ ಹಾಗೂ ಡೋರ್ ಬಳಿ ಓಡಾಡುತ್ತಿವೆ. ಅಲ್ಲದೆ ವ್ಯಾನ್‍ನಲ್ಲಿಯೇ ಬಿಲಗಳನ್ನು ಮಾಡಿಕೊಂಡು ವಾಸಿಸುತ್ತಿವೆ.

    ಪ್ರಾಣಿಗಳನ್ನು ಕ್ರೂರವಾಗಿ ನೋಡಿಕೊಳ್ಳುತ್ತಿಲ್ಲ, ಅಲ್ಲದೆ ಕುರ್ಲಾ ಇಲಿಗಳನ್ನು ಸಂಗ್ರಹಿಸುತ್ತಿಲ್ಲ ಎಂದು ಕುಕ್ ತಿಳಿಸಿದ್ದಾರೆ. ಇದು ಕ್ರೂರತೆಯ ಪ್ರಕರಣವಲ್ಲ, ಆದರೆ ಮಾಲೀಕರು ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಕುರ್ಲಾ ಇಲಿಗಳಿಗೆ ಉತ್ತಮವಾಗಿಯೇ ಆಹಾರ, ನೀರು ನೀಡುತ್ತಿದ್ದಾರೆ ಎಂದು ಕುಕ್ ಮಾಹಿತಿ ನೀಡಿದ್ದಾರೆ.

    ವ್ಯಾನ್ ತಪಾಸಣೆ ನಂತರ, ಕುರ್ಲಾ ಅವರ ಮನವಿ ಮೇರೆಗೆ ಇಲಿಗಳನ್ನು ಬೇರೆ ಕಡೆ ಓಡಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಸ್ಯಾನ್ ಡಿಯಾಗೋ ಹ್ಯೂಮ್ಯಾನ್ ಸೊಸೈಟಿಯ ಅಧಿಕಾರಿಗಳು ವಾಹನದ ಪ್ರತಿ ಮೂಲೆಯಲ್ಲಿದ್ದ ಇಲಿಗಳನ್ನು ಸಂಗ್ರಹಿಸಲು ಹಲವಾರು ದಿನಗಳ ಕಾಲ ಪರದಾಡಿದ್ದಾರೆ. ಅಧಿಕಾರಿಗಳು ಒಟ್ಟು 320 ಇಲಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಅವುಗಳಲ್ಲಿ ಹೆಚ್ಚಿನವು ಚಿಕ್ಕ ಇಲಿಗಳಾಗಿವೆ ಎಂದು ತಿಳಿದು ಬಂದಿದೆ.

  • ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನ ಕೊಲೆಗೈದ ಟೆಕ್ಕಿ

    ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನ ಕೊಲೆಗೈದ ಟೆಕ್ಕಿ

    – ಕಾರಿನಲ್ಲಿ ಶವ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದ ಆರೋಪಿ

    ವಾಷಿಂಗ್ಟನ್: ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನು ಕೊಲೆಗೈದ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶಂಕರ್ ನಾಗಪ್ಪ ಹುನಗೋಡ (53) ಬಂಧಿತ ಐಟಿ ಉದ್ಯೋಗಿ. ಶಂಕರ್ ಕ್ಯಾಲಿಫೋರ್ನಿಯಾದ ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ. ಆರೋಪಿಯು ಸೋಮವಾರ ಕೊಲೆಗೈದ ವ್ಯಕ್ತಿಯ ಮೃತದೇಹವನ್ನು ಕಾರಿನಲ್ಲಿ ಇಟ್ಟುಕೊಂಡು 350 ಕಿ.ಮೀ. ದೂರದ ಮೌಂಟ್ ಶಸ್ತ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: ಹೆಣ್ಣು ಮಕ್ಕಳ ಮೇಲಿನ ದ್ವೇಷಕ್ಕೆ ಕುಟುಂಬವೇ ಬಲಿ – ತಪ್ಪೊಪ್ಪಿಕೊಂಡ ಕೇರಳ ಸೈನೈಡ್ ಕಿಲ್ಲರ್

    ನಾನು ಒಟ್ಟು ನಾಲ್ವರನ್ನು ಕೊಲೆ ಮಾಡಿದ್ದೇನೆ. ಈ ಪೈಕಿ ಓರ್ವನ ಶವವನ್ನು ಪೊಲೀಸ್ ಠಾಣೆಗೆ ತಂದಿದ್ದೇನೆ. ಮಿಕ್ಕ ಮೂವರ ಮೃತದೇಹಗಳು ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ನಲ್ಲಿವೆ ಎಂದು ಶಂಕರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಆರೋಪಿಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಪ್ಲೇಸರ್ ಕೌಂಟಿಯ ಅಪಾರ್ಟ್‍ಮೆಂಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆದಿದ್ದರು. ಈ ವೇಳೆ ಇಬ್ಬರು ವಯಸ್ಕರ ಹಾಗೂ ಮಗುವಿನ ಮೃತ ದೇಹ ಪತ್ತೆಯಾಗಿವೆ. ಆರೋಪಿ ಶಂಕರ್ ಅಕ್ಟೋಬರ್ 7ರಂದು ಇಬ್ಬರನ್ನು ಕೊಲೆ ಮಾಡಿದ್ದ. ಮರುದಿನ ಅಂದ್ರೆ ಅಕ್ಟೋಬರ್ 9ರಂದು ಅದೇ ಅಪಾರ್ಟ್‍ಮೆಂಟ್‍ನಲ್ಲಿ ಮತ್ತೊಬ್ಬನನ್ನು ಹತ್ಯೆ ಮಾಡಿದ್ದ. ಕೊನೆಯದಾಗಿ ಅಕ್ಟೋಬರ್ 13ರಂದು ಓರ್ವನನ್ನು ಕೊಲೆ ಮಾಡಿದ್ದ. ಬಳಿಕ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಮೌಂಟ್ ಶಸ್ತ ಠಾಣೆ ಪೊಲೀಸರು ಶಂಕರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಶಂಕರ್ ಯಾಕೆ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಭಾರತದಲ್ಲಿರುವ ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದು, ಶವಗಳನ್ನು ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.

  • ಆ್ಯಪಲ್ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಸಾಬಿಹ್ ಖಾನ್ ನೇಮಕ

    ಆ್ಯಪಲ್ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಸಾಬಿಹ್ ಖಾನ್ ನೇಮಕ

    ಕ್ಯಾಲಿಫೋರ್ನಿಯಾ: ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಯಲ್ಲಿ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಸೇರುದಂತೆ ಜಗತ್ತಿನ ದೊಡ್ಡ ದೊಡ್ಡ ಎಂಎನ್‍ಸಿಗಳಲ್ಲಿ ಭಾರತೀಯರು ಮಿಂಚುತ್ತಿದ್ದಾರೆ. ಈಗ ಪ್ರತಿಷ್ಠಿತ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಸಾಬೀಹ್ ಖಾನ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.

    ಸ್ಮಾರ್ಟ್‍ಫೋನ್, ಪರ್ಸನ್ ಕಂಪ್ಯೂಟರ್ ಕ್ಷೇತ್ರದ ದೈತ್ಯ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷರಾಗಿ ಸಾಬೀಹ್ ಖಾನ್ ಅವರು ನೇಮಕವಾಗಿರುವುದು ಭಾರತದ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿದೆ.

    ಮೂಲತಃ ಉತ್ತರ ಪ್ರದೇಶದ ರಾಂಪುರದವರಾದ ಸಾಬಿಹ್ ಖಾನ್ 1995ರಿಂದ ಆ್ಯಪಲ್ ಕಂಪನಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ವರ್ಷಗಳಿಂದ ಕಂಪನಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ, ಈಗ ಆಪರೇಷನ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿ ಸಾಬಿಹ್ ಖಾನ್ ನೇಮಕವಾಗಿರುವುದಕ್ಕೆ ಆ್ಯಪಲ್ ಸಿಇಓ ಟಿಮ್ ಕುಕ್ ಬೇಷ್ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಸಾಬಿಹ್ ಖಾನ್ ಪರಿಶ್ರಮ ಅಸಾಮಾನ್ಯ ಎಂದು ಕುಕ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ.

    ರಾಂಪುರದವರಾದ ಸಾಬಿಹ್ ಖಾನ್ ತಂದೆ ಸಯೀದ್ ಖಾನ್ ಸದ್ಯ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಸಾಬಿಹ್ ಕೂಡಾ ಬಾಲ್ಯವನ್ನು ಸಿಂಗಾಪುರದಲ್ಲಿಯೇ ಕಳೆದಿದ್ದು, ಅರ್ಥಶಾಸ್ತ್ರ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ. ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಆ್ಯಪಲ್ ಪ್ರಾಡಕ್ಟ್ ಗಳ ಯೋಜನೆ, ಉತ್ಪಾದನೆ, ಪೂರೈಕೆ, ಲಾಜಿಸ್ಟಿಕ್ ಇತರೆ ಕೆಲಸಗಳ ಬಗ್ಗೆ ಮೇಲುಸ್ತುವಾರಿಯನ್ನು ಸಾಬಿಹ್ ಖಾನ್ ನೋಡಿಕೊಳ್ಳುತ್ತಾರೆ.

    ವಿಶ್ವಾದ್ಯಂತ ಆ್ಯಪಲ್ ಕಂಪನಿಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಭಾರತೀಯರು ಸಾಧನೆ ಮಾಡಿದ್ದಾರೆ. ಈ ಸಾಲಿನಲ್ಲಿ ಸತ್ಯ ನಾದೆಲ್ಲಾ, ಸುಂದರ್ ಪಿಚೈ, ಥಾಮಸ್ ಕುರಿಯನ್ ಬಳಿಕ ಈಗ ಸಾಹಿಬ್ ಖಾನ್ ಕೂಡ ಸೇರಿಕೊಂಡಿದ್ದಾರೆ.

    2014ರಲ್ಲಿ ಸ್ಟೀವ್ ಬಲ್ಮೇರ್ ಅವರಿಂದ ತೆರವಾದ ಮೈಕ್ರೋಸಾಫ್ಟ್ ಕಂಪನಿಯ ಸಿಇಓ ಸ್ಥಾನಕ್ಕೆ ಮಣಿಪಾಲದಲ್ಲಿ ಓದಿದ್ದ ಸತ್ಯಾ ನಾದೆಲ್ಲಾ ಆಯ್ಕೆಯಾಗಿದ್ದರು. ಅವರ ಬಳಿಕ 2015ರಲ್ಲಿ ಸುಂದರ್ ಪಿಚೈ ಟೆಕ್‍ನ ದೈತ್ಯ ಗೂಗಲ್ ಕಂಪನಿಯ ಸಿಇಓ ಆಗಿ ನೇಮಕವಾದರು. ಅವರ ನಂತರ ಕೇರಳ ಮೂಲದ ಥಾಮಸ್ ಕುರಿಯನ್‍ರನ್ನು ಗೂಗಲ್ ಕ್ಲೌಡ್‍ನ ಮುಖ್ಯಸ್ಥರಾಗಿ ನೇಮಕವಾದರು.

  • ರೆಸ್ಯೂಮ್ ಹಿಡ್ಕೊಂಡು ಸಿಗ್ನಲ್ ನಲ್ಲಿ ನಿಂತ – Google, Netflix, LinkedIn ಸೇರಿ 200 ಕಂಪೆನಿಗಳಿಂದ ಬಂತು ಆಫರ್!

    ರೆಸ್ಯೂಮ್ ಹಿಡ್ಕೊಂಡು ಸಿಗ್ನಲ್ ನಲ್ಲಿ ನಿಂತ – Google, Netflix, LinkedIn ಸೇರಿ 200 ಕಂಪೆನಿಗಳಿಂದ ಬಂತು ಆಫರ್!

    ಸ್ಯಾಕ್ರಮೆಂಟೊ: ಉದ್ಯೋಗಕ್ಕಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕುತ್ತಿಗೆಗೆ ಫಲಕ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಬರೋಬ್ಬರಿ 200 ಸಂಸ್ಥೆಗಳಿಂದ ಉದ್ಯೋಗದ ಅವಕಾಶಗಳು ಬಂದಿದೆ.

    ಕ್ಯಾಲಿಫೋರ್ನಿಯಾದ 26 ವರ್ಷದ ಡೇವಿಡ್ ಕ್ಯಾಸೆರೆಜ್ ಈ ರೀತಿ ಫಲಕವನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವರು. ಇವರು ಟೆಕ್ಸಾಸ್ ಎ&ಎಂ ವಿಶ್ವವಿದ್ಯಾಲಯದಲ್ಲಿ ಪದವೀಧರಾಗಿದ್ದಾರೆ. ಜೊತೆಗೆ ವೆಬ್ ಡೆವಲಪರ್ ಕೂಡ ಆಗಿದ್ದಾರೆ. ಆದರೆ ಎಲ್ಲೂ ಕೆಲಸ ಸಿಗದೇ ಹುಡುಕಿ ಹುಡುಕಿ ಬೇಸರವಾಗಿ, ನೆಲಸಲು ಮನೆಯೂ ಇಲ್ಲದೇ ಕೊನೆಗೆ ನಾಮ ಘಲಕವೊಂದನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲಿನಲ್ಲಿ ನಿಂತಿದ್ದಾರೆ.

    ನಾಮಫಲಕದಲ್ಲಿ “Homeless, hungry 4 success, take a resume.” (ಮನೆ ಇಲ್ಲದೇ ಇದ್ದರೂ ಯಶಸ್ಸಿನ ಹಸಿವು ಇದೆ. ರೆಸ್ಯೂಮ್ ನೋಡಿ) ಎಂಬುದಾಗಿ ಬರೆದು ಕುತ್ತಿಗೆಗೆ ಹಾಕಿಕೊಂಡು ನಿಂತಿದ್ದರು. ಕ್ಯಾಸೆರೆಜ್ ನಿಂತಿದ್ದ ಫೋಟೋವನ್ನು ಒಬ್ಬರು ತೆಗೆದುಕೊಂಡು ತಮ್ಮ ಟ್ವಿಟ್ಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಜೊತೆಗೆ “ಈ ಯುವಕ ಮನೆ ಇಲ್ಲದಿದ್ದರೂ ಹಣದ ಬದಲು ನನ್ನ ರೆಸ್ಯೂಮ್ ನೋಡಿ ಎಂದು ಬರೆದುಕೊಂಡಿದ್ದಾರೆ. ಆದ್ದರಿಂದ ಸಿಲಿಕಾನ್ ವ್ಯಾಲಿಯಲ್ಲಿರುವ ಯಾರದರೂ ಅವರಿಗೆ ಸಹಾಯ ಮಾಡಿದರೆ ಅದು ನಿಜಕ್ಕೂ ಅದ್ಭುತವಾಗಿರುತ್ತದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ಮಾಡಿದ ತಕ್ಷಣ ಟ್ವಿಟ್ಟಿಗರು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ತಮಗೆ ಗೊತ್ತಿರುವ ಕಡೆಗಳಲ್ಲಿ ವಿಚಾರಿಸುವುದಾಗಿ ಹೇಳಿದ್ದಾರೆ. ಕೊನೆಗೆ ಇದರಿಂದ ಅವರಿಗೆ ಸುಮಾರು 200 ಸಂಸ್ಥೆಗಳಿಂದ ಕೆಲಸದ ಆಫರ್ ಗಳು ಬಂದಿದೆ. ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳು ಕ್ಯಾಸೆರೆಜ್ ಅವರನ್ನು ಕೆಲಸಕ್ಕಾಗಿ ಆಹ್ವಾನಿಸಿವೆ.

    ಜುಲೈ 27 ರಂದು ಈ ಪೋಸ್ಟ್ ಮಾಡಿದ್ದು, ಈವರೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಒಂದು ಲಕ್ಷಕ್ಕಿಂತ ಜನರು ಈ ಪೋಸ್ಟಿಗೆ ರೀಟ್ವೀಟ್ ಮಾಡಿದ್ದಾರೆ.

    ನಾನು ಈ ಮೊದಲು ಆಸ್ಟಿನ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಉತ್ತಮ ಉದ್ಯೋಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಬಂದು ಅವಕಾಶಕ್ಕಾಗಿ ಹುಡುಕುತ್ತಿದ್ದೆ. ನಾನು ಯಾವುದೇ ರೀತಿಯ ಹಣವನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನಾನು ಕೆಲಸವನ್ನು ಮಾತ್ರ ಬಯಸುತ್ತಿದ್ದೆ. ಈಗ ಕೆಲಸ ಸಿಕ್ಕಿದೆ. ನನ್ನ ಬಗ್ಗೆ ಪೋಸ್ಟ್ ಮಾಡಿದವರಿಗೆ ಧನ್ಯವಾದಗಳು ಎಂದು ಕ್ಯಾಸೆರೆಜ್ ಹೇಳಿದ್ದಾರೆ.

    https://twitter.com/jaysc0/status/1022995030015766528

  • ಸೇನಾ ವಾಹನವನ್ನು ಕದ್ದ ಸೈನಿಕ: ಫಿಲ್ಮಿ ಸ್ಟೈಲ್ ಚೇಸಿಂಗ್ ವಿಡಿಯೋ ನೋಡಿ

    ಸೇನಾ ವಾಹನವನ್ನು ಕದ್ದ ಸೈನಿಕ: ಫಿಲ್ಮಿ ಸ್ಟೈಲ್ ಚೇಸಿಂಗ್ ವಿಡಿಯೋ ನೋಡಿ

    ಕ್ಯಾಲಿಫೋರ್ನಿಯಾ: ಬೇಲಿಯೇ ಹೊಲ ಮೇಯಿತು ಎಂಬಂತೆ ಸೇನಾ ವಾಹನವನ್ನು ಸೈನಿಕನೇ ಕದ್ದ ಘಟನೆ ಅಮೆರಿಕದ ವರ್ಜೀನಿಯಾ ಪ್ರಾಂತ್ಯದಲ್ಲಿ ನಡೆದಿದೆ.

    ವರ್ಜೀನಿಯಾದ ನ್ಯಾಷನಲ್ ಗಾರ್ಡ್ ನೆಲೆ ಇರುವ ಫೋರ್ಡ್ ಪಿಕೆಟ್ ನಿಂದ ಸೇನಾ ವಾಹನವನ್ನು ರಿಚ್ಮಂಡ್ ವರೆಗೆ ಓಡಿಸಿಕೊಂಡು ಹೋಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸೇನಾ ವಾಹನವನ್ನು ಬೆನ್ನತ್ತಿದ 12 ಪೊಲೀಸ್ ವಾಹನಗಳು 2 ಗಂಟೆಗಳ ಕಾಲ ಚೇಸಿಂಗ್ ಮಾಡಿ ಸೈನಿಕನನ್ನು ಬಂಧಿಸಿದ್ದಾರೆ.

    ಅದೃಷ್ಟವಶಾತ್ ಸೇನಾ ವಾಹನದಲ್ಲಿ ಯಾವುದೇ ಆಯುಧಗಳಿರದಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಸೈನಿಕನೇ ಸೇನಾ ವಾಹನವನ್ನು ಕದ್ದು ರಸ್ತೆಯಲ್ಲಿ ಓಡಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=jFnmTgi0tOw

  • ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

    ಶೇರುದಾರರಿಗೆ ಬರೆದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ ಜೆಫ್ ಬೆಜೊಸ್

    ಕ್ಯಾಲಿಫೋರ್ನಿಯಾ: ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಒ ಜೆಫ್ ಬೆಜೊಸ್ ತಮ್ಮ ಕಂಪೆನಿಯ ವಾರ್ಷಿಕ ಹೂಡಿಕೆದಾರರಿಗೆ ಕಳುಹಿಸಿದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಿದ್ದಾರೆ.

    ವಿಶ್ವದ ನಂ. 1 ಇ-ಮಾರಾಟ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಅಮೆಜಾನ್ ಭಾರತದಲ್ಲಿ ಕಂಪೆನಿಯ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಲ್ಲದೇ ಅಮೆಜಾನ್ ನೀಡುತ್ತಿರುವ ಅಲೆಕ್ಸಾ ವಾಯ್ಸ್ ಸೇವೆಯಲ್ಲಿ ಹಿಂದಿ ಭಾಷೆಯನ್ನು ಸೇರಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದು ಜೆಫ್ ಬೆಜೊಸ್ ಹೇಳಿದ್ದಾರೆ.

    ಅಮೆಜಾನ್ ಪ್ರೈಂ ವಿಡಿಯೋಗೆಂದೇ ಅಮೆರಿಕ, ಇಂಗ್ಲೆಂಡ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದಂತೆ ಭಾರತದಲ್ಲೂ ಮುಂದಿನ ದಿನಗಳಲ್ಲಿ ಭಾರತದ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ಅವಕಾಶ ನೀಡಿದ ಒಂದು ವರ್ಷದಲ್ಲೇ ಕಂಪೆನಿಯ ಇತಿಹಾಸದಲ್ಲಿ ಅತೀ ಹೆಚ್ಚು ಸದಸ್ಯರಾಗಿದ್ದಾರೆ. ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಉಲ್ಲೇಖಿಸಿದ್ದಾರೆ.

    ವೆಬ್‍ಸೈಟ್ ಟ್ರಾಫಿಕ್ ಲೆಕ್ಕ ಹಾಕುವ ಸಂಸ್ಥೆಗಳು ನೀಡಿದ ವರದಿಯನ್ನು ಉಲ್ಲೇಖಿಸಿ, ಅಮೆಜಾನ್ ಭಾರತದಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, 2017 ರಲ್ಲಿ ಭಾರತದಲ್ಲಿ ಮೊಬೈಲ್ ಹಾಗೂ ಡೆಸ್ಕ್ ಟಾಪ್ ಮೂಲಕ ಅಮೆಜಾನ್ ತಾಣಕ್ಕೆ ಭೇಟಿ ನೀಡಿರುವುದು ಸಂತಸದ ಸಂಗತಿ. 2007ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಅಪ್ಲಿಕೇಶನ್‍ಗಳ ಪೈಕಿ ಅಮೆಜಾನ್.ಇನ್ ಅಪ್ಲಿಕೇಶನ್ ಒಂದಾಗಿದೆ ಎಂದು ಜೆಫ್ ಬೆಜೊಸ್ ತಿಳಿಸಿದ್ದಾರೆ.

    ಏನಿದು ಅಮೆಜಾನ್ ಪ್ರೈಂ?
    ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ (ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾ ಗಳನ್ನು ಸಹ ಪ್ರೈಮ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005 ರ ಜನವರಿ 2 ರಂದು ಆರಂಭಿಸಲಾಯಿತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರು ಇದ್ದಾರೆ ಎಂದು ಅಮೆಜಾನ್ ತಿಳಿಸಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸದಸ್ಯರಾಗಬಹುದು.

  • ನಾಲ್ಕು ವರ್ಷಗಳಿಂದ 3 ಮಕ್ಕಳನ್ನ ಪ್ಲೈವುಡ್ ಬಾಕ್ಸ್ ನಲ್ಲಿ ವಾಸಿಸುವಂತೆ ಮಾಡಿದ ತಂದೆ ತಾಯಿ!

    ನಾಲ್ಕು ವರ್ಷಗಳಿಂದ 3 ಮಕ್ಕಳನ್ನ ಪ್ಲೈವುಡ್ ಬಾಕ್ಸ್ ನಲ್ಲಿ ವಾಸಿಸುವಂತೆ ಮಾಡಿದ ತಂದೆ ತಾಯಿ!

    ಕ್ಯಾಲಿಫೋರ್ನಿಯಾ: ಹೆತ್ತ ತಂದೆ-ತಾಯಿಯೇ ತಮ್ಮ ಮೂರು ಮಕ್ಕಳನ್ನು ಪ್ಲೈವುಡ್ ಬಾಕ್ಸ್ ನಲ್ಲಿ ನಾಲ್ಕು ವರ್ಷಗಳ ಕಾಲ ಇರಿಸಿದ್ದ ಅಮಾನವೀಯ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಮೋನಾ ಕಿರ್ಕ್(51) ಮತ್ತು ಡೇನಿಯಲ್ ಪಾನಿಕೋ(73) ದಂಪತಿ ತಮ್ಮ ಮೂರು ಮಕ್ಕಳನ್ನು ಬಯಲಿನಲ್ಲಿ 20 ಅಡಿ, 4 ಇಂಚು ಎತ್ತರ ಮತ್ತು 10 ಅಡಿ ಅಗಲವಿರುವ ಪ್ಲೈವುಡ್ ಬಾಕ್ಸ್ ನಲ್ಲಿ ಇರಿಸಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಅದೇ ಬಾಕ್ಸ್ ನಲ್ಲಿ ಜೀವನ ಸಾಗಿಸಿರುವ ಈ ಮಕ್ಕಳು, ಬೆಕ್ಕುಗಳು, ಇಲಿಗಳು ರಂಧ್ರ ತೋಡಿರುವ ಬಿಲಗಳು ಮತ್ತು ಕಸದ ರಾಶಿಯ ನಡುವೆ ಬದುಕಿದ್ದರು.

    11, 13 ಮತ್ತು 14 ವರ್ಷ ವಯಸ್ಸಿನ ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ಕಂಡ ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಮಕ್ಕಳನ್ನ ಈ ರೀತಿ ಅಮಾನವೀಯವಾಗಿ ಬಾಕ್ಸ್ ನಲ್ಲಿ ಇರಿಸಿದ್ದ ತಂದೆ-ತಾಯಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

    ಮಕ್ಕಳ ಜೊತೆ ಸುಮಾರು 30-40 ಬೆಕ್ಕುಗಳು ಕಾಣಿಸಿದ್ದು, ಬೆಕ್ಕುಗಳ ಮತ್ತು ಮನುಷ್ಯರ ಮಲ-ಮೂತ್ರದಿಂದ ತುಂಬಿಹೋಗಿತ್ತು. ಇದರಿಂದ ಮಕ್ಕಳು ಅನಾರೋಗ್ಯದಿಂದ ಬಳಲಿ ಹೋಗಿದ್ದು, ಮಕ್ಕಳ ಮತ್ತು ಕುಟುಂಬ ಸೇವೆಯ ಅಧಿಕಾರಿಗಳು ಮಕ್ಕಳನ್ನ ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ಸಂಗ್ರಹಿಸಿರುವ ವಿಡಿಯೋ ಮತ್ತು ಫೋಟೋಗಳ ಪಕ್ರಾರ, ಮಕ್ಕಳು ವಾಸಿಸುತ್ತಿದ್ದ ಮನೆಯ ಸುತ್ತ-ಮುತ್ತ ಕಸದ ರಾಶಿ, ಪ್ಲಾಸ್ಟಿಕ್ ಬ್ಯಾಗ್‍ಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಹಾಸಿಗೆ ಮತ್ತು ಟೈಯರ್ ಗಳಿಂದ ತುಂಬ ಹೋಗಿದ್ದವು. ಇಂತಹ ಕೊಳಕು ಪ್ರದೇಶದಲ್ಲಿ ವಾಸಿಸುತಿದ್ದ ಮಕ್ಕಳು, ತಿನ್ನಲು ಆಹಾರವಿಲ್ಲದೆ ಬಳಲುತ್ತಿದರು. ಇಲ್ಲಿ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕೂಡ ಇಲ್ಲದೆ ನಾಲ್ಕು ವರ್ಷಗಳ ಕಾಲ ಅಲ್ಲಿ ಬದುಕಿದ್ದರು ಎಂದು ವರದಿಯಾಗಿದೆ.