Tag: ಕ್ಯಾಮೆರಾ

  • ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ  ಪೋಸ್ ​​ ಕೊಟ್ಟ ಹುಲಿರಾಯ

    ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ​​ ಕೊಟ್ಟ ಹುಲಿರಾಯ

    ಚಿಕ್ಕಮಗಳೂರು: ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ಹುಲಿರಾಯ ಕ್ಯಾಮರಾಕ್ಕೆ ಪೋಸ್ ನೀಡಿದ್ದು ಪ್ರವಾಸಿಗರು ಫುಲ್ ದಿಲ್ ಖುಷ್ ಆಗಿದ್ದಾರೆ.

    ತಾಲೂಕಿನ ಮುತ್ತೋಡಿ ಅರಣ್ಯ ವಲಯಕ್ಕೆ ಆಗಾಗ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂದವರೆಲ್ಲರೂ ಕೂಡ ಕಾಡಿನಲ್ಲಿ ಬೆಳಗ್ಗೆ, ಸಂಜೆ ಸಫಾರಿಗೆ ತೆರಳುತ್ತಾರೆ. ಆದರೆ, ಬಂದವರಿಗೆಲ್ಲಾ ಹುಲಿರಾಯನ ದರ್ಶನವಾಗುವುದಿಲ್ಲ. ಆದರೆ, ನಿನ್ನೆ ಸಂಜೆ ಸಫಾರಿಗೆ ಹೊರಟ ಪ್ರವಾಸಿಗರಿಗೆ ನೀರು ಕುಡಿದು ಹಳ್ಳ ದಾಟುತ್ತಿದ್ದ ಹುಲಿರಾಯನ ದರ್ಶನವಾಗಿದೆ. ಹಳ್ಳವನ್ನು ದಾಟುತ್ತಿದ್ದ ವ್ಯಾಘ್ರ ಪ್ರವಾಸಿಗರು ನನ್ನನ್ನೇ ನೋಡುತ್ತಿದ್ದಾರೆ ಎಂದು ಭಾವಿಸಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ಕೊಟ್ಟು ಹೋಗಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

    ಕಾಡಲ್ಲಿ ಹುಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ, ಆನೆಗಳ ಹಿಂಡು, ಕಾಡುಕೋಣ, ನವಿಲು, ಉಡ, ಜಿಂಕೆ, ಸಾರಗ ಸೇರಿದಂತೆ ಸಾಕಷ್ಟು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ, ಚಿರತೆ ಹಾಗೂ ಹುಲಿ ಬೀಳುವುದು ತುಂಬಾ ವಿರಳ. ಕೆಲವೊಮ್ಮೆ ಪ್ರವಾಸಿಗರಿಗೆ ಹುಲಿಗಳ ಹೆಜ್ಜೆ ಗುರುತುಗಳು ಸಿಗುತ್ತವೆ. ಆದರೆ, ನಿನ್ನೆ ಹೋದ ಪ್ರವಾಸಿಗರಿಗೆ ಕ್ಯಾಮರಾ ಕಣ್ಣಿಗೆ ಮನುಷ್ಯರಂತೆ ಪೋಸ್ ನೀಡುವ ಹುಲಿಯೇ ಸಿಕ್ಕಿದೆ. ಅಂದಾಜು 25 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಮುತ್ತೋಡಿ ಅರಣ್ಯ ವಲಯವನ್ನೂ ಆಡಳಿತದ ಅನುಕೂಲಕ್ಕಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

  • ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ

    ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ

    ಕ್ಯಾಲಿಫೋರ್ನಿಯಾ: ಬೈಕ್‍ಗಳಲ್ಲಿ ಐಫೋನ್‍ಗಳನ್ನು ಬಳಸಬೇಡಿ ಆಪಲ್ ಕಂಪನಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

    ಪ್ರಯಾಣದ ವೇಳೆ ನಿಖರವಾಗಿ ಜಾಗ ತಿಳಿಯಲು ಸವಾರರು ಹ್ಯಾಂಡಲ್ ನಲ್ಲಿ ಫೋನ್ ಇಡುವುದು ಸಾಮಾನ್ಯ. ಈ ರೀತಿ ಬಳಕೆ ಮಾಡಿ ಅತಿಯಾದ ಕಂಪನಕ್ಕೆ(ವೈಬ್ರೆಷನ್) ಐಫೋನ್ ಸದಾ ಸಿಲುಕುತ್ತಿದ್ದರೆ ಕ್ಯಾಮೆರಾಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆಪಲ್ ಹೇಳಿದೆ.

    ಆಪಲ್ ಏನು ಹೇಳಿದೆ?
    ಹೊಸ ಐಫೋನ್ ಮಾದರಿಗಳಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ತಂತ್ರಜ್ಞಾನ ಮತ್ತು ಲೂಪ್ ಆಟೋಫೋಕಸ್ ಅನ್ನು ಬಳಸಲಾಗಿದೆ. ಫೋಟೋ, ವಿಡಿಯೋ ತೆಗೆಯುವ ವೇಳೆ ಕೈ ಶೇಕ್ ಆದರೂ, ಸರಿಯಾದ ಫ್ರೇಮ್ ಹೊಂದಿಸಲು ಸಾಧ್ಯವಾಗದೇ ಇದ್ದರೂ ಈ ತಂತ್ರಜ್ಞಾನದಿಂದ ಫೋಟೋ, ವಿಡಿಯೋಗಳು ಬಹಳ ಚೆನ್ನಾಗಿ ಮೂಡಿಬರುತ್ತದೆ.  ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಐಫೋನ್‍ ಹೆಚ್ಚಾಗಿ ಗರಿಷ್ಠ ಕಂಪನಕ್ಕೆ ಸಿಲುಕಿದರೆ ಕ್ಯಾಮೆರಾಕ್ಕೆ ನೀಡಲಾಗಿರುವ ತಂತ್ರಜ್ಞಾನಕ್ಕೆ ಹಾನಿಯಾಗಿ ಫೋಟೋ, ವಿಡಿಯೋ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಕಂಪನ ಹೊಂದಿರುವ ಗರಿಷ್ಠ ಸಿಸಿ ಸಾಮರ್ಥ್ಯದ ಮೋಟಾರ್ ಬೈಕ್, ಇತರ ಯಂತ್ರ, ವಾಹನಗಳಲ್ಲಿ ಅಳವಡಿಸಿದರೆ ಐಫೋನ್ ಕ್ಯಾಮೆರಾದ ವಿನ್ಯಾಸಕ್ಕೆ ಧಕ್ಕೆಯಾಗಬಹುದು.

    ಕಂಪನ ತಡೆಯುವ ಸ್ಟ್ಯಾಂಡ್, ಮೌಂಟ್ ಬಳಸುವುದರಿಂದ ಕ್ಯಾಮರಾಗೆ ಹಾನಿಯಾಗುವುದನ್ನು ತಡೆಯಬಹುದು ಎಂದು ಸಲಹೆಯನ್ನು ಆಪಲ್ ನೀಡಿದೆ. ಆದರೂ ಆದರೆ ದೀರ್ಘಾವಧಿಯ ಐಫೋನ್ ಸುರಕ್ಷತೆಗಾಗಿ ದ್ವಿಚಕ್ರ ವಾಹನದಲ್ಲಿ ಐಫೋನ್ ಅಳವಡಿಸದೇ ಇರುವುದು ಉತ್ತಮ ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು

  • ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್

    ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್

    ಬಿಗ್‍ಬಾಸ್ ಫಿನಾಲೆ ವಾರ ಮನೆಯ ಸ್ಪರ್ಧಿಗಳು ತಮ್ಮ ತಮ್ಮ ಆಸೆಗಳನ್ನು ಬಿಗ್‍ಬಾಸ್ ಮುಂದೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೆ.ಪಿ ಅರವಿಂದ್ ತಾವು ಎಂಟ್ರಿಗೆ ಬಂದ ಬೈಕ್‍ನನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು.

    ಬಿಗ್‍ಬಾಸ್ ನನಗೆ ಈಡೇರಿಸದಂತ ಒಂದು ಆಸೆ ಇದೆ. ನಾನು ಎಂಟ್ರಿಗೆ ಬಂದ ಬೈಕ್‍ನನ್ನು ಗಾರ್ಡನ್ ಏರಿಯಾದಲ್ಲಿ ನೋಡಬೇಕು ಅಂತ ಅಂದುಕೊಂಡಿದ್ದೇನೆ. ಅದಕ್ಕೆ ಎಂದಾದರೂ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ನಿಮ್ಮ ಕೈಯಲ್ಲಿ ಸಾಧ್ಯ ಆದ್ರೆ ಆ ಬೈಕ್‍ನನ್ನು ಇಲ್ಲಿ ನೋಡಲು ಇಷ್ಟ ಪಡುತ್ತೇನೆ ಎಂದಿದ್ದರು.

    ಅದರಂತೆ ಬಿಗ್‍ಬಾಸ್ ದೊಡ್ಮನೆಯ ಗಾರ್ಡನ್ ಏರಿಯಾಕ್ಕೆ ಅರವಿಂದ್‍ರವರ ಬೈಕ್‍ನನ್ನು ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಜಗಮಗಿಸುವ ಲೈಟ್‍ಗಳ ಮಧ್ಯೆ ಅರವಿಂದ್ ಬೈಕ್ ನೋಡಿ ಮನೆಮಂದಿಯೆಲ್ಲಾ ಸಖತ್ ಖುಷಿ ಆಗಿದ್ದಾರೆ. ಜೊತೆಗೆ ಬೈಕ್ ನೋಡಿ ಅರವಿಂದ್ ಕೂಡ ಸಂತಸಗೊಂಡು ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದ್ದಾರೆ.

    ಜೊತೆಗೆ ಬೈಕ್ ಬಗ್ಗೆ ವಿವರಿಸಿದ ಅರವಿಂದ್ ಇದು ಎನ್‍ಡ್ಯೂರೋ ಗಾಡಿ ಎಂದು ಸ್ಟಾರ್ಟ್ ಮಾಡಿ ತೋರಿಸುತ್ತಾರೆ. ನಂತರ ಇದರಲ್ಲಿಯೇ ನಾನು ಬಿಗ್‍ಬಾಸ್ ಎಂಟ್ರಿ ಸ್ಟೇಜ್ ತನಕ ಬಂದಿದ್ದು, ಆದರೆ ನಾನು ಎಷ್ಟೋ ಬಾರಿ ಅಂದುಕೊಳ್ಳುತ್ತಿದ್ದೆ. ಗಾರ್ಡನ್ ಏರಿಯಾದಲ್ಲಿ ಎಲ್ಲದರೂ ಬೈಕ್ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಅಂತ. ಹಾಗಾಗಿ ಬಿಗ್‍ಬಾಸ್‍ರನ್ನು ಕೇಳಿಕೊಂಡಿದ್ದೆ. ನನ್ನ ಕನಸು ನಿಜ ಆಯಿತು ಎನ್ನುತ್ತಾ ಮತ್ತೊಮ್ಮೆ ಬಿಗ್‍ಬಾಸ್‍ಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?

    ಒಟ್ಟಾರೆ ಬಿಗ್‍ಬಾಸ್ ಮನೆಗೆ ಬೈಕ್‍ನನ್ನು ಕಳುಹಿಸಿಕೊಡುವ ಮೂಲಕ ಅರವಿಂದ್ ಆಸೆಯನ್ನು ಈಡೇರಿಸಿದ್ದಾರೆ. ಇದನ್ನೂ ಓದಿ:ಹಾರ್ಟ್ ಶೇಪ್ ಕೇಕ್ ಕಳುಹಿಸಿ ಬಿಗ್‍ಬಾಸ್: ದಿವ್ಯಾ ಸುರೇಶ್

  • ಜೈಲಿನಲ್ಲಿದ್ದಾಗ ನನ್ನ ಬಾತ್‍ರೂಮಿನಲ್ಲಿ ಕ್ಯಾಮೆರಾ ಹಾಕಿದ್ರು: ನವಾಜ್ ಶರೀಫ್ ಪುತ್ರಿ

    ಜೈಲಿನಲ್ಲಿದ್ದಾಗ ನನ್ನ ಬಾತ್‍ರೂಮಿನಲ್ಲಿ ಕ್ಯಾಮೆರಾ ಹಾಕಿದ್ರು: ನವಾಜ್ ಶರೀಫ್ ಪುತ್ರಿ

    – ಇಮ್ರಾನ್ ಸರ್ಕಾರದ ವಿರುದ್ಧ ಗಂಭೀರ ಆರೋಪ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪಿಎಂ ನವಾಜ್ ಶರೀಫ್ ಪುತ್ರಿ ಮರಿಯಮ್ ನವಾಜ್ ಸದ್ಯದ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಾವು ಜೈಲಿನಲ್ಲಿದ್ದ ವೇಳೆ ಇಮ್ರಾನ್ ಸರ್ಕಾರ್ ತಮ್ಮ ಕೋಣೆ ಮತ್ತು ಬಾತ್‍ರೂಮಿನಲ್ಲಿ ಕ್ಯಾಮೆರಾ ಅಳವಡಿಸಿತ್ತು ಎಂದು ಆರೋಪಿಸಿದ್ದಾರೆ.

    ಇಮ್ರಾನ್ ಸರ್ಕಾರ ಮಹಿಳೆಯನ್ನ ಅವಮಾನಿಸಿದೆ. ಜೈಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ರೆ ಇಮ್ರಾನ್ ಸರ್ಕಾರಕ್ಕೆ ಜನರ ಮುಂದೆ ಬರೋದಕ್ಕೂ ನಾಚಿಕೆ ಪಡಬೇಕಾಗುತ್ತದೆ. ಜೈಲಿನ ಮಹಿಳೆಯರ ಹೇಗೆ ನಡೆದುಕೊಳ್ಳಲಾಗುತ್ತೆ ಎಂಬ ಸತ್ಯ ಹೇಳಿದ್ರೆ ಆಡಳಿತದಲ್ಲಿರೋರಿಗೆ ಮುಖ ತೋರಿಸೋದಕ್ಕೆ ಲಾಯಕ್ ಆಗಿರಲ್ಲ. ತಂದೆಯ ಮುಂದೆಯೇ ಆತನ ಮಗಳನ್ನ ಬಂಧಿಸೋದ ಆಕೆಯ ಮೇಲೆ ಬಲ ಪ್ರಯೋಗಿಸುವ ಸರ್ಕಾರವಿದು ಎಂದು ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕೆಲ ದಿನಗಳ ಹಿಂದೆ ಮರಿಯಮ್ ಉಳಿದುಕೊಂಡಿದ್ದ ಹೋಟೆಲ್ ಕೋಣೆಯೊಳಗೆ ಪೊಲೀಸರು ನುಗ್ಗಿದ್ದರು. ಹೋಟೆಲ್ ನಲ್ಲಿದ್ದ ಮರಿಯಮ್ ಪತಿಯನ್ನ ಬಂಧಿಸಿದ್ದರು. ಚೌಧರಿ ಶುಗರ್ ಮಿಲ್ ಪ್ರಕರಣದಲ್ಲಿ ಮರಿಯಮ್ ಅವರ ಬಂಧನವಾಗಿತ್ತು. ಇಮ್ರಾನ್ ಖಾನ್ ಅವಧಿಯಲ್ಲಿ ಮರಿಯಮ್ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.

  • ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ

    ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ

    ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಎನ್‍ಜಿಓ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನ ಮಧ್ಯೆ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಈ ಕ್ಯಾಮರಾಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದೊಂದು ವಾರದಿಂದ ಚುರ್ಚೆಗುಡ್ಡದ ಶ್ರೀಗಂಧದ ರಸ್ತೆ ಮಾರ್ಗದ ಒಂದೆರಡು ಕಿ.ಮೀ. ದೂರದಲ್ಲಿ ಕಾಡು ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವ ನೀರುಗುಂಡಿಯ ಬಳಿಯ ಮರಕ್ಕೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

    ಕ್ಯಾಮೆರಾವನ್ನು ಯಾರೂ ತೆಗೆದುಕೊಂಡು ಹೋಗದಂತೆ ಕಬ್ಬಿಣದ ಸರಪಳಿಯಿಂದ ಲಾಕ್ ಮಾಡಲಾಗಿದೆ. ಅರಣ್ಯದಲ್ಲಿ ಕ್ಯಾಮೆರಾಗಳನ್ನು ಗಮನಿಸಿದ ಸ್ಥಳೀಯರು, ಅರಣ್ಯ ಅಧಿಕಾರಿಗಳು ಇಟ್ಟಿರಬೇಕೆಂದು ಸುಮ್ಮನಿದ್ದರು. ಆದರೆ ಸ್ಥಳೀಯ ಎನ್‍ಜಿಓಗಳಲ್ಲಿ ಕೆಲಸ ಮಾಡುವವರು ಈ ಟ್ರ್ಯಾಪಿಂಗ್ ಕ್ಯಾಮೆರಾ ಗಮನಿಸಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ಇಲಾಖೆಯಿಂದ ಯಾವುದೇ ಕ್ಯಾಮೆರಾ ಅಳವಡಿಸದಿರುವುದು ತಿಳಿದಿದೆ.

    ಸಾವಿರಾರು ಎಕರೆಯ ಚುರ್ಚೆಗುಡ್ಡ ಅರಣ್ಯದಲ್ಲಿ ಚಿರತೆ, ಹುಲಿ, ನರಿ, ಆನೆ, ಕರಡಿ ಸೇರಿದಂತೆ ಅಮೂಲ್ಯವಾದ ಶ್ರೀಗಂಧದ ಮರಗಳಿವೆ. ಈ ಪ್ರದೇಶವನ್ನು ಕಾಡುಗಳ್ಳರಿಂದ ರಕ್ಷಿಸಲು ಅರಣ್ಯ ರಕ್ಷಕರು ಹದ್ದಿನ ಕಣ್ಣಿದ್ದಾರೆ. ಆದರೂ ಇಲ್ಲಿ ಕ್ಯಾಮೆರಾ ಅಳವಡಿಸಿ ಹಲವು ದಿನ ಕಳೆದರೂ ಇಲಾಖೆ ಸಿಬ್ಬಂದಿಗೆ ಗೊತ್ತಾಗದಿರುವುದು ಅನುಮಾನ ಮೂಡಿಸಿದೆ. ಅಕ್ರಮವಾಗಿ ಮೀಸಲು ಅರಣ್ಯದಲ್ಲಿ ಕ್ಯಾಮೆರಾ ಅಳವಡಿಸಿರುವ ಬಗ್ಗೆ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಸ್ಥಳದಿಂದ ಕ್ಯಾಮೆರಾ ನಾಪತ್ತೆಯಾಗಿದೆ.

  • ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಲ್ಯಾಂಬೋರ್ಗಿನಿ ಕಾರು ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ಫನ್ ವರ್ಲ್ಡ್ ಮಾಲೀಕನ ಪುತ್ರ ಸನ್ನಿ ಸಬರ್ ವಾಲ್ ರೇಸ್ ಮಾಡಿ, ಲ್ಯಾಂಬೋರ್ಗಿನಿ ಕಾರನ್ನು ಪೊಲೀಸ್ ಚೌಕಿಗೆ ಗುದ್ದಿಸಿದ್ದು ದೊಡ್ಡ ಸುದ್ದಿಯಾಗಿತ್ತು.

    ಸಿಟಿಒ ಜಂಕ್ಷನ್ ನಲ್ಲಿರುವ ಪೊಲೀಸ್ ಚೌಕಿಗೆ ಸನ್ನಿ ಸಬರ್ ವಾಲ್ ತನ್ನ ಲ್ಯಾಂಬೋರ್ಗಿನಿ ಕಾರು ಗುದ್ದಿಸಿದ್ದ. ಆ ಬಳಿಕ ಸ್ಥಳದಲ್ಲೇ ಕ್ಯಾಮೆರಾಗೆ ಪೋಸ್ ಕೂಡ ಕೊಟ್ಟಿದ್ದ ಸನ್ನಿ ಸಬರ್ ವಾಲ್‍ನನ್ನು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಅರೆಸ್ಟ್ ಮಾಡಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದರು. ಇದೀಗ ಅವತ್ತು ಅಪಘಾತ ಮಾಡಿದಾಗಿನ ವಿಡಿಯೋ ಲಭ್ಯವಾಗಿದೆ.

    ಮೂರು ಐಷಾರಾಮಿ ಕಾರುಗಳು ಸಿಗ್ನಲ್‍ನಲ್ಲಿ ಒಂದರ ಪಕ್ಕದಲ್ಲಿ ಒಂದರಂತೆ ಬಂದು ನಿಂತಿವೆ. ಆಗ ಜೋರಾಗಿ ಹೋಗಿ ಕಾರ್ ಯೂಟರ್ನ್ ಮಾಡಿರುವ ಸನ್ನಿ ಸಬರ್ ವಾಲ್, ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಎಲ್ಲಾ ದೃಶ್ಯಗಳು ಮತ್ತೊಂದು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಪಬ್ಲಿಕ್ ಪ್ಲೇಸ್‍ನಲ್ಲಿ ಕಿಸ್, ಹಗ್ ಮಾಡ್ತಾರೆ ಪ್ರೇಮಿಗಳು!

    ಪಬ್ಲಿಕ್ ಪ್ಲೇಸ್‍ನಲ್ಲಿ ಕಿಸ್, ಹಗ್ ಮಾಡ್ತಾರೆ ಪ್ರೇಮಿಗಳು!

    – ಪ್ರವಾಸಿಗರಿಗೆ ಮುಜುಗರ ತರ್ತಿರೋ ಪ್ರೇಮಿಗಳ ಹುಚ್ಚಾಟ

    ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಹೋಗುವ ಕೆಲ ಪ್ರೇಮಿಗಳು, ಮನಸ್ಸೊಇಚ್ಛೆ ಅಶ್ಲೀಲ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡುಗುತ್ತಾರೆ ಎಂದು ಸರ್ಕಾರ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದೆ. ಆದರೂ ಕ್ಯಾಮೆರಾಗಳಿವೆ ಎಂಬ ಪರಿಜ್ಞಾನವಿಲ್ಲದ ಕೆಲ ಜೋಡಿಗಳು ಸಾರ್ವಜನಿಕರ ಸಮ್ಮುಖದಲ್ಲೇ ರೊಮ್ಯಾನ್ಸ್‌ನಲ್ಲಿ ತೊಡಗುವುದರ ಮೂಲಕ ಪ್ರವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಪ್ರೇಮಿಗಳು ಸಾರ್ವಜನಿಕ ಸ್ಥಳದಲ್ಲಿಯೇ ಅಶ್ಲೀಲವಾಗಿ ವರ್ತಿಸುತಿದ್ದಾರೆ. ನೂರಾರು ಎಕರೆ ವಿಶಾಲವಾಗಿ ಹರಡಿರುವ ನಂದಿಗಿರಿಧಾಮದಲ್ಲಿ ಹಿಂದೊಮ್ಮೆ ಅಶ್ಲೀಲ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದ ಕಾರಣ ರಾಜ್ಯ ತೋಟಗಾರಿಕೆ ಇಲಾಖೆ ಗಿರಿಧಾಮದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದೆ.

    ಕೆಲವು ಜೋಡಿಗಳು ಈಗಲೂ ಸಹ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಸಾರ್ವಜನಿಕವಾಗಿಯೇ ಒಬ್ಬರಿಗೊಬ್ಬರು ಕೀಸ್ ಮಾಡ್ತಾ, ತಬ್ಬಿಕೊಂಡು ಮುದ್ದು ಮಾಡುತ್ತಾ, ರೊಮ್ಯಾನ್ಸ್ ಮಾಡುವ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ನಂದಿಗಿರಿಧಾಮದ ಅಧಿಕಾರಿ ರವಿಕುಮಾರ್ ಬೇಸರದಿಂದ ಹೇಳಿದ್ದಾರೆ.

    ಸಿಸಿಟಿವಿ ಭಯದಿಂದ ನಂದಿಗಿರಿಧಾಮಕ್ಕೆ ಬರೋ ಕೆಲ ಜೋಡಿಗಳು ಗಿರಿಧಾಮದಲ್ಲಿನ ಪೊದೆಗಳ ಮರೆಗೆ ಹೋಗಿ ರೊಮ್ಯಾನ್ಸ್‌ನಲ್ಲಿ ತೊಡಗುತ್ತಾರೆ. ಹೀಗಾಗಿ ಎಚ್ಚೆತ್ತ ತೋಟಗಾರಿಕೆ ಇಲಾಖೆ ಈ ಹಿಂದೆ ಬೆಟ್ಟದ ಮೇಲಿರುವ ದಟ್ಟವಾದ ಪೊದೆಗಳನ್ನು ಸಹ ಕಟಾವು ಮಾಡಿಸಿದೆ. ಆದರೂ ಪ್ರೇಮಿಗಳ ಈ ತುಂಟಾಟ ಮಾತ್ರ ನಿಲ್ಲುತ್ತಿಲ್ಲ. ಒಂದೆಡೆ ಪ್ರಕೃತಿ ಸೊಬಗು ಸವಿಯೋಣ ಎಂದು ಬರುವ ಪ್ರವಾಸಿಗರು, ಮತ್ತೊಂದೆಡೆ ಬೆಟ್ಟದ ಮೇಲೆ ಇರೋ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಇದು ಇರುಸು ಮುರುಸು ಉಂಟುಮಾಡುತ್ತಿದೆ ಎಂದು ಪ್ರವಾಸಿಗ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

    ಪ್ರೇಮಿಗಳ ತಾಣ ನಂದಿಗಿರಿಧಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಸಕಾಲಕ್ಕೆ ಕ್ಯಾಮೆರಾಗಳ ಮಾನಿಟರಿಂಗ್ ವ್ಯವಸ್ಥೆ ಇಲ್ಲದೆ ಇಲ್ಲದಿರುವುದರಿಂದ ಬೆಟ್ಟದಲ್ಲಿ ಕೆಲವು ಪ್ರೇಮಿ ಜೋಡಿಗಳು ಆಡಿದ್ದೆ ಆಟ, ಮಾಡಿದ್ದೆ ಕಾಯಕವಾಗಿದೆ. ಇನ್ನೂ ಮುಂದಾದರು ಗಿರಿಧಾಮದ ವಿಶೇಷಾಧಿಕಾರಿಗಳು ನಂದಿಬೆಟ್ಟದಲ್ಲಿ ಅಶ್ಲೀಲ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

     

  • ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಕಬ್ಬನ್ ಪಾರ್ಕಿನಲ್ಲಿ ಫೋಟೋ ಶೂಟ್ ಮಾಡಿದ್ರೆ ಕ್ಯಾಮೆರಾ ಸೀಜ್

    ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಫೋಟೋ ಶೂಟ್‍ಗೆ ಕ್ಯಾಮೆರಾ ತಂದರೆ ಲಕ್ಷಾಂತರ ರೂಪಾಯಿ ಕ್ಯಾಮೆರಾ ಸೀಜ್ ಆಗಲಿದೆ. ಅಲ್ಲದೇ ಜೊತೆಗೆ ಫೋಟೋ ಶೂಟ್ ಮಾಡಿದರೆ ದಂಡ ಕೂಡ ಹಾಕುವ ಹೊಸ ಕಾಯ್ದೆಯನ್ನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.

    ಈಗಾಗಲೇ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ನಿಷೇಧಗೊಂಡಿದೆ. ಆದರೂ ಈ ಆದೇಶಕ್ಕೆ ಕ್ಯಾರೇ ಅನ್ನದ ಜನರು, ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರಿಸುಮುರಿಸು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಾಕಷ್ಟು ಜನರು ಈ ವಿಚಾರವಾಗಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಜೊತೆಗೆ ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕಿನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ ಎಂದು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಸದ್ಯವೇ ಫೋಟೋ ಶೂಟ್ ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

  • ವಿಚಿತ್ರವಾಗಿ ಬ್ಯಾಗ್ ಹಿಡಿದು ಶಾರ್ಟ್ಸ್ ಮುಚ್ಚಿಕೊಂಡ ನಟಿ ಸಾರಾ

    ವಿಚಿತ್ರವಾಗಿ ಬ್ಯಾಗ್ ಹಿಡಿದು ಶಾರ್ಟ್ಸ್ ಮುಚ್ಚಿಕೊಂಡ ನಟಿ ಸಾರಾ

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ವಿಚಿತ್ರವಾಗಿ ಬ್ಯಾಗ್ ಹಿಡಿದುಕೊಂಡು ಶಾರ್ಟ್ಸ್ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವ ಫೋಟೋವೊಂದು ವೈರಲ್ ಆಗುತ್ತಿದೆ.

    ಸಾರಾ ಅವರು ತಮ್ಮ ಡ್ಯಾನ್ಸ್ ಕ್ಲಾಸ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ಕಪ್ಪು ಬಣ್ಣದ ಟಾಪ್ ಹಾಕಿ ಅದಕ್ಕೆ ಕಿತ್ತಳೆ ಬಣ್ಣದ ಶಾರ್ಟ್ಸ್ ಧರಿಸಿದ್ದರು. ಡ್ಯಾನ್ಸ್ ಕ್ಲಾಸಿಗೆ ಹೋಗುತ್ತಿದ್ದ ಸಾರಾ ಕ್ಯಾಮೆರಾ ನೋಡುತ್ತಿದ್ದಂತೆ ಬ್ಯಾಗ್ ಅನ್ನು ವಿಚಿತ್ರವಾಗಿ ಹಿಡಿದುಕೊಂಡು ಶಾರ್ಟ್ಸ್ ಮುಚ್ಚಿಕೊಳ್ಳುತ್ತಿದ್ದರು.

    ಕ್ಯಾಮೆರಾ ಕಾಣಿಸುತ್ತಿದ್ದಂತೆ ಸಾರಾ ಅಲಿ ಖಾನ್ ಅವರು ಬಿಂದಾಸ್ ಆಗಿ ಪೋಸ್ ನೀಡುತ್ತಿದ್ದರು. ಆದರೆ ಈಗ ಅವರು ಕ್ಯಾಮೆರಾ ನೋಡುತ್ತಿದ್ದಂತೆ ವಿಚಿತ್ರವಾಗಿ ಬ್ಯಾಗ್ ಹಿಡಿದುಕೊಂಡಿದ್ದರು. ಅಲ್ಲದೆ ಕ್ಯಾಮೆರಾ ಮುಂದೆ ಹಾದು ಹೋದ ಬಳಿಕ ಅವರು ಮತ್ತೆ ತಮ್ಮ ಬ್ಯಾಗ್ ಅನ್ನು ಭುಜದ ಮೇಲೆ ಹಾಕಿಕೊಂಡರು.

    ಬಾಲಿವುಡ್‍ನಲ್ಲಿ ಈಗ ಸಾರಾ ಅಲಿ ಖಾನ್ ಹಾಗೂ ಅವರ ಗೆಳೆಯ, ನಟ ಕಾರ್ತಿಕ್ ಆರ್ಯನ್ ಅವರ ಆಫೆರ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಈ ನಡುವೆ ಸಾರಾ ಅವರು ಫೋಟೋಗೆ ವಿಚಿತ್ರವಾಗಿ ಪೋಸ್ ನೀಡಿದ್ದು, ಕೂಡ ಹೆಚ್ಚು ಚರ್ಚೆಯಾಗುತ್ತಿದೆ.

  • ಕ್ಸಿಯೋಮಿಯಿಂದ ಬರಲಿದೆ 108 ಮೆಗಾ ಪಿಕ್ಸೆಲ್ ಫೋನ್

    ಕ್ಸಿಯೋಮಿಯಿಂದ ಬರಲಿದೆ 108 ಮೆಗಾ ಪಿಕ್ಸೆಲ್ ಫೋನ್

    ನವದೆಹಲಿ: ಚೀನಾ ಮೂಲದ ಕ್ಸಿಯೋಮಿ ಕಂಪನಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

    ಕೆಲ ದಿನಗಳ ಹಿಂದೆ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರೆಡ್‍ಮೀ ನೋಟ್ 8 ಪ್ರೋ ಫೋನನ್ನು ಬಿಡುಗಡೆ ಮಾಡಿದ ಬಳಿಕ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪನಿ ಅಭಿವೃದ್ಧಿ ಪಡಿಸಿರುವ ಕ್ಯಾಮೆರಾ ಸೆನ್ಸರ್ ಬಳಸಿ ಈ ಫೋನ್ ತಯಾರಿಸಲು ಮುಂದಾಗುತ್ತಿದೆ.

    ಸ್ಯಾಮ್‍ಸಂಗ್ ಕಂಪನಿ ಐಎಸ್‍ಒಸಿಇಎಲ್‍ಎಲ್ ಬ್ರೈಟ್ ಎಚ್‍ಎಂಎಕ್ಸ್ ಸೆನ್ಸರ್ ಅಭಿವೃದ್ಧಿ ಪಡಿಸಿದೆ. 108 ರೆಸಲ್ಯೂಷನ್ ಮೆಗಾ ಪಿಕ್ಸೆಲ್ ಚಿತ್ರವನ್ನು ತೆಗೆಯಬಹುದಾದ ಮೊದಲ ಇಮೇಜ್ ಸೆನ್ಸರ್ ಇದಾಗಿದೆ. 10,80,00,000 ಪಿಕ್ಸೆಲ್(10.80 ಕೋಟಿ ಪಿಕ್ಸೆಲ್) 12032*9024 ರೆಸಲ್ಯೂಷನ್ ಹೊಂದಿರುವ ಫೋಟೋವನ್ನು ಈ ಕ್ಯಾಮೆರಾ ಸೆನ್ಸರ್ ಮೂಲಕ ತೆಗೆಯಬಹುದಾಗಿದೆ.

    ಕ್ಸಿಯೋಮಿ 108 ಮೆಗಾ ಪಿಕ್ಸೆಲ್‍ನಲ್ಲಿ ಒಟ್ಟು 4 ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅಗಸ್ಟ್ ತಿಂಗಳಿನಲ್ಲೇ ಕ್ಸಿಯೋಮಿ ಮತ್ತು ಸ್ಯಾಮ್‍ಸಂಗ್ ಕಂಪನಿಗಳು ಮಾತುಕತೆ ನಡೆಸಿದ್ದು ಈ ಫೋನ್ ತಯಾರಿಸುವ ಕೆಲಸ ಆರಂಭವಾಗಿದೆ.