Tag: ಕ್ಯಾಪ್ಟನ್

  • ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ಬಿಗ್ ಮನೆಯಲ್ಲಿ ಸದಾ ಒಂದಲ್ಲ ಒಂದು ವಿಷಯಗಳಲ್ಲಿ ಸುದ್ದಿಯಾಗುತ್ತಿರುವ ದಿವ್ಯಾ ಸುರೇಶ್ ಮತ್ತು ಮಂಜು ಜೋಡಿ ಇದೀಗ ತಮ್ಮಲ್ಲಿ ಕೆಲ ಬದಲಾವಣೆಗಳನ್ನು ಕಂಡುಕೊಂಡಿದೆ. ಟಾಸ್ಕ್ ಒಂದರಲ್ಲಿ ಆಡುವ ಮುನ್ನ ದಿವ್ಯಾ ತನ್ನ ತಂಡಕ್ಕೆ ಹೇಳಿದ ಸಲಹೆಯ ಬಗ್ಗೆ ಮಂಜು ವಿರೋಧ ವ್ಯಕ್ತಪಡಿಸಿ ದಿವ್ಯಾಗೆ ಬುದ್ಧಿವಾದವನ್ನು ಹೇಳಿದ್ದಾರೆ.

    ಬಿಗ್‍ಬಾಸ್ ನೀಡಿದ್ದ ನಿಲ್ಲು ನಿಲ್ಲು ಕಾವೇರಿ ಟಾಸ್ಕ್ ನಲ್ಲಿ ಕ್ವಾಟ್ಲೆಕಿಲಾಡಿಗಳು ಮತ್ತು ಸೂರ್ಯ ಸೇನೆ ತಂಡಗಳು ಭರ್ಜರಿಯಾಗಿ ಪ್ರದರ್ಶನ ನೀಡಿದೆ. ಈ ಮೊದಲು ತಂಡದಲ್ಲಿ ಆಡುವ ಆಟಗಾರರ ಹಸರನ್ನು ಆಯ್ಕೆ ಮಾಡುವಾಗ ಕ್ವಾಟ್ಲೆಕಿಲಾಡಿಗಳು ತಂಡದ ಸದಸ್ಯೆ ದಿವ್ಯಾ ತಮ್ಮ ತಂಡಕ್ಕೆ ನೀಡಿದ ಸಲಹೆಯೊಂದರ ಬಗ್ಗೆ ಮಂಜು ಟಾಸ್ಕ್ ಮುಗಿದ ಬಳಿಕ ವಿವರಣಾತ್ಮಕವಾದ ಬುದ್ಧಿವಾದ ಹೇಳಿ ತಂಡಕ್ಕೆ ಬೂಸ್ಟ್ ತುಂಬಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಂದ್ರೂ ಚಪ್ಪಲಿ ಕದಿಯುವ ಬುದ್ಧಿ ಬಿಡದ ಸ್ಪರ್ಧಿ..!

    ಕ್ವಾಟ್ಲೆಕಿಲಾಡಿಗಳು ತಂಡದ ಕ್ಯಾಪ್ಟನ್ ಮಂಜು, ತಮ್ಮ ತಂಡದ ಸದಸ್ಯರು ಆಟ ಆಡಲು ಪ್ರಾರಂಭಿಸುವ ಮೊದಲು ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೊಂದಿರಬೇಕು. ತಂಡ ಎಂದು ಬಂದಾಗ ನಾವೆಲ್ಲರೂ ಜೊತೆಯಾಗಿ ಆಟದಲ್ಲಿ ತೊಡಗಿಕೊಳ್ಳಬೇಕು. ದಿವ್ಯಾ ನೀನು ಆಡಲು ಹೊರಟಾಗ ಮೊದಲು ಬೇರೆ ಯಾರನ್ನಾದರು ಕಳುಹಿಸಿದರೆ ಒಳ್ಳೆದು ಎಂದು ಹೇಳಿದ್ದೆ. ಆ ರೀತಿ ಹೇಳದೆ ನೀನು ತುಂಬಾ ಆತ್ಮವಿಶ್ವಾಸದಿಂದ ಹೋಗುತ್ತಿದ್ದರೆ ನಮ್ಮ ತಂಡದ ಎಲ್ಲಾ ಸದಸ್ಯರಿಗೆ ಅದು ಪ್ರೋತ್ಸಾಹ ನೀಡಿದಂತೆ ಆಗುತ್ತಿತ್ತು. ನೀನು ಬಲಿಷ್ಠ ಆಟಗಾರ್ತಿ ಎಂದು ನಾವು ನಂಬಿಕೆ ಇಟ್ಟಿರುತ್ತೇವೆ. ಆಗ ನೀನು ವಿಶ್ವಾಸ ಕಳೆದುಕೊಂಡರೆ ನಮ್ಮ ತಂಡಕ್ಕೆ ಅದೇ ಮೊದಲ ಸೋಲಾಗುತ್ತದೆ. ನಮ್ಮಲ್ಲಿರುವ ಭಯವನ್ನು ನಾವು ಇತರರಿಗೆ ತೋರಿಸಿಕೊಳ್ಳಬಾರದು. ಮೊದಲ ಹೆಜ್ಜೆ ಇತತರಿಗೆ ಬೇಗ ಪ್ರಭಾವ ಬೀರುತ್ತದೆ ಮುಂದೆ ಈ ತಪ್ಪು ಮಾಡಬೇಡ ಎಂದು ಮಂಜು ತಿಳಿಹೇಳಿದ್ದಾರೆ.

  • ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ನೆಯಿಂದ ದೂರ ಇರುವ ದೊಡ್ಮನೆ ಸ್ಪರ್ಧಿಗಳು ತಮ್ಮ ಮನೆಯವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಾರಿ ಮನೆಯವರೊಂದಿಗೆ ಮಾತನಾಡಬೇಕು ಅಂತಾ ಅಂದುಕೊಂಡರೂ ಕೂಡ ಆಗದೇ ಬಿಗ್‍ಬಾಸ್ ಮನೆಯಲ್ಲಿ ಅತ್ತಿರುವುದನ್ನು ನಾವು ನೋಡಿರಬಹುದು. ಕನಿಷ್ಠ ಪಕ್ಷ ಮನೆಯವರ ಧ್ವನಿ ಕೇಳಿದರೆ ಸಾಕಪ್ಪಾ ಎಂದು ಪರದಾಡುತ್ತಿರುತ್ತಾರೆ.

    ಈ ಮಧ್ಯೆ ಬೇರೆ ಸ್ಫರ್ಧಿಗಳಿಗೆ ಹೋಲಿಸಿದರೆ, ಪ್ರಶಾಂತ್ ಸಂಬರಗಿಗೆ ಎರಡೆರಡು ಬಾರಿ ಮನೆಯವರ ಧ್ವನಿ ಕೇಳುವ ಭಾಗ್ಯ ಬಿಗ್‍ಬಾಸ್ ಮನೆಯಲ್ಲಿ ಒಲಿದು ಬಂದಿದೆ. ಹೌದು, ಬಿಗ್‍ಬಾಸ್ ನೀಡಿದ್ದ ಕ್ಯಾಪ್ಟನ್ಸಿ  ಟಾಸ್ಕ್‌ನಲ್ಲಿ ಗೆದ್ದ ಪ್ರಶಾಂತ್ ಸಂಬರ್ಗಿ ಇದೀಗ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಹಿನ್ನೆಲೆ ನಿನ್ನೆ ಪ್ರಶಾಂತ್ ಸಂಬರಗಿಗೆ ಪುತ್ರ ವಾಯ್ಸ್ ರೆಕಾರ್ಡ್ ಕಳುಹಿಸುವ ಮೂಲಕ ವಿಶ್ ಮಾಡಿದ್ದಾರೆ.

    ಹಾಯ್, ಪಪ್ಪಾ ಆದಿ ಮಾತನಾಡುತ್ತಿದ್ದೇನೆ. 2ನೇ ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಬಹಳ ಖುಷಿಯಾಗಿದೆ. ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆಟ ಎಲ್ಲಾ ಚೆನ್ನಾಗಿ ಆಡಿಕೊಂಡು ಬಾ.. ಬಿಗ್‍ಬಾಸ್‍ಗೆ ಹೋಗಲು ಒಂದು ಬಾರಿ ನಿನಗೆ ಅವಕಾಶ ಸಿಕ್ಕಿದೆ. ನೀನು ಅದನ್ನು ಉಪಯೋಗಿಸಿಕೋ, ನಿನ್ನ ಕೈಲಾದಷ್ಟು ಸಾಮಾಥ್ರ್ಯ ಬಳಸಿ ಆಟ ಆಡು. ನೀನು ಬೇರೆಯವರು ಏನು ಹೇಳುತ್ತಾರೋ ಎಂಬ ಬಗ್ಗೆ ಯೋಚಿಸಲು ಹೋಗಬೇಡ. ನೀನು ನಿನಗೇನು ಅನಿಸುತ್ತದೆಯೋ ಆ ನಿರ್ಧಾರಗಳನ್ನು ತೆಗೆದುಕೋ. ನನಗೆ ಗೊತ್ತಿದೆ ನಿನ್ನ ನಿರ್ಧಾರಗಳು ಯಾವಾಗಲೂ ಸರಿಯಾಗಿಯೇ ಇರುತ್ತದೆ ಅಂತಾ ಎಂದಿದ್ದಾರೆ.

    ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಕ್ಕು ನನ್ನ ಪ್ರತಿ ದಿನ ಪಪ್ಪಾ ಯಾವಾಗ ಬರುತ್ತಾರೆ ಎಂದು ಕೇಳುತ್ತಿರುತ್ತಾನೆ. ನಾನು ಪಪ್ಪಾ ಬಿಗ್‍ಬಾಸ್ ಗೆದ್ದೆ ಬರುತ್ತಾರೆ ಎಂದು ಹೇಳುತ್ತಿರುತ್ತೇನೆ. ಅವನು ಪ್ರತಿ ದಿನ ಟಿವಿಯಲ್ಲಿ ನಿನ್ನ ನೋಡಿ ಪಪ್ಪಾ, ಪಪ್ಪಾ ಎನ್ನುತ್ತಿರುತ್ತಾನೆ. ವಿ ಮಿಸ್ ಯೂ, ವಿ ವೇರಿ ಪ್ರೌಡ್ ಆಫ್ ಯೂ, ಎನರ್ಜಿಯಿಂದ ಆಟವಾಡು, ಲವ್ ಯೂ, ಆಲ್ ದಿ ಬೆಸ್ಟ್ ಎಂದು ಪ್ರಶಾಂತ್‍ಗೆ ಅವರ ಮಗ ಆದಿತ್ಯ ವಿಶ್ ಮಾಡಿದ್ದಾರೆ.

  • ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ : ಪ್ರಿಯಾಂಕಾ

    ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ : ಪ್ರಿಯಾಂಕಾ

    ಬಿಗ್‍ಬಾಸ್ ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿ ಯಾರೆಂಬ ಆಯ್ಕೆ ಪ್ರತಿವಾರದಂತೆ ಈ ವಾರವೂ ನಡೆದಿದೆ. ಈ ಮಧ್ಯೆ ಕ್ಯಾಪ್ಟನ್ ರಘು ಗೌಡ ಮೇಲೆ ಪ್ರಿಯಾಂಕಾ ತಿಮ್ಮೇಶ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜೊತೆಗೆ ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ ಅಂತಲೂ ಅವರು ಹೇಳಿದ್ದಾರೆ. ಇಷ್ಟದಿನ ಸುಮ್ಮನೆ ಇದ್ದಪ್ರಿಯಾಂಕಾ ಇದೀಗ ತಮ್ಮ ಆಟವನ್ನು ಪ್ರಾರಂಭಿಸಿದ್ದಾರೆ.

    ಈ ವೇಳೆ ಕ್ಯಾಪ್ಟನ್ ರಘು, ಪ್ರಿಯಾಂಕಾಗೆ ಕಳಪೆ ವೋಟ್ ನೀಡಿದರು. ಅದಕ್ಕೆ ಪ್ರಿಯಾಂಕಾ ಮನೆಯಲ್ಲಿ ತಪ್ಪುಗಳೇನು ಮಾಡಿಲ್ಲ. ಆದರೆ, ಜಾಸ್ತಿ ಬೆರೆಯುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಅಂದಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿರುತ್ತದೆ. ಅವರನ್ನು ಗೇಮ್ ಚೇಂಜರ್ ಅಂತಲೇ ನಾವು ಭಾವಿಸುತ್ತೇವೆ. ಅವರು ಕೊಟ್ಟಿರುವ ಕೆಲಸ ಎಲ್ಲ ಚೆನ್ನಾಗಿ ಮಾಡ್ತಾ ಇದ್ದಾರೆ. ಆದರೆ, ಇರುವಿಕೆ, ಇಲ್ಲದಿರುವಿಕೆ ಬಗ್ಗೆ ನನಗೇನೂ ಅನ್ನಿಸುತ್ತಿಲ್ಲ ಎಂದು ರಘು ಪ್ರಿಯಾಂಕ ಅವರಿಗೆ ಹೇಳಿದ್ದರು.

    ನಾನಿಲ್ಲಿ ಎಲ್ಲರ ಜೊತೆಯಲ್ಲಿ ಬೆರೆಯುತ್ತಿದ್ದೇನೆ. ಅಡುಗೆ ಅಂತ ಬಂದಾಗ ಮುಂದೆ ಇರುತ್ತೇನೆ. ಆಟದಲ್ಲಿ ಒಂದು ಕೈ ಮುಂದೆ ಇರುತ್ತೇನೆ. ವೈಲ್ಡ್ ಕಾರ್ಡ್ ಮೂಲಕ ಬಂದಿದ್ದಕ್ಕೆ ನಾನು ವೈಲ್ಡ್ ಆಗಿರೋಕೆ ಸಾಧ್ಯ ಇಲ್ಲ. ಮುಂದೆ ಅದಕ್ಕೂ ನನ್ನನ್ನೂ ಕಳಪೆ ಅಂತೀರಾ? ಅದಕ್ಕೆ ನಿಮ್ಮ ಮಾತನ್ನು ನಾನು ಒಪ್ಪಲ್ಲ. ನಾನಿಲ್ಲಿ ಬಂದು ಎರಡು ವಾರ ಆದ್ರೂ, ಐದು ವಾರದ ಥರ ಆಡ್ತಾ ಇದ್ದೇನೆ ಎಂದು ಪ್ರಿಯಾಂಕ ರಘು ಹೇಳಿಕೆಗೆ  ತಿರುಗೇಟು ನೀಡಿದ್ದಾರೆ.

     ರಘು ದೊಡ್ಡ ಕಳಪೆ!

    ರಘು ದೊಡ್ಡ ಕಳಪೆ. ತನ್ನ ಸ್ವಂತ ಬುದ್ಧಿಯಿಂದ, ಶ್ರಮ ಹಾಕಿ ಅವನು ಕ್ಯಾಪ್ಟನ್ ಆಗಿಲ್ಲ. ಒಬ್ಬರ ಬಗ್ಗೆ ಮಾತನಾಡೋಕು ಮುಂಚೆ ಯೋಚನೆ ಮಾಡಬೇಕು. ನಾನು ಎರಡು ವಾರದಿಂದ ಅರವಿಂದ್, ಪ್ರಶಾಂತ್ ಅವರ ವರ್ತನೆಯನ್ನು ನೋಡಿದ್ದೇನೆ. ಕ್ಯಾಪ್ಟನ್ ಆದಕೂಡಲೇ ಎರಡು ಕೊಂಬು ಬರಲ್ಲ. ಮುಂದೆ ಇಲ್ಲಿ ಯಾವ ಥರ ಇರಬೇಕು ಅನ್ನೋದು ಗೊತ್ತಾಗಿದೆ ಎಂದು ದಿವ್ಯಾ ಸುರೇಶ್ ಜೊತೆ ಚರ್ಚೆ ಮಾಡಿದ ಪ್ರಿಯಾಂಕಾ ಹೇಳಿದ್ದಾರೆ.

     ಹುಚ್ಚುನ ತರಾ ಮಾತಾಡ್ತಾಇದ್ದಾನೆ. ಏನು ಇಲ್ಲದೆ ಕ್ಯಾಪ್ಟನ್ ಆಗಿದ್ದಾನೆ. ತನ್ನ ಕಳಪೆ ಮಾಡಿರುವ ಕುರಿತಾಗಿ ಪ್ರಿಯಾಂಕ ಚಕ್ರವರ್ತಿ ಅವರ ಬಳಿ ಹೇಳಿದ್ದಾರೆ. ಪ್ರಿಯಾಂಕ ತನ್ನ ಕಳಪೆ ಮಾಡಿರುವ ಕುರಿತಾಗಿ ಕೋಪಗೊಂಡಿದ್ದಾರೆ.

  • ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆದ ನಿಧಿ ಸುಬ್ಬಯ್ಯ

    ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆದ ನಿಧಿ ಸುಬ್ಬಯ್ಯ

    ಬೆಂಗಳೂರು: ಬಿಗ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರೊನೊಬ್ಬರು ಅಳೆದುತೂಗಿ ಉಪಚರಿಸುವಂತಹ ಹಂತಕ್ಕೆ ಬಂದು ನಿಂತಿದ್ದಾರೆ. ತಂಡವೆಂದು ಬಂದಾಗ ತಂಡದಲ್ಲಿ ಬೆರೆತು ಎದುರಾಳಿ ತಂಡದ ವಿರುದ್ಧ ತೊಡೆತಟ್ಟಿ ಅಖಾಡಕ್ಕೆ ಇಳಿದರೆ ಟಾಸ್ಕ್ ಮುಗಿದ ಮೇಲೆ ಎಲ್ಲರೊಂದಿಗೆ ಬೆರೆಯಲು ಪ್ರಯತ್ನಿಸುತ್ತಾರೆ. ಈ ನಡುವೆ ನಿಧಿ ಸುಬ್ಬಯ್ಯ ಬಿಗ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆಯಲು ಪ್ರಯತ್ನಿಸಿದ್ದಾರೆ.

    ನಿಧಿ ಮತ್ತು ಶುಭಾ ಅಡುಗೆ ಮನೆಯಲ್ಲಿ ತಿಂಡಿ ತಯಾರಿಸುತ್ತಿದ್ದಂತೆ, ನಿಧಿ ಕ್ಯಾಪ್ಟನ್ ವಿಶ್ವನ ಕುರಿತು ಮಾತನಾಡಿದ್ದಾರೆ. ವಿಶ್ವ ನಮ್ಮ ತಂಡ ಏನಾದರೂ ತಪ್ಪು ಮಾಡಿದರೆ ಬೇಗ ಬಂದು ಹೇಳುತ್ತಾನೆ. ಆದರೆ ನಮ್ಮ ಎದುರಾಳಿ ತಂಡ ಏನಾದರು ತಪ್ಪು ಮಾಡಿದರೆ ಅದನ್ನು ಅವರೊಂದಿಗೆ ತಿಳಿಸಲು ಹೆದರುತ್ತಾನೆ ಎಂದು ವಿಶ್ವನ ವಿರುದ್ಧ ಆರೋಪ ಮಾಡಿದ್ದಾರೆ.

    ಟಾಸ್ಕ್ ವೇಳೆ ಅರವಿಂದ್ ಫೌಲ್ ಆಗಿದ್ದಾಗ ವಿಶ್ವ ಅರವಿಂದ್ ಬಳಿ ಫೌಲ್ ಕುರಿತು ಹೇಳಲು ಭಯ ಪಡುತ್ತಿದ್ದ. ಹಾಗಾಗಿ ನಾನು ವಿಶ್ವನಿಗೆ ಬೈದೆ, ನಾವು ತಪ್ಪು ಮಾಡಿದಾಗ ಜೋರಾಗಿ ಅದು ಇಲ್ಲ ಫೌಲ್ ಎನ್ನುತ್ತಿಯ, ಅವರ ತಪ್ಪನ್ನು ಮಾತ್ರ ಮೇಲ್ಲನೆ ಹೇಳುತ್ತಿಯಾ ಎಂದು ಪ್ರಶ್ನೆ ಮಾಡಿದೆ ಎಂದು ನಿಧಿ ಶುಭಾಗೆ ತಿಳಿಸಿದರು.

    ಈ ವೇಳೆ ಶುಭಾ ಎಲ್ಲರೂ ಹಾಗೆ ನಮ್ ಮಾವನು ನಮ್ಮ ಮುಂದೆ ಎಗರಾಡುತ್ತಾರೆ ಅಲ್ಲಿ ಸುಮ್ಮನಿರುತ್ತಾರೆ ಎಂದರು. ಅದಕ್ಕೆ ನಿಧಿ ಮಾವ ‘ಡರ್ ಪೋಕ್’ ಎಂದು ಹೀಯಾಳಿಸಿದರು. ನಂತರ ಮಾತು ಮುಂದುವರಿಸಿದ ಶುಭಾ, ಪ್ರಶಾಂತ್ ಡರ್ ಪೋಕ್ ಅಲ್ಲ ಅವರು ಮಾತನಾಡಿದರೆ ಮನೆಮಂದಿ ಅವರ ವಿರುದ್ಧ ನಿಲ್ಲಬಹುದೆಂದು ಆ ನಿಲುವಿಗೆ ಬಂದಿದ್ದಾರೆ. ಅದು ಒಂದು ಅವರ ವ್ಯಕ್ತಿತ್ವ ಎಂದರು.

    ಪ್ರಶಾಂತ್ ಯಾರೊಂದಿಗೆ ಜಗಳ ಮಾಡಿದರೂ ಕೂಡ ನಂತರ ಬಂದು ಅವರೇ ಮಾತನಾಡಿಸುತ್ತಾರೆ. ಅವರಿಗೆ ಈ ಮನೆಯಲ್ಲಿ ಎಲ್ಲರೊಂದಿಗೆ ಇರಬೇಕೆಂಬ ಮನೋಭಾವ ಇದೆ. ಹಾಗಾಗಿ ಅವರು ಆ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶುಭಾ ಮತ್ತು ನಿಧಿ ಅಭಿಪ್ರಾಯಪಟ್ಟರು.

    ಬಿಗ್ ಮನೆಯ ಸದಸ್ಯರು ಒಬ್ಬರಿಗೊಬ್ಬರು ಎಷ್ಟೇ ಜಗಳವಾಡಿದರೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ ಎಂಬುದು ಅಭಿಮಾನಿಗಳ ನಿಲುವು.

  • ಐಪಿಎಲ್ ಪಂದ್ಯಗಳ ವೇಳೆ ಕ್ಯಾಪ್ಟನ್‍ಗಳು 2 ಟೋಪಿ ಧರಿಸಲು ಕಾರಣವೇನು?

    ಐಪಿಎಲ್ ಪಂದ್ಯಗಳ ವೇಳೆ ಕ್ಯಾಪ್ಟನ್‍ಗಳು 2 ಟೋಪಿ ಧರಿಸಲು ಕಾರಣವೇನು?

    ಅಬುಧಾಬಿ: ಸಾಮಾನ್ಯವಾಗಿ ಕ್ರೆಕೆಟ್ ನಡೆಯುತ್ತಿರುವ ವೇಳೆ ಎಲ್ಲ ಆಟಗಾರರು ಒಂದೊಂದು ಟೋಪಿ ಧರಿಸಿರುತ್ತಾರೆ. ಆದರೆ ಈ ಬಾರಿ ಐಪಿಎಲ್‍ನಲ್ಲಿ ನಾಯಕರು ಎರಡು ಟೋಪಿಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

    ಕೊರೊನಾ ಕಾರಣದಿಂದ ಐಪಿಎಲ್-2020 ಆರು ತಿಂಗಳು ತಡವಾಗಿ ಯುಎಇಯಲ್ಲಿ ಆರಂಭವಾಗಿ ಅರ್ಧಕ್ಕಿಂತ ಹೆಚ್ಚಿನ ಪಯಾಣವನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ 43 ಪಂದ್ಯಗಳು ಐಪಿಎಲ್‍ನಲ್ಲಿ ಮುಗಿದಿವೆ. ಈ ನಡುವೆ ಪಂದ್ಯದ ವೇಳೆ ನಾಯಕರ ಎರಡು ಟೋಪಿ ಧರಿಸಲು ಕಾರಣವೇನು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.

    ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೊರೊನಾ ನಡುವೆಯೂ ಬಿಸಿಸಿಐ ಹಲವಾರು ನಿಯಮಗಳನ್ನು ಮಾಡಿಕೊಂಡು ಐಪಿಎಲ್ ಅನ್ನು ಆರಂಭ ಮಾಡಿದೆ. ಅಂತೆಯೇ ಕೊರೊನಾ ನಡುವೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಐಸಿಸಿ ಕೂಡ ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಕೊರೊನಾ ಕಾರಣದಿಂದ ಬಾಲಿಗೆ ಎಂಜಲನ್ನು ಹಚ್ಚಬಾರದು ಎಂಬ ನಿಯಮವನ್ನು ಐಸಿಸಿ ಜಾರಿಗೆ ಮಾಡಿತ್ತು.

    ಈ ಮೊದಲು ಪಂದ್ಯದಲ್ಲಿ ಬೌಲರ್ ಬೌಲ್ ಮಾಡುವ ಮೊದಲು ಆತನ ಟೋಪಿ, ಗ್ಲಾಸ್ ಮತ್ತು ಸ್ವೆಟ್ಟರ್ ಇನ್ನಿತರ ವಸ್ತುಗಳನ್ನು ಅಂಪೈರ್ ಕೈಗೆ ಕೊಡುತ್ತಿದ್ದರು. ಈಗ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಐಸಿಸಿ ಹೊಸ ನಿಯಮ ಮಾಡಿದ್ದು, ಈ ನಿಯಮದಂತೆ ಯಾವ ಆಟಗಾರನೂ ಕೂಡ ಪಂದ್ಯದ ವೇಳೆ ತನ್ನ ಯಾವುದೇ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ವಸ್ತುಗಳ ಮೂಲಕ ಯಾವುದೇ ಅಂಪೈರ್ ಅನ್ನು ಸಂಪರ್ಕ ಮಾಡುವಂತಿಲ್ಲ.

    ಐಸಿಸಿ ಈ ನಿಯಮವನ್ನು ಬಿಸಿಸಿಐ ಐಪಿಎಲ್‍ನಲ್ಲೂ ಕೂಡ ಅವಳವಡಿಸಿದ್ದು, ಯಾವುದೇ ಬೌಲರ್ ಬೌಲ್ ಮಾಡುವಾಗ ತನ್ನ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ಅವರನ್ನು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಯಾವುದೇ ತಂಡದ ಬೌಲರ್ ಬೌಲ್ ಮಾಡುವಾಗ ತನ್ನ ಯಾವುದೇ ವಸ್ತುಗಳನ್ನು ಅಂಪೈರಿಗೆ ನೀಡುವುದಿಲ್ಲ. ಆದ್ದರಿಂದ ಬೌಲರ್ ಬೌಲ್ ಮಾಡುವಾಗ ಆತನ ಟೋಪಿಯನ್ನು ನಾಯಕ ಧರಿಸುವ ಕಾರಣ ಕ್ಯಾಪ್ಟನ್‍ಗಳು ಎರಡು ಟೋಪಿ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ.

    ಕೊರೊನಾ ಕಾರಣದಿಂದ ಬಹಳ ಮುಂಜಾಗ್ರತೆವಹಿಸಿ ಐಪಿಎಲ್ ಅನ್ನು ನಡೆಸಲಾಗುತ್ತಿದೆ. ಆದರೂ ಐಪಿಎಲ್ ಆರಂಭಕ್ಕೂ ಮುನ್ನವೇ ಕೊರೊನಾ ಕರಿನೆರಳು ಟೂರ್ನಿಯ ಮೇಲೆ ಬಿದ್ದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ನಂತರ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಐಪಿಎಲ್ ಆರಂಭವಾಗಿ ತನ್ನ ಅರ್ಧ ಜರ್ನಿಯನ್ನು ಯಾವುದೇ ತೊಂದರೆಯಿಲ್ಲದೆ ಮುಗಿಸಿದೆ.

  • ಕೆಕೆಆರ್ ನಾಯಕತ್ವದಿಂದ ಹಿಂದೆ ಸರಿದ ದಿನೇಶ್ ಕಾರ್ತಿಕ್

    ಕೆಕೆಆರ್ ನಾಯಕತ್ವದಿಂದ ಹಿಂದೆ ಸರಿದ ದಿನೇಶ್ ಕಾರ್ತಿಕ್

    ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ್ವದಿಂದ ದಿನೇಶ್ ಕಾರ್ತಿಕ್ ಅವರು ಹಿಂದೆ ಸರಿದಿದ್ದಾರೆ.

    ಕೆಕೆಆರ್ ತಂಡವನ್ನು ಐಪಿಎಲ್-2020ಯಲ್ಲಿ ಮಧ್ಯಂತರದವರೆಗೂ ಮುನ್ನಡೆಸಿದ್ದ ಕಾರ್ತಿಕ್ ಅವರು, ಇಂದು ನಾಯಕತ್ವವನ್ನು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಇಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಹೊಸ ನಾಯಕ ಮಾರ್ಗನ್ ಮುನ್ನಡೆಸಲಿದ್ದಾರೆ.

    2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ನೇಮಕವಾಗಿದ್ದ ದಿನೇಶ್ ಕಾರ್ತಿಕ್ ಅವರು, ಸುಮಾರು 37 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿದ್ದರು. ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲೂ ಕೂಡ ಏಳು ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿ ಅದರಲ್ಲಿ ನಾಲ್ಕು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಕೋಲ್ಕತ್ತಾ ತಂಡ ನಾಲ್ಕರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋತು ಸದ್ಯ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

    ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ದಿನೇಶ್ ಕಾರ್ತಿಕ್ ಅವರು ಕೊಂಚ ಎಡವಿದ್ದರು. ಜೊತೆಗೆ ಓರ್ವ ಬ್ಯಾಟ್ಸ್ ಮ್ಯಾನ್ ಆಗಿ ಕೂಡ ತಂಡಕ್ಕೆ ಬೇಕಾದಾಗ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದ ಮಾರ್ಗನ್ ಅವರಿಗೆ ನಾಯಕ್ವವನ್ನು ಬಿಟ್ಟುಕೊಡುವಂತೆ ಕೆಕೆಆರ್ ಅಭಿಮಾನಿಗಳು ಒತ್ತಾಯಿಸಿದ್ದರು. ಆದ್ದರಿಂದ ನಾಯಕ್ವ ಬಿಟ್ಟುಕೊಟ್ಟು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ಕಾರ್ತಿಕ್ ತೀರ್ಮಾನ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು, ನಮಗೂ ದಿನೇಶ್ ಕಾರ್ತಿಕ್ ಅವರ ತೀರ್ಮಾನ ಕೇಳಿ ಶಾಕ್ ಆಗಿದೆ. ಆದರೆ ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತದ ಬೌಲರ್ ಶ್ರೀಶಾಂತ್ ಟ್ವೀಟ್ ಮಾಡಿ, ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಕೆಕೆಆರ್ ತಂಡವನ್ನು ಮುನ್ನೆಡಸಬೇಕು ಎಂದು ಹೇಳಿದ್ದರು. ಈ ಎಲ್ಲ ಕಾರಣದಿಂದ ಕಾರ್ತಿಕ್ ನಾಯಕ್ವದಿಂದ ಕೆಳಗೆ ಇಳಿದಿದ್ದಾರೆ.

  • ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ಕೆಕೆಆರ್ ನಾಯಕನಾಗಬೇಕು: ಶ್ರೀಶಾಂತ್

    ದಿನೇಶ್ ಕಾರ್ತಿಕ್ ಬದಲು ಮಾರ್ಗನ್ ಕೆಕೆಆರ್ ನಾಯಕನಾಗಬೇಕು: ಶ್ರೀಶಾಂತ್

    – ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್ ಲೀಡ್ ಮಾಡಬೇಕು

    ನವದೆಹಲಿ: ದಿನೇಶ್ ಕಾರ್ತಿಕ್ ಬದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇಯಾನ್ ಮಾರ್ಗನ್ ಅವರು ಮುನ್ನೆಡಸಬೇಕು ಎಂದು ಭಾರತ ಕ್ರಿಕೆಟ್ ಆಟಗಾರ ಶ್ರೀಶಾಂತ್ ಅವರು ಹೇಳಿದ್ದಾರೆ.

    ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ ಭರ್ಜರಿ 228 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡ ಆರಂಭದಲ್ಲಿ ಒಳ್ಳೆಯ ಆರಂಭ ಕಂಡರೂ ಪಂದ್ಯದ ಮಧ್ಯೆಯಲ್ಲಿ ಕುಸಿದಿತು. ಕೊನೆಯಲ್ಲಿ ಮಾರ್ಗನ್ ತ್ರಿಪಾಠಿಯವರು ಉತ್ತಮವಾಗಿ ಆಡಿದರು. ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು.

    ಈ ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಶ್ರೀಶಾಂತ್ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಯಾನ್ ಮಾರ್ಗನ್ ಅವರು ಕೆಕೆಆರ್ ತಂಡವನ್ನು ಮುನ್ನೆಡಸಬೇಕು. ದಿನೇಶ್ ಕಾರ್ತಿಕ್ ಅಲ್ಲ. ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಐಪಿಎಲ್‍ನಲ್ಲಿ ತಂಡವನ್ನು ಮುನ್ನಡೆಸಬೇಕು. ಕೆಕೆಆರ್ ತಂಡ ಇದರ ಬಗ್ಗೆ ಯೋಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ, ಧೋನಿ ಮತ್ತು ರೋಹಿತ್ ರೀತಿಯಲ್ಲಿ ಮುಂದೆ ನಿಂತು ತಂಡವನ್ನು ನಡೆಸುವವರು ಕ್ಯಾಪ್ಟನ್ ಆಗಬೇಕು ಎಂದು ತಿಳಿಸಿದ್ದಾರೆ.

    ಐಪಿಎಲ್-2020ಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 4 ಪಂದ್ಯದಲ್ಲಿ ಎರಡರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಇದರ ಜೊತೆಗೆ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಫಾರ್ಮ್‍ನಲ್ಲಿ ಇಲ್ಲ. ತಂಡಕ್ಕೆ ಬೇಕಾದಾಗ ರನ್ ಸಿಡಿಸುವಲ್ಲಿ ಕಾರ್ತಿಕ್ ವಿಫಲವಾಗಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಕೂಡ ತಂಡ ಸಂಕಷ್ಟದಲ್ಲಿ ಇದ್ದಾಗ ಕ್ರೀಸಿಗೆ ಬಂದ ಕಾರ್ತಿಕ್ 8 ಬಾಲ್ ಆಡಿ ಕೇವಲ 6 ರನ್ ಸಿಡಿಸಿ ಔಟ್ ಆಗಿದ್ದರು. ಇದು ಕೆಕೆಆರ್ ಅಭಿಮಾನಿಗಳಿಗೂ ಬೇಸರ ತರಿಸಿತ್ತು.

    ಆದರೆ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಮಾರ್ಗನ್ ಅವರು, ತಂಡಕ್ಕೆ ಅಗತ್ಯವಿದ್ದಾಗ ಬಂದು ಚಾಂಪಿಯನ್ ಇನ್ನಿಂಗ್ಸ್ ಆಡಿದ್ದರು. ಕೊನೆಯಲ್ಲಿ ಸಿಕ್ಸ್‍ಗಳ ಸುರಿಮಳೆಗೈದ ಮಾರ್ಗನ್ ಅವರು, ಭರ್ಜರಿ ಐದು ಸಿಕ್ಸ್ ಮತ್ತು ಒಂದು ಫೋರ್ ಸಮೇತ ಕೇವಲ 18 ಬಾಲಿನಲ್ಲೇ ಸ್ಫೋಟಕ 44 ರನ್ ಸಿಡಿಸಿದರು. ಈ ಮೂಲಕ ಭಾರಿ ರನ್ ಅಂತರದಿಂದ ಸೋಲುತ್ತಿದ್ದ ತಂಡವನ್ನು ಕೇವಲ 18 ರನ್ ಅಂತರದಲ್ಲಿ ಸೋಲುವಂತೆ ಮಾಡಿದ್ದರು.

  • ಕಾರವಾರದಲ್ಲಿ ಸಮುದ್ರಕ್ಕೆ ಬಿದ್ದ ಪ್ಯಾರಾ ಮೋಟರ್ – ನೌಕಾನೆಲೆಯ ಕ್ಯಾಪ್ಟನ್ ಸಾವು

    ಕಾರವಾರದಲ್ಲಿ ಸಮುದ್ರಕ್ಕೆ ಬಿದ್ದ ಪ್ಯಾರಾ ಮೋಟರ್ – ನೌಕಾನೆಲೆಯ ಕ್ಯಾಪ್ಟನ್ ಸಾವು

    – ಅಂಬುಲೆನ್ಸ್ ಬಾರದೇ ಮೃತಪಟ್ಟ ಅಧಿಕಾರಿ

    ಕಾರವಾರ: ಹಾರಾಡುತ್ತಿರುವ ವೇಳೆ ಗಾಳಿಗೆ ಪ್ಯಾರಾ ಮೋಟಾರಿನ ದಾರ ತುಂಡಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲಿನಲ್ಲಿ ಪ್ಯಾರಾ ಮೋಟರ್ ಪತನಗೊಂಡಿದೆ. ಜೊತೆಗೆ ಅದರಲ್ಲಿದ್ದ ನೌಕಾನೆಲೆಯ ಕ್ಯಾಪ್ಟನ್ ಒಬ್ಬರು ಸಾವನ್ನಪ್ಪಿದ್ದಾರೆ.

    ಮಾರ್ಗದರ್ಶಕನ ಜೊತೆ ಪ್ಯಾರಾ ಮೋಟಾರಿನಲ್ಲಿ ಹಾರಾಟ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾರೆ. ಪ್ಯಾರಾ ಮೋಟಾರ್ ಹಾರುತ್ತಿರುವ ವೇಳೆ ಗ್ಲೈಡರಿನ ಮೇಲ್ಭಾಗದ ಪ್ಯಾರಾಚೂಟ್ ದಾರ ಹರಿದಿದ್ದೇ ಘಟನೆಗೆ ಕಾರಣವಾಗಿದೆ.

    ದಾರ ಹರಿದ ವೇಳೆ ಗಾಳಿ ಹೆಚ್ಚಿದ್ದರಿಂದ ಇಂಜಿನ್ ಹಾಗೂ ಪೈಲೆಟ್ ದೇಹಕ್ಕೆ ಈ ನೈಲನ್ ದಾರಗಳು ಸುತ್ತಿದ್ದು ಗ್ಲೈಡರಿನೊಂದಿಗೆ ಇಬ್ಬರೂ ನೀರಿನೊಳಗೆ ಬಿದ್ದಿದ್ದಾರೆ. ಈ ವೇಳೆ ಮಾರ್ಗದರ್ಶಕ ಕ್ಯಾಪ್ಟನ್ ವಿದ್ಯಾದರ್ ವೈದ್ಯ ಅಪಾಯದಿಂದ ಪಾರಾಗಿದ್ದು, ಪ್ರವಾಸಿಗ ಆಂಧ್ರ ನೌಕಾನಲೆಯ ಕ್ಯಾಪ್ಟನ್ ಮಧುಸೂದನ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

    ಸ್ಥಳಕ್ಕೆ ಬಾರದ ಅಂಬ್ಯುಲೆನ್ಸ್
    ಘಟನೆ ನಡೆದು ಅರ್ಧ ಗಂಟೆಗೂ ಮೇಲಾದರೂ ಒಂದೂ ಅಂಬ್ಯುಲೆನ್ಸ್ ಕೂಡ ಸ್ಥಳಕ್ಕೆ ಬಂದಿರಲಿಲ್ಲ. ಮಾರುದೂರದಲ್ಲಿ ಜಿಲ್ಲಾ ಆಸ್ಪತ್ರೆ ಇದ್ದರೂ, ಅಂಬ್ಯುಲೆನ್ಸ್ ಗಾಗಿ ಗೋಗರೆದರೂ ಬಾರದ ಕಾರಣ ನಗರ ಠಾಣೆಯ ಪಿಎಸ್‍ಐ ಸಂತೋಷ್ ಅವರ ಜೀಪಿನಲ್ಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿಸಲಾಗಿತ್ತು. ಆದರೇ ಕ್ಯಾಪ್ಟನ್ ವಿದ್ಯಾದರ್ ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಸಾವನ್ನಪ್ಪಿದ್ದಾರೆ.

    ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುರೇಶ್ ರೈನಾ ಐಪಿಎಲ್ ದಾಖಲೆ ಮುರಿಯುವ ಸನಿಹದಲ್ಲಿ ಧೋನಿ

    ಸುರೇಶ್ ರೈನಾ ಐಪಿಎಲ್ ದಾಖಲೆ ಮುರಿಯುವ ಸನಿಹದಲ್ಲಿ ಧೋನಿ

    – ಮಹಿ ಹೆಸರಿನಲ್ಲಿವೆ 4 ಪ್ರಮುಖ ಐಪಿಎಲ್ ರೆಕಾರ್ಡ್ಸ್

    ನವದೆಹಲಿ: ಈ ಬಾರಿಯ ಐಪಿಎಲ್‍ನಿಂದ ಹೊರಬಂದಿರುವ ಸುರೇಶ್ ರೈನಾ ಅವರ ಐಪಿಎಲ್ ದಾಖಲೆಯೊಂದನ್ನು ಬ್ರೇಕ್ ಮಾಡುವ ಸನಿಹದಲ್ಲಿ ಎಂಎಸ್ ಧೋನಿಯವರು ಇದ್ದಾರೆ.

    ಆರು ತಿಂಗಳು ತಡವಾಗಿ ಇಂದು ಐಪಿಎಲ್ ಆರಂಭವಾಗಲಿದೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಐಪಿಎಲ್-2020ಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಲಿವೆ.

    ವೈಯಕ್ತಿಕ ಕಾರಣ ಕೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಐಪಿಎಲ್‍ನಿಂದ ಹೊರಬಂದಿದ್ದಾರೆ. ಆದರೆ ಐಪಿಎಲ್‍ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಸುರೇಶ್ ರೈನಾ ಮಾಡಿದ್ದಾರೆ. ರೈನಾ ಒಟ್ಟು 193 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ರೈನಾ ನಂತರ 190 ಪಂದ್ಯಗಳನ್ನಾಡಿರುವ ಧೋನಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಇನ್ನೂ ಕೆವಲ ನಾಲ್ಕು ಪಂದ್ಯಗಳನ್ನಾಡಿದರೆ ಧೋನಿ ರೈನಾರ ದಾಖಲೆಯನ್ನು ಮುರಿಯಲಿದ್ದಾರೆ.

    ಐಪಿಎಲ್‍ನ 12 ಆವೃತ್ತಿಯಲ್ಲಿ ರೈನಾ ಒಟ್ಟು 193 ಪಂದ್ಯಗಳನ್ನಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ 190 ಪಂದ್ಯಗಳನ್ನಾಡಿರುವ ಧೋನಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ (188), ನಾಲ್ಕನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ (182), ಒಟ್ಟು 177 ಐಪಿಎಲ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಮತ್ತು ರಾಬಿನ್ ಉತ್ತಪ್ಪ ಐದನೇ ಸ್ಥಾನದಲ್ಲಿ ಇದ್ದಾರೆ. ಇದನ್ನು ಓದಿ: 2020ರ ಐಪಿಎಲ್ ಆವೃತ್ತಿಗೆ ಕೌಂಟ್‍ಡೌನ್ ಶುರು

    ಐಪಿಎಲ್‍ನಲ್ಲಿ ಎಂಎಸ್ ಧೋನಿ ಪ್ರಮುಖ ನಾಲ್ಕು ದಾಖಲೆಯನ್ನು ಮಾಡಿದ್ದಾರೆ. ಮೊದಲನೇಯದಾಗಿ ನಾಯಕನಾಗಿ 104 ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಮೊದಲ ನಾಯಕ ಎಂಬ ದಾಖಲೆ ಮಾಡಿದ್ದಾರೆ. ನಾಯಕನಾಗಿ ಧೋನಿಯ ಸಕ್ಸಸ್ ರೇಟ್ 60.11 ಇದೆ. ಎರಡನೇಯದಾಗಿ ಧೋನಿ ಐಪಿಎಲ್‍ನಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಆಗಿದ್ದು, 132 ಬಾರಿ ಬ್ಯಾಟ್ಸ್ ಮ್ಯಾನ್‍ಗಳನ್ನು ಔಟ್ ಮಾಡಿದ್ದಾರೆ. ಇದರಲ್ಲಿ ದಾಖಲೆಯ 38 ಸ್ಟಂಪಿಂಗ್‍ಗಳು ಸಹ ಸೇರಿವೆ.

    ಮೂರನೇಯದಾಗಿ ನಾಯಕನಾಗಿ ಅತೀ ಹೆಚ್ಚು ಬಾರೀ ತಂಡವನ್ನು ಮುನ್ನಡೆಸಿದ ದಾಖಲೆಯೂ ಕೂಡ ಧೋನಿಯವರ ಹೆಸರಿನಲ್ಲಿದೆ. ಚೆನ್ನೈ ಮತ್ತು ಪುಣೆ ತಂಡದ ನಾಯಕನಾಗಿ ಬರೋಬ್ಬರಿ 174 ಪಂದ್ಯಗಳನ್ನು ಅವರು ಮುನ್ನಡೆಸಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಭಾರತೀಯ ಆಟಗಾರ ಪೈಕಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಧೋನಿ ಇಲ್ಲಿಯವರೆಗೂ 209 ಸಿಕ್ಸರ್ ಸಿಡಿಸಿದ್ದಾರೆ. ಈ ಲಿಸ್ಟ್‍ನಲ್ಲಿ 326 ಸಿಕ್ಸರ್ ಸಿಡಿಸಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿ ಇದ್ದಾರೆ. ಇದನ್ನು ಓದಿ: ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ

    ಇಂದು ನಡೆಯುವ ಪಂದ್ಯದಲ್ಲಿ ಧೋನಿಯವರನ್ನು ಮೈದಾನದಲ್ಲಿ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 2019ರ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದ ನಂತರ ಧೋನಿ ಕ್ರಿಕೆಟ್‍ನಿಂದ ಕೊಂಚ ದೂರವಿದ್ದರು. ಈ ಮಧ್ಯದಲ್ಲಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಕೂಡ ಹೇಳಿದ್ದರು. ಧೋನಿಯವರ ಇದೇ ಲಾಸ್ಟ್ ಐಪಿಎಲ್ ಆವೃತ್ತಿ ಆಡುತ್ತಾರೆ ಎಂದು ಹೇಳಲಾಗುತ್ತಿದೆ.

  • ಯುವ ಆಟಗಾರೊಂದಿಗೆ ತಂಡ ಕಟ್ಟಿದ ಧೋನಿ ಪಾಂಟಿಂಗ್‍ಗಿಂತ ಬೆಸ್ಟ್ ನಾಯಕ: ಅಫ್ರಿದಿ

    ಯುವ ಆಟಗಾರೊಂದಿಗೆ ತಂಡ ಕಟ್ಟಿದ ಧೋನಿ ಪಾಂಟಿಂಗ್‍ಗಿಂತ ಬೆಸ್ಟ್ ನಾಯಕ: ಅಫ್ರಿದಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಸ್ ಧೋನಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‍ಗಿಂತ ಬೆಸ್ಟ್ ಕ್ಯಾಪ್ಟನ್ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ.

    ವಿಶ್ವ ಮಟ್ಟದ ಕ್ರಿಕೆಟ್ ನಾಯಕರನ್ನು ತೆಗದುಕೊಂಡರೆ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ನಡುವೆ ಸ್ಪರ್ಧೆ ಉಂಟಾಗುತ್ತದೆ. ಏಕೆಂದರೆ ಇಬ್ಬರು ಭಾರತ ಮತ್ತು ಆಸ್ಟ್ರೇಲಿಯಾದ ಪ್ರಬಲ ನಾಯಕರು, ಜೊತೆಗೆ ಇಬ್ಬರು ಎರಡು ಐಸಿಸಿ ವಿಶ್ವಕಪ್ ಅನ್ನು ಗೆದ್ದ ನಾಯಕರು. ಹೀಗಾಗಿ ಈ ಇಬ್ಬರ ನಡುವೆ ಸ್ಪರ್ಧೆ ಏರ್ಪಡುವುದು ಸಾಮಾನ್ಯ. ಆದರೆ ಈ ಇಬ್ಬರ ನಡುವೆ ಅಫ್ರಿದಿ ಅವರು ಧೋನಿಯನ್ನೇ ಶ್ರೇಷ್ಠ ನಾಯಕ ಎಂದಿದ್ದಾರೆ.

    ಅಫ್ರಿದಿ ಅವರು ಬುಧವಾರ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ಓರ್ವ ಅಭಿಮಾನಿ ನಿಮ್ಮ ಪ್ರಕಾರ ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಈ ಇಬ್ಬರಲ್ಲಿ ಯಾರು ಉತ್ತಮ ನಾಯಕರು ಮತ್ತು ಯಾಕೆ ಎಂದು ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿರುವ ಶಾಹಿದ್ ಅಫ್ರಿದಿ, ನಾನು ಇದರಲ್ಲಿ ಪಾಂಟಿಂಗ್‍ಗಿಂತ ಧೋನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತೇನೆ. ಏಕೆಂದರೆ ಧೋನಿ ಯುವ ಆಟಗಾರರನ್ನು ಇಟ್ಟುಕೊಂಡು ಉತ್ತಮ ತಂಡವನ್ನು ಕಟ್ಟಿದ್ದಾರೆ ಎಂದಿದ್ದಾರೆ. ಇದನ್ನು ಓದಿ: ಧೋನಿ ಟ್ರೋಫಿಗಳನ್ನು ಗೆದ್ದಿರಬಹುದು, ಕಷ್ಟದ ಕಾಲದಲ್ಲಿ ತಂಡ ಕಟ್ಟಿದ್ದು ದಾದಾ: ಪಾರ್ಥಿವ್

    ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನದ ಜನರಿಗೆ ಅಫ್ರಿದಿ ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಈಗ ಗುಣಮುಖರಾಗಿರುವ ಅಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಈಗ ಅಫ್ರಿದಿ ವಿವಿಯನ್ ರಿಚಡ್ರ್ಸ್ ಅವರನ್ನು ತಮ್ಮ ನೆಚ್ಚಿನ ಬ್ಯಾಟ್ಸ್‍ಮನ್ ಮತ್ತು ಅಬ್ದುಲ್ ಖಾದಿರ್ ಅವರ ಸಾರ್ವಕಾಲಿಕ ನೆಚ್ಚಿನ ಸ್ಪಿನ್ನರ್ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಧೋನಿಯವರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. 2007ರ ಚೊಚ್ಚಲ ಟಿ-20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ಅವರ ನಾಯಕ್ವದಲ್ಲಿ ಗೆದ್ದಿತ್ತು. ಈ ಕಾರಣದಿಂದ ಧೋನಿಯವರನ್ನು ಬೆಸ್ಟ್ ನಾಯಕ ಎನ್ನಲಾಗುತ್ತದೆ. ಜೊತೆಗೆ ರಿಕಿ ಪಾಂಟಿಂಗ್ ಅವರ ನಾಯಕ್ವದಲ್ಲಿ ಆಸ್ಟ್ರೇಲಿಯಾ ಕೂಡ 2003 ಮತ್ತು 2007ರ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ.