Tag: ಕೌನ್ಸೆಲಿಂಗ್

  • NEET-PG 2021 – ಕೇವಲ 1,456 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲು ಸಾಧ್ಯವಿಲ್ಲ: ಸುಪ್ರೀಂ

    NEET-PG 2021 – ಕೇವಲ 1,456 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲು ಸಾಧ್ಯವಿಲ್ಲ: ಸುಪ್ರೀಂ

    ನವದೆಹಲಿ: NEET-PG 2021ರ ಕೋಟಾದಲ್ಲಿ ಖಾಲಿ ಇರುವ ವೈದ್ಯಕೀಯ ಸೀಟುಗಳಿಗೆ ಹೊಸ ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈಗ ಅವಕಾಶ ನೀಡುವುದು ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

    40,000 ಸ್ನಾತಕೋತ್ತರ ಸೀಟುಗಳು ಪೈಕಿ NEET-PG 2021ರ ಕೋಟಾದಲ್ಲಿ 1,456 ಸೀಟಗಳು ಖಾಲಿ ಉಳಿದಿದ್ದು ಇವುಗಳ ಭರ್ತಿಗೆ ವಿಶೇಷ ಕೌನ್ಸೆಲಿಂಗ್ ನಡೆಸಲು ಅನುಮತಿ ನೀಡಬೇಕು ಎಂದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾ. ಎಂ.ಆರ್ ಶಾ ಮತ್ತು ನ್ಯಾ. ಅನಿರುದ್ಧ ಬೋಸ್ ಅವರ ಪೀಠ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

    ಈ ಸಂಬಂಧ ಇಂದು ಆದೇಶ ನೀಡಿದ ಕೋರ್ಟ್, ಈಗಾಗಲೇ 8-9 ಸುತ್ತಿನ ಕೌನ್ಸೆಲಿಂಗ್ ನಡೆಸಲಾಗಿದ್ದು, ಹೊಸದಾಗಿ ಕೌನ್ಸೆಲಿಂಗ್ ನಡೆಸುವುದು ಸರಿಯಲ್ಲ. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ ಎಂದು ಹೇಳಿದೆ.

    ಈ ಹಿಂದೆ NEET-PG 2021ರ ಕೋಟಾದಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಕೌನ್ಸೆಲಿಂಗ್ ನಡೆಸಿ ಭರ್ತಿ ಮಾಡಲಾಗಿತ್ತು. ಈ ನಡುವೆ ವಿದ್ಯಾರ್ಥಿಗಳು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದುಕೊಂಡಾಗ 1,456 ಸೀಟುಗಳು ಖಾಲಿ ಇರುವುದು ತಿಳಿದು ಬಂದಿತ್ತು. ಖಾಸಗಿ ಕಾಲೇಜುಗಳು ಸ್ವಹಿತಾಸಕ್ತಿಗಾಗಿ ಸೀಟುಗಳನ್ನು ಖಾಲಿ ಉಳಿಸಿಕೊಂಡಿವೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ಪ್ರಕರಣ ಪ್ರತಿವಾದಿಯಾಗಿ ವಾದ ಮಂಡಿಸಿದ್ದ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಮನವಿಯನ್ನು ವಿರೋಧಿಸಿತು. ಕೌನ್ಸೆಲಿಂಗ್‌ನ ಸಾಫ್ಟ್‌ವೇರ್ ಮುಚ್ಚಿದೆ, ವಿದ್ಯಾರ್ಥಿಗಳ ಠೇವಣಿ ಹಣವನ್ನು ವಾಪಸ್ ಮಾಡಲಾಗುತ್ತಿದ್ದು ಈ ಹಂತದಲ್ಲಿ ಮುಂದಿನ ಸುತ್ತುಗಳಲ್ಲಿ ಸೀಟುಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ, ಇದು ಮುಂದಿನ ಪ್ರಕ್ರಿಯೆಗಳಿಗೆ ತೊಂದರೆ ಮಾಡಲಿದೆ ಎಂದು ಅಫಿಡವಿಟ್ ಸಲ್ಲಿಸಿತು.

  • ಸಿಇಟಿ ಕೌನ್ಸೆಲಿಂಗ್- ಜ.15ರವರೆಗೆ ಕಾಲಾವಕಾಶ ಕೋರಿ ಎಐಸಿಟಿಇಗೆ ಡಿಸಿಎಂ ಪತ್ರ

    ಸಿಇಟಿ ಕೌನ್ಸೆಲಿಂಗ್- ಜ.15ರವರೆಗೆ ಕಾಲಾವಕಾಶ ಕೋರಿ ಎಐಸಿಟಿಇಗೆ ಡಿಸಿಎಂ ಪತ್ರ

    ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಖಾಲಿ ಇರುವ ಸೀಟ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮಾಡುವ ಅಗತ್ಯ ಇದ್ದು, ಜನವರಿ 15ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಉನ್ನತ ಶಿಕ್ಷಣ ಇಲಾಖೆಯು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷರಿಗೆ ಪತ್ರ ಬರೆದಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಉಳಿದಿರುವ ವೃತ್ತಿಪರ ಕೋರ್ಸ್ ಗಳ ಸೀಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಸಲ, ಕೊನೆಯದಾಗಿ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದರ ಜೊತೆಗೆ ಕರ್ನಾಟಕ ಅನುದಾನರಹಿತ ಖಾಸಗಿ ಶೈಕ್ಷಣಿಕ ಕಾಲೇಜುಗಳ ಸಂಸ್ಥೆ (ಕೆಯುಪಿಇಸಿಎ) ಕೂಡ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ 15ರವರೆಗೆ ಕಾಲಾವಕಾಶ ವಿಸ್ತರಿಸಲು ಕೋರಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪತ್ರ ಬರೆಯಲಾಗಿದೆ ಎಂದು ವಿವರಿಸಿದ್ದಾರೆ.

    ಈ ಹಿಂದಿನ ಅನುಮತಿಯ ಪ್ರಕಾರ ವೃತ್ತಿಪರ ಕೋರ್ಸ್ ಗೆ ಪ್ರವೇಶ ಪಡೆಯಲು ಡಿ.31 ಕೊನೇಯ ದಿನವಾಗಿದೆ. ಆದರೆ ಯುಜಿ ಸಿಇಟಿ ಮಾಪ್ ಅಪ್ ಸುತ್ತಿನಲ್ಲಿ ಇಂಜಿನಿಯರಿಂಗ್ ಸೀಟ್ ಪಡೆದಿದ್ದ ಕೆಲ ವಿದ್ಯಾರ್ಥಿಗಳು, ಸೀಟ್ ಹಿಂಪಡೆದು ಶುಲ್ಕ ಮರುಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಸೋಮವಾರ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಇಂಜಿನಿಯರಿಂಗ್ ಬದಲು ಆಯುಷ್, ಬಿಎಸ್ಸಿ, ಬಿ.ಕಾಂ. ಅಥವಾ ಇನ್ನಿತರ ಕೋರ್ಸ್ ಓದಲು ಇಚ್ಛಿಸುತ್ತೇವೆ. ಆಯುಷ್ ಕೋರ್ಸ್ ಗಳಿಗೆ ಇನ್ನೂ ಕೌನ್ಸೆಲಿಂಗ್ ನಡೆಸಿಲ್ಲ. ಆದ್ದರಿಂದ ಇಂಜಿನಿಯರಿಂಗ್ ಸೀಟ್ ಹಿಂದಕ್ಕೆ ಪಡೆದರೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದರು.

  • ಪತ್ನಿಗೆ ಮದ್ಯದ ಚಟ ಕಲಿಸಲು ಕೌನ್ಸಿಲಿಂಗ್‍ಗೆ ಕರ್ಕೊಂಡು ಹೋದ ಪತಿ

    ಪತ್ನಿಗೆ ಮದ್ಯದ ಚಟ ಕಲಿಸಲು ಕೌನ್ಸಿಲಿಂಗ್‍ಗೆ ಕರ್ಕೊಂಡು ಹೋದ ಪತಿ

    ಭೋಪಾಲ್: ಸಾಮಾನ್ಯವಾಗಿ ಪತಿ ಮತ್ತು ಪತ್ನಿ ಜಗಳ ಮಾಡಿಕೊಂಡರೆ ಅಥವಾ ವಿಚ್ಛೇದನಕ್ಕೆ ಮುಂದಾಗ ದಂಪತಿ ಇಬ್ಬರು ಕೌನ್ಸಿಲಿಂಗ್ ಹೋಗುತ್ತಾರೆ. ಆದರೆ ಇಲ್ಲೊಬ್ಬ ಪತಿ ತನ್ನ ಪತ್ನಿ ಮದ್ಯಪಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಕೌನ್ಸಿಲಿಂಗ್ ಕರೆದುಕೊಂಡು ಹೋಗಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪತಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಕುಟುಂಬದಲ್ಲಿ ತಾಯಿ, ತಂದೆ, ಒಡಹುಟ್ಟಿದವರು, ಚಿಕ್ಕಮ್ಮ ಮತ್ತು ಸಂಬಂಧಿಕರು ಸೇರಿದಂತೆ ಎಲ್ಲರೂ ಔತಣ ಕೂಟ, ಪಾರ್ಟಿಗಳಲ್ಲಿ ಮದ್ಯಪಾನ ಮಾಡುತ್ತಾರೆ. ಪತ್ನಿ ಮದುವೆಯಾದ ಆರಂಭದ ದಿನದಿಂದಲೂ ಮದ್ಯದಿಂದ ದೂರವಿದ್ದಳು. ಪತಿಗೂ ಆಕೆಗೆ ಕುಡಿಯದಿದ್ದರಿಂದ ಬೇಸರವೇನು ಆಗಿರಲಿಲ್ಲ. ಆದರೆ ಕಾಲಕಳೆದಂತೆ ನಿಧಾನವಾಗಿ ಕುಡಿ ಎಂದು ಕುಟುಂಬದ ಸದಸ್ಯರು ಆಕೆಗೆ ಒತ್ತಾಯಿಸಿದ್ದಾರೆ. ಆಗ ಪತ್ನಿ ಕುಡಿಯಲು ನಿರಾಕರಿಸಿದ್ದಾಳೆ. ಇದರಿಂದ ಅವರಿಬ್ಬರ ಮದ್ಯೆ ಜಗಳ ಉಂಟಾಗಿದೆ ಎಂದು ಕೌನ್ಸೆಲರ್ ಶೈಲ್ ಅವಸ್ತಿ ಹೇಳಿದ್ದಾರೆ.

    ಈ ದಂಪತಿ ಹೊಸದಾಗಿ ಮದುವೆಯಾದ ಜೋಡಿಯೇನು ಅಲ್ಲ. ಇವರಿಗೆ ಮೂವರು ಮಕ್ಕಳಿದ್ದು, ಮಕ್ಕಳಿಗೆ 9, 6 ಮತ್ತು 4 ವರ್ಷ ವಯಸ್ಸಾಗಿದೆ. ಮದುವೆಯಾದ ಕೆಲವು ತಿಂಗಳಲ್ಲೇ ಇಬ್ಬರ ನಡುವೆ ಮದ್ಯಪಾನ ಮಾಡುವುದರ ಬಗ್ಗೆ ಜಗಳ ಶುರುವಾಗಿತ್ತು. ಆಗ ಪತ್ನಿ ಮಕ್ಕಳ ಸಮೇತ ತವರು ಮನೆಗೆ ಹೋಗುತ್ತಿದ್ದಳು. ಮಹಿಳೆ ಮದ್ಯ ಕುಡಿಯುವುದಿರಲಿ, ಅದನ್ನು ಕೈಯಲ್ಲೂ ಸಹಾ ಮುಟ್ಟುತ್ತಿರಲಿಲ್ಲ. ಯಾಕೆಂದರೆ ಆಕೆಯ ಮನೆಯಲ್ಲಿ ಯಾರು ಕೂಡ ಮದ್ಯ ಸೇವನೆ ಮಾಡುತ್ತಿರಲಿಲ್ಲ. ಹೀಗಾಗಿ ಆಕೆಗೆ ಮದ್ಯಪಾನ ಮಾಡುವ ಅಭ್ಯಾಸವಿರಲಿಲ್ಲ.

    ಇತ್ತ ಪತಿಯ ಮನೆಯಲ್ಲಿ ಮೊದಲಿನಿಂದಲೂ ಮದ್ಯಪಾನ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಇದನ್ನು ತಿಳಿದು ಪತ್ನಿಯೂ ಸಹ ಪತಿಗೆ ಕುಡಿಯಬೇಡಿ ಎಂದು ಹೇಳಿರಲಿಲ್ಲ. ಆದರೆ ಮನೆಯಲ್ಲಿ ಅತ್ತೆ-ಮಾವ, ಸಂಬಂಧಿಕರು ಮಾತ್ರ ಆಕೆಗೆ ಪ್ರತಿದಿನ ಮದ್ಯಪಾನ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೂ ಮಹಿಳೆ ಮದ್ಯಪಾನ ಮಾಡುತ್ತಿರಲಿಲ್ಲ. ಆಕೆಗೆ ಮದ್ಯಪಾನ ಮಾಡುವುದು ಇಷ್ಟವಿರಲಿಲ್ಲ. ಜೊತೆಗೆ ಆಕೆಯ ಮಕ್ಕಳು ಅಮ್ಮ ಮದ್ಯಪಾನ ಮಾಡುತ್ತಾಳೆ ಎಂದು ಭಾವಿಸುವುದು ಇಷ್ಟವಿರಲಿಲ್ಲ. ಹೀಗಾಗಿ ಆಕೆ ಕುಡಿಯುವುದನ್ನು ನಿರಾಕರಿಸುತ್ತಿದ್ದಳು.

    ಕೊನೆಗೆ ಜಗಳ ವಿಕೋಪಕ್ಕೆ ಹೋದಾಗ ಪತಿ ಮದ್ಯಪಾನ ಅಭ್ಯಾಸ ಮಾಡಿಕೊಳ್ಳುವಂತೆ ಪತಿಯನ್ನು ಕೌನ್ಸಿಲಿಂಗ್‍ಗೆ ಕರೆದುಕೊಂಡು ಬಂದಿದ್ದನು. ಆಗ ನಾವು ಮಹಿಳೆ ಇಚ್ಛೆಗೆ ವಿರುದ್ಧವಾಗಿ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸುವ ಪ್ರಯತ್ನ ಮಾಡಬಾರದು ಎಂದು ಪತಿಗೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ಅವಸ್ತಿ ತಿಳಿಸಿದ್ದಾರೆ.