Tag: ಕೌಟುಂಬಿಕ ಜಗಳ

  • ಹೆಬ್ರಿ ಬಸ್ ನಿಲ್ದಾಣದಲ್ಲಿ ಫ್ಯಾಮಿಲಿ ಫೈಟ್- ಬಟ್ಟೆ ಹರಿದುಕೊಂಡ ಸಂಬಂಧಿಕರು

    ಹೆಬ್ರಿ ಬಸ್ ನಿಲ್ದಾಣದಲ್ಲಿ ಫ್ಯಾಮಿಲಿ ಫೈಟ್- ಬಟ್ಟೆ ಹರಿದುಕೊಂಡ ಸಂಬಂಧಿಕರು

    ಉಡುಪಿ: ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಿದ್ದ ಕೌಟುಂಬಿಕ ಜಗಳ ಬೀದಿಗೆ ಬಂದಿದ್ದು, ಉಡುಪಿ ಜಿಲ್ಲೆ ಹೆಬ್ರಿ ಪೇಟೆಯಲ್ಲಿ ಒಂದೇ ಕುಟುಂಬದ ಸಂಬಂಧಿಗಳು ಬಟ್ಟೆ ಹರಿದುಕೊಂಡು ಜಗಳ ಕಾದಿದ್ದಾರೆ.

    ಹೆಬ್ರಿ ಬಸ್ ಸ್ಟ್ಯಾಂಡ್ ಸಮೀಪ ನಡೆದ ಫ್ಯಾಮಿಲಿ ಡ್ರಾಮ ಈಗ ಜಗಜ್ಜಾಹೀರಾಗಿದೆ. ಮೊಬೈಲ್‍ನಲ್ಲಿ ಮೆಸೇಜ್ ಕಳುಹಿಸುವ ವಿಚಾರಕ್ಕೆ ಆರಂಭವಾದ ಜಗಳ ಕುಟುಂಬದ ಸದಸ್ಯರ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಆರಂಭದಲ್ಲಿ ಈ ಹೈಡ್ರಾಮಾವನ್ನು ಸುತ್ತಮುತ್ತಲಿನ ಜನ ನಿಂತು ನೋಡಿದರೆ ಹೊಡೆದಾಟ ಆರಂಭವಾಗಿ ಯುವಕನ ಅಂಗಿ ಹರಿಯುತ್ತಿದ್ದಂತೆ ಸಾರ್ವಜನಿಕರು ಕೂಡ ಮಧ್ಯಪ್ರವೇಶ ಮಾಡಿದ್ದಾರೆ.

    ಮಿಥುನ್ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು, ಜಗಳದಲ್ಲಿ ಖಾಸಗಿ ವಿಚಾರಗಳು ಪ್ರಸ್ತಾಪವಾಗಿದ್ದು ಅವಾಚ್ಯ ಪದಗಳಿಂದ ಎರಡು ಕಡೆಯವರು ಬೈದುಕೊಂಡಿದ್ದಾರೆ. ಸಾರ್ವಜನಿಕರು ಎಷ್ಟು ತಿಳಿ ಹೇಳಿದರೂ ಮಾತಿನ ಚಕಮಕಿ ಮತ್ತು ಬೈಗುಳ ನಿಲ್ಲಲೇ ಇಲ್ಲ. ಸಾಮಾಜಿಕ ಹೋರಾಟಗಾರರು- ಕೆಲ ಸಂಘಟನೆಯ ಮುಖಂಡರು ಸ್ಥಳಕ್ಕೆ ಆಗಮಿಸಿದ ನಂತರ ಕುಟುಂಬದ ಸದಸ್ಯರ ನಡುವಿನ ಜಗಳ ಕೊಂಚ ಕಡಿಮೆಯಾಗಿದೆ. ಆಮೇಲೆ ರಾಜಿಯಾಗಿದೆ.

    ಒಂದೇ ಕುಟುಂಬದ ಬೀದಿರಂಪ ಸ್ಥಳೀಯರ ಮೊಬೈಲ್‍ನಲ್ಲಿ ನೆರೆಸಯಾಗಿದ್ದು ಸದ್ಯ ವಾಟ್ಸಪ್ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಬರುವ ಮೊದಲೇ ಗಲಾಟೆ ಮಾಡಿದವರು ಕಾಲ್ಕಿತ್ತಿದ್ದಾರೆ.

  • ನಡುರಸ್ತೆಯಲ್ಲಿ ಅತ್ತಿಗೆಗೆ ಕಾಲಿಂದ ಒದ್ದು ರಕ್ತ ಬರುವಂತೆ ಮೈದುನನಿಂದ ಹಲ್ಲೆ

    ನಡುರಸ್ತೆಯಲ್ಲಿ ಅತ್ತಿಗೆಗೆ ಕಾಲಿಂದ ಒದ್ದು ರಕ್ತ ಬರುವಂತೆ ಮೈದುನನಿಂದ ಹಲ್ಲೆ

    ಬೆಂಗಳೂರು: ಕೌಟುಂಬಿಕ ಗಲಾಟೆ ಹಿನ್ನೆಲೆಯಲ್ಲಿ ಮೈದುನನೊಬ್ಬ ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣ ಸಮೀಪ ನಡೆದಿದೆ.

    ರಾಜಮ್ಮ (40) ಹಲ್ಲೆಗೊಳಗಾದ ಮಹಿಳೆ. ಆನೇಕಲ್- ಹೊಸೂರು ರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಘಟನೆ ನಡೆದಿದ್ದು, ಮೈದುನ ನಾಗೇಶ್ ಅತ್ತಿಗೆ ರಾಜಮ್ಮ ತಲೆ, ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ಸ್ಥಳೀಯರು ನಾಗೇಶ್ ಮೇಲೆ ಹಲ್ಲೆ ನಡೆಸಿ ಆನೇಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕೌಟುಂಬಿಕ ಮನಸ್ತಾಪ ಹಲ್ಲೆ ನಡೆಸಲು ಕಾರಣ ಎನ್ನಲಾಗಿದ್ದು, ಹಲ್ಲೆಗೊಳಾಗಾದ ರಾಜಮ್ಮ ಹಾಗೂ ನಾಗೇಶ್ ಗೆ ಮನೆ ಖಾಲಿ ಮಾಡುವ ವಿಚಾರವಾಗಿ ಈ ಹಿಂದೆ ಮನಸ್ತಾಪ ಇತ್ತು. ಕಳೆದ ಒಂದು ವಾರದ ಹಿಂದಷ್ಟೇ ನಾಗೇಶ್ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದ. ಈ ನಡುವೆ ಕಳೆದ ಮೂರು ದಿನಗಳ ಹಿಂದೆ ರಾಜಮ್ಮರನ್ನು ಬೈಕ್ ನಲ್ಲೆ ಕರೆತರುವಾಗ ಮಾತಿಗೆ ಮಾತು ಬೆಳೆದು ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಾನೆ. ನಂತರ ತೀವ್ರ ಗಾಯಗೊಂಡಿದ್ದ ರಾಜಮ್ಮನಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ.

    ಘಟನೆ ಕುರಿತು ಅನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೆಕ್ಷನ್ 307 ಅಡಿ ದೂರು ದಾಖಲಾಗಿದ್ದು, ನಾಗೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=_p-bfohP2uo