ಚಿಕ್ಕಬಳ್ಳಾಪುರ: ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆಯೋದು ಸಾಮಾನ್ಯ ಆದರೆ ಎರಡು ಕೋತಿಗಳ ಗುಂಪು ಗ್ಯಾಂಗ್ ವಾರ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಂತಾಮಣಿ ನಗರದ ಎನ್.ಆರ್ ಬಡಾವಣೆ ಬಳಿ ಎರಡು ಕೋತಿಗಳ ಗುಂಪಿನ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಗಲಾಟೆ ನಡೆದಿದೆ. ಕೋತಿಗಳ ಗುಂಪುಗಳು ನಾನಾ, ನೀನಾ ಅಂತ ಕಾದಾಡಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೋತಿಗಳ ಗುಂಪಿನ ಗ್ಯಾಂಗ್ ವಾರ್ ವಿಡಿಯೋವನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ವಾನರ ಕಾದಾಟ ಬೆಚ್ಚಿಬೀಳಿಸುವಂತಿದೆ.
ಅದ್ಯಾವ ಕಾರಣಕ್ಕೆ ಈ ಕೋತಿಗಳು ಕಾದಾಡಿದವೋ ಗೊತ್ತಿಲ್ಲ. ಆದರೆ ಮೈ ಕೈ ಗಾಯ ಆಗಿ ರಕ್ತ ಬರೋವವರೆಗೂ ಈ ಕೋತಿಗಳು ಬಡಿದಾಡಿಕೊಂಡಿವೆ. ಕೊನೆಗೆ ಸಾರ್ವಜನಿಕರು ಕೋತಿಗಳನ್ನ ಚದುರಿಸಿ ಕಾಳಗಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಿದರೂ ಕಾದಾಟ ನಿಲ್ಲಿಸದ ಕೋತಿಗಳು ರಸ್ತೆ ಬದಿಯ ಅಂಗಡಿಗಳ ಓಳ ಭಾಗಕ್ಕೂ ನುಗ್ಗಿ ಕಿತ್ತಾಡಿವೆ.
ಚಿಂತಾಮಣಿ ನಗರದಲ್ಲಿ ಕೋತಿಗಳ ಉಪಟಳ ಮೀತಿ ಮೀರಿದ್ದು, ಸಾರ್ವಜನಿಕರು ಕೋತಿಗಳ ಕಾಟಕ್ಕೆ ಬ್ರೇಕ್ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು: ಕೋತಿಗಳ ಕೂಗು ಭಗವಂತನಿಗೂ ಕೇಳಿಸಿದೆ. ಹಣ್ಣು ಕೊಟ್ಟವರಿಗೆ ಖುಷಿ ಪಡಿಸಿ, ಕೊಡದಿದ್ದವರಿಗೆ ಹೆದರಿಸುತ್ತಿದ್ದ ಕೋತಿಗಳ ಮುಖದಲ್ಲಿ ಚೈತನ್ಯವೇ ಇರಲಿಲ್ಲ. ನೆಲದ ಮೇಲಿದ್ದರೂ ನೀರು, ಮರದ ಮೇಲಿದ್ದರೂ ನೀರು. ತಿನ್ನೋಕೂ ಆಹಾರವಿಲ್ಲದೆ ಆಂಜನೇಯನ ಅವತಾರ ಪುರುಷರು ಸೊರಗಿ ಹೋಗಿದ್ದವು. ಆದರೆ ಸರ್ಕಾರದ ಒಂದೇ ಒಂದು ಆದೇಶ ಇದೀಗ ಕೋತಿಗಳಿಗೆ ಜೀವ ತುಂಬಿದಂತಾಗಿದೆ.
ಹೌದು. ವರುಣನ ಅಬ್ಬರಕ್ಕೆ ಇಡೀ ಮಲೆನಾಡೇ ಜಲಾವೃತಗೊಂಡಿತ್ತು. ಚಾರ್ಮಾಡಿ ರಸ್ತೆಯ 23 ಕಿ.ಮೀ. ವ್ಯಾಪ್ತಿಯಲ್ಲಿ 40 ಕಡೆ ಗುಡ್ಡ ಕುಸಿದು, ಎರಡು ತಿಂಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಮಾರ್ಗದಲ್ಲಿ ಪ್ರವಾಸಿಗರಿಂದಲೇ ಬದುಕಿದ್ದ ಕೋತಿಗಳ ಸಂತತಿ ತಿನ್ನೋಕೆ ಆಹಾರವಿಲ್ಲದೇ ಬರೀ ನೀರು ಕುಡಿದು ಬದುಕುತ್ತಿದ್ದವು. ಅವುಗಳ ಹಸಿವಿನ ದಾಹ ಆಂಜನೇಯನಿಗೂ ಮುಟ್ಟಿತ್ತು ಅನಿಸುತ್ತಿದೆ. ಯಾಕಂದರೆ ಇದೀಗ ಜಿಲ್ಲಾಡಳಿತ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ. ಇದರಿಂದ ಹೊಟ್ಟೆ ತುಂಬಾ ಊಟ ಸಿಗುತ್ತದೆಂಬ ಒಂದೇ ಕಾರಣಕ್ಕೆ ಮನುಷ್ಯರಿಗಿಂತ ಮಂಗಗಳು ಡಬಲ್ ಖುಷಿಯಾಗಿವೆ.
ಅಣ್ಣಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ಚಾರ್ಮಾಡಿ ಘಾಟ್ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳಿವೆ. ಅಲ್ಲೆಲ್ಲ ನೂರಾರು ಪ್ರವಾಸಿಗರು ಇರುತ್ತಾರೆ. ಪ್ರವಾಸಿಗರ ಗಾಡಿಗಳು ನಿಂತ ಕೂಡಲೇ ಕೋತಿಗಳ ಹಿಂಡು ಮಕ್ಕಳಂತೆ ಓಡೋಡಿ ಬರುತ್ತಿದ್ದವು. ಅಲ್ಲದೇ ಬಂದು ಏನಾದರೂ ಹಾಕುತ್ತಾರಾ ಎಂದು ಕೈಯನ್ನೇ ನೋಡುತ್ತಿದ್ದವು. ಪ್ರವಾಸಿಗರು ಬಾಳೆಹಣ್ಣು, ಬಿಸ್ಕತ್ ಮೊದಲಾದವುಗಳನ್ನು ಹಾಕುತ್ತಿದ್ದರು. ಇತ್ತ ಮಕ್ಕಳಿಗೆ ಕೋತಿಗಳು ಪುಕ್ಕಟೆ ಮನರಂಜನೆ ನೀಡುತ್ತಿದ್ದವು. ಆದರೆ ಈ ಬಾರಿ ಒಂದೇ ದಿನ ಸುರಿದ ಭಾರೀ ಮಳೆಗೆ ಇಡೀ ಚಾರ್ಮಾಡಿಯೇ ಅಲ್ಲೋಲ-ಕಲ್ಲೋಲವಾಗಿತ್ತು. 40 ಕಡೆ ಗುಡ್ಡ ಕುಸಿದಿದ್ದರಿಂದ ಸಂಚಾರ ಬಂದ್ ಆಗಿತ್ತು. ಬೇರೆಡೆ ಹೋಗಲಾಗದೆ, ಊಟ ಸಿಗದೆ ಕೋತಿಗಳ ಸಂತತಿಯೇ ಮಮ್ಮಲ ಮರುಗಿತ್ತು. ಸದ್ಯ ಸರ್ಕಾರ ಚಾರ್ಮಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ಕೋತಿಗಳಲ್ಲಿ ಬದುಕುವ ಆಸೆ ಮೂಡುವಂತಾಗಿದೆ.
ಒಟ್ಟಾರೆ, ರಿಪೇರಿಯೇ ಆಗದಂತ ಸ್ಥಿತಿಯಲ್ಲಿದ್ದ ಚಾರ್ಮಾಡಿಯನ್ನ 300 ಕೋಟಿ ವ್ಯಯ ಮಾಡಿ ದುರಸ್ಥಿಗೆ ಸರ್ಕಾರ ಮುಂದಾಗಿದೆ. ಚಾರ್ಮಾಡಿ ಘಾಟ್ ಮೊದಲಿನಂತಿಲ್ಲ. ದುರಸ್ಥಿ ಮಾಡುತ್ತಿರೋ ಸರ್ಕಾರ ಇದೇ ರೀತಿ ಲಘು ವಾಹನಗಳಿಗಷ್ಟೇ ಅನುಮತಿ ನೀಡಿದರೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಚಾರ್ಮಾಡಿ ಘಾಟ್ ನೆನಪಾಗಷ್ಟೆ ಉಳಿಯೋದ್ರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಪ್ರಕಟಿಸಿದ್ದಾರೆ. ಬಿರುಗಾಳಿ ಸಹಿತ ಭಾರೀ ಮಳಯಾದ ಪರಿಣಾಮ ಹಾಳಾದ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡಲು ಸುಮಾರು 300 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಷರತ್ತು ಏನು?
ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ.
ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಗ್ರಾಮಸ್ಥರು ಕುಡಿಯಲು ಈ ಟ್ಯಾಂಕಿನ ನೀರನ್ನೇ ಉಪಯೋಗಿಸುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಈ ನೀರು ಬಳಸಿದ ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಆದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ನೀರಿನ ಟ್ಯಾಂಕಿನಲ್ಲಿ ಇಣುಕಿದಾಗ ಸತ್ಯಾಂಶ ತಿಳಿದಿದೆ.
ಟ್ಯಾಂಕಿನಲ್ಲಿ ಕೆಲವು ಕೋತಿಗಳು ಸಾವನ್ನಪ್ಪಿದ್ದವು, ಇನ್ನೂ ಕೆಲವು ಟ್ಯಾಂಕಿನಿಂದ ಮೇಲೆ ಬರಲಾಗದೆ ಒದ್ದಾಡುತ್ತಿದ್ದವು. ಇದನ್ನು ಕಂಡ ಗ್ರಾಮಸ್ಥರು ತಾವೇ ಖುದ್ದಾಗಿ ಟ್ಯಾಂಕಿನಲ್ಲಿ ಇಳಿದು ಬದುಕುಳಿದಿದ್ದ ಕೋತಿಗಳನ್ನು ರಕ್ಷಿಸಿದ್ದಾರೆ. ಹಾಗೆಯೇ ಸಾವನ್ನಪ್ಪಿದ್ದ ಕೋತಿಗಳ ಮೃತದೇಹಗಳನ್ನು ಹೊರ ತೆಗೆದು ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾರೆ.
ಮಂಡ್ಯ: ಮಳವಳ್ಳಿ ತಾಲೂಕಿನ ಬಸವನ ಬೆಟ್ಟದಲ್ಲಿ ಬಿಸಿಲಿನ ತಾಪ ತಾಳಲಾರದೆ ಕೋತಿಗಳು ನೀರಿನ ತೊಟ್ಟಿಗಿಳಿದು ಸ್ನಾನ ಮಾಡುತ್ತ ಆಟವಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಬಸವನ ಬೆಟ್ಟದ ಬಳಿಯಿರುವ ಹೆಬ್ಬೆಟ್ಟೇ ಬಸವೇಶ್ವರಸ್ವಾಮಿ ದೇವಸ್ಥಾನದ ಬಳಿ ಕೋತಿಗಳು ಸ್ವಿಮ್ಮಿಂಗ್ ಕಂಡು ಬಂದಿದೆ. ಪ್ರವಾಸಿಗರೊಬ್ಬರು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸುಮಾರು 10-15 ಕೋತಿಗಳು ನೀರಿನ ತೊಟ್ಟಿ ಸುತ್ತಾ ಕುಳಿತಿದ್ದು, ಒಂದರಂದೆ ಒಂದು ತೊಟ್ಟಿಗೆ ಮುಳುಗಿ ಏಳುತ್ತಿವೆ. ಕೆಲವು ಕೋತಿಗಳು ತೊಟ್ಟಿಯಲ್ಲಿಯೇ ಸ್ವಿಮ್ಮಿಂಗ್ ಮಾಡುತ್ತಿವೆ. ಇನ್ನೂ ಜೋಡಿಯಾಗಿಯೂ ಮುಳುಗಿ-ಮುಳುಗಿ ಎದ್ದೇಳುತ್ತಿವೆ. ಬಿಸಿಲಿನ ತಾಪಕ್ಕೆ ಕೋತಿಗಳು ನೀರನ್ನು ಕಂಡ ಸಂತಸಕ್ಕೆ ತೊಟ್ಟಿಯಲ್ಲಿ ಮುಳುಗಿ ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮಳೆ ಇಲ್ಲದೆ ಕಾಡು ಒಣಗಿದ್ದು, ಹಲವಾರು ಮರಗಳು ಎಲೆಗಳು ಉದುರಿ ನಿಂತಿವೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಂಗಗಳು ಮತ್ತು ಕಾಡು ಪ್ರಾಣಿಗಳು ಹಾಹಾಕಾರ ಪಡುತ್ತಿವೆ. ಈ ವೇಳೆ ದೇವಾಲಯದ ಸಮೀಪವಿರುವ ಕಾಡಿನಲ್ಲಿ ವಾಸವಿರುವ ಮಂಗಗಳು ನೀರಿನ ತೊಟ್ಟಿಗೆ ಜಿಗಿದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದಾವೆ ಎಂದು ಪ್ರವಾಸಿಗ ಲೋಕೇಶ್ ಹೇಳಿದ್ದಾರೆ.
ಕೋಲಾರ: ಮೂವತ್ತಕ್ಕೂ ಹೆಚ್ಚು ಕೋತಿಗಳನ್ನು ದುಷ್ಕರ್ಮಿಗಳು ಕೊಂದು ಬೆಟ್ಟದಲ್ಲಿ ತಂದು ಬಿಸಾಡಿರುವ ದಾರುಣ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಬಳಿಯ ಯರ್ರಕೊಂಡ ಬೆಟ್ಟದಲ್ಲಿ ನಡೆದಿದೆ.
ಬುಧವಾರ ರಾತ್ರಿ ಯಾರೋ ದುಷ್ಕರ್ಮಿಗಳು ಕೋತಿಗಳನ್ನು ಕೊಂದು, ಮೂಟೆಗಳಲ್ಲಿ ತುಂಬಿಕೊಂಡು ಬಂದು ಬಿಸಾಡಿ ಹೋಗಿದ್ದಾರೆ. ಇಂದು ಬೆಳಿಗ್ಗೆ ಸ್ಥಳೀಯರು ಬೆಟ್ಟದ ಕಡೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಹಾಗೂ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ಕೋತಿಗಳ ಸಾಮೂಹಿಕ ಅಂತ್ಯಸಂಸ್ಕಾರ ಕಾರ್ಯವನ್ನು ಮಾಡಿದ್ದಾರೆ.
ಬಾಗಲಕೋಟೆ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಕೋತಿಗಳು ಎಂಟ್ರಿಕೊಟ್ಟು ಆಹಾರವನ್ನು ಸೇವಿಸಿದ ಪ್ರಸಂಗ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದಿದೆ.
ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಇಂದು ಕೂಡಲಸಂಗಮದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಸಂತ್ರಸ್ತರ ಭೂಮಿ ಬೆಲೆ ನಿಗದಿಗಾಗಿ ರೈತರ ಜೊತೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೋತಿಗಳು ರಾಜರೋಷವಾಗಿ ವೇದಿಕೆಯ ಮೇಲೆ ಸಚಿವರಿಗಾಗಿ ಇಟ್ಟಿದ್ದ ಬಿಸ್ಕೆಟ್ ಸಹಿತ ತಿನಿಸುಗಳನ್ನು ತೆಗೆದುಕೊಂಡು ಹೋಗಿವೆ. ಅಷ್ಟೇ ಅಲ್ಲದೇ ಸಭೆಯ ಬ್ಯಾನರ್ ಮೇಲೆಯೂ ಕುಳಿತು ಆಟವಾಡಿವೆ. ಸಭೆಯಲ್ಲಿದ್ದ ಸಿಬ್ಬಂದಿ ಕೋತಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.