Tag: ಕೋತಿಗಳು

  • ಛಾವಣಿಯಿಂದ 10ನೇ ತರಗತಿ ವಿದ್ಯಾರ್ಥಿನಿ ತಳ್ಳಿದ ಕೋತಿಗಳು – ಕೆಳಗೆ ಬಿದ್ದು ಬಾಲಕಿ ಸಾವು

    ಛಾವಣಿಯಿಂದ 10ನೇ ತರಗತಿ ವಿದ್ಯಾರ್ಥಿನಿ ತಳ್ಳಿದ ಕೋತಿಗಳು – ಕೆಳಗೆ ಬಿದ್ದು ಬಾಲಕಿ ಸಾವು

    ಪಾಟ್ನಾ: ಕೋತಿಗಳ ಗುಂಪೊಂದು ಛಾವಣಿಯಿಂದ ತಳ್ಳಿದ ಪರಿಣಾಮ ಬಿಹಾರದ ಸಿವಾನ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

    ಪ್ರಿಯಾ ಕುಮಾರಿ ಮೃತಪಟ್ಟ ಬಾಲಕಿ. ಈಕೆ ಛಾವಣಿ ಮೇಲೆ ಕುಳಿತು ಓದುತ್ತಿದ್ದಳು. ಈ ವೇಳೆ ಕೋತಿಗಳು ಆಕೆ ಮೇಲೆ ದಾಳಿ ಮಾಡಿವೆ. ಭಯಭೀತಳಾಗಿ ಕೋತಿಗಳಿಂದ ತಪ್ಪಿಸಿಕೊಳ್ಳಲು ಮುಂದಾದಳು. ಆಗ ಕೋತಿಗಳು ಆಕ್ರಮಣ ಮಾಡಿದವು.

    ಛಾವಣಿಯಿಂದ ಬಿದ್ದ ಬಾಲಕಿ ಗಂಭೀರ ಗಾಯಗೊಂಡಿದ್ದಳು. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿವೆ.

    ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಮುಂಬೈನ ಮಹಾಲಕ್ಷ್ಮಿ ಪ್ರದೇಶದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮತ್ತು ವಸತಿ ಸೊಸೈಟಿಯ ಮಗು, ಮಂಗಗಳ ದಾಳಿಯಿಂದ ಗಾಯಗೊಂಡಿದ್ದರು.

  • ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಛಾವಣಿಯಿಂದ ಬಿದ್ದು ಬಾಲಕಿ ಸಾವು

    ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಛಾವಣಿಯಿಂದ ಬಿದ್ದು ಬಾಲಕಿ ಸಾವು

    ಲಕ್ನೋ: ಕೋತಿಗಳ ಗುಂಪು ಅಟ್ಟಾಡಿಸಿಕೊಂಡು ಬಂದಾಗ, ಹೆದರಿ ತಪ್ಪಿಸಿಕೊಳ್ಳಲು ಯತ್ನಿಸಿ ಬಾಲಕಿಯೊಬ್ಬಳು ಛಾವಣಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾಗ್‌ಪತ್‌ ಜಿಲ್ಲೆಯಲ್ಲಿ ನಡೆದಿದೆ.

    ಸಿನೌಲಿ ಗ್ರಾಮದ ರಿಯಾ ಎಂಬ 13 ವರ್ಷದ ಬಾಲಕಿ ಬಾಗ್‌ಪತ್ ಜಿಲ್ಲೆಯ ಜೋತ್ವಾಲಿಯಲ್ಲಿರುವ ತನ್ನ ತಾಯಿಯ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಳು. ಭಾನುವಾರ ಟೆರೇಸ್‌ನಲ್ಲಿದ್ದ ವೇಳೆ ಆಕೆಯ ಮೇಲೆ ಮಂಗಗಳ ದಂಡು ಏಕಾಏಕಿ ಸುತ್ತುವರಿದು ದಾಳಿ ಮಾಡಿವೆ. ಇದರಿಂದ ಹೆದರಿದ ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿ ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ. ಛಾವಣಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುಟುಂಬಸ್ಥರು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದನ್ನೂ ಓದಿ: ತೈಲ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ – 19 ಮಂದಿ ಸಾವು

    ಘಟನೆ ನಡೆದ ಸಂದರ್ಭದಲ್ಲಿ ನಾನು ಮಲಗಿದ್ದೆ. ಎಚ್ಚರವಾಗಿ ಬಂದು ನೋಡಿದಾಗ ನಮ್ಮ ಹುಡುಗಿಯ ಶವ ಪತ್ತೆಯಾಗಿದೆ. ಕೋತಿಗಳು ದಾಳಿ ನಡೆಸಿದ್ದರಿಂದ ಆಕೆಯ ಮೈಮೇಲೆ ತೀವ್ರ ಗಾಯಗಳಾಗಿವೆ ಎಂದು ಬಾಲಕಿಯ ಮಾವ ಶೇಖರ್‌ ತಿಳಿಸಿದ್ದಾರೆ.

    ನನ್ನ ಪತ್ನಿ ಮೇಲೂ ಮಂಗಗಳು ದಾಳಿ ಮಾಡಿವೆ. ಆ ಪ್ರಾಣಿಗಳಿಂದ ನಿತ್ಯ ಭಯದಿಂದ ಬದುಕುತ್ತಿದ್ದೇವೆ. ನಮ್ಮ ಗ್ರಾಮದಿಂದ ಮಂಗಗಳು ದೂರ ಹೋದರೆ ಸಾಕು. ಇವುಗಳ ಕಾಟದಿಂದ ಜನರಿಗೆ ನೆಮ್ಮದಿ ಇಲ್ಲ ಎಂದು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಚಪ್ಪಲಿ ಇಟ್ಟಿದ್ದಕ್ಕೆ ದಂಪತಿಯಿಂದ ವ್ಯಕ್ತಿ ಕೊಲೆ

    ಕೋತಿಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ. ಮಂಗಗಳ ದಾಳಿಗೆ ತುತ್ತಾದ ಬಾಲಕಿ ಗಾಬರಿಯಿಂದ ಮೇಲ್ಛಾವಣಿಯಿಂದ ಬಿದ್ದಿದ್ದಾಳೆ. ಕೋತಿಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಿ ಎಂದು ನಾವು ಅನೇಕ ಬಾರಿ ಸರ್ಕಾರಿ ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಪರಿಹರಿಸಲು ಆಡಳಿತವು ಯಾವುದೇ ನಿರ್ದಿಷ್ಟ ಕ್ರಮವನ್ನು ತೆಗೆದುಕೊಳ್ಳದ ಕಾರಣ ನಮ್ಮ ಮನವಿಯು ನನೆಗುದಿಗೆ ಬಿದ್ದಿದೆ ಎಂದು ಗ್ರಾಮದ ನಿವಾಸಿ ಸುಭಾಷ್ ನಾಯ್ನ್ ಬೇಸರ ವ್ಯಕ್ತಪಡಿಸಿದ್ದಾರೆ.

  • ಕೋತಿಗಳ ಗ್ಯಾಂಗ್‍ನಿಂದ ಅಟ್ಯಾಕ್ – ಬಚಾವ್ ಆಗಲು ಹೋಗಿ ವ್ಯಕ್ತಿ ಸಾವು

    ಕೋತಿಗಳ ಗ್ಯಾಂಗ್‍ನಿಂದ ಅಟ್ಯಾಕ್ – ಬಚಾವ್ ಆಗಲು ಹೋಗಿ ವ್ಯಕ್ತಿ ಸಾವು

    ಲಕ್ನೋ: ಮಂಗಗಳ ದಾಳಿಗೆ ಒಳಗಾಗಿ 40 ವರ್ಷದ ವ್ಯಕ್ತಿಯೋರ್ವ ಮನೆಯ ಮೇಲ್ಛಾವಣಿಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್‍ನಲ್ಲಿ (Firozabad) ನಡೆದಿದೆ.

    ಮೃತ ದುರ್ದೈವಿಯನ್ನು ನೈಬಸ್ತಿಯ ನಿವಾಸಿ ಆಶಿಶ್ ಜೈನ್ ಎಂದು ಗುರುತಿಸಲಾಗಿದ್ದು, ಮನೆಯ ಎರಡನೇ ಮಹಡಿಯಲ್ಲಿ ಕೆಲವು ಕೆಲಸಗಳಿದ್ದರಿಂದ ಮೇಲಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿಯೇ ಕುಳಿತಿದ್ದ ಕೋತಿಗಳ ಗ್ಯಾಂಗ್ ಆಶಿಶ್ ಜೈನ್ ದಾಳಿ ನಡೆಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

    ಕೋತಿಗಳ ಹಿಂಡಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡುತ್ತಿದ್ದ ವೇಳೆ, ಎಡವಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭಿರವಾಗಿ ತಲೆಗೆ ಗಾಯಗೊಂಡ ಆಶಿಶ್ ಅವರನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಶಿಶ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಮಂಗಗಳನ್ನು ಹಿಡಿಯಲು ಹಲವು ಬಾರಿ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದರ್ಶ್ ನಗರ, ಹನುಮಾನ್ ಗಂಜ್, ನಾಯ್ ಬಸ್ತಿ, ಮಹಾವೀರ್ ನಗರ, ಸುಹಾಗ್ ನಗರ, ಕೋಟ್ಲಾ ಮೊಹಲ್ಲಾ, ಗಾಧಿಯಾ, ಚಂದ್‍ವಾರ್ ಗೇಟ್, ಜಲೇಸರ್ ರಸ್ತೆ, ಕೋಟ್ಲಾ ರಸ್ತೆ, ವಿಭಾವ್ ನಗರ ಸೇರಿದಂತೆ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆ ಹಣ್ಣು ನೀಡಿದ ಕಟೀಲ್

    ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆ ಹಣ್ಣು ನೀಡಿದ ಕಟೀಲ್

    ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಬಾಳೆಹಣ್ಣನ್ನು ನೀಡಿ ಹಸಿರ ಪರಿಸರದಲ್ಲಿ ಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ.

    ಲಾಕ್‍ಡೌನ್ ಪರಿಣಾಮ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ವಾಹನ ಸಂಚಾರವಿಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು, ಪ್ರಯಾಣಿಕರನ್ನೇ ನಂಬಿಕೊಂಡು ಬದುಕುತ್ತಿದ್ದ ಸಾವಿರಾರು ವಾನರ ಸೈನ್ ಆಹಾರಕ್ಕಾಗಿ ಪರದಾಟ ನಡೆಸುತ್ತಿತ್ತು. ಈ ವಾನರ ಸೈನ್ಯಕ್ಕೆ ನಳೀನ್ ಕುಮಾರ್ ಕಟೀಲ್ ಬಾಳೆಹಣ್ಣನ್ನು ನೀಡಿ ಹಸಿವನ್ನು ನೀಗಿಸಿದ್ದಾರೆ. ಇದನ್ನೂ ಓದಿ :15 ಅಡಿ ಉದ್ದದ ಬೃಹತ್ ಕಾಳಿಂಗ ಸೆರೆ

    ನಳೀನ್ ಕುಮಾರ್ ಕಟೀಲ್ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ, ಭಜರಂಗದಳದ ಕಾರ್ಯಕರ್ತರು ಚಾರ್ಮಾಡಿ ಘಾಟಿಯಲ್ಲಿ ಮಂಗಗಳಿಗೆ ಆಹಾರ ನೀಡುತ್ತಿದ್ದರು. ಇದನ್ನು ಗಮನಿಸಿದ ನಳೀನ್ ಕುಮಾರ್ ಕಟೀಲ್ ಗಾಡಿಯಿಂದ ಕೆಳಗೆ ಇಳಿದು ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾರ್ಯಕರ್ತರು ಹಾಗೂ ಮಂಗಗಳ ಜೊತೆ ಸಮಯ ಕಳೆದಿದ್ದಾರೆ.

    ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚರವಿಲ್ಲದೆ ಆಹಾರಕ್ಕಾಗಿ ಪರದಾಡುತ್ತಿದ್ದ ಮಂಗಗಳಿಗೆ ಭಜರಂಗದಳದ ಕಾರ್ಯಕರ್ತರು ನೂರು ಕೆ.ಜಿ. ಬಾಳೆಹಣ್ಣನ್ನು ತಂದು ನೀಡುತ್ತಿದ್ದರು. ಈ ವೇಳೆ ನಳೀನ್ ಕುಮಾರ್ ಕಟೀಲ್ ಕೂಡ ಮಂಗಗಳಿಗೆ ಬಾಳೆಹಣ್ಣನ್ನು ನೀಡುವ ಮೂಲಕ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸಿದ್ದಾರೆ.

  • ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು ಕೆಮ್ಮುತ್ತಿವೆ. ಇದೆಲ್ಲವನ್ನೂ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಗ್ರಾಮಸ್ಥರು ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೊರೊನಾ ಮಹಾಮಾರಿ ಒಕ್ಕರಿಸಿರುವ ಸಂದರ್ಭದಲ್ಲಿ ಕೋತಿಗಳು ಈ ರೀತಿ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.

    ಕೋಡುಗುರ್ಕಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಕೋತಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋತಿಗಳ ಹಾವ ಭಾವಗಳನ್ನ ಕಂಡ ಗ್ರಾಮಸ್ಥರು ಕೋತಿಗಳಿಗೂ ಕೊರೊನಾ ವೈರಸ್ ಹರಡಿದಿಯಾ ಎಂದು ಆತಂಕಗೊಂಡಿದ್ದಾರೆ. ಇದರ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

    ಗ್ರಾಮದಲ್ಲಿರುವ ನೂರಾರು ಕೋತಿಗಳಲ್ಲಿ ಕೆಲವೊಂದು ರೋಗ ಲಕ್ಷಣಗಳು ಗೋಚರವಾಗಿವೆ. ಇಲ್ಲಿರುವ ಹೆಚ್ಚಿನ ಸಂಖ್ಯೆಯ ಕೋತಿಗಳು ಕೆಮ್ಮುವುದು, ಎಲ್ಲಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುವುದು. ಜನರು ಏನಾದರೂ ಆಹಾರ ಕೊಟ್ಟರೂ ತಿನ್ನದೆ ಇರೋದು ಹೀಗೆ ವರ್ತಿಸುತ್ತಿರುವ ಕೋತಿಗಳು ರಾತ್ರಿಯೆಲ್ಲಾ ಕೆಮ್ಮುತ್ತಿರುತ್ತವಂತೆ.

    ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ನೆಮ್ಮದಿಯಿಂದಿರುವ ಜನರು, ಇದೀಗ ಕೋತಿಗಳ ರೋಗ ಲಕ್ಷಣ ಕಂಡು ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಏನಾದ್ರು ಕಾಣಿಸಿಕೊಂಡಿತಾ ಅಥವಾ ಕೊರೊನಾ ವೈರಸ್ಸೇ ಹಬ್ಬಿತಾ ಎಂಬ ಆಂತಂಕದಲ್ಲಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಪಿಡಿಓ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮಕ್ಕೆ ಬಂದಿರುವ ಅರಣ್ಯ ಇಲಾಖೆ, ಆರೋಗ್ಯ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಕೋತಿಗಳ ಪರಿಶೀಲನೆಯಲ್ಲಿ ತೊಡಗಿದೆ.

  • ಲಾಕ್‍ಡೌನ್ ಮಧ್ಯೆ ಕೋತಿಗಳ ಕೂಲ್ ಪೂಲ್ ಪಾರ್ಟಿ

    ಲಾಕ್‍ಡೌನ್ ಮಧ್ಯೆ ಕೋತಿಗಳ ಕೂಲ್ ಪೂಲ್ ಪಾರ್ಟಿ

    ಮುಂಬೈ: ಕೊರೊನಾ ಭೀತಿಗೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಒಂದೆಡೆ ಕೊರೊನಾ ಭಯಕ್ಕೆ ಮನೆಯಲ್ಲಿಯೇ ಜನರು ಲಾಕ್ ಆಗಿದ್ದಾರೆ. ಇನ್ನೊಂದೆಡೆ ಜನರ ಹಾವಳಿ ಇಲ್ಲದೇ ಪ್ರಾಣಿಗಳು ಹೊರಗೆಲ್ಲಾ ಸುತ್ತಾಡಿಕೊಂಡು ಎಂಜಾಯ್ ಮಾಡುತ್ತಿದೆ. ಮುಂಬೈನಲ್ಲಿ ಕೋತಿಗಳು ಕೂಲ್ ಆಗಿ ಪೂಲ್ ಪಾರ್ಟಿ ಮಾಡುತ್ತಿರುವ ವಿಡಿಯೋ ಇದಕ್ಕೆ ಉದಾಹರಣೆ ಎನ್ನಬಹುದು.

    ಹೌದು. ಜನರ ಓಡಾಟವಿಲ್ಲದ ಕಾರಣ ಪ್ರಾಣಿ, ಪಕ್ಷಿಗಳು ರಸ್ತೆಗಳಲ್ಲಿ ಆರಾಮಾಗಿ ಓಡಾಡಿಕೊಂಡಿವೆ. ಲಾಕ್‍ಡೌನ್ ಪರಿಣಾಮ ವಾಹನಗಳ ಕಿರಿಕಿರಿ ಇಲ್ಲದೇ ಪರಿಸರದಲ್ಲಿ ಮಾಲಿನ್ಯ ಕೂಡ ಕಡಿಮೆಯಾಗಿದೆ. ಈ ನಡುವೆ ಮುಂಬೈನ ಬೋರಿವಿಲಾದಲ್ಲಿರುವ ಅಪಾರ್ಟ್‍ಮೆಂಟ್ ಒಂದರ ಸ್ವಿಮ್ಮಿಂಗ್ ಪೂಲ್‍ನಲ್ಲಿ ಕೋತಿಗಳ ಗ್ಯಾಂಗ್ ಬಿಸಿಲ ಝಳಕ್ಕೆ ಕೂಲ್ ಆಗಿ ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://www.instagram.com/p/B-1Fg2PD5Fg/

    ವಿಡಿಯೋದಲ್ಲಿ ಅಪಾರ್ಟ್‍ಮೆಂಟ್ ಬಾಲ್ಕಾನಿಗಳಿಂದ, ಕಿಟಕಿ ಮೇಲಿಂದ ಸ್ವಿಮ್ಮಿಂಗ್ ಪೂಲ್ ಒಳಗೆ ಕೋತಿಗಳು ಹಾರುತ್ತಿರುವುದು, ನೀರಿನಲ್ಲಿ ಈಜುತ್ತಾ ಮಸ್ತಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕ್ಯೂಟ್ ವಿಡಿಯೋವನ್ನು ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಮನಸೋತ ನಟಿ ರವೀನಾ ತಂಡನ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಇದು ‘ಶುದ್ಧವಾದ ಕೋತಿಗಳ ಆಟ’ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಕೂಲ್ ವಿಡಿಯೋ ಮಾತ್ರ ನೆಟ್ಟಿಗರ ಮನಗೆದ್ದಿದ್ದು, ಸಖತ್ ವೈರಲ್ ಆಗುತ್ತಿದೆ.

    ಈ ಲಾಕ್‍ಡೌನ್ ಸಮಯದಲ್ಲಿ ಇನ್ನೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅದು ಕೂಡ ಸ್ವಿಮ್ಮಿಂಗ್ ಪೂಲ್ ಅಲ್ಲಿ ಕೋತಿಗಳು ಆಟವಾಡುತ್ತಾ, ಈಜುತ್ತಾ ಕಾಲ ಕಳೆಯುತ್ತಿರುವ ವಿಡಿಯೋ. ಇದನ್ನು ನೋಡಿದ ನೆಟ್ಟಿಗರು ಕೋತಿಗಳ ಪೂಲ್ ಪಾರ್ಟಿಗೆ ಫಿದಾ ಆಗಿದ್ದಾರೆ. ವಿಡಿಯೋ ಹಂಚಿಕೊಂಡ ಟ್ವಿಟ್ಟರ್ ಬಳಕೆಯಾರರು, ನಾವು ನಮ್ಮ ಅಪಾರ್ಟ್‍ಮೆಂಟ್‍ನಲ್ಲಿರುವ ಸ್ವಿಮ್ಮಿಂಗ್ ಪೂಲ್ ಯಾರು ಉಪಯೋಗಿಸುತ್ತಿಲ್ಲ, ಹೀಗಾಗಿ ಅದರಲ್ಲಿರುವ ನೀರನ್ನು ಖಾಲಿ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಅಷ್ಟರಲ್ಲಿ ನಮ್ಮ ನೆರೆಯ ವಾರನ ಸೇನೆ ಬಂದು ನಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿದೆ. ಕೋತಿಗಳು ಖುಷಿಯಾಗಿ ನೀರಿನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತ್ತಿರೋದನ್ನ ನೋಡಿದರೆ ಖುಷಿ ಆಗುತ್ತೆ. ಲಾಕ್‍ಡೌನ್‍ನಲ್ಲಿ ನಮಗೆ ಲೈವ್ ಎಂಟರ್‌ಟೈನ್‌ಮೆಂಟ್ ಸಿಗುತ್ತಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

    https://twitter.com/PreetiManiar/status/1248694395416674304

    ಅದೇನೆ ಇರಲಿ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದು ಜನರು ಬೋರ್ ಆಗಿದ್ದಾರೆ. ಆದ್ರೆ ಮೂಕ ಪ್ರಾಣಿಗಳು ಮಾತ್ರ ಖುಷಿಯಾಗಿವೆ. ಹಲವೆಡೆ ಆಹಾರ ಸಿಗದೆ ಒದ್ದಾಡುತ್ತಿರುವ ಪ್ರಾಣಿಗಳಿಗೆ ಹಲವರು ಆಹಾರ ನೀಡಿ ಮಾನವಿಯತೆ ಮೆರೆಯುತ್ತಿದ್ದಾರೆ. ಇನ್ನು ಕೆಲವೆಡೆ ನೀವು ಲಾಕ್ ಆಗಿ ಮನೆಲ್ಲೇ ಇರಿ, ನಾವು ಎಂಜಾಯ್ ಮಾಡುತ್ತೇವೆ ಎನ್ನುವ ಹಾಗೆ ಕೋತಿಗಳು ಬೇಸಿಗೆ ಬಿಸಿಯಲ್ಲಿ ಕೂಲ್ ಪೂಲ್ ಪಾರ್ಟಿ ಮಾಡುತ್ತಿವೆ.

  • ಹಸಿವಿನಿಂದ ಬಳಲುತ್ತಿದ್ದ ಕೋತಿಗಳಿಗೆ ಹಣ್ಣು ತಿನ್ನಿಸಿದ ಪೊಲೀಸರು

    ಹಸಿವಿನಿಂದ ಬಳಲುತ್ತಿದ್ದ ಕೋತಿಗಳಿಗೆ ಹಣ್ಣು ತಿನ್ನಿಸಿದ ಪೊಲೀಸರು

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಮಧ್ಯೆ ತಿನ್ನಲು ಆಹಾರ ಸಿಗದೇ ಅದೆಷ್ಟೋ ಮೂಕ ಪ್ರಾಣಿಗಳು ಬಳಲುತ್ತಿದೆ. ಹೀಗೆ ಹಸಿವಿನಿಂದ ರೋಧಿಸುತ್ತಿದ್ದ ಕೋತಿಗಳಿಗೆ ಸಿಲಿಕಾನ್ ಸಿಟಿ ಪೊಲೀಸರು ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಂದ್ ಆಗಿದೆ. ವ್ಯಾಪಾರಿಗಳು ತಮ್ಮ ಬಳಿ ಉಳಿಯುತ್ತಿದ್ದ ತರಕಾರಿ ಅಥವಾ ಹಣ್ಣುಗಳನ್ನು ಸ್ಥಳದಲ್ಲಿ ಇರುತ್ತಿದ್ದ ಕೋತಿಗಳಿಗೆ ನೀಡುತ್ತಿದ್ದರು. ಹೀಗಾಗಿ ಸ್ಥಳದಲ್ಲಿದ್ದ ಕೋತಿಗಳ ಹೊಟ್ಟೆ ತುಂಬುತ್ತಿತ್ತು. ಆದರೆ ಈಗ ಕೆಆರ್ ಮಾರ್ಕೆಟ್ ಬಂದ್ ಆಗಿರುವ ಹಿನ್ನೆಲೆ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವಿನಿಂದ ಮೂಕ ಪ್ರಾಣಿಗಳು ರೋಧಿಸುತ್ತಿದ್ದ ದೃಶ್ಯವನ್ನು ಕಂಡ ಸಬ್ ಇನ್ಸ್‌ಪೆಕ್ಟರ್ ಭಗವಂತ್ ಅವರು ಕೋತಿಗಳಿಗೆ ಹಣ್ಣು ತಿನ್ನಲು ನೀಡಿ ಅವುಗಳ ಹಸಿವು ನೀಗಿಸಿದ್ದಾರೆ.

    ಎಸ್‍ಐ ಅವರು ಕೋತಿಗಳಿಗೆ ಕಲ್ಲಂಗಡಿ ಹಣ್ಣನ್ನು ನೀಡಿ ಹಸಿವು ನೀಗಿಸಿದ್ದಾರೆ. ಎಸ್‍ಐ ಅವರು ಕೋತಿಗಳಿಗೆ ಹಣ್ಣು ನೀಡುವಾಗ ಪೊಲೀಸ್ ಸಿಬ್ಬಂದಿಯೊಬ್ಬರು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಕೊಟ್ಟು ಸಹಾಯ ಮಾಡಿದ್ದಾರೆ. ಹಣ್ಣು ನೀಡುತ್ತಿದ್ದಂತೆ ಕೋತಿಗಳು ಬಂದು ಅದನ್ನು ತೆಗೆದುಕೊಂಡು ತಿಂದು ಅವುಗಳ ಹೊಟ್ಟೆ ತುಂಬಿಸಿಕೊಂಡಿವೆ. ಈ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  • ನಂದಿಗಿರಿಧಾಮದಲ್ಲಿ ಪ್ರವಾಸಿಗರು ಐಸ್ ಕ್ರೀಂ, ತಿಂಡಿ ತಿನ್ನಂಗಿಲ್ಲ

    ನಂದಿಗಿರಿಧಾಮದಲ್ಲಿ ಪ್ರವಾಸಿಗರು ಐಸ್ ಕ್ರೀಂ, ತಿಂಡಿ ತಿನ್ನಂಗಿಲ್ಲ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಅಂದ್ರೆ ಅದು ಪ್ರೇಮಿಗಳ ಪಾಲಿನ ಹಾಟ್ ಫೇವರಿಟ್ ತಾಣ. ಅಲ್ಲಿ ಸದಾ ಪ್ರೇಮ ಪಕ್ಷಿಗಳದ್ದೇ ಕಲರವ. ಆದರೆ ಆ ಪ್ರೇಮಧಾಮ ನಂದಿಗಿರಿಧಾಮಕ್ಕೆ ಬರೋ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಈಗ ರೌಡಿಗಳ ಕಾಟ ಶುರುವಾಗಿದೆ. ಅವರು ಅಂತಿಂಥ ರೌಡಿಗಳಲ್ಲ, ಮೈ ಮೇಲೆ ಎರಗ್ತಾರೆ, ಪರಚ್ತಾರೆ. ಕೇಳಿದ್ದನ್ನ ಕೊಡಲಿಲ್ಲ ಅಂದ್ರೆ ತಮಗೆ ಬೇಕಾದದ್ದನ್ನ ಬಲವಂತವಾಗಿ ಕಸಿದುಕೊಂಡು ಹೋಗ್ತಾ ಇರ್ತಾರೆ. ಹೊಂಚು ಹಾಕಿ ಪ್ರೇಮಿಗಳನ್ನ ಅಡ್ಡ ಹಾಕಿ ಐಸ್ ಕ್ರೀಂ ಕಸಿದುಕೊಳ್ಳೋ ಕೋತಿಗಳು ನಂದಿಗಿರಿಧಾಮದಲ್ಲಿ ಒಂದು ರೀತಿ ರೌಡಿಸಂ ಮಾಡುತ್ತಿವೆ.

    ನಂದಿಗಿರಿಧಾಮದಲ್ಲಿ ಯಾರ ಕೈಯಲ್ಲಾದ್ರೂ ಐಸ್ ಕ್ರೀಂ ಕಂಡರೆ ಕೋತಿಗಳು ಎಂಟ್ರಿ ನೀಡುತ್ತವೆ. ಒಂದು ರೀತಿ ಹೆದರಿಸಿ ಕೈಯಲ್ಲಿರೋ ಐಸ್ ಕ್ರೀ ಕಸಿದುಕೊಂಡು ಓಡಿ ಹೋಗುತ್ತವೆ. ಕೇವಲ ಐಸ್ ಕ್ರೀ ಅಲ್ಲದೇ ಕೈಯಲ್ಲಿ ಯಾವುದೇ ತಿಂಡಿ ಇದ್ದರೂ ಕೋತಿಗಳು ಕಸಿದುಕೊಳ್ಳುತ್ತವೆ. ನಂದಿಗಿರಿಧಾಮದ ಸ್ಯಾಂಕಿ ವೃತ್ತದಲ್ಲಿ ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು ಸೇರಿದಂತೆ ಐಸ್ ಕ್ರೀಂ ಪಾರ್ಲರ್ ಇದೆ. ಈ ಸ್ಯಾಂಕಿ ವೃತ್ತದ ಅಂಗಡಿ, ಹೋಟೆಲ್ ಗಳ ಮೇಲೆ ಕೂತು ಹೊಂಚು ಹಾಕೋ ಕೋತಿಗಳು, ಪ್ರವಾಸಿಗರು ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಖರೀದಿಸಿಕೊಂಡು ಬಂದ್ರೆ ಸಾಕು ಅಟ್ಯಾಕ್ ಮಾಡಿ ಬಿಡುತ್ತವೆ.

    ಕೈಯಲ್ಲಿರೋ ತಿಂಡಿ ಕೊಡದಿದ್ದರೆ ಮೈ ಮೇಲೆ ಎರಗಿ ಪರಚಿ ಕಚ್ಚೇಬಿಡ್ತವೆ ಅನ್ನೋ ಭಯದಿಂದ ಪ್ರವಾಸಿಗರು ಕೊಟ್ಟು ಸುಮ್ಮನಾಗುತ್ತಾರೆ. ಈ ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಸಹ ಕೋತಿಗಳಿಗೆ ಹೇಗೆ ಕಡಿವಾಣ ಹಾಕೋದು ಅಂತ ಗೊತ್ತಾಗ್ತಿಲ್ಲ ಅಂತ ತಮ್ಮ ಅಸಾಹಯಕತೆಯನ್ನ ತೋಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಂದಿಗಿರಿಧಾಮದ ವಿಶೇಷಾಧಿಕಾರಿ, ಅಕ್ಕ ಪಕ್ಕದ ಬೆಟ್ಟ ಗುಡ್ಡಗಳಲ್ಲಿ ಕೋತಿಗಳಿಗೆ ತಿನ್ನೋಕೆ ಆಹಾರ ಇಲ್ಲ. ಹೀಗಾಗಿ ಸರಿ ಸುಮಾರು 3000 ಕ್ಕೂ ಹೆಚ್ಚು ಕೋತಿಗಳು ನಂದಿಬೆಟ್ಟದಲ್ಲಿ ಗುಂಪು ಗುಂಪುಗಳಾಗಿ ಬಂದು ಬೀಡುಬಿಟ್ಟಿವೆ. ಕೋತಿಗಳ ಮೂಕರೋಧನಕ್ಕೆ ಮನಸೋತ ಕೆಲವರು ಹಣ್ಣು ಹಂಪಲು ತಂದು ಹಾಕೋದು ಉಂಟು. ಆದರೆ ಅದು ಸಾಕಾಗುತ್ತಿಲ್ಲ ಅಂತ ಕೋತಿಗಳು ಪ್ರವಾಸಿಗರ ಬಳಿ ಈ ರೀತಿ ರೌಡಿಸಂ ಮಾಡ್ತಾ ಕಸಿದುಕೊಂಡೋ ತಿನ್ನೋ ಕೆಲಸ ಮಾಡುತ್ತಿವೆ. ಆದರೆ ಅವುಗಳಿಗೆ ಹೇಗೆ ಕಡಿವಾಣ ಹಾಕಬೇಕು ಅನ್ನೋದು ನಮಗೂ ಗೊತ್ತಾಗ್ತಿಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

  • ಬಿಜೆಪಿಯವರು ಕೋತಿಗಳು – ಬೈರತಿ ಸುರೇಶ್

    ಬಿಜೆಪಿಯವರು ಕೋತಿಗಳು – ಬೈರತಿ ಸುರೇಶ್

    ಬೆಂಗಳೂರು: ಬಿಜೆಪಿಗರು ಕೋತಿಗಳು. ಬಿಜೆಪಿಯವರು ಯಾವತ್ತುನೂ ಕೋತಿ ತಾನು ತಿಂದು ಬಿಟ್ಟು, ಮೇಕೆ ಮೂತಿಗೆ ಒರೆಸುವುದು ಅವರ ಪ್ರವೃತ್ತಿ ಅಂತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಹೆಬ್ಬಾಳ ಸಾರ್ವಜನಿಕರ ಶಾಂತಿ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬೈರತಿ ಸುರೇಶ್ ಈ ಹೇಳಿಕೆಯನ್ನು ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪರ ಮಾತನಾಡುವ ಕೆಲ ಬಿಜೆಪಿಗರನ್ನು ಕೋತಿಗಳು ಅನ್ನದಿದ್ರೆ ಮತ್ತೇನು ಹೇಳಬೇಕು ಎಂದು ಪ್ರಶ್ನಿಸಿದರು.

    ಕಾಯ್ದೆ ಬೇಕು ಬೇಡ ಅಂತಲ್ಲ. ಮೊದಲು ಹೊಟ್ಟೆಗೆ ಊಟ ಕೊಡಿ. ಮಹಿಳೆಯರಿಗೆ ರಕ್ಷಣೆ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಈ ಕಾಯ್ದೆ ಸಂಬಂಧ ದೇಶಾದ್ಯಂತ ದೊಡ್ಡ ಮಟ್ಟದ ಅಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಆದರೆ ನಮ್ಮ ಕರ್ನಾಟಕದಲ್ಲಿ ಯಾವುದೇ ಹಿಂಸಾ ಘಟನೆಗಳು ನಡೆದಿಲ್ಲ. ನಮ್ಮ ಕರ್ನಾಟಕದ ಜನ ಶಾಂತಿ ಸ್ವಭಾವದವರು ಎಂದು ತಿಳಿಸಿದರು.

  • ತಿಂಡಿ ಕೊಟ್ರೆ ಸೆಲ್ಫಿಗೆ ಪೋಸ್ ಕೊಡ್ತಾಳೆ ರಾಣಿ, ಸಿಟ್ಟಿಗೇಳ್ತಾನೆ ಜಾನ್- ಇದು ಕೋತಿಗಳ ಲವ್ ಸ್ಟೋರಿ

    ತಿಂಡಿ ಕೊಟ್ರೆ ಸೆಲ್ಫಿಗೆ ಪೋಸ್ ಕೊಡ್ತಾಳೆ ರಾಣಿ, ಸಿಟ್ಟಿಗೇಳ್ತಾನೆ ಜಾನ್- ಇದು ಕೋತಿಗಳ ಲವ್ ಸ್ಟೋರಿ

    ಯಾದಗಿರಿ: ಸಾಮಾನ್ಯವಾಗಿ ಹುಡುಗ, ಹುಡಗಿ ಲವ್ ಮಾಡೋದನ್ನ ನೋಡಿರುತ್ತೀರಿ. ತನ್ನ ಹುಡುಗಿ ಯಾರ ಜೊತೆಗಾದ್ರು ಮಾತಾಡಿದರೆ ಹುಡುಗ ಸಿಟ್ಟು ಮಾಡಿಕೊಳ್ಳುವುದು ಸಹಜ. ಆದರೆ ಯಾದಗಿರಿಯಲ್ಲಿ ಒಂದು ಡಿಫರೆಂಟ್ ಜೋಡಿ ಸಖತ್ ಫೇಮಸ್ ಆಗಿದ್ದಾರೆ.

    ಲವರ್ಸ್ ಅಂದಾಕ್ಷಣ ಯಾವುದೋ ಹುಡುಗ ಹುಡುಗಿ ಅನ್ಕೊಬೇಡಿ. ಯಾದಗಿರಿಯಲ್ಲಿ ಸಖತ್ ಸದ್ದು ಮಾಡುತ್ತಿರೋದು ಎರಡು ಕೋತಿಗಳು ಲವ್ ಸ್ಟೋರಿ. ಹೌದು ಯಾದಗಿರಿಯ ದೇವದುರ್ಗ ಕ್ರಾಸ್ ಬಳಿ ಈ ಕ್ಯೂಟ್ ಕೋತಿಗಳು ಇರುತ್ತವೆ. ಇಲ್ಲಿನ ಜನರು ಈ ಕೋತಿ ಜೋಡಿಗೆ ಜಾನ್ ಮತ್ತು ರಾಣಿ ಅಂತ ಹೆಸರನ್ನು ಕೂಡ ಇಟ್ಟಿದ್ದಾರೆ. ಈ ರಾಣಿ, ಜಾನ್ ಜೋಡಿಗೆ ಮಾಂಸ ಮತ್ತು ಸಸ್ಯ ಎರಡು ಬಗೆಯ ತಿಂಡಿ ತಿನಿಸುಗಳು ಅಚ್ಚುಮೆಚ್ಚು. ಆದರೆ ರಾಣಿಗೆ ಮೊಸರು ಎಂದರೆ ಸಿಕ್ಕಪಟ್ಟೆ ಇಷ್ಟ. ಹೀಗಾಗಿ ಮೊಸರು ಕೊಟ್ಟರೆ ಸಾಕು ರಾಣಿ ಸೆಲ್ಫಿ ಸಖತ್ ಪೋಸ್ ಕೊಡುತ್ತಾಳೆ.

    ಮೊಸರು ಅಥವಾ ತಿನ್ನೋಕೆ ತಿಂಡಿ ಕೊಟ್ಟರೆ ಸೆಲ್ಫಿಗೆ ಪೋಸ್ ಕೊಡುವ ರಾಣಿಯ ಗುಣ ಜಾನ್‍ಗೆ ಒಂದು ಸ್ವಲ್ಪವೂ ಇಷ್ಟ ಇಲ್ಲ. ಯಾರಾದರು ರಾಣಿ ಜೊತೆ ಸೆಲ್ಫಿ ತಗೆದುಕೊಂಡರೆ ಜಾನ್ ಸಿಟ್ಟು ಮಾಡಿಕೊಂಡು ಚಾವಣಿ ಏರಿಬಿಡುತ್ತಾನೆ. ಈ ಎರಡು ಕೋತಿಗಳ ಲವ್‍ಗೆ ದೇವದುರ್ಗ ಕ್ರಾಸ್ ಬಳಿ ಇರುವ ವ್ಯಾಪಾರಿಗಳು ಫುಲ್ ಫೀದಾ ಆಗಿದ್ದಾರೆ. ಈ ಕೋತಿಗಳೆಂದರೆ ಇಲ್ಲಿನ ನಿವಾಸಿಗಳಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ತಮ್ಮ ಮಕ್ಕಳಂತೆ ಈ ಕೋತಿಗಳನ್ನು ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.