Tag: ಕೋಡಿಹಳ್ಳಿ ಚಂದ್ರಶೇಖರ್

  • ಸಾರಿಗೆ ನೌಕರರ 10 ಬೇಡಿಕೆಯಲ್ಲಿ 9 ಈಡೇರಿಸುತ್ತೇವೆ: ಸವದಿ

    ಸಾರಿಗೆ ನೌಕರರ 10 ಬೇಡಿಕೆಯಲ್ಲಿ 9 ಈಡೇರಿಸುತ್ತೇವೆ: ಸವದಿ

    – ಸಿಬ್ಬಂದಿಗೆ ಧನ್ಯವಾದದ ಜೊತೆಗೆ ಮನವಿ

    ಬೆಂಗಳೂರು: ಸಾರಿಗೆ ನೌಕರರು ಹತ್ತು ಬೇಡಿಕೆಗಳನ್ನು ಇಟ್ಟಿದ್ದಾರೆ. ಇವಿಗಳಲ್ಲಿ ನಾವು 9 ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರನ್ನಾಗಿ ಮಾಡುವುದರಿಂದ ಸರ್ಕಾರಕ್ಕೆ ಬಹಳಷ್ಟು ಹಣಕಾಸಿನ ಹೊಡೆತ ಬರುತ್ತದೆ. 30 ರಿಂದ 40 ನಿಗಮಗಳಿವೆ, ಅವರೆಲ್ಲರೂ ಬೇಡಿಕೆ ಇಡುತ್ತಾರೆ. ಆಗ ಭಾರೀ ಪ್ರಮಾಣದ ಹಣಕಾಸಿನ ಹೊಡೆತ ಬಿದ್ದು ಅಭಿವೃದ್ಧಿಯು ನಿಂತು ಹೋಗುತ್ತದೆ. ಸರ್ಕಾರಿ ನೌಕರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದರು.

    ಕೋಡಿಹಳ್ಳಿ ಚಂದ್ರಶೇಖರ್ ಅವರಿಗು ನಮಗೂ ಸಂಬಂಧ ಇಲ್ಲ. ನಾವು ನಮ್ಮ ಸಾರಿಗೆ ನೌಕರರೊಂದಿಗೆ ಚರ್ಚೆ ಮಾಡುತ್ತವೆ. ಈಗಾಗಲೇ ಅನೇಕ ಕಡೆಗಳಲ್ಲಿ ಬಸ್ ಪ್ರಾರಂಭವಾಗಿವೆ. ನಮ್ಮ ಸಾರಿಗೆ ನೌಕರರು ನಮ್ಮ ಮಾತಿಗೆ ಬೆಲೆ ಕೊಟ್ಟು ಪ್ರಾರಂಭಿಸಿದ್ದಾರೆ. ಹೀಗಾಗಿ ನಾನು ಅವರಿಗೆ ಅಭಿನಂದನೆ ಹೇಳುತ್ತೇನೆ. ಯಾರ ಮಾತಿಗೂ ಕಿವಿ ಕೊಡಬೇಡಿ ನಿಮ್ಮ ಕೆಲಸವನ್ನು ನೀವು ಕಾರ್ಯಾರಂಭ ಮಾಡಿ. ಸರ್ಕಾರ ನಿಮ್ಮ ಜೊತೆಗೆ ಇದೆ ಎಂದು ಸಾರಿಗೆ ಕಾರ್ಮಿಕರಲ್ಲಿ ಮನವಿ ಮಾಡಿದರು.

    ಮುಷ್ಕರವನ್ನು ವಾಪಸ್ ಪಡೆಯಬೇಕು ಎಂದು ನಿರ್ಧಾರ ಮಾಡಿರುವುದು ನನಗೆ ಮಾಧ್ಯಮದ ಮುಖಾಂತರ ತಿಳಿಯಿತು. ಅಧಿಕೃತವಾಗಿ ಘೋಷಣೆ ಮಾಡುವವರೆಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಿನ್ನೆ ನಮ್ಮ ಹತ್ತಿರ ಬಂದು ವಾಪಸ್ ಪಡೆಯುತ್ತೇವೆ ಮುಷ್ಕರವನ್ನು ಎಂದು ಮಾತು ಕೊಟ್ಟು ಮತ್ತೆ ಮಾತು ಬದಲಾಯಿಸಿದ್ದಾರೆ. ನಾನು ಈ ವಿಷಯವಾಗಿ ಯಾವುದೇ ಹೇಳಿಕೆ ಕೊಡುವುದಾಗಲಿ ಅಥವಾ ಟೀಕೆ ಟಿಪ್ಪಣಿ ಮಾಡುವುದಾಗಲಿ ಮಾಡುವುದಿಲ್ಲ. 11 ಗಂಟೆಗೆ ಅವರ ನಿರ್ಧಾರವನ್ನು ಹೇಳುತ್ತೇವೆ ಎಂದು ಹೇಳಿದ್ದಾರೆ ಎಂದರು.

    ಎಸ್ಮಾ ಜಾರಿ ಮಾಡುವಂತ ಸಂದರ್ಭ ಬರುವುದಿಲ್ಲ. ಈ ಬ್ರಹ್ಮಾಸ್ತ್ರವನ್ನು ನಾವು ಉಪಯೋಗಿಸುವುದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಬಂದಿರುವುದು ರಾಜಕೀಯ ಪ್ರೇರಿತ ಎಂದು ಎಲ್ಲರಿಗೂ ಎನ್ನಿಸುತ್ತದೆ ಎಂದರು.

  • ಕೋಡಿಹಳ್ಳಿಗೆ ಕರೆ ಮಾಡಿ ಭರವಸೆ ಕೊಟ್ರಾ ಸಿಎಂ..?

    ಕೋಡಿಹಳ್ಳಿಗೆ ಕರೆ ಮಾಡಿ ಭರವಸೆ ಕೊಟ್ರಾ ಸಿಎಂ..?

    ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಪ್ರತಿಭಟನೆಗೆ ಸರ್ಕಾರ ಕ್ಯಾರೇ ಎನ್ನಲಿಲ್ಲ. ಈ ಬೆನ್ನಲ್ಲೇ ಇದೀಗ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಷ್ಕರ ವಾಪಸ್ ಪಡೆಯುವ ಆಲೋಚನೆ ಇದೆ ಎಂದಿದ್ದಾರೆ.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೋಡಿಹಳ್ಳಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸದ್ಯಕ್ಕೆ ಮುಷ್ಕರ ಕೈ ಬಿಡಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಮುಷ್ಕರ ವಾಪಸ್ ಪಡೆಯುವ ಆಲೋಚನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸದ್ಯ ಸಿಎಂ ಅವರು ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿಸತ್ತೇವೆ ಎಂದು ಮಾತು ಕೊಡುವ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಮನವೊಲಿಕೆ ಮಾಡಿದ್ರಾ ಎಂಬ ಅನುಮಾನ ಎದ್ದಿದೆ.

    ಇತ್ತ ವೈಯಾಲಿಕಾವಲ್ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಕೋಡಿಹಳ್ಳಿ, ಉಪವಾಸ ಕಾರ್ಯಕ್ರಮದಲ್ಲಿ ಇಂದು ತೀರ್ಮಾನ ಮಾಡುತ್ತೀವಿ. ಸಾರಿಗೆ ಇಲಾಖೆಯ ಪ್ರಮುಖರ ಜೊತೆ ಇಂದು ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಾರಿಗೆ ಅವ್ಯವಸ್ಥೆ ಜನರಿಗೆ ಸಮಸ್ಯೆ ಆಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲಾಗಿತ್ತು ಎಂದರು.

    ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ. ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಈಗ ವೇದಿಕೆಯಲ್ಲಿ ಎಲ್ಲ ಸ್ಪಷ್ಟಪಡಿಸಲಾಗುತ್ತದೆ. ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

    ಸರ್ಕಾರ ಏನೇ ಮಾಡಲಿ, ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ. ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಗಮನಕ್ಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ. 9 ಬೇಡಿಕೆ ಇತ್ಯಾದಿ ಬಗ್ಗೆ ತೀರ್ಮಾನ ವಿಚಾರಗಳಲ್ಲೂ ನ್ಯೂನತೆ ಇದೆ. ಈಗ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಸರ್ಕಾರ ಲಿಖಿತವಾಗಿ ಎಲ್ಲ ಹೇಳಲಿ ಆಮೇಲೆ ತೀರ್ಮಾನ ಮಾಡುತ್ತೇವೆ ಎಂದರು.

  • ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿದ್ದೀವಿ: ಕೋಡಿಹಳ್ಳಿ

    ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿದ್ದೀವಿ: ಕೋಡಿಹಳ್ಳಿ

    ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿರುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ವೈಯಾಲಿಕಾವಲ್ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪವಾಸ ಕಾರ್ಯಕ್ರಮದಲ್ಲಿ ಇಂದು ತೀರ್ಮಾನ ಮಾಡುತ್ತೀವಿ. ಸಾರಿಗೆ ಇಲಾಖೆಯ ಪ್ರಮುಖರ ಜೊತೆ ಇಂದು ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಾರಿಗೆ ಅವ್ಯವಸ್ಥೆ ಜನರಿಗೆ ಸಮಸ್ಯೆ ಆಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲಾಗಿತ್ತು ಎಂದರು.

    ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ. ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಈಗ ವೇದಿಕೆಯಲ್ಲಿ ಎಲ್ಲ ಸ್ಪಷ್ಟಪಡಿಸಲಾಗುತ್ತದೆ. ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

    ಸರ್ಕಾರ ಏನೇ ಮಾಡಲಿ, ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ. ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಗಮನಕ್ಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ ಎಂದು ಹೇಳಿದರು.

    9 ಬೇಡಿಕೆ ಇತ್ಯಾದಿ ಬಗ್ಗೆ ತೀರ್ಮಾನ ವಿಚಾರಗಳಲ್ಲೂ ನ್ಯೂನತೆ ಇದೆ. ಈಗ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಸರ್ಕಾರ ಲಿಖಿತವಾಗಿ ಎಲ್ಲ ಹೇಳಲಿ ಆಮೇಲೆ ತೀರ್ಮಾನ ಮಾಡುತ್ತೇವೆ. ನೆನ್ನೆಯಷ್ಟು ಬೆಂಬಲ ಇವತ್ತು ನೌಕರರಿಂದ ನಿರೀಕ್ಷೆ ಕಡಿಮೆ ಇದೆ. ಉಪವಾಸ ಸತ್ಯಾಗ್ರಹ ಮಾತ್ರ ಮುಂದುವರಿಯಲಿದೆ ಎಂದರು.

     

  • ಎಸ್ಮಾ ಜಾರಿ ಮಾಡುವ ಚಿಂತನೆ ಇದೆ: ಬಸವರಾಜ್ ಬೊಮ್ಮಾಯಿ

    ಎಸ್ಮಾ ಜಾರಿ ಮಾಡುವ ಚಿಂತನೆ ಇದೆ: ಬಸವರಾಜ್ ಬೊಮ್ಮಾಯಿ

    – ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಸಿಎಂ ಕರೆ

    ಬೆಂಗಳೂರು: ಕರ್ನಾಟಕದಲ್ಲಿ ಈ ಹಿಂದೆಯೂ ಎಸ್ಮಾ ಕಾಯ್ದೆ ಜಾರಿಯಾಗಿತ್ತು. ಈಗಲೂ ಜಾರಿ ಮಾಡುವ ಚಿಂತನೆ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಸಿಎಂ ಕರೆದ ತುರ್ತುಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಬೆಳಗ್ಗೆ 10 ಗಂಟೆಯಿಂದ ಮಾತುಕತೆ ನಡೆಸಲಾಗಿತ್ತು. ಎಲ್ಲರೂ ಸಂಧಾನದಲ್ಲಿ ಒಪ್ಪಿಗೆ ಕೊಟ್ಟು, ಮಾಧ್ಯಮಗಳ ಮುಂದೆ ಸಕಾರಾತ್ಮಕವಾಗಿದೆ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು. ಅಲ್ಲಿ ಹೋಗಿ ಕೆಲವರ ಮಾತು ಕೇಳಿರುವ ಕೋಡಿಹಳ್ಳಿ ಚಂದ್ರಶೇಖರ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಿಯೂ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಷ್ಠೆಗೆ ಸಾರಿಗೆ ನಿಗಮ ಹಾಳಾಗುತ್ತದೆ. ಕೋಡಿಹಳ್ಳಿ ಚಂದ್ರಶೇಖರ್ ಇಲ್ಲೊಂದು, ಅಲ್ಲೊಂದು ಹೇಳೋದನ್ನ ಖಂಡಿಸುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

    ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಿಗೆ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೂಡಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಅನಗತ್ಯವಾಗಿ ನೌಕರರ ದಾರಿತಪ್ಪಿಸುತ್ತಿರುವುದು ಸರಿಯಲ್ಲ. ಅವರ ದುರುದ್ದೇಶಪೂರಿತ ನಡೆ ಖಂಡನೀಯ. ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ, ಸಾರಿಗೆ ಸಂಸ್ಥೆಗೆ ನಷ್ಟ ಹಾಗೂ ಸಾರಿಗೆ ಸಂಸ್ಥೆಯ ನೌಕರರಿಗೂ ತೊಂದರೆಯಾಗುತ್ತದೆ. ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಿಎಂ ಕರೆ ನೀಡಿದ್ದಾರೆ.

  • ಪ್ರಯಾಣಿಕರೇ ಎಚ್ಚರ, ಎಚ್ಚರ – ನಾಳೆ ರಸ್ತೆಗಿಳಿಯಲ್ಲ ಖಾಸಗಿ ಬಸ್

    ಪ್ರಯಾಣಿಕರೇ ಎಚ್ಚರ, ಎಚ್ಚರ – ನಾಳೆ ರಸ್ತೆಗಿಳಿಯಲ್ಲ ಖಾಸಗಿ ಬಸ್

    – ಸಾರಿಗೆ ನೌಕರರ ಪ್ರತಿಭಟನೆ ಮುಂದುವರಿಕೆ

    ಬೆಂಗಳೂರು: ಪ್ರಮುಖ ಬೇಡಿಕೆಯನ್ನ ಈಡೇರಿಲಸಲು ಸರ್ಕಾರ ಒಪ್ಪದ ಹಿನ್ನೆಲೆ ಸಾರಿಗೆ ನೌಕರರು ತಮ್ಮ ಮುಷ್ಕರವನ್ನ ಮುಂದುವರಿಸಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆಗೆ ಸಾಥ್ ಖಾಸಗಿ ಬಸ್ ಸಂಘ ಸಹ ಬೆಂಬಲ ನೀಡಿದೆ. ಖಾಸಗಿ ಬಸ್ ನಂಬಿ ನೀವು ಊರಿಗೆ ತೆರಳುತ್ತಿದ್ರೆ ನಿಮ್ಮ ಪ್ರಯಾಣ ಮುಂದೂಡುವುದು ಉತ್ತಮ.

    ಈ ವೇಳೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಒಳ್ಳೆಯ ನಾಯಕನ ನೇತೃತ್ವದಲ್ಲಿ ನಿಮ್ಮೆಲ್ಲರ ಪ್ರತಿಭಟನೆ ನಡೆಯುತ್ತಿದೆ. ಹೋರಾಟ ಅನ್ನೋದು ಯಾವುದೋ ಒಬ್ಬ ಬ್ರೋಕರ್ ಅಡಿಯಲ್ಲಿ ಅಗುವಂತದಲ್ಲ. ನಾಯಕನ ಹೋರಾಟದ ಮೇಲೆ ನಮ್ಮೆಲ್ಲರ ಪ್ರತಿಫಲ ಇರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಆಡಳಿತದಲ್ಲಿರುವ ಸರ್ಕಾರದ ಪಕ್ಷದಲ್ಲಿಯೇ ನಾನಿದ್ದೇನೆ. ಅವರಿಗೆ ನಾನು ಮತ ಹಾಕಿದ್ದೇನೆ. ಸಾರಿಗೆ ಸಚಿವರು ನಮ್ಮ ಮನವಿಗಳಿಗೂ ಸ್ಪಂದಿಸಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಈ ಮಾತುಗಳನ್ನ ಹೇಳಲು ನನಗೆ ನೋವಾಗುತ್ತೆ ಎಂದರು.

    ಇದು ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವೈಫಲ್ಯ ಅಲ್ಲ. ಇದು ಸಾರಿಗೆ ಮಂತ್ರಿಗಳ ವೈಫಲ್ಯ, ಲಕ್ಷ್ಮಣ ಸವದಿ ತಮ್ಮ ಪ್ರತಿಷ್ಠೆಯನ್ನ ಬಿಟ್ಟು ಇಲ್ಲಿಗೆ ಬಂದು ಸಮಸ್ಯೆಗಳನ್ನ ಆಲಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸಾರಿಗೆ ಸಚಿವರು ಹೊಣೆ. ಹಾಗಾಗಿ ನಾಳೆಯಿಂದ ನಿಮ್ಮ ಬೆಂಬಲಕ್ಕೆ ನಾವು ಕೈ ಜೊತೆ ಜೋಡಿಸುತ್ತೇವೆ ಎಂದು ಹೇಳಿದರು.

    ರಾಜ್ಯ ಸರ್ಕಾರ ಸಾರಿಗೆ ಇಲಾಖೆಯನ್ನ ಯಾಕೆ ಸೈಡ್ ನಲ್ಲಿ ಇಡುತ್ತಿದೆ ಅನ್ನೋದು ತಿಳಿಯುತ್ತಿಲ್ಲ. ಎಷ್ಟು ಜನ ಚಾಲಕರನ್ನ ಕೊರೋನಾ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡರು. ಅವರನ್ನ ಯಾಕೆ ಕೊರೊನಾ ವಾರಿಯರಸ್ ಅಂತಾ ಕರೆಯಲಿಲ್ಲ ಎಂದು ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಪ್ರಶ್ನಿಸಿದರು.

    ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದರು. ಆದರೆ ಸರ್ಕಾರ ಈ ಬೇಡಿಕೆ ಪೂರ್ಣ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಆದ್ದರಿಂದ ನಮ್ಮ ಬೇಡಿಕೆ ಈಡೇರುವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ಸಾರಿಗೆ ನೌಕರರು ಹೇಳಿದ್ದಾರೆ. ಈ ಎಲ್ಲ ಅನಾನುಕೂಲಗಳಿಗೆ ಸಾರಿಗೆ ಸಚಿವರೇ ಕಾರಣ. ಸಚಿವರು ಇಲ್ಲಿಯೇ ಬಂದು ನಮ್ಮ ಸಮಸ್ಯೆ ಆಲಿಸಲಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ 

    ಇನ್ನು ಸಾರಿಗೆ ನೌಕರರಕ್ಕೆ ಹೋರಾಟಕ್ಕೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ, ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ರಾಧಕೃಷ್ಣ ಸಹ ಸಾಥ್ ನೀಡಿದ್ದಾರೆ. ಇನ್ನು ಕೊನೆಯದಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಾಳೆಯ ಎಲ್ಲರೂ ಪ್ರತಿಭಟನೆಗೆ ಬರಬಹುದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್ 

  • ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ

    ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ

    – ಮುಷ್ಕರ ಮುಂದುವರಿಯುತ್ತೆ ಅಂದ್ರು ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಸರ್ಕಾರದ ಜೊತೆಗಿನ ಸಂಧಾನ ಯಶಸ್ವಿ ಆಯ್ತಾ ಅಥವಾ ವಿಫಲವಾಯ್ತಾ ಅನ್ನೋದರ ಬಗ್ಗೆ ಸಾರಿಗೆ ನೌಕರರಲ್ಲಿ ಗೊಂದಲ ಉಂಟಾಗಿದೆ. ಸಂಧಾನ ವಿಫಲವಾಗಿದ್ದು ಸಿಬ್ಬಂದಿ ವಾಹನಗಳನ್ನ ಹೊರಗೆ ತೆಗೆಯಬೇಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ.

    ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನೌಕರ ಸಂಘದ ಮುಖಂಡ, ನಾನು ಮಾಧ್ಯಮಗಳಲ್ಲಿ ಯಾವುದೇ ರೀತಿಯ ಹೇಳಿಕೆಯನ್ನ ನೀಡಿಲ್ಲ. ಸರ್ಕಾರ ನೀಡಿರುವ ಕೆಲ ಭರವಸೆಗಳ ಬಗ್ಗೆ ಮಾತ್ರ ಹೇಳಿದ್ದೇನೆ. ನಮ್ಮ ಪ್ರಮುಖ ಬೇಡಿಕೆಯನ್ನ ಈಡೇರಿಸಲು ಸರ್ಕಾರ ಒಪ್ಪಿಲ್ಲ. ಆದ್ರೆ ಸಚಿವರು ಸಂಧಾನ ಯಶಸ್ವಿ ಅಂತಾ ಹೇಳಿದ್ದರಿಂದ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದೆ. ಹಾಗಾಗಿ ಇಲ್ಲಿ ನಿಮ್ಮ ಮುಂದೆ ಸಂಧಾನ ವಿಫಲವಾಗಿದೆ ಎಂದು ಹೇಳುತ್ತಿದ್ದೇನೆ. ನಿಮ್ಮ ಸ್ನೇಹಿತರಿಗೆ ಬಸ್ ಗಳನ್ನ ಹತ್ತಬಾರದು ಎಂದು ಹೇಳಿ ಎಂದ್ರು.

    ಇನ್ನೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯಾವುದೇ ಕಾರಣಕ್ಕೂ ಬಸ್ ಗಳನ್ನ ರಸ್ತೆಗಿಳಿಸಬೇಡಿ. ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲ. ಮುಷ್ಕರ ಮುಂದುವರಿಯಲಿದೆ ಎಂದು ಘೋಷಣೆ ಮಾಡಿದರು.

    ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರ ಒಪ್ಪಿಲ್ಲ. ಉಳಿದಂತೆ 8 ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆಯನ್ನು ನೀಡಿದೆ. ಇದನ್ನೂ ಓದಿ: ಸರ್ಕಾರದ ಸಂಧಾನ ಯಶಸ್ವಿ – ಪ್ರತಿಭಟನೆ ಕೈ ಬಿಟ್ಟ ನೌಕರರು 

    ಈಡೇರಿಕೆಯಾದ ಬೇಡಿಕೆಗಳು
    1. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಸಲು ತೀರ್ಮಾನ.
    2. ಕೋವಿಡ್-19 ಸೋಂಕಿನಿಂದ ಮೃತ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ.
    3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.
    4. ನೌಕರರ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ.
    5. ನಿಗಮದಲ್ಲಿ ಹೆಚ್.ಆರ್.ಎಂ.ಎಸ್. (ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿ.
    6. ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ನಿರ್ಧಾರ.
    7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.
    8. ವೇತನ ಪರಿಷ್ಕರಣೆ, ಆರನೇ ವೇತನ ಆಯೋಗದ ಜಾರಿ ನಡೆಸುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ತೀರ್ಮಾನ

  • ಅರಿವಿಲ್ಲದ ವಿಷಯಗಳಲ್ಲಿ ಮೂಗು ತೂರಿಸೋದು ಎಷ್ಟು ಸಮಂಜಸ?- ಕೋಡಿಹಳ್ಳಿಗೆ ಸುಧಾಕರ್ ಪ್ರಶ್ನೆ

    ಅರಿವಿಲ್ಲದ ವಿಷಯಗಳಲ್ಲಿ ಮೂಗು ತೂರಿಸೋದು ಎಷ್ಟು ಸಮಂಜಸ?- ಕೋಡಿಹಳ್ಳಿಗೆ ಸುಧಾಕರ್ ಪ್ರಶ್ನೆ

    ಬೆಂಗಳೂರು: ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಸಂಘರ್ಷ ಅಂತ್ಯವಾದ ಬೆನ್ನಲ್ಲೆ ಆರೋಗ್ಯ ಸಚಿವ ಸುಧಾಕರ್, ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ. ಅರಿವಿಲ್ಲದ ವಿಷಯಗಳಲ್ಲಿ ಮೂಗು ತೂರಿಸೋದು ಎಷ್ಟು ಸಮಂಜಸ ಅನ್ನೋ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಉತ್ತರಿಸಲಿ ಎಂದು ಆರೋಗ್ಯ ಸಚಿವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

    ಸುಧಾಕರ್ ಟ್ವೀಟ್:
    ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ ಎಂದು ಜನ ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮೊದಲು ಉತ್ತರ ನೀಡಬೇಕು.

    ಸಾರಿಗೆ ವ್ಯವಸ್ಥೆ ಅತ್ಯಂತ ಪ್ರಮುಖ ಮತ್ತು ಅಗತ್ಯ ಸೇವೆಯಾಗಿದ್ದು, ಶ್ರೀ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಪದೇ ಪದೇ ಮುಷ್ಕರ, ಬಂದ್ ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡಿ ಬಡವರು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ.

    ಸಾರಿಗೆ ನೌಕರರ ಪ್ರತಿಭಟನೆಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ನಾಯಕರು ಕಾಂಗ್ರೆಸ್ ಸರ್ಕಾರ ಹಾಗು ಸಮ್ಮಿಶ್ರ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಏಕೆ ಪೂರೈಸಲಿಲ್ಲ?

    ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ತಮ್ಮನ್ನು ದಾರಿ ತಪ್ಪಿಸುತ್ತಿರುವವರ ಪ್ರಚೋದನೆಗೆ ಒಳಗಾಗದೆ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

  • ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ: ಕೋಡಿಹಳ್ಳಿ ಎಚ್ಚರಿಕೆ

    ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ: ಕೋಡಿಹಳ್ಳಿ ಎಚ್ಚರಿಕೆ

    ಬೆಂಗಳೂರು: ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ. ನಮ್ಮ ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

    ಪ್ರತಿಭಟನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಚಿವರೇ ನಮಗೆ ಧನಾತ್ಮಕವಾಗಿ ಸ್ಪಂದನೆ ಕೊಡಿ. ಸರ್ಕಾರ ಸಾರಿಗೆ ನೌಕರರನ್ನ ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ತಿದೆ. ಇದು ಮಾನವೀಯತೆನಾ..? ಪೊಲೀಸರನ್ನ ಬಿಟ್ಟು ಅಪಮಾನ ಮಾಡ್ತಿರಲ್ಲ. ಮಿಸ್ಟರ್ ಸವದಿಯವ್ರೇ…? ಮುಖಾಮುಖಿ ಕೂತು ಚರ್ಚೆಯಾಗಲಿ. ಗೌರವಯುತವಾಗಿ ಕರೆದು ಮಾತನಾಡಿದ್ರೆ ನಾವು ರೆಡಿ ಇದ್ದೇವೆ ಎಂದು ಆಗ್ರಹಿಸಿದ್ದಾರೆ.

    ಎಸ್ಮಾ ಜಾರಿ(ಅಗತ್ಯ ಸೇವೆ ನಿರ್ವಹಣೆ ಕಾಯಿದೆ)ಗೆ ಮಾಡ್ತೀವಿ ಅಂತ ಹೆದರಿಸ್ತಿದ್ದಾರೆ. ಎಲ್ಲರ ಮೇಲೂ ಎಸ್ಮಾ ಜಾರಿ ಮಾಡುತ್ತೀರಾ..? ಸರ್ಕಾರದಿಂದ ಸ್ಪಂದನೆ ಸಿಗೋ ತನಕ ನಮ್ಮ ಮತ್ತು ಬಸ್ ಬಂದ್ ನಡೆಯುತ್ತಲೇ ಇರುತ್ತದೆ. ಸರ್ಕಾರ ಸ್ಪಂದಿಸಿದ್ರೆ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗ್ತೇವೆ. ಸಾರಿಗೆ ನೌಕರರ ಜೊತೆ ರೈತ ಸಂಘಟನೆಗಳಿವೆ. ದಿನಾಂಕ ಹೇಳಲ್ಲ. ಯಾವ ಸಮಯದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ. ಇನ್ನು ನಾವು ಸುಮ್ಮನೆ ಕೂಡೋಕೆ ಆಗಲ್ಲ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಿಎಸ್‍ವೈ ಜೊತೆ ಎಚ್‍ಡಿಕೆ ಡೀಲ್, ಜೆಡಿಎಸ್ ಮಣ್ಣಿನ ಪಕ್ಷವಲ್ಲ – ಕೋಡಿಹಳ್ಳಿ ಚಂದ್ರಶೇಖರ್

    ಬಿಎಸ್‍ವೈ ಜೊತೆ ಎಚ್‍ಡಿಕೆ ಡೀಲ್, ಜೆಡಿಎಸ್ ಮಣ್ಣಿನ ಪಕ್ಷವಲ್ಲ – ಕೋಡಿಹಳ್ಳಿ ಚಂದ್ರಶೇಖರ್

    – ಮಣ್ಣಿನ ಹೆಸರು ಹೇಳಿ ಮೋಸ ಮಾಡುವ ಪಕ್ಷ
    – ರೈತ ಪರವಾದ ಚಿಂತನೆ ನಿಮಗಿಲ್ಲ
    – ನೀವು ಈ ಮಣ್ಣಿನ ದ್ರೋಹಿಗಳು

    ಬೆಂಗಳೂರು: ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ. ಅದು ರೈತರ ಹೆಸರಿನಲ್ಲಿ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಪಕ್ಷ ಎಂದು ಕೋಡಿಹಳ್ಳಿ ಚಂದ್ರಶೇಖರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪರಿಷತ್‍ನಲ್ಲಿ ಜೆಡಿಎಸ್ ಬೆಂಬಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರು ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ನಿನ್ನೆ ಬೆಳಗ್ಗೆ ಹೇಳಿತ್ತು. ಆದರೆ ಸಂಜೆ ವೇಳೆ ಉಲ್ಟಾ ಹೊಡೆದು ಯಡಿಯೂರಪ್ಪನರಿಗೆ ಬೆಂಬಲ ಕೋಡುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಬಿಎಸ್‍ವೈ ಜೊತೆ ನಿಮಗೆ ಎಷ್ಟು ಡಿಲ್ ಆಗಿದೆ? ಎಷ್ಟು ಶಾಸಕರನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದೀರಿ? ನಿಮ್ಮದು ಜ್ಯಾತ್ಯಾತೀತ ತತ್ವನು ಅಲ್ಲ ಮತ್ತು ರೈತರ ಪರವಾದ ಚಿಂತನೆಯೂ ನಿಮ್ಮ ಪಕ್ಷಕ್ಕಿಲ್ಲ. ನೀವು ಈ ಮಣ್ಣಿನ ದ್ರೋಹಿಗಳು. ನೂರಕ್ಕೆ ನೂರು ಡಿಲ್ ಮಾಡುವುದರಲ್ಲಿ ನೀವು ನಿಸ್ಸಿಮರು ಎಂದು ಆಕ್ರೋಶ ಹೊರಹಾಕಿದರು.

    ಯಾರು ತಡೆದರೂ ಅದನ್ನು ಮೀರಿದ ಹೋರಾಟವನ್ನು ನಾವು ಮಾಡುತ್ತೇವೆ. ಹೋರಾಟ ದಿನದಿಂದ ದಿನಕ್ಕೆ ಬದಲಾಗುತ್ತದೆ ಅಷ್ಟೇ. ನಮ್ಮ ಕುತ್ತಿಗೆಗೆ ನೇಣು ಹಗ್ಗ ಹಾಕಿದ್ದಾರೆ. ಅದನ್ನು ಮೊದಲು ತೆಗೆಯಲಿ ನಂತರ ಚರ್ಚೆ ಮಾಡುವ ಎಂದು ಕೋಡಿಹಳ್ಳಿ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ. ಅದು ಆ ಹೆಸರಿನಲ್ಲಿ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಪಕ್ಷ. ಈಗ ಅವರೆಲ್ಲ ಸುಖವಾಗಿದ್ದಾರೆ. ಅಧಿಕಾರವನ್ನು ಅನುಭವಿಸಿದ್ದಾರೆ. ಕುಮಾರಸ್ವಾಮಿ ರೈತರ, ಮಣ್ಣಿನ ಮಕ್ಕಳು ಹೆಸರು ಹೇಳಿಕೊಂಡು ಅಚ್ಚುಕಟ್ಟಾಗಿ ಅವರ ಅಧಿಕಾರವನ್ನು ನಡೆಸಿದ್ದಾರೆ. ಕುಮಾರಸ್ವಾಮಿಗೆ ನೆನಪಿರಲಿ ದೇವೇಗೌಡರು ಇದಕ್ಕೆ ಒಪ್ಪುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ದೇವೇಗೌಡರು ಅವರ ಇಬ್ಬರು ಮಕ್ಕಳಿಗೆ ಬುದ್ಧಿ ಹೇಳಬೇಕಿತ್ತು. ಹೇಳಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ ಎಂದರು.

    ಕುಮಾರಸ್ವಾಮಿ ಮಾಡಿರುವ ಅಪರಾಧವನ್ನು ಈ ಮಣ್ಣು ಒಪ್ಪುವುದಿಲ್ಲ. ಮಣ್ಣಿಗೆ ದ್ರೋಹ ಮಾಡುವುದನ್ನು ನಾವು ಸಹಿಸುವುದಿಲ್ಲ. ಕುಮಾರಸ್ವಾಮಿ ಕೇವಲ ತನ್ನ ಹಿತಾಸಕ್ತಿಗಳ ರಾಜಕಾರಣ ಮಾಡಲು ಈ ತರಹದ ಕೆಳ ಮಟ್ಟದ ರಾಜಕಾರಣಕ್ಕೆ ಇಳಿದಿರುವುದನ್ನು ನಾವು ವಿರೋಧಿಸುತ್ತೇವೆ. ಯಾರ ಲಾಭಕ್ಕೆ ಭೂ ಸುಧಾರಣಾ ಕಾಯ್ದೆಯನ್ನು ಒಪ್ಪಿಕೊಂಡಿದ್ದಾರೆ? ಅಷ್ಟು ವರ್ಷಗಳ ಕಾಲ ದೀರ್ಘಕಾಲದಲ್ಲಿ ನೈಸ್ ಕಂಪನಿ ವಿರುದ್ಧ ನೀವು ನಿಮ್ಮ ಅಡ್ವೊಕೇಟ್ ಜನರಲ್ ಕಳಿಸಿ ಅಫಿಡೆವಿಟ್ ಹಾಕಿ ರೈತರ ವಿರುದ್ಧವಾದ ತೀರ್ಮಾನವನ್ನು ಸುಪ್ರೀಂನಲ್ಲಿ ಪಡೆದಿರಿ. ಇದು ಯಾರ ಪರ? ಇದು ಎಲ್ಲ ರೈತರ ವಿರುದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ನಿಮ್ಮನ್ನು ಕ್ಷಮಿಸುವುದಿಲ್ಲ. ಇದೇ ನಿಮ್ಮ ಕಡೆಯ ರಾಜಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಗುಡುಗಿದರು.

    ಕುಮಾರಸ್ವಾಮಿಯವರು ಅತಿ ಬುದ್ಧಿವಂತಿಕೆಯ ಮಾತುಗಳನ್ನು ಆಡುವುದು ಬೇಡ. ರೈತರ ಬಾಯಿಗೆ ಮಣ್ಣು ಹಾಕಿ ಆಗಿದೆ. ಈಗ ನಾನು ನಿಧಾನವಾಗಿ ಮಣ್ಣು ಹಾಕಿದ್ದೇನೆ. ಜೋಪಾನವಾಗಿ ರೈತರ ಬಾಯಿಗೆ ಮಣ್ಣು ಹಾಕಿದ್ದೇನೆ ಅಂತಾ ಹೇಳುವುದರಲ್ಲಿ ಏನಿದೆ ಅರ್ಥ ಎಂದು ಪ್ರಶ್ನಿಸಿದರು. ಇದನ್ನು ಓದಿ: ಯುವಕರನ್ನು ಕೃಷಿಯತ್ತ ಆಕರ್ಷಿಸಲು ಭೂಸುಧಾರಣಾ ತಿದ್ದುಪಡಿ ಕಾಯ್ದೆ ಸಹಾಯಕ – ಎಚ್‌ಡಿಕೆ

    ಅಧಿಕಾರದಲ್ಲಿರುವಾಗ ನೀವು ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದೀರಿ. ಈಗ ಭೂಸ್ವಾಧಿನ ಕಾಯ್ದೆ ಜಾರಿಗೆ ತನ್ನಿ ಎಂದು ಹೇಳಿದ್ದೇವಾ? ನಾವು ಮಾಡೋದನ್ನು ನಾವು ಮಾಡುತ್ತೇವೆ ನೀವು ಸಮಾಧಾನವಾಗಿರಿ ಎಂದು ಹೇಳುವಂತೆ ಪ್ರಯತ್ನ ಸರ್ಕಾರ ಮಾಡುತ್ತಿದೆ. ಅವರು ಈ ಕಾಯ್ದೆಯ ಹಿಂದೆ ಹೋಗುವಂತೆ ಕೆಲಸ ಮಾಡುತ್ತಿಲ್ಲ. ನಾವು ಸುಮ್ಮನೆ ಇರುವುದಿಲ್ಲ. ಹಳ್ಳಿ ಹಳ್ಳಿಯಲ್ಲಿ ರೈತರನ್ನು ತಡೆಯುತ್ತಿದ್ದಾರೆ. ಸಣ್ಣ ಪುಟ್ಟ ವಾಹನಗಳ ಮಾಲೀಕರಿಗೆ ನೀವು ಹೋದರೆ ಕೇಸ್ ಹಾಕುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಎಷ್ಟು ದಿನ ಮಾಡಲು ಆಗುತ್ತೆ ಮಾಡಲಿ. ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಗುಡುಗಿದರು.

  • ಡಿ.8ಕ್ಕೆ ಮತ್ತೆ ಕರ್ನಾಟಕ ಬಂದ್‌

    ಡಿ.8ಕ್ಕೆ ಮತ್ತೆ ಕರ್ನಾಟಕ ಬಂದ್‌

    ಬೆಂಗಳೂರು: ಕರ್ನಾಟಕ ಬಂದ್‌ ನಡೆದ ಮೂರು ದಿನ ಬಳಿಕ ಮತ್ತೆ ರಾಜ್ಯದಲ್ಲಿ ಬಂದ್‌ ನಡೆಯಲಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಂದು ಕರ್ನಾಟಕ ಬಂದ್ ನಡೆಸುತ್ತಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ರೈತರ ಚಳುವಳಿಯನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿತು. ಸರ್ಕಾರ ಕೇವಲ ಬೇಜವಾಬ್ದಾರಿಯಾಗಿ ಮಾತನಾಡುತ್ತಿದೆ. ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡಿದ್ದರಿಂದ ಇದೇ 8 ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದ್ದು ಕರ್ನಾಟಕ ಬಂದ್‌ ನಡೆಯಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದರು.

     

    ಭಾರತ ಬಂದ್ ದಿನ ಎಲ್ಲಾ ಹೆದ್ದಾರಿ, ರಸ್ತೆಗಳನ್ನು ಬಂದ್ ಮಾಡುತ್ತೇವೆ. ಬಂದ್‌ಗೆ ಎಡಪಕ್ಷದವರು, ಪುಟ್ಟಣ್ಣಯ್ಯನವರ ರೈತ ಸಂಘಟನೆ, ಕುರುಬೂರು ಶಾಂತಕುಮಾರ್ ಸಂಘಟನೆಯವರು ಭಾಗವಹಿಸುತ್ತಾರೆ. ಅನೇಕ ಕನ್ನಡ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಭಾಗವಹಿಸಲಿವೆ ಎಂದು ಹೇಳಿದರು.

    ಬಂದ್‌ ದಿನ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಹೆದ್ದಾರಿ, ಗಡಿಗಳನ್ನು ಬಂದ್ ಮಾಡಲಾಗುವುದು. ಯಡಿಯೂರಪ್ಪನವರು ನಮ್ಮ ಬಂದ್ ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು. ಈ ಬಂದ್‌ಗೆ ಎಲ್ಲ ಸಂಘಟನೆಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.

     

    ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಡಿಸೆಂಬರ್ 8 ರಂದು ರೈತರು ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಂದ್‌ಗೆ ಎಡಪಕ್ಷಗಳ ಬೆಂಬಲ ನೀಡಿವೆ.

    ಭಾರತೀಯ ಕಮ್ಯುನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಕಮ್ಯುನಿಷ್ಟ್ ಪಕ್ಷ –ಮಾರ್ಕ್ಸ್ ವಾದಿ(ಸಿಪಿಎಂ), ಸಿಪಿಐ(ಎಂಎಲ್), ಫಾರ್ವರ್ಡ್ ಬ್ಲಾಕ್ ಮತ್ತು ಅಖಿಲ ಭಾರತ ಸಮಾಜವಾದಿ ಪಕ್ಷ ಬಂದ್‌ ಬೆಂಬಲಿಸುವುದಾಗಿ ತಿಳಿಸಿದೆ.