Tag: ಕೋಟ್ಯಾಧಿಪತಿ

  • ಪುನೀತ್ ಬದಲಿಗೆ ಕೋಟ್ಯಾಧಿಪತಿ ಶೋಗೆ ಎಂಟ್ರಿಕೊಡಲಿದ್ದಾರೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

    ಪುನೀತ್ ಬದಲಿಗೆ ಕೋಟ್ಯಾಧಿಪತಿ ಶೋಗೆ ಎಂಟ್ರಿಕೊಡಲಿದ್ದಾರೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

    ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ `ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವು ಬರೀ ಸ್ಯಾಂಡಲ್‍ವುಡ್ ಗೆ ಸೀಮಿತವಾಗಿರದೆ ಬಾಲಿವುಡ್ ನಲ್ಲೂ ಜನಪ್ರಿಯವಾಗಿದೆ.

    ಈಗಾಗಲೇ ಕೋಟ್ಯಾಧಿಪತಿ ಕಾರ್ಯಕ್ರಮದ ಎರಡು ಸೀಸನ್ ಗಳು ಮುಗಿದಿದ್ದು, ಮೂರನೇ ಸೀಸನ್ ಶುರು ಮಾಡಲು ಖಾಸಗಿ ವಾಹಿನಿ ಸಿದ್ಧತೆ ನಡೆಸುತ್ತಿದೆ. ಆದರೆ ಈಗ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಬದಲು ನಟ ಯಶ್ ಇರುತ್ತಾರೆ ಎನ್ನಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪುನೀತ್ ಮತ್ತು ಯಶ್ ಬದಲಿಗೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ.

    ಸಿನಿಮಾಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಖ್ಯಾತಿ ಹೊಂದಿರುವ ನಟ ರಮೇಶ್ ಅರವಿಂದ್ ಈಗ `ಕನ್ನಡ ಕೋಟ್ಯಾಧಿಪತಿ’ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎನ್ನಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಬರುವ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಕೊನೆಯ ಹಂತದ ಅಂದರೆ ಅಗ್ರಿಮೆಂಟ್ ಗಳಿಗೆ ರಮೇಶ್ ಸಹಿ ಹಾಕಿದರೆ ಕಾರ್ಯಕ್ರಮದ ನಿರೂಪಣೆ ಮಾಡುವುದು ಅಧಿಕೃತವಾಗಲಿದೆ.

    ನಟ ಪುನೀತ್ ರಾಜ್ ಕುಮಾರ್ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ಪುನೀತ್ `ಫ್ಯಾಮಿಲಿ ಪವರ್’ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಬಳಿಕ `ನಟ ಸಾರ್ವಭೌಮ’ ಸಿನಿಮಾದ ಶೂಟಿಂಗ್ ಆರಂಭವಾಗುತ್ತದೆ. ಅಷ್ಟೇ ಅಲ್ಲದೇ ಸಂತೋಷ್ ಆನಂದ್ ರಾಮ್ ನಿರ್ದೇಶಕದಲ್ಲಿ ಮೂಡಿಬರುವ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಬೇಕಾಗಿದೆ. ಈ ಕಾರಣದಿಂದ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.

  • ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

    ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

    ಲಕ್ನೋ: ಬ್ಯಾಂಕ್ ಮಾಡಿದ ಚಿಕ್ಕ ತಪ್ಪಿನಿಂದಾಗಿ ಪಿಯುಸಿ ಓದುತ್ತಿರುವ ಯುವಕ ಕೆಲವೇ ಕ್ಷಣದಲ್ಲಿ ಕೋಟ್ಯಾಧಿಪತಿ ಆದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಕೇಶವ್ ಶರ್ಮಾ ಪಿಯುಸಿ ಓದುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಎಸಗಿದ ಚಿಕ್ಕ ತಪ್ಪಿನಿಂದಾಗಿ ಈತನ ಖಾತೆಯಲ್ಲಿ 5 ಕೋಟಿ ರೂ. ಗೂ ಹೆಚ್ಚು ಹಣ ಟ್ರಾನ್ಸ್ ಫರ್ ಆಗಿದೆ. ಟ್ರಾನ್ಸ್ ಫರ್ ಆದ ಬಳಿಕ ಬ್ಯಾಂಕ್ ಕಡೆಯಿಂದ ಕೇಶವ್ ಮೊಬೈಲಿಗೆ ಮೆಸೇಜ್ ಬಂದಿದೆ.

    ವರದಿಗಳ ಪ್ರಕಾರ ಬಾರಾಬಂಕಿನಲ್ಲಿರುವ ಅವಾಸ್ ವಿಕಾಸ್ ಕಲೋನಿಯ ನಿವಾಸಿ ಕೇಶವ್ ಶರ್ಮಾ ಅವರ ಎಸ್‍ಬಿಐ ಸೇವಿಂಗ್ಸ್ ಅಕೌಂಟ್‍ನಲ್ಲಿ ಹಣ ಜಮೆಯಾಗಿತ್ತು. ಮಾರ್ಚ್ 16ರಂದು ಕೇಶವ್ ಅವರ ತಂದೆಯ ಫೋನಿನಲ್ಲಿ ಬ್ಯಾಂಕ್ ಕಡೆಯವರಿಂದ ಮೆಸೇಜ್ ಬಂದಿದೆ. ಮೆಸೇಜ್ ನೋಡಿದ್ದಾಗ ತನ್ನ ಮಗ ಕೇಶವ್ ಖಾತೆಯಲ್ಲಿ 5,55,55,555 ರೂ. ಜಮೆ ಆಗಿತ್ತು.

    ಕೇಶವ್ ಮೊದಲು ಆ ಮೆಸೇಜ್ ನೋಡಿ ನಾನು ಕೋಟ್ಯಾಧಿಪತಿ ಹೇಗೆ ಆದೆ ಎಂಬುದು ಆತನಿಗೆ ನಂಬಲಿಕ್ಕೆ ಆಗಲಿಲ್ಲ. ಈ ಮೆಸೇಜ್ ನೋಡಿದ ಕೇಶವ್ ತಂದೆ ಕೂಡ ದಂಗಾಗಿದ್ದಾರೆ. ಆದರೆ ಇದರ ಬಗ್ಗೆ ಬ್ಯಾಂಕಿನವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

    ದೊಡ್ಡ ಮೊತ್ತ ಅಕೌಂಟ್‍ನಲ್ಲಿ ಜಮೆ ಆಗಿ ಕೆಲವೇ ನಿಮಿಷಗಳಲ್ಲಿ ಬ್ಯಾಂಕಿನವರಿಗೆ ಅವರ ತಪ್ಪು ಗೊತ್ತಾಗಿದೆ. ಜಮೆ ಆಗಿದ್ದ ಹಣದ ಜೊತೆ ಕೇಶವ್ ಖಾತೆಯಲ್ಲಿ ಮೊದಲು ಇದ್ದ ಹಣ ಕೂಡ ತೆಗೆದಿದ್ದಾರೆ ಎಂದು ವರದಿಯಾಗಿದೆ.

    ಕೇಶವ್ ತಂದೆ ಅವರ ಪ್ರಕಾರ ಖಾತೆಯಲ್ಲಿ ಮೊದಲೇ 1,50,000 ರೂ. ಇತ್ತು. ಆದರೆ ಈಗ ಕೋಟಿ ರೂ. ಜೊತೆ ಈ ಹಣವನ್ನು ತೆಗೆದ ಕಾರಣ ಕೇಶವ್ ಅವರ ತಂದೆ ಅಸಮಾಧಾನಗೊಂಡಿದ್ದಾರೆ.

  • ಪ್ರಿಯಕರನ ಜೊತೆ ಸೇರಿ ಜೆಡಿಎಸ್ ಮಾಜಿ ಅಧ್ಯಕ್ಷೆಯಿಂದ ಸ್ಯಾಂಡಲ್‍ವುಡ್ ಫೈನಾನ್ಶಿಯರ್ ಕಿಡ್ನಾಪ್!

    ಪ್ರಿಯಕರನ ಜೊತೆ ಸೇರಿ ಜೆಡಿಎಸ್ ಮಾಜಿ ಅಧ್ಯಕ್ಷೆಯಿಂದ ಸ್ಯಾಂಡಲ್‍ವುಡ್ ಫೈನಾನ್ಶಿಯರ್ ಕಿಡ್ನಾಪ್!

    ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಹಣ ಹಾಕುವ ಕೋಟ್ಯಾಧಿಪತಿಯೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸೇರಿ ನಾಲ್ವರು ಆರೋಪಿಗಳನ್ನು ನಗರದ ಪೊಲೀಸರು ಜೈಲಿಗಟ್ಟಿದ್ದು, ಇದೀಗ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ.

    ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಆರ್ಷಿಯಾ ತನ್ನ ಪ್ರಿಯಕರ ರೇಣುಕಾ ಪ್ರಸಾದ್ ಜೊತೆ ಸೇರಿ ಕೋಟ್ಯಾಧಿಪತಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣ ಎಂಬವರನ್ನು ಜನವರಿ 11ರಂದು ಕಿಡ್ನಾಪ್ ಮಾಡಿದ್ದರು ಎಂಬುದಾಗಿ ತಿಳಿದುಬಂದಿದೆ.

    ಏನಿದು ಘಟನೆ?: ಪ್ರಕರಣದ ಪ್ರಮುಖ ಆರೋಪಿ ರೇಣುಕಾ ಪ್ರಸಾದ್ ಮತ್ತು ಮೂವರು ಸೇರಿ ಸದ್ಯ ಕನ್ನಡ ಚಿತ್ರರಂಗದ ಬಹುತೇಕ ನಿರ್ಮಾಪಕರಿಗೆ ಫೈನಾನ್ಸ್ ಮಾಡ್ತಿದ್ದ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವ್ಯವಹಾರ ಮಾಡ್ತಿರೊ ಕೋಟ್ಯಾಧೀಶ್ವರ ಮಲ್ಲಣ್ಣ ಅವರನ್ನು ಯಲಹಂಕದ ಮನೆಯ ಬಳಿಯಿಂದಲೇ ಅಪಹರಿಸಿದ್ದರು.

    ಮಲ್ಲಣ್ಣ ದುಡ್ಡು ಬಿಚ್ಚೋದಿಲ್ಲ ಅಂತಾ ಕಿಡ್ನಾಪ್ ಮಾಡಿದ್ದ ಆರೋಪಿಗಳು ಬಳಿಕ ಮಲ್ಲಣ್ಣನ ಮುಖಕ್ಕೆ ಮಂಕಿ ಕ್ಯಾಪ್ ಉಲ್ಟಾ ಹಾಕಿ ಎಚ್ ಎಸ್ ಆರ್ ಲೇಔಟ್ ಗೆ ಕರೆದೊಯ್ದಿದ್ದರು. ಅಲ್ಲದೇ ಅವರಲ್ಲಿದ್ದ ಉಡದಾರದಿಂದಲೇ ಕೈ ಕಟ್ಟಿ ಹಾಕಿದ್ದರು. ಬಳಿಕ ಸುಮಾರು 80 ಲಕ್ಷ ಹಣ ವಸೂಲಿ ಮಾಡಿದ್ದಾರೆ.

    ಇತ್ತ ಮಲ್ಲಣ್ಣ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಆರ್ಷಿಯಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾಳೆ. ತನ್ನ ಕಾರ್‍ನ ಮುಂದೆ ಭಾರತ ಸರ್ಕಾರ ಅಂತಾ ಬೋರ್ಡ್ ಹಾಕಿಕೊಳ್ಳುವ ಮೂಲಕ ಪೊಲೀಸರನ್ನೇ ಯಾಮಾರಿಸಿದ್ದಾಳೆ. ಚಿಕ್ಕಬಳ್ಳಾಪುರದ ಬಳಿ ಪೊಲೀಸರು ಕಾರು ತಪಾಸಣೆ ಮಾಡೋದನ್ನು ನೋಡಿದ ಆರೋಪಿ ಪ್ರದೀಪ್ ಆರ್ಷಿಯಾ ಕಾರ್ ನಿಂದ ಇಳಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ಪೊಲೀಸರು ಯಾರವರು ಇಳಿದು ಹೋದ್ರಲ್ಲ ಅಂದಿದ್ದಕ್ಕೆ, ಡ್ರಾಪ್ ಕೇಳಿ ಇಲ್ಲಿ ಇಳಿದು ಹೋದ್ರು ಅಂತ ಆರ್ಷಿಯಾ ಹೇಳಿದ್ದಳು.

    ಪ್ರಕರಣದ ಆರೋಪಿಗಳು ಕೂಡ ಕೋಟ್ಯಾಧಿಪತಿಗಳೇ ಆಗಿದ್ದು, ಆರ್ಷಿಯಾ 20 ಕೋಟಿಯ ಒಡತಿಯಾಗಿದ್ದರೆ, ಆರೋಪಿ ಆರ್ಷಿಯಾ ಪ್ರಿಯಕರ ರೇಣುಕಾ ಪ್ರಸಾದ್ 300 ಕೋಟಿ ಆಸ್ತಿಯ ಒಡೆಯನಾಗಿದ್ದಾನೆ. ಮತ್ತೊಬ್ಬ ಆರೋಪಿ ಕಾಂತರಾಜ್ ಕೂಡ ನೂರಾರು ಎಕರೆ ಆಸ್ತಿಯ ಒಡೆಯನಾಗಿದ್ದು, ಎಚ್‍ಎಸ್‍ಆರ್ ಲೇಔಟ್ ನಲ್ಲಿ ಕಾಂತರಾಜ್ ಗೆ ಸೇರಿದ ನೂರಾರು ಎಕರೆ ಆಸ್ತಿಯಿದೆ ಎನ್ನಲಾಗಿದೆ.

    ಕಿಡ್ನಾಪ್ ಗೆ ಕಾರಣ?: ಆರೋಪಿ ಕಾಂತರಾಜ್ ಅಣ್ಣ ಲಕ್ಷ್ಮೀಪತಿಗೆ ಮಲ್ಲಣ್ಣ ಸುಮಾರು 30 ಲಕ್ಷ ನೀಡಿದ್ದರು. ಆದ್ರೆ ಹಣ ವಾಪಸ್ ನೀಡದೇ, ಸರಿಯಾದ ಸಮಯಕ್ಕೆ ಬಡ್ಡಿಯೂ ನೀಡದೆ ಮಲ್ಲಣ್ಣನಿಗೆ ಆಟ ಆಡಿಸುತ್ತಿದ್ದರು. ಇದರಿಂದ ಸಿಟ್ಟುಗೊಂಡ ಮಲ್ಲಣ್ಣ ಲಕ್ಷ್ಮೀಪತಿಗೆ ಬೈದಿದ್ದಾರೆ. ಈ ಹಿನ್ನೆಲೆಯಲ್ಲಿ ಈತ ಎಲ್ಲರಿಗೂ ಹಣ ಕೊಡ್ತಾನೆ ನಮಗೆ ಕೊಡಲ್ಲ. ಈತನಿಗೆ ಸರಿಯಾದ ಬುದ್ಧಿ ಕಲಿಸಬೇಕು ಅಂತ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪ್ರಕರಣದ ಪ್ರಮುಖ ಆರೋಪಿ ರೇಣುಕಾ ಪ್ರಸಾದ್, ಮಲ್ಲಣ್ಣನಿಗೆ ಚಿರಪರಿಚಿತನಾಗಿದ್ದಾನೆ. ಮಲ್ಲಣ್ಣನ ಮಗ ಹಾಗೂ ರೇಣುಕಾ ಪ್ರಸಾದ್ ಇವರಿಬ್ಬರೂ ಕ್ಲಾಸ್ ಮೇಟ್ಸ್ ಗಳಾಗಿದ್ದಾರೆ. ಅಲ್ಲದೇ ಯಾರಾದರೂ ಹಣ ಬೇಕು ಅಂತ ಕೇಳಿದ್ರೆ ರೇಣುಕಾ ಪ್ರಸಾದ್ ಪ್ರತೀ ಬಾರಿಯೂ ಮಲ್ಲಣ್ಣನ ಬಳಿ ಕರೆದುಕೊಂಡು ಬಂದು ಬಡ್ಡಿಗೆ ಹಣ ಕೊಡಿಸುತ್ತಿದ್ದನು. ಮಲ್ಲಣ್ಣನ ಕೈಯಲ್ಲಿ ಸುಮಾರು 2 ಸಾವಿರ ಕೋಟಿ ಘೋಷಿತ ಆದಾಯವಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಇವರೇ ಹಣ ಹೂಡಿಕೆ ಮಾಡುತ್ತಿದ್ದರು.

    ಘಟನೆಯ ಬಳಿಕ ಆರ್ಷಿಯಾಳನ್ನು ಜೆಡಿಎಸ್ ನಿಂದ ಅಮಾನತು ಮಾಡಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ.