Tag: ಕೋಟ್ಯಧಿಪತಿ

  • ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

    ವಿದೇಶ ಕೆಲಸ ಬಿಟ್ಟು ಭಾರತದಲ್ಲಿ ಟೀ ಅಂಗಡಿ ಹಾಕಿ ಕೋಟ್ಯಧಿಪತಿಯಾದ್ರು!

    – ಚಾಯೋಸ್ ಸಂಸ್ಥೆ ಆರಂಭಿಸಿದ್ದು ಯಾಕೆ..?

    ಚೆನ್ನಾಗಿ ಓದಿ ಕೆಲಸಕ್ಕೆ ವಿದೇಶಕ್ಕೆ ಹೋಗಬೇಕು ಎಂದು ಎಲ್ಲರೂ ಕನಸು ಕಾಣುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿದೇಶದಲ್ಲಿದ್ದ ಉತ್ತಮ ಸಂಪಾದನೆಯ ಉದ್ಯೋಗವನ್ನೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಅಲ್ಲದೆ ಭಾರತದಲ್ಲಿ ಟೀ ವ್ಯಾಪಾರ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

    ಹೌದು. ವ್ಯಾಪಾರ ಕುಟುಂಬದಿಂದ ಬಂದಿರುವ ನಿತಿನ್ ಸಲೂಜಾ (Nitin Saluja) ಅವರ ಕಥೆಯನ್ನು ಕೇಳಿದರೆ ನೀವೂ ಒಂದು ಬಾರಿ ಅಚ್ಚರಿಗೊಳಗಾಗುತ್ತೀರಿ. ಐಐಟಿ ಬಾಂಬೆ (IIT Bombay) ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿರುವ ಹರಿಯಾಣ ಮೂಲದ ನಿತಿನ್ ಪದವಿ ಮುಗಿದ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು.

    ಸುಮಾರು 5 ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ ಅವರು, ತಮ್ಮದೇ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಬೇಕು ಎಂದು ನಿರ್ಧಾರ ಮಾಡಿದರು. ಇದೇ ಗುರಿಯನ್ನು ಇಟ್ಟುಕೊಂಡ ನಿತಿನ್ ಅಮೆರಿಕಾ ನೆಲಕ್ಕೆ ಗುಡ್ ಬೈ ಹೇಳಿ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಇಲ್ಲಿ ಬಂದು ತಾನು ಸ್ಟಾರ್ಟಪ್ ಪ್ರಾರಂಭಿಸುವ ಕನಸನ್ನು ತಂದೆಯ ಮುಂದೆ ಬಿಚ್ಚಿಟ್ಟರು. ಆದರೆ ಇದಕ್ಕೆ ತಂದೆ ಬೆಂಬಲ ನೀಡಿಲ್ಲ. ಇದರಿಂದ ಬೇಸರಗೊಂಡರೂ ನಿತಿನ್ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡರು. ಇದನ್ನೂ ಓದಿ: ತನ್ನ 15 ಎಕರೆ ಆಸ್ತಿಯನ್ನು ಮೋದಿ ಹೆಸರಿಗೆ ಬರೆದುಕೊಡುವುದಾಗಿ 100ರ ವೃದ್ಧೆ ಘೋಷಣೆ

    ಒಂದು ಕಪ್ ಟೀಗೂ ಕಷ್ಟ: ಅಮೆರಿಕದಲ್ಲಿ ಒಂದು ಕಪ್ ಟೀ ಕುಡಿಯಬೇಕಾದರೆ ಪರದಾಡುವಂತಹ ಸ್ಥಿತಿಯನ್ನು ನಿತಿನ್ ತಮ್ಮ ಕಣ್ಣಾರೆ ಕಂಡಿದ್ದರು. ಹೀಗಾಗಿ ಭಾರತದಲ್ಲಿ ಟೀ ಮಾರಾಟ ಮಾಡುವ ಮೂಲಕ ಸಂಪಾದನೆ ಮಾಡಬಹುದೆಂಬುದನ್ನು ಮನದಟ್ಟು ಮಾಡಿಕೊಂಡಿದ್ದರು. ಇಲ್ಲಿ ಈಗಾಗಲೇ ಸಾಕಷ್ಟು ಕೆಫೆಗಳು ತಲೆಯೆತ್ತಿವೆ. ಆದರೆ ಕೆಲವೆಡೆ ಕಾಫಿ ಮಾತ್ರ ಸಿಗುತ್ತವೆ ಎಂಬುದನ್ನು ಕೂಡ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡುವತ್ತ ದಾಪುಗಾಲಿಟ್ಟರು. ಇದು ಅವರ ಜೀವನವನ್ನೇ ಬದಲಿಸಿದ್ದು, ಸದ್ಯ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ.

    ಅಂತೆಯೇ ಸಹೋದ್ಯೋಗಿ ಹಾಗೂ ಸ್ನೇಹಿತ ರಾಘವ್ ವರ್ಮಾ ಜೊತೆಗೆ ಅವರು ಗುರ್ಗಾಂವ್ನ ಸೈಬರ್ ಸಿಟಿಯಲ್ಲಿ ಮೊದಲ ಚಾಯೋಸ್ ಅಂಗಡಿಯನ್ನು ತೆರೆದರು. ಅಲ್ಲದೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆದರು. ಸದ್ಯ ಇದು ಅವರಿಗೆ ಟೀ ಕೆಫೆಗಳ ಶಾಖೆಗಳನ್ನು ತೆರೆಯಲು ದಾರಿ ಮಾಡಿ ಕೊಟ್ಟಿತು. ಬೆಂಗಳೂರಿನಲ್ಲಿಯೂ ಒಂದು ಶಾಖೆ ಇದೆ. ಒಟ್ಟಿನಲ್ಲಿ ಇಂದು ಚಾಯೋಸ್ (Chaayos) ದೇಶಾದ್ಯಂತ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಸುಮಾರು 2051 ಕೋಟಿ ರೂ. ಆದಾಯ ಗಳಿಸುತ್ತಿದೆ.

    ಓದುತ್ತಿದ್ದ ಸಂದರ್ಭದಲ್ಲಿ ಕಾಫಿ ಕುಡಿಯಲು 20 ರೂ. ಕೂಡ ಇರಲಿಲ್ಲ. ಆಗ ಗೆಳೆಯರ ಬಳಿಯಿಂದ ತಲಾ ಒಂದೊಂದು ರೂ. ಕಲೆಕ್ಟ್ ಮಾಡಿ ಕಾಫಿ ಕುಡಿದಿರುವ ಬಗ್ಗೆ ನಿತಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ತುಮಕೂರು: ನಂಬಿಕೆ ದ್ರೋಹ ಅನ್ನೋದು ಮನುಷ್ಯನ ಹುಟ್ಟುಗುಣ. ಇಂಥ ಮೋಸಗಳಿಗೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಒಳಗಾಗುತ್ತಿರುತ್ತಾರೆ. ಅಂಥದ್ದೇ ಒಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನವರಾದ ಅಂತರಾಜ್ ಎಂಬವರು ತಮ್ಮ ಪುಟ್ಟ ಕುಟುಂಬದೊಂದಿಗೆ ತುಮಕೂರಿ (Tumakuru) ನಲ್ಲಿ ವಾಸ ಮಾಡುತ್ತಿದ್ದರು. ಜೀವನಕ್ಕಾಗಿ ಒಳ್ಳೆಯ ಸಂಪಾದನೆ ಮಾಡಿ ಬಂಗಲೆ, ಕಾರುಗಳು, ಬೈಕ್‍ಗಳ ಮಾಲೀಕರಾಗಿದ್ರು. ಆದರೆ ಸದ್ಯಕ್ಕೆ ಈ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದೆ.

    ಹೌದು. ಸಿರಿವಂತ ಅಂತರಾಜ್ ತಮ್ಮ ಬಂಗಲೆ ಮಾರಿಕೊಂಡು ಈಗ ನೆಂಟರ ಹಂಗಿನಲ್ಲಿದ್ದಾರೆ. ಐಷಾರಾಮಿ ಕಾರಲ್ಲಿ ಓಡಾಡುತ್ತಿದ್ದವರು ಈಗ ಟ್ರೈನ್ ಟಿಕೆಟ್‍ಗೂ ಪರದಾಡ್ತಿದ್ದಾರೆ. ಅಷ್ಟಕ್ಕೂ ಈ ಕುಟುಂಬದ ಈ ಸ್ಥಿತಿಗೆ ಕಾರಣ ನಂಬಿದ ವ್ಯಕ್ತಿಯೊಬ್ಬ ಮಾಡಿದ ಮಹಾದೋಖಾ. ಒಂದಷ್ಟು ಹಣ ಇಟ್ಕೊಂಡು ಸುಖವಾಗಿದ್ದ ಅಂತರಾಜ್‍ಗೆ ಕೆಲವು ವರ್ಷಗಳ ಹಿಂದೆ ವೈ.ಸಿ ಸಿದ್ದರಾಮಯ್ಯ ಎಂಬವರ ಪರಿಚಯ ಆಗಿತ್ತು.

    ಈ ಪರಿಚಯ ವ್ಯವಹಾರಕ್ಕೆ ತಿರುಗಿ ಅವರ ಸಂಬಂಧಿ ಬಸವರಾಜ್ ಎಂಬವರ ತ್ರಿ ಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸ್ತಾ ಇದ್ದರು. ಮುಂದೆ ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದು ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರಂತೆ. ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ – SC, ST ಸಮುದಾಯಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್‌

    ಸ್ವತಃ ವೈ.ಸಿ.ಸಿದ್ದರಾಮಯ್ಯರೇ ಅಂತರಾಜ್‍ನನ್ನು ಬೆಂಗಳೂರಿ (Bengaluru) ನಿಂದ ಕರೆದುಕೊಂಡು ಬಂದು ಹೊಟೆಲ್ ಬಾಡಿಗೆಗೆ ಕೊಡಿಸಿದ್ರು. ಬಳಿಕ ಇವರ ಮಾತುಗಳನ್ನ ನಂಬಿದ ಅಂತರಾಜ್ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಈ ಹೋಟೆಲ್ (Hotel) ರೆಡಿ ಮಾಡಿಸಿದ್ರಂತೆ. ಆದರೆ ಈಗ ಅಂತರಾಜ್ ಅವರನ್ನೇ ಹೋಟೆಲ್‍ನಿಂದ ಹೊರಹಾಕಿ, ಹಣ ವಾಪಸ್ ನೀಡಲು ಸಾಧ್ಯ ಇಲ್ಲ ಎಂದು ಧಮ್ಕಿ ಹಾಕಿದ್ದಾರಂತೆ. ನಷ್ಟ ಆದ ಸುಮಾರು 1.5 ಕೋಟಿ ರೂಪಾಯಿಯಲ್ಲಿ 70 ಲಕ್ಷ ಕೊಡೋದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದ ವೈ.ಸಿ.ಸಿದ್ದರಾಮಯ್ಯ ಮತ್ತೇ ಉಲ್ಟಾ ಹೊಡೆದಿದ್ದಾರಂತೆ.

    ಸದ್ಯ ಹೊಟೇಲ್‍ಗಾಗಿ ಅಂತರಾಜ್ ಸುಮಾರು 2 ಕೋಟಿ ರೂಪಾಯಿ ಬ್ಯಾಂಕಿನಿಂದ ಸಾಲ ಮಾಡಿದ್ರಿಂದ ಬ್ಯಾಂಕ್‍ನವರು ಅಂತರಾಜ್ ಅವರ ಡುಫ್ಲೆಕ್ಸ್ ಮನೆ, ಮತ್ತೊಂದು 3 ಅಂತಸ್ತಿನ ಮನೆಯನ್ನು ಹರಾಜು ಹಾಕಿದ್ದಾರೆ. ಜೊತೆಗೆ ಎಕ್ಸ್ ಯುವಿ ಕಾರು, ಇನ್ನೋವಾ ಕಾರು ಹಾಗೂ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನೂ ಮಾರಿ ಅಂತರಾಜ್ ಕುಟುಂಬ ಹೋಟೆಲ್ ಮುಂದಿನ ರಸ್ತೆಯಲ್ಲಿ ನ್ಯಾಯಕ್ಕಾಗಿ ಧರಣಿ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ  ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

    ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

    ಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತು ಟಿಕ್ ಟಾಕ್, ಸಂಗೀತದ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಭೀಮಪ್ಪ ಗುರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಇಂದು ಅವರ ಹೊಸ ಮನೆ ಗೃಹಪ್ರವೇಶ ಆಗಬೇಕಿತ್ತು. ಅದಕ್ಕೂ ಎರಡು ದಿನ ಮುನ್ನವೇ ಅನುಮಾನಾಸ್ಪದವಾಗಿ 27 ವರ್ಷದ ತಿಮ್ಮಣ್ಣನ ಮೃತದೇಹ ಸಿಕ್ಕಿದೆ.

    ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ಈ ದುರಂತ ನಡೆದಿದ್ದು,  ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶಂಕಿಸಲಾಗಿದೆ. ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ  ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಅಮಲಝರಿ ಗ್ರಾಮದ ತಿಮ್ಮಣ್ಣ ಎಸ್ಸೆಸ್ಸೆಲ್ಸಿವರೆಗೂ ವ್ಯಾಸಂಗ ಮಾಡಿದ್ರಲ್ಲದೇ, ಈ ಹಿಂದೆ ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ 6.40 ಲಕ್ಷ ರೂ ಗೆದ್ದಿದ್ದರು. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಹಾಸ್ಯ, ಸಂಗೀತದ ಮೂಲಕ ರಂಜಿಸಿ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳನ್ನ ಸಹ ಹೊಂದಿದ್ದರು. ಖೋ ಖೋ ಕ್ರೀಡಾಪಟು ಸಹ ಆಗಿದ್ದಂತಹ ತಿಮ್ಮಣ್ಣ ಗ್ರಾಮದ ಮಕ್ಕಳಿಗೆ ತರಬೇತಿ ಕೊಡ್ತಿದ್ದರು ಎನ್ನಲಾಗಿದೆ. ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗಾಗಿ ಮತ್ತು ಹೊಸ ಕಟ್ಟಿಸುವ ಸಲುವಾಗಿ 16 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಹೀಗಾಗಿ ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ದುರ್ದೈವದ ಸಂಗತಿ ಅಂದ್ರೆ ತಿಮ್ಮಣ್ಣ ತಾನು ದುಡಿದು, ಸಾಲ ಮಾಡಿ ನಿರ್ಮಿಸಿದ್ದ ಹೊಸ ಮನೆ ಗೃಹ ಪ್ರವೇಶ ಇವತ್ತು ನಡೆಯಬೇಕಿತ್ತು. ಮನೆ ಗೃಹಪ್ರವೇಶಕ್ಕಾಗಿ ಬಬಲಾದಿ ಸ್ವಾಮೀಜಿಗೂ ಸಹ ಆವ್ಹಾನಿಸಲಾಗಿತ್ತಂತೆ. ಆದ್ರೆ ಹೊಸಮನೆ ಪ್ರವೇಶಕ್ಕೂ ಮುನ್ನವೇ ತಿಮ್ಮಣ್ಣ ಆತ್ಮಹತ್ಯೆಗೆ ಶರಣಾಗಿದ್ದು ಅವ್ರ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಇನ್ನು ಸರ್ಕಾರಿ ನೌಕರಿಯಲ್ಲಿದ್ದ ತಿಮ್ಮಣ್ಣಗೆ, ಒಳ್ಳೆ ಸ್ಯಾಲರಿ ಇತ್ತು‌. ನೌಕರಿ ಮೇಲೆ 16 ಲಕ್ಷ ಸಾಲ ಮಾಡಿ ಒಟ್ಟು 18 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದ. ಆತನಿಗೆ ಯಾವುದೇ ದುಡ್ಡಿನ ಸಮಸ್ಯೆ ಇರಲಿಲ್ಲ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಆತ್ಮಹತ್ಯೆ ಮಾಡಿಕೊಳ್ಳುವ ದಿನ ಅಂದ್ರೆ ನಿನ್ನೆ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್‌ಗೆ ಹೋಗಿ ಮನೆ ಓಪನಿಂಗ್ ಬಗ್ಗೆ ಚರ್ಚಿಸಿದ್ದನಂತೆ. ಹೀಗಾಗಿ ತಿಮ್ಮಣ್ಣ ಆತ್ಮಹತ್ಯೆಯ ಘಟನೆ ಆತನ ಸ್ನೇಹಿತರು, ಸಂಬಂಧಿಕರಲ್ಲಿ ಆಶ್ಚರ್ಯ ತರಿಸಿದೆ. ಗೃಹ ಪ್ರವೇಶಕ್ಕೆ ಅನೇಕ ಸ್ನೇಹಿತರನ್ನು ಆಹ್ವಾನಿಸಿದ್ದ ತಿಮ್ಮಣ್ಣ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ ಎನ್ನುತ್ತಿದ್ದಾರೆ ಅವರ ಸ್ನೇಹಿತರು.

  • ದುಬಾರಿ ವಿಚ್ಛೇದನ – ಈಗ ಶತಕೋಟ್ಯಧೀಶರ ಪಟ್ಟಿಯಲ್ಲಿ ಪತ್ನಿಗೆ ಸ್ಥಾನ

    ದುಬಾರಿ ವಿಚ್ಛೇದನ – ಈಗ ಶತಕೋಟ್ಯಧೀಶರ ಪಟ್ಟಿಯಲ್ಲಿ ಪತ್ನಿಗೆ ಸ್ಥಾನ

    ಬೀಜಿಂಗ್: ಉದ್ಯಮಿಯೊಬ್ಬರು ವಿಚ್ಛೇದನ ನೀಡಿದ ಪರಿಣಾಮ ಪತ್ನಿ ಈಗ ಏಷ್ಯಾದ ಶತಕೋಟ್ಯಧೀಶರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಚೀನಾದ ಶೆನ್ಜೆನ್ ನಗರದಲಿರುವ ಕಾಂಗ್ಟೈ ಬಯಲಾಜಿಕಲ್ ಪ್ರೊಡಕ್ಟ್ ಕಂಪನಿಯ ಮಾಲೀಕ ಡು ವೀಮಿನ್ 16.13 ಕೋಟಿ ಷೇರುಗಳನ್ನು ಪತ್ನಿ ಯುವಾನ್ ಲಿಪಿಂಗ್‍ಗೆ ವರ್ಗಾವಣೆ ಮಾಡಿದ್ದಾರೆ.

    ಮೇ 29ರಂದು ಕಂಪನಿ ಷೇರು ಮಾರುಕಟ್ಟೆಗೆ ನೀಡಿದ ವಿವರದಲ್ಲಿ ಈ ಮಾಹಿತಿಯನ್ನು ನೀಡಿದ್ದರಿಂದ ಯುವಾನ್ ಲಿಪಿಂಗ್ ಈಗ ಶತಕೋಟ್ಯಧೀಶರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    3.2 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿರುವ 49 ವರ್ಷದ ಲಿಪಿಂಗ್ 2011ರ ಮೇ ತಿಂಗಳಿನಿಂದ 2018ರ ಆಗಸ್ಟ್ ವರೆಗೆ ಕಂಪನಿಯ ನಿರ್ದೇಶಕಿಯಾಗಿದ್ದರು.

    ವಿಶ್ವದ ಅತ್ಯಂತ ದುಬಾರಿ ವಿಚ್ಛೇದನವನ್ನು ಅಮೆಜಾನ್ ಕಂಪನಿಯ ಜೆಫ್ ಬೆಜೋಸ್ ಪತ್ನಿ ಮೆಕೆಂಜಿ ಬೆಜೋಸ್ ಗೆ ನೀಡಿದ್ದಾರೆ. ವಿಚ್ಛೇದನ ಸಮಯದಲ್ಲಿ ಕಂಪನಿಯ ಶೇ.4 ರಷ್ಟು ಷೇರುಗಳನ್ನು ನೀಡಿದ್ದರು. 48 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಪಡೆಯುವ ಮೂಲಕ ವಿಶ್ವದ ಶತಕೋಟಿ ಮಹಿಳೆಯರ ಪಟ್ಟಿಯಲ್ಲಿ ಮೆಕೆಂಜಿ ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ.

  • 1 ಕರೆಯಿಂದ ಕೋಟ್ಯಧಿಪತಿಯಾದ ವ್ಯಕ್ತಿ

    1 ಕರೆಯಿಂದ ಕೋಟ್ಯಧಿಪತಿಯಾದ ವ್ಯಕ್ತಿ

    ಚಂಡಿಗಢ್: ಪಂಜಾಬ್‍ನ ಹೋಶಿಯಾಪುರದಲ್ಲಿ ಒಂದು ಫೋನ್ ಕರೆಯಿಂದ ವ್ಯಕ್ತಿಯೊಬ್ಬ ಕೋಟ್ಯಧಿಪತಿ ಆಗಿದ್ದಾರೆ.

    ಸನ್‍ಪ್ರೀತ್ ಲಾಟರಿ ಗೆದ್ದು ಕೋಟ್ಯಧಿಪತಿ ಆಗಿದ್ದಾರೆ. ಸನ್‍ಪ್ರೀತ್ ಮೊಬೈಲ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಒಂದು ದಿನ ಅವರಿಗೆ ನೀವು ಲಾಟರಿ ಗೆದಿದ್ದೀರಾ ಎಂದು ಕರೆ ಮಾಡಿದ್ದಾರೆ. ಆದರೆ ಸನ್‍ಪ್ರೀತ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.

    ತಾನು ಲಾಟರಿ ಗೆದಿದ್ದೇನೆ ಎಂದು ಯಾರೋ ಸುಮ್ಮನೆ ಹೇಳಿ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸನ್‍ಪ್ರೀತ್ ಎಂದುಕೊಂಡಿದ್ದರು. ಅಲ್ಲದೆ ಈ ವಿಷಯವನ್ನು ತನ್ನ ಗೆಳೆಯರ ಬಳಿ ಹೇಳಿದ್ದಾಗ ನಿಜ ಗೊತ್ತಾಗಿದೆ. ಸನ್‍ಪ್ರೀತ್ ಹಾಗೂ ಅವರ ಗೆಳೆಯರು ಈ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ್ದಾಗ ಸನ್‍ಪ್ರೀತ್ ಕೆಲವು ದಿನಗಳ ಹಿಂದೆಯೇ ಕೋಟ್ಯಧಿಪತಿ ಆಗಿದ್ದಾರೆ ಎಂದು ತಿಳಿದು ಬಂತು. ಬಳಿಕ ಏಜೆನ್ಸಿ ಅವರನ್ನು ಸಂಪರ್ಕಿಸಿದ್ದಾರೆ.

    ಏಜೆನ್ಸಿ ಅವರು ಕೂಡ ಲಾಟರಿ ಹಣ ನೀಡಲು ಸನ್‍ಪ್ರೀತ್‍ನನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಬಳಿಕ ಸನ್‍ಪ್ರೀತಿ ಅವರನ್ನು ಭೇಟಿ ಮಾಡಿ ಗೆದ್ದ 1 ಕೋಟಿ ಲಾಟರಿ ಹಣವನ್ನು ಅವರಿಗೆ ನೀಡಿದ್ದಾರೆ.

    ಲಾಟರಿಯಲ್ಲಿ ಒಂದು ಕೋಟಿ ರೂ. ಗೆದಿದ್ದಕ್ಕೆ ಸನ್‍ಪ್ರೀತಿ ಕುಟುಂಬದವರು ಸಂತಸಗೊಂಡಿದ್ದಾರೆ. ಅಲ್ಲದೆ ಸಿಹಿ ಹಂಚಿ ಸಂಭ್ರಮ ಪಡುತ್ತಿದ್ದಾರೆ.

  • ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

    ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

    ಬೆಂಗಳೂರು: ಇತ್ತೀಚೆಗೆ ‘ಕನ್ನಡದ ಕೋಟ್ಯಧಿಪತಿ’ ಯಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಮೀರಾಚಾರ್ಯ ತಮ್ಮ ಪತ್ನಿ ಶ್ರಾವಣಿಯವರಿಗೆ ಹೇಳಿದ ಮಾತಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದರು. ಈಗ ಸ್ವತಃ ಸಮೀರಾಚಾರ್ಯ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಫೇಸ್‍ಬುಕ್ ನಲ್ಲಿ ಒಂದು ವಿಡಿಯೋ ಮಾಡಿ ನಡೆದ ಘಟನೆಗಳ ಬಗ್ಗೆ ವಿವರ ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. “ಬಹಳ ದಿನದಿಂದ ನನ್ನನ್ನು ಎಲ್ಲರೂ ನೆನೆಸಿಕೊಳ್ಳುತ್ತಿದ್ದೀರಿ. ಫೇಸ್ ಬುಕ್ ಪೇಜ್ ನಲ್ಲಿ ಬಹಳ ಜನರು ವಿಸಿಟ್ ಮಾಡುತ್ತಿದ್ದಾರೆ. ಆದ್ದರಿಂದ ಇತ್ತೀಚೆಗೆ ಸಮೀರಾಚಾರ್ಯ ಫುಲ್ ವೈರಲ್ ಆಗಿದ್ದಾರೆ. ಆದರೆ ಇಷ್ಟು ದಿನ ಸಮೀರಾಚಾರ್ಯ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದರು ಯಾಕೆ ವೈರಲ್ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಒಳ್ಳೆಯ ಕೆಲಸ
    ಪಾಠ – ಪ್ರವಚನ ಮಾಡುತ್ತಿದ್ದರೂ ಅದನ್ನು ಯಾರು ಶೇರ್ ಮಾಡಲಿಲ್ಲ. ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಹೇಳಿದ್ದರು ಅದನ್ನು ಯಾರು ಶೇರ್ ಮಾಡಿಲ್ಲ. ಪ್ರತಿ ಶನಿವಾರ, ಭಾನುವಾರ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ಉಚಿತವಾಗಿ ಕೊಡುತ್ತಿದ್ದರು ಅದನ್ನು ಯಾರು ವೈರಲ್ ಮಾಡಿಲ್ಲ. ಇನ್ನು ಸ್ಕೂಲ್ ತೆಗೆದು ರೈತರ ಮತ್ತು ಸೈನಿಕರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅಂತ ಹೊರಟರು. ಅದನ್ನು ಯಾರು ಅಷ್ಟು ವೈರಲ್ ಮಾಡಲಿಲ್ಲ ಎಂದು ಸಮೀರಾಚಾರ್ಯ ಹೇಳಿದ್ದಾರೆ.

    ಇತ್ತೀಚೆಗೆ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಮಾತನಾಡಿ, ಆ ಕಾರ್ಯಕ್ರಮದ ವಾತಾವರಣಕ್ಕೆ ನಗು ತುಂಬಿ, ಎಲ್ಲರನ್ನು ನಗಿಸಲು ಪ್ರಯತ್ನ ಮಾಡಿದ್ದರು. ಅದೇ ಈಗ ಸಮೀರಾಚಾರ್ಯರಿಗೆ ಮುಳುವಾಯ್ತು ಅನ್ನಿಸುತ್ತದೆ. ಸಮೀರಾಚಾರ್ಯ ತಮ್ಮ ಹೆಂಡತಿನ ಬೈದರು ಎಂದು ಎಷ್ಟೋ ಜನ ಹೇಳುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಿದೆ ಎಂದು ಹೇಳಿ ಕೋಟ್ಯಧಿಪತಿ, ಬಿಗ್‍ಬಾಸ್ ಕೆಲವು ದೃಶ್ಯಗಳನ್ನು ತೋರಿಸಿದ್ದಾರೆ.

    ಕೋಟ್ಯಧಿಪತಿ:
    ಕೋಟ್ಯಧಿಪತಿ ಕಾರ್ಯಕ್ರಮದಲ್ಲಿಯೇ ಜಯಶ್ರೀ ಮೇಡಂ ಒಂದು ಪ್ರಶ್ನೆ ಕೇಳಿದ್ದರು. `ಮದುವೆ ಆದ ಮೇಲೆ ಗಂಡಂದಿರು ಹೆಂಡತಿಯ ಮೇಲೆ ಪ್ರೀತಿ ಕಡಿಮೆ ಮಾಡುತ್ತಾರೆ ಯಾಕೆ?, ಅದು ಎಲ್ಲಿಗೆ ಹೋಗುತ್ತದೆ?’ ಎಂದು ಕೇಳಿದ್ದರು. ಅದಕ್ಕೆ ನಾನು `ಪ್ರೀತಿ ಎಲ್ಲಿಯೂ ಹೋಗುವುದಿಲ್ಲ. ನಾನು ಎಲ್ಲಿ ಹೋದರು ನನ್ನ ಪ್ರೀತಿ ನನ್ನ ಜೊತೆಗೆ ಬರುತ್ತದೆ’ ಅಂತ ನನ್ನ ಹೆಂಡತಿಯನ್ನು ತೋರಿಸಿ ಹೇಳಿದ್ದೆ ಎಂದು ಸಮೀರಾಚಾರ್ಯ ಹೇಳಿದ್ದಾರೆ.

    ಬಿಗ್‍ಬಾಸ್
    `ಬಿಗ್ ಬಾಸ್’ ನಲ್ಲಿ ಕಾರ್ಯಕ್ರಮದಲ್ಲಿ ಇರುವಾಗ ಹೆಂಡತಿಯ ಧ್ವನಿ ಕೇಳಿ ಕಣ್ಣೀರು ಹಾಕಿದ್ದೇನೆ. ಬಳಿಕ ಅವರು `ಬಿಗ್ ಬಾಸ್’ ಮನೆಯೊಳಗೆ ಬಂದು ಹಾರ ಹಾಕಿ ಹೋಗಿದ್ದರು. ನಂತರ ಆ ಹಾರದಿಂದ ಬಿದ್ದ ಹೂವನ್ನು ಒಂದೊಂದೆ ಆರಿಸಿ ತೆಗೆದು ಇಟ್ಟುಕೊಂಡಿದ್ದೆ. ಹೀಗಿದ್ದಾಗ ಹೆಂಡತಿಯನ್ನು ಅಷ್ಟು ಜನರ ಮುಂದೆ ಬೈಯುವುದಕ್ಕೆ ಸಾಧ್ಯ ಆಗುತ್ತದೆಯಾ. ಒಂದು ವೇಳೆ ಬೈದರೆ ಮನೆ ಮುಟ್ಟಲಿಕ್ಕೆ ಆಗುತ್ತಾ ನೀವೇ ಹೇಳಿ. ಬೈದರು ಅಂತ ಹೇಗೆ ವಿಚಾರ ಮಾಡುತ್ತೀರಿ ಎಂದು ಹೇಳಿದ್ದಾರೆ.

    ಬಿಗ್ ಬಾಸ್ ನಲ್ಲಿ ನನ್ನ ಹೆಂಡತಿಯ ಪತ್ರ ಬಂದಿದ್ದು, ಅದನ್ನು ಸುಟ್ಟು ಹಾಕಿದ್ದಾರೆ. ಅದು ನನಗೆ ಸಿಕ್ಕಿಲ್ಲ ಎಂದು ನೀರಿಗೆ ಹಾರಿದ್ದೆ. ಅದನ್ನು ಟ್ರೋಲ್ ಮಾಡಿದ್ದರು, ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡಿದ್ರು ಟ್ರೋಲ್ ಮಾಡಿತ್ತೀರಿ, ಏನಾದರೂ ಹೇಳಿದರು ಟ್ರೋಲ್ ಮಾಡುತ್ತೀರಿ. ಹೀಗಿರುವಾಗ ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡುತ್ತೇನೆ ಎಂದು ನಿಮಗೆ ಸಾಬೀತು ಮಾಡಬೇಕಾಗಿಲ್ಲ ಎಂದ್ರು.

    ಸ್ಪಷ್ಟನೆ
    ಈಗ ತುಂಬಾ ಜನರು ಸಮೀರಾಚಾರ್ಯ ಅವರು ಹೆಂಡತಿಗೆ ಹೇಳಿದ ಮಾತು ತಪ್ಪು ಅಂತ ಹೇಳಿದ್ದಾರೆ. ಕನ್ನಡದ ಕೋಟ್ಯಧಿಪತಿಯ ಸಂಪೂರ್ಣ ವಿಡಿಯೋ ನೋಡಿಕೊಂಡು ಬನ್ನಿ. ಅಲ್ಲಿದ್ದವರೆಲ್ಲರೂ ನಗುತ್ತಿದ್ದರು. ಜನರು, ಕ್ಯಾಮೆರಾ ಮ್ಯಾನ್, ಸ್ಪರ್ಧಿಗಳು ಎಲ್ಲರೂ ತಮಾಷೆಯಲ್ಲಿ ಇದ್ದೇವು. ನಾನು ಉತ್ತರಿಸಿದ ಪ್ರತಿ ಉತ್ತರ ನಗುವ ಹಾಗೆ ಇತ್ತು. ನನ್ನ ಹೆಂಡತಿ, ರಮೇಶ್ ಸರ್ ಎಲ್ಲರೂ ನಗುತ್ತಿದ್ದಾರೆ. ನಾನು ಅದನ್ನು ತಮಾಷೆಯಾಗಿ ಹೇಳಿದ್ದೆ. ಆಕೆಗೆ ಅನಮಾನ, ಬೇಸರ ಮಾಡಬೇಕು ಎಂದು ಹೇಳಿಲ್ಲ. ನೀವು ಅದನ್ನು ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡು ಟ್ರೋಲ್ ಮಾಡಿದ್ದೀರಿ. ಅದು ತಮಾಷೆಯಷ್ಟೆ ಎಂದು ಸಮೀರಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv