Tag: ಕೋಟೆನಾಡು

  • ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

    ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

    ಚಿತ್ರದುರ್ಗ: ಲಾಭವಿಲ್ಲ ಎಂದರೆ ಹೆತ್ತ ತಂದೆ-ತಾಯಿಗಳಿಗೆ ಒಪ್ಪೊತ್ತಿನ ಊಟ ಹಾಕದ ಮಕ್ಕಳಿರುವ ಕಾಲವಿದು. ಆದರೆ ಜನರಿಂದ ಅಪಘಾತಕ್ಕೀಡಾಗಿ, ಸಾವು-ಬದುಕಿನ ಮಧ್ಯೆ ಓಡಾಡುವ ರೋಗಗ್ರಸ್ತ ಸಾಕು ಪ್ರಾಣಿಗಳ ರಕ್ಷಣೆಗೆ ಕೋಟೆನಾಡು ಚಿತ್ರದುರ್ಗದ ಸ್ಪೂರ್ತಿ ಎಂಬ ಯುವತಿ ಪಣ ತೊಟ್ಟಿದ್ದಾರೆ.

    ಹೆತ್ತ ಮಕ್ಕಳೇ ವಯಸ್ಸಾದ ತಂದೆ-ತಾಯಿಯನ್ನು ಹಾರೈಕೆ ಮಾಡಲಾಗದೇ ವೃದ್ಧಾಶ್ರಮಕ್ಕೆ ಸೇರಿಸುವ ಕಾಲವಿದು. ಅಲ್ಲದೆ ಸಾಕಿರುವ ನಾಯಿಗೆ ಚರ್ಮರೋಗ ಬಂತು ಎಂದರೆ ಬೀದಿಗೆ ಬಿಡೋ ಸ್ವಾರ್ಥಿಗಳ ಜಗವಿದು. ಸಾಕಿದ ನಾಯಿಯು, ರಸ್ತೆಯಲ್ಲಿ ಅಪಘಾತಕ್ಕೀಡಾದ ಬಿದಿ ಹೆಣವಾಗಿ ದುರ್ನಾತ ಬೀರಿದರು ಸಹ ಆ ನಾಯಿಯ ಮಾಲೀಕ ಒಮ್ಮೆ ಕೂಡ ಅದರತ್ತ ತಿರುಗಿ ಸಹ ನೋಡದವರೇ ಹೆಚ್ಚು. ಆದರೆ ಸ್ಪೂರ್ತಿ ಎನ್ನುವ ಯುವತಿ ಮಾತ್ರ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೇ ನಿಸ್ವಾರ್ಥದಿಂದ ಇಂತಹ ಕಾಲಘಟ್ಟದಲ್ಲೂ ಮಾನವೀಯ ಮೌಲ್ಯಗಳನ್ನು ತಮ್ಮ ಚಿಕ್ಕವಯಸ್ಸಿನಲ್ಲೇ ಅಳವಡಿಸಿಕೊಂಡು, ಬೀದಿನಾಯಿಗಳ ಪಾಲನೆಯ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

    ಚಿತ್ರದುರ್ಗದಲ್ಲಿ ನೆಲೆಸಿರುವ ಈಕೆ, ಕಳೆದ ಮುರ್ನಾಲ್ಕು ವರ್ಷಗಳಿಂದ ಅಪಘಾತಕ್ಕೀಡಾಗಿ ಸಾವು-ಬದುಕಿನ ನಡುವೇ ಒದ್ದಾಡುವ ಬೀದಿನಾಯಿ, ಬೀಡಾಡಿ ದನಗಳು, ಅಳಿಲು, ಬೆಕ್ಕು, ಕುದುರೆ, ಹಾವು ಮತ್ತು ಇತರೆ ಸಾಕು ಪ್ರಾಣಿಗಳ ಜೀವರಕ್ಷಕಿ ಎನಿಸಿದ್ದಾರೆ. ಇಲ್ಲಿಯವರೆಗೆ 130ಕ್ಕೂ ಹೆಚ್ಚು ರೋಗಗ್ರಸ್ಥ ಪ್ರಾಣಿಗಳ ಜೀವವನ್ನು ಕಾಪಾಡಿದ್ದಾರೆ. ಹೀಗಾಗಿ ಕೋಟೆನಾಡಿನ ಬೀಡಾಡಿ ಪ್ರಾಣಿಗಳ ಪಾಲಿಗೆ ಈ ಯುವತಿ ಸ್ಪೂರ್ತಿಯು ನಿಸ್ವಾರ್ಥ ಭಾವದ ವಾತ್ಸಲ್ಯಮಯಿಯಾಗಿದ್ದಾರೆ.

    ಈ ಯುವತಿಯ ಕಾರ್ಯವನ್ನು ಗಮನಿಸಿದ ಜೈನ ಸಮುದಾಯದ 20 ಜನ ಯುವಕರು ಈಕೆಗೆ ಸಾಥ್ ನೀಡಿದ್ದಾರೆ. ಯಾವುದೇ ಸಮಯದಲ್ಲಾದರು ಬೀಡಾಡಿ ಸಾಕು ಪ್ರಾಣಿಗಳಿಗೆ ಅಪಘಾತ ಸಂಭವಿಸಿದರೆ ಈ ತಂಡವು ತಕ್ಷಣ ಹಾಜರ್ ಆಗುತ್ತೆ. ಆ ವೇಳೆ ಸ್ವಲ್ಪವೂ ಮುಜುಗರ ಹಾಗು ಅಸಹ್ಯಪಡದೇ, ಪ್ರೀತಿಯಿಂದ, ಕಾಳಜಿಯಿಂದ ಪ್ರಾಣಿಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಗಾಯಗೊಂಡ ಹಾಗೂ ರೋಗಗ್ರಸ್ಥ ಪ್ರಾಣಿಗಳ ಪಾಲನೆಗಾಗಿ ಜೈನ್ ಕಾಲೋನಿಯಲ್ಲಿ ಒಂದು ನಿವೇಶನವನ್ನೇ ಮೀಸಲಿಟ್ಟಿರುವ ಯುವಕರ ತಂಡವು ಈ ಕಾರ್ಯಕ್ಕಾಗಿ ಪ್ರತೀ ತಿಂಗಳು 35,000 ರೂ. ಅಧಿಕ ಹಣ ಖರ್ಚು ಮಾಡ್ತಾರೆ. ಇದನ್ನೂ ಓದಿ: ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    ತಲಾ ನಾಲ್ಕೈದು ಬೀದಿ ನಾಯಿಗಳನ್ನು ದತ್ತು ಪಡೆದು ಹಾರೈಕೆ ಮಾಡ್ತಿದ್ದಾರೆ. ಆದರೆ ಯಾರ ಬಳಿಯೂ ಇದಕ್ಕಾಗಿ ಹಣ ಸಂಗ್ರಹಿಸಿದೇ ನಿಸ್ವಾರ್ಥ ಸೇವೆ ಮಾಡ್ತಾ ಮಾನವೀಯತೆ ಮೆರೆಯುತ್ತಿರುವ ಶ್ಲಾಘನೀಯ. ಯಾವುದೇ ಲಾಭವಿಲ್ಲದೆ ಮನೆಯಲ್ಲಿ ಸಾಕಿದ ನಾಯಿಗೂ ತುಂಡು ರೊಟ್ಟಿ ಹಾಕದ ಜನರ ನಡುವೇ ಸ್ಪೂರ್ತಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದ್ದಾರೆ.

  • ನಿಮ್ಮ ಕಥೆ ಏನಾಗುತ್ತೆ ಗೊತ್ತಾ ಅಂತಾ ಎಸ್‍ಐ ಧಮ್ಕಿ: ಪ್ರೀತಿಸಿ ಮದ್ವೆಯಾದ ಜೋಡಿ ಆರೋಪ

    ನಿಮ್ಮ ಕಥೆ ಏನಾಗುತ್ತೆ ಗೊತ್ತಾ ಅಂತಾ ಎಸ್‍ಐ ಧಮ್ಕಿ: ಪ್ರೀತಿಸಿ ಮದ್ವೆಯಾದ ಜೋಡಿ ಆರೋಪ

    ಚಿತ್ರದುರ್ಗ: ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಅವರಲ್ಲಿತ್ತು. ಅದಕ್ಕಾಗಿ ಪೋಷಕರ ವಿರೋಧದ ನಡುವೆಯೂ ಮದ್ವೆ ಕೂಡ ಮಾಡ್ಕೊಂಡಿದ್ದಾರೆ. ಎಲ್ಲಾ ಸರಿಯಾಯಿತು ಅಂದುಕೊಳ್ಳುವಾಗ್ಲೇ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ನಿಮ್ಮಿಬ್ಬರನ್ನು ದೂರ ಮಾಡ್ತೀನಿ. ನೀವಿಬ್ಬರೂ ಹೇಗೆ ಜೊತೆಯಾಗಿ ಇರ್ತೀರಿ. ನಿಮ್ಮನ್ನ ಏನ್ ಮಾಡ್ತೀನಿ ನೋಡ್ತಿರಿ ಅಂತೆಲ್ಲಾ ಆವಾಜ್ ಹಾಕಿ ವಿಲನ್ ಆಗಿದ್ದಾರೆ ಅನ್ನೋ ಆರೋಪವೊಂದು ಕೇಳಿಬಂದಿದೆ.

    ದಾವಣೆಗೆರೆಯ ಗಂಗೊಂಡನಹಳ್ಳಿ ಯುವಕ ಮಹಾರುದ್ರ ಹಾಗೂ ಹೊಳಲ್ಕೆರೆಯ ದೊಗ್ಗನಾಳ್ ಗ್ರಾಮದ ವನಿತಾರಾಣಿ ಹಲವು ವರ್ಷಗಳಿಂದ ಪ್ರೀತಿಸ್ತಿದ್ರು. ಇಬ್ಬರ ಪ್ರೀತಿಗೆ ಯುವತಿ ಮನೆಯವರು ಅಡ್ಡಿ ಪಡಿಸಿದ್ದರಿಂದ ಪ್ರೇಮಿಗಳು ತಿರುಪತಿಗೆ ಹೋಗಿ ಮದ್ವೆಯಾಗಿ ಬಂದಿದ್ದಾರೆ. ಈಗ ಮದ್ವೆಯಾಗಿರೋ ನೂತನ ಜೋಡಿಗಳ ಪಾಲಿಗೆ ಹೊಳಲ್ಕೆರೆ ಎಸ್‍ಐ ಮಹೇಶ್ ವಿಲನ್ ಆಗಿದ್ದಾರೆ.

    ಮದ್ವೆ ಬಳಿಕ ಎರಡೂ ಕಡೆಯರು ರಾಜಿ ಸಂಧಾನ ಮಾಡಿಸಿದ್ದಾರೆ. ಇಷ್ಟಕ್ಕೆ ಮುಗೀತು ಅನ್ನೋವಷ್ಟರಲ್ಲಿ ಯುವತಿ ತಂದೆ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಅಂತ ಕೇಸ್ ಹಾಕಿದ್ದಾರೆ. ಬಳಿಕ ಇಬ್ಬರು ಪ್ರೇಮಿಗಳು ಸ್ಟೇಷನ್‍ಗೆ ಬರೋದು ಸ್ವಲ್ಪ ತಡವಾಗಿದ್ದಕ್ಕೆ ಎಸ್‍ಐ ಮಹೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಗತಿ ಏನಾಗುತ್ತೆ ಗೊತ್ತಾ ಅಂತ ಬೆದರಿಕೆ ಹಾಕಿದ್ದಾರೆ. ಇದರಿಂದ ಭೀತಿಗೊಂಡಿರೋ ನವವಿವಾಹಿತ ಜೋಡಿ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.

    ಗಂಡ-ಹೆಂಡತಿ ಇಬ್ಬರನ್ನೂ ದೂರ ಮಾಡುವಂತಹ ಶಕ್ತಿ ನಮಗಿದೆ. ಅಂತಹ ಕೇಸ್ ಗಳನ್ನು ನಿಮ್ಮ ಮೇಲೆ ರಿಸ್ಟರ್ ಮಾಡ್ತೀವಿ. ಇದೇನು ನನಗೆ ದೊಡ್ಡ ಕೇಸಲ್ಲ. ಇದ್ನ ಏನು ಮಾಡಬೇಕೆಂದು ನನಗೆ ಗೊತ್ತಿದೆ ಅಂತಾ ನವವಿವಾಹಿತ ಮಹಾರುದ್ರ ಎಸ್ ಐ ವಿರುದ್ಧ ಆರೋಪ ಮಾಡಿದ್ದಾರೆ.

    ರಕ್ಷಣೆ ನೀಡುವ ಪೊಲಿಸ್ ಠಾಣೆಯಲ್ಲಿಯೇ ಇಂತಹ ಮಾತುಗಳನ್ನು ಕೇಳಿಸಿಕೊಂಡಾಗ ಅಲ್ಲಿ ಹೋಗಕ್ಕೆ ನಮಗೆ ಸ್ವಲ್ಪ ಹಿಂಜರಿಕೆಯಾಗುತ್ತದೆ. ತಂದೆ ಹಾಗೂ ಪೊಲೀಸರ ಕಿರುಕುಳ ಇಲ್ಲದೆನೇ ನಾವು ನೆಲ್ಲದಿಯಾಗಿ ಜೀವನ ಮಾಡಲು ನಮಗೆ ಅವಕಾಶ ಬೇಕು ಅಂತಾ ಯುವತಿ ವನಿತಾರಾಣಿ ಮಾಧ್ಯಮಕ್ಕೆ ತಿಳಿಸಿದ್ದಾರೆ.