Tag: ಕೊರೊನಾ ಟೆಸ್ಟಿಂಗ್

  • ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    ಬೆಂಗಳೂರು: ರಾಜ್ಯದಲ್ಲಿ 4ನೇ ಅಲೆ ಆತಂಕದ ಹೊತ್ತಲ್ಲಿ ಬಿಬಿಎಂಪಿ (BBMP) ಹೊಸ ಆಟ ಶುರು ಮಾಡಿದ್ಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಬಿಎಫ್.7 ಕೊರೊನಾ ದೇಶಕ್ಕೆ ಕಾಲಿಡಬಹುದು ಅನ್ನೋ ಆತಂಕದ ಬೆನ್ನಲ್ಲೇ ಇದೀಗ ಬಿಬಿಎಂಪಿ ಜನರಿಗೆ ಕಿರಿಕಿರಿ ಮಾಡೋಕೆ ಹೊರಟಂತೆ ಕಾಣುತ್ತಿದೆ. ಕೊರೊನಾ ಟೆಸ್ಟ್ (Corona Test) ಮಾಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರೋಕೆ ಶುರುವಾಗಿದೆ. ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರುತ್ತಿರುವುದು ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಪ್ರಜ್ವಲ್ ಎಂಬವರ ಮೊಬೈಲ್‍ಗೆ ಮೆಸೇಜ್‍ವೊಂದು ಬಂದಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಹೋಂ ಐಸೋಲೇಟ್ ಆಗುವಂತೆ ಸೂಚಿಸಲಾಗಿದೆ. ಆದರೆ ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೆಸೇಜ್ ಬಂದಿದ್ದೇಗೆ…? ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರಜ್ವಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಪ್ರತಿನಿಧಿ: ನಿಮಗೇನಾದರೂ ತೊಂದರೆ ಇದ್ಯಾ…?
    ದೂರುದಾರ: ನಾನು ಆಫೀಸ್‍ನಲ್ಲಿದ್ದೇ ಒಂದು ಮೆಸೇಜ್ ಬಂತು. ಅದು ಟೆಸ್ಟ್‍ಗೆ ಕೊಟ್ಟಿರೋ ಮೆಸೇಜ್. ನಾನು ಯಾವುದೇ ಟೆಸ್ಟ್ ಗೆ ಕೊಟ್ಟಿಲ್ಲ. ನಾನು ಆಸ್ಪತ್ರೆಗೆ ಹೋಗಿಲ್ಲ. ಕೋವಿಡ್ ಮೆಸೇಜ್ ಬಂದಿದೆ. ನನಗೆ ಪಾಸಿಟಿವ್ ಅಂತ ಬಂದಿದೆ. ನನ್ನ ಮನೆ ಲಾಕ್‍ಡೌನ್ ಮಾಡಿದ್ರೆ ಇತರರಿಗೂ ತೊಂದರೆ ಆಗುತ್ತೆ. ನಾನು ಆರೋಗ್ಯವಾಗಿದ್ದರೂ, ಮೆಸೇಜ್ ಕ್ರಿಯೆಟ್ ಮಾಡಿ ಸರ್ಕಾರದವರು ದುಡ್ಡು ಮಾಡುತ್ತಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

    ಪ್ರತಿನಿಧಿ: ನೀವು ಟೆಸ್ಟ್ ಗೆ ಎಲ್ಲಿಯೂ ಹೋಗಿಯೇ ಇಲ್ವಾ…?
    ದೂರುದಾರ: ಕೋವಿಡ್ (COVID 19) ಸಂದರ್ಭದಲ್ಲಿ ಅಂದರೆ 8 ತಿಂಗಳ ಹಿಂದೆ ಮಾಡಿಸಿದ್ದು, ಅದು ಬಿಟ್ಟರೆ ಮತ್ತೆ ಮಾಡಿಸಿಲ್ಲ. ಹಿಂದೆ ನಾನು ಟೆಸ್ಟ್ ಗೆ ಹೋಗಿದ್ದ ವೇಳೆ ನಂಬರ್ ಇಟ್ಟುಕೊಂಡು ಈಗ ಮೆಸೇಜ್ ಕಳುಹಿಸುವ ಮೂಲಕ ಸ್ಕ್ಯಾಮ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಪ್ರತಿನಿಧಿ: ಓಕೆ…ಓಕೆ…

    ಪ್ರಜ್ವಲ್‍ಗೆ ಟೆಸ್ಟ್ ಓಟಿಪಿ (Corona Test OTP) ಕೂಡ ಬಂದಿಲ್ಲ. ಆದರೂ ಹೋಂ ಐಸೋಲೇಟ್ ಆಗಿ ಅಂತ ಮೆಸೇಜ್ ಬಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ದೂರು ಕೊಡೋಕೆ ಕೂಡ ಪ್ರಜ್ವಲ್ ಮುಂದಾಗಿದ್ದಾರೆ. ಅಲ್ಲದೆ ಈ ಕುರಿತು ಸುಳಿವು ಕೂಡ ನೀಡಿದ್ದಾರೆ. ಒಟ್ಟಿನಲ್ಲಿ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಲು ಬಿಬಿಎಂಪಿ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರಾ…? ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ರೀತಿಯಾಗಿದ್ರೆ ಜನರ ಜೀವ ಜೊತೆ ಚೆಲ್ಲಾಟವಾಡುತ್ತಿರೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೂವರು ಹುದ್ದೆಯಿಂದ ವಜಾ, ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೂವರು ಹುದ್ದೆಯಿಂದ ವಜಾ, ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ

    – ಪಬ್ಲಿಕ್ ಟಿವಿಗೆ ಆರೋಗ್ಯ ಸಚಿವ ಅಭಿನಂದನೆ

    ಬೆಂಗಳೂರು: ಹಣ ಕೊಟ್ಟರೆ ಕೊರೊನಾ ನೆಗೆಟಿವ್ ರಿಪೋರ್ಟ್ ನಿಮ್ಮ ಕೈಗೆ ಸಿಗುತ್ತೆ ಎಂಬ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಮಾಡಿದ ಬೆನ್ನಲ್ಲೇ ಮೂವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

    ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಆಶಾ ವರ್ಕರ್, ಸ್ಟಾಫ್ ನರ್ಸ್, ಸ್ವಾಬ್ ಕಲೆಕ್ಟರ್ ಹುದ್ದೆಯಿಂದ ವಜಾ ಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮೂವರ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

     ಕೊರೊನಾ ರಿಪೋರ್ಟ್ ನೆಗೆಟಿವ್ ಸ್ಟಿಂಗ್ ಆಪರೇಷನ್ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಮೊದಲು ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಬ್ಲಿಕ್ ಟಿವಿ ಸ್ಟಿಂಗ್ ನೋಡಿ ವೈದ್ಯನಾಗಿ ನನಗೆ ನೋವಾಗಿದೆ. ಕೆಳಹಂತದ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಕೆಲಸ ಮಾಡಿರೋದು ನೋವಾಗಿದೆ. ತಕ್ಷಣ ಬಿಬಿಎಂಪಿ ಆಯುಕ್ತರ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಜಂಟಿ ಆಯುಕ್ತರು ಸ್ಥಳದಲ್ಲಿ ಈಗಾಗಲೇ ಇದ್ದಾರೆ. ಘಟನೆಯ ಸಂಪೂರ್ಣ ವಿವರ ತೆಗೆದುಕೊಂಡು ತಕ್ಷಣ ಕ್ರಮ ತೆಗೆದುಕೊಳ್ತೀನಿ. ಪಬ್ಲಿಕ್ ಟಿವಿ ಅಭಿಯಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಕೆಳ ಹಂತದ ನ್ಯೂನತೆ ಎತ್ತಿ ತೋರಿಸಿ ಕಣ್ಣು ತೆರೆಸುವ ಕೆಲಸ ಪಬ್ಲಿಕ್ ಟಿವಿ ಮಾಡಿದೆ. ಮುಂದೆ ಇಂತಹ ಘಟನೆ ಆಗದಂತೆ ಕಠಿಣ ಕಾನೂನು ಜಾರಿಗೆ ತರುತ್ತೇವೆ. ತಪಿತಸ್ಥರ ವಿರುದ್ದ ತಕ್ಷಣವೇ ಶಿಷ್ಟಾಚಾರದ ಅಡಿಯಲ್ಲಿ ಕ್ರಮ ತೆಗೆದುಕೊಳ್ತೀವಿ. ಇದೊಂದು ಅಮಾನವೀಯ, ಅನೈತಿಕ, ಕಾನೂನುಬಾಹಿರ ಕೆಲಸ. ಚಿಕಿತ್ಸೆ ಕೊಡೋ ಆರೋಗ್ಯ ಸಿಬ್ಬಂದಿ ಹೀಗೆ ತಪ್ಪು ಮಾಡಿದ್ರೆ ಅಮಾಯಕ ಜನರ ಜೀವಕ್ಕೆ ಸಮಸ್ಯೆ ಆಗುತ್ತೆ. ನೆಗೆಟೀವ್ ಅಂತ ಹೋಗಿ ಅವ್ರು ಬೇರೆ ಅವ್ರಿಗೆ ಹರಡಿ ಜೀವಕ್ಕೆ ಅಪಾರ ಆದ್ರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.

    ವೈದ್ಯಕೀಯ ಕೆಲಸ ಮಾಡೋಕೆ ಹೃದಯ ಪೂರ್ವಕವಾಗಿ ಸೇರಿರುತ್ತೇವೆ. ಹೀಗೆ ಅನೈತಿಕವಾಗಿ ಹಣ ಮಾಡೋದು ವೈದ್ಯಕೀಯ ಜಗತ್ತಿಗೆ, ವೃತ್ತಿಗೆ ಅವಮಾನ ಮಾಡಿದ ಹಾಗೆ ಆಗಿದೆ. ಇವರ ಕೆಲಸದಿಂದ ನಾವು ತಲೆ ತಗ್ಗಿಸುವಂತೆ ಆಗಿದೆ. ಮುಂದೆ ಹೀಗೆ ಆಗದಂತೆ ಅಗತ್ಯ ಕ್ರಮವಹಿಸುತ್ತೇನೆ ಎಂದು ಭರವಸೆ ನಿಡಿದರು. ಇದನ್ನೂ ಓದಿ: ಕಾಸು ಕೊಟ್ರೆ ಸಿಗುತ್ತೆ ಕೋವಿಡ್ ನೆಗೆಟಿವ್ ರಿಪೋರ್ಟ್- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಪಬ್ಲಿಕ್ ಟಿವಿ ವರದಿ ಪ್ರಸಾರ ಆಗ್ತಿದ್ದಂತೆ ದಕ್ಷಿಣ ವಿಭಾಗದ ಜಂಟಿ ಆಯುಕ್ತ ವೀರಭದ್ರಯ್ಯ ಅವರು ಪೂಬ್ಬತಿ ಹೆರಿಗೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ವೇಳೆ ನರ್ಸ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡ ಅವರು ಯಾರಿದ್ದಾರೆ ಡಾಕ್ಟರ್ಸ್, ನರ್ಸ್ ಕರಿಯಿರಿ ಬೇಗ ಕಿಡಿಕಾರಿದ್ದಾರೆ. ನಂತರ ಅವರು ಗಂಟಲು ದ್ರವ ಸಂಗ್ರಹದ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಆದರೆ ಈ ವೇಳೆ ಜಂಟಿ ಆಯುಕ್ತ ಕೇಳಿದ ಗಂಟಲು ದ್ರವದ ದಾಖಲೆಗಳೇ ಆಸ್ಪತ್ರೆಯಲ್ಲಿ ಇಲ್ಲ. ಅಲ್ಲದೆ ಜಂಟಿ ಆಯುಕ್ತರು ಭೇಟಿ ವೇಳೆ ಆಶಾ ವರ್ಕರ್, ಸ್ವಾಬ್ ಕಲೆಕ್ಟರ್ ಬಂದಿರಲಿಲ್ಲ.

    ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೀರಭದ್ರಯ್ಯ, ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲು 4 ಜನರ ವೈದ್ಯಾಧಿಕಾರಿಗಳ ತಂಡ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವಗುಪ್ತಾ ಮಾತನಾಡಿ, ನಾನು ಇದನ್ನ ತನಿಖೆ ಮಾಡಿಸುತ್ತೇನೆ. ಕೆಳ ಹಂತದ ಹುದ್ದೆಯಲ್ಲಿ ಇರೋರು ಈ ರೀತಿ ಕೆಲಸ ಮಾಡೋದು ಸರಿ ಇಲ್ಲ. ಮಾಹಿತಿ ತೆಗೆದುಕೊಂಡು ತನಿಖೆ ಮಾಡಿಸುತ್ತೇನೆ ಎಂದರು.

  • ಕಾಸು ಕೊಟ್ರೆ ಸಿಗುತ್ತೆ ಕೋವಿಡ್ ನೆಗೆಟಿವ್ ರಿಪೋರ್ಟ್- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಕಾಸು ಕೊಟ್ರೆ ಸಿಗುತ್ತೆ ಕೋವಿಡ್ ನೆಗೆಟಿವ್ ರಿಪೋರ್ಟ್- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಕೊರೊನಾದ ಕರಾಳ ದಂಧೆಯನ್ನ ಪಬ್ಲಿಕ್ ಟಿವಿ ಸ್ಟಿಂಗ್ ತಂಡ ಬಯಲಿಗೆಳೆದಿದೆ.

    ಕೊರೊನಾ ಹೆಸರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿದ್ದು, ವಾರಿಯರ್ಸ್ ದಿನಕ್ಕೆ ಸಾವಿರ ಸಾವಿರ ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೋವಿಡ್ ಟೆಸ್ಟಿಂಗ್ ಟಾರ್ಚರ್ ಗೆ ಕೊರೊನಾ ವಾರಿಯರ್ಸ್ ಕಳ್ಳದಾರಿ ಹಿಡಿರುವ ಅಸಲಿ ಮುಖ ಬಯಲಾಗಿದೆ.

    ಕೈಗೆ ಕಾಸು ಕೊಟ್ಟರೆ ಸಾಕು, ಕೋವಿಡ್ ನೆಗಟಿವ್ ರಿಪೋರ್ಟ್ ನಿಮಗೆ ಸಿಗುತ್ತೆ. ಸ್ವಾಬ್ ಕಲೆಕ್ಟ್ ಮಾಡಿಕೊಳ್ಳದೇ, ಟ್ಯೂಬ್ ನಲ್ಲಿ ನೀರು ಹಾಕಿ ಸ್ಯಾಂಪಲ್ಸ್ ನ್ನು ಲ್ಯಾಬ್ ಗೆ ಕಳುಹಿಸುತ್ತಾರೆ. ಜಸ್ಟ್ ಮೊಬೈಲ್ ನಂಬರ್, ಓಟಿಪಿ ನಂಬರ್ ಕೊಟ್ರೆ ಸಾಕು ನೀವಿದ್ದಲ್ಲಿಗೆ ಕೋವಿಡ್ ರಿಪೋರ್ಟ್ ಬರುತ್ತೆ. ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಆಗೋಕೆ ಈ ಡರ್ಟಿ ಬ್ಯುಸಿನೆಸ್ಸೇ ಪ್ರಮುಖ ಕಾರಣವಾಗಿದೆ.

    ವಾರ್ಡ್ 143, ವಿ ವಿ ಪುರಂನ, ಪೂಬತಿ ಹೆರಿಗೆ ಆಸ್ಪತ್ರೆಯಲ್ಲಿ ಡರ್ಟಿ ಬ್ಯುಸಿನೆಸ್ ನಡೆಯುತ್ತಿದೆ. ಒಂದೇ ನಂಬರ್ ಮೇಲೆ ನಾಲ್ಕೈದು ಐಡಿ ಕ್ರಿಯೆಟ್ ಮಾಡಿ ರಿಪೋರ್ಟ್ ಕೊಡುತ್ತಾರೆ. ಪೂಬತಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಗೊತ್ತಾಗದೇ ಈ ಕೊರೊನಾ ಧಂದೆ ನಡೆಯುತ್ತಿದೆ. ಗಂಟಲು ದ್ರವವನ್ನ ತೆಗದುಕೊಳ್ಳದೇ ಈ ಖತರ್ನಾಕ್ ಟೀಂ ರಿಸಲ್ಟ್ ಕೊಡುತ್ತೆ. ಒಬ್ಬೊಬ್ಬರಿಂದ 1,000-1,500 ರೂಪಾಯಿ ಹಣ ವಸೂಲಿ ಮಾಡುತ್ತದೆ. ಈ ಹಿಂದೆ ಬನಶಂಕರಿಯಲ್ಲಿ ಬಿಬಿಎಂಪಿ ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳದೇ ರಿಸಲ್ಟ್ ಕೊಟ್ಟಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ನಿರಂತರ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕವೂ ತನ್ನ ತಪ್ಪನ್ನ ಮುಚ್ಚಿಟ್ಟುಕೊಳ್ಳಲು ಬಿಬಿಎಂಪಿ ಯತ್ನಿಸಿತ್ತು.

    ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳವಾಗಿದೆ. ಕೈಗೆ ಹಣ ಕೊಟ್ರೆ ಎಷ್ಟು ಜನರಿಗಾದ್ರೂ ನೆಗಟಿವ್ ರಿಪೋರ್ಟ್ ಕೊಡುವ ಜಾಲದ ಬಗ್ಗೆ ಪಬ್ಲಿಕ್ ಟಿವಿ ಸ್ಟಿಂಗ್ ತಂಡಕ್ಕೆ ಒಬ್ಬರು ಕರೆ ಮಾಡಿ ಅಕ್ರಮದ ಬಗ್ಗೆ ಮಾಹಿತಿ ಕೊಡ್ತಾರೆ. ಕೂಡಲೇ ಅಲರ್ಟ್ ಆದ ತಂಡ ಸ್ಪಾಟ್ ಗೆ ಲಗ್ಗೆ ಇಟ್ಟಿತು. ನಮ್ಗೆನು ಗೊತ್ತಿಲ್ಲದವ್ರಂತೆ ರಿಪೋರ್ಟ್ ಕೇಳಿದ್ವಿ ಅಷ್ಟೆ. ಸ್ವಲ್ಪ ವೇಟ್ ಮಾಡಿ, ಎಷ್ಟು ಜನ್ರಿದ್ದಾರೆ ಅಂತ ಮಾತಿಗಿಳಿದ್ರು. ನಮ್ಮ ಸ್ಟಿಂಗ್ ತಂಡದ ಜೊತೆ ಇಬ್ಬರು ಮಹಿಳೆಯರು ಮಾತಿಗಿಳಿದಾಗ ಕೊರೊನಾ ರಿಪೋರ್ಟ್ ನ ಕರಾಳ ಸತ್ಯ ಅನಾವರಣವಾಯ್ತು. ಅಲ್ಲಿ ಕೊರೊನಾ ದಂಧೆ ಹೇಗೆ ನಡೆಯುತ್ತೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.

    ಆಶಾ ಕಾರ್ಯಕರ್ತೆ: ಎರಡೂವರೆ ಸಾವಿರ..
    ಪಬ್ಲಿಕ್ ಟಿವಿ: ಇನ್ನೂ ಐದಾರು ಜನ ಇದ್ದಾರೆ..
    ಆಶಾ ಕಾರ್ಯಕರ್ತೆ : ಅವ್ರಿಗೆಲ್ಲಾ ಜಾಸ್ತಿ ಹೇಳಬೇಕು. 1 ಸಾವಿರ ಹೇಳಬೇಕು
    ಪಬ್ಲಿಕ್ ಟಿವಿ: ನಾಲ್ವರಿಗಂದ್ರೂ ಎರಡೂವರೆ ಸಾವಿರ ಹೆಚ್ಚಾಯ್ತು
    ಆಶಾ ಕಾರ್ಯಕರ್ತೆ : ಜಾಸ್ತಿಯಾಯ್ತಾ. 1ವರೆ ಸಾವಿರ ಒಬ್ರಿಗೆ ತೊಗೊಳೋದು ಗೊತ್ತಾ ನಿಮ್ಗೆ. ನಾನು ನಿಮ್ಗೊಸ್ಕರ ಕಡಿಮೆ ಮಾಡಿದೇನೆ.
    ಪಬ್ಲಿಕ್ ಟಿವಿ: ನೆಕ್ಸ್ಟ್ ಇನ್ನೂ ಹುಡುಗ್ರುನಾ ಕರ್ಕೊಂಡು ಬರ್ತೇನೆ ಮೇಡಂ.
    ಆಶಾ ಕಾರ್ಯಕರ್ತೆ: ಆದ್ರೆ ಅಲ್ಲಿ ಬಂದು ಬರೆಸಿ ಬಿಡಬೇಕು ನೀನು. ನನಗೆ ಯಾರಾದಾದ್ರೂ ಒಂದು ನಂಬರ್ ಕೊಡಿ. ಬರೆಸಿದ ಮೇಲೆ ನಿಂತ್ಕೊಳ್ದೆ ಇಲ್ಲಿಗೆ ಕಳಿಸಬೇಕು.. ಬೇಜಾರಿಲ್ಲ ತಾನೆ
    ಪಬ್ಲಿಕ್ ಟಿವಿ: ನಮಗೆ ಯಾಕೆ ಬೇಜಾರು
    ಆಶಾ ಕಾರ್ಯಕರ್ತೆ: ಈಗ ನಾನು ಎಂಟ್ರಿ ಮಾಡ್ತೇನೆ. ನಿಮ್ ಮೊಬೈಲ್ ಗೆ ಮೆಸೇಜ್ ಬರುತ್ತೆ. ನೀವು ಹೊರಡಿ.. ಹೊರಡಿ..ಇಲ್ಲಿ ಇರ್ಬೇಡಿ..

    ಹೀಗೆ ಗೊತ್ತಾಗದಂತೆ ಅದೇಗೆ ಹಣವನ್ನ ಲಪಟಾಯಿಸುತ್ತಿದ್ದಾರೆ. ಹಣ ಕೊಡೊದಿಕ್ಕಿಂತ ಮುಂಚೆ ತಂಡ ಈ ಆಶಾ ವರ್ಕರ್ ಹಾಗೂ ನರ್ಸ್ ಜೊತೆ ಮಾತಿಗಿಳಿದಾಗ ತಮ್ಮ ಇಲ್ಲಿಗಲ್ ಬ್ಯುಸಿನೆಸ್ ಬಗ್ಗೆ ಬಾಯ್ಬಿಟ್ರು. ಫೋನ್ ನಂಬರ್ ಒಂದು ಕೊಡಿ ಅಷ್ಟೆ ಸಾಕು. ನಾವು ಹ್ಯಾಂಡಲ್ ಮಾಡ್ತೇವೆ ಅಂತ ಫೋನ್ ನಂಬರ್ ತೆಗೆದುಕೊಂಡ್ರು. ನಮ್ಮ ಅಸಲಿ ಹೆಸ್ರುಗಳನ್ನ ಬದಲಿಸಿ ಬೇರೆಯದ್ದೇ ಹೆಸರನ್ನು ಬರೆಸಿದ್ವಿ. ಒಂದೇ ಫೋನ್ ನಂಬರ್ನ ಮೇಲೆ ನಾಲ್ಕು ಜನ್ರಿಗೆ Sಖಈ ಐಡಿ ಜನರೇಟ್ ಮಾಡಿದ್ರು. ನಮ್ಮ ಸ್ಟಿಂಗ್ ತಂಡದ ಜೊತೆ ಏನೆಲ್ಲಾ ಮಾತನಾಡಿದ್ರು ಎಂಬುದನ್ನು ಈ ಕೆಳಗಿನ ವೀಡಿಯೋ ನೋಡಿ.

  • ಮೈಸೂರಲ್ಲಿ ಇಂದೂ ನಡೆಯುತ್ತಿಲ್ಲ ಕೊರೊನಾ ಟೆಸ್ಟಿಂಗ್

    ಮೈಸೂರಲ್ಲಿ ಇಂದೂ ನಡೆಯುತ್ತಿಲ್ಲ ಕೊರೊನಾ ಟೆಸ್ಟಿಂಗ್

    – ಡಾಟಾ ಎಂಟ್ರಿಯೂ ಇಲ್ಲ, ಟೆಸ್ಟಿಂಗ್ ಸಹ ಇಲ್ಲ

    ಮೈಸೂರು: ಟಿಎಚ್‍ಒ ಡಾ.ನಾಗೇಂದ್ರ ಆತ್ಮಹತ್ಯೆಯಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ಕೊರೊನಾ ಪರೀಕ್ಷೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ.

    ಮೈಸೂರಿನ ನಂಜನಗೂಡು ಟಿಎಚ್‍ಒ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೂ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಶುಕ್ರವಾರದಿಂದಲೇ ಕೊರೊನಾ ಪರೀಕ್ಷೆ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಕೂಡ ಕೊರೊನಾ ಟೆಸ್ಟ್ ನಡೆಯುತ್ತಿಲ್ಲ. ಟೆಸ್ಟ್ ಮಾತ್ರವಲ್ಲ ಡಾಟಾ ಎಂಟ್ರಿ ಸಹ ನಡೆಯುತ್ತಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರದಿಂದ ರಾಜ್ಯಾದ್ಯಂತ ಕೊರೊನಾ ಟೆಸ್ಟ್ ಪ್ರಕ್ರಿಯೆ ನಿಲ್ಲುತ್ತದೆ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.

    ಇದಿಂದಾಗಿ ಸೋಮವಾರದಿಂದ ರಾಜ್ಯದ ಪರಿಸ್ಥಿತಿ ಗಂಭೀರ ಎನ್ನುವಂತಾಗಿದ್ದು, ವೈದ್ಯರು ನಿಲು ಬದಲಿಸುತ್ತಾರಾ ಕಾದು ನೋಡಬೇಕಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವೈದ್ಯಕೀಯ ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ಕರ್ತವ್ಯಕ್ಕೆ ಹಾಜರಾಗಿ, ಇಂತಹ ತುರ್ತು ಪರಿಸ್ಥಿತಿಯಲ್ಲಿ ಹಠ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಸರ್ಕಾರ ಡಾ.ನಾಗೇಂದ್ರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಘೋಷಿಸಿದ್ದು, ಅವರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ಕೊಡಿಸುವುದಾಗಿ ಸಹ ಭರವಸೆ ನೀಡಲಾಗಿದೆ. ಅಲ್ಲದೆ ವೈದ್ಯರ ಕೆಲಸದ ಒತ್ತಡ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಸರ್ಕಾರ ತಿಳಿಸಿದೆ.