Tag: ಕೊಯ್ಲು

  • ಕಾಫಿ ಕೊಯ್ಯಲು ಕಾರ್ಮಿಕರಿಲ್ಲ – ಆತಂಕದಲ್ಲಿ ಬೆಳೆಗಾರರು

    ಕಾಫಿ ಕೊಯ್ಯಲು ಕಾರ್ಮಿಕರಿಲ್ಲ – ಆತಂಕದಲ್ಲಿ ಬೆಳೆಗಾರರು

    ಚಿಕ್ಕಮಗಳೂರು : ಕಾಫಿ ಬೆಳೆಯನ್ನು ಹೇರಳವಾಗಿ ಬೆಳೆಯಲಾಗುವ ಮಲೆನಾಡು ಭಾಗಗಳಲ್ಲಿ ಕಾಫಿ ಕೊಯ್ಯಲು ಕಾರ್ಮಿಕರಿಲ್ಲದೇ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಈ ವರ್ಷ ಕಾಫಿ ಚೆನ್ನಾಗಿ ಫಸಲು ನೀಡಿದ್ದರೂ ಕೊಯ್ಯಲು ಕಾರ್ಮಿಕರಿಲ್ಲದೇ ಗಿಡದಲ್ಲೇ ಕೊಳೆತು ಹೋಗುತ್ತಿರುವ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ.

    ಪ್ರತಿ ವರ್ಷ ಈ ವೇಳೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ.50-60 ರಷ್ಟು ಕಾಫಿ ಹಣ್ಣನ್ನ ಕೊಯ್ಯಲಾಗುತ್ತದೆ. ಆದರೆ ಈ ಬಾರಿ ಕೇವಲ ಶೇ.20-30 ರಷ್ಟು ಕಾಫಿಯನ್ನು ಕೊಯ್ಯಲಾಗಿದೆ. ಪ್ರತಿ ವರ್ಷ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಕಾಫಿ ಕೊಯ್ಯುವ ವೇಳೆ ಕೆಲಸಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾದ ಮೂರನೇ ಅಲೆಯಿಂದ ಪ್ರವಾಸಿಗರು ಬರಲು ಸಾಧ್ಯವಾಗಿಲ್ಲ. ಇದರಿಂದ ಕಾಫಿ ಕೊಯ್ಯಲು ಕಾರ್ಮಿಕರ ಕೊರತೆ ಉಂಟಾಗಿದೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

    ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಾಫಿ ಬೆಳೆ ಮಣ್ಣು ಪಾಲಾಗಿತ್ತು. 2021ರಲ್ಲೂ ವರ್ಷವಿಡೀ ಮಳೆ ಸುರಿದಿದ್ದರಿಂದ ಬಹುತೇಕ ಕಾಫಿ ನಷ್ಟವಾಗಿತ್ತು. ಆದರೆ ಈ ವರ್ಷ ಮಳೆಗಾಳಿಯಿಂದ ಅಳಿದುಳಿದ ಕಾಫಿಯನ್ನು ಕೊಯ್ಯುವುದಕ್ಕೆ ಜನ ಸಿಗದೆ ಬೆಳೆಗಾರರು ಆಂತಕಕ್ಕೀಡಾಗಿದ್ದಾರೆ.

    ಮಲೆನಾಡಿನ ತೋಟಗಳಲ್ಲಿ ಕಾಫಿ ಚೆನ್ನಾಗಿ ಫಸಲು ನೀಡಿದೆ. ಜಿಲ್ಲೆಯಲ್ಲಿ ಸರಿಸುಮಾರು ಒಂದು ಲಕ್ಷ ಹೆಕ್ಟೆರ್ ಜಾಗದಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನು ಬೆಳೆಯಲಾಗಿದೆ. ಆದರೆ ಕಾಫಿ ಕೊಯ್ಲಿಗೆ ಕಾರ್ಮಿಕರೇ ಇಲ್ಲದಂತಾಗಿದೆ. ಹತ್ತಾರು ಎಕರೆ ಕಾಫಿ ತೋಟಗಳಲ್ಲಿ ಕೇವಲ ನಾಲ್ಕೈದು ಕಾರ್ಮಿಕರಷ್ಟೇ ಕೆಲಸ ಮಾಡುವಂತಾಗಿದೆ. ಕೆಲವೆಡೆ ಮನೆಯವರೇ ಕೊಯ್ಯುವಂತಹಾ ಸ್ಥಿತಿಯೂ ನಿರ್ಮಾಣವಾಗಿದೆ. ಇದನ್ನೂ ಓದಿ: ಡಿಕೆಶಿ Vs ಸಿದ್ದು ಬಣಗಳ ಕಿತ್ತಾಟ: ಲಾಭ ಪಡೆಯಲು ಮುಂದಾದ ಹಿರಿಯ ನಾಯಕರು

    2021ರಲ್ಲೂ ಮಳೆ-ಗಾಳಿಗೆ ಉದುರಿ ಗಿಡಕ್ಕೆ ಗೊಬ್ಬರವಾದ ಕಾಫಿಯೇ ಹೆಚ್ಚು. ಆದರೆ ಇದೀಗ ಕಾರ್ಮಿಕರ ಕೊರತೆಯಿಂದ ಉಳಿಸಿಕೊಂಡಿದ್ದ ಬೆಳೆಯನ್ನೂ ಕೊಯ್ಲು ಮಾಡಲಾಗದಂತಹಾ ಪರಿಸ್ಥಿತಿ ಎದುರಾಗಿದೆ. ಕೆಲ ಸಣ್ಣ ಹಾಗೂ ಮಧ್ಯಮ ವರ್ಗದ ಬೆಳೆಗಾರರು ನಮ್ಮ ತೋಟಕ್ಕೆ ನೀವು ಬನ್ನಿ ನಿಮ್ಮ ತೋಟಕ್ಕೆ ನಾವು ಬರ್ತೀವಿ ಎಂದು ಒಬ್ಬರ ತೋಟದಲ್ಲೊಬ್ಬರು ಕಾಫಿಯನ್ನು ಕೊಯ್ಯುವಂತಾಗಿದೆ.

    2021ರಲ್ಲಿ ವರ್ಷವಿಡೀ ಮಳೆಯಾಗಿದ್ದರಿಂದ ನವೆಂಬರ್‌ನಲ್ಲಿ ಕಾಫಿ ಫಸಲು ಬಂದಿದೆ. ಈ ವೇಳೆಗೆ ಶೇ.80 ರಷ್ಟು ಕೊಯ್ಲು ಆಗಬೇಕಿತ್ತು. ಕಾಫಿಯನ್ನು ಸೂಕ್ತ ಸಮಯದಲ್ಲಿ ಕೊಯ್ಯದಿರುವುದರಿಂದ ಮತ್ತೆ ಉದುರುವುದಕ್ಕೆ ಪ್ರಾರಂಭವಾಗಿದೆ. ಇನ್ನೊಂದೆಡೆ ಕಾರ್ಮಿಕರ ಕೊರತೆಯಿಂದ ಇರುವ ಬೆಳೆಯನ್ನೂ ಕೊಯ್ಲು ಮಾಡದ ಸಂಕಷ್ಟ ಬೆಳೆಗಾರರದ್ದಾಗಿದೆ. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ

    ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಬೆಳೆ ಇಲ್ಲ. ಇದ್ದರೂ ಸಮರ್ಪಕವಾಗಿ ಕೊಯ್ಯಲು ಸಾಧ್ಯವಾಗುತ್ತಿಲ್ಲ. ಇರುವ ಫಸಲು ಕೊಯ್ಯಲು ಆಗದಿರುವುದು ಬೆಳೆಗಾರರಿಗೆ ಬಿಸಿತುಪ್ಪವಾಗಿದೆ. ಈ ಮಧ್ಯೆ ಆಗಾಗ ಒಂದಷ್ಟು ಮಳೆ ಬಂದು ಹೋಗುತ್ತಿರುವುದು ಕೂಡ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

  • ಮಾಲೀಕನ ಕಷ್ಟ ನೋಡಿ ಫೀಲ್ಡಿಗಿಳಿದ ಶ್ವಾನ -ವಿಡಿಯೋ ವೈರಲ್

    ಮಾಲೀಕನ ಕಷ್ಟ ನೋಡಿ ಫೀಲ್ಡಿಗಿಳಿದ ಶ್ವಾನ -ವಿಡಿಯೋ ವೈರಲ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲೀಗ ಕಾಫಿ ಕೊಯ್ಲು ಆರಂಭವಾಗಿದ್ದು, ಮಾಲೀಕನ ಕಷ್ಟವನ್ನು ನೋಡಲಾಗದೇ ಶ್ವಾನನೊಂದು ಕಾಫಿ ಹಣ್ಣುಗಳನ್ನು ಬಿಡಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

    ಶ್ವಾನ ಕಾಫಿ ಹಣ್ಣುಗಳನ್ನು ಬಿಡಿಸುತ್ತಿರುವ ವಿಡಿಯೋ ಕೆಲವು ದಿನಗಳಿಂದ ವಾಟ್ಸಪ್ ಗ್ರೂಪಿನಲ್ಲಿ ಹರಿದಾಡುತ್ತಿದೆ. ಶ್ವಾನವೂ ಕಾಫಿ ಹಣ್ಣುಗಳು ಇರುವ ಗಿಡವನ್ನು ತನ್ನ ಕಾಲಿನಿಂದ ಹಿಡಿದುಕೊಂಡಿದ್ದು, ಬಳಿಕ ತನ್ನ ಬಾಯಿಯಿಂದ ಹಣ್ಣನ್ನು ಬಿಡಿಸುತ್ತಾ, ಕೆಳಗೆ ಹಾಕಿರುವ ಚೀಲದ ಮೇಲೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಶ್ವಾನ ಕಾಫಿ ಕೊಯ್ಲು ಮಾಡುವುದನ್ನು ತೋಟದ ಮಾಲೀಕ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಹಣ್ಣಾಗುತ್ತಿದ್ದು, ಕೆಲವೆಡೆಗಳಲ್ಲಿ ಕೊಯ್ಲಿನ ಕೆಲಸ ಭರದಿಂದ ಸಾಗಿದೆ. ಕೂಲಿ ಕಾರ್ಮಿಕರು ಕಾಫಿ ಹಣ್ಣು ಕೊಯ್ಲು ಮಾಡುವಲ್ಲಿ ನಿರತರಾಗಿದ್ದಾರೆ. ಹಸಿರು ಕಾಫಿ ಗಿಡದಲ್ಲಿ ಕಾಫಿ ಹಣ್ಣು ಕೆಂಬಣ್ಣಕ್ಕೆ ತಿರುಗುತ್ತಿದ್ದು, ಕೊಡಗಿನಲ್ಲಿ ಲಕ್ಷಾನುಗಟ್ಟಲೆ ಎಕರೆ ಕಾಫಿ ತೋಟಗಳಿರುವುದರಿಂದ ಸುಮಾರು ಮೂರು ತಿಂಗಳು ಕಾಫಿ ಕೊಯ್ಲು ನಡೆಯುತ್ತದೆ.

    ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆಯಿಂದ ಕಾಫಿ ಕೊಯ್ಲಿಗಾಗಿ ಬೆಳೆಗಾರರು ದೂರದ ಪ್ರದೇಶದಿಂದ ಕಾರ್ಮಿಕರನ್ನು ಕರೆತರುತ್ತಾರೆ. ಒಬ್ಬ ಕಾರ್ಮಿಕ ದಿನವೊಂದಕ್ಕೆ ಸುಮಾರು 200 ಕೆ.ಜಿ.ಯಷ್ಟು ಕಾಫಿ ಕೊಯ್ಲು ಮಾಡುತ್ತಾನೆ. ಒಂದು ದಿನ 20ಕ್ಕೂ ಅಧಿಕ ಗಿಡಗಳಲ್ಲಿ ಕಾಫಿ ಕೊಯ್ಲು ಮಾಡುತ್ತಾರೆ. ಆದರೆ ಇಲ್ಲಿ ಒಂದು ಶ್ವಾನ ತನ್ನ ಮನೆಯ ಮಾಲೀಕನ ಕಷ್ಟ ನೋಡಿ ಫೀಲ್ಡ್ ಗೆ ಇಳಿದು ಕಾಫಿ ತೋಟದಲ್ಲಿ ಇರುವ ಕಾಫಿ ಹಣ್ಣುಗಳನ್ನು ಕೊಯ್ಲು ಆರಂಭ ಮಾಡಿರುವುದು ಅಚ್ಚರಿ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆತ್ಮಹತ್ಯೆ ಮಾಡ್ಕೊಳ್ಳಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸ್ತೇವೆ- ರೈತಾಪಿ ವರ್ಗಕ್ಕೆ ಸಿಎಂ ಮನವಿ

    ಆತ್ಮಹತ್ಯೆ ಮಾಡ್ಕೊಳ್ಳಬೇಡಿ, ನಿಮ್ಮ ಕಷ್ಟಕ್ಕೆ ಸ್ಪಂದಿಸ್ತೇವೆ- ರೈತಾಪಿ ವರ್ಗಕ್ಕೆ ಸಿಎಂ ಮನವಿ

    ಮಂಡ್ಯ: ಮುಖ್ಯಮಂತ್ರಿ ಆದ ನಂತ್ರ ಆಗಸ್ಟ್ ತಿಂಗಳಲ್ಲಿ ಮಂಡ್ಯದ ಅರಳಕುಪ್ಪೆ ಗ್ರಾಮದಲ್ಲಿ ರೈತರ ಜೊತೆ ಗದ್ದೆಗಿಳಿದಿದ್ದ ಮುಖ್ಯಮಂತ್ರಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ರು. ಅಂದು ನಾಟಿ ಮಾಡಿದ ಗದ್ದೆಯ ಕಟಾವಿನ ಸಮಯಕ್ಕೆ ಮತ್ತೆ ಆಗಮಿಸಿದ ಕುಮಾರಸ್ವಾಮಿ ರೈತರ ಕಷ್ಟಗಳಿಗೆ ಸ್ಪಂದಿಸಿ ಜೊತೆಯಿರುವ ಭರವಸೆ ನೀಡಿ ಸುಗ್ಗಿ ಪೂಜೆಯಲ್ಲಿ ಪಾಲ್ಗೊಂಡ್ರು. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಇಡೀ ಗದ್ದೆ ಅಲಂಕೃತಗೊಂಡು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಆಗಸ್ಟ್ 11ರಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ರು. ಸ್ವತಃ ತಾವೇ ನಾಟಿ ಮಾಡಿದ್ದ ಭತ್ತ ಫಸಲು ತೆನೆ ತುಂಬಿ ನಳನಳಿಸುತ್ತಿತ್ತು. ಶುಕ್ರವಾರ ಅದೇ ಜಮೀನಿನಲ್ಲಿ ಗದ್ದೆಗಿಳಿದ ಸಿಎಂ ಸಾಹೇಬ್ರು, ರೈತಾಪಿ ವರ್ಗದ ಜೊತೆ ಸೇರಿ ಭತ್ತದ ಗದ್ದೆಗೆ ಪೂಜೆ ಸಲ್ಲಿಸಿ ಕಟಾವಿಗೆ ಚಾಲನೆ ನೀಡಿದ್ರು. ಬಳಿಕ ಗದ್ದೆಯ ಪಕ್ಕದಲ್ಲೇ ಇದ್ದ ಕಣದಲ್ಲಿ ಭತ್ತದ ರಾಶಿಗೆ ಸುಗ್ಗಿ ಪೂಜೆ ಸಲ್ಲಿಸಿದ್ರು. ನಂತರ ಮಾತನಾಡಿ, ಆತ್ಮಹತ್ಯೆ ದಾರಿ ಹಿಡಿಯದಂತೆ ಸಲಹೆ ನೀಡಿದ್ದಲ್ಲದೆ, ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದ್ರು.

    ಸಿಎಂ ಆಗಮನಕ್ಕಾಗಿ ಇಡೀ ಗದ್ದೆಯನ್ನ ಸಿನಿಮೀಯ ಮಾದರಿ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ಬಾವುಟ, ಬಣ್ಣ ಬಣ್ಣದ ಬಟ್ಟೆ ತಳಿರು ತೋರಣದಿಂದ ಗದ್ದೆ ಅಲಂಕರಿಸಲಾಗಿತ್ತು. ಸಿಎಂ ಸುಗ್ಗಿ ಪೂಜೆ ಸಲ್ಲಿಸುವ ವೇಳೆ ದೇವರ ಹಾಗೂ ಜಾನಪದ ಗೀತೆಗಳನ್ನ ಕಲಾವಿದರು ಹಾಡಿದ್ರು. ಸಿಎಂ ಎಚ್ ಡಿಕೆ ಭತ್ತ ಕೊಯ್ಲಿಗೆ ಅರಳುಕುಪ್ಪೆ ಗ್ರಾಮಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿತ್ತು. ತಮ್ಮ ಜಮೀನಿನಲ್ಲಿ ಸ್ವತಃ ಸಿಎಂ ಅವರೇ ನಾಟಿ ಮಾಡಿ, ಭತ್ತ ಕೊಯ್ಲು ಮಾಡುವ ವೇಳೆ ಭೂಮಿತಾಯಿ ಪೂಜೆ ಸಲ್ಲಿಸಿದ್ದು ಜಮೀನಿನ ಮಾಲೀಕರ ಸಂಭ್ರಮವನ್ನ ಇಮ್ಮಡಿಗೊಳಿಸಿತ್ತು. ಸಿಎಂ ಜೊತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು ಸೇರಿದಂತೆ ಹಲವು ರಾಜಕೀಯ ಮುಖಂಡರು ಪಾಲ್ಗೊಂಡಿದ್ರು.

    ಸುಗ್ಗಿ ಪೂಜೆಯ ನಂತರ ವದೇ ಸಮುದ್ರ ಗ್ರಾಮಕ್ಕೆ ತೆರಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದ್ರು. ರೈತರಿಂದ ನಾವು ಎಂದು ಅನ್ನದಾತನಿಗೆ ಕೃತಜ್ಞತೆ ಸಲ್ಲಿಸುತ್ತಲೇ ರೈತನ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸುಗ್ಗಿ ಕಾರ್ಯದಲ್ಲೂ ಪಾಲ್ಗೊಂಡು ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv