Tag: ಕೊಯಂಬತ್ತೂರು

  • ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    ಗಾಗಲೇ ಕಾಂತಾರ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಅನೇಕ ಕಡೆಗಳಲ್ಲಿ ನಡೆದಿವೆ. ಆದರೆ, ಈವರೆಗೂ ಕನ್ನಡದ ಯಾವುದೇ ಸಿನಿಮಾ ಕೊಯಂಬತ್ತೂರಿನ (Coimbatore) ಇಶಾ ಫೌಂಡೇಶನ್ (Isha Foundation) ನಲ್ಲಿ ಪ್ರದರ್ಶನ ಕಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಕಾಂತಾರ (Kantara) ಅಲ್ಲಿ ವಿಶೇಷ ಪ್ರದರ್ಶನ ಕಂಡಿದ್ದು, ಈ ಕುರಿತು ಇಶಾ ಫೌಂಡೇಶನ್ ತನ್ನ ಅಧಿಕೃತ ಪೇಜಿನಲ್ಲಿ ಬರೆದುಕೊಂಡಿದೆ. ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನೂ ಆಡಿದೆ.

    ಇಶಾ ಫೌಂಡೇಶನ್ ಯೋಗ ಕೇಂದ್ರದಲ್ಲಿ ಸಾಮಾನ್ಯವಾಗಿ ಸಿನಿಮಾಗಳನ್ನು ತೋರಿಸುವುದಿಲ್ಲವಂತೆ. ಈ ಹಿಂದೆ ಕಂಗನಾ ರಣಾವತ್ ನಟನೆಯ ಮಣಿಕರ್ಣಿಕ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಅದರ ನಂತರ ಕಾಂತಾರಕ್ಕೆ ಈ ಯೋಗ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನವಾದ ಮೊದಲ ಸಿನಿಮಾ ಕಾಂತಾರ ಆಗಿದೆ. ಈ ಕುರಿತು ಹೆಮ್ಮೆಯಿಂದಲೇ ಫೌಂಡೇಶನ್ ಬರೆದುಕೊಂಡಿದೆ.

    ದೇಶಾದ್ಯಂತ ಕಾಂತಾರ ಸಿನಿಮಾ ಗೆಲುವಿನ ಓಟವನ್ನು ಮುಂದುವರೆಸಿದೆ. ದೀಪಾವಳಿ ಹಬ್ಬದ ರಜೆಯ ಕಾರಣದಿಂದಾಗಿ ಬಾಕ್ಸ್ ಆಫೀಸ್ ಭರ್ತಿ ಭರ್ತಿ ಆಗುತ್ತಿದೆ. ಇದೊಂದು ಐತಿಹಾಸಿಕ, ಮಹಾ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಈ ಗೆಲುವನ್ನು ರಿಷಬ್ ಶೆಟ್ಟಿ (Rishabh Shetty) ದೈವಕ್ಕೆ ಅರ್ಪಿಸಿದ್ದಾರೆ. ಈ ಸಿನಿಮಾ ಗೆಲ್ಲಲು ದೈವ ಕಾರಣ, ಜನರಲ್ಲಿ ನಾನು ದೇವರನ್ನು ಕಾಣುತ್ತೇನೆ ಎಂದು ಹೇಳಿದ್ದಾರೆ ರಿಷಬ್.

    ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ‘ಕಾಂತಾರ’  ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಕಾಂತಾರ ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಮುಕುಟಕ್ಕೆ ಹೊಸ ಗರಿ ಮೂಡಿದೆ.

    ಈವರೆಗೆ ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ತಿರುವನಂತಪುರಂ: ಇತ್ತೀಚೆಗೆ ಸ್ವಾನ, ದನ-ಕರುಗಳ ಹುಟ್ಟುಹಬ್ಬವನ್ನು ಆಚರಿಸುವುದು ಸಾಮಾನ್ಯವಾಗಿದೆ. ಅಲ್ಲದೆ ಕೆಲವೆಡೆ ಮೂಕ ಪ್ರಾಣಿಗಳ ಸೀಮಂತ ಕಾರ್ಯಕ್ರಮವನ್ನು ಕೂಡ ಮಾಡುತ್ತಾರೆ. ಅಂತೆಯೇ ಇದೀಗ ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಉದ್ಯಮಿಯೊಬ್ಬರು ಸುದ್ದಿಯಾಗಿದ್ದಾರೆ.

    ಹೌದು. ಕೊಯಂಬತ್ತೂರು ಮೂಲದ ಉಮಾ ಮಹೇಶ್ವರನ್ ಎಂಬ ಉದ್ಯಮಿ 2 ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಕ್ಷೀರ ಎಂಬ ಬೆಕ್ಕು 50 ದಿನದ ಗರ್ಭಿಣಿಯಾಗಿದ್ದರೆ, ಐರಿಶ್‍ಗೆ 35 ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಪೆಟ್ ಕ್ಲಿನಿಕ್ ನಲ್ಲಿಯೇ ಉದ್ಯಮಿ ಶುಭ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಶುವೈದ್ಯಾಧಿಕಾರಿ ವೇಣುಗೋಪಾಲ್ ಆಗಮಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್

    ಈ ಸಂಬಂಧ ಮಾಧ್ಯಮದ ಜೊತೆಗೆ ಉಮಾಮಹೇಶ್ವರನ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಸಲುವಾಗಿ ಸೀಮಂತ ಕಾರ್ಯಕ್ರಮ ಮಾಡುತ್ತೇವೆ. ಅಂತೆಯೇ ಇಂದು ನಮ್ಮ ಮುದ್ದಿನ ಬೆಕ್ಕುಗಳಾದ ಕ್ಷೀರ ಮತ್ತು ಐರಿಶ್‍ಗೆ ಅದೇ ರೀತಿ ಮಾಡಿದ್ದೇವೆ. ಈ ಮೂಲಕ ನಮ್ಮ ಕುಟುಂಬ ಹಾಗೂ ಗೆಳೆಯರು ಬೆಕ್ಕುಗಳು ಮತ್ತು ಬೆಕ್ಕಿನ ಮರಿಗಳ ಉತ್ತಮ ಆರೋಗ್ಯಕ್ಕಾಗಿ ಆಶಿಸಿರುವುದಾಗಿ ತಿಳಿಸಿದರು.

    ಇದೇ ವೇಳೆ ಈಗಾಗಲೇ ನಾವು ಬೆಕ್ಕುಗಳಿಗೆ ಆರೋಗ್ಯಕರವಾದ ಆಹಾರಗಳನ್ನು ನೀಡುತ್ತಿದ್ದೇವೆ. ಹಾಲು, ಚಿಕನ್ ಮುಂತಾದ ಪ್ರೊಟೀನ್‍ಯುಕ್ತ ಆಹಾರ ಪದಾರ್ಥಗಳನ್ನು ನೀಡುತ್ತಿರುವುದಾಗಿ ಉಮಾಮಹೇಶ್ವರನ್ ಹೇಳಿದರು.

  • ಟಾರ್ಗೆಟ್ ಇದ್ದಿದ್ದು ಪತ್ನಿ, ಮೃತಪಟ್ಟಿದ್ದು ಗರ್ಭಿಣಿ ಮಗಳು!

    ಟಾರ್ಗೆಟ್ ಇದ್ದಿದ್ದು ಪತ್ನಿ, ಮೃತಪಟ್ಟಿದ್ದು ಗರ್ಭಿಣಿ ಮಗಳು!

    ಕೊಯಂಬತ್ತೂರು: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದು, ಆದರೆ ಅದಕ್ಕೆ ಗರ್ಭಿಣಿ ಮಗಳು ಬಲಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕಿನ ಮದಯ್ಯ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಆರೋಪಿಯನ್ನು ಅರುಣಾಚಲಂ(50) ಹಾಗೂ ಮೃತ ದುರ್ದೈವಿಯನ್ನು ವೆಂಕಟಲಕ್ಷ್ಮಿ ಎಂದು ಗುರುತಿಸಲಾಗಿದೆ. ವೆಂಕಟಲಕ್ಷ್ಮಿ 3 ತಿಂಗಳ ಗರ್ಭಿಣಿ. 4 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೆಂಕಟಲಕ್ಷ್ಮಿ ಪತಿ ಶ್ರೀನಿವಾಸ್ ಜೊತೆ ಯುಗಾದಿ ಹಬ್ಬ ಆಚರಿಸಲು ತನ್ನ ತವರು ಮನೆಗೆ ಬಂದಿದ್ದಾಳೆ.

    ಅಂತೆಯೇ ಮನೆಯವರೆಲ್ಲರೂ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ, ಸಡಗರದಿಂದಲೇ ಆಚರಿಸಿದ್ದರು. ಆದರೆ ವಿಪರೀತ ಮದ್ಯವ್ಯಸನಿಯಾಗಿರುವ ಅರುಣಾಚಲಂ ಹಬ್ಬದ ಸಡಗರ ಮರೆ ಮಾಚುವ ಮುನ್ನವೇ ಮನೆ ಮಂದಿಗೆ ಶಾಕ್ ನೀಡಿದ್ದಾನೆ.

    ಹಬ್ಬ ಆಚರಿಸಿದ ಮರುದಿನ ಅಂದರೆ ಬುಧವಾರ ಅರುಣಾಚಲಂ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಅಲ್ಲದೆ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾನೆ. ಈ ಜಗಳ ತಾರಕಕ್ಕೇರಿ ಪತ್ನಿಯನ್ನು ಕೊಲೆ ಮಾಡಲು ಹೋಗಿ ತನ್ನ ಮಗಳನ್ನೇ ಕೊಂದಿದ್ದಾನೆ.

    ಸದ್ಯ ಘಟನೆ ಸಂಬಂಧ ಆರೋಪಿ ತಲಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • 2.75 ಲಕ್ಷ ಚಿನ್ನ, 15 ಸಾವಿರ ರೂ. ಮೌಲ್ಯದ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿದ ಅಕ್ಕಸಾಲಿಗ

    2.75 ಲಕ್ಷ ಚಿನ್ನ, 15 ಸಾವಿರ ರೂ. ಮೌಲ್ಯದ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿದ ಅಕ್ಕಸಾಲಿಗ

    ಚೆನ್ನೈ: ಕೊರೊನಾ ಮಹಾಮಾರಿ ಬಂದ ಬಳಿಕ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಈ ಮಾಸ್ಕ್ ಬಳಕೆಯಲ್ಲೂ ಫ್ಯಾಶನ್ ಕಂಡುಕೊಳ್ಳಲಾಗಿದ್ದು, ಜನ ಚಿನ್ನ ಹಾಗೂ ಬೆಳ್ಳಿಯ ಮಾಸ್ಕ್ ಧರಿಸಿ ಸುದ್ದಿಯಾಗುತ್ತಿದ್ದಾರೆ. ಇದೇ ರೀತಿ ಕೊಯಂಬತ್ತೂರು ಮೂಲಕ ಅಕ್ಕಸಾಲಿಗರೊಬ್ಬರು ಇದೀಗ ಚಿನ್ನ ಹಾಗೂ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿ ಸುದ್ದಿಯಾಗಿದ್ದಾರೆ.

    ಹೌದು. ಮೂಲತಃ ಅಕ್ಕಸಾಲಿಗರಾಗಿರುವ ರಾಧಾಕೃಷ್ಣನ್ ಸುಂದರಾಮ್ ಆಚಾರ್ಯರು 0.06 ಮಿಲಿಮೀಟರ್ ತೆಳುವಿರುವ ಚಿನ್ನ ಹಾಗೂ ಬೆಳ್ಳಿಯ ಎಳೆಗಳನ್ನು ಬಳಸಿ ಮಾಸ್ಕ್ ತಯಾರಿಸಿದ್ದಾರೆ. 2.75 ರೂ. ಮೌಲ್ಯದ 18 ಕ್ಯಾರೆಟ್ ಚಿನ್ನ ಹಾಗೂ 15 ಸಾವಿರ ರೂ. ಬೆಳ್ಳಿಯನ್ನು ಬಳಸಿ ಮಾಸ್ಕ್ ತಯಾರಿಸಿರುವುದಾಗಿ ರಾಧಾಕೃಷ್ಣ ತಿಳಿಸಿದ್ದಾರೆ.

    ತಯಾರಿಸಲು ಕಾರಣವೇನು?
    ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ಮಾಸ್ಕ್ ತಯಾರಿಸಿದ್ದೇನೆ. ಇಂತಹ ಮಾಸ್ಕ್ ಗಳನ್ನು ಸಾಮಾನ್ಯ ಜನ ಖರೀದಿಸಿ ಧರಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಶ್ರೀಮಂಂತರು ಮದುವೆ ಸಮಾರಂಭಗಳಲ್ಲಿ ಚಿನ್ನದ ಮಾಸ್ಕ್ ಬಳಸುತ್ತಾರೆ. ಈಗಾಗಲೇ ಉತ್ತರ ಭಾರತದಿಂದ ನನಗೆ 9 ಮಾಸ್ಕ್ ತಯಾರಿಸಿ ಕೊಡುವಂತೆ ಆರ್ಡರ್ ಬಂದಿದೆ ಎಂದು ರಾಧಾಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    ಈ ಮಾಸ್ಕ್ ತಯಾರಿಸಲು ನಾನು 7 ದಿನ ತೆಗೆದುಕೊಂಡಿದ್ದೇನೆ. ನನಗೆ ಏನಾದರೂ ಹೊಸತು, ವಿಭಿನ್ನವಾಗಿ ಮಾಡುವುದೆಂದರೆ ತುಂಬಾನೆ ಖುಷಿ. ಆಭ ರಣ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣ ಅವರು ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟರು. ಆ ಬಳಿಕ ತಾನೇ ಚಿನ್ನದ ಎಳೆಗಳಿಂದ ಬೇರೆ ಬೇರೆ ಡಿಸೈನ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಚಿನ್ನದ ಉಡುಪು, ಕೈ ಬ್ಯಾಗ್ ಹಾಗೂ ಛತ್ರಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರು ಮಾಡಿದ್ದರು. ಇದನ್ನೂ ಓದಿ: 3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!

  • 70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

    70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

    -ಮಗ್ಳು ಸೇಫ್ ಅಂತಾ ಅಜ್ಜನ ಬಳಿ ಬಿಡ್ತಿದ್ದ ಪೋಷಕರು
    -ಆರು ದಿನದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದೇಗೆ?

    ಚೆನ್ನೈ: 70 ವರ್ಷದ ಕಾಮುಕ ಅಜ್ಜನೊಬ್ಬ ಏಳು ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    ಏನಿದು ಪ್ರಕರಣ?: ಸಂತ್ರಸ್ತ ಬಾಲಕಿ ಅಪ್ಪ-ಅಮ್ಮ ಹಾಗೂ ಅಣ್ಣನ ಜೊತೆಯಲ್ಲಿ ವಾಸವಾಗಿದ್ದಳು. ಬಾಲಕಿಯ ಪೋಷಕರು ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಸೇಫ್ ಆಗಿರಲಿ ಎಂದು ಏಳು ವರ್ಷದ ಮಗಳನ್ನು ಅಜ್ಜನ ಬಳಿ ಬಿಡುತ್ತಿದ್ದರು. ಹೀಗೆ ಬೆಳಗ್ಗೆ ಹೋದ ಪೋಷಕರು ಸಂಜೆ ಮನೆಗೆ ಹಿಂದಿರುಗುತ್ತಿದ್ದರು.

    ಪುಟ್ಟ ಕಂದಮ್ಮನ ಮುದುಕನ ಕಾಮದ ಕಣ್ಣು: ಹೀಗೆ ಪ್ರತಿನಿತ್ಯ ತನ್ನ ಮನೆಯಲ್ಲಿರುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಮುದುಕನ ಕಣ್ಣು ಬಿದ್ದಿತ್ತು. ಜೂನ್ 26ರಂದು ಮುದುಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೂನ್ 26ರಿಂದ ಜುಲೈ 2ರವರೆಗೆ ನಿರಂತರವಾಗಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ನಾನು ಅಜ್ಜನ ಬಳಿ ಹೋಗಲ್ಲ: ಈ ವಿಷಯ ತಿಳಿಯದ ಪೋಷಕರು ಮಗಳನ್ನು ಅಜ್ಜನ ಬಳಿ ಬಿಡಲು ಹೋಗುತ್ತಿದ್ದಾಗ ಬಾಲಕಿ ನಾನು ಅಜ್ಜನ ಬಳಿ ಹೋಗಲ್ಲ ಎಂದು ಹಠ ಹಿಡಿದಿದ್ದಾಳೆ. ಪೋಷಕರು ಮಗಳನ್ನ ವಿಚಾರಿಸಿದಾಗ ಬಾಲಕಿ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ಮಗಳ ಮಾತು ಕೇಳಿ ಗಾಬರಿಗೊಂಡು ಪೊಲೀಸರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾರೆ.

    ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಮುದುಕನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ತನಿಖೆ ಮುಂದುವರಿದಿದೆ.

  • ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಚೆನ್ನೈ: ಗಿನ್ನಿಸ್ ದಾಖಲೆ ನಿರ್ಮಿಸಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 9 ಜನ ಅಂಧರು ಕೇವಲ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲ’ವನ್ನು ಹೊಲಿಯುವ ಮೂಲಕ ಗಮನ ಸೆಳೆದಿದ್ದಾರೆ.

    ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ 9 ಅಂಧ ವಿದ್ಯಾರ್ಥಿಗಳು ಶುಕ್ರವಾರ ಈ ಚೀಲವನ್ನು ಹೊಲಿದಿದ್ದು, ಇವರಿಗೆ ತೃತೀಯಲಿಂಗಿಗಳ ಸಮುದಾಯದ ಸದಸ್ಯರು ಹಾಗೂ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಲು ಸಹಾಯ ಮಾಡಿದ್ದಾರೆ.

    ಈ ಕಾರ್ಯವನ್ನು ಸಂಘಟಿಸಿದ ಯುವ ಪ್ರತಿಷ್ಠಾನದ ಅಧ್ಯಕ್ಷೆ ಶಶಿಕಲಾ ಈ ಕುರಿತು ಮಾಹಿತಿ ನೀಡಿ, ಯುವ ಪ್ರತಿಷ್ಠಾನದ 9 ಜನ ಅಂಧರು ಹ್ಯಾಂಡಲ್ ಇಲ್ಲದೆ, ಕೇವಲ ಕೈಗಳಿಂದ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲವನ್ನು’ ಹೊಲಿಯುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಹಾಗೂ ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ ಸೆಣಬಿನ ಚೀಲವನ್ನು ಹೊಲಿಯಲಾಗಿದೆ ಎಂದು ತಿಳಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ನಂತರ, ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ ಭಾಷಣದ ಅಂಶವನ್ನು ಶಶಿಕಲಾ ಉಲ್ಲೇಖಿಸಿದ್ದಾರೆ. ಅಲ್ಲದೆ, ನಾವು ಪ್ಲಾಸ್ಟಿಕ್ ವಿರುದ್ಧ ಹೋರಾಟ ಪ್ರಾರಂಭಿಸಬೇಕಿದೆ. ಹೀಗಾಗಿ ಸೆಣಬಿನ ಚೀಲವನ್ನು ಈ ಅಂಧರು ಹೊಲಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಕಲಚೇತನರೂ ಸಹ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ವಿಶ್ವಾಸ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸಹ ಈ ಪ್ರಯತ್ನದ ಉದ್ದೇಶವಾಗಿದೆ ಎಂದರು.

  • ಪತ್ನಿ ಜಗಳವಾಡಿದ್ದಕ್ಕೆ ಮಕ್ಕಳನ್ನೇ ಕೊಂದೇ ಬಿಟ್ಟ!

    ಪತ್ನಿ ಜಗಳವಾಡಿದ್ದಕ್ಕೆ ಮಕ್ಕಳನ್ನೇ ಕೊಂದೇ ಬಿಟ್ಟ!

    ಚೆನ್ನೈ: ಪತ್ನಿ ಜಗಳ ಮಾಡಿದಕ್ಕೆ ಇಬ್ಬರು ಮಕ್ಕಳನ್ನು ತಂದೆಯೇ ಉಸಿರುಗಟ್ಟಿಸಿ ಕೊಂದ ಮನಕಲಕುವ ಘಟನೆ ಗುರುವಾರ ರಾತ್ರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

    ಹೇಮವರ್ಷಿಣಿ (15) ಹಾಗೂ ಶ್ರೀಜಾ (8) ಕೊಲೆಯಾದ ದುರ್ದೈವಿಗಳು. ಸಿಂಗನಲ್ಲೂರು ನಿವಾಸಿ ಪದ್ಮಾನಾಭನ್ ಎಂಬಾತ ಕೊಲೆ ಮಾಡಿರುವ ಪಾಪಿ ತಂದೆ. ಪದ್ಮಾನಾಭನ್ ಹಾಗೂ ಸೆಲ್ವಾರಾಣಿ ಮಧ್ಯೆ ಮನಸ್ತಾಪ ಉಂಟಾಗಿತ್ತು, ಆದರಿಂದ ಯಾವಾಗಲೂ ಅವರಿಬ್ಬರು ಜಗಳವಾಡುತ್ತಲೇ ಇದ್ದರು. ಆದರೆ ಗುರುವಾರ ರಾತ್ರಿಯ ಜಗಳ ತಾರಕಕ್ಕೇರಿದ ಪರಿಣಾಮ ಪತ್ನಿ ಮನೆ ಬಿಟ್ಟು ತನ್ನ ತವರಿಗೆ ಹೋಗಿದ್ದಾಳೆ. ಈ ವೇಳೆ ಪತ್ನಿ ಮೇಲಿನ ಕೋಪಕ್ಕೆ ಪದ್ಮಾನಾಭನ್ ತನ್ನಿಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಮರುದಿನ ಸೆಲ್ವಾರಾಣಿ ತನ್ನ ಮಕ್ಕಳು ತನ್ನೊಂಡನೆ ಕರೆದುಕೊಂಡು ಹೊಗಲು ಮನೆಗೆ ಬಂದಾಗ ಮಕ್ಕಳು ಸಾವನ್ನಪ್ಪಿದ್ದನ್ನು ಕಂಡು ಕಂಗಾಲಾಗಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದಾಗ ಮಕ್ಕಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

    ಘಟನೆ ಕುರಿತು ಆರೋಪಿ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಸಿಂಗನಲ್ಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯೊಳಗೆ ನುಗ್ಗಿ ಅಕ್ಕಿ ತಿಂದ ಕಾಡಾನೆ: ವಿಡಿಯೋ ವೈರಲ್

    ಮನೆಯೊಳಗೆ ನುಗ್ಗಿ ಅಕ್ಕಿ ತಿಂದ ಕಾಡಾನೆ: ವಿಡಿಯೋ ವೈರಲ್

    ಕೊಯಂಬತ್ತೂರು: ಕಾಡಾನೆಯೊಂದು ಮನೆಯೊಳಗ್ಗೆ ನುಗ್ಗಿ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ತಿಂದು ಹೋಗಿರುವ ದೃಶ್ಯವೊಂದು ತಮಿಳು ನಾಡಿನ ಕೊಯಂಬತ್ತೂರಿನ ತಡಗಂನಲ್ಲಿ ನಡೆದಿದೆ.

    ತಡಗಂನ ಮನೆಯೊಂದರಲ್ಲಿ ನುಗ್ಗಿ ಕಾಡಾನೆ ಅಕ್ಕಿ ಹಾಗೂ ಬ್ಯಾಗ್‍ನಲ್ಲಿದ್ದ ಧ್ಯಾನಗಳನ್ನು ಹುಡುಕುತ್ತಿರುವ ವಿಡಿಯೋ ವೈರಲ್ ಆಗಿದೆ. ಆನೆ ಮನೆಗೆ ನುಗ್ಗಿದ ಸಮಯದಲ್ಲಿ ಮನೆಯವರು ನಿದ್ರೆಯಲ್ಲಿದ್ದರು. ನಂತರ ಆನೆ ಹುಡುಕುತ್ತಿದ್ದಾಗ ಶಬ್ಧ ಕೇಳಿಸಿದ್ದರಿಂದ ಮನೆಯವರು ಎಚ್ಚರಗೊಂಡಿದ್ದಾರೆ.

    ಮನೆಯವರು ಎಚ್ಚರಗೊಂಡು ಏನು ಶಬ್ಧ ಎಂದು ನೋಡಲು ಹೋದಾಗ ಅಲ್ಲಿ ಕಾಡಾನೆ ಇರುವುದನ್ನು ನೋಡಿ ಗಾಬರಿಯಾಗಿದ್ದಾರೆ. ನಂತರ ಅಲ್ಲಿದ್ದ ಗ್ರಾಮಸ್ಥರು ಆ ಆನೆಯನ್ನು ಓಡಿಸಿದ್ದಾರೆ. ಸದ್ಯ ಕಾಡಾನೆ ಅಕ್ಕಿ ಹಾಗೂ ಧ್ಯಾನಗಳನ್ನು ತಿನ್ನುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    33 ಸೆಕೆಂಡ್‍ನ ಈ ವಿಡಿಯೋದಲ್ಲಿ ಆನೆ ತನ್ನ ಸೊಂಡಿಲನ್ನು ಬಳಸಿಕೊಂಡು ಮನೆಯಲ್ಲಿದ್ದ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಹುಡುಕಿ ಅದನ್ನು ತಿಂದಿದೆ. ನಂತರ ಮನೆಯವರನ್ನು ಕಂಡ ಆನೆ ಸ್ವಲ್ಪ ಸಮಯ ಮನೆಯಲ್ಲೇ ಇದ್ದು ಬಳಿಕ ಅಲ್ಲಿಂದ ಹೊರಟು ಹೋಗಿದೆ.

    ಕೊಯಂಬತ್ತೂರಿನಲ್ಲಿ ಆನೆ ಆಹಾರ ಹುಡುಕಿ ಕೊಂಡು ಮನೆಯೊಳಗೆ ನುಗ್ಗಿದ್ದು ಇದು ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಆನೆಗಳು ದಾಳಿ ನಡೆಸಿ ಈ ರೀತಿ ಮಾಡಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

    10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

    ಕೊಯಂಬತ್ತೂರು: ನೀರಿನ ಟ್ಯಾಂಕಿನೊಳಗೆ ಬಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಟ್ಟ ಘಟನೆ ನಡೆದಿದೆ.

    ಪೆರಿಯ ತಡಾಗಂನಲ್ಲಿರೋ ಶ್ರೀ ಲಲಿತಾಂಬಿಕ ದೇವಸ್ಥಾನದ ನೀರಿನ ಟ್ಯಾಂಕಿಗೆ ಮರಿಯಾನೆ ಗುರುವಾರ ಸಂಜೆ 4.30ರ ಸುಮಾರಿಗೆ ಬಿದ್ದು, ಒದ್ದಾಡಿದೆ. ಕೂಡಲೇ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.

    ನೀರು ಕುಡಿಯಲೆಂದು ಆನೆಗಳ ಹಿಂಡು ದೇವಸ್ಥಾನದ ಪಕ್ಕದಲ್ಲಿರುವ 10 ಅಡಿ ಆಳದ ಟ್ಯಾಂಕ್ ಬಳಿ ಬಂದಿವೆ. ಈ ವೇಳೆ ಹಿಂಡಿನಲ್ಲಿದ್ದ 1 ತಿಂಗಳ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದಿದೆ. ಕೂಡಲೇ ಇದನ್ನು ಗಮನಿಸಿದ ಉಳಿದ ಆನೆಗಳು ಮರಿಯನ್ನು ರಕ್ಷಿಸಲು ಪ್ರಯತ್ನಿಸಿ ವಿಫಲವಾಗಿವೆ.

    ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಗಸ್ತು ತಿರುಗುತ್ತಿದ್ದ ವೇಳೆ ಆನೆಗಳ ಹಿಂಡು ನೀರಿನ ಟ್ಯಾಂಕಿನ ಬಳಿ ಇರುವುದನ್ನು ಗಮನಿಸಿದ್ದಾರೆ. ಅಲ್ಲದೇ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದು, ಒದ್ದಾಡುತ್ತಿರುವುದು ತಿಳಿಯುತ್ತದೆ.

    ಕೂಡಲೇ ಎಚ್ಚೆತ್ತಕೊಂಡ ಅರಣ್ಯ ಇಲಾಖೆ, ಮರಿಯಾನೆಯನ್ನು ಕಾಪಾಡುವ ಸಲುವಾಗಿ ಆನೆಗಳ ಹಿಂಡನ್ನು ಅಲ್ಲಿಂದ ಓಡಿಸಲು ಪಟಾಕಿ ಹಚ್ಚಿದ್ದಾರೆ. ಭಯದಿಂದ ಆನೆಗಳು ಅಲ್ಲಿಂದ ತೆರಳಿದ ಬಳಿಕ ಅರ್ಥ್‍ಮೂವರ್ ಬಳಸಿ ಮರಿಯಾನೆಯನ್ನು ಮೇಲಕ್ಕೆತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಡಲಾಯಿತು ಎಂಬುದಾಗಿ ವರದಿಯಾಗಿದೆ.