Tag: ಕೇಶುಭಾಯಿ ಪಟೇಲ್

  • ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

    ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ

    ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‍ರ ಕಾಲುಗಳನ್ನು ಮುಟ್ಟಿ ನಮಸ್ಕರಿಸುವ ಮೂಲಕ ಪ್ರಧಾನಿ ಮೋದಿ ಆಶೀರ್ವಾದ ಪಡೆದಿದ್ದಾರೆ.

    ಗುಜರಾತನ ಅಡಲಜಿಯಲ್ಲಿ ಶಿಕ್ಷಣ ಭವನದ ಶಿಲಾನ್ಯಾಸ ಮಾಡಲು ಮೋದಿ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ರಾಜಕೀಯ ಗುರು ಕೇಶುಭಾಯಿ ಪಟೇಲರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು. ಕೂಡಲೇ ಪಟೇಲರು ಪ್ರಧಾನಿಗಳನ್ನು ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು.

    2001ರಲ್ಲಿ ಕೇಶುಭಾಯಿ ಪಟೇಲರು ತಮ್ಮ ಸಿಎಂ ಸ್ಥಾನವನ್ನು ಮೋದಿಯವರಿಗೆ ಬಿಟ್ಟುಕೊಟ್ಟಿದ್ದರು. 2001ರ ಭೂಕಂಪದ ಬಳಿಕ ಸರ್ಕಾರದ ಕ್ಷಮತೆ ಮತ್ತು ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಮಾಡಿದ್ದವು. 2001ರಲ್ಲಿ ಕೇಶುಭಾಯಿ ಪಟೇಲ್ ಗುಜರಾತಿಗೆ ಮಾರಕ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದರು. ಅಂದಿನ ಘಟನೆಯ ಬಳಿಕ ಮೋದಿ ಮತ್ತು ಕೇಶುಭಾಯಿ ಅವರ ನಡುವೆ ಎಲ್ಲವೂ ಸರಿ ಇರಲಿಲ್ಲ ಎಂದು ಹೇಳಲಾಗುತ್ತದೆ. ಆದ್ರೂ ಪ್ರಧಾನಿಗಳು ಮಾತ್ರ ಕೇಶುಭಾಯಿ ಅವರನ್ನು ರಾಜಕೀಯ ಗುರುಗಳು ಎಂದು ಭಾವಿಸುತ್ತಾರೆ.

    ಕೇಶುಭಾಯಿ 1980ರಿಂದ 2012ರವರೆಗೆ ಬಿಜೆಪಿಯ ನಾಯಕರಾಗಿದ್ದರು. 1995ರಲ್ಲಿ ಕೇಶುಭಾಯಿ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಿ ಸರ್ಕಾರ ರಚಿಸಿದ್ದರು. 2012ರಲ್ಲಿ ಬಿಜೆಪಿಯಿಂದ ಹೊರಬಂದ ಕೇಶುಭಾಯಿ ‘ಗುಜರಾತ್ ಪರಿವರ್ತನ ಪಕ್ಷ’ ಕಟ್ಟಿದ್ದರು. ಇದಾದ ಬಳಿಕ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 2014ರಲ್ಲಿ ಗುಜರಾತ್ ಪರಿವರ್ತನ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದರು. 2017ರಲ್ಲಿ ಕೇಶುಭಾಯಿ ಪುತ್ರ ಪ್ರವೀಣ್ ನಿಧನದ ಬಳಿಕ ಪ್ರಧಾನಿ ಮೋದಿ ಖುದ್ದು ಆಗಮಿಸಿ ತಮ್ಮ ರಾಜಕೀಯ ಗುರುವಿಗೆ ಸಾಂತ್ವಾನ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ಮ ಯಾರನ್ನು ಬಿಡಲ್ಲ, ಹಿಂಬಾಲಿಸುತ್ತಲೇ ಇರುತ್ತದೆ: ರಾಮ್ ಮಾಧವ್

    ಕರ್ಮ ಯಾರನ್ನು ಬಿಡಲ್ಲ, ಹಿಂಬಾಲಿಸುತ್ತಲೇ ಇರುತ್ತದೆ: ರಾಮ್ ಮಾಧವ್

    ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಅಧಿಕಾರ ಸ್ಥಾಪನೆ ಮಾಡಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸರ್ಕಾರ ಸ್ಥಾಪನೆಗೆ ಮುಂದಾಗುತ್ತಿದೆ.

    ಈ ನಡುವೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ವಾಟ್ಸಪ್ ನಲ್ಲಿ ಬಂದಿರುವ ಒಂದು ಮೆಸೇಜ್ ಅನ್ನು ಫೇಸ್‍ಬುಕ್‍ನಲ್ಲಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಪೋಸ್ಟ್ ನಲ್ಲಿ ಏನಿದೆ?
    1996ರಲ್ಲಿ ಗುಜರಾತಿನಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ನಾಯಕರಾದ ಶಂಕರ್ ಸಿಂಗ್ ವಘೇಲಾ ಮತ್ತು ದಿಲೀಪ್ ಫಾರೀಕ್ ಅವರು ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಿಜೆಪಿ ಇಬ್ಭಾಗವಾಗಿತ್ತು.

    ವಿಶ್ವಾಸ ಮತಯಾಚನೆಯ ವೇಳೆ ಕಾಂಗ್ರೆಸ್ ವಿಧಾನಸಭೆಯಲ್ಲಿ ಗದ್ದಲ, ಗಲಾಟೆ ಎಬ್ಬಿಸಿತ್ತು. ಗದ್ದಲ ಎಬ್ಬಿಸಿದ್ದಕ್ಕೆ ವಿರೋಧ ಪಕ್ಷದ ಸದಸ್ಯರನ್ನು ಸ್ಪೀಕರ್ ಒಂದು ದಿನ ಅಮಾನತುಗೊಳಿಸಿದರು. ನಂತರ ನಡೆದ ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಸರ್ಕಾರ ತನ್ನ ಬಹುಮತವನ್ನು ತೋರಿಸಿ ಪಾಸ್ ಆಗಿತ್ತು.

    ನಂತರ ನಡೆದ ರೋಚಕ ವಿದ್ಯಮಾನದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ. ಅಷ್ಟೇ ಅಲ್ಲದೇ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿ ರಾಜ್ಯಪಾಲರಾದ ಕೃಷ್ಣಪಾಲ್ ಸಿಂಗ್ ಅವರು ತುರ್ತು ಪರಿಸ್ಥಿತಿ ಇರುವ ಕಾರಣ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು.

    ಪ್ರಧಾನಿ ಕಚೇರಿಗೆ ಶಿಫಾರಸು ತಲುಪಿದ 15 ನಿಮಿಷದ ಒಳಗಡೆ ಗುಜರಾತ್ ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ವಿಶೇಷ ಏನೆಂದರೆ ಸದನದಲ್ಲಿ ಬಹುಮತ ಸಾಬೀತು ಪಡಿಸಿದರೂ ರಾಷ್ಟ್ರಪತಿ ಆಳ್ವಿಕೆ ಬಂದಿತ್ತು.

    ನಂತರ ವಘೇಲಾ ಒಂದು ವರ್ಷಕ್ಕೆ, ಫರೀಕ್ 5 ತಿಂಗಳು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದಾಗ ಕಾಂಗ್ರೆಸ್ ತಾನು ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿತು. ಇದಾದ ನಂತರ ನಡೆದ ಚುನಾವಣೆಯಲ್ಲಿ ವಘೇಲಾ ಅವರು ಹೊಂದಿದ್ದ ಶಾಸಕರ ಸಂಖ್ಯಾಬಲ 47 ರಿಂದ 4ಕ್ಕೆ ಇಳಿಯಿತು ಅಷ್ಟೇ ಅಲ್ಲದೇ ಕಾಂಗ್ರೆಸ್ಸಿಗೆ ಸೋಲಾಯಿತು. ಕೇಶುಭಾಯಿ ಪಟೇಲ್ ಮತ್ತೆ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದರು.

    22 ವರ್ಷಗಳ ನಂತರವೂ ಈ ಘಟನೆ ಈಗ ಪ್ರಸ್ತುತ ಯಾಕೆಂದರೆ ಚುನಾಯಿತ ಸರ್ಕಾರಗಳು ಹೇಗೆ ಕೆಲವೊಮ್ಮೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ನೆಹರೂ ಅವರ ಕಾಲದಿಂದಲೂ ಸಂವಿಧಾನ ಉಲ್ಲಂಘನೆಯಾಗುತ್ತಲೇ ಇದೆ.

    1996 ರಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದಾಗ ವಜುಭಾಯಿ ವಾಲಾ ಗುಜರಾತ್ ಬಿಜೆಪಿಯ ಅಧ್ಯಕ್ಷರಾಗಿದ್ದರು. ಈಗ ವಿ.ಆರ್. ವಾಲಾ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ. ರಾಜ್ಯಪಾಲರ ಶಿಫಾರಸಿಗೆ ರಾಷ್ಟ್ರಪತಿ ಆಡಳಿತವನ್ನು ಗುಜರಾತ್ ನಲ್ಲಿ ಹೇರಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಅಂದಿನ ಪ್ರಧಾನಿ ಎಚ್‍ಡಿ ದೇವೇಗೌಡರೇ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಪಾಲರು ಅವರ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಕೇಳಿಕೊಳ್ಳುತ್ತಿವೆ. ಅದಕ್ಕೆ ಹೇಳೋದು ಕರ್ಮ ಯಾರನ್ನು ಬಿಡವುದಿಲ್ಲ ಹಿಂಬಾಲಿಸುತ್ತಲೇ ಇರುತ್ತದೆ ಅಂತ.