Tag: ಕೇರಳ ವಿಮಾನ ದುರಂತ

  • ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಕ್ಯಾಲಿಕಟ್‌: ಕೊರೊನಾ ವೈರಸ್‌ನಿಂದಾಗಿ ಸ್ವದೇಶ ಬರಲು ಹರಸಾಹಸ ಪಟ್ಟು ಕೊನೆಗೆ ವಂದೇಭಾರತ್‌ ಮಿಷನ್‌ ಅಡಿ ಟಿಕೆಟ್‌ ಪಡೆದು ಕುಟುಂಬದೊಂದಿಗೆ ಕೇರಳಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ.

    ಕ್ಯಾಲಿಕಟ್‌ ಮೂಲದ 35 ವರ್ಷದ ಶರಫು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಅಮೀನಾ, ಮಗಳು ಈಶಾ ಫಾತಿಮಾ ಜೊತೆ ದುಬೈನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹತ್ತಿದ್ದರು.

    ವಿಮಾನ ಟೇಕಾಫ್‌ ಆಗುವುದಕ್ಕೆ ಮೊದಲು ಫೇಸ್‌ಶೀಲ್ಡ್‌, ಪಿಪಿಇ ಕಿಟ್‌, ಮುಖಕ್ಕೆ ಮಾಸ್ಕ್‌ ಧರಿಸಿ ಪತ್ನಿ, ಪುತ್ರಿಯ ಜೊತೆ ಸೆಲ್ಫಿ ಕ್ಲಿಕ್‌ ಮಾಡಿ ‘ಮರಳಿ ಮನೆಗೆʼ ಎಂದು ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

    ವೈದ್ಯಕೀಯ ತುರ್ತು ಕಾರಣ ನೀಡಿ ಕೊನೆಗೆ ಶರಫು ಕುಟುಂಬಕ್ಕೆ ವಂದೇ ಭಾರತ್‌ ಮಿಶನ್‌ ಅಡಿ ಸ್ವದೇಶಕ್ಕೆ ಬರಲು ಟಿಕೆಟ್‌ ಸಿಕ್ಕಿತ್ತು. ಶರಫು ಪತ್ನಿ ಆರೋಗ್ಯ ಸ್ಥಿರವಾಗಿದ್ದು, ಪುತ್ರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಶರಫ್‌ ಸ್ನೇಹಿತ ಶಫಿ ಎಂಬವರು ಈ ಪೋಸ್ಟ್‌ಗೆ ಕಮೆಂಟ್‌ ಮಾಡಿ, ಕೇರಳಕ್ಕೆ ಹೋಗುವ ಮೊದಲು ನನ್ನ ಹೋಟೆಲಿಗೆ ಬಂದಿದ್ದ. ಮನಸ್ಸು ಬಹಳ ಗೊಂದಲದಲ್ಲಿತ್ತು. ಮುಂದೆ ಏನೋ ಆಗಬಹುದು ಎಂಬುದರ ಕುರಿತು ಆತನಿಗೆ ನ್ಸೂಚನೆ ಸಿಕ್ಕಿರಬೇಕು ಎಂದು ನಾನು ಭಾವಿಸುತ್ತೇನೆ. ನನಗೆ ಆತ ಹಣವನ್ನು ನೀಡಿ, ಉದ್ಯೋಗವಿಲ್ಲದವರಿಗೆ ಆಹಾರವನ್ನು ನೀಡಲು ಇದನ್ನು ಬಳಸಬೇಕು ಎಂದು ಹೇಳಿದ್ದ. ಕೊರೊನಾ ಸಮಯದಲ್ಲಿ ಶರಫು ಅವರು ಬಡವರಿಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.