Tag: ಕೇದಾರನಾಥ್

  • ಇಂಡಿಯಾ ಗೇಟ್ ಮುಂದೆ ಪ್ರತಿಷ್ಠಾನೆ ಆಗಲಿರುವ ಬೋಸ್ ಶಿಲ್ಪವನ್ನು ಕೆತ್ತುತ್ತಿರುವುದು ಕನ್ನಡಿಗ

    ಇಂಡಿಯಾ ಗೇಟ್ ಮುಂದೆ ಪ್ರತಿಷ್ಠಾನೆ ಆಗಲಿರುವ ಬೋಸ್ ಶಿಲ್ಪವನ್ನು ಕೆತ್ತುತ್ತಿರುವುದು ಕನ್ನಡಿಗ

    ಮೈಸೂರು: ದೆಹಲಿಯ ಇಂಡಿಯಾ ಗೇಟ್ ಮುಂಭಾಗ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಕಪ್ಪು ಕಲ್ಲಿನ ಏಕ ಶಿಲೆಯ ಮೂರ್ತಿ ನಿರ್ಮಾಣದ ಬಹುದೊಡ್ಡ ಅವಕಾಶ ಈಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸಿಕ್ಕಿದೆ.

    ಕೇದಾರನಾಥ್‍ನಲ್ಲಿ ಶಂಕರಾಚಾರ್ಯರ ಅವರ ಮೂರ್ತಿ ಕೆತ್ತಿ ಖ್ಯಾತಿ ಪಡೆದ ಯೋಗಿರಾಜ್‍ಗೆ ಈಗ ಮತ್ತೊಂದು ಬಹುದೊಡ್ಡ ಅವಕಾಶ ಸಿಕ್ಕಿದೆ. ದೆಹಲಿಯಲ್ಲೇ ಉಳಿದು ಈ ಮೂರ್ತಿ ಕೆತ್ತನೆಯನ್ನು ಇವರು ಮತ್ತು ತಂಡ ಮಾಡಲಿದೆ.

    ಈ ಬಗ್ಗೆ ಮಾತನಾಡಿದ ಯೋಗಿರಾಜ್ ಅವರು, ಇಂಡಿಯಾ ಗೇಟ್‍ಗೆ ಕಲಾಕೃತಿ ಸೇರ್ಪಡೆ ಆಗುತ್ತಿರುವುದು ಹೆಮ್ಮೆಯ ವಿಷಯ. ಗ್ರಾನೇಟ್ ಕಲ್ಲಿನಲ್ಲಿನ ಸುಭಾಷ್‌ ಚಂದ್ರ ಅವರ ಮೂರ್ತಿ ಕೆತ್ತನೆ ಆಗುತ್ತದೆ. 30 ಅಡಿ ಕಲ್ಲಿನಲ್ಲಿ ಈ ಕೆತ್ತನೆ ಮಾಡಬೇಕು. ಬುಧವಾರ ದೆಹಲಿಗೆ ಹೋಗುತ್ತೇನೆ ಎಂದು  ತಿಳಿಸಿದರು. ಇದನ್ನೂ ಓದಿ: ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನಾರಚನೆ?

    ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್ ಭೇಟಿಯಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಹುಡುಕಾಡಿ ಕೇದಾರಾನಾಥದಲ್ಲಿ ಶಂಕರರ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ

  • ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಮುಂಬೈ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ ಎಂದು ನಿರ್ದೇಶಕ ಅಭಿಷೇಕ್ ಕಪೂರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿ ಖಾನ್ ನಟಿಸಿದ್ದ ‘ಕೇದಾರನಾಥ್’ ಸಿನಿಮಾ ತೆರೆ ಮೇಲೆ ಬಂದು ಇತ್ತೀಚೆಗೆ ಮೂರು ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಸಾರಾ ತನ್ನ ಕೋ-ಸ್ಟಾರ್ ಅನ್ನು ನೆನೆದು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಬಗ್ಗೆ ‘ಕೇದಾರನಾಥ್’ ಸಿನಿಮಾದ ನಿರ್ದೇಶಕ ಅಭಿಷೇಕ್ ಕಪೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸುಶಾಂತ್ ಅವರನ್ನು ಇಂಡಸ್ಟ್ರಿಯಲ್ಲಿ ಹೇಗೆ ನೋಡುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ನಾನು ‘ಕೇದಾರನಾಥ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿರಬೇಕಾದರೆ ಯಾರು ಈ ಸಿನಿಮಾಗೆ ಹೂಡಿಕೆ ಮಾಡಲು ಬರುತ್ತಿರಲಿಲ್ಲ. ಎಲ್ಲರೂ ಸುಶಾಂತ್ ಸ್ಟಾರ್ ಅಲ್ಲ ಎಂದು ಎಷ್ಟೋ ಹೂಡಿಕೆದಾರರು ಸಿನಿಮಾಗೆ ದುಡ್ಡನ್ನು ಹಾಕಲು ಮುಂದೆ ಬಂದಿರಲಿಲ್ಲ. ಅದಕ್ಕೆ ಸುಶಾಂತ್ ಅವರೇ ತಮ್ಮ ಸ್ವಂತ ಹಣದಿಂದ ಈ ಚಿತ್ರವನ್ನು ಮಾಡಿದರು ಎಂದು ನೆನೆದರು.

    ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಬಗ್ಗೆ ತಿಳಿದುಕೊಂಡ ಜನರು, ಇಂದು ಅವರನ್ನು ಪ್ರತಿಭಾವಂತ ನಟ ಎಂದು ನೆನೆಪಿಸಿಕೊಳ್ಳುತ್ತಾರೆ. ಆದರೆ ಇದೇ ಪ್ರೀತಿ ಅವರು ಜೀವಂತವಾಗಿರುವಾಗ ಅಗತ್ಯವಿತ್ತು. ಆಗ ಯಾರು ಅವರ ಜೊತೆ ನಿಂತಿರಲಿಲ್ಲ. ಈಗ ಅವರ ಬಗ್ಗೆ ಮಾತನಾಡುವುದನ್ನು ಕೇಳಿದರೆ ವಿಚಿತ್ರವೆನಿಸುತ್ತೆ ಎಂದರು.

    ಸುಶಾಂತ್ ಸ್ಟಾರ್ ಅಲ್ಲ ಎಂದು ನಿರ್ಮಾಪಕರು ‘ಕೇದಾರನಾಥ’ ಸಿನಿಮಾಗೆ ಬಂಡವಾಳ ಹಾಕಲು ಯಾರು ಬಂದಿರಲಿಲ್ಲ. ಆಗ ಅವರೇ ಈ ಸಿನಿಮಾವನ್ನು ಮುಗಿಸಲೇ ಬೇಕು ಎಂದು ಛಲ ತೊಟ್ಟಿದ್ದರು. ಅದಕ್ಕೆ ಅವರ ಸ್ವಂತ ಜೇಬಿನಿಂದ ಹಣವನ್ನು ಹಾಕಿದ್ದರು. ನಾನು ಸಹ ಈ ಸಿನಿಮಾ ಮಾಡುವಾಗ ತುಂಬಾ ಒತ್ತಡದಲ್ಲಿದ್ದೆ. ಆದ್ದರಿಂದ ನಾನು ಚಿತ್ರ ಮಾಡಬೇಕಾಯಿತು. ಆದರೆ, ‘ಕೇದಾರನಾಥ’ ಸಿನಿಮಾ ಮಾಡುವಾಗ ಸುಶಾಂತ್ ನೋವು ಅನುಭವಿಸಿದ್ದು ನನಗೆ ಗೊತ್ತಿತ್ತು ಎಂದು ತಿಳಿಸಿದರು.

    ಸುಶಾಂತ್ ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಇಡೀ ಜಗತ್ತೇ ಅವರ ಅಭಿಮಾನಿಯಾಗಿದೆ. ಅವರು ಬದುಕಿದ್ದಾಗ ಅವರನ್ನು ಯಾರು ಪ್ರೀತಿಸುತ್ತಾರೆ ಎಂದು ತಿಳಿಯಲು ಯಾರು ಬಿಡಲಿಲ್ಲ. ಆದರೆ ಅವರು ನಮ್ಮನ್ನು ಅಗಲಿದ ಮೇಲೆ ಎಲ್ಲರಿಗೂ ಗೊತ್ತಾಗಿದೆ. ಇದು ದುರಂತ ಎಂದು ಹೇಳಿದರು.

    ಸುಶಾಂತ್ ಅದ್ಭುತ ನಟ. ಅವರು ಎಂಜಿನಿಯರ್ ಆಗಿದ್ದು, ಖಗೋಳ ಭೌತಶಾಸ್ತ್ರ ಮತ್ತು ಕ್ವಾಂಟಮ್ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ತುಂಬಾ ಪ್ರತಿಭಾವಂತ ನಟ ಮಾತ್ರವಲ್ಲ, ವಿಜ್ಞಾನದ ಬಗ್ಗೆಯೂ ಹೆಚ್ಚು ಜ್ಞಾನವನ್ನು ಹೊಂದಿದ್ದರು. ಅದಕ್ಕೆ ಎಷ್ಟೂ ಜನರು ಸುಶಾಂತ್ ಅವರ ಕ್ರಾಫ್ಟ್ ಮತ್ತು ಸಿನಿಮಾದ ಮೇಲಿನ ಪ್ರೀತಿಯನ್ನು ನೋಡಿ ಅವರ ಅಭಿಮಾನಿಗಳಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್

    ಈ ಹಿಂದೆಯೂ ಮಾಧ್ಯಮಗಳಲ್ಲಿ ಮಾತನಾಡುತ್ತಾ, ನಿರ್ದೇಶಕರು ‘ಕೇದಾರನಾಥ್’ ಚಿತ್ರೀಕರಣದ ವೇಳೆ ಸುಶಾಂತ್ ತೊಂದರೆಯಾಗಿದ್ದ ಬಗ್ಗೆ ಬಹಿರಂಗಪಡಿಸಿದ್ದರು.

  • ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ಮೋದಿ ದೇವರ ಮೊರೆ – ರಾತ್ರಿಯಿಡೀ ಕೇದಾರನಾಥ ಗುಹೆಯಲ್ಲಿ ನಮೋ ಧ್ಯಾನ

    ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ಮೋದಿ ದೇವರ ಮೊರೆ – ರಾತ್ರಿಯಿಡೀ ಕೇದಾರನಾಥ ಗುಹೆಯಲ್ಲಿ ನಮೋ ಧ್ಯಾನ

    – ಪವಿತ್ರ ಕಡ್ತಲ
    ಬೆಂಗಳೂರು: ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಮಹಾತಪಸ್ಸು ಮಾಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಲಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ. ಧ್ಯಾನದ ಬಳಿಕ ಬದರೀನಾಥ್ ದೇಗುಲಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

    ನಿನ್ನೆ ಬುದ್ಧಪೂರ್ಣಿಮಯೆ ದಿನವೇ ಗವಿ ಧ್ಯಾನ ಆರಂಭಿಸಿದ್ದು ನಾನಾ ಕುತೂಹಲ ಸೃಷ್ಟಿಸಿದೆ. ನೂರು ವರ್ಷ ಐತಿಹ್ಯವಿರುವ, ಶಿವವನ್ನು ಒಲಿಸಲು ಪಾರ್ವತಿ ತಪಸ್ಸು ಮಾಡಿರುವ ಮಹಾಶಕ್ತಿಯ ಕ್ಷೇತ್ರದಲ್ಲಿ ಮೋದಿ ತಪಸ್ಸಿಗೆ ಹಾಗೂ ಬುದ್ಧನ ಬದುಕು ಸಾಕ್ಷ್ಯತ್ಕಾರ ಕಂಡ ದಿನವೇ ಮೋದಿ ಮಾಡಿದ ಧ್ಯಾನಕ್ಕೆ ಮಹಾ ಶಕ್ತಿ ಇದೆಯಂತೆ.

    ಶಿಲಾಗುಹೆಯಲ್ಲಿ ಮಾಡಿದ ತಪಸ್ಸಿನ ವಿಶೇಷವೇನು?
    * ಮೋದಿ ಗುಹೆಯಲ್ಲಿ ಬರೀ ಮೌನವಾಗಿ ಧ್ಯಾನಸ್ಥರಾಗಿರಲಿಲ್ಲ. ಬದಲಾಗಿ ಅಕ್ಷರಲಕ್ಷ ಜಪ ಮಾಡಿದ್ರು. ಓಂ ನಮಃ ಶಿವಾಯ ಮಂತ್ರವನ್ನು ನಿರಂತರವಾಗಿ ಜಪಿಸಿದ್ರು.
    * ಓಂ ನಮಃ ಶಿವಾಯ ಮಂತ್ರಘೋಷವನ್ನು ಓಂಕಾರ ಘೋಷವನ್ನು ಒಂದು ಲಕ್ಷ ಬಾರಿ ಶ್ರದ್ಧೆಯಿಂದ ಜಪಿಸಿದ್ರೆ ಇಷ್ಟಾರ್ಧ ಈಡೇರುತ್ತದೆ ಅನ್ನುವ ನಂಬಿಕೆ ಇದೆ.
    * ಪ್ರಧಾನಿ ಮೋದಿ ತಪಸ್ಸು ಮಾಡಲು ಬುದ್ಧ ಪೂರ್ಣಿಮೆಯ ದಿನವನ್ನೇ ಆಯ್ಕೆ ಮಾಡಿಕೊಂಡರು. ಬುದ್ಧನಿಗೆ ಸಾಕ್ಷ್ಯಾತ್ಕರವಾದ ದಿನ ಬುದ್ಧ ಹುಟ್ಟಿದ ದಿನ. ಅಷ್ಟೇ ಅಲ್ಲ ಬುದ್ಧಪೌರ್ಣಿಮೆಯ ದಿನಕ್ಕೆ ಅಪಾರ ಶಕ್ತಿಯಿದ್ದು ಭಕ್ತರು ಒಂದು ಬಾರಿ ಪಠಿಸಿದ ಮಂತ್ರಘೋಷ ಲಕ್ಷ ಮಂತ್ರಘೋಷವಾಗಿ ಮಾರ್ಪಾಡಾಗಲಿದೆ.

    * ಪ್ರಧಾನಿ ಕಾಷಾಯ ತೊಟ್ಟಿದ್ದು ಏಕಾಗ್ರತೆ ಹಾಗೂ ಶುದ್ಧಿಯ ಸಂಕೇತವಾಗಿ. ಅಲ್ಲದೆ ಕೇದಾರನಾಥದಲ್ಲೂ ಪೂಜೆ ಮಾಡುವಾಗ ಸಾಂಪ್ರದಾಯಿಕ ಪಹರಿ ವಸ್ತ್ರ ಧರಿಸಿದರು. ಪೂಜೆಯಲ್ಲಿ ಆಯಾಯ ವಸ್ತ್ರಗಳಿಗೂ ಅಷ್ಟೆ ಮಹತ್ವವಿದೆ.
    * ಪಾರ್ವತಿ ದೇವಿ ಇದೇ ಗುಹೆಯಲ್ಲಿ ತಪಸ್ಸು ಮಾಡಿ ಶಿವದೇವರನ್ನು ಒಲಿಸಿಕೊಂಡಳು ಅನ್ನುವ ಪ್ರತೀತಿ ಇದೆ. ಸಾಕ್ಷತ್ ಶಿವನ ಸಾಕ್ಷ್ಯತ್ಕಾರದ ಸನ್ನಿಧಾನದಲ್ಲಿ ಮೋದಿಯ ತಪಸ್ಸು ರಾಜಕೀಯ ಭವಿಷ್ಯದ ಕಠಿಣ ಹಾದಿಯನ್ನು ಸುಗಮಗೊಳಿಸಲಿದೆ ಅನ್ನೋದು ಜ್ಯೋತಿಷಿಗಳ ಮಾತು.

    * ಐದು ಮೀಟರ್ ಉದ್ದ ಮೂರು ಮೀಟರ್ ಅಗಲವುಳ್ಳ ಈ ಗುಹೆಯಲ್ಲಿ ಮೋದಿ ಈ ಹಿಂದೆಯೂ ತಪಸ್ಸು ಮಾಡಿದ್ದರಂತೆ. ಇದರಿಂದ ರಾಜಕೀಯ ಬದುಕಿನಲ್ಲಿ ಔನತ್ಯಕ್ಕೇರಿದ್ದರೆಂದು ಹೇಳಲಾಗುತ್ತಿದೆ.
    * ಈ ಶಿಲಾಗುಹೆಯಲ್ಲಿ ತಪಸ್ಸು ಮಾಡೋದು ಅಂದರೆ ಅದು ಅಷ್ಟು ಸುಲಭವಲ್ಲ, ತಪಸ್ಸು ಮಾಡುವವರಿಗೆ ಅತ್ಯಂತ ಏಕಾಗ್ರತೆ, ಶ್ರದ್ಧೆ, ಆತ್ಮ ಹಾಗೂ ಪರಮಾತ್ಮನ ಅನುಸಂಧಾನ ಮಾಡುವಂತ ವಿಶೇಷ ಶಕ್ತಿ ಇರಬೇಕು.
    * ಈ ಶಿಲಾಗುಹೆಯಲ್ಲಿ ತಪಸ್ಸು ಮಾಡಿದವರ ಬೇಡಿಕೆ ಇಷ್ಟಾರ್ಥ ಎಲ್ಲವೂ ನೇರವೇರಲಿದೆ. ಇದು ಗೆಲುವಿನ ಮಹಾಯಜ್ಞ ಹಾಗೂ ಶಿವನನ್ನು ನೇರವಾಗಿ ಒಲಿಸಿಕೊಳ್ಳುವ ಮಾರ್ಗ ಅನ್ನೋದು ಧಾರ್ಮಿಕ ನಂಬಿಕೆ.

    ಚುನಾವಣೆಯ ಮಹಾ ಫಲಿತಾಂಶದ ಹೊಸ್ತಿಲಲ್ಲಿ ಮೋದಿಯ ಈ ತಪಸ್ಸು ನಾನಾ ಕುತೂಹಲಕ್ಕೆ ಕಾರಣವಾಗಿದೆ. ದೇವರ ಒಲಿಸಿಕೊಳ್ಳಲು ಹೊರಟ ಮೋದಿಗೆ ಮತದಾರ ಒಲೀತಾನ ಪ್ರಧಾನಿಯ ಸಿಂಹಾಸನ ಸಿಗಲಿದೆಯಾ ಅನ್ನೋ ಪ್ರಶ್ನೆ ಮೂಡಿದ್ದು, ಗೆಲುವಿನ ಸಾಕ್ಷ್ಯತ್ಕಾರವಾ, ಸೋಲಿನ ಕಹಿಯಾ ಅನ್ನೋದು ದಿನಾಂಕ 23 ರಂದು ಗೊತ್ತಾಗಲಿದೆ.

  • ಆಧ್ಯಾತ್ಮದತ್ತ ಮೋದಿ ಚಿತ್ತ- ಕೇದಾರನಾಥದಲ್ಲಿ ಪ್ರಧಾನಿಯಿಂದ ಪೂಜೆ

    ಆಧ್ಯಾತ್ಮದತ್ತ ಮೋದಿ ಚಿತ್ತ- ಕೇದಾರನಾಥದಲ್ಲಿ ಪ್ರಧಾನಿಯಿಂದ ಪೂಜೆ

    ಡೆಹ್ರಾಡೂನ್: ಅಧಿಕಾರ ಯುದ್ಧ, ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರವೆಲ್ಲ ಮುಗಿದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಆಧ್ಯಾತ್ಮದತ್ತ ತನ್ನ ಚಿತ್ತ ಹರಿಸಿದ್ದಾರೆ.

    ಉತ್ತರಾಖಂಡ್ ರಾಜ್ಯದ ಕೇದಾರನಾಥದಲ್ಲಿ ಮೋದಿ ಪೂಜೆ ನಡೆಸುದ್ದಾರೆ. ಭೂಮಿಯಿಂದ 11, 755 ಅಡಿ ಎತ್ತರದಲ್ಲಿರುವ ಈ ಪವಿತ್ರ ಭೂಮಿ ಶಿವನ ಪೂಜಾ ಸ್ಥಾನವಾಗಿದೆ. ಈ ಸ್ಥಳದಲ್ಲಿ ಇಂದು ಪ್ರಧಾನಿಯವರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ. ಬದರಿನಾಥಕ್ಕೂ ಭೇಟಿ ನೀಡುವ ಸಾಧ್ಯತೆಗಳಿವೆ.

    ದೀಪಾವಳಿ ಹಬ್ಬದ ಹೊತ್ತಲ್ಲಿ ಅಂದರೆ ಕಳೆದ ವರ್ಷದ ನವೆಂಬರ್‍ನಲ್ಲಿ ಮೋದಿ ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ್ದರು. 2017ರಲ್ಲಿ ಚಳಿಗಾಲದ ಮುಗಿದು ದೇವಸ್ಥಾನದ ಬಾಗಿಲು ತೆರೆದ ಬೆನ್ನಲ್ಲೇ ಮೇ ತಿಂಗಳಲ್ಲೂ ದೇವಸ್ಥಾನದ ಬಾಗಿಲು ಮುಚ್ಚುವುದಕ್ಕೂ ಮೊದಲು ಅಕ್ಟೋಬರ್‍ನಲ್ಲಿ ಮೋದಿ ಕೇದಾರನಾಥನ ದರ್ಶನ ಪಡೆದಿದ್ದರು. ಇಂದು ಪ್ರಧಾನಿ ಮೋದಿ ಕೇದಾರನಾಥದಲ್ಲಿ ತಂಗಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಕಳೆದ 2 ತಿಂಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯವರು ತೊಡಗಿಕೊಂಡಿದ್ದರು. ನಾಳೆ ಅಂತಿಮ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಸಂಪೂರ್ಣವಾಗಿ ರಿಲ್ಯಾಕ್ಸ್ ಮೂಡಿಗೆ ತೆರಳಿದ್ದು, ಧ್ಯಾನ ಮಾಡಲು ಉತ್ತರಾಖಂಡದ ಕೇದರನಾಥ್‍ಗೆ ಭೇಟಿ ನೀಡಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಪ್ರಧಾನಿಯವರು ದೆಹಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

    ಮೇ 9ರ ಬಳಿಕ ದರ್ಶನಕ್ಕಾಗಿ ಕೇದಾರನಾಥ ದೇವಾಲಯವನ್ನು ದರ್ಶನಕ್ಕಾಗಿ ತೆರೆಯಲಾಗಿದ್ದು, ಪ್ರಧಾನಿಯಾದ ಬಳಿಕ ಮೋದಿಯವರು 4ನೇ ಬಾರಿಗೆ ಕೇದರನಾಥಕ್ಕೆ ಭೇಟಿ ನೀಡಿದ್ದಾರೆ.

  • ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದ ಪ್ರಧಾನಿ ಮೋದಿ

    ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದ ಪ್ರಧಾನಿ ಮೋದಿ

    ಕೇದಾರನಾಥ್: ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಹಾಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನ ಪ್ರವೇಶಿಸುವ ಮುನ್ನ ಮೋದಿಯವರ ಶೂ ಬಿಚ್ಚಲು ಬಂದ ಸಹಾಯಕನನ್ನು ತಡೆದು, ತಮ್ಮ ಸರಳತೆಯ ವ್ಯಕ್ತಿತ್ವವನ್ನು ತೋರಿದ್ದಾರೆ.

    ಆದೇಶಗಳನ್ನು ಹೊರಡಿಸುವ ವ್ಯಕ್ತಿ ಅವುಗಳನ್ನು ಪಾಲನೆ ಮಾಡಬೇಕು ಎಂಬವುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ರುದ್ರಾಭಿಷೇಕ ಮಾಡಲು ದೇವಾಲಯ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಶೂ ತೆಗೆಯುತ್ತಿದ್ದ ಪ್ರಧಾನಿಗೆ ಸಹಾಯ ಮಾಡಲು ವ್ಯಕ್ತಿಯೊಬ್ಬರು ಮುಂದಾಗಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಆ ವ್ಯಕ್ತಿಯನ್ನು ತಮಗೆ ಸಹಾಯ ಮಾಡುವುದರಿಂದ ತಡೆದಿದ್ದಾರೆ. ಮೋದಿ ಅವರು ದೇವಸ್ಥಾನದೊಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 28 ವರ್ಷಗಳ ನಂತರ ಪ್ರಧಾನಿಯೊಬ್ಬರು ಕೇದಾರನಾಥ್ ದೇವರಿಗೆ ರುದ್ರಾಭಿಷೇಕ ಮಾಡಿಸಿರುವುದು.

    ಗಣ್ಯ ವ್ಯಕ್ತಿಗಳ ಕಾರಿನಿಂದ ಕೆಂಪು ಗೂಟವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ವಿವಿಐಪಿ ಸಂಸ್ಕೃತಿ ಅಂತ್ಯಗೊಳ್ಳಬೇಕು ಎಂದು ಪ್ರಧಾನಿ ಆದೇಶ ಜಾರಿ ತಂದಿದ್ದಾರೆ. ಬೇರೆಯವರಿಗೆ ಹೇಳುವ ಮಾತುಗಳನ್ನು ನಾನು ಪಾಲನೆ ಮಾಡುತ್ತೇನೆ ಎಂದು ಮೋದಿ ತೋರಿಸಿದ್ದಾರೆ. ದೇಶದಲ್ಲಿ ವಿಪಿಐ ಬದಲು ಇಪಿಐ (Every Person Important) ನ್ನು ಮೋದಿ ರವಿವಾರ `ಮನ್ ಕೀ ಬಾತ್’ನಲ್ಲಿ ಪರಿಚಯಿಸಿದ್ದರು.

     

    https://youtu.be/Eolf5i8Kxkw