Tag: ಕೇಂದ್ರ ಸಚಿವ ಸಂಪುಟ ವಿಸ್ತರಣೆ

  • ಅಮಿತ್ ಶಾಗೆ ಸಹಕಾರ, ಶೋಭಾ ಕರಂದ್ಲಾಜೆಗೆ ಕೃಷಿ – ಯಾರಿಗೆ ಯಾವ ಖಾತೆ?

    ಅಮಿತ್ ಶಾಗೆ ಸಹಕಾರ, ಶೋಭಾ ಕರಂದ್ಲಾಜೆಗೆ ಕೃಷಿ – ಯಾರಿಗೆ ಯಾವ ಖಾತೆ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿಯಾಗಿದೆ. ಇಂದು 36 ಹೊಸಬರು ಸೇರಿ 43 ಮಂದಿ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಪೈಕಿ ರಾಜ್ಯದ ನಾಲ್ವರು ಸಂಸದರು ಸೇರಿದ್ದಾರೆ. ನೂತನ ಸಚಿವರಿಗೆ ಖಾತೆಯನ್ನು ಸಹ ಹಂಚಿಕೆ ಮಾಡಲಾಗಿದೆ.

    ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ, ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಾಲ್ವರು ಸಚಿವರಾಗುವುದರೊಂದಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರ ಸಂಖ್ಯೆ ಆರಕ್ಕೇರಿದೆ.

    ಹೊಸದಾಗಿ ಸೃಷ್ಟಿಯಾಗಿರುವ ಸಹಕಾರ ಖಾತೆಯನ್ನು ಅಮಿತ್ ಶಾ ಅವರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ.

    ಯಾರಿಗೆ ಯಾವ ಖಾತೆ?
    ಪ್ರಧಾನಿ ನರೇಂದ್ರ ಮೋದಿ- ವಿಜ್ಞಾನ ಮತ್ತು ತಂತ್ರಜ್ಞಾನ
    ಅಮಿತ್ ಶಾ – ಗೃಹ ಖಾತೆಯ ಜೊತೆಗೆ ಸಹಕಾರ
    ಜ್ಯೋತಿರಾದಿತ್ಯ ಸಿಂಧಿಯಾ- ನಾಗರಿಕ ವಿಮಾನಯಾನ
    ಹರ್ದೀಪ್ ಪುರಿ – ವಸತಿ, ನಗರಾಭಿವೃದ್ಧಿ ಜೊತೆಗೆ ಹೆಚ್ಚುವರಿಯಾ ಇಂಧನ
    ಧರ್ಮೇಂದ್ರ ಪ್ರಧಾನ್ – ಶಿಕ್ಷಣ
    ಪಿಯುಷ್ ಗೋಯಲ್ – ವಾಣಿಜ್ಯ ಜೊತೆಗೆ ಹೆಚ್ಚುವರಿಯಾಗಿ ಜವಳಿ
    ಶೋಭಾ ಕರಂದ್ಲಾಜೆ – ಕೃಷಿ ಮತ್ತು ರೈತರ ಕಲ್ಯಾಣ ಖಾತೆ(ರಾಜ್ಯ ಖಾತೆ)
    ನಾರಾಯಣ ಸ್ವಾಮಿ- ಸಾಮಾಜಿಕ ನ್ಯಾಯ ಮತ್ತು ಸಬಲಿಕರಣ
    ರಾಜೀವ್ ಚಂದ್ರಶೇಖರ್ – ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ(ರಾಜ್ಯ ಖಾತೆ)
    ಭಗವಂತ ಖುಬಾ – ರಾಸಾಯನಿಕ ಮತ್ತು ರಸಗೊಬ್ಬರ(ರಾಜ್ಯ ಖಾತೆ)
    ಸರ್ಬಾನಂದ ಸೋನೊವಾಲ್- ಬಂದರುಗಳು, ಹಡಗು ಮತ್ತು ಜಲ ಮಾರ್ಗಗಳು ಜೊತೆಗೆ ಆಯುಷ್
    ನಿರ್ಮಲಾ ಸೀತಾರಾಮನ್- ಹಣಕಾಸು
    ಪ್ರಹ್ಲಾದ್ ಜೋಷಿ- ಸಂಸದೀಯ ವ್ಯವಹಾರಗಳ ಖಾತೆ

  • ರಮೇಶ್ ಜಿಗಜಿಣಗಿಗೆ ಹೈಕಮಾಂಡ್ ಬುಲಾವ್

    ರಮೇಶ್ ಜಿಗಜಿಣಗಿಗೆ ಹೈಕಮಾಂಡ್ ಬುಲಾವ್

    ವಿಜಯಪುರ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಸಂಸದ ರಮೇಶ್ ಜಿಗಜಿಣಗಿಯವರಿಗೆ ಹೈ ಕಮಾಂಡ್‍ನಿಂದ ಬುಲಾವ್ ಬಂದಿದ್ದು, ದೆಹಲಿಗೆ ತೆರಳಲು ಸಿದ್ಧವಾಗಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೂ ನಾಡಿದ್ದು ದೆಹಲಿಗೆ ಬರುವಂತೆ ಮೆಸೇಜ್ ಬಂದಿದೆ. ಕೇಂದ್ರದ ಹಿರಿಯ ನಾಯಕರಿಂದ ಮೆಸೇಜ್ ಬಂದಿದೆ. ಕಾರಣ ಏನೆಂದು ತಿಳಿಸಿಲ್ಲ, ಕೇವಲ ದೆಹಲಿಗೆ ಬರುವಂತೆ ಕರೆದಿದ್ದಾರೆ ಅಷ್ಟೆ ಎಂದರು. ಇದನ್ನೂ ಓದಿ: ಗುರುವಾರ ಮೋದಿ ಕ್ಯಾಬಿನೆಟ್ ಪುನರ್‌ರಚನೆ – ಸ್ಪರ್ಧೆಯಲ್ಲಿ ಯಾರಿದ್ದಾರೆ?

    ಸಚಿವ ಸ್ಥಾನ ನೀಡುವ ಬಗ್ಗೆ ಸಹ ಮಾತನಾಡಿಲ್ಲ, ಜುಲೈ 8ಕ್ಕೆ ದೆಹಲಿ ಬನ್ನಿ ಎಂದಿದ್ದಾರೆ ಅಷ್ಟೆ. ಹೀಗಾಗಿ ನಾನು ಹೋಗುತ್ತೇನೆ. ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.