Tag: ಕೇಂದ್ರ ರಕ್ಷಣಾ ಸಚಿವ

  • ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣನೆ

    ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣನೆ

    ಹುಬ್ಬಳ್ಳಿ: ಬೆಳಗಾವಿ (Belagavi) ಕರ್ನಾಟಕದ ಮಸ್ತಕ ಇದ್ದಂತೆ. ಇದು ಬಸವೇಶ್ವರ, ಅಕ್ಕ ಮಹಾದೇವಿ ಪರಂಪರೆಯ ನೆಲ. ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ (Karnataka) ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಬಣ್ಣಿಸಿದರು.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ರಾಣಿ ಚನ್ನಮ್ಮನ ಮಹಿಮೆ ವಿದೇಶಗಳಲ್ಲಿಯೂ ಇದೆ. ಚನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ. ವೇದಿಕೆಗೆ ಬರುವ ಮುಂಚೆ ನಾನು ರಾಯಣ್ಣನ ಪ್ರತಿಮೆ ಮತ್ತು ಸಮಾಧಿಗೂ ಮಾಲಾರ್ಪಣೆ ಮಾಡಿದೆ. ಇದು ನನ್ನ ಸೌಭಾಗ್ಯ. ವೀರತ್ವಕ್ಕೆ ಕರ್ನಾಟಕ ಹೆಸರುವಾಸಿ. ಕನ್ನಡಿಗ ಹನುಮಂತಪ್ಪ ಸಿಯಾಚಿಯಲ್ಲಿ ಹೋರಾಡಿದವರು. ಹನುಮಂತಪ್ಪನ ವೀರತ್ವ ಯಾರೂ ಮರೆಯೊಲ್ಲ. ಫಿಲ್ಡ್ ಮಾರ್ಷಲ್ ಕರಿಯಪ್ಪ ಸಹ ಹೆಸರುವಾಸಿ ಎಂದು ಹಾಡಿ ಹೊಗಳಿದರು. ಇದನ್ನೂ ಓದಿ: ಕಾಂಗ್ರೆಸ್ ಭಯದಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಕ್ರೆಡಿಟ್‌ ತೆಗೆದುಕೊಂಡ ಡಿಕೆಶಿ

    ಬೆಳಗಾವಿಯ ನೆಲದಲ್ಲಿ ನಾವು ಇವತ್ತು ಇದ್ದೇವೆ. ಇಂತಹ ಸ್ಥಳದಲ್ಲಿ ನಾವು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ತರುವ ಸಂಕಲ್ಪ‌ ಇಲ್ಲಿ ಮಾಡಬೇಕಿದೆ. ಕರ್ನಾಟಕದ ವಿಕಾಸ ಮೋದಿ ಮನಸ್ಸಿನಲ್ಲಿದೆ. ಅದಕ್ಕಾಗಿಯೇ ಕರ್ನಾಟಕಕ್ಕೆ ಅನೇಕ ಯೋಜನೆ ಕೊಟ್ಟಿದ್ದಾರೆ. ಕೈಗಾರಿಕಾ ಕಾರಿಡಾರ್‌ ಕೊಡುತ್ತಿದ್ದಾರೆ. ಇದರಿಂದ ಕರ್ನಾಟಕದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಈಗ ನೀರಿನ ಅಭಾವ ಇಲ್ಲ. ಪ್ರತಿ ಮನೆಗೆ ನೀರು, ಪ್ರತಿ ಜಮೀನಿಗೂ ನೀರಾವರಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್‌ನ ಹೇಳಿಕೆಯಲ್ಲಿ ಮತ್ತು ಕೆಲಸದಲ್ಲಿ ಅಂತರ ಇದೆ. ಆದರೆ ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಅದಕ್ಕಾಗಿ ಏನೇ ಅಡ್ಡಿಯಾದರೂ ಹಿಂದೆ ಸರಿಯುವುದಿಲ್ಲ. ನಾವು ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ. ಪ್ರಾಣ ಹೋದರೂ ಕೊಟ್ಟ ವಚನ ಬಿಡಲಾರೆವು. ಇದು ಬಿಜೆಪಿಯ ಧ್ಯೇಯ ವಾಕ್ಯ. ಇವತ್ತು ಭಾರತ ಏನಾದರೂ ಹೇಳಿದರೆ, ಜಗತ್ತು ಕಿವಿಗೊಟ್ಟು ಕೇಳುತ್ತದೆ. ಇಡೀ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ನಾವು ಭಯೋತ್ಪಾದನೆಯನ್ನೂ ಹೊಡೆದು ಹಾಕುತ್ತೇವೆ. ಪಿಎಫ್‌ಐ ಸಹ ಬ್ಯಾನ್ ಮಾಡಿದ್ದೇವೆ. ಭಯೋತ್ಪಾದಕರನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನಗೆ, ಕುಮಾರ ಬಂಗಾರಪ್ಪಗೆ ಇನ್ಮುಂದೆ ಅಣ್ಣ-ತಮ್ಮ ಎಂದು ಕರೆಯಬೇಡಿ : ಮಧು ಬಂಗಾರಪ್ಪ

    ಕಾಂಗ್ರೆಸ್‌ನ ಓರ್ವ ಯುವ ನಾಯಕ (ರಾಹುಲ್‌ ಗಾಂಧಿ) ಇದ್ದಾರೆ ಗೊತ್ತಲ್ವಾ ನಿಮಗೆ. ಅವರು ಭಾರತ ಜೋಡೋ ಮಾಡುತ್ತಿದ್ದಾರೆ. ಅವರು ಭಾರತವನ್ನು ಜೋಡಿಸುವುದೇ ಆದಲ್ಲಿ ಕರಾಚಿ, ಲಾಹೋರ್‌ಗೆ ಹೋಗಬೇಕಿತ್ತು. ಭಾರತ ಯಾವತ್ತಿಗೂ ಒಂದಾಗಿಯೇ ಇದೆ. ಜನರ ಕಣ್ಣಲ್ಲಿ ಧೂಳು ಹಾರಿಸಿ ಆಡಳಿತ ಮಾಡೋದಲ್ಲ. ಜನರ ಕಣ್ಣಲ್ಲಿ ಕಣ್ಣಿಟ್ಟು ಆಡಳಿತ ಮಾಡಬೇಕು. ಅಂತಹ ಆಡಳಿತ ಮಾಡಿದ ಮೋದಿಯನ್ನು ಮುಗಿಸುತ್ತೇನೆ ಅಂತಾರೆ. ಆದರೆ ‌ಮೋದಿಗೆ ಖೆಡ್ಡಾ ತೋಡೋಕೆ ಹೋದರೆ, ಅದು ತಮಗೆ ತಾವೇ ಖೆಡ್ಡಾ ತೋಡಿಕೊಂಡಂತೆ ಎಂದು ಎಚ್ಚರಿಸಿದರು.

  • ದೇಶದ ಅತಿ ದೊಡ್ಡ ಜೆಟ್ಟಿ ಸಮರ್ಪಣೆ – ಎಷ್ಟು ಉದ್ದವಿದೆ? ವಿಶೇಷತೆ ಏನು?

    ದೇಶದ ಅತಿ ದೊಡ್ಡ ಜೆಟ್ಟಿ ಸಮರ್ಪಣೆ – ಎಷ್ಟು ಉದ್ದವಿದೆ? ವಿಶೇಷತೆ ಏನು?

    ಮುಂಬೈ: ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಬೃಹತ್ ಗಾತ್ರದ ನೌಕಾ ಜೆಟ್ಟಿಯನ್ನು (ಡ್ರೈ ಡಾಕ್) ಕೇಂದ್ರ ರಕ್ಷಣಾ ಸಚಿವ ಸಚಿವ ರಾಜನಾಥ್ ಸಿಂಗ್ ದೇಶಕ್ಕೆ ಸಮರ್ಪಿಸಿದ್ದಾರೆ.

    ಭಾರತೀಯ ನೌಕಾಪಡೆಯ ದಾಳಿ ಘಟಕವಾದ ಮುಂಬೈನಲ್ಲಿರುವ ಪಶ್ಚಿಮ ನೌಕಾ ಕಮಾಂಡ್‍ಗೆ ಇಂತಹ ಜೆಟ್ಟಿಯ ಬಹುಕಾಲದಿಂದ ಇತ್ತು. ಸದ್ಯ ಉದ್ಘಾಟನೆಗೊಂಡ ಜೆಟ್ಟಿಯು ಅನೇಕ ವಿಶೇಷತೆಗಳಿಂದ ಕೂಡಿದೆ. ಈ ಮೂಲಕ ನೌಕಾ ಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ.

    ದೇಶದಲ್ಲಿ ಈಗಾಗಲೇ ವಿಶಾಖಪಟ್ಟಣಂ ಮತ್ತು ಮುಂಬೈ ಜೆಟ್ಟಿ ಸೌಲಭ್ಯವನ್ನು ಹೊಂದಿವೆ. ಇತ್ತ ಕಾರವಾರ ನೌಕಾ ದಳದಲ್ಲಿ ಹಡಗು ಎತ್ತುವ ಸೌಲಭ್ಯ ಇದೆ. ಆದರೆ ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ಹಡುಗಗಳ ದುರಸ್ತಿಗೆ ಸರಿಯಾದ ಜೆಟ್ಟಿಯೇ ಇರಲಿಲ್ಲ. ಈ ಕೊರತಯನ್ನು ಮುಂಬೈನಲ್ಲಿ ನಿರ್ಮಾಣವಾಗಿರುವ ನೂತನ ಜೆಟ್ಟಿ ತುಂಬಲಿದೆ.

    ನೌಕಾಪಡೆಯ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಒಣ ಜೆಟ್ಟಿ (ಡ್ರೈ ಡಾಕ್) ನಿರ್ಮಾಣ ಸೇರಿದಂತೆ ಡಾಕ್ ಯಾರ್ಡ್ ಅನ್ನು ಉನ್ನತೀಕರಣಗೊಳಿಸುವ ಚಿಂತನೆ ನಡೆದಿತ್ತು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮವು (ಎನ್‍ಐಡಿಸಿ) ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಹಿಂದೂಸ್ತಾನ್ ಕನ್‍ಸ್ಟ್ರಕ್ಷನ್ ಕಂಪನಿ (ಎಚ್‍ಸಿಸಿ) ಈ ಜೆಟ್ಟಿಯನ್ನು ನಿರ್ಮಿಸಿದೆ.

    ಜೆಟ್ಟಿ ವಿಶೇಷತೆಗಳೇನು?:
    ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಜೆಟ್ಟಿಯನ್ನು 1,320 ಕೋಟಿ ರೂ ವೆಚ್ಚದಲ್ಲಿ ಒಂದು ದಶಕದ ಅವಧಿಯೊಳಗೆ ನಿರ್ಮಿಸಲಾಗಿದೆ. ಜೆಟ್ಟಿಯು ಮೂರೂ ಕಡೆ ಸಮುದ್ರದಿಂದ ಆವೃತವಾಗಿದೆ. ಈ ಮಾದರಿಯಲ್ಲಿ ನಿರ್ಮಾಣಗೊಂಡ ದೇಶದ ಏಕೈಕ ಜೆಟ್ಟಿ ಇದಾಗಿದೆ.

    ಸಾಮರ್ಥ್ಯದ ವಿಚಾರಕ್ಕೆ ಬಂದರೆ ಬೃಹತ್ ಗಾತ್ರದ ಎರಡು ಹಡಗುಗಳನ್ನು ಏಕಕಾದಲ್ಲಿ ನಿಲ್ಲಿಸಬದುದು. ಜೆಟ್ಟಿಯು 281 ಮೀ ಉದ್ದ, 42 ಮೀ ಅಗಲ ಮತ್ತು 16.7 ಆಳವನ್ನು ಹೊಂದಿದೆ. ಏಕಕಾಲದಲ್ಲಿ ಎರಡು ಜಲಾತಂರ್ಗಾಮಿ ನೌಕೆಗಳನ್ನು ನಿಲ್ಲಿಸಬಹುದು. ಅಷ್ಟೇ ಅಲ್ಲದೆ ಯುದ್ಧ ವಿಮಾನಗಳನ್ನು ಹೊತ್ತು ಸಾಗಿಸಬಲ್ಲ, ರಷ್ಯಾ ನಿರ್ಮಿತ ಐಎನ್‍ಎಸ್ ವಿಕ್ರಮಾದಿತ್ಯ ಹಡಗು ಹಾಗೂ ಕೊಚ್ಚಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಕ್ರಾಂತ್ ಹಡಗುಗಳನ್ನು ಒಟ್ಟಾಗಿ ನಿಲ್ಲಿಸಬಹುದು.

    ಸಮುದ್ರದಲ್ಲಿ ನಿರ್ಮಿಸಿರುವ, 5,600 ಮೀ. ಉದ್ದದ ಮುಂಬೈಯ ಬಾಂದ್ರಾವರ್ಲಿ ಸೀಲಿಂಕ್ ಸೇತುವೆಗೆ ಬಳಸಿದ ಸಿಮೆಂಟ್‍ಗಿಂತ ಮೂರು ಪಟ್ಟು ಹೆಚ್ಚು ಸಿಮೆಂಟ್ ಅನ್ನು ಬಾಂಬೆ ಜೆಟ್ಟಿ ನಿರ್ಮಾಣಕ್ಕೆ ಬಳಸಲಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಗೆ ಬಳಕೆಯಾದಷ್ಟು ಪ್ರಮಾಣದ ಉಕ್ಕಿನಿಂದ ಎರಡು `ಐಫೆಲ್ ಟವರ್’ಗಳನ್ನು ನಿರ್ಮಿಸಬಹುದು. ಒಲಿಂಪಿಕ್ ಗಾತ್ರದ 20 ಈಜುಕೊಳಗಳಲ್ಲಿ ಹಿಡಿಸಬಹದಾದಷ್ಟು ನೀರನ್ನು ಈ ಜೆಟ್ಟಿಯಲ್ಲಿ ಸಂಗ್ರಹಿಸಬಹುದು.

    ಜೆಟ್ಟಿಯ ಮೂರು ಕಡೆ ನೀರು ಇದೆ. ಹೀಗಾಗಿ ಹಡಗು ಒಳಗೆ ಬಂದಾಗ ಜೆಟ್ಟಿಯೊಳಗಿನ ನೀರು ಹೊರ ಹಾಕಬೇಕು. ಆಗ ದುರಸ್ತಿ ಕಾರ್ಯ ಸರಳವಾಗುತ್ತದೆ. ಹೀಗಾಗಿ ನೂತನ ಜೆಟ್ಟಿಯ ಒಳಗಿನ ನೀರನ್ನು ಖಾಲಿಮಾಡಲು ಅಳವಡಿಸಿರುವ ಭಾರೀ ಸಾಮರ್ಥ್ಯದ ಪಂಪ್‍ಗಳನ್ನು ಅಳವಡಿಸಲಾಗಿದೆ. ಈ ಪಂಪ್‍ಗಳು ಮೂರು ಸೆಕೆಂಡ್‍ಗೆ 10,000 ಘನ ಮೀಟರ್ ನೀರನ್ನು ಹೊರಹಾಕಬಲ್ಲವು. ಇಂತಹ ಎಂಟು ಪಂಪ್‍ಗಳು ಜೆಟ್ಟಿಯ ನೀರನ್ನು ಎರಡೂವರೆ ಗಂಟೆಗಳಲ್ಲಿ ಖಾಲಿ ಮಾಡಬಲ್ಲವು ಎನ್ನಲಾಗಿದೆ.

    1732ರಲ್ಲಿ ಸ್ಥಾಪನೆಗೊಂಡ ಬಾಂಬೆ ಡಾಕ್‍ಯಾರ್ಡ್, 18 ಮತ್ತು 19ನೇ ಶತಮಾನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಹಡಗುಗಳನ್ನು ನಿರ್ಮಾಣ ಮಾಡುವುದಕ್ಕೆ ಹೆಸರಾಗಿತ್ತು. 1750-65ರಲ್ಲಿ ಬಾಂಬೆ ಒಣ ಜೆಟ್ಟಿಯನ್ನು (ಡ್ರೈ ಡಾಕ್) ನಿರ್ಮಿಸಲಾಗಿತ್ತು. ಹಂತ ಹಂತವಾಗಿ ಬೆಳೆದಂತೆ 1807-10ರ ಅವಧಿಯಲ್ಲಿ ಡಂಕನ್ ಒಣ ಜೆಟ್ಟಿ ನಿರ್ಮಿಸಲಾಗಿತ್ತು.