Tag: ಕೆ ಚಂದ್ರಶೇಖರ್ ರಾವ್

  • ತೃತೀಯ ರಂಗ ಸಾಧ್ಯವಿಲ್ಲ, ಯುಪಿಎ ಬೆಂಬಲಿಸಿ: ಕೆಸಿಆರ್‌ಗೆ ಸ್ಟಾಲಿನ್ ಸಲಹೆ

    ತೃತೀಯ ರಂಗ ಸಾಧ್ಯವಿಲ್ಲ, ಯುಪಿಎ ಬೆಂಬಲಿಸಿ: ಕೆಸಿಆರ್‌ಗೆ ಸ್ಟಾಲಿನ್ ಸಲಹೆ

    ಚೆನ್ನೈ: ತೃತೀಯ ರಂಗ ರಚನೆ ಸಾಧ್ಯವಿಲ್ಲ, ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ನೀಡಿ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಸಲಹೆ ನೀಡಿದ್ದಾರೆ.

    ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾಗಿ ತೃತೀಯ ರಂಗ ರಚನೆ ಕುರಿತಾಗಿ ಕೆ.ಚಂದ್ರಶೇಖರ್ ರಾವ್ ಅವರು ಸೋಮವಾರವಷ್ಟೇ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು. ಆದರೆ ಸ್ಟಾಲಿನ್ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.

    ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ.ಕೆ.ಸ್ಟಾಲಿನ್ ಅವರು, ತೃತೀಯ ರಂಗ ರಚನೆಯ ವಿಚಾರವಾಗಿ ಕೆ.ಚಂದ್ರಶೇಖರ್ ಯಾವುದೇ ಚರ್ಚೆ ಮಾಡಿಲ್ಲ. ತಮಿಳುನಾಡಿನ ದೇವಸ್ಥಾನ, ಪವಿತ್ರ ಕ್ಷೇತ್ರಗಳಿಗೆ ಆಗಮಿಸಿದ್ದ ಹಿನ್ನೆಯಲ್ಲಿ ನನ್ನನ್ನು ಭೇಟಿ ಮಾಡಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಕೆ.ಚಂದ್ರಶೇಖರ್ ರಾವ್ ಹಾಗೂ ಸ್ಟಾಲಿನ್ ಅವರು ಸೋಮವಾರ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದರು. ಈ ವೇಳೆ ತೃತೀಯ ರಂಗ ಕಾರ್ಯಸೂಚಿಯ ಬಗ್ಗೆ ಕೆಸಿ ರಾವ್ ಅವರು ತಿಳಿಸಿದ್ದಾರೆ. ಆದರೆ ಇದಕ್ಕೆ ಎಂ.ಕೆ.ಸ್ಟಾಲಿನ್ ಅವರು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಬಿಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ನಾವು ಕಾಂಗ್ರೆಸ್ ಮೈತ್ರಿಕೂಟದಿಂದ ಹೊರಬರುವುದಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಪ್ರಸ್ತಾಪಿಸಿದ್ದೇನೆ. ಈ ವಿಚಾರಕ್ಕೆ ಡಿಎಂಕೆ ಬದ್ಧವಾಗಿದೆ. ನಮ್ಮ ನಿಲುವು ಬಿಜೆಪಿ ವಿರುದ್ಧವಾಗಿದೆ. ಹೀಗಾಗಿ ನೀವು ಕೂಡ ಯುಪಿಎ ಬೆಂಬಲಿಸಿ ಎಂದು ಸ್ಟಾಲಿನ್, ಕೆಸಿ ರಾವ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆ.ಚಂದ್ರಶೇಖರ್ ರಾವ್ ಅವರು, ಕಾಂಗ್ರೆಸ್ ಜೊತೆಗೆ ಮಹಾಮೈತ್ರಿಯ ಜೊತೆಗೆ ಚುನಾವಣೆ ಎದುರಿಸಿದ್ದರೂ ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸಲು ಒಂದಾಗಬಹುದು. ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಬಹುಮತ ಸಾಧಿಸುವುದಿಲ್ಲ ಎಂದು ಹೇಳಿದ್ದಾರೆ.

  • ಕೆಸಿಆರ್ ತಂತ್ರಕ್ಕೆ ಕಾಂಗ್ರೆಸ್ ರಣತಂತ್ರ

    ಕೆಸಿಆರ್ ತಂತ್ರಕ್ಕೆ ಕಾಂಗ್ರೆಸ್ ರಣತಂತ್ರ

    ಹೈದರಾಬಾದ್: ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯನ್ನು ವಿಸರ್ಜಿಸಿದ್ದು, ನವೆಂಬರ್ ನಲ್ಲಿ ಚುನಾವಣೆ ನಡೆದರೆ ಒಳ್ಳೆಯದು ಅಂತಾ ಚುನಾವಣಾ ಆಯೋಗದ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ. ವಿಧಾನಸಭೆ ವಿಸರ್ಜನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದರು. ಚುನಾವಣೆಗೆ ಸಿದ್ಧತೆ ನಡೆಸಿದ್ದ ಕೆಸಿಆರ್ ಗೆ ಕಾಂಗ್ರೆಸ್ ತಿರುಗು ಬಾಣವನ್ನು ಬಿಟ್ಟಿದೆ.

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಶೀಲನೆ ನಡೆಯಬೇಕು. ತೆಲಂಗಾಣದಲ್ಲಿ ನಕಲಿ ಮತದಾರರ ಹೆಸರುಗಳಿವೆ ಎಂದು ಹೇಳಲಾಗುತ್ತಿದ್ದು, ಮತ್ತೆ ಕೆಲವರ ಹೆಸರು ಎರಡೆರೆಡು ಕ್ಷೇತ್ರಗಳಲ್ಲಿವೆ ಎನ್ನಲಾಗುತ್ತಿದೆ. ಹೀಗಾಗಿ ಚುನಾವಣೆಯನ್ನು ಮತದಾರರ ಪಟ್ಟಿಯನ್ನು ಸೂಕ್ತವಾಗಿ ಪರಿಶೀಲಿಸಿ ಸಿದ್ಧಪಡಿಸಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗದ ಕಮೀಷನರ್ ಓಪಿ ರಾವತ್ ಅವರಿಗೆ ಪತ್ರ ಬರೆದಿದೆ.

    ನವೆಂಬರ್ ನಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯದ ಚುನಾವಣೆಗಳು ನಡೆಯಲಿದೆ. ಈ ರಾಜ್ಯಗಳ ಜೊತೆಯಲ್ಲಿ ತೆಲಂಗಾಣದ ಚುನಾವಣೆ ನಡೆಯಲಿ ಎಂಬುದು ಕೆಸಿಆರ್ ಅವರ ಇಚ್ಛೆ ಆಗಿದೆ ಎನ್ನಲಾಗುತ್ತಿದೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಾನೂನು ಘಟಕ ಮುಖ್ಯಸ್ಥ ವಿವೇಕ್ ಟಾಂಕಾ, ಮಧ್ಯ ಪ್ರದೇಶ, ಛತ್ತೀಸಗಢ, ರಾಜಸ್ಥಾನ ರಾಜ್ಯಗಳಲ್ಲಿರುವಂತೆ ತೆಲಂಗಾಣದಲ್ಲಿಯೂ ವೋಟರ್ ಲಿಸ್ಟ್ ನಲ್ಲಿ ಹಲವು ಗೊಂದಲಗಳಿವೆ. ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳು ಸರಿಯಾಗಬೇಕಿದೆ. ಹೀಗಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

    37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

    ಬೆಂಗಳೂರು: 37 ಜನ ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತದೆಯೇ ಎಂದು ಮಾಜಿ ಪ್ರದಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

    ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಸಾಲಮನ್ನಾ ನಿರ್ಧಾರ ಕೈಗೊಳ್ಳಲು ನಮಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗಾಗಿ ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಯಬೇಕು ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಯಲ್ಲಿ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸಲಹೆ ನೀಡಿರುವೆ. ನಾವು ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

    ನಗರಕ್ಕೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಬಂದಿದ್ದಾರೆ. ತೃತೀಯ ರಂಗದ ನಿರ್ಧಾರಗಳ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ಪಕ್ಷದ ಅಧ್ಯಕ್ಷ ಎನ್ನುವುದಕ್ಕಿಂತ ಹೆಚ್ಚಾಗಿ ತಂದೆಯಾಗಿ ಆರ್ಶೀವಾದ ಮಾಡಿರುವೆ. ಇದು ನಮ್ಮ ಕರ್ತವ್ಯ ಎಂದರು.

    ಅಮೋಘ ನಿವಾಸದಲ್ಲಿ ಸಂಭ್ರಮ:
    ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪದ್ಮನಾಭನಗರದ ಅಮೋಘ ನಿವಾಸದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಮನೆಯ ಮುಂಭಾಗವು ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದೆ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸಹೋದರಿ ಮನೆಯ ಮುಂದಿನ ತುಳಸಿ ಪೂಜೆ ಮಾಡಿದ್ದು, ಬೆಳಗ್ಗೆಯಿಂದಲೇ ಕುಟುಂಬಸ್ಥರು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ.

    ನಿವಾಸದ ಸುತ್ತಮುತ್ತ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಮಂಗಳವಾರ ರಾತ್ರಿ ಬಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ತಡರಾತ್ರಿಯವರೆಗೆ ದೇವೇಗೌಡರು ಸಮಾಲೋಚನೆಯಲ್ಲಿ ತೊಡಗಿದ್ದರು. ಸದ್ಯ ಅವರ ನಿವಾಸಕ್ಕೆ  ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.

  • ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ಗಳಿಸಿದ ತೆಲಂಗಾಣ ಸಿಎಂ ಮಗ

    ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ಗಳಿಸಿದ ತೆಲಂಗಾಣ ಸಿಎಂ ಮಗ

    ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮ ರಾವ್ ಐಸ್‍ಕ್ರೀಮ್ ಮಾರಾಟ ಮಾಡಿ 7.5 ಲಕ್ಷ ರೂ. ಗಳಿಸಿದ್ದಾರೆ.

    ಹೌದು. ಹೈದರಾಬಾದ್ ನಾಗ್ಪುರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಐಸ್‍ಕ್ರೀಂ ಪಾರ್ಲರ್‍ವೊಂದರಲ್ಲಿ ಕೆಲಸ ಮಾಡಿ 1 ಗಂಟೆಗೂ ಕಡಿಮೆ ಅವಧಿಯಲ್ಲಿ ಕೆಟಿ ರಾಮರಾವ್ 7.5 ಲಕ್ಷ ರೂ. ಗಳಿಸಿದ್ರು. ಈ ಐಸ್‍ಕ್ರೀಮ್ ಪಾರ್ಲರ್‍ನವರು ಇಡೀ ತಿಂಗಳಲ್ಲಿ ಗಳಿಸುವ ಹಣ ಇದಕ್ಕಿಂತ ಕಡಿಮೆಯಂತೆ.

    ಆದ್ರೆ ಕೆಟಿ ರಾಮರಾವ್ ಅವರ ಬಳಿ ಐಸ್‍ಕ್ರೀಂ ಖರೀದಿಸಿದ ಬಹುತೇಕರು ಪಕ್ಷದ ಕಾರ್ಯಕರ್ತರಾಗದ್ದರು. ಅವರಲ್ಲಿ ಒಬ್ಬರಾದ 63 ವರ್ಷದ ಸಂಸದ ಮಲ್ಲಾ ರೆಡ್ಡಿ 5 ಲಕ್ಷ ರೂ. ಕೊಟ್ಟು ಐಸ್‍ಕ್ರೀಂ ಖರೀದಿಸಿದ್ರು.

    ಪಕ್ಷದ ಅದ್ಧೂರಿ ಸಮಾವೇಶಕ್ಕಾಗಿ ಹಣ ಸಂಗ್ರಹಿಸಲು ಎರಡು ದಿನ ಕೂಲಿಗಳಾಗಿ ಕೆಲಸ ಮಾಡಿ ಎಂದು ಸಿಎಂ ಚಂದ್ರಶೇಖರ್ ರಾವ್, ಸಚಿವರಿಗೆ, ಮುಖಂಡರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದರು. ಮದಲು ನಾನೇ ಈ ಕೆಲಸವನ್ನು ಮಾಡಿ ಮಾದರಿಯಾಗುತ್ತೇನೆ ಎಂದು ಕೂಡ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಪುತ್ರ ಹಾಗು ಮಾಹಿತಿ ತಂತ್ರಜ್ಞಾನ ಸಚಿವರಾದ ಕೆಟಿ ರಾಮರಾವ್, ಐಸ್‍ಕ್ರೀಮ್ ಪಾರ್ಲರ್‍ಗೆ ಹೋಗಿ, ಏಪ್ರಾನ್ ಧರಿಸಿ ಕೆಲಸ ಶುರು ಮಾಡಿಯೇಬಿಟ್ರು.

    ಮುಂದಿನ ಒಂದು ವಾರಗಳ ಕಾಲ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ರೀತಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದು ಸಿಎಂ ಕೆಸಿಆರ್ ಇದನ್ನ ಗುಲಾಬಿ ಕೂಲಿ ದಿನಗಳು ಎಂದು ಕರೆದಿದ್ದಾರೆ (ಕೆಸಿಆರ್ ಅವರ ಪಕ್ಷವಾದ ಟಿಆರ್‍ಎಸ್-ತೆಲಂಗಾಣ ರಾಷ್ಟ್ರ ಸಮಿತಿಯ ಬಣ್ಣ ಗುಲಾಬಿ)

    ಪಕ್ಷದ ಮುಖಂಡರು ತಮ್ಮ ಎರಡು ದಿನಗಳ ಕೆಲಸದಿಂದ ಗಳಿಸುವ ಹಣವನ್ನ ಏಪ್ರಿಲ್ 21ರಂದು ನಡೆಯಲಿರುವ ಟಿಆರ್‍ಎಸ್‍ನ ಅದ್ಧೂರಿ ವಾರ್ಷಿಕ ಸಮಾವೇಶದ ಖರ್ಚು ವೆಚ್ಛಗಳಿಗೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಪಕ್ಷದ ಸದಸ್ಯತ್ವ ಶುಲ್ಕದಿಂದ 35 ಕೋಟಿ ರೂ ಸಂಗ್ರಹವಾಗಿದ್ದು, ಪಕ್ಷದ ಬ್ಯಾಂಕ್ ಖಾತೆ ಸೇರಿದೆ ಎಂದು ಕೆಸಿಆರ್ ಹೇಳಿದ್ದಾರೆ.