Tag: ಕೆಲಸ

  • ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಬೆಳಗಾವಿ: ಮಕ್ಕಳನ್ನು ಶೌಚಾಲಯ ಕ್ಲೀನ್ ಮಾಡಲು ಹಾಗೂ ಬೈಕ್ ತೊಳೆಸಲು ಬಳಕೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ ಗ್ರಾಮದಲ್ಲಿ ನಡೆದಿದೆ.

    ಬಡಗಿವಾಡ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಜೈಪಾಲ್ ಭಜಂತ್ರಿ ಎಂಬ ಶಿಕ್ಷಕ ಪಾಠದ ಬದಲು ಮಕ್ಕಳಿಂದ ಬೈಕ್ ಕ್ಲೀನ್ ಮಾಡಿಸಿದ್ದಾರೆ ಮತ್ತು ಬಿಸಿಯೂಟ ಪಾತ್ರೆಗಳನ್ನು ತೊಳೆಸಿದ್ದಾರೆ.

    ಶಿಕ್ಷಕ ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ಸಂಪೂರ್ಣ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದು, ಇದೀಗ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಶಿಕ್ಷಕರ ಕೃತ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನು ಓದಿ:ವಿದ್ಯಾರ್ಥಿನಿಯರಿಂದ ಮನೆ ಕೆಲಸ – ತಪ್ಪೊಪ್ಪಿಕೊಂಡ ಕೊಪ್ಪಳ ಸ್ಕೂಲ್ ಮಾಸ್ಟರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರೆಸ್ಯೂಮ್ ಹಿಡ್ಕೊಂಡು ಸಿಗ್ನಲ್ ನಲ್ಲಿ ನಿಂತ – Google, Netflix, LinkedIn ಸೇರಿ 200 ಕಂಪೆನಿಗಳಿಂದ ಬಂತು ಆಫರ್!

    ರೆಸ್ಯೂಮ್ ಹಿಡ್ಕೊಂಡು ಸಿಗ್ನಲ್ ನಲ್ಲಿ ನಿಂತ – Google, Netflix, LinkedIn ಸೇರಿ 200 ಕಂಪೆನಿಗಳಿಂದ ಬಂತು ಆಫರ್!

    ಸ್ಯಾಕ್ರಮೆಂಟೊ: ಉದ್ಯೋಗಕ್ಕಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕುತ್ತಿಗೆಗೆ ಫಲಕ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಬರೋಬ್ಬರಿ 200 ಸಂಸ್ಥೆಗಳಿಂದ ಉದ್ಯೋಗದ ಅವಕಾಶಗಳು ಬಂದಿದೆ.

    ಕ್ಯಾಲಿಫೋರ್ನಿಯಾದ 26 ವರ್ಷದ ಡೇವಿಡ್ ಕ್ಯಾಸೆರೆಜ್ ಈ ರೀತಿ ಫಲಕವನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವರು. ಇವರು ಟೆಕ್ಸಾಸ್ ಎ&ಎಂ ವಿಶ್ವವಿದ್ಯಾಲಯದಲ್ಲಿ ಪದವೀಧರಾಗಿದ್ದಾರೆ. ಜೊತೆಗೆ ವೆಬ್ ಡೆವಲಪರ್ ಕೂಡ ಆಗಿದ್ದಾರೆ. ಆದರೆ ಎಲ್ಲೂ ಕೆಲಸ ಸಿಗದೇ ಹುಡುಕಿ ಹುಡುಕಿ ಬೇಸರವಾಗಿ, ನೆಲಸಲು ಮನೆಯೂ ಇಲ್ಲದೇ ಕೊನೆಗೆ ನಾಮ ಘಲಕವೊಂದನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲಿನಲ್ಲಿ ನಿಂತಿದ್ದಾರೆ.

    ನಾಮಫಲಕದಲ್ಲಿ “Homeless, hungry 4 success, take a resume.” (ಮನೆ ಇಲ್ಲದೇ ಇದ್ದರೂ ಯಶಸ್ಸಿನ ಹಸಿವು ಇದೆ. ರೆಸ್ಯೂಮ್ ನೋಡಿ) ಎಂಬುದಾಗಿ ಬರೆದು ಕುತ್ತಿಗೆಗೆ ಹಾಕಿಕೊಂಡು ನಿಂತಿದ್ದರು. ಕ್ಯಾಸೆರೆಜ್ ನಿಂತಿದ್ದ ಫೋಟೋವನ್ನು ಒಬ್ಬರು ತೆಗೆದುಕೊಂಡು ತಮ್ಮ ಟ್ವಿಟ್ಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಜೊತೆಗೆ “ಈ ಯುವಕ ಮನೆ ಇಲ್ಲದಿದ್ದರೂ ಹಣದ ಬದಲು ನನ್ನ ರೆಸ್ಯೂಮ್ ನೋಡಿ ಎಂದು ಬರೆದುಕೊಂಡಿದ್ದಾರೆ. ಆದ್ದರಿಂದ ಸಿಲಿಕಾನ್ ವ್ಯಾಲಿಯಲ್ಲಿರುವ ಯಾರದರೂ ಅವರಿಗೆ ಸಹಾಯ ಮಾಡಿದರೆ ಅದು ನಿಜಕ್ಕೂ ಅದ್ಭುತವಾಗಿರುತ್ತದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ಮಾಡಿದ ತಕ್ಷಣ ಟ್ವಿಟ್ಟಿಗರು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ತಮಗೆ ಗೊತ್ತಿರುವ ಕಡೆಗಳಲ್ಲಿ ವಿಚಾರಿಸುವುದಾಗಿ ಹೇಳಿದ್ದಾರೆ. ಕೊನೆಗೆ ಇದರಿಂದ ಅವರಿಗೆ ಸುಮಾರು 200 ಸಂಸ್ಥೆಗಳಿಂದ ಕೆಲಸದ ಆಫರ್ ಗಳು ಬಂದಿದೆ. ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳು ಕ್ಯಾಸೆರೆಜ್ ಅವರನ್ನು ಕೆಲಸಕ್ಕಾಗಿ ಆಹ್ವಾನಿಸಿವೆ.

    ಜುಲೈ 27 ರಂದು ಈ ಪೋಸ್ಟ್ ಮಾಡಿದ್ದು, ಈವರೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಒಂದು ಲಕ್ಷಕ್ಕಿಂತ ಜನರು ಈ ಪೋಸ್ಟಿಗೆ ರೀಟ್ವೀಟ್ ಮಾಡಿದ್ದಾರೆ.

    ನಾನು ಈ ಮೊದಲು ಆಸ್ಟಿನ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಉತ್ತಮ ಉದ್ಯೋಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಬಂದು ಅವಕಾಶಕ್ಕಾಗಿ ಹುಡುಕುತ್ತಿದ್ದೆ. ನಾನು ಯಾವುದೇ ರೀತಿಯ ಹಣವನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನಾನು ಕೆಲಸವನ್ನು ಮಾತ್ರ ಬಯಸುತ್ತಿದ್ದೆ. ಈಗ ಕೆಲಸ ಸಿಕ್ಕಿದೆ. ನನ್ನ ಬಗ್ಗೆ ಪೋಸ್ಟ್ ಮಾಡಿದವರಿಗೆ ಧನ್ಯವಾದಗಳು ಎಂದು ಕ್ಯಾಸೆರೆಜ್ ಹೇಳಿದ್ದಾರೆ.

    https://twitter.com/jaysc0/status/1022995030015766528

  • ಸಚಿವ ಡಿಕೆಶಿ ಹೆಸರು ಬಳಸಿ ಮೋಸ- ಕೆಲಸ ಕೊಡಿಸೋದಾಗಿ ಹೇಳಿ 14 ಲಕ್ಷ ರೂ. ಪಂಗನಾಮ

    ಸಚಿವ ಡಿಕೆಶಿ ಹೆಸರು ಬಳಸಿ ಮೋಸ- ಕೆಲಸ ಕೊಡಿಸೋದಾಗಿ ಹೇಳಿ 14 ಲಕ್ಷ ರೂ. ಪಂಗನಾಮ

    ಬೆಂಗಳೂರು: ವ್ಯಕ್ತಿಯೊಬ್ಬ ಸಚಿವ ಡಿ.ಕೆ ಶಿವಕುಮಾರ್ ಆಪ್ತ ಶಾಖಾಧಿಕಾರಿ ಎಂದು ಹೇಳಿಕೊಂಡು ಯುವಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ಬರೋಬ್ಬರಿ 14 ಲಕ್ಷ ರೂ.ಯನ್ನು ದೋಚಿ ಮೋಸ ಮಾಡಿದ್ದಾನೆ.

    ಕೆಪಿಎಸ್‍ಸಿ ನೌಕರಿಯ ಆಕಾಂಕ್ಷೆಯಲ್ಲಿದ್ದ ವೆಂಕಟೇಶ್ ಮೋಸ ಹೋದ ಯುವಕ. ಮಂಜುನಾಥ್ ಎಂಬಾತ ತಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಹೇಳಿ ಮೋಸ ಮಾಡಿದ್ದಾನೆ. ಮಂಜುನಾಥ್ 2015ರಲ್ಲಿ ವೆಂಕಟೇಶ್ ನನ್ನ ಪರಿಚಯ ಮಾಡಿಕೊಂಡಿದ್ದನು. ಆಗ ತಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಹೇಳಿ ನಕಲಿ ಐಡಿ ತೋರಿಸಿ ಹಂತ ಹಂತವಾಗಿ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ.

    ಮೋಸ ಮಾಡಿದ್ದು ಹೇಗೆ?:
    ಮಂಜುನಾಥ್ ರಾಜಾಜಿನಗರದಲ್ಲಿರುವ ಗೃಂಥಾಲಯಕ್ಕೆ ಹೋಗುವಾಗ ನಮ್ಮನ್ನು ಪರಿಚಯ ಮಾಡಿಕೊಂಡಿದ್ದರು. ನಾನು ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿಯಾಗಿದ್ದೇನೆ. ನಮಗೆ ಕೆಪಿಎಸ್‍ಸಿಯಲ್ಲಿ ಪರಿಚಯ ಇದ್ದಾರೆ. ಕಂದಾಯ ಇಲಾಖೆಯಲ್ಲಿ ಕೆಪಿಎಸ್‍ಸಿ ಮೆಂಬರ್ ಕೋಟಾದಡಿ ಕೆಲಸ ಕೊಡಿಸೋದಾಗಿ ಹೇಳಿದ್ದನು. ಮೊದಲು ನಾನು ನಂಬಿರಲಿಲ್ಲ. ಬಳಿಕ ಐಡಿ ಕಾರ್ಡ್ ತೋಸಿದ್ದರು. ಅದರಲ್ಲಿ ಡಿ.ಕೆ. ಶಿವಕುಮಾರ್ ಆಪ್ತ ಶಾಖಾಧಿಕಾರಿ ಅಂತ ಇತ್ತು. ಆದರೂ ನಾನು ನಂಬಿರಲಿಲ್ಲ. ಬಳಿಕ ದಿನ ಕಳೆದಂತೆ ಪ್ರತಿದಿನ ಪರಿಚಯ ಮಾಡಿಕೊಂಡರು.

    ಮಂಜುನಾಥ್ ನಾನು ಕೆಲಸ ಕೊಡಿಸುತ್ತೇನೆ ಎಂದು ಹಂತ ಹಂತವಾಗಿ ಹಣ ಪಡೆದುಕೆಂಡಿದ್ದಾನೆ. ನಾನು ಹಣವನ್ನು ಟ್ರಾನ್ಸ್ ಫರ್ ಮಾಡುತ್ತೀನಿ ಎಂದಾಗ ಬೇಡ ಅಧಿಕಾರಿಗಳಿಗೆ ಕೊಡಬೇಕು ಎಂದು ನಗದು ರೂಪದಲ್ಲಿ ಪಡೆದುಕೊಂಡಿದ್ದಾನೆ. ಆದರೆ ಒಂದು ಬಾರಿ ಸುಮಾರು 3 ಲಕ್ಷ 60 ಸಾವಿರ ರೂ. ಯನ್ನು ಬ್ಯಾಂಕಿಗೆ ಕಳುಹಿಸಿದ್ದೆ. ಆ ದಾಖಲಾತಿ ನನ್ನ ಬಳಿ ಇದೆ. 6 ತಿಂಗಳ ಹಿಂದೆ ಒಂದು ನಕಲಿ ಅಪಾಯಿಂಟ್ ಮೆಂಟ್ ಆರ್ಡರ್ ಕಾಪಿಯನ್ನು ನಮ್ಮ ಮನಗೆ ಕಳುಹಿಸಿದ್ದನು. ಆಗ ಆರ್ಡರ್ ಕಾಪಿ ನಕಲಿ ಎಂದು ತಿಳಿಯಿತು. ಈ ಬಗ್ಗೆ ಕಂದಾಯ ಇಲಾಖೆಯೊಳಗೆ ಹೋಗಲು ಸಾಧ್ಯವಾಗಲಿಲ್ಲ.

    ಒಂದು ದಿನ ನನ್ನ ಸಹೋದರನ ಜೊತೆ ಕಂದಾಯ ಇಲಾಖೆಗೆ ಒಳ ಹೋಗಿ ವಿಚಾರಿಸಿದಾಗ ಅದು ನಕಲಿ ಎಂದು ತಿಳಿಯಿತು. ಬಳಿಕ ಆತನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ. ಆದರೆ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಬಳಿಕ ನಿಮ್ಮ ಮನೆಗೆ ಬಂದು ಗಲಾಟೆ ಮಾಡುವುದಾಗಿ ಹೇಳಿದಾಗ ಹಣ ಹಿಂದಿರುಗಿಸುವುದಾಗಿ ಹೇಳಿದ್ದನು. ಆದರೆ ಇನ್ನು ಹಣವನ್ನು ನೀಡಿಲ್ಲ. ಫೋನ್ ಮಾಡಿದರೆ ರಿಸೀವ್ ಮಾಡಿಲ್ಲ ಎಂದು ಹಣ ಕಳೆದುಕೊಂಡ ವೆಂಕಟೇಶ್ ಹೇಳಿದ್ದಾರೆ.

    ಆರೋಪಿ ಮಂಜುನಾಥ್ ಹಲವಾರು ಯುವಕರಿಗೆ ಇದೇ ರೀತಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದರು. ಸದ್ಯಕ್ಕೆ ಸುಬ್ರಮಣ್ಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

    ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

    ಉಡುಪಿ: ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಕುಂದಾಪುರದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

    25 ಲಕ್ಷ ರೂ. ಪ್ರೋತ್ಸಾಹ ಧನವನ್ನೂ ನೀಡಿಲ್ಲ, ಉದ್ಯೋಗವನ್ನೂ ಕೊಡಿಸಿಲ್ಲ. ದೇಶಕ್ಕಾಗಿ ಪದಕ ಗೆದ್ದು ಕೊಟ್ಟು ಮೂರು ತಿಂಗಳು ಕಳೆದರೂ ಈ ಬಡ ಕ್ರೀಡಾಪಟುವಿಗೆ ಸರ್ಕಾರದ ಆರ್ಥಿಕ ನೆರವು ತಲುಪಿಲ್ಲ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದ ಈ ವೇಟ್ ಲಿಫ್ಟಿಂಗ್, ಫೈಲುಗಳನ್ನು ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಎದುರಿಸಬೇಕಾಗಿದೆ.

    ಬಡತನದಲ್ಲೇ ಕಷ್ಟಪಟ್ಟು ಸಾಧನೆ ಮಾಡಿರುವ ಗುರುರಾಜ್ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆಯನ್ನು ಗುರುರಾಜ್ ಆರಂಭಿಸಿದ್ದರು. 56 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಈ ಮೂಲಕ ದಿನ ಬೆಳಗಾಗೋದ್ರೊಳಗೆ ಕರ್ನಾಟಕದ ಈ ಕ್ರೀಡಾಪಟು, ಭಾರತದಾದ್ಯಂತ ಮನೆ ಮಾತಾದ್ರು. ಅಷ್ಟೇ ಯಾಕೆ ನಮ್ಮ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಬಹುಮಾನವಾಗಿ 25 ಲಕ್ಷ ರೂ. ಘೋಷಿಸಿತ್ತು. ಅಲ್ಲದೇ ಗುರುರಾಜ್ ಗೆ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿತ್ತು. ಈ ಭರವಸೆ ನೀಡಿ ಸುಮಾರು ಮೂರು ತಿಂಗ್ಳಾದ್ರೂ ಇದೂವರೆಗೂ ಬಹುಮಾನವೂ ಇಲ್ಲ, ಉದ್ಯೋಗವೂ ಸಿಕ್ಕಿಲ್ಲ.

    ಗುರುರಾಜ್ ತಂದೆ ಮಹಾಬಲ ಪೂಜಾರಿ ಇಂದಿಗೂ ಆಟೋ ಓಡಿಸುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಬೆಳ್ಳಿ ಗೆದ್ದ ಕ್ರೀಡಾಪಟುಗಳಿಗೆ 1 ಕೋಟಿ ರೂ. ವರೆಗೆ ಬಹುಮಾನ ನೀಡಿದ್ದಾರೆ. ಅಲ್ಲಿ ಬಹುಮಾನ ಅವರ ಕೈ ಸೇರಿದ್ದೂ ಆಗಿದೆ. ಆದರೆ ಇಲ್ಲಿ ಸರ್ಕಾರದ ಮುಂದೆ ಇಂದು ಈ ಸಾಧಕ ಕೈಚಾಚಿ ನಿಲ್ಲುವ ಸ್ಥಿತಿ ಬಂದಿದೆ.

    ಒಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸಿ 2020ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಈ ಕ್ರೀಡಾಪಟುವಿನದ್ದು. ಆದರೆ ಸರ್ಕಾರದ ಪ್ರೋತ್ಸಾಹ ನೋಡಿದ್ರೆ ನಮ್ಮ ಸರ್ಕಾರಕ್ಕಿರುವ ಹಂಬಲವೇನೆಂದು ತಿಳಿದು ಬರುತ್ತಿದೆ.

  • 158 ಕಾರ್ಮಿಕರನ್ನು ತೆಗೆದು ಹೊರರಾಜ್ಯದವರಿಗೆ ದೊಡ್ಲ ಡೈರಿಯಲ್ಲಿ ಉದ್ಯೋಗ!

    158 ಕಾರ್ಮಿಕರನ್ನು ತೆಗೆದು ಹೊರರಾಜ್ಯದವರಿಗೆ ದೊಡ್ಲ ಡೈರಿಯಲ್ಲಿ ಉದ್ಯೋಗ!

    ಕೊಪ್ಪಳ: ಕನ್ನಡಿಗರ ಮೇಲೆ ದೌರ್ಜನ್ಯ ಮತ್ತು ರಜೆ ಸೇರಿ ತಮ್ಮ ಹಕ್ಕು ಕೇಳಿದ ಕಾರ್ಮಿಕರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಇಂದರಗಿ ಗ್ರಾಮದ ಸಮೀಪದ ದೊಡ್ಲ ಡೈರಿಯಲ್ಲಿ ಕೆಲಸ ಮಾಡ್ತಿದ್ದ 158 ಸ್ಥಳೀಯ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಕುಂಟು ನೆಪ ಮುಂದಿಟ್ಟುಕೊಂಡು ಸ್ಥಳೀಯರನ್ನು ಕೆಲಸದಿಂದ ತೆಗೆದು ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗಿದೆ.

    ದೊಡ್ಲ ಹಾಲಿನ ಡೈರಿ ಅಧಿಕಾರಿಗಳು ಕಾರ್ಮಿಕರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಬಿಹಾರ ಮೂಲದ ಗುತ್ತಿಗೆದಾರ ಸ್ಥಳೀಯ ಕಾರ್ಮಿಕರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸುತ್ತಿದ್ದನು. ತಮಗೆ ಆಗುವ ಕಿರುಕುಳ ಪ್ರಶ್ನಿಸಿ ಕೆಲಸ ಕಳೆದುಕೊಂಡ ಕಾರ್ಮಿಕರು ಇದೀಗ ದೊಡ್ಲ ಡೈರಿ ಮುಂದೆ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

    ಆದರೆ ದೊಡ್ಲ ಡೈರಿ ಹೊರ ರಾಜ್ಯದ ಸಿಬ್ಬಂದಿಯನ್ನು ಕರೆದುಕೊಂಡು ಬಂದು ಕೆಲಸ ಮಾಡುತ್ತಿದ್ದಾರೆ.

  • ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗೆ ಶಾಕಿಂಗ್ ನ್ಯೂಸ್!

    ಸಾರಿಗೆ ಇಲಾಖೆಯಿಂದ ಮಹಿಳಾ ಸಿಬ್ಬಂದಿಗೆ ಶಾಕಿಂಗ್ ನ್ಯೂಸ್!

    ಹಾಸನ: ಮೋದಿ ಸರ್ಕಾರದಲ್ಲಿ ಭೇಟಿ ಪಡಾವೋ, ಭೇಟಿ ಬಚಾವೋ ಎಂದು ಮಹಿಳೆಯ ಅಭಿವೃದ್ಧಿಗೆ ಪಣತೊಟ್ಟಿದೆ. ಆದರೆ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮಾತ್ರ ಮಹಿಳೆಯರು ಕೆಲಸಕ್ಕೆ ಬೇಡ ಎಂದು ಹೇಳಲಾಗುತ್ತಿದೆ.

    ಹಾಸನ ಕೆಎಸ್‍ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಮಹಿಳೆಯರಿಗೆ ಕೆಲಸ ಕೊಡೋದು ಬೇಡ ಪ್ಲೀಸ್ ಎಂದು ಎಡವಟ್ಟು ಪತ್ರವನ್ನು ಬರೆದಿದ್ದಾರೆ. ಕೆಎಸ್‍ಆರ್ ಟಿಸಿ ತಾಂತ್ರಿಕ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಕೆಲಸಕ್ಕೆ ಮಹಿಳೆಯರ ನೇಮಕ ಬೇಡ, ಪುರುಷರಿಗಷ್ಟೇ ಅವಕಾಶ ನೀಡೋಣ ಅಂತಾ ಬೆಂಗಳೂರು ಕೆಎಸ್‍ಆರ್ ಟಿಸಿ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ.

    ಮಹಿಳೆಯರಿಗೆ ಕೆಲ್ಸ ಕೊಡೋದು ಬೇಡ!
    * ತಾಂತ್ರಿಕ ವಿಭಾಗದಲ್ಲಿ ಭದ್ರತೆಗಾಗಿ ಮಹಿಳೆಯರನ್ನು ನಿಯೋಜಿಸೋದಕ್ಕೆ ಕಷ್ಟವಾಗುತ್ತೆ.
    * ಮಹಿಳೆಯರು ಸಿಕ್ಕಾಪಟ್ಟೆ ಸೂಕ್ಷ್ಮ ಮನಸ್ಥಿತಿಯವರು ರಜೆ ಜಾಸ್ತಿ ಹಾಕುತ್ತಾರೆ.
    * ಪ್ರಸೂತಿ ರಜೆ, ಆರೋಗ್ಯ ಸರಿ ಇಲ್ಲ ಹೀಗೆ ನಾನಾ ಕಾರಣದಿಂದ ದೀರ್ಘ ರಜೆ ಹಾಕುತ್ತಾರೆ. ಪಾಪ ಆಗ ಪುರುಷ ಸಿಬ್ಬಂದಿಗಳ ಮೇಲೆ ಹೊರೆ ಬೀಳುತ್ತೆ.
    * ಮಕ್ಕಳ ಲಾಲಾನೆ ಪಾಲನೆ ಅಂತಾ ಹೆಚ್ಚಿನ ರಜೆ ಕೇಳುತ್ತಾರೆ.

    ಹೀಗೆ ನಾನಾ ಕಾರಣವನ್ನು ಅಧಿಕಾರಿ ಮುಂದಿಟ್ಟಿದ್ದಾರೆ. ಈಗಾಗಲೇ ತಾಂತ್ರಿಕ ವಿಭಾಗದಲ್ಲಿ ಇರುವ ಮಹಿಳೆಯರು ಕಾರ್ಯ ನಿರ್ವಹಿಸುತ್ತಿಲ್ಲ ಅಂತಾ ಅವಲತ್ತುಕೊಂಡಿದ್ದಾರೆ.

  • ವಿದೇಶದಲ್ಲಿ ಕೆಲಸದ ಆಮಿಷವೊಡ್ಡಿ ವಂಚನೆ- ಮನನೊಂದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ವಿದೇಶದಲ್ಲಿ ಕೆಲಸದ ಆಮಿಷವೊಡ್ಡಿ ವಂಚನೆ- ಮನನೊಂದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ಬೆಂಗಳೂರು: ಕೆನಡಾದಲ್ಲಿ ಕೆಲಸ ಕೊಡಿಸುವ ಆಸೆ ತೋರಿಸಿ ಪರಿಚಿತರೆ ವಂಚನೆ ಮಾಡಿದ್ದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಬಾಣಸವಾಡಿಯಲ್ಲಿ ನಡೆದಿದೆ.

    ಜಯಕುಮಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇವರು ಬಾಣಸವಾಡಿಯ ಜೈ ಭಾರತ್ ನಗರ ನಿವಾಸಿಯಾಗಿದ್ದ ಇವರಿಗೆ ಇಂದ್ರ, ಶೆರ್ಲಿನ್, ಹಾಗೂ ಸಂತೋಷ್ ಎಂಬ ಪರಿಚಯಸ್ಥರು ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಅವರು ಸುಮಾರು 8 ಲಕ್ಷ ರೂ. ಹಣವನ್ನು ನೀಡಿದ್ದಾರೆ. ಹಣ ಪಡೆದ ಮೂವರು ಕೆಲಸ ಕೊಡಿಸದೇ ಮಹಿಳೆಗೆ ವಂಚಿಸಿದ್ದಾರೆ. ಇದರಿಂದ ಮನನೊಂದು ಜಯಕುಮಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಕೂಡಲೇ ಜಯಕುಮಾರಿಯವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

    ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

    ಮಂಡ್ಯ: ನಗರದ ಎಸ್ಪಿ ರಾಧಿಕಾ ನಿವಾಸದಲ್ಲಿ ಆರ್ಡಲಿ ಪದ್ಧತಿ ಇದ್ದು, ತಮ್ಮ ಮನೆ ಕೆಲಸಕ್ಕೆ 18 ಜನ ಪೇದೆಗಳ ನಿಯೋಜನೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ತಮ್ಮ ನಿವಾಸದ ಗಾರ್ಡನ್ ಮತ್ತು ಬಟ್ಟೆ ತೊಳೆಯುವ ಕೆಲಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ತಮ್ಮ ಮನೆ ಕೆಲಸಕ್ಕೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಸ್ವತಃ ಅವರೇ ಈ ಬಗ್ಗೆ ಮಾತನಾಡಿದ್ದು, ನಾನು ಅನಧಿಕೃತವಾಗಿ ಯಾವುದೇ ಸಿಬ್ಬಂದಿಗಳಿಂದ ನಮ್ಮ ಮನೆ ಕೆಲಸ ಮಾಡಿಸುತ್ತಿಲ್ಲ ಎಂದು ಎಸ್‍ಪಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

    ಸರ್ಕಾರ ಓರ್ವ ಉನ್ನತ ಅಧಿಕಾರಿಯ ಸಹಾಯಕ್ಕಾಗಿ ಕೊಟ್ಟಿರುವ ಸೌಲಭ್ಯವನ್ನೆ ಬಳಸಿಕೊಳ್ಳುತ್ತಿದ್ದೇನೆ. ಸಹಾಯಕರಿಲ್ಲದೆ ಓರ್ವ ಅಧಿಕಾರಿಯಾಗಿ ಹೇಗೆ 24 ಗಂಟೆ ಕೆಲಸ ಮಾಡೋದು, ಕೊಟ್ಟಿರುವ ಸಿಬ್ಬಂದಿಗಳಿಂದ ನಾನು ಯಾವುದೇ ನನ್ನದಾಗಲಿ, ನನ್ನ ಮನೆಯದಾಗಲಿ ಅಥವಾ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಿಲ್ಲ. ಫೋನ್ ರಿಸೀವ್ ಮಾಡಲು, ಭದ್ರತೆ ನೀಡಲು ಮತ್ತು ಕಚೇರಿ ಸಹಾಯಕ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿದೆ ಅಷ್ಟೆ ಎಂದು ಹೇಳಿದ್ದಾರೆ.

    ಇದೇ ವೇಳೆ ಯಾರೋ ನಮ್ಮ ಇಲಾಖೆಯವರೇ ಆಗದವರು ಈ ರೀತಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಮೂಡಿಸಿದ್ದಾರೆ. ನಮ್ಮಲ್ಲಿ ಆ ರೀತಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಮಾಲಿ ಕೆಲಸ ಮಾಡಿಸುತ್ತಿಲ್ಲ. ಗೊಂದಲ ಸೃಷ್ಟಿಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತಿಳಿಸಿದ್ದಾರೆ.

  • ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

    ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಉತ್ತರ ಕನ್ನಡ ಭಾಗದಲ್ಲಿ ಸೇವೆ ಎಂದರೆ ಕೆಲಸ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೆ ತಿರುಗೇಟು ನೀಡಿದ್ದಾರೆ.

    ಸೇವೆ ಪದವನ್ನು ಅನರ್ಥ ಮಾಡಿಕೊಳ್ಳಬೇಡಿ. ಉತ್ತರ ಕರ್ನಾಟಕದಲ್ಲಿ ಸೇವೆ ಎಂದರೆ ಕೆಲಸ. ನೀವು ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಅದಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ ಎಂದು ಜಯಮಾಲಾಗೆ ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನು ಓದಿ: ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಕೆಲಸದ ಅರ್ಥದಲ್ಲಿ ನಾನು ಸೇವೆ ಎಂಬ ಪದ ಬಳಸಿದ್ದೇನೆ. ಅದಕ್ಕೆ ಸಚಿವರು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪಕ್ಷದ ಚಟುವಟಿಕೆಗಳಲ್ಲಿ ಇಬ್ಬರು ಕೂಡಿ ಸೇವೆ ಸಲ್ಲಿಸಿದ್ದೇವೆ. ಪಕ್ಷದ ಯಾವುದೇ ಕೆಲಸ ಇದ್ದರೂ ನಾನು ಜಯಮಾಲಾ ಅವರಿಗೆ ಮೊದಲು ಫೋನ್ ಕರೆ ಮಾಡುತ್ತಿದ್ದೆ. ಜಯಮಾಲಾ ಅವರಿಗೆ ಖಾತೆ ಸಿಕ್ಕಿದ್ದಕ್ಕೆ ನಾನು ಹೊಟ್ಟೆ ಕಿಚ್ಚುಪಟ್ಟಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು.  ಇದನ್ನು ಓದಿ: ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಏನಿದು ಟಾಂಗ್ ರಾಜಕೀಯ?
    ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ ಸೇವೆಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.

  • ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಕಾರವಾರ: ಇಲ್ಲಿನ ಉಮ್ಮಳೆ ಜೋಗ್ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಿಲ್ಲ. ಮದುವೆಯಾಗಲೇಬೇಕು ಅಂದರೆ ಊರನ್ನ ಬಿಡಲೇ ಬೇಕು. ಇನ್ನು ಈ ಗ್ರಾಮದ ಜನರಿಗೆ ಸ್ವಂತ ಮನೆಯಿದ್ದರು ಬಾಡಿಗೆ ಮನೆಯಲ್ಲಿ ಇರುವ ಸ್ಥಿತಿ ಇಲ್ಲಿಯದ್ದು, ಇದೊಂದು ಶಾಪಗ್ರಸ್ಥ ಗ್ರಾಮವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ 20 ಕಿಲೋಮೀಟರ್ ದೂರದ ವೈಲವಾಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಉಮ್ಮಳೆ ಜೋಗ್ ಗ್ರಾಮದಲ್ಲಿ ಯುವಕರಿಗೆ ಮದುವೆಯಾಗದಂತೆ ಅಡ್ಡಿಯಾಗಿರುವುದು. ಈ ಗ್ರಾಮದ ಸುತ್ತಲೂ ಕಾಳಿ ನದಿನೀರು ಹರಿಯುತಿದ್ದು, ದ್ವೀಪ ಪ್ರದೇಶವಾಗಿದೆ. ಹೀಗಾಗಿ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು.

    ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 500 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯವನ್ನು ನಂಬಿ ಬದುಕುತಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮಮನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇನ್ನು ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ.

    ಈ ಭಾಗದಲ್ಲಿ ಭತ್ತ, ತೆಂಗು, ಬಾಳೆ ಫಸಲನ್ನು ಬೆಳಸುತ್ತೇವೆ. ಆದರೆ ಅವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ಕೊಂಡೊಯ್ಯಬೇಕಿದ್ದು ಬಲು ತ್ರಾಸದಾಯಕವಾಗಿದೆ. ಹೀಗಾಗಿ ಹಲವರು ವ್ಯವಸಾಯವನ್ನು ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೋಗಿಟ್ಟು ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

    ಭೂಮಿಯನ್ನೇ ನಂಬಿ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರತಿಭಟನೆ ನಡೆಸಿ ಮನವಿ ಸಹ ನೀಡಿದ್ದಾರೆ. ಆದರೆ ಈವರೆಗೂ ಸರ್ಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ತಮ್ಮ ಊರಿಗೆ ಒಂದು ಸೇತುವೆಯಾದರೆ ಊರಿನಲ್ಲಿ ಮದುವೆಯಾಗದೇ ಉಳಿದ ಯುವಕರಿಗೆ ಮದುವೆ ಭಾಗ್ಯ ಸಿಗುತ್ತದೆ. ಕೆಲಸಮಾಡಲಾಗದೇ ಬರಡಾಗಿ ಬಿಟ್ಟ ಭೂಮಿ ಹಸನಾಗುತ್ತದೆ ಎಂಬ ಆಶಾ ಭಾವನೆಯಲ್ಲಿ ಈ ಗ್ರಾಮದವರು ಇಟ್ಟುಕೊಂಡಿದ್ದಾರೆ.