Tag: ಕೆರೆ ಹಾವು

  • ಮಹಿಳೆಯ ನಾಗಿಣಿ ಅವತಾರ ನೋಡಿ ಜನ ದಂಗು: ವಿಡಿಯೋ

    ಮಹಿಳೆಯ ನಾಗಿಣಿ ಅವತಾರ ನೋಡಿ ಜನ ದಂಗು: ವಿಡಿಯೋ

    ಕೊಪ್ಪಳ: ಮಹಿಳೆಯ ನಾಗಿಣಿ ಅವತಾರ ನೋಡಿ ಜನರು ದಂಗಾದ ಘಟನೆ ಕೊಪ್ಪಳದಲ್ಲಿ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಕೋಟುಮುಚಗಿ ಗ್ರಾಮದ ಶೀಲಮ್ಮ ಕೆರೆ ಹಾವು ಕೊರಳಿಗೆ ಹಾಕಿಕೊಂಡಿದ್ದ ಮಹಿಳೆ. ಶೀಲಮ್ಮ ಹಿರೇಬಗನಾಳ ಗ್ರಾಮದ ಹೊರವಲಯದಲ್ಲಿರುವ ಕೋಳಿ ಫಾರಂವೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಂದು ಮಧ್ಯಾಹ್ನ ಕೋಳಿ ಫಾರಂನಲ್ಲಿ ಕೆರೆ ಹಾವು ಬಂದಿದೆ. ಇದನ್ನು ಗಮನಿಸಿದ ಶೀಲಮ್ಮ ಹಾವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹಿರೇಬಗನಾಳ ಗ್ರಾಮಕ್ಕೆ ಬಂದು ಬಿಟ್ಟಳು. ಈ ವೇಳೆ ಶೀಲಮ್ಮ ಹಾವನ್ನು ತನ್ನ ಕೊರಳಿನಲ್ಲಿ ಹಾಕಿಕೊಂಡು ಗ್ರಾಮದ ಗವಿಸಿದ್ದೇಶ್ವರ ಮಠದಲ್ಲಿ ನೃತ್ಯ ಮಾಡಿದ್ದಾಳೆ.

    ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಕೋಳಿ ಫಾರಂನಿಂದ ಶೀಲಮ್ಮ ಹಾವನ್ನು ಹಿಡಿದುಕೊಂಡು ಬಂದಿದ್ದಾಳೆ. ಇದನ್ನು ಗಮನಿಸಿದ ಗ್ರಾಮಸ್ಥರು ಶೀಲಮ್ಮನನ್ನು ಹಿಂಬಾಲಿಸಿದರು. ಬಳಿಕ ಶೀಲಮ್ಮ ಗವಿಸಿದ್ದೇಶ್ವರ ಮಠಕ್ಕೆ ಬಂದು ಅಲ್ಲಿ ಹಾವಿಗೆ ಪೂಜೆ ಮಾಡಿದ್ದಳು. ಈ ವೇಳೆ ದೇವಸ್ಥಾನದ ಹೊರಗಡೆ ಇರುವ ನಾಗಪ್ಪನ ಕಲ್ಲಿನ ಮೂರ್ತಿಯ ಬಳಿ ಹಾವನ್ನು ಕೊರಳಿಗೆ ಹಾಕಿಕೊಂಡು ನೃತ್ಯ ಮಾಡಿದ್ದಾಳೆ.

    ಈ ವೇಳೆ ಗ್ರಾಮಸ್ಥರು ಹಾವನ್ನು ಬಿಡು ಎಂದು ಮನವಿ ಮಾಡಿದರೂ ಸಹ ಶೀಲಮ್ಮ ಬಿಡಲಿಲ್ಲ. ಕೊನೆಗೆ ಗ್ರಾಮಸ್ಥರು ಶೀಲಮ್ಮ ಮನವೊಲಿಸಿ ಗ್ರಾಮದ ಹೊರವಲಯದ ಸಣ್ಣ ದೇವಸ್ಥಾನವೊಂದರಲ್ಲಿ ಬಿಟ್ಟು ಬಂದಿದ್ದಳು. ಬಳಿಕ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಓಂ ನಮಃ ಶಿವಾಯ ಎಂದು ಪ್ರಾರ್ಥನೆ ಸಲ್ಲಿಸದಳು. ನಂತರ ಗ್ರಾಮಸ್ಥರೆಲ್ಲರೂ ಶೀಲಮ್ಮಳನ್ನು ಹಾವು ಬಿಟ್ಟು ಬಂದಿದ್ದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಿಸುವಲ್ಲಿ ಯಶಸ್ವಿಯಾದರು. ಶೀಲಮ್ಮ ಹಾವಿನೊಂದಿಗೆ ವರ್ತಿಸಿದ ರೀತಿ ಅಚ್ಚರಿಪಟ್ಟರು.

    ಶೀಲಮ್ಮ ಕೊರಳಿನಲ್ಲಿ ಹಾಕಿಕೊಂಡಿದ್ದ ಹಾವು ಕೆರೆ ಹಾವಾಗಿದ್ದು, ಪೊರೆ ಬಂದಿತ್ತು ಎನ್ನಲಾಗಿದೆ. ಶೀಲಮ್ಮ ಹಾವನ್ನು ತನ್ನ ಕೊರಳಿನಲ್ಲಿ ಹಾಕಿಕೊಂಡು ಎರಡು ಗಂಟೆಗಳ ಕಾಲ ಇದ್ದದ್ದು ನಿಜಕ್ಕೂ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಶೀಲಮ್ಮ ಕೊರಳಿನಲ್ಲಿ ಹಾವು ಹಾಕಿಕೊಂಡಿರುವುದನ್ನು ಗ್ರಾಮಸ್ಥರು ಟಿಕ್ ಟ್ಯಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಮಾಡಿದ್ದಾರೆ. ಶೀಲಮ್ಮ ಹಾವಿನೊಂದಿಗೆ ಈ ರೀತಿ ವರ್ತನೆಗೆ ಕಾರಣ ಏನು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

  • ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

    ತುಮಕೂರು, ಚಾಮರಾಜನಗರದಲ್ಲಿ ಕೆರೆ ಹಾವನ್ನು ನುಂಗಿದ ನಾಗ!

    ತುಮಕೂರು/ಚಾಮರಾಜನಗರ: ನಾಗರಹಾವೊಂದು ಕೆರೆ ಹಾವನ್ನು ನುಂಗಿದ ಘಟನೆ ತುಮಕೂರಿನ ರಂಗಾಪುರದಲ್ಲಿ ನಡೆದಿದೆ.

    ನಾಗರ ಹಾವೊಂದು ಕೆರೆ ಹಾವನ್ನು ಬೆನ್ನತ್ತಿದ್ದು, ಇದರಿಂದ ಬೆದರಿದ ಕೆರೆ ಹಾವು ಈರುಳ್ಳಿ ಅಂಗಡಿಗೆ ನುಗ್ಗಿದೆ. ಈ ವೇಳೆ ನಾಗರಹಾವು ಕೆರೆ ಹಾವನ್ನು ಸೆಣಸಿ ಅದನ್ನು ನುಂಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್, ನಾಗರಹಾವನ್ನು ಹಿಡಿದು ನಾಮದ ಚಿಲುಮೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಕೆರೆ ಹಾವು ಹಾಗೂ ನಾಗರ ಹಾವನ್ನು ನೋಡಿ ಸ್ಥಳೀಯರು ಗಾಬರಿಗೊಂಡಿದ್ದರು.

    ಇತ್ತ ಚಾಮರಾಜನಗರ ಸಮೀಪ ತಾಳವಾಡಿಯ ಕಲ್ಮಂಡಿಪುರದಲ್ಲೂ ಕೂಡ ನಾಗರಹಾವೊಂದು ಕೆರೆ ಹಾವನ್ನು ನುಂಗಿತ್ತು. ರಸ್ತೆ ಬದಿಯಲ್ಲಿ ಮಲಗಿದ್ದ ನಾಗರಹಾವು ಹಸಿವು ತಾಳಲಾರದೆ ಅಲ್ಲಿಯೇ ಇದ್ದ ಕೆರೆ ಹಾವನ್ನು ನುಂಗಿದೆ. ನಾಗರಹಾವು ಕೆರೆ ಹಾವನ್ನು ನುಂಗಲು ಸಾಕಷ್ಟು ಸಮಯ ತೆಗೆದು ಕೊಂಡಿದ್ದು ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಹಾವುಗಳು ಕಪ್ಪೆ ಅಥವಾ ಇಲಿಯನ್ನು ನುಂಗುವುದು ಸಾಮಾನ್ಯ. ಆದರೆ ಇಲ್ಲಿ ಹಾವು-ಹಾವನ್ನೇ ನುಂಗಿರುವುದು ಆಶ್ಚರ್ಯ ಮೂಡಿಸಿದೆ.

    https://www.youtube.com/watch?v=O52eQlt43G0

  • ರಾತ್ರಿ ಕೇರೆಹಾವು ಇರ್ಬೇಕು ಅಂದುಕೊಂಡಿದ್ದ ಮನೆಯವರಿಗೆ ಬೆಳಗ್ಗೆ ಸಿಕ್ತು ಬಿಗ್ ಶಾಕ್

    ರಾತ್ರಿ ಕೇರೆಹಾವು ಇರ್ಬೇಕು ಅಂದುಕೊಂಡಿದ್ದ ಮನೆಯವರಿಗೆ ಬೆಳಗ್ಗೆ ಸಿಕ್ತು ಬಿಗ್ ಶಾಕ್

    ಮಡಿಕೇರಿ: ರಾತ್ರಿ ಕೇರೆಹಾವು ಇರಬೇಕು ಅಂದುಕೊಂಡಿದ್ದ ಮನೆಯವರಿಗೆ ಬೆಳಗ್ಗೆ ಎದ್ದು ನೋಡಿದಾಗ 13 ಅಡಿ ಉದ್ದದ ಕಾಳಿಂಗ ಸೆರೆ ಸಿಕ್ಕ ಘಟನೆಯೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಎಡಪಾಲ ಸಮೀಪದ ಅರಪಟ್ಟು ಗ್ರಾಮದಲ್ಲಿ ನಡೆದಿದೆ.

    ಅರಪಟ್ಟು ಗ್ರಾಮದ ಕಿರಣ್ ಬೋಪಯ್ಯನವರ ಮನೆಯಂಗಳದಲ್ಲೇ ಕಾಳಿಂಗ ಸರ್ಪವೊಂದು ವಾಸ್ತವ್ಯ ಹೂಡಿತ್ತು. ಕೇರೆ ಹಾವೊಂದನ್ನು ಸೆರೆ ಹಿಡಿಯಲು ಕಾಳಿಂಗ ಸರ್ಪ ಬಂದಿತ್ತು. ನಂತರ ಆ ಕೇರೆ ಹಾವು ತಪ್ಪಿಸಿಕೊಂಡಿದ್ದರಿಂದ ಆ ಕಾಳಿಂಗ ಸರ್ಪ ಅಲ್ಲೇ ವಾಸ್ತವ್ಯ ಹೂಡಿತ್ತು. ಸದ್ಯ ಮನೆಗೆ ಬಂದಿದ್ದ ಕಾಳಿಂಗ ಸರ್ಪದ ಸುಳಿವನ್ನು ರಾತ್ರಿಯೇ ಬೋಪಯ್ಯನವರ ಮನೆಯಲ್ಲಿ ಸಾಕಿದ್ದ ನಾಯಿ ನೀಡಿತ್ತು.

    ನಾಯಿ ಬೊಗಳುವುದನ್ನ ಕೇಳಿಸಿಕೊಂಡು ಕಿರಣ್ ಬೋಪಯ್ಯನವರ ಪತ್ನಿ ಪುಷ್ಪಾ ಹೊರಗಡೆ ಬಂದು ನೋಡಿದಾಗ ಕಾಳಿಂಗ ಸರ್ಪ ಇರುವುದನ್ನು ರಾತ್ರಿಯೇ ಖಚಿತ ಪಡಿಸಿಕೊಂಡಿದ್ದರು. ಆದರೆ ಮನೆಯವರಿಗೆ ಹೇಳಿದಾಗ ಯಾವುದೋ ಕೇರೆಹಾವು ಇರಬೇಕು ಅಂತಾ ಪುಷ್ಪಾ ಅವರ ಮಾತಿಗೆ ಹೆಚ್ಚಿಗೆ ಲಕ್ಷ್ಯ ಕೊಟ್ಟಿರಲಿಲ್ಲ. ಆದರೂ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ನಿದ್ರೆ ಬಿಟ್ಟು ಮನೆ ಮಂದಿಯೆಲ್ಲಾ ಮಲಗಿದ್ದರು.

    ಬೆಳಗ್ಗೆ ಮನೆಗೆ ಬಂದ ಕಾಳಿಂಗ ಸರ್ಪ ಮನೆಯಿಂದ ಹೊರಟು ಹೋಗಿರುತ್ತೆ ಎಂದು ತಿಳಿದಿದ್ದರು. ಆದರೆ ಆ ಕಾಳಿಂಗ ಸರ್ಪ ಅಲ್ಲಿಂದ ಹೋಗಲಿಲ್ಲ. ಆಗ ಮನೆಯವರಿಗೆ ನಮ್ಮನೆಯಂಗಳದಲ್ಲಿ ರಾತ್ರಿಯಿಡೀ ಕೇರೆ ಹಾವನ್ನು ಬೇಟೆಯಾಡಲು ಬಂದಿದ್ದು ಕಾಳಿಂಗ ಸರ್ಪ ಎಂದು ತಿಳಿಯಿತು. ತಡಮಾಡದೇ ಸ್ನೇಕ್ ಗಗನ್ ಎಂಬವರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದಾಗ ಸ್ಥಳಕ್ಕೆ ಬಂದು ಅಪರೇಷನ್ ಕಾಳಿಂಗ ಸರ್ಪ ಶುರು ಮಾಡಿ, ಬುಟ್ಟಿಗೆ ಹಾಕಿಕೊಂಡರು. ಕಾಳಿಂಗ ಸರ್ಪನನ್ನು ನೋಡಿದ ಜನತೆ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಫೋಟೋ ತೆಗೆದುಕೊಂಡರು.

    ಇಡೀ ರಾತ್ರಿ ಮನೆಯವರ ನಿದ್ದೆಯನ್ನು ಕದ್ದಿದ್ದ ಕಾಳಿಂಗ ಸರ್ಪ ಬೆಳಗಾಗುತ್ತಲೇ ಹಾವು ರಕ್ಷಕನ ಜೊತೆ ಸೆರೆಯಾಗಿಯೇ ಬಿಟ್ಟಿತ್ತು. ಕೇರೆ ಹಾವೊಂದನ್ನು ಗುರಿಯಾಗಿಸಿಕೊಂಡು ಬೇಟೆಗೆ ಬಂದು ತಾನೇ ಲಾಕ್ ಆಗಿ ಹೋದ. ಕಾಳಿಂಗನ ಹೊಟ್ಟೆ ಸೇರಬೇಕಿದ್ದ ಕೇರೆ ಹಾವು ಅದೃಷ್ಟವಶಾತ್ ಬಚಾವಾಗಿ ಕಾಫಿ ತೋಟ ಸೇರಿದರೆ, ಸ್ನೇಕ್ ಪ್ರಿಯನ ಜೊತೆ ಲಾಕ್ ಆದ ಕಿಂಗ್ ಕೋಬ್ರಾ ಮಾಕುಟ್ಟ ಅರಣ್ಯ ಪ್ರದೇಶದ ಒಳಹೋಗಿ ಕೊನೆಗೂ ಬದುಕಿತು ಬಡಜೀವ ಅಂತಾ ಕೊನೆಗೂ ನಿಟ್ಟುಸಿರು ಬಿಡ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv