Tag: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

  • ಜೀವದ ಜೊತೆಗೆ ಜೀವನಾನು ಕಟ್ಟಿಕೊಳ್ಳಿ: ಸಿಟಿ.ರವಿ

    ಜೀವದ ಜೊತೆಗೆ ಜೀವನಾನು ಕಟ್ಟಿಕೊಳ್ಳಿ: ಸಿಟಿ.ರವಿ

    – ಡಿಕೆಶಿಗೆ ರವಿ ತಿರುಗೇಟು

    ಬೆಂಗಳೂರು: ಕೊರೊನಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹಂತ ಹಂತವಾಗಿ ತೆರೆಯುವುದು ಒಳ್ಳೆಯ ವಿಷಯವಾಗಿದೆ. ಜೀವದ ಜೊತೆ ಜೀವನಾನು ಕಟ್ಟಿಕೊಳ್ಳಬೇಕಾಗಿದೆ ಎಂದು ಸಚಿವ ಸಿಟಿ.ರವಿ ಹೇಳಿದ್ದಾರೆ.

    ಹಾಸನಾಂಬೆ ದರ್ಶನ ಪಡೆಯಲು ಬಂದಿದ್ದ ಸಿಟಿ,ರವಿ ಅವರು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುಲು ಸೂಕ್ತ ಸಮಯವಾಗಿದೆ. ಕಾಲೇಜಿಗೆ ಕಳುಹಿಸಿದ ನಂತರ ಯಾರ ಮೇಲೂ ದೂರಬಾರದು. ಮಕ್ಕಳನ್ನು ಶಾಲೆಗೆ ಕಳುಹಿಸುವ ತೀರ್ಮಾನ ಪೋಷಕರಿಗೆ ಬಿಟ್ಟಿದ್ದಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ತಿಳುವಳಿಕೆ ಉಳ್ಳವರಾಗಿದ್ದಾರೆ. ನಾಳೆ ದೂರಬಾರದು ಎಂದಷ್ಟೇ ಪೋಷಕರ ಪತ್ರ ಪಡೆಯುತ್ತಿದ್ದೇವೆ. ಈ ವಿಷ್ಯದಲ್ಲಿ ಜವಬ್ದಾರಿ ಮರೆಯುವುದಿಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

    ಅಧಿಕಾರ ದುರುಪಯೋಗ ಆಗುತ್ತಿದೆ ಎಂಬ ಡಿಕೆಶಿ ಹೇಳಿಕೆ ಕುರಿತಾಗಿ ಮಾತನಾಡಿದ ಸಿಟಿ.ರವಿ, ದುರುಪಯೋಗದ ಪರಮಾವಧಿ ಮುಟ್ಟಿದವರು ಡಿಕೆಶಿ ಆಗಿದ್ದಾರೆ. ಆ ಪರಮಾವಧಿ ಕಾರಣಕ್ಕೆ ಇಂದು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಉಳಿದವರು ಹಾಗೇ ಇರುತ್ತಾರೆ ಎಂದು ಅವರು ಭಾವಿಸಿದ್ದಾರೆ. ಜನಸ್ನೇಹಿ ಆಡಳಿತ ನೀಡೋದು ಬಿಜೆಪಿಯ ಆಡಳಿತವಾಗಿದೆ. ಕಾಂಗ್ರೆಸ್ ಅವರಿಗಲ್ಲದೆ ಇನ್ಯಾರಿಗೂ ಅಧಿಕಾರ ದುರುಪಯೋಗದ ವಿಷಯದಲ್ಲಿ ನಂಬರ್ ಒನ್ ಸರ್ಟಿಫಿಕೇಟ್ ಸಿಗುವುದಿಲ್ಲ. ಎ ಯಿಂದ ಝಡ್ ವರೆಗೂ ಅಧಿಕಾರ ದುರುಪಯೋಗ ಪಡಿಸಿಕೊಂಡ ಕೀರ್ತಿ, ಅಪಕೀರ್ತಿ ಇದ್ದರೆ ಅದು ಕಾಂಗ್ರಸ್ಸಿಗೆ ಮಾತ್ರ ಇದನ್ನು ಅರ್ಥ ಮಾಡಿಕೊಂಡು ಡಿಕೆ.ಶಿವಕುಮಾರ್ ಮಾತನಾಡಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನು ಓದಿ: ಬೆಳ್ಳಂಬೆಳಗ್ಗೆ ಪತ್ನಿ ಜೊತೆ ಹಾಸನಾಂಬೆಯ ದರ್ಶನ ಪಡೆದ ಡಿಕೆಶಿ

    ಮುಖ್ಯಮಂತ್ರಿಗಳು ಪಕ್ಷಕ್ಕೆ ಬರುವ ಸಂದರ್ಭದಲ್ಲಿ ಯಾರ್ಯಾರಿಗೆ ವಾಗ್ದಾನ ನೀಡಿದ್ದಾರೋ ಅದನ್ನೆಲ್ಲ ಈಡೇರಿಸಿದ್ದಾರೆ. ಮುನಿರತ್ನ ಅವರಿಗೆ ಏನು ವಾಗ್ದಾನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಕೊಟ್ಟಿರುವುದನ್ನು ಈಡೇರಿಸುತ್ತಾರೆ. ಹಾಸನಕ್ಕೂ ಸಚಿವ ಸ್ಥಾನ ಸಿಗಲಿ, ಚಿಕ್ಕಮಗಳೂರಿಗೂ ಸಚಿವ ಸ್ಥಾನ ಒಲಿದು ಬರಲಿ ಎಂದು ಆಶಿಸುತ್ತೇನೆ. ಸಚಿವ ಸಂಪುಟ ಪುನಾರಚನೆ ವಿಷಯದಲ್ಲಿ ಅಸಮಾಧಾನ ಎಂಬುದು ಮನಸ್ಥಿತಿ ಆಧರಿಸಿರುತ್ತೆ. ಅದನ್ನು ಸಮಾಧಾನ ಮಾಡಲು ಬರುತ್ತೆ ಸಮಾಧಾನ ಮಾಡ್ತೇವೆ ಎಂದು ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿದ್ದಾರೆ.

  • ನಾನು ವಿಧಾನಸೌಧ ಮೆಟ್ಟಿಲಿನ ಚಪ್ಪಡಿ ಕಲ್ಲು ಆಗಲು ಇಷ್ಟಪಡುತ್ತೇನೆ: ಡಿಕೆಶಿ

    ನಾನು ವಿಧಾನಸೌಧ ಮೆಟ್ಟಿಲಿನ ಚಪ್ಪಡಿ ಕಲ್ಲು ಆಗಲು ಇಷ್ಟಪಡುತ್ತೇನೆ: ಡಿಕೆಶಿ

    ಬೆಂಗಳೂರು: ನನಗೆ ಶಿಲೆ ಆಗಲು ಇಷ್ಟವಿಲ್ಲ. ವಿಧಾನಸೌಧದ ಮೆಟ್ಟಿಲ ಮೇಲಿರುವ ಚಪ್ಪಡಿಯಾಗಿ ನೇವೆಲ್ಲ ನಡ್ಕೊಂಡು ಹೋಗಿ ವಿಧಾನಸೌಧ ಮೂರನೇ ಮೆಟ್ಟಲಿಗೆ ಮುಟ್ಟಿದರೆ ಸಾಕು. ನಾನು ಚಪ್ಪಡಿಯಾದರೆ ಸಾಕು, ಅಷ್ಟಾದರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಎಷ್ಟು ತೊಂದರೆ ಕೊಟ್ಟರು. ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿದರು. ಮೊನ್ನೆ ಇಂಧನ ಬೆಲೆ ಏರಿಕೆ ಕುರಿತು ಪ್ರತಿಘಟನೆ ನಡೆದರು ಕೇಸ್ ಹಾಕಿದ್ದಾರೆ. ನನ್ನ ಮೇಲೆ ಎಷ್ಟೇ ಕೇಸ್ ಹಾಕಿದರೂ, ಡಿಕೆಶಿ ಜಗ್ಗೋ ಮಗನೇ ಅಲ್ಲ ಎಂದರು.

    ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಬೇಕಿದೆ. ನನ್ನನ್ನು ಕೆಲವರು ಕನಕಪುರ ಬಂಡೆ ಎಂದು ತೋರಿಸುತ್ತಾರೆ. ಆದರೆ ನನಗೆ ಕನಕಪುರ ಬಂಡೆ ಎನಿಸಿ ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಬಂಡೆ ಉಳಿ ಪೆಟ್ಟು ಬಿದ್ದರೆ ಚಪ್ಪಡಿಯೂ ಆಗುತ್ತದೆ. ದ್ವಾರದಲ್ಲಿರುವ ಕಂಬವೂ ಆಗುತ್ತದೆ. ನಾನು ಬಂಡೆಯಾಗಲು ಇಷ್ಟ ಪಡುವುದಿಲ್ಲ. ಉಳಿ ಏಟು ತಿಂದು ಮೂರ್ತಿ ಶಿಲೆಯಾಗಲು ಇಷ್ಟವಿಲ್ಲ. ವಿಧಾನಸೌಧದ ತಪ್ಪಡಿ ಕಲ್ಲಾದರೇ ಸಾಕು. ಈ ಚಪ್ಪಾಡಿ ಕಲ್ಲನ್ನು ನೀವು ತಿಳಿದುಕೊಂಡು ಹೋಗಿ ವಿಧಾನಸೌಧ ಮೂರನೇ ಮಹಡಿಯನ್ನು ಮುಟ್ಟಿದರೆ ಸಾಕು. ಡಿಕೆ ಶಿವಕುಮಾರ್ ಅಂತಹ ಚಪ್ಪಡಿ ಕಲ್ಲಾದರೆ ಸಾಕು ಎಂದು ಹೇಳಿದರು.

    ವ್ಯಕ್ತಿ ಪೂಜೆಯೂ ಬೇಡ. ಪಕ್ಷ ಪೂಜೆ ಮಾಡೋಣ. ಈ ಮೂಲಕ ಪಕ್ಷವನ್ನು ಕಟ್ಟೋಣ. ನನಗೆ ಹಿಂಬಾಲಕರು ಬೇಡ. ನನಗೆ ಯಾವುದೇ ಗುಂಪು ಜಾತಿ, ಧರ್ಮದಲ್ಲಿ ನಂಬಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಗುಂಪು, ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಬೇಕಿದೆ ಎಂದು ತಿಳಿಸಿದರು.